Tag: Community Reservation

  • ಪಂಚಮಸಾಲಿ ಶ್ರೀಗಳ ಧರಣಿ ಸತ್ಯಾಗ್ರಹ ಅಂತ್ಯ – ಸಿಎಂ ಭರವಸೆಗೆ ಜಯಮೃತ್ಯುಂಜಯ ಶ್ರೀಗಳ ಹರ್ಷ

    ಪಂಚಮಸಾಲಿ ಶ್ರೀಗಳ ಧರಣಿ ಸತ್ಯಾಗ್ರಹ ಅಂತ್ಯ – ಸಿಎಂ ಭರವಸೆಗೆ ಜಯಮೃತ್ಯುಂಜಯ ಶ್ರೀಗಳ ಹರ್ಷ

    ಬೆಂಗಳೂರು: 2ಎ ಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಸಮುದಾಯದ ಧರಣಿ ಕೊನೆಗೂ ಅಂತ್ಯ ಕಂಡಿದೆ. ಸಿಎಂ ಪ್ರತಿಕ್ರಿಯೆಗೆ ಜಯಮೃತ್ಯುಂಜಯ ಶ್ರೀಗಳು ಪಟ್ಟು ಹಿಡಿದಿದ್ದರು. ಶಾಸಕ ಯತ್ನಾಳ್ ಆಹೋರಾತ್ರಿ ಧರಣಿಗೆ ಪ್ಲಾನ್ ಮಾಡಿದ್ದರು. ಹೀಗಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋ ಸಲುವಾಗಿ ಎಂಬಂತೆ ಯಡಿಯೂರಪ್ಪ ಮೀಸಲಾತಿ ಸಂಬಂಧ ಆರು ತಿಂಗಳ ಗಡುವು ಕೇಳಿದ್ದಾರೆ.

    ಇವತ್ತು ಕಲಾಪ ಆರಂಭವಾಗುತ್ತಲೇ ಶಾಸಕ ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಕೂಡಲೇ ಪ್ರತಿಕ್ರಿಯೆ ನೀಡಿದ ನೀಡಿದ ಸಿಎಂ ಯಡಿಯೂರಪ್ಪ, ಆರೇಳು ತಿಂಗಳ ಒಳಗಾಗಿ ಮೀಸಲಾತಿ ವಿವಾದ ಇತ್ಯರ್ಥ ಮಾಡುತ್ತೇವೆ. ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ. ಸ್ವಾಮೀಜಿಗಳು ತಮ್ಮ ಪ್ರತಿಭಟನೆ ವಾಪಸ್ ಪಡೆಯಬೇಕು ಅಂತಾ ಮನವಿ ಮಾಡಿದರು. ಯತ್ನಾಳ್ ಅವ್ರೇ ನಿಮಗೂ ಹೇಳುತ್ತೇನೆ. ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದು, ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಕೇಳಿದ್ದೇವೆ. ಆರೇಳು ತಿಂಗಳ ಒಳಗಾಗಿ ನ್ಯಾಯ ಒದಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇದಾದ ಬಳಿಕ ಸಚಿವರಾದ ಸಿಸಿ ಪಾಟೀಲ್, ಶಾಸಕ ಯತ್ನಾಳ್, ಶಾಸಕ ರೇಣುಕಾಚಾರ್ಯ ಧರಣಿ ಸ್ಥಳಕ್ಕೆ ತೆರಳಿ, ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸ್ವಾಮೀಜಿಗಳು ಸ್ಪಂದಿಸಿ ಅಧಿವೇಶನದಲ್ಲೇ ಸಿಎಂ ಪ್ರಸ್ತಾಪಿಸಿ ಸಮಯ ಕೇಳಿದ್ದಾರೆ. ಹೀಗಾಗಿ ಧರಣಿ ಸತ್ಯಾಗ್ರಹವನ್ನು ಆರು ತಿಂಗಳ ಮಟ್ಟಿಗೆ, ತಾತ್ಕಾಲಿಕವಾಗಿ ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿದರು.

  • ಯತ್ನಾಳ್ ಸಮಾಜದ ಅಸ್ತ್ರ: ಜಯಮೃತ್ಯುಂಜಯ ಸ್ವಾಮೀಜಿ

    ಯತ್ನಾಳ್ ಸಮಾಜದ ಅಸ್ತ್ರ: ಜಯಮೃತ್ಯುಂಜಯ ಸ್ವಾಮೀಜಿ

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾಜದ ಅಸ್ತ್ರ. ಯತ್ನಾಳ್ ಹಿಂದೆ ನಮ್ಮ ಸಮಾಜವಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿಗಳು, ನಮ್ಮ ಧರಣಿಗೆ ಅನುಮತಿ ನೀಡೋದಾಗಿ ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರೇ ಹೇಳಿದ್ದರು. ಮೌರ್ಯ ಸರ್ಕಲ್ ಮತ್ತು ವಿಧಾನಸೌಧದ ಮುಂಭಾಗ ಪ್ರತಿಭಟನೆ ಸಾರ್ವಜನಿಕರಿಗೆ ತೊಂದರೆ ಆಗಲಿದೆ ಎಂದು ಕಮಲ್ ಪಂಥ್ ಹೇಳಿದರು. ಅವರ ಮನವಿ ಹಿನ್ನೆಲೆ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಏನು ಬೇಕಾದ್ರೂ ಆಗಬಹುದು ಅನ್ನೋದಕ್ಕಿಂತ ಏನು ಆಗದೇ ಹಾಗೆ ನೋಡಿಕೊಳ್ಳಲಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಮಾತನಾಡುವ ವ್ಯಕ್ತಿ. ಈ ಹಿಂದೆಯೂ ಅನೇಕ ಬಾರಿ ಪಕ್ಷದ ಮುಖಂಡರ ಬಗ್ಗೆ ಮಾತನಾಡಿದ್ದಾರೆ. ಅಂದು ನೀಡದ ನೋಟಿಸ್ ನೀಡದ ಬಿಜೆಪಿ ಹೈಕಮಾಂಡ್ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾದಾಗ ನೀಡಿದ್ದು ಯಾಕೆ? ಈ ಸಂದರ್ಭದಲ್ಲಿ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದರಿಂದ ಸಮಾಜದಲ್ಲಿ ಬೇರೆ ಸಂದೇಶ ರವಾನೆ ಆಗ್ತಿದೆ. ನೋಟಿಸ್ ನೀಡುವ ಮೂಲಕ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಒತ್ತಡ ಹಾಕಲಾಯ್ತು ಎಂದು ಸ್ವಾಮೀಜಿಗಳು ಆರೋಪಿಸಿದರು.

    ಯತ್ನಾಳ್ ವಿರುದ್ಧ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಹೋರಾಟದ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ತಪ್ಪು ಸಂದೇಶ ಕಳುಹಿಸದಂತೆ ಕಾಣಿಸುತ್ತಿದೆ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮುಂದೆ ಬಂದು ತಪ್ಪು ಸಂದೇಶ ರವಾನೆ ಆಗೋದನ್ನ ತಡೆಯಬೇಕಿದೆ. ಮೀಸಲಾತಿ ಪರವಾಗಿ ಹೋರಾಟ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ್ರೆ ಸುಮ್ಮಿನರಲ್ಲ ಎಂದು ಎಚ್ಚರಿಸಿದರು.