– ಹಿಂದೂ ವಿರೋಧಿ ಅನ್ನೋದು ಕಾಂಗ್ರೆಸ್ ರಕ್ತದ ಕಣಕಣದಲ್ಲೂ ಇದೆ
– ನಮಾಜ್ಗೆ ಅನುಮತಿ ಕೊಟ್ರೆ, ವಿಧಾನಸೌಧದಲ್ಲಿ ದಿನಾ ಹನುಮಾನ್ ಚಾಲಿಸಾ ಪಠಿಸ್ತೇವೆ
– ಶ್ರೀರಾಮಸೇನೆ ಮುಖ್ತಸ್ಥ ಪ್ರಮೋದ್ ಮುತಾಲಿಕ್ ಟೀಕೆ
ಧಾರವಾಡ: ಕಾಂಗ್ರೆಸ್ ಸರ್ಕಾರ ವಿಧಾನಸೌಧದಲ್ಲಿ (Vidhana Soudha) ನಮಾಜ್ ಮಾಡಲು ಅನುಮತಿ ಕೊಟ್ರೆ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡ್ತೀವಿ, ಕರ್ನಾಟಕವೇ ಹೊತ್ತಿ ಉರಿಯುತ್ತೆ. ನಾವೂ ವಿಧಾನಸೌಧದಲ್ಲಿ ಪ್ರತಿದಿನ ಹನುಮಾನ್ ಚಾಲಿಸಾ ಪಠಣ ಮಾಡ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಅನ್ನೋದು ಸಂಪೂರ್ಣ ಹಿಂದೂ ವಿರೋಧಿ ಸರ್ಕಾರ. ಕುರುಬರಹಳ್ಳಿಯ ಗೋ ಶಾಲೆ ಮಾಡಲು ಜಾಗ ನೀಡಲಾಗಿತ್ತು, ಕಾಂಗ್ರೆಸ್ ಸರ್ಕಾರ ಅದನ್ನೂ ತಡೆ ಹಿಡಿದಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಇದನ್ನೂ ಓದಿ: ಮಿಡ್ನೈಟ್ ಆಸೆ – ಪಾರ್ಲರ್ ಬೀಗ ಮುರಿದು ನಾಲ್ಕೇ ಐಸ್ಕ್ರೀಮ್ ಕದ್ದು ಪರಾರಿಯಾದ ಕಳ್ರು
ಗೋ ರಕ್ಷಣೆಗಾಗಿ ಬಿಜೆಪಿ (BJP) ಸರ್ಕಾರದಿಂದ ಜಮೀನು ಪಡೆದಿದ್ದು, ಯಾವುದೇ ಲಾಭಕ್ಕಾಗಿ ಅಲ್ಲ. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಅದನ್ನ ಪಡೆದಿಲ್ಲ. ಈಗಿನ ಸರ್ಕಾರದಲ್ಲಿ ಪೂಜೆ ಮಾಡಲು ಸಹ ಅನುಮತಿ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಟಿ. ನರಸೀಪುರದಲ್ಲಿ ದಲಿತ ಹಿಂದೂ ಯುವಕ ಬೆಳೆಯುತ್ತಾನೆ ಎಂಬ ಕಾರಣಕ್ಕೆ ಅವನನ್ನ ಹತ್ಯೆ ಮಾಡಲಾಗಿದೆ. ಹಿಂದೂ ವಿರೋಧಿ ಅನ್ನೂದು ಕಾಂಗ್ರೆಸ್ನ ರಕ್ತದ ಕಣಕಣದಲ್ಲೂ ಇದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ- ನಾಲ್ಕು ವಾಹನಗಳು ಜಖಂ
ವಿಧಾನಸೌಧದಲ್ಲಿ ನಮಾಜ್ಗೆ ಅವಕಾಶ ನೀಡುವಂತೆ ಕೋರಿಕ್ಕೆ ಪ್ರತಿಕ್ರಿಯಿಸಿ, ಇಲ್ಲಿಯವರೆಗೂ ಹೇಗೆಲ್ಲಾ ದೇಶವನ್ನ ನುಂಗಿ ಹಾಕಿದ್ದಾರೆ ಅನ್ನೋದು ಗೊತ್ತಿದೆ. ವಿಧಾನಸೌಧ ಮಕ್ಕಾ ಮದೀನಾದಲ್ಲಿರುವ ಮಸೀದಿ ಅಲ್ಲ. ಅಲ್ಲಿ ಒಬ್ಬೊಬ್ಬರೋ ಒಂದೊಂದು ಕೇಳ್ತಾರೆ. ಸರ್ಕಾರ ಏನಾದರೂ ವಿಧಾನಸೌಧದಲ್ಲಿ ನಮಾಜ್ ಮಾಡೋಕೆ ಅವಕಾಶ ಕಲ್ಪಿಸಿಕೊಟ್ಟರೆ, ಪ್ರತಿದಿನ ನಾ ವು ಹನುಮಾನ್ ಚಾಲಿಸಾ ಪಠಣ ಮಾಡ್ತೇವೆ. ಜೊತೆಗೆ ದೊಡ್ಡ ಪ್ರಮಾಣದ ಹೋರಾಟ ಮಾಡ್ತೀವಿ, ಇಡೀ ಕರ್ನಾಟವೇ ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]





















ಹೆದ್ದಾರಿ ಪಕ್ಕದಲ್ಲಿನ ಈ ಜಮೀನು ಸುಮಾರು 50 ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿದ್ದು ಹರಾಜು ಪ್ರಕ್ರಿಯೆಯಾಗಲಿ, ಸರ್ಕಾರದಿಂದ ಹೆಚ್ಚಿನ ಹಣವನ್ನ ವಸೂಲಿ ಮಾಡಿ ಮಾರಾಟ ಮಾಡುವಂತಹ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ಜನರು ನಿವೇಶನಗಳಿಗಾಗಿ ಸಾಕಷ್ಟು ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದೇ ನೇರವಾಗಿ ಭೂಮಿಯನ್ನ ಪರಭಾರೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿ ಭೂಮಿ ಪರಭಾರೆ ಮಾಡಿದ್ದಾರೆಂಬ ಆರೋಪ ಕೇಳಿಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.