Tag: Colour

  • ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ಬಾಗಲಕೋಟೆ: ಸಲೂನ್‍ವೊಂದರಲ್ಲಿ ತಲೆಗೆ ಕಲರ್ ಹಾಕೋದರ ರೇಟ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ನಗರದ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಾಗರ್ ಅವಟಿ (22) ಕೊಲೆಗೀಡಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಸಾಗರ್ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದನು. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದನು. ಇನ್ನೊಂದು ಟೇಬಲ್‍ನಲ್ಲಿ ಸದಾಶಿವ ನಾವಿ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಸಲೂನ್ ಮಾಲೀಕನು ಸಾಗರ್‌ಗೆ ಕಲರ್ ಹಚ್ಚೋದಕ್ಕೆ 20 ರೂ. ಕೊಡೋದಾಗಿ ಹೇಳಿದ್ದನು. ನಂತರದಲ್ಲಿ ಸದಾಶಿವ ನಾವಿ ಇದಕ್ಕೆ ತಕರಾರು ತೆಗೆದು ಜಗಳಕ್ಕೆ ಇಳಿದಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಈ ವೇಳೆ ಜಗಳವು ತಾರಕಕ್ಕೇರಿದ್ದು ಸದಾಶಿವ ಅಲ್ಲೇ ಇದ್ದ ಕತ್ತರಿಯಿಂದ ಆತನಿಗೆ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಈ ಮೊದಲು ಸಾಗರ, ಸದಾಶಿವ ನಾವಿಯನ್ನು ಅವಮಾನ ಮಾಡಿ ಕಾಡಿಸುತ್ತಿದ್ದನಂತೆ. ನಿನ್ನೆ ಕೂಡ ಕೆಲ ಹೊತ್ತು ಕ್ಷೌರಿಕನಿಗೆ ಆತ ಕಾಡಿಸಿದ್ದನಂತೆ. ನಂತರ ತಲೆಗೆ ಕಲರ್ ಹಚ್ಚುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಈ ವೇಳೆ ಕೂಡಲೇ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  • ಬಣ್ಣದ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆ

    ಬಣ್ಣದ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆ

    ಸ್ಯಾಕ್ರಮೆಂಟೊ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಯಾರ ಹಣೆಯ ಬರಹದಲ್ಲಿ ಯಾರು, ಯಾರ ಬಾಳಲ್ಲಿ ಯಾರು ಬರಬೇಕು ಎಂದು ಬರೆದಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಒಂದು ಹೆಣ್ಣಿಗೆ, ಗಂಡು ಎಂದು ದೇವರು ಬರೆದಿರುತ್ತಾನೆ. ಆದರೆ ಇಲ್ಲೊಬ್ಬ ಮಹಿಳೆ ತಾನು ತುಂಬಾ ಇಷ್ಟಪಡುವ ಬಣ್ಣದ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಈ ವಿಚಾರ ಇದೀಗ ಸಖತ್ ಸುದ್ದಿಯಲ್ಲಿದೆ.

    ಕ್ಯಾಲಿಫೋರ್ನಿಯಾದ ಕಿಟನ್ ಕೇಸೆರಾ ಎನ್ನುವ ಮಹಿಳೆಗೆ ಗುಲಾಬಿ ಬಣ್ಣ ಕಂಡರೆ ಎಲ್ಲಿಲ್ಲದ ಪ್ರೀತಿ. 40 ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದಾರೆ. ಈ ಬಣ್ಣದ ಜೊತೆಗೆ ತುಂಬಾ ಆತ್ಮೀಯವಾದ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಬಣ್ಣದ ಜೊತೆಗೆ ಮದುವೆಯಾಗಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

     

    View this post on Instagram

     

    A post shared by Kitten Kay Sera (@kittenkaysera)

    ನಾನು ಪಿಂಕ್ ಬಣ್ಣದ ಜೊತೆಗೆ ವಿವಾಹವಾಗಿದ್ದೇನೆ. 40 ವರ್ಷಗಳ ಡೇಟಿಂಗ್ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ನನಗೆ ಗುಲಾಬಿ ಬಣ್ಣ ಎಂದರೆ ಮೊದಲಿನಿಂದ ಪ್ರೀತಿ, ಆದರೆ ಯಾಕೆ ಈ ಬಣ್ಣ ಇಷ್ಟೊಂದು ಪ್ರೀತಿ ಎಂದು ನನಗೆ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    ಕಿಟನ್ ಕೇಸೆರಾ ಇತ್ತೀಚೆಗೆ ತಮ್ಮ ನೆಚ್ಚಿನ ಗುಲಾಬಿ ಬಣ್ಣದ ಜೊತೆಗೆ ಲಾಸ್ ವೇಗಾಸ್‍ನಲ್ಲಿ ವಿವಾಹವಾಗಿದ್ದಾರೆ. ಇವರ ಮದುವೆಯಲ್ಲಿ ಬಟ್ಟೆಯಿಂದ ಹಿಡಿದು ಕೇಕ್‍ವರೆಗೂ ಎಲ್ಲದರ ಬಣ್ಣವೂ ಪಿಂಕ್ ಆಗಿರುವುದು ವಿಶೇಷವಾಗಿತ್ತು. ತಮ್ಮ ವಿವಾಹವನ್ನು ಗುಲಾಬಿ ಬಣ್ಣದ ಗೌನ್, ಗುಲಾಬಿ ಬಣ್ಣದ ಕೋಟ್ ಮತ್ತು ಗುಲಾಬಿ ಕಿರೀಟವನ್ನು ಧರಿಸಿದ್ದರು. ಕೂದಲಿಗೆ ಕೂಡ ಪಿಂಕ್ ಬಣ್ಣವನ್ನು ಹಾಕಿಕೊಂಡಿದ್ದಾರೆ. ಮದುವೆ ಅಲಂಕಾರ ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ತುಂಬಿತ್ತು.

  • ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ

    ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ

    ಲಾಸ್‍ವೇಗಾಸ್: ಗ್ರಾಹಕರು ಇಷ್ಟ ಪಟ್ಟಾಗ ತನ್ನ ಬಣ್ಣವನ್ನು ಬದಲಿಸುವ ಕಾರನ್ನು ಬಿಎಂಡಬ್ಲ್ಯೂ(BMW)ಅಭಿವೃದ್ಧಿ ಪಡಿಸಿದ್ದು ಸಖತ್ ಸುದ್ದಿಯಲ್ಲಿದೆ.

    ಜರ್ಮನಿಯ ಮೂಲದ ಬಿಎಂಡಬ್ಲ್ಯು ಸಂಸ್ಥೆ ಗ್ರಾಹಕರು ಬಯಸಿದಾಗ ಬಣ್ಣ ಬದಲಾಯಿಸುವ ಕಾರೊಂದನ್ನು ಅನಾವರಣ ಮಾಡಿದೆ. ಕೇವಲ ಒಂದು ಬಟನ್ ಒತ್ತುವ ಮೂಲಕ ಕ್ಷಣ ಮಾತ್ರದಲ್ಲಿ ಇಡೀ ಕಾರಿನ ಬಣ್ಣವನ್ನೇ ಬದಲಾಯಿಸಬಹುದಾಗಿದೆ.

     

    ಲಾಸ್‍ವೇಗಾಸ್‍ನಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಈ ಕಾರನ್ನು ಪರಿಚಯಿಸಲಾಗಿದೆ. ಈ ತಂತ್ರಜ್ಞಾನ ಹೊಂದಿದ ವಿಶ್ವದ ಮೊದಲ ಕಾರು ಇದಾಗಿದೆ. ಆದರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಯಾವುದೇ ಮಾಹಿತಿ ಇಲ್ಲ.

    ಲಾಭವೇನು?: ಹವಾಮಾನಕ್ಕೆ ಅನುಗುಣವಾಗಿ ಬಣ್ಣ ಬದಲಾಯಿಸಿದರೆ ಕಾರು ಹೆಚ್ಚು ಉಷ್ಣತೆ ಹೀರುವುದನ್ನು ತಡೆಯಬಹುದಾಗಿದೆ. ಇದರಿಂದ ಇಂಧನ ಅಥವಾ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

    ಬಿಎಂಡಬ್ಲ್ಯು ಐಎಕ್ಸ್ ಕಾರಿನ ಮೇಲ್ಭಾಗವು ಇ-ಇಂಕ್ಸ್ ಎಲೆಕ್ಟ್ರಾನಿಕ್ ಪೇಪರ್ ಡಿಸ್ಪ್ಲ್ಯೆ ತಂತ್ರಜ್ಞಾನವನ್ನು ಒಳಗೊಂಡಿದ್ದು, ಅದು ಸಣ್ಣದಾದ ಬಣ್ಣದ ಶಾಯಿಯ ಮೈಕ್ರೋ ಕ್ಯಾಪ್ಸೂಲ್ಸ್‌ಗಳನ್ನು ಒಳಗೊಂಡಿದೆ. ಕಾರಿನ ಮೇಲ್ಮೈ ಬಣ್ಣದ ಬದಲಾವಣೆಗೆ ಸಹಕಾರಿಯಾಗಲಿದೆ.

  • ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯ 9 ದಿನಗಳಿಗೆ 9 ಬಣ್ಣದ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ.

    ಯಾವ ದಿನ, ಯಾವ ಬಣ್ಣದ ಉಡುಪು?
    1. ಶೈಲಪುತ್ರಿ: ಮೊದಲ ದಿನ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಹಳದಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡುವುದರಿಂದ ಲಾಭವಾಗುತ್ತದೆ.

    2. ಬ್ರಹ್ಮಚಾರಿಣಿ: ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ನಡೆಯುತ್ತದೆ. ಈ ದಿನ ಹಸಿರು ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ.

    3. ಚಂದ್ರಘಂಟಾ: ಮೂರನೇ ದಿನ ಚಂದ್ರಘಂಟ ದೇವಿಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಗ್ರೇ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ನಿಮ್ಮ ಕೆಟ್ಟು ಹೋದ ಕೆಲಸ ಸರಿ ಹೋಗುತ್ತದೆ. ಇದನ್ನೂ ಓದಿ: ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    4. ಕೂಷ್ಮಾಂಡಾ ದೇವಿ: ನಾಲ್ಕನೇ ದಿನ ಕೂಷ್ಮಾಂಡಾದೇವಿಯ ಆರಾಧನೆ ನಡೆಯುತ್ತದೆ. ಈ ದಿನ ಕಿತ್ತಲೆ ಹಣ್ಣಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಕೂಷ್ಮಾಂಡಾದೇವಿ ಕಿತ್ತಲೆ ಹಣ್ಣಿನ ಬಣ್ಣ ಪ್ರಿಯೆ ಎನ್ನುವ ನಂಬಿಕೆಯಿದೆ.

    5. ಸ್ಕಂದ ಮಾತೆ: ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಬಿಳಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ಇದನ್ನೂ ಓದಿ: ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    6. ಕಾತ್ಯಾಯಿನಿ: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಪೂಜೆ ನಡೆಯುತ್ತದೆ. ಈ ದಿನ ಕೆಂಪು ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    7. ಕಾಳರಾತ್ರಿ: ಏಳನೇ ದಿನ ಕಾಳರಾತ್ರಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದಿನ ನೀಲಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    8. ಮಹಾಗೌರಿ: ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಗುಲಾಬಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    9. ಸಿದ್ಧಿದಾತ್ರಿ: ಒಂಬತ್ತನೇ ಹಾಗೂ ಕೊನೆಯ ದಿನ ಸಿದ್ಧಿದಾತ್ರಿ ದೇವಿಯ ಪೂಜೆ ನಡೆಯುತ್ತದೆ. ಈ ದಿನದಂದು ಪರ್ಪಲ್ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    ಕಪ್ಪು ಬಣ್ಣ:
    ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸಬಾರದು ಎಂದು ಹೇಳುತ್ತಾರೆ. ಕಪ್ಪು ಬಣ್ಣ ದುಃಖದ ಸಂಕೇತ. ಹಾಗಾಗಿ ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸುವುದು ಅಶುಭ ಎನ್ನುವ ನಂಬಿಕೆಯಿದೆ.

     

     

  • ಮಾವಿನ ಹಣ್ಣು ತಿನ್ನೋ ಮುನ್ನ ಎಚ್ಚರ!

    ಮಾವಿನ ಹಣ್ಣು ತಿನ್ನೋ ಮುನ್ನ ಎಚ್ಚರ!

    ಬೆಂಗಳೂರು: ಮಾವು ಎಂದು ಮಾವಿನ ಹಣ್ಣಿನ ಸೀಸನ್‍ನಲ್ಲಿ ಚಪ್ಪರಿಸಿಕೊಂಡು ತಿನ್ನೋರು ಈ ಸುದ್ದಿ ಓದಿ. ಯಾಕೆಂದರೆ ರಸಭರಿತ ಕಲರ್ ಫುಲ್ ಮಾವಿನ ಬಣ್ಣ ಟೇಸ್ಟ್ ಹಿಂದೆ ಜೀವತೆಗೆಯುವ ವಿಷ ಇದೆ. ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ವಿಷದ ಮಾವಿನ ಅಸಲಿ ಮುಖ ಸೆರೆಯಾಗಿದೆ.

    ವಿಷದ ರಾಸಾಯನಿಕವನ್ನು ಬಳಸಿ ಎಳೆಯ ಮಾವು ಬೇಗ ಮಾಗುವಂತೆ ಮಾಡುತ್ತಾರೆ. ಅಲ್ಲದೆ ಇದರಿಂದ ಮಾವು ಕಲರ್ ಕೂಡ ಬರುತ್ತೆ. ಗ್ರಾಹಕರನ್ನು ಮರಳು ಮಾಡಲು ಈ ರೀತಿಯ ವಿಷದ ರಾಸಾಯನಿಕ ಬೆರೆಸುತ್ತಾರೆ. ಅಂದಹಾಗೆ ಬೆಂಗಳೂರಿನ ಜೆಸಿ ರಸ್ತೆಯ ಬೃಹತ್ ಮಾವುಗಳ ಶಾಪ್‍ನಲ್ಲಿ ಈ ರೀತಿ ವಿಷ ಬೆರೆಸಲಾಗುತ್ತಿದ್ದು, ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.

    ಹಣದ ಆಸೆಗಾಗಿ ಕಾಯಿ ಇರುವ ಮಾವಿನಹಣ್ಣನ್ನು ಮಾಗುವಂತೆ ಮಾಡುತ್ತಾರೆ. ಮರದಿಂದ ಇಳಿಸಿದ ಮಾವಿನಕಾಯಿಗಳಿಗೆ ಮೋಸ್ಟ್ ಡೇಂಜರಸ್ ಕಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಹಾಗೂ ಇಥ್ರೇಲ್‍ನ್ನು ಹಾಕಿ ಮಾಗುವಂತೆ ಮಾಡ್ತಾರೆ. ಇಂತಹ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

    ವಿಷದ ಹಣ್ಣು ತಿಂದ್ರೆ ಏನಾಗಬಹುದು?
    * ಕಾರ್ಬೈಡ್ ರಾಸಾಯನಿಕ ಬೆರೆಸಿದ ಮಾವು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ
    * ಹೊಟ್ಟೆನೋವು, ವಾಂತಿ ಭೇದಿಯಾಗುವ ಸಾಧ್ಯತೆ
    * ಬಾಯಿಹುಣ್ಣು, ಬಾಯಿ ಕ್ಯಾನ್ಸರ್, ಕರುಳುಬೇನೆಯಂತಹ ಮಾರಣಾಂತಿಕ ಕಾಯಿಲೆಯೂ ಬರಬಹುದು

    ಈಗ ರಾಸಾಯನಿಕ ಬಳಸಿಯೇ ಮಾವಿನ ಹಣ್ಣನ್ನು ಮಾಗಿಸೋದು ಕಾಮನ್ ಆಗಿದೆ. ಆದ್ದರಿಂದ ಮಾವಿನ ಹಣ್ಣನ್ನು ತಿನ್ನೋವಾಗ ಜೋಪಾನವಾಗಿರಿ. ಅಲ್ಲದೆ ಸಾಧ್ಯವಾದಷ್ಟು ಹಣ್ಣನ್ನು ತೊಳೆದು ತಿನ್ನೋದನ್ನು ರೂಢಿಸಿಕೊಳ್ಳಿ.

  • ಇಂದಿರಾ ಕ್ಯಾಂಟೀನ್‍ನಲ್ಲೂ ಕೈ-ದಳ ಲವ್

    ಇಂದಿರಾ ಕ್ಯಾಂಟೀನ್‍ನಲ್ಲೂ ಕೈ-ದಳ ಲವ್

    – ಸುಭಾಷ್ ನಗರದ ಕಟ್ಟಡಕ್ಕೆ ಜೆಡಿಎಸ್ ಕಲರ್

    ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಎಫೆಕ್ಟ್ ಈಗ ಯೋಜನೆಗಳಿಗೂ ತಟ್ಟಿದೆ. ಬೆಂಗಳೂರಿನ ಸುಭಾಷ್ ನಗರದ ಇಂದಿರಾ ಕ್ಯಾಂಟೀನ್ ಹಸಿರು ರಂಗು ಪಡೆದಿದೆ.

    ಜೆಡಿಎಸ್ ಪಕ್ಷದ ಲಾಂಛನದ ಬಣ್ಣವನ್ನ ಇಂದಿರಾ ಕ್ಯಾಂಟೀನ್‍ಗೂ ಹಚ್ಚಲಾಗಿದೆ. ವಿಪರ್ಯಾಸ ಅಂದ್ರೆ ಇಲ್ಲಿನ ಕಾರ್ಪೋರೆಟರ್ ಕಾಂಗ್ರೆಸ್‍ನ ಗೋವಿಂದ ರಾಜು. ಅರೆ ಇವರಿಗ್ಯಾಕೆ ಜೆಡಿಎಸ್ ಪ್ರೇಮ ಅಂದ್ರೆ. ಇದೇ ರಸ್ತೆಯಲ್ಲಿ ಜೆಡಿಎಸ್ ಪಕ್ಷದ ಕಚೇರಿ ಇದೆ. ಹೀಗಾಗಿ ಮೈತ್ರಿ ತೋರಿಸಿಕೊಳ್ಳಲು ಬಣ್ಣ ಹಚ್ಚಿದ್ದಾರೆ ಅಂತ ಸ್ಥಳೀಯರು ತಿಳಿಸಿದ್ದಾರೆ.

    ಅಂದಹಾಗೆ ಇಂದಿರಾ ಕ್ಯಾಂಟೀನ್‍ಗೆ ಯಾವುದೇ ಬಣ್ಣ ಬಳಿಯುವಂತಿಲ್ಲ. ಯಾವುದೇ ಫೋಟೋವನ್ನು ಹಾಕಂಗಿಲ್ಲ. ಆದ್ರೆ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಹಾಗೂ ಕಾರ್ಪೋರೆಟರ್ ಗೋವಿಂದರಾಜು ಫೋಟೋ ಇಲ್ಲಿ ರಾರಾಜಿಸ್ತಿದೆ. ಇದು ನಿಯಮ ಉಲ್ಲಂಘನೆಯಾಗಿದ್ದು ಕ್ರಮ ಕೈಗೊಳ್ಳುತ್ತೇವೆ ಅಂತ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಒಟ್ಟಿನಲ್ಲಿ ಬಡವರಿಗೆ ಕೊಡೋ ಊಟದ ಜಾಗದಲ್ಲೂ ರಾಜಕೀಯ ಮಾಡ್ತಿರೋದು ನಿಜಕ್ಕೂ ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews