Tag: coach

  • ಬಾಲ್ಯದ ಕೋಚ್‍ರನ್ನ ಕಳೆದುಕೊಂಡ ಸಚಿನ್ ತೆಂಡೂಲ್ಕರ್

    ಬಾಲ್ಯದ ಕೋಚ್‍ರನ್ನ ಕಳೆದುಕೊಂಡ ಸಚಿನ್ ತೆಂಡೂಲ್ಕರ್

    ಮುಂಬೈ: ದ್ರೋಣಾಚಾರ್ಯ ಪ್ರಶಸ್ತಿ ವಿಜೇತ, ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೆಕಾರ್ (87) ಇಂದು ನಿಧನರಾಗಿದ್ದಾರೆ.

    ಸಚಿನ್ ತೆಂಡೂಲ್ಕರ್ ಅವರನ್ನು ಒಬ್ಬ ಉತ್ತಮ ಬ್ಯಾಟ್ಸ್ ಮನ್ ಆಗಿ ರೂಪಿಸಿದ್ದ ರಮಾಕಾಂತ್ ಅವರು ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ರಮಾಕಾಂತ್ ಅವರ ನಿಧನದ ಬಗ್ಗೆ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿ ಖಚಿತ ಪಡಿಸಿದ್ದಾರೆ.

    ಬಾಲ್ಯ ದಿನಗಳಲ್ಲೇ ತಮ್ಮನ್ನು ಉತ್ತಮವಾಗಿ ರೂಪಿಸಿದ್ದ ಕೋಚ್ ರಮಾಕಾಂತ್ ಅವರ ಬಗ್ಗೆ ಸಚಿನ್ ಅವರು ಹೆಚ್ಚಿನ ಗೌರವ ಹೊಂದಿದ್ದರು. ರಮಾಕಾಂತ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಸಚಿನ್ ಮಾತ್ರವಲ್ಲದೇ ವಿನೋದ್ ಕಾಂಬ್ಳಿ, ಪ್ರವೀಣ್ ಅಮ್ರೆ, ಸಮೀರ್ ದಿಘೆ ಮತ್ತು ಬಲ್ವಿಂದರ್ ಸಿಂಗ್ ಸಂಧು ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ರಮಾಕಾಂತ್ ಅವರು ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಮೊದಲ ಬಾರಿಗೆ ಸಚಿನ್ ರನ್ನು ಭೇಟಿ ಮಾಡಿದ್ರು, ಅವರ ಸಹೋದರ ಅಜಿತ್ ಅವರು ಸಚಿನ್ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಆರಂಭವಾದ ಗುರು ಶಿಷ್ಯರ ಸಂಬಂಧ ಇಲ್ಲಿಯವರೆಗೂ ಮುಂದುವರೆದಿತ್ತು. ಸಚಿನ್ ಉತ್ತಮ ಅಭ್ಯಾಸದ ವೇಳೆ ಉತ್ತಮ ಪ್ರದರ್ಶನ ನೀಡಿದರೆ, ಅಂದು ಸಚಿನ್ ಅವರಿಗೆ ವಡಾ ಪಾವ್ ಕೊಡಿಸುತ್ತಿದ್ದರು.

    ಈ ಹಿಂದೆ ಗುರುಗಳ ಬಗ್ಗೆ ಮಾತನಾಡಿದ್ದ ಸಚಿನ್, ನಾನು ಸರಿಯಾಗಿ ಪ್ರದರ್ಶನ ನೀಡಿಲ್ಲ ಅಂತಾ ಕೋಚ್ ಎಂದು ನನಗೆ ಹೇಳಿಲ್ಲ. ನಾನು ಉತ್ತಮ ಪ್ರದರ್ಶನ ನೀಡಿದ ವೇಳೆ ನನಗೆ ತಿಂಡಿ ಕೊಡಿಸುತ್ತಿದ್ದರು, ಆಗ ನನಗೆ ನಾನು ಉತ್ತಮವಾಗಿ ಆಡಿದ್ದೆ ಎಂದು ತಿಳಿಯುತ್ತಿತ್ತು ಎಂದು ತಮ್ಮ ಜೀವನದ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದರು.

    ಕ್ರೀಡೆಗೆ ರಮಾಕಾಂತ್ ಅವರ ನೀಡಿದ ಸೇವೆಯನ್ನು ಗುರುತಿಸಿದ್ದ ಸರ್ಕಾರ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದ ಟೀಂ ಇಂಡಿಯಾ ಸಂಭ್ರಮದಲ್ಲಿ ತೊಡಗಿದ್ದು, ಈ ವೇಳೆ ಕೋಚ್ ರವಿಶಾಸ್ತ್ರಿ ಬಿಯರ್ ಕುಡಿಯುತ್ತಾ ಬಸ್ಸಿನಿಂದ ಕೆಳಗಿಳಿದು ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರವಿಶಾಸ್ತ್ರಿ ಬಿಯರ್ ಕೂಡಿಯುತ್ತಿರುವ ಫೋಟೋ ಹಾಗೂ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.

    ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು ಮೆಲ್ಬರ್ನ್ ಕ್ರೀಡಾಂಗಣದ ಕೊಠಡಿಯಲ್ಲಿ ಫೋಟೋಗೆ ಪೋಸ್ ನೀಡಿದ ಸಂದರ್ಭದಲ್ಲೂ ಕೋಚ್ ರವಿಶಾಸ್ತ್ರಿ ಬಿಯರ್ ಬಾಟಲಿಯೊಂದಿಗೆ ಗೆಲುವಿನ ನಗೆ ತೋರಿದ್ದಾರೆ. ಬಳಿಕ ಹೋಟೆಲ್ ಕೊಠಡಿಗೆ ತೆರಳುವ ವೇಳೆ ಬಸ್ಸಿನಿಂದ ಕೆಳಗಿಳಿದ ರವಿಶಾಸ್ತ್ರಿ ಮಾಧ್ಯಮಗಳು ಇರುವುದನ್ನು ಲೆಕ್ಕಿಸದೇ ಬಿಯರ್ ಕುಡಿಯುತ್ತಾ ಮುಂದೇ ಸಾಗಿದ್ದಾರೆ. ಈ ದೃಶ್ಯ ತಮ್ಮ ವಿರುದ್ಧ ಟೀಕೆ ಮಾಡಿದ್ದ ವ್ಯಕ್ತಿಗಳಿಗೆ ಟಾಂಗ್ ಕೊಟ್ಟಂತೆ ಕಂಡು ಬಂದಿತ್ತು.

    ರವಿಶಾಸ್ತ್ರಿ ಅವರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಕೋಚ್ ಟೀಂ ಇಂಡಿಯಾಗೆ ಅಗತ್ಯವಿಲ್ಲ. ರವಿಶಾಸ್ತ್ರಿಗಿಂತ ಅತ್ಯುತ್ತಮ ಕೋಚ್ ಆಯ್ಕೆಗಳು ನಮ್ಮ ಮುಂದಿದೆ. ನೀವು ಗ್ರೇಟ್ ಟೀಂ ಇಂಡಿಯಾದ ಕೋಚ್ ಎಂಬುವುದನ್ನು ಮರೆಯಬಾರದು ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    https://twitter.com/msd_junior/status/1079408029089509376?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿ ಇಮೇಲ್‍ನಿಂದ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ!

    ಕೊಹ್ಲಿ ಇಮೇಲ್‍ನಿಂದ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ!

    ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಕೋಚ್ ಹುದ್ದೆಗೆ ರಾಜೀನಾಮೆ ನೀಡಲು ವಿರಾಟ್ ಕೊಹ್ಲಿ ಬಿಸಿಸಿಐಗೆ ಕಳುಹಿಸಿದ ಇಮೇಲ್ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊಹ್ಲಿ ಬಿಸಿಸಿಐ ಸಮಿತಿಗೆ ಕಳುಹಿಸಿದ್ದ ಇ-ಮೇಲ್ ಹಾಗೂ ಕೆಲವು ಸಂದೇಶಗಳು ಲಿಕ್ ಆಗಿವೆ. ಅಂದಹಾಗೇ ಅನಿಲ್ ಕುಂಬ್ಳೆ ಕಳೆದ ವರ್ಷ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕುಂಬ್ಳೆ ಅವಧಿಯಲ್ಲಿ ಆಡಿದ್ದ 17 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿತ್ತು. ಕುಂಬ್ಳೆ ಕೋಚಿಂಗ್ ನಲ್ಲಿ ತಂಡ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದರೂ ಕೋಚ್ ಅವಧಿ ಮುಗಿಯುತ್ತಿದಂತೆ ರಾಜೀನಾಮೆ ನೀಡಿ ಹೊರಬಂದಿದ್ದರು.

    ಸದ್ಯ ಮಾಧ್ಯಮ ವರದಿಯಲ್ಲಿ ಕುಂಬ್ಳೆ ಕುರಿತು ನಾಯಕ ವಿರಾಟ್ ಕೊಹ್ಲಿ ಸತತವಾಗಿ ಬಿಸಿಸಿಐ ಮುಖ್ಯ ಕಾರ್ಯದರ್ಶಿ ರಾಹುಲ್ ಜೋಹರಿ ಅವರಿಗೆ ಸಂದೇಶ ರವಾನಿಸುತ್ತಿದ್ದರು. ಆ ಬಳಿಕ ಕೊಹ್ಲಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರವಿಶಾಸ್ತ್ರಿ ಅವರು ಕೋಚ್ ಆಗಿ ನೇಮಕಗೊಂಡಿದ್ದರು.

    ಸುಪ್ರೀಂ ನೇಮಕ ಮಾಡಿದ್ದ ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದ ಸಚಿನ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಅವರು ಕುಂಬ್ಳೆ ಅವರನ್ನು ಶಿಫಾರಸ್ಸು ಮಾಡಿದ್ದರು. ಅಲ್ಲದೇ ಒಂದು ವರ್ಷದ ಕಾಲ ತಂಡದ ಕೋಚ್ ಆಗಿದ್ದ ಕುಂಬ್ಳೆ ಮುಂದಾಳತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟಿನಲ್ಲಿ ನಂ.1 ಪಟ್ಟಕ್ಕೆರಿತ್ತು. ಕುಂಬ್ಳೆ ಕೂಡ ತಮ್ಮ ರಾಜೀನಾಮೆ ಬಳಿಕ ತಂಡದ ನಾಯಕ ಹಾಗೂ ತಮ್ಮ ಶೈಲಿ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿಸಿದ್ದರು.

    ಈ ಹಿಂದೆ ಕೂಡ ಅನಿಲ್ ಕುಂಬ್ಳೆ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಬಿಶನ್ ಸಿಂಗ್, ತಂಡದಲ್ಲಿ ಒಬ್ಬರ ಮಾತು ಮಾತ್ರ ನಡೆಯುತ್ತಿದ್ದು, ಅದು ನಾಯಕ ವಿರಾಟ್ ಕೊಹ್ಲಿ ಅವರದ್ದು ಮಾತ್ರ. ಅವರು ತಂಡದಲ್ಲಿ ಒಂದು ರೀತಿಯಲ್ಲಿ ರಾಜನಂತೆ ವರ್ತಿಸುತ್ತಿದ್ದಾರೆ. ಅದ್ದರಿಂದಲೇ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವಾದ ರಹಿತ ಕೋಚ್ ಸಿಗುವರೆ ಮಹಿಳಾ ಕ್ರಿಕೆಟ್ ತಂಡಕ್ಕೆ?

    ವಿವಾದ ರಹಿತ ಕೋಚ್ ಸಿಗುವರೆ ಮಹಿಳಾ ಕ್ರಿಕೆಟ್ ತಂಡಕ್ಕೆ?

    ಮುಂಬೈ: ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂಗತಿ ಮತ್ತೊಮ್ಮೆ ಮಿಥಾಲಿ ರಾಜ್ ಹಾಗೂ ಪವರ್ ನಡುವಿನ ವಿವಾದಲ್ಲಿ ಮತ್ತೆ ಬಹಿರಂಗವಾಗಿತ್ತು. ಈ ನಡುವೆ ಬಿಸಿಸಿಐ ಪವರ್ ಅವರ ಅವಧಿ ಅಂತ್ಯವಾಗುತ್ತಿದಂತೆ ಹೊಸ ಕೋಚ್ ಗಾಗಿ ಅರ್ಜಿ ಸಲ್ಲಿಸಲು ಅಹ್ವಾನ ನೀಡಿದೆ.

    ಭಾರತದಲ್ಲಿ ಪುರುಷರ ಕ್ರಿಕೆಟಿಗೆ ಹೆಚ್ಚಿನ ಬೆಂಬಲ ಲಭಿಸುತ್ತದೆ. ಮಹಿಳಾ ಕ್ರಿಕೆಟ್‍ಗೆ ಬೆಂಬಲ ಕಡಿಮೆ ಎಂಬ ಅಭಿಪ್ರಾಯವಿತ್ತು. ಆದರೆ ಇತ್ತೀಚೆಗೆ ಮಹಿಳಾ ಕ್ರಿಕೆಟ್ ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಆದರೆ ಆಟಗಾರ್ತಿಯರು ಕೋಚ್ ನಡುವಿನ ಗುದ್ದಾಟ ಮಾತ್ರ ತಂಡದ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ಹೇಳಬಹುದು. ವಿಶ್ವಕಪ್ ಲೀಗ್ ಹಂತದಲ್ಲಿ ಸೋಲಿಲ್ಲದ ತಂಡವಾಗಿ ಸೆಮಿಫೈನಲ್ ಪ್ರವೇಶ ಮಾಡಿದ್ದ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದಕ್ಕೆ ಆಡುವ 11 ಬಳಗದಿಂದ ಮಿಥಾಲಿ ರಾಜ್ ರನ್ನು ಕೈಬಿಟ್ಟಿದೆ ಕಾರಣ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

    ಇದರ ಬೆನ್ನಲ್ಲೇ ಬಿಸಿಸಿಐಗೆ ಪತ್ರ ಬರೆದಿದ್ದ ಮಿಥಾಲಿರಾಜ್ ಕೋಚ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಗೆ ರಮೇಶ್ ಪವರ್ ಕೂಡ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡಿದ್ದರು. ಅಲ್ಲದೇ ಮಿಥಾಲಿ ರಾಜ್ ಇದು ನನ್ನ ಜೀವನದ ಕರಾಳ ದಿನ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಹಿಂದೆ ತಂಡದ ಕೋಚ್ ಆಗಿದ್ದ ತುಷಾರ ಆರೋತೆ ಕೂಡ ಇಂತಹದ್ದೇ ವಿವಾದಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದರು.

    ಈ ಘಟನೆಗಳ ಬಳಿಕ ಬಿಸಿಸಿಐ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರದಲ್ಲಿ ಜಾಗೃತಿ ವಹಿಸಬೇಕಿದೆ. ಪವರ್ ಅವರ ಮೂರು ತಿಂಗಳ ಕೋಚ್ ಅವಧಿ ಅಂತ್ಯವಾಗಿದ್ದು, ಬಿಸಿಸಿಐ ಆಹ್ವಾನ ನೀಡಿರುವ ಹುದ್ದೆಗೆ ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಟಾಮ್ ಮೂಡಿ, ಡೇವ್ ವಾಟ್ಮೋರ್ ಅರ್ಜಿ ಸಲ್ಲಿಸಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

    ಇದೇ ವೇಳೆ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ವಿದೇಶಿ ಕೋಚ್ ನೇಮಕ ಮಾಡುವ ಬಗ್ಗೆ ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಮೂಡಿ ಅವರು ಈ ಪಟ್ಟಿಯಲ್ಲಿ ಇದ್ದು, ಹಲವು ತಂಡಗಳಿಗೆ ಕೋಚಿಂಗ್ ನೀಡಿದ ಅನುಭವ ಹೊಂದಿದ್ದಾರೆ. ಉಳಿದಂತೆ ವಾಟ್ಮೋರ್ ಕೂಡ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಅನುಭವ ಹೊಂದಿದ್ದಾರೆ. ಟೀಂ ಇಂಡಿಯಾ ಮಹಿಳಾ ತಂಡ ಜನವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಮುನ್ನವೇ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಸಿ: ಚೇತನ್ ಚೌಹಾಣ್

    ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಸಿ: ಚೇತನ್ ಚೌಹಾಣ್

    ಮುಂಬೈ: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದರೂ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಅಭಿಯಾನ ಇಂದು ಮತ್ತೆ ಜೀವ ಪಡೆದಿದೆ. ಒಂದು ಹಂತದಲ್ಲಿ ಇಂದು #ಸ್ಯಾಕ್_ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಟ್ರೆಂಡ್ ಆಗಿತ್ತು. ಈ ನಡುವೆಯೇ ಟೀಂ ಇಂಡಿಯಾದ ಮಾಜಿ ಆಟಗಾರ ಚೇತನ್ ಚೌಹಾಣ್ ರವಿಶಾಸ್ತ್ರಿ ಕೋಚಿಂಗ್ ಕೆಲಸ ಸಾಕು, ಅವರಿಗೆ ಕಮೆಂಟ್ರಿಯೇ ಬೆಟರ್ ಎಂಬ ಸಲಹೆ ನೀಡಿದ್ದಾರೆ.

    ಈಗಷ್ಟೇ ಅಂತ್ಯವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-4 ಅಂತರದಲ್ಲಿ ಸೋಲುಂಡ ಬಳಿಕ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯನ್ನು ಸೋಲಿನ ಹೊಣೆ ಮಾಡಿ ಕೋಚ್ ಸ್ಥಾನದಿಂದ ಕೆಳಗಿಳಿಸುವಂತೆ ಹಲವರು ಆಗ್ರಹಿಸಿದ್ದರು. ಸದ್ಯ ಟೀಂ ಇಂಡಿಯಾ ಮಾಜಿ ಆಟಗಾರ ಚೇತನ್ ಚೌಹಾಣ್ ಕೂಡ ತಂಡದ ಸೋಲಿಗೆ ರವಿಶಾಸ್ತ್ರಿ ಕಾರಣವಾಗಿದ್ದು, ಮುಂದಿನ ಆಸ್ಟ್ರೇಲಿಯಾ ವಿರುದ್ಧ ಸರಣಿಗೂ ಮುನ್ನ ರವಿಶಾಸ್ತ್ರಿಯನ್ನು ತಂಡದಿಂದ ಕೈಬಿಡುವಂತೆ ಹೇಳಿದ್ದಾರೆ.

    https://twitter.com/Bhuklagiheyaar/status/1042774411013705728

    ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಬಳಿಕ ಚೌಹಾಣ್ ಅವರು ರವಿಶಾಸ್ತ್ರಿ ಕೋಚ್ ಹುದ್ದೆ ತ್ಯಜಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಚೌಹಾಣ್, ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಆಗ ಎರಡು ತಂಡಗಳು ಸಮರ್ಥವಾಗಿ ಪೈಪೋಟಿ ನಡೆಸಲಿವೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ವೈಫಲ್ಯಗಳನ್ನು ಅರಿತುಕೊಳ್ಳಲು ವಿಫಲವಾಗಿದೆ. ಇದಕ್ಕೆ ನೇರ ಕಾರಣ ಕೋಚ್ ರವಿಶಾಸ್ತ್ರಿ. ಅದ್ದರಿಂದ ಮುಂದಿನ ಟೂರ್ನಿ ಆರಂಭಕ್ಕೂ ಮೊದಲು ಅವರನ್ನು ಕೋಚ್ ಹುದ್ದೆಯಿಂದ ತೆಗೆಯುವುದು ಸೂಕ್ತ ಎಂದು ತಿಳಿಸಿದ್ದಾರೆ.

    https://twitter.com/Amit_smiling/status/1028647401375105025?

    ಇದೇ ವೇಳೆ ರವಿಶಾಸ್ತ್ರಿ ಉತ್ತಮ ವೀಕ್ಷಕ ವಿವರಣೆ ನೀಡಬಲ್ಲರು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಚೌಹಾಣ್, ರವಿಶಾಸ್ತ್ರಿ ಅವರಿಗೆ ಆ ಹುದ್ದೆ ನೀಡಿದರೆ ಉತ್ತಮ ಎಂದು ತಿಳಿಸಿದ್ದಾರೆ. ಅಲ್ಲದೇ 1980ರ ದಶಕ ಬಳಿಕ ಸದ್ಯದ ಟೀಂ ಇಂಡಿಯಾ ಅತ್ಯುತ್ತಮ ತಂಡ ಎಂಬ ರವಿಶಾಸ್ತ್ರಿ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

    ಚೇತನ್ ಚೌಹಾಣ್ ಹಿನ್ನೆಲೆ: 1969ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಚೇತನ್ ಚೌಹಾಣ್ ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾದಲ್ಲಿ 1969 ರಿಂದ 1981 ಅವಧಿಯಲ್ಲಿ ಸ್ಥಾನ ಪಡೆದಿದ್ದರು. ಒಟ್ಟಾರೆ ಚೌಹಾಣ್ 40 ಟೆಸ್ಟ್ ಪಂದ್ಯ ಆಡಿ 2,084 ರನ್ ಗಳಿಸಿದ್ದಾರೆ. 1981 ರಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದರು. ಉಳಿದಂತೆ 7 ಅಂತರಾಷ್ಟ್ರೀಯ ಏಕದಿನ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮುಖ್ಯವಾಗಿ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದರು.

    ಇದೇ ವೇಳೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲೂ ಸ್ಯಾಕ್ ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಅಭಿಯಾನ ಆರಂಭವಾಗಿದೆ. ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಟ್ವೀಟಿಗರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://twitter.com/Dhruv1607/status/1027983938214658049?

    https://twitter.com/imkrishnendu92/status/1042791215945547776

  • ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಚಿಯಾಂಗ್ ರಾಯ್: 17 ದಿನಗಳ ನಿರಂತರ ಕಾರ್ಯಾಚರಣೆ ಮೂಲಕ ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗುಹೆಯಲ್ಲಿ ಒಟ್ಟು 19 ಮಂದಿ ಡೈವರ್ (ಮುಳುಗು ತಜ್ಞರು) ಹೋಗಿದ್ದು, ಹಂತ ಹಂತವಾಗಿ 12 ಜನ ಮಕ್ಕಳು ಹಾಗೂ ಒಬ್ಬ ಕೋಚ್ ಅನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಓದಿ: ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?

    ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡೈವರ್ ಸೇರಿದಂತೆ ಅನೇಕ ನುರಿತ ತಜ್ಞರ ತಂಡಕ್ಕೆ ವಿಶ್ವದ ನಾಯಕರಿಂದ ಪ್ರಶಂಸನೆ ಕೇಳಿ ಬರುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುವ ಮೂಲಕ ರಕ್ಷಣಾ ಕಾರ್ಯದಲ್ಲಿ ಭಾಗವಹಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 17 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

    ಪಾರಾದ ಎಲ್ಲ ಮಕ್ಕಳು ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಯ ಟಿಕೆಟ್ ಸಿಕ್ಕಿದೆ. ಜುಲೈ 15 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕು ಮುನ್ನ ಈ ಮಕ್ಕಳು ಗುಹೆಯಿಂದ ಪಾರಾದರೆ ಅವರಿಗೆ ಈ ಪಂದ್ಯದ ಟಿಕೆಟ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫಿಫಾ ಅಧ್ಯಕ್ಷರು ಈ ಹಿಂದೆ ಪ್ರಕಟಿಸಿದ್ದರು.

  • ಥಮ್ ಲುಮಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ 6 ಬಾಲಕರು ಬಚಾವ್

    ಥಮ್ ಲುಮಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ 6 ಬಾಲಕರು ಬಚಾವ್

    ಚಿಯಾಂಗ್ ರಾಯ್: ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ ಸದ್ಯ 6 ಬಾಲಕರನ್ನು ರಕ್ಷಣೆ ಮಾಡಲಾಗಿದೆ.

    ಜೂನ್ 26ರಂದು ಕೋಚ್ ಸೇರಿದಂತೆ ಫುಟ್‍ಬಾಲ್ ಜೂನಿಯರ್ ತಂಡ 12 ಬಾಲಕರು ಗುಹೆ ಸೇರಿದ್ದರು. ಕಳೆದ 14 ದಿನಗಳಿಂದ ಕೋಚ್ ಹಾಗೂ ಬಾಲಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಸದ್ಯ 6 ಬಾಲಕರು ಜೀವಂತವಾಗಿ ಸಿಕ್ಕಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಡೆದಿದ್ದು ಏನು?
    ಕೋಚ್ ಸಮೇತ ತಂಡದ ಎಲ್ಲಾ ಆಟಗಾರರು ಕಾಡಿನಲ್ಲಿ ಸುತ್ತಾಡಲು ಹೋದಾಗ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಪ್ರವಾಸದ ವೇಳೆ ಬೃಹತ್ ಗುಹೆಯೊಳಗೆ ಪ್ರವೇಶ ಪಡೆದಿದ್ದ ಆಟಗಾರರು ಬಳಿಕ ಉಂಟಾದ ಪ್ರವಾಹದಿಂದ ಕೊಚ್ಚಿ ಹೋಗಿದ್ದರು. ಘಟನೆ ಬೆಳಕಿಗೆ ಬಂದ ನಂತರ ಅಲ್ಲಿನ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಸತತ 9 ದಿನಗಳ ಕಠಿಣ ಕಾರ್ಯಾಚರಣೆಯ ಬಳಿಕ ಎಲ್ಲರನ್ನು ಒಟ್ಟಾಗಿ ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಗೆ ಬ್ರಿಟಿಷ್ ಗುಹಾ ಮುಳುಗು ತಜ್ಞರನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

    ಕಾಣೆಯಾದ ಆಟಗಾರರು 9 ದಿನಗಳ ಆಹಾರವಿಲ್ಲದೇ ಪರದಾಟ ನಡೆಸಿದ್ದು, ಆದರೆ ಎಲ್ಲರೂ ಒಟ್ಟಿಗೆ ಪ್ರಯಾಣ ನಡೆಸಿದ್ದರು. ಆಟಗಾರರು ಪ್ರವಾಸ ತೆರಳಿದ ಬಳಿಕ ಪ್ರವಾಹವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮೊದಲು ಗುಹೆಯಲ್ಲಿ ಕಾರ್ಯಾಚರಣೆ ನಡೆಸಲು ಅಡ್ಡಿಯಾಗಿದ್ದ ನೀರನ್ನು ಹೊರಹಾಕಿದ ರಕ್ಷಣಾ ಸಿಬ್ಬಂದಿ ಬಳಿಕ ಗುಹೆಯೊಳಗೆ ಪ್ರವೇಶಿಸಿದ್ದರು.

    ಸದ್ಯ ಈ ಕುರಿತು ವಿಡಿಯೋವನ್ನು ಸಲ್ಲಿನ ಸರ್ಕಾರ ಬಿಡುಗಡೆ ಮಾಡಿದ್ದು ರಕ್ಷಣೆ ಮಾಡಿರುವ ಎಲ್ಲಾ ಆಟಗಾರಿಗೆ ಆಹಾರ ಹಾಗೂ ಆಮ್ಲಜನಕ ಪೂರೈಸಿ ಬಳಿಕ ಹೊರ ತಂದಿದೆ.

    ಆರಂಭದಲ್ಲಿ ಈ ಕಾರ್ಯಾಚರಣೆ ವಿಫಲವಾಗುತ್ತದೆ ಎಂದೇ ಹಲವರು ವಿಶ್ಲೇಷಿಸಿದ್ದರು. ಆಟಗಾರರು ನಾಪತ್ತೆಯಾದ ಬಳಿಕ ಆ ಪ್ರದೇಶದಲ್ಲಿ ಪ್ರತಿದಿನವೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು. ಸದ್ಯ ಆಟಗಾರರ ರಕ್ಷಣೆಯಿಂದ ಪೋಷಕರು ಆತಂಕದಿಂದ ದೂರವಾಗಿದ್ದು, ಸಂತಸ ವ್ಯಕ್ತಪಡಿಸಿದ್ದರು.

  • ಸೋಮವಾರ ಒಂದೇ ದಿನ ಮೆಟ್ರೋಗೆ ದಾಖಲೆಯ 1.30 ರೂ. ಕೋಟಿ ಕಲೆಕ್ಷನ್

    ಸೋಮವಾರ ಒಂದೇ ದಿನ ಮೆಟ್ರೋಗೆ ದಾಖಲೆಯ 1.30 ರೂ. ಕೋಟಿ ಕಲೆಕ್ಷನ್

    ಬೆಂಗಳೂರು: ನಮ್ಮ ಮೆಟ್ರೋಗೆ ಸೋಮವಾರ ಅದೃಷ್ಟ ತಂದಿದ್ದು, ಒಂದೇ ದಿನದಲ್ಲಿ ದಾಖಲೆಯ ಮಟ್ಟದಲ್ಲಿ ಆದಾಯ ಸಂಗ್ರಹವಾಗಿದೆ.

    ಮೆಟ್ರೋ ಒಂದೇ ದಿನದಲ್ಲಿ 1.30 ಕೋಟಿ ರೂ. ದಷ್ಟು ಆದಾಯಗಳಿಸಿದೆ. ಸಾಮಾನ್ಯವಾಗಿ 20 ಲಕ್ಷದಷ್ಟು ಹಣ ನಿತ್ಯ ಸಂಗ್ರಹವಾಗುತ್ತಿತ್ತು. ಆದರೆ ಆರು ಹೆಚ್ಚುವರಿ ಕೋಚ್‍ಗಳಿಂದ ಬಿಎಂಆರ್ ಸಿಎಸ್ ಭರ್ಜರಿ ಆದಾಯಗಳಿಸಿದೆ.

    ಆದರೆ ಈಗ ಸಿಕ್ಸ್ ಕೋಚ್ ನಿಂದ ಮೆಟ್ರೋಗೆ ಕೋಟಿ ಕೋಟಿ ಲಾಭವಾಗುತ್ತಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯ ಜನ ಮೆಟ್ರೋಗೆ ಫಿದಾ ಆಗಿದ್ದಾರೆ.

    ಆರು ಬೋಗಿಗಳ ಮೆಟ್ರೋ ರೈಲು ಸಂಚಾರಕ್ಕೆ ಜೂನ್ 23 ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಡಗೂಡಿ ಆರು ಬೋಗಿಗಳ ನಮ್ಮ ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ವಿಧಾನಸೌಧದಿಂದ ಮೆಟ್ರೋದಲ್ಲಿಯೇ ಸಂಚರಿಸಿ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿಗಳು ಅಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು ವಿಶೇಷವಾಗಿತ್ತು. ಆರು ಬೋಗಿಯ ರೈಲು ಪ್ರತಿ ದಿನ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಸೇವೆ ನೀಡುತ್ತಿದೆ.

  • ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ನನ್ನ ಸಮಯ ಮೀಸಲು ಎಂದಿದ್ದ ದ್ರಾವಿಡ್

    ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ನನ್ನ ಸಮಯ ಮೀಸಲು ಎಂದಿದ್ದ ದ್ರಾವಿಡ್

    ಮುಂಬೈ: ಐಪಿಎಲ್ ಹಾಗೂ ಅಂಡರ್ 19 ತಂಡ ಎರಡು ಆಯ್ಕೆಗಳನ್ನು ರಾಹುಲ್ ದ್ರಾವಿಡ್ ಅವರ ಮುಂದಿಟ್ಟಾಗ ಅವರು ಟೀಂ ಇಂಡಿಯಾವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಬಿಸಿಸಿಐ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

    ಖಾಸಗಿ ವಾಹಿನಿಯ ಸಂರ್ದನದ ವೇಳೆ ಈ ಕುರಿತು ಮಾತನಾಡಿರುವ ಅವರು, ಕಳೆದ ವರ್ಷದ ಐಪಿಎಲ್ ವೇಳೆ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ಮಾಜಿ ಆಡಳಿತ ಮಂಡಳಿ (ಸಿಒಎ) ಸದಸ್ಯ ರಾಮಚಂದ್ರ ಗುಹಾ ಅವರು ಐಪಿಎಲ್, ಟೀಂ ಇಂಡಿಯಾ `ಎ’ ಹಾಗೂ ಇದೇ ವೇಳೆ ಅಂಡರ್ 19 ತಂಡದ ಆಯ್ಕೆಗಳನ್ನು ಮುಂದಿಟ್ಟಿದ್ದರು. ಈ ವೇಳೆ ರಾಹುಲ್ ದ್ರಾವಿಡ್ ತಮ್ಮ ಸಮಯವನ್ನು ಟೀಂ ಇಂಡಿಯಾಗೆ ನೀಡುವುದಾಗಿ ಹೇಳಿ ಒಂದು ವರ್ಷದ ಒಪ್ಪಂದಕ್ಕೆ ಸಹಿ ಮಾಡಿದ್ದಾಗಿ ತಿಳಿಸಿದ್ದಾರೆ.

    2016 ಮತ್ತು 2017 ರ ಐಪಿಎಲ್‍ನಲ್ಲಿ ರಾಹುಲ್ ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2018 ರ ಆವೃತ್ತಿಗೆ ಆಸೀಸ್ ಮಾಜಿ ಆಟಗಾರ ರಿಕ್ಕಿ ಪಾಟಿಂಗ್ ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಕೇವಲ ರಾಹುಲ್ ದ್ರಾವಿಡ್ ಮಾತ್ರವಲ್ಲದೇ ಇತರೇ ಕೋಚ್‍ಗಳಿಗೂ ಇದೇ ಆಯ್ಕೆಗಳನ್ನು ನೀಡಲಾಗಿತ್ತು. ಉದಾಹರಣೆಗೆ ಭರತ ಅರುಣ್, ಶಂಕರ್ ಬಸು, ಪ್ಯಾಟ್ರಿಕ್ ಫಾರ್ಹಟ್ ಸೇರಿದಂತೆ ಹಲವರು ಬಿಸಿಸಿಐ ಕೋಚ್ ಆಗಿ ಮುಂದುವರಿಯಲು ಐಪಿಎಲ್ ನಲ್ಲಿ ಸ್ಥಾನ ತೊರೆದಿದ್ದರು.

    ಪ್ರಮುಖವಾಗಿ ಬಿಸಿಸಿಐ ಜೂನಿಯರ್ ತಂಡದ ಆಯ್ಕೆ ಸಮಿತಿ ಸದಸ್ಯರಾಗಿದ್ದ ವೆಂಕಟೇಶ್ ಪ್ರಸಾದ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಲು ತಮ್ಮ ಸ್ಥಾನ ತೊರೆದಿದ್ದರು. ಅಲ್ಲದೇ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಸಹ ಐಪಿಎಲ್ ತೊರೆದು ಬಿಸಿಸಿಐ ನಿಯಮಗಳನ್ನು ಪಾಲನೆ ಮಾಡಿದ್ದರು.

    ನಿಯಮ ಏನು ಹೇಳುತ್ತೆ: ಬಿಸಿಸಿಐ ಸಂಸ್ಥೆಯಲ್ಲಿ ಲೋಧಾ ಸಮಿತಿ ನೀಡಿದ್ದ ಸಲಹೆಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಆಡಳಿತ ಮಂಡಳಿಯನ್ನು ನೇಮಕ ಮಾಡಿತ್ತು. ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ ಬಿಸಿಸಿಐ ನಲ್ಲಿ ಕಾರ್ಯನಿರ್ವಹಿಸುವವರು ಏಕಕಾಲದಲ್ಲಿ ಎರಡು ಹುದ್ದೆ ನಿರ್ವಹಿಸುವಂತಿಲ್ಲ. ಇದರಂತೆ ಅಂದು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದ ದ್ರಾವಿಡ್ ಐಪಿಎಲ್ ಮೆಂಟರ್ ಹುದ್ದೆಗಳನ್ನು ತೊರೆದಿದ್ದರು.

  • ಚೊಚ್ಚಲ ಏಷ್ಯಾ ಕಪ್ ಗೆದ್ದ ಬಾಂಗ್ಲಾ ಗೆಲುವಿನ ಹಿಂದಿದ್ದಾರೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ!

    ಚೊಚ್ಚಲ ಏಷ್ಯಾ ಕಪ್ ಗೆದ್ದ ಬಾಂಗ್ಲಾ ಗೆಲುವಿನ ಹಿಂದಿದ್ದಾರೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ!

    ನವದೆಹಲಿ: ಚೊಚ್ಚಲ ಏಷ್ಯಾ ಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿರುವ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ಹಿಂದೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ ಹಾಗೂ ಬಾಂಗ್ಲಾ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಜು ಜೈನ್ ಪಾತ್ರ ಮಹತ್ವದಾಗಿದೆ.

    ಆರು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಏಷ್ಯಾ ಕಪ್ ಟೂರ್ನಿಯಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಬಾಂಗ್ಲಾ ವಿರುದ್ಧ ಸೋಲುಂಡಿತ್ತು. ಬಾಂಗ್ಲಾ ಮಹಿಳಾ ತಂಡದ ಈ ಸಾಧನೆಯ ಹಿಂದೆ ಕೋಚ್ ಅಂಜು ಜೈನ್ ರ ಶ್ರಮ ಕಾಣಸಿಗುತ್ತದೆ.

    ಅಂದಹಾಗೇ ಅಂಜು ಜೈನ್ ಟೀಂ ಇಂಡಿಯಾದ ಮಾಜಿ ಆಟಗಾರ್ತಿಯಾಗಿದ್ದು, 8 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 2012 ರ ಟಿ20 ವಿಶ್ವಕಪ್ ಹಾಗೂ 2013 ರ ವಿಶ್ವಕಪ್ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಏಕದಿನದಲ್ಲಿ 1,729 ರನ್ ಹಾಗೂ ಟೆಸ್ಟ್ ನಲ್ಲಿ 441 ರನ್ ಗಳಿಸಿದ್ದಾರೆ. ಬಾಂಗ್ಲಾ ಮಹಿಳಾ ತಂಡದ ಕೋಚ್ ಆಗಿದ್ದ ಇಂಗ್ಲೆಂಡ್ ಆಲೌಂಡರ್ ಡೇವಿಡ್ ಕ್ಯಾಪೆಲ್ ರ ಸ್ಥಾನಕ್ಕೆ ಮೇ 21 ರಂದು ಅಂಜು ಜೈನ್ ಆಯ್ಕೆ ಆಗಿದ್ದರು.

    ಈ ಕುರಿತು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಂಜು ಜೈನ್, ತಾವು ಕೋಚ್ ಆಗಿ ಆಯ್ಕೆ ಆದ ಸಂದರ್ಭದಲ್ಲಿ ತಂಡದಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಆಟಗಾರರಲ್ಲಿ ಮೊದಲು ನೈತಿಕ ಧೈರ್ಯ ತುಂಬುವುದೇ ನನ್ನ ಕಾರ್ಯವಾಗಿತ್ತು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 112 ರನ್ ಗಳಿಗೆ ಕಟ್ಟಿ ಹಾಕಿದ್ದು ಮಹತ್ವದ ಕ್ಷಣವಾಗಿತ್ತು ಎಂದು ಹೇಳಿದ್ದಾರೆ.

    ಏಷ್ಯಾ ಕಪ್ ಗೆದ್ದಿರುವುದು ತಂಡಕ್ಕೆ ಬಹು ದೊಡ್ಡ ಸಾಧನೆಯಾದರೆ, ತಮಗೆ ವೈಯಕ್ತಿಕವಾಗಿ ಸ್ಮರಣೀಯ ಘಟನೆ. ಇದಕ್ಕೂ ಮುನ್ನ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ವೇಳೆ ತಂಡದ ಕೆಲ ವೈಫಲ್ಯಗಳ ಕುರಿತು ಹೆಚ್ಚಿನ ಗಮನ ನೀಡುವುದು ಬೃಹತ್ ಸವಾಲಾಗಿತ್ತು. ಆದರೆ ಆಟಗಾರ್ತಿಯರು ತಮ್ಮ ಸಾಮಥ್ರ್ಯವನ್ನು ಗಣನೀವಾಗಿ ಉತ್ತಮ ಪಡಿಸಿಕೊಂಡಿದ್ದರು ಎಂದು ಹೇಳಿದರು.