Tag: cold drink

  • ಬಿಸಿಲಿನ ಬೇಗೆಗೆ ಮನೆಯಲ್ಲೇ ತಯಾರಿಸಿ ತಂಪಾದ ಪಾನೀಯ

    ಬಿಸಿಲಿನ ಬೇಗೆಗೆ ಮನೆಯಲ್ಲೇ ತಯಾರಿಸಿ ತಂಪಾದ ಪಾನೀಯ

    ಬಿಸಿಲಿನ ಬೇಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಯಾರಿಕೆಗಾಗಿ ನಾವು ಅಂಗಡಿಯಲ್ಲಿ ಸಿಗುವ ವಿವಿಧ ತರಹದ ಜ್ಯೂಸ್‍ಗಳ ಮೊರೆ ಹೋಗುತ್ತಿದ್ದೇವೆ. ಹೀಗಾಗಿ ಅಂಗಡಿಯಲ್ಲಿ ಸಿಗುವ ಜ್ಯೂಸ್‍ಗಳಿಗಿಂತ ನಾವೇ ಮನೆಯಲ್ಲಿ ರುಚಿಯಾದ ಮತ್ತು ತಂಪಾದ ಮತ್ತು ಆರೋಗ್ಯಕರವಾದ ಜ್ಯೂಸ್‍ಗಳನ್ನು ಮಾಡಿ ಸೇವಿಸಬಹುದಾಗಿದೆ. ಫಟಾಫಟ್ ಆಗಿ ಮಾಡುವ ಮಾಡುವ ಈ 2 ಜ್ಯೂಸ್‍ಗಳನ್ನು ನೀವು ಒಮ್ಮೆ ಮಾಡಿ..

    ಕಾಮಕಸ್ತೂರಿ ಜ್ಯೂಸ್

    ಬೇಕಾಗುವ ಸಾಮಾಗ್ರಿಗಳು:
    * ಕಾಮಕಸ್ತೂರಿ ಬೀಜ
    * ನಿಂಬೆಹಣ್ಣು
    * ಸಕ್ಕರೆ – 4 ಟೀ ಸ್ಪೂನ್
    * ಎಲಕ್ಕಿ- 4
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    * ಮೊದಲು ಒಂದು ಬೌಲ್‍ಗೆ 2 ಗ್ಲಾಸ್ ನೀರನ್ನು ಹಾಕಿ. ನಂತರ ಉಪ್ಪು ಮತ್ತು ಸಕ್ಕರೆಯನ್ನು ಹಾಕಿ ಸಕ್ಕರೆ ಚೆನ್ನಾಗಿ ಕರಗುವವರೆಗೆ ಇಟ್ಟಿರಬೇಕು.
    * ಮತ್ತೊಂದು ಬೌಲ್‍ನಲ್ಲಿ ನೀರನ್ನು ಹಾಕಿ ಕಾಮಕಸ್ತೂರಿ ಬೀಜವನ್ನು ನೆನೆಸಿಟ್ಟಿರಬೇಕು.
    * ನಂತರ ಈ ಮೊದಲೇ ಸಕ್ಕರೆಯನ್ನು ಕರಗಿಸಿಟ್ಟ ನೀರಿಗೆ ಎಲಕ್ಕಿ, ನಿಂಬೆಹಣ್ಣಿ ರಸ ಮತ್ತು ಕಾಮಕಸ್ತೂರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಮತ್ತು ತಂಪಾದ ಕಾಮಕಸ್ತೂರಿ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.

    ಸೌತೆಕಾಯಿ ಜ್ಯೂಸ್
    ಬೇಕಾಗುವ ಸಾಮಗ್ರಿಗಳು
    * ಸೌತೆಕಾಯಿ-1
    * ಸಕ್ಕರೆ- 4 ಟೀ ಸ್ಪೂನ್
    * ಉಪ್ಪು ರುಚಿಗೆ ತಕ್ಕಷ್ಟು
    * ಎಲಕ್ಕಿ ಪೌಡರ್_ ಅರ್ಧ ಸ್ಪೂನ್
    * ನಿಂಬೆಹಣ್ಣು- 1

    ಮಾಡುವ ವಿಧಾನ:
    * ಸೌತೆಕಾಯಿ ತಿರುಳನ್ನು ತೆಗೆದು ಸಣ್ಣದಾಗಿ ಕಟ್ ಮಾಡಿಟ್ಟಿರುವ ಸೌತೆಕಾಯಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಜೊತೆಯಲ್ಲಿ ಉಪ್ಪು, ಸಕ್ಕರೆ, 2 ಗ್ಲಾಸ್ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು.
    * ನಂತರ ಈ ಮಿಶ್ರಣವನ್ನು ಸೋಸಿ ತೆಗೆಯಬೇಕು.
    * ಈ ಜ್ಯೂಸ್‍ಗೆ ನಿಂಬೆಹಣ್ಣಿನ ರಸವನ್ನು ಸೇರಿಸಿದರೆ ರುಚಿಯಾದ, ಆರೋಗ್ಯಕರವಾದ ಸೌತೆಕಾಯಿ ಜ್ಯೂಸ್ ಸಿದ್ಧವಾಗುತ್ತದೆ.

  • ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ಶಿವಮೊಗ್ಗ: ತಂಪು ಪಾನೀಯದ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಹೋಟೆಲ್ ವೊಂದರಲ್ಲಿ ನಡೆದಿದೆ.

    ಇಂದು ಸಂಜೆಯ ವೇಳೆಗೆ ಮೂರು ಮಂದಿ ಗ್ರಾಹಕರ ಗುಂಪೊಂದು ಹೋಟೆಲ್ ಗೆ ತೆರಳಿ ತಂಪು ಪಾನೀಯ ಕುಡಿಯಲು ಹೋಗಿದ್ದಾರೆ. ಹೋಟೆಲ್ ನವರು ತಂಪು ಪಾನೀಯವನ್ನು ನೀಡಿದ್ದಾರೆ. ಈ ವೇಳೆ ಗ್ರಾಹಕ ಸುರೇಂದ್ರ ಎಂಬುವರು ಕುಡಿಯುತ್ತಿದ್ದ ತಂಪು ಪಾನೀಯ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿದ್ದು ತಂಪು ಪಾನೀಯ ಕುಡಿಯುತ್ತಿದ್ದ ಗ್ರಾಹಕನಿಗೆ ಶಾಕ್ ಆಗಿದೆ.

    ಕುಡಿಯುತ್ತಿದ್ದ ಬಾಟಲಿಯನ್ನು ಅರ್ಧಕ್ಕೆ ಬಿಟ್ಟು ಹೋಟೆಲ್ ಮಾಲೀಕರನ್ನು ಕರೆದು ತೋರಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಬಾಟಲಿಯನ್ನು ಹಿಂಪಡೆದುಕೊಂಡಿದ್ದಾರೆ. ಆದರೆ ಅಷ್ಟಕ್ಕೇ ಸಮಾಧಾನಗೊಳ್ಳದ ಗ್ರಾಹಕ ಘಟನೆ ಬಳಿಕ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರು.

    ಗ್ರಾಹಕರು ನೀಡಿದ ದೂರಿನ ಮೇರೆಗೆ ಹೋಟೆಲ್ ಗೆ ಆಗಮಿಸಿದ ಅಧಿಕಾರಿಗಳು ತಂಪು ಪಾನೀಯ ಬಾಟಲಿಯನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ತಂಪು ಪಾನೀಯ ಕಂಪನಿಯ ಅಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಅಧಿಕಾರಿ ಡಾ. ಶಮಾ ತಿಳಿಸಿದ್ದಾರೆ.

  • ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋದ ಕಲಬುರಗಿಯ ಮದ್ಯಪ್ರಿಯರು

    ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋದ ಕಲಬುರಗಿಯ ಮದ್ಯಪ್ರಿಯರು

    ಕಲಬುರಗಿ: ಬೇಸಿಗೆ ಕಾಲ ಬಂದರೆ ಸಾಕು ತಂಪು ಪಾನೀಯಗಳಿಗೆ ಜನ ಮೊರೆ ಹೋಗುತ್ತಾರೆ. ಆದರೆ ಬಿಸಿಲ ನಾಡು ಕಲಬುರಗಿಯ ಮದ್ಯಪ್ರಿಯರು ಬಿಸಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋಗಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ಹೇಳುತ್ತಿವೆ.

    ಬೇಸಿಗೆ ಕಾಲ ಆರಂಭವಾದ ನಂತರ ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್‍ನಿಂದ ಇಂದಿನವರೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ಬಚಾವಾಗಲು ಕಲಬುರಗಿಯಲ್ಲಿನ ಮದ್ಯಪ್ರಿಯರು ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ನೇರವಾಗಿ ಬಾರ್‍ಗಳತ್ತ ಮುಖ ಮಾಡಿ ಚಿಲ್ಡ್ ಬೀಯರ್ ಒಂದರ ಮೇಲೊಂದು ಬಾಟಲಿಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಬಾರ್‍ಗಳು ಮಧ್ಯಾಹ್ನವಾದ್ರೆ ಗಿರಾಕಿಗಳಿಂದ ಫುಲ್ ಆಗ್ತಾ ಇವೆ. ಈ ಬಗ್ಗೆ ಖುದ್ದು ಗ್ರಾಹಕರನ್ನು ಕೇಳಿದ್ರೆ ಬಿಸಲಿನ ತಾಪ ಹೆಚ್ಚಳದಿಂದ ಹಾರ್ಡ್ ಡ್ರಿಂಕ್ಸ್ ಬದಲು ಬೀಯರ್ ಮೊರೆ ಹೋಗಿದ್ದೇವೆ ಎಂದು ಹೇಳುತ್ತಾರೆ.

    ಅಬಕಾರಿ ಇಲಾಖೆಯ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಏಪ್ರಿಲ್ ನಲ್ಲಿ 10 ಸಾವಿರದ 396 ಬೀಯರ್ ಬಾಕ್ಸ್ ಗಳು ಹೆಚ್ಚಿಗೆ ಮಾರಾಟವಾಗಿದ್ದು, ಇದನ್ನು ಅರಿತ ಮದ್ಯದಂಗಡಿಯವರು ಇದೀಗ ಬಿಯರ್ ಸ್ಟಾಕ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಬಕಾರಿ ಇಲಾಖೆಗೆ ಕೋಟಿ ಕೋಟಿ ಹಣ ಕೇವಲ ಬೀಯರ್ ಮಾರಾಟದಿಂದ ಆದಾಯ ಬರುತ್ತಿದೆ. ಬೇಸಿಗೆ ಕಾಲದ ಈ ಮೂರು ತಿಂಗಳಲ್ಲಿ ಹಗಲು ಹೊತ್ತಿನಲ್ಲಿಯೇ ಬೀಯರ್ ಸೇವನೆ ಗ್ರಾಹಕರು, ಸಂಜೆಯಾದ್ರೆ ಮಾಮೂಲು ನಿತ್ಯದ ಗ್ರಾಹಕರು ಎಂದು ಬಾರ್‍ವೊಂದರ ವ್ಯವಸ್ಥಾಪಕರು ಹೇಳುತ್ತಾರೆ.