Tag: CM ibrahim

  • ಸಿಎಂ ಇಬ್ರಾಹಿಂ ಐಎಸ್‍ಐ ಏಜೆಂಟ್ – ನಾನು ಹೀಗಂತ ಆರೋಪಿಸಿದ್ರೆ ಹೇಗಿರುತ್ತೆ : ಪ್ರಮೋದ್ ಮುತಾಲಿಕ್ ಟಾಂಗ್

    ಸಿಎಂ ಇಬ್ರಾಹಿಂ ಐಎಸ್‍ಐ ಏಜೆಂಟ್ – ನಾನು ಹೀಗಂತ ಆರೋಪಿಸಿದ್ರೆ ಹೇಗಿರುತ್ತೆ : ಪ್ರಮೋದ್ ಮುತಾಲಿಕ್ ಟಾಂಗ್

    ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಪಾತ್ರವಿದ್ದು, ಮೊದಲು ಅವರನ್ನು ತನಿಖೆಗೆ ಒಳಪಡಿಸಬೇಕು ಅಂತಾ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿರುವ ಮುತಾಲಿಕ್, ಸಿಎಂ ಇಬ್ರಾಹಿಂ ಐಎಸ್‍ಐ ಏಜೆಂಟ್ ಎಂದು ಆರೋಪಿಸಿದರೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮುತಾಲಿಕ್, ಒಬ್ಬ ಜವಾಬ್ದಾರಿ ಇರುವ ವ್ಯಕ್ತಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಸಿಎಂ ಇಬ್ರಾಹಿಂ ನೀವು ಕೂಡ ಐಎಸ್‍ಐ ಏಜೆಂಟ್, ಪಾಕಿಸ್ತಾನದ ಸಂಪರ್ಕ ಹೊಂದಿರುವ ವ್ಯಕ್ತಿ ಎಂದು ನಾನು ಹೇಳಿದ್ರೆ ಹೇಗಿರುತ್ತೆ? ನಮ್ಮ ವಿರುದ್ಧ ಸಾಕ್ಷಿ ಇದ್ದರೆ ಎಸ್‍ಐಟಿಗೆ ಕೊಡಿ. ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಿ. ನಮ್ಮ ಸಂಘಟನೆ ಶ್ರೀ ರಾಮಸೇನೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಕೊಲೆ, ಸುಲಿಗೆ ಮಾಡುವ ಸೈನ್ಯ ಅಲ್ಲ. ರಾಜಕೀಯದವರ ತರ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಗೌರಿ ಪ್ರಕರಣದಲ್ಲಿ ಬಂಧಿತವಾಗಿರುವ ಪರಶುರಾಮ ವಾಗ್ಮೋರೆ ನಮ್ಮ ಸಂಘಟನೆಯ ವ್ಯಕ್ತಿ ಅಲ್ಲ. ಆತ ಯಾರೂ ಎಂದು ನನಗೆ ಗೊತ್ತಿಲ್ಲ. ಅದರ ವಿಷಯದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಪರಶುರಾಮ ತಪ್ಪು ಮಾಡಿದರೆ ಶಿಕ್ಷೆ ಆಗಲಿ. ಗೌರಿ ಲಂಕೇಶ್ ಗೆ ನಿರಂತರ ನಕ್ಸಲ್ ಜೊತೆ ಸಂಪರ್ಕ ಹೊಂದಿದ್ದರು. ಗೌರಿ ಲಂಕೇಶ್ ಪತ್ರಿಕೆಯಲ್ಲಿಯೂ ನಕ್ಸಲ್ ಬಗ್ಗೆ ಬರೆದಿದ್ದರೂ. ಅ ಗುಂಪಿನವರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಮೋದಿ ಚೈನಾ ವಸ್ತುವಿದ್ದಂತೆ, ಗ್ಯಾರಂಟಿ, ವಾರಂಟಿ ಇಲ್ಲ: ಇಬ್ರಾಹಿಂ ಲೇವಡಿ

    ಮೋದಿ ಚೈನಾ ವಸ್ತುವಿದ್ದಂತೆ, ಗ್ಯಾರಂಟಿ, ವಾರಂಟಿ ಇಲ್ಲ: ಇಬ್ರಾಹಿಂ ಲೇವಡಿ

    ಗದಗ: ಪ್ರಧಾನಿ ಮೋದಿಯನ್ನು ಚೀನಾದ ವಸ್ತುಗಳಿಗೆ ಹೋಲಿಕೆ ಮಾಡಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ  ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ನರಗುಂದದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ ಚೀನಾ ವಸ್ತುವಿದ್ದಂತೆ. ಅದಕ್ಕೆ ವಾರಂಟಿ, ಗ್ಯಾರಂಟಿ ಇಲ್ಲ ಹೇಳಿ ಲೇವಡಿ ಮಾಡಿದರು.

    ಆಜ್ ಬಿಜೆಪಿಕೋ ಕಥಮ್ ಕರನಾ ಹೈ. ಹಿಂದೂ ಮುಸಲ್ಮಾನ್ ಏಕ್ ಮಾಕೇ ಬಚ್ಚೆ ಜೈಸೇ ರಹೆಂಗೆ. ಮೋದಿಕೋ ಹಮ್ ಕಬಿಬೀ ಡರೆಂಗೆ ನಹಿ (ಬಿಜೆಪಿಯನ್ನು ಈಗ ಇಲ್ಲವಾಗಿಸಬೇಕು. ಹಿಂದೂ ಮತ್ತು ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಇರಬೇಕು. ಮೋದಿಗೆ ಯಾರು ಹೆದರುವ ಅವಶ್ಯಕತೆ ಇಲ್ಲ) ಎಂದರು.

    ಕಮಲಕ್ಕೆ ಸೂರ್ಯೋದಯದ ಚಿಂತೆ, ಸಿದ್ದರಾಮಯ್ಯಗೆ ಜನ್ರ ಚಿಂತೆಯಾದರೆ ಯಡಿಯೂರಪ್ಪಗೆ ಶೋಭಕ್ಕನ ಚಿಂತೆ. ಶೋಭಾ ಕರಂದ್ಲಾಜೆಗೆ ಟಿಕೇಟ್ ಸಿಗದಿರುವುದಕ್ಕೆ ಯಡಿಯೂರಪ್ಪನಿಗೆ ಶಾಕ್ ಆಗಿದೆ ಎಂದು ಹೇಳಿದರು.

    ನಿಮ್ಮೆದುರಿಗೆ ನಾವು ಕಂತಿ ಭಿಕ್ಷೆಗೆ ಬಂದಿದ್ದೇವೆ. ಐದು ವರ್ಷ ನುಡಿದಂತೆ ನಡೆದಿದ್ದೇವೆ. ಸಾವಿರಾರು ಮಂದಿಗೆ ದಾಸೋಹ ಕೊಟ್ರೆ ಅದು ದೊಡ್ಡ ಮಠವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವ್ರ ಮಠದಾಗ ಕೋಟ್ಯಾಂತರ ಜನರಿಗೆ ದಾಸೋಹ ನೀಡಲಾಗಿದೆ ಎಂದು ಹೊಗಳಿದರು.

    ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ ಭಾಷಣಕ್ಕಷ್ಟೆ ಸೀಮಿತವಾಗಿದೆ. ಜೈಲು, ಬೇಲಿನ ಜನರನ್ನು ಕಟ್ಟಿಕೊಂಡು ಚುನಾವಣೆಗೆ ಸಜ್ಜಾಗಿದ್ದಾರೆ. ಅವರ ಆಟ ಕರ್ನಾಟಕದ ಟಗರಿನ ಮುಂದೇ ನಡೆಯುವುದಿಲ್ಲ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರೇ ನಿಮಗೆ ಈ ಟಗರಿನ ಸಾಮರ್ಥ್ಯ ಗೊತ್ತಿಲ್ಲ. ಕಳಂಕ ರಹಿತ ಆಡಳಿತವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಜಾತಿಯನ್ನು ಒಡೆದವರು ಬಿಜೆಪಿಗರು. ಸಂವಿಧಾನದಿಂದಲೇ ನಮಗೆ ವೋಟು ಹಾಗೂ ಸಮಾನತೆಯ ಹಕ್ಕು ದೊರೆತಿದೆ. 11 ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದನ್ನೇ 2013 ರಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ನೀವು ಅಸೆಂಬ್ಲಿಯಲ್ಲಿ ಏನು ಮಾಡಿದ್ದಿರಿ ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಸಿ.ಸಿ. ಪಾಟೀಲ್ ಅವರನ್ನು ಇಬ್ರಾಹಿಂ ಕುಟುಕಿದರು.

    ಸಿಎಂ ಸಿದ್ದರಾಮಯ್ಯ ಮತ್ತೆ ಪ್ರಮಾಣ ವಚನ ಸ್ವೀಕರಿಸುವುದು ಶತಸಿದ್ಧ ಎಂದು ಹೇಳಿ ಬಿಎಸ್‍ವೈ ಅವರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.  ಇದನ್ನೂ ಓದಿ: ಮೋದಿಯವರೇ ಗಂಡಸ್ತನ ಇದ್ದರೆ ಸಿದ್ದರಾಮಯ್ಯರ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ಸಿ.ಎಂ.ಇಬ್ರಾಹಿಂ

  • ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ನಾಲಗೆ ಹರಿಬಿಟ್ಟ ಸಿಎಂ ಇಬ್ರಾಹಿಂ- ವಿಡಿಯೋ ನೋಡಿ

    ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ನಾಲಗೆ ಹರಿಬಿಟ್ಟ ಸಿಎಂ ಇಬ್ರಾಹಿಂ- ವಿಡಿಯೋ ನೋಡಿ

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂ.. ಎಂದು ಕರೆಯುವ ಮೂಲಕ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ತಮ್ಮ ನಾಲಗೆಯನ್ನು ಮತ್ತೊಮ್ಮೆ ಹರಿಬಿಟ್ಟಿದ್ದಾರೆ.

    ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಕಾರ್ಯಕ್ರಮದ ವೇಳೆ ಮಾತನಾಡಿದ ಸಿಎಂ ಇಬ್ರಾಹಿಂ, ಪ್ರಧಾನಿ ಮೋದಿ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ, ಕೆಲಸ ಮಾಡುತ್ತಿದ್ದರು. ಆದರೆ ಪ್ರಧಾನಿ ಮೋದಿ ಅವರ ಆಡಳಿತವನ್ನು ಟೀಕಿಸಿ, ಈ ಮುಂ.. ಬರೀ ಮಾತನಾಡುತ್ತೆ ಹೊರತು ಕೆಲಸ ಮಾಡಲ್ಲ. `ಅಚ್ಚೇ ದಿನ್’ ಬರುತ್ತದೆ ಎಂದು ಜನರನ್ನು ನಂಬಿಸಿ ಆಡಳಿತ ಪಡೆದರು. ಆದರೆ ಇವರು ಅಧಿಕಾರವಹಿಸಿದ ಬಳಿಕ ಅಚ್ಚೇ ದಿನ್ ಪದದ ಅರ್ಥವೇ ಬದಲಾಗಿದೆ. ನಮಗೆ ಅಚ್ಚೇ ದಿನ್ ಬೇಡ ಎಂದರು.

    ಯಾವುದೇ ಬ್ಯಾಂಕ್ ಗೆ ಭೇಟಿ ನೀಡಿದ್ರೂ ಹಣ ಸಿಗುತ್ತಿಲ್ಲ. ಎಲ್ಲರಿಗೂ ಕೇವಲ ಡೆಬಿಟ್ ಕಾರ್ಡ್ ನೀಡುತ್ತಿದ್ದಾರೆ. ಆದರೆ 500 ರೂ. ಬಂಡವಾಳ ಹೂಡಿ ತರಕಾರಿ ವ್ಯಾಪಾರ ನಡೆಸುವ ಅನಕ್ಷರಸ್ಥ ಮಹಿಳೆಯರು ಹೇಗೆ ತಮ್ಮ ಜೀವನ ನಡೆಸುತ್ತಾರೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ಹಲವು ಉದ್ಯಮಿಗಳು ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶ ಬಿಟ್ಟಿದ್ದಾರೆ. ನೀರವ್ ಮೋದಿ, ವಿಜಯ್ ಮಲ್ಯರಂತಹ ಉದ್ಯಮಿಗಳು ದೇಶ ಬಿಟ್ಟಿದ್ದಾರೆ. ಬ್ಯಾಂಕ್ ಗಳನ್ನು ದಿವಾಳಿ ಮಾಡಿದ್ದಾರೆ. ದೈನಂದಿನ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗಿದೆ ಎಂದು ಆರೋಪಿಸಿದರು.  ಇದನ್ನೂ ಓದಿ: ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

  • ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ಸಿಎಂ ಇಬ್ರಾಹಿಂ

    ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ಸಿಎಂ ಇಬ್ರಾಹಿಂ

    ಬೆಂಗಳೂರು: ಪ್ರಮುಖ ಬೆಳೆವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಇಂದು ದಿಢೀರ್ ಭೇಟಿ ಮಾಡಿದ್ದಾರೆ.

    ಇಂದು ಸಿಎಂ ಅವರ ಕಾವೇರಿ ನಿವಾಸಕ್ಕೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷ ಬಿಡೊಲ್ಲ. ಸಿದ್ದರಾಮಯ್ಯ ನಾನು ಅಣ್ಣ ತಮ್ಮ ಇದ್ದಂತೆ ಅಂತ ಹೇಳಿದ್ದಾರೆ.

    ದೇವೇಗೌಡರನ್ನು ಭೇಟಿ ಆದ ತಕ್ಷಣ ಪಕ್ಷ ಬಿಡ್ತೇನೆ ಅನ್ನೋದು ತಪ್ಪು. ಪಕ್ಷ ಬಿಡೋದು ಕೇವಲ ಮಾಧ್ಯಮದ ಪ್ರೀತಿ ಅಷ್ಟೆ. ನನ್ನ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ದೇವೇಗೌಡರ ನನ್ನ ಸಂಬಂಧ ತುಂಬ ಚೆನ್ನಾಗಿದೆ. ಹೀಗಾಗಿ ಭೇಟಿಯಾಗಿದ್ದೆ ಅಷ್ಟೆ. ರಾಹುಲ್ ಗಾಂಧಿ ಸಮಾವೇಶಕ್ಕೂ ನಾನು ಹೋಗ್ತಿನಿ. ನಾನು ಕಾಂಗ್ರೆಸ್ ಪಕ್ಷ ಬಿಡೋದಿಲ್ಲ. ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತ ಅವರು ತಿಳಿಸಿದ್ದಾರೆ.

    ಸಿದ್ದರಾಮಯ್ಯ ಮೇಲೆ ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಿಎಂ ಮೇಲೆ ಮುನಿಸಿನಿಂದ ಇಬ್ರಾಹಿಂ ಅವರು ಪಕ್ಷ ತ್ಯಜಿಸುವ ಸುಳಿವು ನೀಡಿದ್ದರು. ಅಲ್ಲದೇ ಜೆಡಿಎಸ್ ಪಕ್ಷ ಸೇರ್ಪಡೆಗೆ ಚಿಂತಿಸಿದ್ದರು.

    ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪ್ರಧಾನಿಯನ್ನು ಇಬ್ರಾಹಿಂ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇಂದು ಸಂಕ್ರಾಂತಿ ಹಬ್ಬ. ರಾಷ್ಟ್ರದ ಹಿರಿಯ ಮುತ್ಸದ್ಧಿ ರಾಜಕಾರಣಿ ದೇವೇಗೌಡರಿಗೆ ಸಂಕ್ರಾಂತಿ ಶುಭ ಕೋರಲು ಬಂದಿದ್ದೆ. ಜೆಡಿಎಸ್ ಸೇರ್ಪಡೆ ಕುರಿತು ಯಾವುದೇ ಮಾತುಕತೆಯಾಗಿಲ್ಲ. ಸಂಕ್ರಾಂತಿ ಹಬ್ಬದಂದು ಶುಭ ಕೋರಿದ್ದೀನಿ ಅಷ್ಟೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ದೇವೇಗೌಡರ ಅಭಿಪ್ರಾಯವೂ ಇದೇ ಇದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿಚಾರ ಕಾಂಗ್ರೆಸ್ ಹೈ ಕಮಾಂಡ್ ಗೆ ಬಿಟ್ಟ ವಿಷಯ. ಅದರ ಬಗ್ಗೆ ಮಾತಾಡುವಷ್ಟು ದೊಡ್ಡವರಲ್ಲ. ನಾವು ಕೇವಲ ಸಲಹೆ ಕೊಡುವವರು ಅಂತ ಹೇಳಿದ್ದರು.

  • ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸಿಎಂ ಇಬ್ರಾಹಿಂ ಹೀಗಂದ್ರು!

    ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸಿಎಂ ಇಬ್ರಾಹಿಂ ಹೀಗಂದ್ರು!

    ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವ್ರನ್ನ ಭೇಟಿಯಾದ್ರು.

    ಇಂದು ಪದ್ಮನಾಭನಗರ ನಗರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ ಇಬ್ರಾಹಿಂ, ಸುಮಾರು 45 ನಿಮಿಷಗಳ ಕಾಲ ಇಬ್ಬರು ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಸಿಎಂ ಇಬ್ರಾಹಿಂ ಅವರನ್ನು ಸ್ವತಃ ಎಚ್ ಡಿ ಕುಮಾರಸ್ವಾಮಿ ಮನೆ ಬಾಗಿಲವರೆಗೂ ಬಂದು ಬೀಳ್ಕೊಟ್ಟಿದ್ದಾರೆ.

    ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇಂದು ಸಂಕ್ರಾಂತಿ ಹಬ್ಬ. ರಾಷ್ಟ್ರದ ಹಿರಿಯ ಮುತ್ಸದ್ಧಿ ರಾಜಕಾರಣಿ ದೇವೇಗೌಡರಿಗೆ ಸಂಕ್ರಾಂತಿ ಶುಭ ಕೋರಲು ಬಂದಿದ್ದೆ. ಜೆಡಿಎಸ್ ಸೇರ್ಪಡೆ ಕುರಿತು ಯಾವುದೇ ಮಾತುಕತೆಯಾಗಿಲ್ಲ ಅಂತ ಸ್ಪಷ್ಟಪಡಿಸಿದ್ರು.

    ಸಂಕ್ರಾಂತಿ ಹಬ್ಬದಂದು ಶುಭ ಕೋರಿದ್ದೀನಿ ಅಷ್ಟೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ದೇವೇಗೌಡರ ಅಭಿಪ್ರಾಯವೂ ಇದೇ ಇದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿಚಾರ ಕಾಂಗ್ರೆಸ್ ಹೈ ಕಮಾಂಡ್ ಗೆ ಬಿಟ್ಟ ವಿಷಯ. ಅದರ ಬಗ್ಗೆ ಮಾತಾಡುವಷ್ಟು ದೊಡ್ಡವರಲ್ಲ. ನಾವು ಕೇವಲ ಸಲಹೆ ಕೊಡುವವರು ಅಂದ್ರು.

    ಕರ್ನಾಟಕದಲ್ಲಿ ಕೆಲವರು ಕೆಟ್ಟ ವಾತಾವರಣ ತರಲು ಪ್ರಯತ್ನಿಸುತ್ತಾರೆ. ಇಂದು ಸಂಕ್ರಾಂತಿ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಅಂತ ಹೇಳೋ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ರು.

  • ಗಂಡು ಮಾಡಿ ತಂದ ಬಳಿಕ ಉಳಿದ ಕೆಲಸ ನಮ್ಮದು- ಸಿಎಂ ಹೇಳಿಕೆಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

    ಗಂಡು ಮಾಡಿ ತಂದ ಬಳಿಕ ಉಳಿದ ಕೆಲಸ ನಮ್ಮದು- ಸಿಎಂ ಹೇಳಿಕೆಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

    ಬೆಂಗಳೂರು: ಮದುವೆ ಮಾಡುವುದು ದೊಡ್ಡ ವಿಷಯವಲ್ಲ. ಗಂಡು ಮಾಡಿ ತಂದ ಬಳಿಕ ಉಳಿದ ಕೆಲಸ ನಾವು ಮಾಡುತ್ತೇವೆ ಅಂತ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಇಂದು ಪ್ರತಿಕ್ರಿಯಿಸಿದ್ದಾರೆ.

    ಅವರು ಇಂದು ನಗರದಲ್ಲಿ ಸಿಎಂ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಮದುವೆ ಮಾಡುವುದು ಬಾರಿ ದೊಡ್ಡ ಮಾತು. ಒಂದು ಸಲ ಗಂಡು ಕೂರಿಸಿದ ಮೇಲೆ ಮುಂದಿನ ಕೆಲಸ ನಮ್ಮದು ಅಂತ ನಕ್ಕಿದ್ದಾರೆ.

    ಆದ್ರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದಾಗ, ರೀ ಅದೆಲ್ಲಾ ಫೇಕ್ ನ್ಯೂಸ್. ಅವೆಲ್ಲಾ ನ್ಯೂಸ್ ಗಳಿಗೆ ಉತ್ತರ ಕೊಡಕ್ಕಾಗಲ್ಲ ಅಂತ ಹೇಳಿ ಸಿಎಂ ಜಾರಿಕೊಂಡಿದ್ದಾರೆ.

    ಇದನ್ನೂ ಓದಿ: ಮದುಮಗಳು ಚೆನ್ನಾಗಿ ಇದ್ರೆ ಗಂಡುಗಳು ಜಾಸ್ತಿ ಬರ್ತಾವೆ: ಸಿಎಂ ಇಬ್ರಾಹಿಂ ಈ ಮಾತು ಹೇಳಿದ್ಯಾಕೆ?

    ಇಬ್ರಾಹಿಂನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದೇ ಹೆಚ್ಚು. ಇನ್ನೂ ಮಂತ್ರಿ ಸ್ಥಾನ ಕೊಡ್ತೀನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡಿದ್ದಾರೆ. ಅವರು ತುಮಕೂರಿನಲ್ಲಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಇಬ್ರಾಹಿಂಗೆ ಮಂತ್ರಿಸ್ಥಾನ ಸಾಧ್ಯತೆ ಎಂದು ವರದಿ ಮಾಡಲಾಗಿತ್ತು. ಈ ವರದಿ ಓದಿದ ಸಿಎಂ, ಯಾವುದೇ ಕಾರಣಕ್ಕೆ ಇಬ್ರಾಹಿಂನನ್ನು ಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಏಕವಚನದಲ್ಲೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ಈ ಮಾತಿಗೆ ಎದುರಿಗೆ ಕುಳಿತಿದ್ದ ಸಚಿವ ಜಯಚಂದ್ರ, ಶಾಸಕ ರಫಿಕ್ ಅಹಮದ್ ಸೇರಿದಂತೆ ಇತರೇ ಕಾಂಗ್ರೆಸ್ ಮುಖಂಡರು ಗೊಳ್ ಎಂದು ನಕ್ಕಿದ್ದರು.

  • ಸಿಎಂ ಇಬ್ರಾಹಿಂನನ್ನು ಎಂಎಲ್‍ಸಿ ಮಾಡಿದ್ದೇ ಹೆಚ್ಚು, ಇನ್ನು ಮಂತ್ರಿ ಬೇರೆ ಮಾಡ್ತಾರ?: ಸಿದ್ದರಾಮಯ್ಯ

    ಸಿಎಂ ಇಬ್ರಾಹಿಂನನ್ನು ಎಂಎಲ್‍ಸಿ ಮಾಡಿದ್ದೇ ಹೆಚ್ಚು, ಇನ್ನು ಮಂತ್ರಿ ಬೇರೆ ಮಾಡ್ತಾರ?: ಸಿದ್ದರಾಮಯ್ಯ

    ತುಮಕೂರು: ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ನಡುವಿನ ಸಂಬಂಧ ಹಳಸಿದ್ಯಾ? ಹೌದು ಎನ್ನುತಿದೆ ಸಿಎಂ ಸಿದ್ದರಾಮಯ್ಯರ ಈ ಹೇಳಿಕೆ.

    ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇಬ್ರಾಹಿಂ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಬ್ರಾಹಿಂನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದೇ ಹೆಚ್ಚು. ಇನ್ನೂ ಮಂತ್ರಿ ಸ್ಥಾನ ಕೊಡ್ತೀನಾ ಎಂದು ಹಗುರವಾಗಿ ಮಾತನಾಡಿದ್ದಾರೆ.

    ಸ್ಥಳೀಯ ಪತ್ರಿಕೆಯೊಂದರಲ್ಲಿ ಇಬ್ರಾಹಿಂಗೆ ಮಂತ್ರಿಸ್ಥಾನ ಸಾಧ್ಯತೆ ಎಂದು ವರದಿ ಮಾಡಲಾಗಿತ್ತು. ಈ ವರದಿ ಓದಿದ ಸಿಎಂ, ಯಾವುದೇ ಕಾರಣಕ್ಕೆ ಇಬ್ರಾಹಿಂನನ್ನು ಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಏಕವಚನದಲ್ಲೆ ಮಾತನಾಡಿದ್ದಾರೆ.

    ಸಿಎಂ ಸಿದ್ದರಾಮಯ್ಯರ ಈ ಮಾತಿಗೆ ಎದುರಿಗೆ ಕುಳಿತಿದ್ದ ಸಚಿವ ಜಯಚಂದ್ರ, ಶಾಸಕ ರಫಿಕ್ ಅಹಮದ್ ಸೇರಿದಂತೆ ಇತರೇ ಕಾಂಗ್ರೆಸ್ ಮುಖಂಡರು ಗೊಳ್ ಎಂದು ನಕ್ಕಿದ್ದಾರೆ.

  • ಮದುಮಗಳು ಚೆನ್ನಾಗಿ ಇದ್ರೆ ಗಂಡುಗಳು ಜಾಸ್ತಿ ಬರ್ತಾವೆ: ಸಿಎಂ ಇಬ್ರಾಹಿಂ ಈ ಮಾತು ಹೇಳಿದ್ಯಾಕೆ?

    ಮದುಮಗಳು ಚೆನ್ನಾಗಿ ಇದ್ರೆ ಗಂಡುಗಳು ಜಾಸ್ತಿ ಬರ್ತಾವೆ: ಸಿಎಂ ಇಬ್ರಾಹಿಂ ಈ ಮಾತು ಹೇಳಿದ್ಯಾಕೆ?

    ಬೆಂಗಳೂರು: ಮೇಲ್ಮನೆಯ ಒಂದು ಸ್ಥಾನಕ್ಕೆ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ, ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಿ.ಎಂ ಇಬ್ರಾಹಿಂ ಹೆಸರಿಗೆ ಒಪ್ಪಿಗೆ ಕೊಟ್ಟಿದ್ದು, ಇಂದು ಕೆಪಿಸಿಸಿ ಕಚೇರಿಯಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಅಭ್ಯರ್ಥಿ ಮಾಡಿದ್ದಕ್ಕೆ ಸೋನಿಯಾ ಗಾಂಧಿ, ಸಿಎಂ, ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರಿಗೆ ಅಭಿನಂದನೆಗಳು. ನಾನು ಶುಕ್ರವಾರ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಸಿಎಂಗೆ ರಾಜೀನಾಮೆ ಸಮರ್ಪಿಸಿದ್ದೇನೆ. ಸೋಮವಾರದಂದು ಮೇಲ್ಮನೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸ್ತಿದ್ದೇನೆ. ಇದರ ಸಂಬಂಧ ಇಂದು ಪಕ್ಷದ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದೇನೆ. ಸಿಎಂ ಜೊತೆ ನನ್ನದು ಹಳೆಯ ಗೆಳೆತನವಿದೆ. ಸಿಎಂ ಮೇಲೆ ನಾನು ಯಾವತ್ತೂ ಮುನಿಸಿಕೊಂಡಿಲ್ಲ. ಸಿಎಂ ನನಗೆ ಒಳ್ಳೆಯ ಸಲಹೆ ಕೊಡ್ತಿರ್ತಾರೆ. ಉಪಮುಖ್ಯಮಂತ್ರಿಯಾಗಿದ್ದಕ್ಕಿಂತಲೂ ಈಗ ಸಿಎಂ ಆಗಿ ಸಿದ್ದರಾಮಯ್ಯನವರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಮುಂದಿನ ಬಾರಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ರು.

    ಜೆಡಿಎಸ್ ಸೇರುವ ಮೂನ್ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಜವಾಬ್ದಾರಿ ನೀಡಿತೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮದುಮಗಳು ಚೆನ್ನಾಗಿ ಇದ್ರೆ, ಗಂಡುಗಳು ಜಾಸ್ತಿ ಬರ್ತಾವೆ ಅಂದ್ರು. ಆ ಮೂಲಕ ಜೆಡಿಎಸ್ ತನಗೆ ಆಫರ್ ಮಾಡಿದ್ದನ್ನ ಪರೋಕ್ಷವಾಗಿ ಸಿಎಂ ಇಬ್ರಾಹಿಂ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಈಗ ನನಗೆ ಜವಾಬ್ದಾರಿ ನೀಡಿದೆ. ನನಗೊಂದು ಜವಾಬ್ದಾರಿ ನೀಡಲಿ ಎನ್ನೋದು ಜನರ ಅಭಿಪ್ರಾಯವೂ ಕೂಡ ಆಗಿತ್ತು ಅಂತ ಅವರು ಹೇಳಿದ್ರು.

  • ಮೋದಿಯನ್ನು ಹುಚ್ಚನಿಗೆ ಹೋಲಿಸಿದ್ದ ಪ್ರಕರಣ – ಸಿ ಎಂ ಇಬ್ರಾಹಿಂ ವಿರುದ್ಧ ದೂರು ದಾಖಲು

    ಮೋದಿಯನ್ನು ಹುಚ್ಚನಿಗೆ ಹೋಲಿಸಿದ್ದ ಪ್ರಕರಣ – ಸಿ ಎಂ ಇಬ್ರಾಹಿಂ ವಿರುದ್ಧ ದೂರು ದಾಖಲು

    ಚಾಮರಾಜನಗರ: ಗಂಡ್ಲುಪೇಟೆಯಲ್ಲಿ ಚುನಾವಣಾ ಭಾಷಣದ ವೇಳೆ ಪ್ರಧಾನಿ ಮೋದಿಯನ್ನ ಹುಚ್ಚನಿಗೆ ಹೋಲಿಸಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ವಿರುದ್ಧ ದೂರು ದಾಖಲಾಗಿದೆ.

    ಬಿಜೆಪಿ ಯುವ ಮುಖಂಡ ಪ್ರಣಯ್ ಎಂಬವರು ಇಬ್ರಾಹಿಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಇದನ್ನೂ ಓದಿ: ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

    ಇಬ್ರಾಹಿಂ ಏನು ಹೇಳಿದ್ದರು?: ಭಾನುವಾರ ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣೆಯ ವೇಳೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಶೇವಿಂಗ್ ಕೂತಂಗೆ ಆಗಿದೆ. ಮೋದಿ ಕತ್ತಿಯನ್ನು ಕುತ್ತಿಗೆಗೆ ಹಿಡಿತಾನೋ ಅಥವಾ ಗಡ್ಡಕ್ಕೆ ಹಿಡಿಯುತ್ತಾನೋ ಅಂತಾನೇ ಗೊತ್ತಾಗ್ತಾ ಇಲ್ಲ ಅಂತಾ ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದರು.

  • ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

    ಮೋದಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಗೆ ಶೇವಿಂಗ್ ಕತ್ತಿ ಕೊಟ್ಟಂಗಾಗಿದೆ: ಸಿಎಂ ಇಬ್ರಾಹಿಂ ಲೇವಡಿ

    ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಶೇವಿಂಗ್ ಕೂತಂಗೆ ಆಗಿದೆ. ಮೋದಿ ಕತ್ತಿಯನ್ನು ಕುತ್ತಿಗೆಗೆ ಹಿಡಿತಾನೋ ಅಥವಾ ಗಡ್ಡಕ್ಕೆ ಹಿಡಿಯುತ್ತಾನೋ ಅಂತಾನೇ ಗೊತ್ತಾಗ್ತಾ ಇಲ್ಲ ಅಂತಾ ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

    ಇಂದು ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಇಬ್ರಾಹಿಂ, 500 ರೂ. ಹಾಗೂ 1000ರೂ. ನೋಟುಗಳನ್ನು ತೆಗೆದೇ ಬಿಟ್ಟ. ಜನಕ್ಕೆ ಒಂದು ಖುಷಿ. ಸವತಿ ಗಂಡ ಸತ್ತ ಅಂತಾ ಇವ್ಳು ಖುಷಿಯಾದ್ಳು. ಒರಿಜನಲ್ ಇವನೇ ಸತ್ತಾಂತ ಆಮೇಲೆ ಗೊತ್ತಾಯ್ತು. ಯಾವ ವ್ಯಾಪಾರ ನಡೀತಾ ಇಲ್ಲ. ಜಮೀನು ಖರೀದಿ ಇಲ್ಲ. ಸಬ್ ರಿಜಿಸ್ಟಾರ್ ಆಫೀಸ್‍ಗೆ ಜನಬರುತ್ತಿಲ್ಲ. ಲೇವಾದೇವಿ ಇಲ್ಲ. ದುಡ್ಡಿಲ್ಲದೇ ಜನ ಕಂಗಾಲಾಗಿದ್ರು. ಒಂದೊಂದು ತಿಂಗಳು ಸಾವಿರಾರು ಜನ ಬ್ಯಾಂಕ್ ಎದುರು ಲೈನಾಗಿ ನಿಲ್ತಿದ್ದರು ಅಂತಾ ಮೋದಿ ನೋಟ್ ಬ್ಯಾನ್ ವಿಚಾರದಲ್ಲಿ ವ್ಯಂಗ್ಯವಾಡಿದ್ರು.

    ಮಂತ್ರಿ ಪಟ್ಟ ಕೊಟ್ಟಿಲ್ಲ ಅಂತಾ ರಾಜೀನಾಮೆ ಕೊಟ್ರು. ಇದು ಯಾವ ಪ್ರತಿಷ್ಠೆಗೆ? ಶೂನ್ಯ ಸಿಂಹಾಸನದವನು ನಾನು ಇಲ್ವ. ಹಂಗೆಲ್ಲಾ ನೋಡಕೋದ್ರೆ ನಿಮ್ಮ ಪೋಸ್ಟರ್‍ಗಳಲ್ಲಿ ನಮ್ಮ ಹೆಸರಿಲ್ಲ. ಇದೀಗ ನಾವು ಯಾಕ್ ಬಂದ್ವಿ ಇಲ್ಲಿಗೆ. ಎನಗಿಂತ ಕಿರಿಯನಿಲ್ಲ. ಹಿರಿಯರಿಗಿಂತ ನಾ ಮೇಲಿಲ್ಲ. ಸದಾ ಶರಣರ ಪಾದದ ಧೂಳಾಗಿ ದುಡಿಯಬೇಕು ಕೂಡಲಸಂಗದೇವ ಎಂದು ವಚನವನ್ನು ಉದಾಹರಿಸಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರಿಗೆ ಮಂತ್ರಿಯಾಗೋ ಕನಸು ಕಾಣುವ ಮೊದಲು ಸುತ್ತೂರು ಮಠದಲ್ಲಿ ಒಂದು ವರ್ಷ ಇದ್ದು ತರಬೇತಿ ತಗೋಳ್ತಿದ್ರೆ ಉತ್ತಮವಾಗುತ್ತಿತ್ತು ಅಂತಾ ಹೇಳಿ ಟಾಂಗ್ ನೀಡಿದ್ರು.

    ಉಪಚುನಾವಣೆಗೆ ಪರಿಣಾಮ ಆಗಲ್ಲ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಪಂಚರಾಜ್ಯ ಫಲಿತಾಂಶದ ಪ್ರಭಾವ ಬೀರುವುದಿಲ್ಲ. ಯು.ಪಿಯಲ್ಲಿ ಮಳೆ ಬಂದರೆ ಕರ್ನಾಟಕದಲ್ಲಿ ಛತ್ರಿ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಮಳೆ ಬಂದರೆ ಮಾತ್ರ ಛತ್ರಿ ಹಿಡಿದುಕೊಳ್ಳಲು ಸಾಧ್ಯ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ ಅವರು ಬರಿ ಸುಳ್ಳನ್ನೇ ಗುಸು ಗುಸು ಎನ್ನುತ್ತಾರೆ. ಅವರಿಗೆ ಆರ್‍ಎಸ್‍ಎಸ್ ಸುಳ್ಳು ಗುಸುಗುಟ್ಟುವ ಟ್ರೈನಿಂಗ್ ನೀಡಿದೆ. ನಾವು ಏನ್ ಕೆಲಸ ಮಾಡಿದ್ದೀವಿ ಎನ್ನುವುದನ್ನು 15 ರಂದು ಮಂಡಿಸುವ ಬಜೆಟ್ ನಲ್ಲಿ ನೋಡಿ. ಬಿಜೆಪಿ ಅವರು ಬರಿ ಸುಳ್ಳು ಮತ್ತು ಆರೋಪ ಮಾಡುತ್ತಾ ಓಡಾಡ್ತಾ ಇದ್ದಾರೆ. ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ಸಂಧ್ಯಾ ಸುರಕ್ಷಾ, ಸೈಕಲ್ ಕೊಟ್ಟಿದ್ದು ಅದನ್ನು ಬಿಟ್ಟರೆ ಸೀರೆ ವಿತರಣೆ ಮಾಡಿದ್ದು ಬಿಟ್ಟರೆ ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಅವರು ಮಾಡಿಲ್ಲ ಅಂತಾ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರಿದ್ರು.

    ಇದನ್ನೂ ಓದಿ:  ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕೈ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ!