Tag: CNR Rao

  • ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಪ್ರಗತಿ ಕಾಣಬೇಕು: ಸಿಎನ್‍ಆರ್ ರಾವ್

    ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಪ್ರಗತಿ ಕಾಣಬೇಕು: ಸಿಎನ್‍ಆರ್ ರಾವ್

    – ಚೀನಾ ವಿಜ್ಞಾನದಲ್ಲಿ ಮುಂದೆ ಬರುವುದನ್ನು ನೋಡಿದ್ರೆ ಭಯವಾಗುತ್ತೆ

    ಧಾರವಾಡ: ವಿಜ್ಞಾನದಲ್ಲಿ ಚೀನಾ ದೇಶ ಮುಂದೆ ಬಂದಿರುವುದನ್ನು ನೋಡಿದರೆ ತುಂಬಾ ಭಯ ಆಗುತ್ತದೆ. ಚೀನಾ ವಿಜ್ಞಾನದ ಮೂಲಕವೇ ಮುಂದೇ ಬರುತ್ತಿದೆ ಎಂದು ಹಿರಿಯ ವಿಜ್ಞಾನಿ ಭಾರತ ರತ್ನ ಡಾ. ಸಿಎನ್‍ಆರ್ ರಾವ್ ಹೇಳಿದ್ದಾರೆ.

    ಧಾರವಾಡದಲ್ಲಿ ನಡೆದ ಕರ್ನಾಟಕ ಪ್ರೌಢಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಥಶಾಸ್ತ್ರ, ಸೈನ್ಯ ಬೆಳೆಸುವುದಕ್ಕಿಂತ ವಿಜ್ಞಾನದಲ್ಲಿ ಮುಂದೆ ಬರಬೇಕು. ಚೀನಾಗೆ ವಿಜ್ಞಾನ ವಿಚಾರದಲ್ಲಿ ಹುಚ್ಚು ಬಂದು ಬಿಟ್ಟಿದೆ. ಎಲ್ಲಿ ಹೋದರೂ ಚೀನಾ ಇದೆ, ನಾನು ಜಗತ್ತಿನಲ್ಲಿ ಯಾವುದೇ ಕಾಲೇಜ್, ವಿಶ್ವವಿದ್ಯಾಲಯಕ್ಕೆ ಹೋದರೂ ಅಲ್ಲಿ ಚೀನಾ ಇದೆ ಎಂದು ಹೇಳಿದ ಅವರು, ಸಾವಿರಾರು ಜನ ವಿಜ್ಞಾನಿಗಳು ಅಲ್ಲಿಂದ ಬರುತ್ತಾರೆ ಎಂದರು.

    ಇದನ್ನು ನೋಡಿದಾಗ ಅಯ್ಯೋ ರಾಮ ಇವರು ಈ ತರಹ ಬೆಳೆಯುತ್ತಿದ್ದರೆ ನಮ್ಮ ದೇಶಕ್ಕೆ ಭವಿಷ್ಯ ಇದೆಯಾ ಅನಿಸುತ್ತೆ ಎಂದ ರಾವ್, ಅಮೇರಿಕಾ, ಜಪಾನ್, ಚೀನಾಗಳನ್ನು ಮೀರಿ ನಾವು ಇಂದು ಜಗತ್ತಿನಲ್ಲಿ ಒಳ್ಳೆ ವಿಜ್ಞಾನಿಯಾಗಬೇಕಿದೆ. ಇನ್ನು ಅವರನ್ನು ಮೀರಿಸಿ ಇಲ್ಲವೇ ಅವರಿಗೆ ಸಮಾನವಾಗಿ ಭಾರತದ ವಿಜ್ಞಾನಿ ಬೆಳೆಯಬೇಕಾದರೆ ಬಹಳ ಕಷ್ಟ ಇದೆ. ನಾವೆಲ್ಲ ರಾಜಕೀಯವಾಗಿ ಭಾಷಣ ಮಾಡಬಹುದು, ಆದರೆ ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಮುಂದೆ ಬರಬೇಕಿದೆ ಎಂದು ಹೇಳಿದರು.

  • ರ‍್ಯಾಂಕ್ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ: ಸಿಎನ್‍ಆರ್ ರಾವ್

    ರ‍್ಯಾಂಕ್ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ: ಸಿಎನ್‍ಆರ್ ರಾವ್

    ಧಾರವಾಡ: ರ‍್ಯಾಂಕಿಂಗ್‌ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ ಎಂದು ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅಭಿಪ್ರಾಯಪಟ್ಟಿದ್ದಾರೆ.

    ನಗರದಲ್ಲಿ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣ ಅಕಾಡೆಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಫಿನ್‍ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ. ಅಮೆರಿಕ ಕೂಡ 25ನೇ ಸ್ಥಾನದಲ್ಲಿದೆ. ಅಲ್ಲಿಯೂ ಕೂಡ ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಆದರೆ ನಮ್ಮ ದುರಾದೃಷ್ಟವೆಂದರೆ ಭಾರತ ಈ ವಿಚಾರದಲ್ಲಿ ನೂರನೇ ಸ್ಥಾನವನ್ನು ದಾಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇಂದಿನ ದಿನಗಳಲ್ಲಿ ಮಕ್ಕಳು ರ‍್ಯಾಂಕ್ ತರುವ ಸ್ಪರ್ಧೆಯಲ್ಲಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ನಾವು ಮೊದಲು ಬಿಎಸ್ಸಿ ಮಾಡಬೇಕು, ನಂತರ ಐಐಟಿ ಮಾಡಬೇಕು, ಇದರ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವ ಯತ್ನದಲ್ಲಿದ್ದಾರೆ. ಇದರಿಂದಾಗಿ ದೇಶದಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆಮ ಇನ್ನು ಕೆಲವರು ಹುಚ್ಚರಾಗುತ್ತಿದ್ದಾರೆ ಎಂದು ಬೇಸರಿಸಿದರು.

    ಎಲ್ಲರೂ ಗಮನದಲ್ಲಿಟ್ಟಿಕೊಳ್ಳಿ, ನಮಗೆ ರ‍್ಯಾಂಕ್ ಬದಲು ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ. ಈ ಬಗ್ಗೆ ಎಲ್ಲಾ ಕಡೆ ನಾನು ಹೇಳುತ್ತಲೇ ಇರುತ್ತೇನೆ. ನಮ್ಮ ದೇಶದಲ್ಲಿ 50 ಕೋಟಿ ಮಕ್ಕಳು ಗ್ರಾಮೀಣ ಭಾಗಗಳಲ್ಲಿ ಇದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಮಕ್ಕಳು ಬೇರೆ ಕಡೆ ಎಲ್ಲೂ ಇಲ್ಲ. ಅವರಿಗೆ ನಾವು ಸಹಾಯ ಮಾಡಬೇಕು. ಅವರಲ್ಲಿ ಪ್ಯಾರಡೆ, ನ್ಯೂಟನ್‍ರಂತಹ ವ್ಯಕ್ತಿಗಳು ಅಡಗಿದ್ದಾರೆ. ಅದನ್ನು ನಾವು ಹೊರಗೆ ತೆಗೆಯಬೇಕು. ಆಗ ಮಾತ್ರ ನಾವು ಒಳ್ಳೆಯ ಶಿಕ್ಷಕರಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

    ಬಡ ಕೂಲಿ ಮಾಡುವ ಮಕ್ಕಳನ್ನು, ನಾವು ಉನ್ನತ ಮಟ್ಟದ ಶಿಕ್ಷಣ ನೀಡಿ ಅವರನ್ನು ಉನ್ನತ ಮಟ್ಟಕ್ಕೆ ತರುವುದೇ ಗುರಿಯಾಗಿರಬೇಕು. ದೇಶದ ಪ್ರಧಾನಿ ಸೇರಿದಂತೆ ರಾಜಕೀಯ ಪ್ರತಿನಿಧಿಗಳು, ಯಾವೊಬ್ಬ ಅಧಿಕಾರಿಯೂ ಮಾಡದೇ ಇರುವಂತಹ ಕೆಲಸ ಶಿಕ್ಷಕರದ್ದು. ಅದನ್ನು ಎಲ್ಲರೂ ಸರಿಯಾಗಿ ನಿರ್ವಹಿಸಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews