Tag: Congress Member

  • ಪತಿಯ ಸಾಲ ತೀರಿಸಲು ಜೀತವಿರಲು ಒಪ್ಪದ ಪತ್ನಿಯನ್ನು ಹೊತ್ತೊಯ್ದ ಕೈ ಸದಸ್ಯ!

    ಪತಿಯ ಸಾಲ ತೀರಿಸಲು ಜೀತವಿರಲು ಒಪ್ಪದ ಪತ್ನಿಯನ್ನು ಹೊತ್ತೊಯ್ದ ಕೈ ಸದಸ್ಯ!

    ಮಂಡ್ಯ: ಪತಿ ಮಾಡಿರುವ ಸಾಲಕ್ಕೆ ಜೀತವಿರಲು ಒಪ್ಪದ ಮಹಿಳೆಯೊಬ್ಬರನ್ನು ಬಲವಂತವಾಗಿ ಮಾಲೀಕರು ಕಾರಿನಲ್ಲಿ ಹೊತ್ತೊಯ್ದ ಘಟನೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ನಡೆದಿದ್ದು, ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ತಮಿಳುನಾಡು ಮೂಲದ ಜಾನಕಮ್ಮ (27) ಮಾಲೀಕರ ದೌರ್ಜನ್ಯಕ್ಕೆ ತುತ್ತಾದ ಮಹಿಳೆ. ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷ ಸ್ಥಳೀಯ ನಾಯಕನಾಗಿರುವ ಕುದರಗುಂಡಿ ಗ್ರಾಮದ ನಿವಾಸಿ ನಾಗೇಶ್ ಮಹಿಳೆಯನ್ನು ಬಲವಂತವಾಗಿ ಹೊತ್ತೊಯ್ದಿದ್ದಾನೆ.

    ನಡೆದದ್ದು ಏನು?
    ತಮಿಳುನಾಡು ಮೂಲದ ಜಾನಕಮ್ಮ ಹಾಗೂ ಪತಿ ಚಿನ್ನತಂಬಿ ಅವರು ಕೆಲಸಕ್ಕಾಗಿ ಮಂಡ್ಯ ಜಿಲ್ಲೆಗೆ ಬಂದಿದ್ದರು. ಈ ದಂಪತಿ ಹಲವು ವರ್ಷಗಳಿಂದ ಕುದರಗುಂಡಿ ಗ್ರಾಮದ ನಾಗೇಶ್ ಮನೆ ಮತ್ತು ತೋಟದಲ್ಲಿ ಜೀತವಿದ್ದು, ಕೆಲಸ ಮಾಡುತ್ತಿದ್ದರು. 3 ವರ್ಷದ ಹಿಂದೆ ಗಂಡ ಚಿನ್ನತಂಬಿ ಮೃತಪಟ್ಟಿದ್ದಾರೆ.

    ಇತ್ತ ಚಿನ್ನತಂಬಿ ನಾಗೇಶ್ ಬಳಿ 30 ಸಾವಿರ ರೂ. ಸಾಲ ಪಡೆದಿದ್ದರಂತೆ. ಸಾಲದ ಹಣವನ್ನು ತೀರಿಸಲಾಗದೇ ಜಾನಕಮ್ಮ 9 ತಿಂಗಳ ಹಿಂದೆ ಬೆಕ್ಕಳಲೆಗೆ ಬಂದು ನೆಲೆಸಿದ್ದರು. ಜಾನಮಕ್ಕ ಬೆಕ್ಕಳಲೆಯಲ್ಲಿ ವಾಸವಾಗಿದ್ದಾರೆ ಎಂದು ಅರಿತ ನಾಗೇಶ್ ಆತನ ಸಹಚರರಾದ ಕರಿಯಪ್ಪ ಹಾಗೂ ಪಾಂಡು ಕೆಎ 11, ಎಂ-2598 ಕೆಂಪು ಕಾರಿನಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ನಾನು ಬರುವುದಿಲ್ಲ, ಬಿಟ್ಟು ಬಿಡಿ ಅಂತ ಎಷ್ಟೇ ಹಠ ಮಾಡಿದರೂ, ನಾಗೇಶ್ ಜಾನಕಮ್ಮನನ್ನು  ಕಾರಿನಲ್ಲಿ ಹೊತ್ತೊಯ್ದಿದ್ದಾರೆ.

    ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ನೋಡಿದ್ದ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟದ ಮದ್ದೂರು ಘಟಕದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಕುದರಗುಂಡಿ ಗ್ರಾಮಕ್ಕೆ ಬಂದ ಪೊಲೀಸರು ಜಾನಕಮ್ಮ ಅವರನ್ನು ರಕ್ಷಿಸಿ, ನಾಗೇಶ್‍ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾಗಿರಿ!

    ಉಡುಪಿ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾಗಿರಿ!

    ಉಡುಪಿ: ಇಬ್ಬರು ಯುವಕರಿಗೆ ನಗರ ಸಭಾ ಸದಸ್ಯ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ನಗರಸಭೆಯ ಕಾಂಗ್ರೆಸ್ ನ ಸದಸ್ಯ ಆರ್.ಕೆ.ರಮೇಶ್ ಪೂಜಾರಿ ಹಲ್ಲೆ ನಡೆಸಿದವರು. ಪರ್ಕಳದ ಗಣೇಶ್ ಆಚಾರ್ಯ ಮತ್ತು ಪ್ರಾಣೇಶ್ ಆಚಾರ್ಯ ಹಲ್ಲೆಗೊಳಗಾದ ಯುವಕರು. ನಗರದ ಗುಂಡಿಬೈಲು ಎಂಬಲ್ಲಿನ ಗಣೇಶ್ ಆಚಾರ್ಯ ಅವರ ತಂದೆಗೆ ಸಂಬಂಧಪಟ್ಟ ಆಸ್ತಿ ಇದೆ.

    ಇದೇ ಪರಿಸರದಲ್ಲಿ ನಗರಸಭಾ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯದಂತೆ ಗಣೇಶ್ ಆಚಾರ್ಯ ವಿನಂತಿಸಿದ್ದರು. ಆದರೆ ಮರುದಿನ ಬಂದು ನೋಡಿದಾಗ ಎಲ್ಲಾ ಮರಗಳನ್ನು ನೆಲಕ್ಕುರುಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ ಆಚಾರ್ಯ ಸಹೋದರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ರಮೇಶ್ ಪೂಜಾರಿ ಸಹೋದರ ಪ್ರಕಾಶ್ ಮತ್ತು ಇತರ ಗೂಂಡಾ ಪಡೆ ಸೇರಿ ಈ ದುಷ್ಕೃತ್ಯ ಎಸಗಿದೆ. ಈ ಸಂದರ್ಭದ ಜಟಾಪಟಿಯಲ್ಲಿ ಗಣೇಶ್ ಆಚಾರ್ಯರ ಚಿನ್ನದ ಸರವನ್ನು ಎಗರಿಸಿದ್ದಾರೆ. ರಮೇಶ್ ಪೂಜಾರಿ ಈ ಹಿಂದೆ ನಗರಸಭಾ ಸಭಾಂಗಣದಲ್ಲಿ ಮಾಧ್ಯಮದ ಮುಂದೆ ಸಮಸ್ಯೆ ಹೇಳಿಕೊಂಡು ಬಂದ ಸಾಮಾನ್ಯ ವ್ಯಕ್ತಿಗೆ ಮನಬಂದಂತೆ ಥಳಿಸಿದ್ದರು.

    ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಶಾಸಕ ಭೈರತಿ ಆಪ್ತನ ಪುಂಡಾಟ ಪ್ರಕರಣ ಬಿಸಿಯಾಗಿರುವಾಗಲೇ ಉಡುಪಿಯಲ್ಲಿ ನಗರಸಭೆಯ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾಗಿರಿ ಮೆರೆದಿದ್ದಾರೆ. ಆರ್. ಕೆ ರಮೇಶ್ ಪೂಜಾರಿ ಇಂತಹ ಹಲವಾರು ಗೂಂಡಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂಬುದು ಬಿಜೆಪಿಗರ ಆರೋಪ.