Tag: Cold Storage

  • ರೈತರಿಗೆ ಸಹಾಯವಾಗಲು ಕೋಲ್ಡ್ ಸ್ಟೋರೇಜ್ ಮಂಜೂರು: ಬಿ.ಸಿ ಪಾಟೀಲ್

    ರೈತರಿಗೆ ಸಹಾಯವಾಗಲು ಕೋಲ್ಡ್ ಸ್ಟೋರೇಜ್ ಮಂಜೂರು: ಬಿ.ಸಿ ಪಾಟೀಲ್

    ಕಲಬುರಗಿ: ರೈತರು ಬೆಳೆದ ಹಣ್ಣು ಮತ್ತು ತರಕಾರಿ ಬೆಳೆಗಳು ಹಾಳಾಗದಂತೆ ಶೇಖರಣೆ ಮಾಡಲು ಕಲಬುರಗಿಯಲ್ಲಿ 9.80 ಕೋಟಿ ರೂ. ವೆಚ್ಚದಲ್ಲಿ 5000 ಮೆಟ್ರಿಕ್ ಟನ್ ಸಾಮಥ್ರ್ಯದ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

    ಇಂದು ನಗರದ ಜೇವರ್ಗಿ ರಸ್ತೆಯಲ್ಲಿ ಕೋಟನೂರ(ಡಿ) ರೈತ ಸಂಪರ್ಕ ಕೇಂದ್ರದ ಹಿಂದುಗಡೆ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಗುಣ ನಿಯಂತ್ರಣ ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿತ್ತು. ಅದನ್ನು ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ

    ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಕಲಬುರಗಿಯಲ್ಲಿ ಬೆಳೆದ ದ್ರಾಕ್ಷಿಗಳು ಮಾರಾಟವಾಗದೆ ರೈತರು ರಸ್ತೆಗೆ ಚೆಲ್ಲಿದನ್ನು ಕಣ್ಣಾರೆ ಕಂಡಿದ್ದೇನೆ. ಇದನ್ನು ತಪ್ಪಿಸಬೇಕೆಂದು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಸರ್ಕಾರದಿಂದಲೇ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ನಿರ್ಧರಿಸಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.

    ಮುಂದಿನ ಒಂದು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಈ ವರ್ಷದ ಅಂತ್ಯದಲ್ಲಿಯೇ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ರೈತರಿಗೆ ಸಮರ್ಪಿಸಲಾಗುವುದು. ನೆರೆ ಹಾವಳಿಯಲ್ಲಿ ಹಾಳಾದ ಬೆಳೆಗಳಿಗೆ ಒಣ ಬೇಸಾಯದ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 6,800 ರೂ. ಜೊತೆಗೆ ರಾಜ್ಯ ಸರ್ಕಾರದ 6,800 ರೂ., ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 13,500 ರೂ. ಜೊತೆಗೆ ರಾಜ್ಯ ಸರ್ಕಾರದ 11,500 ರೂ. ಹಾಗೂ ತೋಟಗಾರಿಕೆ ಬೆಳೆಗಳ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 18,000 ರೂ. ಜೊತೆಗೆ ರಾಜ್ಯ ಸರ್ಕಾರದ 7,000 ರೂ. ಸೇರಿಸಿ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಿದೆ ಎಂದು ಮಾಹಿತಿ ನೀಡಿದರು.

     

    ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ರೈತರ ಹಿತದೃಷ್ಟಿಯಿಂದ ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ಪ್ರದೇಶದಲ್ಲಿ ಕೆಕೆಅರ್‌ಡಿಬಿ ಮಂಡಳಿಯಿಂದ 30 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಇದಲ್ಲದೆ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬಿಬಿಎಂಪಿಗೆ ಪತ್ರ ಬರೆದ ನೈಜ ಹೋರಾಟಗಾರರ ವೇದಿಕೆ

    ಕಾರ್ಯಕ್ರಮದಲ್ಲಿ ಸಂಸದ ಡಾ.ಉಮೇಶ್, ಜಿ.ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಉಮೇಶ್ ಜಾಧವ್, ವಿಧಾನ ಪರಿಷತ್ ಶಾಸಕರಾದ ಡಾ.ಬಿ.ಜಿ.ಪಾಟೀಲ್, ಜಿ.ನಮೋಶಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

    ಕೋಟನೂರ್ (ಡಿ) ಕೃಷಿ ಇಲಾಖೆಯ ಆವರಣದಲ್ಲಿ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದಿಂದ ರೈತರ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟಡಕ್ಕೆ 2 ಕೋಟಿ ರೂ. ವೆಚ್ಚವಾಗುತ್ತೆ ಎಂದು ಅಂದಾಜಿಸಲಾಗಿದೆ. ಈ ಕಟ್ಟಡಕ್ಕೂ ಸಹ ಬಿ.ಸಿ.ಪಾಟೀಲ್ ಅವರು ಶಂಕುಸ್ಥಾಪನೆ ನೆರವೇರಿಸಿದರು.

  • ಕೋಲ್ಡ್ ಸ್ಟೋರೇಜ್‍ನಲ್ಲಿ ಹೆಪ್ಪುಗಟ್ಟಿದ 1 ಸಾವಿರ ಡೋಸ್ ಕೋವಿಶೀಲ್ಡ್ ಪತ್ತೆ!

    ಕೋಲ್ಡ್ ಸ್ಟೋರೇಜ್‍ನಲ್ಲಿ ಹೆಪ್ಪುಗಟ್ಟಿದ 1 ಸಾವಿರ ಡೋಸ್ ಕೋವಿಶೀಲ್ಡ್ ಪತ್ತೆ!

    – ತನಿಖೆಗೆ ಆದೇಶಿಸಿದ ಆರೋಗ್ಯ ಇಲಾಖೆ

    ಡಿಸ್ಪುರ್: ಅಸ್ಸಾಂನ ಕಚಾರ್ ಜಿಲ್ಲೆಯ ಸಿಲ್ಚೇರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ನಲ್ಲಿ ಸುಮಾರು 1,000 ಡೋಸ್ ಕೊರೊನಾ ಲಸಿಕೆ ಹೆಪ್ಪುಗಟ್ಟಿ ವ್ಯರ್ಥವಾದ ಘಟನೆ ಬೆಳಕಿಗೆ ಬಂದಿದೆ.

    ವರದಿಗಳ ಪ್ರಕಾರ, 1,000 ಡೋಸ್‍ಗಳನ್ನು ಹೊಂದಿರುವ ಕೋವಿಶೀಲ್ಡ್ ಲಸಿಕೆಯ ಸುಮಾರು 100 ಬಾಟ್ಲಿಗಳನ್ನು ಶೂನ್ಯ ತಾಪಮಾನದಲ್ಲಿ ಸಂಗ್ರಹಿಸಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ, ಆದರೆ ಸಿಲ್ಚಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಐಸ್ ಲೇನ್ಡ್ ರೆಫ್ರಿಜರೇಟರ್(ಐಎಲ್‍ಆರ್) ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿತ್ತು. ಹೀಗಾಗಿ ಲಸಿಕೆ ಕೆಟ್ಟು ಹೋಗಿದೆ ಎನ್ನಲಾಗಿದೆ.

    ಲಿಸಿಕೆ ಬಾಟ್ಲಿಗಳು ಭಾಗಶಃ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಐಎಲ್‍ಆರ್ ನ ಕೆಲವು ತಾಂತ್ರಿಕ ದೋಷವಿರಬಹುದು. ನಾವು ಸಾಮಾನ್ಯವಾಗಿ 2-8 ಡಿಗ್ರಿ ಸೆಲ್ಸಿಯಸ್ ನಡುವಿನ ಐಎಲ್‍ಆರ್ ತಾಪಮಾನವನ್ನು ನಿಯಂತ್ರಿಸುತ್ತೇವೆ. ತಾಪಮಾನ ಕಡಿಮೆಯಾದಾಗ ಐಎಲ್‍ಆರ್ ಯಂತ್ರ ಸಂದೇಶ ಕಳುಹಿಸುತ್ತದೆ. ಆದರೆ ನಮ್ಮ ವ್ಯಾಕ್ಸಿನೇಟರ್ ಯಾವುದೇ ಸಂದೇಶ ನೀಡಲಿಲ್ಲ. ಬಹುಶಃ ಇದು ತಾಂತ್ರಿಕ ದೋಷವಾಗಿದೆ. ಲಸಿಕೆಗಳನ್ನು ಇಡೀ ರಾತ್ರಿ ಸಂಗ್ರಹಿಸಲಾಗಿದೆ. ತಾಪಮಾನ ಹೇಗೆ ಕಡಿಮೆಯಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಕ್ಯಾಚರ್ ಜಿಲ್ಲೆಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

    ಸದ್ಯ ಅಷ್ಟೇ ಪ್ರಮಾಣದ ಸಲಿಕೆ ಬಾಟ್ಲಿಗಳನ್ನು ಮತ್ತೆ ಸಿಲ್ಚಾರ್ ವೈದ್ಯಕೀಯ ಹಾಗೂ ಆಸ್ಪತ್ರೆಗೆ ಕಳುಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅಲ್ಲದೆ ಘಟನೆಯನ್ನು ಗಂಭೀರ ಪರಿಗಣಿಸಿದ್ದು, ಈ ಬಗ್ಗೆ ಇಲಾಖೆ ತನಿಖೆಗೆ ಆದೇಶಿಸಿದೆ.

  • ‘ಟ್ವಿಟ್ಟರ್ ಕಿಲ್ಲರ್’ಗೆ ಮರಣ ದಂಡನೆ – 9 ಜನರನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ್ದ

    ‘ಟ್ವಿಟ್ಟರ್ ಕಿಲ್ಲರ್’ಗೆ ಮರಣ ದಂಡನೆ – 9 ಜನರನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ್ದ

    – ಮನೆಯಲ್ಲಿದ್ದ ಕೋಲ್ಡ್ ಸ್ಟೋರೇಜ್‍ನಲ್ಲಿ ಹೆಣಗಳ ಸಂಗ್ರಹಣೆ
    – ಸಹಾಯಕ್ಕೆ ಬಂದವರನ್ನ ರೇಪ್‍ಗೈದು ಕೊಲ್ಲುತ್ತಿದ್ದ ಹಂತಕ

    ಟೋಕಿಯೋ: 2017ರಲ್ಲಿ ಸದ್ದು ಮಾಡಿದ್ದ ಟ್ವಿಟ್ಟರ್ ಕಿಲ್ಲರ್ ಗೆ ಟೋಕಿಯೋದ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಕಾಹಿರೋ ಶಿರೈಸಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲ್ಲ ಎಂದು ಸಹ ಹೇಳಿದ್ದಾನೆ. 2017ರಲ್ಲಿ ಇಡೀ ಜಪಾನ್ ದೇಶವನ್ನೇ ತಕಾಹಿರೋ ಬೆಚ್ಚಿ ಬೀಳುವಂತೆ ಮಾಡಿದ್ದನು.

    ಅಪರಾಧಿ ತಕಾಹಿರೋ ಟೋಕಿಯೋ ನಗರದ ಝಾಮಾ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದನು. ಈತನ ಮನೆಯಲ್ಲಿರುವ ಕೋಲ್ಡ್ ಸ್ಟೋರೇಜ್ ನಲ್ಲಿ 8 ಯುವತಿಯರು, ಓರ್ವ ಯುವಕನ ಶವ ಪೊಲೀಸರು ವಶಕ್ಕೆ ಪಡೆದುಕೊಂಡು ಬಂಧಿಸಿದ್ದರು. ಇದೀಗ ಟೋಕಿ ಯೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಎಲ್ಲ ಕೊಲೆಗಳ ಆಯ ಉದ್ದೇಶಪೂರ್ವಕ ಮಾಡಿದ್ದಾನೆ ಎಂದು ತೀರ್ಪಿನಲ್ಲಿ ಹೇಳಿದೆ.

    ಟ್ವಿಟ್ಟರ್ ಕಿಲ್ಲರ್ ಹೆಸರು ಬಂದಿದ್ದೇಗೆ?: ತಕಾಹಿರೋ ಟ್ವಿಟ್ಟರ್ ನಲ್ಲಿ ಮಹಿಳೆಯರ ಜೊತೆ ಸ್ನೇಹ ಸಂಪಾದಿಸುತ್ತಿದ್ದನು. ನಂತರ ತನ್ನ ಖಾತೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಮೆಸೇಜ್, ಫೋಟೋ ಹಾಕಿಕೊಳ್ಳುತ್ತಿದ್ದನು. ಟ್ವಿಟ್ಟರ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಯುವತಿಯರ ಬಳಿ ಸಹಾಯ ಕೇಳುತ್ತಿದ್ದನು. ಸಹಾಯಕ್ಕೆ ಬಂದ ಯುವತಿಯರನ್ನ ಅತ್ಯಾಚಾರ ಎಸಗಿ, ನಂತರ ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸುತ್ತಿದ್ದನು. ಓರ್ವ ಯುವತಿಯ ಗೆಳೆಯನನ್ನ ಸೇರಿದಂತೆ 9 ಜನರನ್ನ ತಕಾಹಿರೋ ಕೊಲೆ ಮಾಡಿದ್ದಾನೆ. ಹಾಗಾಗಿ ಈತನಿಗೆ ಟ್ವಿಟ್ಟರ್ ಕಿಲ್ಲರ್ ಎಂದೇ ಕರೆಯಾಲಾಗುತ್ತಿದೆ.

    ಪ್ರಕರಣದ ಆರಂಭದಲ್ಲಿ ತಕಾಹಿರೋ ಪರ ವಾದ ಮಂಡಿಸಿದ್ದ ವಕೀಲರು, ಆತ ಯಾರನ್ನೂ ಕೊಂದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗ್ತಿದ್ದವರಿಗೆ ತಕಾಹಿರೋ ಸಹಾಯ ಮಾಡುತ್ತಿದ್ದನು ಎಂದಿದ್ರು. ಆದ್ರೆ ನ್ಯಾಯಾಲಯ ಜಗತ್ತಿನಲ್ಲಿ ಯಾರಿಗೂ ಯಾರ ಜೀವ ತೆಗೆದುಕೊಳ್ಳುವ ಹಕ್ಕಿಲ್ಲ. ಈತ ಕೊಲೆ ಮಾಡಿದ 9 ಜನರ ಸಾವಿಗೆ ತಕಾಹಿರೋ ಕಾರಣ ಎಂದು ಹೇಳಿ ಶಿಕ್ಷೆ ಪ್ರಕಟಿಸಿದೆ.