Tag: CM BSY

  • ಕನಕರ ಸರಳತೆ, ಜಾತ್ಯಾತೀತತೆ ಸರ್ವಕಾಲಕ್ಕೂ ಆದರ್ಶ: ಸಿಎಂ ಬಿಎಸ್‍ವೈ

    ಕನಕರ ಸರಳತೆ, ಜಾತ್ಯಾತೀತತೆ ಸರ್ವಕಾಲಕ್ಕೂ ಆದರ್ಶ: ಸಿಎಂ ಬಿಎಸ್‍ವೈ

    ಬೆಂಗಳೂರು: ದಾಸ ಸಾಹಿತ್ಯದ ಸುವರ್ಣ ಯುಗದ ಪ್ರವರ್ಧಕರು ಕನಕರು. ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳನ್ನು ಹಾಡದ ಗಾಯಕರು ಇಲ್ಲ. ಕನಕರ ಸರಳತೆ, ಜಾತ್ಯಾತೀತತೆ ಸರ್ವಕಾಲಕ್ಕೂ ಆದರ್ಶವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

    ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 533 ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ವರಕವಿಗಳು, ಸಂತರು ದಾಸ ಶ್ರೇಷ್ಠ ಕನಕದಾಸರು ಹುಟ್ಟಿದೆ ದಿನ ಇದು. ಸರ್ಕಾರದ ವತಿಯಿಂದ ಕನಕದಾಸರ ಜಯಂತಿಯನ್ನು ಅಚರಿಸಿ ಸಾಧಕರಿಗೆ ಕನಕರ ಪ್ರಶಸ್ತಿ ನೀಡಲಾಗುತ್ತಿದೆ. ಸರ್ವ ಜನಾಂಗದ ಅಭಿವೃದ್ಧಿಗೆ ನಾವು ಸಮಾನ ಅನುದಾನ ನೀಡಿದ್ದೇವೆ. ಇವತ್ತಿನ ಯುವ ಜನಕ್ಕೆ ಕನಕದಾಸರ ವಿಚಾರಗಳನ್ನು ತಿಳಿಸುವ ಅಗತ್ಯ ಇದೆ. ಕನಕದಾಸರ ಹಾದಿಯಲ್ಲಿ ನಾವು ನಡೆಯಬೇಕಾಗಿದೆ ಎಂದು ಅಭಪ್ರಾಯ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡಿದ ಕನಕಗುರು ಪೀಠದ ಶ್ರೀಸಿದ್ದರಾಮಾನಂದಪುರಿ ಸ್ವಾಮೀಜಿ ದಾಸನಾಗು, ವಿಶೇಷನಾಗು, ಭವಪಾಶ ನೀಗು ಎಂದು ಸಂತಶ್ರೇಷ್ಠ ಕನಕದಾಸರು ಹೇಳಿದ್ದಾರೆ. ರೇವಣಸಿದ್ದೇಶ್ವರನಿಂದ ವೀರಶೈವ ಪರಂಪರೆ ಆರಂಭವಾಗಿದೆ. ರೇವಣಸಿದ್ದೇಶ್ವರನನ್ನು ರೇಣುಕಾಚಾರ್ಯ ಎಂದು ಕರೆಯುತ್ತಾರೆ. ಕನಕದಾಸರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯಬೇಕಿದೆ. ಕನಕ ಒಬ್ಬ ಮಾಂಡಲಿಕ ಅರಸನಾಗಿದ್ದ. ಕನಕದಾಸರು ದೋಅಬ್ ಪ್ರದೇಶದಲ್ಲಿ ಸ್ವತಃ ರಾಜನಿಂದ ಮೋಸಕ್ಕೆ ಒಳಗಾಗುತ್ತಾನೆ. ನಂತರ ಮಾಂಡಲಿಕ ಸ್ಥಾನ ತ್ಯಾಗ ಮಾಡುತ್ತಾರೆ. ಕನಕದಾಸರಿಗೆ ಯಾರೂ ಕೂಡ ಧೀಕ್ಷೆ ನೀಡಿಲ್ಲ. ಕೃಷ್ಣನೇ ಅವರಿಗೆ ಧೀಕ್ಷೆ ಕೊಟ್ಟಿದ್ದಾರೆ.ಅವರಿವರು ಧೀಕ್ಷೆ ಕೊಟ್ಟಿದ್ದಾರೆ ಎಂಬುದು ಸುಳ್ಳು.ಅವರ ಸಾಹಿತ್ಯದಲ್ಲೂ ಅದು ಬಿಂಬಿತವಾಗಿದೆ ಎಂದಿದ್ದಾರೆ.

    ಕನಕರು ವೈಷ್ಣವಾತೀತರು, ಶೈವಾತೀತರು. ಕನಕದಾಸ ಜಯಂತಿಯ ದಿನ ರಜೆ ಬೇಡ. ಅಧಿಕಾರಿಗಳು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಅಧಿಕಾರಿಗಳಿಗಾದರೂ ಕನಕದಾಸರ ಬಗ್ಗೆ ಗೊತ್ತಾಗಬೇಕು. ದೇಶದಲ್ಲಿ ರೈತರು ಹೋರಾಟಕ್ಕೆ ಇಳಿದಿದ್ದಾರೆ.ಸರ್ಕಾರಗಳು ಬಡವರ ಪರ ಇರಬೇಕು. ತುಳಿತಕ್ಕೆ ಒಳಗಾದವರ ಪರ ಇರಬೇಕು. ಯಡಿಯೂರಪ್ಪ ಮುಖ್ಯಮಂತ್ರಿಗಳು ಈ ಹಿಂದೆ ಹಲವು ಒಳ್ಳೆಯ ಕೆಲಸ ಮಾಡಿದ್ದಾರೆ. ಇತ್ತೀಚಿನ ಕೆಲವು ಘಟನೆಗಳು ನಮಗೆ ಬೇಸರ ತಂದಿವೆ. ಹಣ ಬಲ ತೋಲ್ಬಳ ಅಭಿವೃದ್ಧಿ ಹೊಂದಿದವರ ಪರ ನಿರ್ಧಾರ ಬೇಡ. ಆರ್ಥಿಕ ಶೈಕ್ಷಣಿಕ ಹಿಂದುಳಿದವರ ಪರ ಕೆಲಸ ಆಗಲಿ ಎಂದು ಶ್ರೀಗಳು ಸಲಹೆ ನೀಡಿದರು.

    ಕನಕ ಶ್ರೀ ಪ್ರಶಸ್ತಿ 2020- ಶ್ರೀ ಯುಗಧರ್ಮ ರಾಮಣ್ಣ.(ದಾವಣಗೆರೆ) ಕನಕ ಗೌರವ ಪುರಸ್ಕಾರ 2019- ಪ್ರೊ.ಬಿ. ಶಿವರಾಮ ಶೆಟ್ಟಿ (ಮಂಗಳೂರು) ಕನಕ ಗೌರವ ಪುರಸ್ಕಾರ 2020- ಡಾ.ಶಶಿಧರ ಜಿ ವೈದ್ಯ, (ಹಾವೇರಿ) ಕನಕ ಯುವ ಪುರಸ್ಕಾರ 2019- ಡಾ.ಕಾತ್ಯಾಯಿನಿ ಕುಂಜಿಬೆಟ್ಟು( ಉಡುಪಿ) ಕನಕ ಪುರಸ್ಕಾರ 2020- ಡಾ.ನರಸಿಂಹಮೂರ್ತಿ ಹೂವಿನಹಳ್ಳಿ ಅವರಿಗೆ ಈ ವೇಳೆ ಗೌರವಿಸಲಾಯಿತ್ತು.

    ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಶ್ರೀ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ, ಮಾಜಿ ಸಚಿವರಾದ ಶ್ರೀ ಹೆಚ್.ಎಂ.ರೇವಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ನವರಿಗೆ ಕುರುಬ ಸಂಪ್ರದಾಯದಂತೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು. ದಿವ್ಯ ಸಾನ್ನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ ಬ್ರಿಜ್ ಶಾಖಾಮಠದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿ ಭಾಗವಹಿಸಿದ್ದರು.

  • ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಜಾಗತಿಕ ಕಂಪನಿಗಳ ಆಸಕ್ತಿ

    ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಜಾಗತಿಕ ಕಂಪನಿಗಳ ಆಸಕ್ತಿ

    ದಾವೋಸ್: ವಿಶ್ವ ಆರ್ಥಿಕ ಸಮ್ಮೇಳನದ ಮೂರನೇ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಹಲವಾರು ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿತು. ಜೆಮಿನಿ ಕಾರ್ಪೊರೇಷನ್, ಕೋಕಾಕೋಲಾ ಕಂಪನಿ, ಉಬರ್, ಎಸ್‍ಎಪಿ ಲ್ಯಾಬ್ಸ್, ಜನರಲ್ ಎಲೆಕ್ಟ್ರಿಕ್ (ಜಿಇ), ಸ್ವಿಸ್‍ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವ ಬಗ್ಗೆ ಚರ್ಚೆ ನಡೆಸಿದರು.

    ಕರ್ನಾಟಕದಲ್ಲಿ ಉದ್ದಿಮೆಗಳ ವಿಸ್ತರಣೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಸರ್ಕುಲರ್ ಎಕಾನಮಿ, ಇಂಧನ ಮತ್ತು ಮೊಬಿಲಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಪ್ರತಿನಿಧಿಗಳೊಂದಿಗಿನ ತಮ್ಮ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದರು.

    ಇದೇ ವೇಳೆ ಉಬರ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾರಾ ಖೋಸ್ರೋವ್ ಶಾಹಿ ಅವರು ಬೆಂಗಳೂರಿನಲ್ಲಿ ತಮ್ಮ ಉದ್ಯಮದ ವಿಸ್ತರಣೆ ಮಾಡಲಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

    ಜಿಇ ಕಂಪನಿಯ ವಿಲಿಯಂ ಮೊ ಕೊವನ್ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ಆರೋಗ್ಯ ಕ್ಷೇತ್ರ, ವಿದ್ಯುತ್ ವಿತರಣೆ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ಕೋಕಾಕೋಲಾದ ಪ್ರತಿನಿಧಿಗಳು 25 ದಶಲಕ್ಷ ಅಮೆರಿಕನ್ ಡಾಲರ್ ನಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಇದನ್ನು ಮುಂಬರುವ ದಿನಗಳಲ್ಲಿ 200 ದಶಲಕ್ಷ ಡಾಲರ್ ಗಳಿಗೆ ಹೆಚ್ಚಿಸಲಾಗುತ್ತದೆ. ಈ ಬಂಡವಾಳದಿಂದ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ವಿನಿಯೋಗ ಮಾಡಲಾಗುತ್ತದೆ ಎಂದು ವಿವರಿಸಿದರು.

    ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸ್ಟ್ರಾಟೆಜಿಕ್ ಔಟ್ ಲುಕ್ ಇಂಡಿಯಾ ಫಾರ್ ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಫಾರ್ ಇಂಡಿಯಾ ಎಂಬ ಸಂವಾದದಲ್ಲಿ ಪಾಲ್ಗೊಂಡರು. ಈ ಸಂವಾದದಲ್ಲಿ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಎಸ್ ಬಿಐ ನ ಅಧ್ಯಕ್ಷ ರಜನೀಶ್ ಕುಮಾರ್ ಸೇರಿದಂತೆ ಮತ್ತಿತರೆ ಪ್ರಮುಖರು ಹಾಜರಿದ್ದರು.

    ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಗುರಿ ತಲುಪಲು ಭಾರತದ ಎಲ್ಲಾ ರಾಜ್ಯಗಳು ಕೈಜೋಡಿಸುತ್ತಿವೆ. ನಮ್ಮ ರಾಜ್ಯ ಕರ್ನಾಟಕ 250 ಬಿಲಿಯನ್ ಯುಎಸ್ ಡಾಲರ್ ನಷ್ಟು ಜಿಡಿಪಿಯನ್ನು ಹೊಂದಿದ್ದು, ಶೇ.9ರ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿ ವಿಶ್ವ ಆರ್ಥಿಕ ಸಮ್ಮೇಳನದ ಮೂಲಕ ನಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

    ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಇದ್ದರು.

  • ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡೋ ಮುನ್ನ ಎಚ್ಚರಿಕೆ ಇರಲಿ: ಹೆಚ್. ವಿಶ್ವನಾಥ್

    ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡೋ ಮುನ್ನ ಎಚ್ಚರಿಕೆ ಇರಲಿ: ಹೆಚ್. ವಿಶ್ವನಾಥ್

    – ಏನೂ ಆಗಲ್ಲ, ಧೈರ್ಯವಾಗಿರಿ ಎಂದಿದ್ದಾರೆ ಸಿಎಂ

    ಮೈಸೂರು: ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ಅನರ್ಹ ಶಾಸಕ ಹೆಚ್ ವಿಶ್ವನಾಥ್ ಅವರು ಮಾಜಿ ಸಚಿವ ಸಾರಾ ಮಹೇಶ್ ವಿರುದ್ಧ ಗುಡುಗಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲೂ ಫಿಲಂ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡವನಲ್ಲ. ಯಾರದ್ದೋ ಮನೆಯ ಲೋಟ ತೊಳೆದಿಲ್ಲ. ರಾಮದಾಸ್ ಮನೆ ಚಡ್ಡಿ ತೊಳೆದಿಲ್ಲ. ನಮ್ಮ ತಂದೆ ಆ ಕಾಲದಿಂದಲೂ ಜಮೀನ್ದಾರರು. ಆ ಕಾಲದಲ್ಲೇ ಕುರುಬ ಸಮಾಜಕ್ಕೆ ಜಮೀನು ಕೊಟ್ಟ ವಂಶ ನಮ್ಮದು ಎಂದು ಸಾರಾ ಮಹೇಶ್ ವಿರುದ್ಧ ವಾಗ್ದಾಳಿ ಮಾಡಿದರು.

    ನಾನು ದಿನದ ಖರ್ಚಿಗಾಗಿ ಯಾರನ್ನೂ ಕೇಳುವುದಿಲ್ಲ. ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ. ನಾವು ಐದು ತಲೆಮಾರಿನಿಂದ ಜಮೀನ್ದಾರರು. ಬಾಯಿಗೆ ಬಂದಂತೆ ಮಾತಾಡಬೇಡ. ನಾನು ಆಸ್ತಿ ಮಾರಿಕೊಂಡ ದಾಖಲೆ ಇದ್ದರೆ ತೆಗೆದುಕೊಂಡು ಪತ್ರಕರ್ತರ ಭವನಕ್ಕೆ ಬಾ. ಸಂವಿಧಾನದ ಮೇಲೆ ಆಣೆ ಇಟ್ಟು ಚರ್ಚೆ ಮಾಡೋಣ. ಅದನ್ನು ಬಿಟ್ಟು ಆ ದೇವಸ್ಥಾನಕ್ಕೆ ಬಾ ಈ ದೇವಸ್ಥಾನಕ್ಕೆ ಬಾ ಎಂದು ಮೆರೆಯಾಗಬೇಡ ಎಂದು ಸಾರಾ ಮಹೇಶ್‍ಗೆ ಅವಾಜ್ ಹಾಕಿದರು. ಇದನ್ನು ಓದಿ: ಯಾರ ಸಾಧನೆ ಎಷ್ಟು? ಭಾನುವಾರ ಜನರಿಗೆ ಗೊತ್ತಾಗುತ್ತೆ: ವಿಶ್ವನಾಥ್‍ಗೆ ಸಾ.ರಾ.ಮಹೇಶ್ ಸವಾಲ್

    ನಾನು ಯಾರ ಕುಟುಂಬಕ್ಕೂ ವಿಷ ಹಿಂಡಿಲ್ಲ. ನೀವು ಹಿಂಡಿದ ವಿಷದಿಂದ ಆ ಕುಟುಂಬದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಹೆಚ್‍ಡಿಕೆ ಅವರ ಸುತ್ತ ಇದ್ದ ಎಚ್. ವಿಶ್ವನಾಥ್ ಎಲ್ಲಿ ಹೋದರು? ಕುಮಾರಪರ್ವ ಮಾಡಿದ ಜಿಟಿಡಿ ಎಲ್ಲಿ. ಡಾ. ರಂಗಪ್ಪ, ಎಲ್.ಆರ್. ಶಿಮರಾಮೇಗೌಡ ಮತ್ತು ಪುಟ್ಟರಾಜು ಎಲ್ಲಿ ಹೋದರು. ಕುಮಾರಸ್ವಾಮಿ ಸುತ್ತ ಇದ್ದ ಈ ನಾಯಕರೆಲ್ಲ ಯಾಕೆ ಅವರಿಂದ ದೂರವಾದರು. ಹೆಚ್‍ಡಿಕೆ ಅವರ ನಾಯಕತ್ವ ಬಲಹೀನವಾಗಬಾರದು. ಯಾರೋ ಒಬ್ಬ ಶಾಸಕನ ಮಾತು ಕೇಳಿಕೊಂಡು ನಾಯಕತ್ವ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

    ನಮ್ಮ ಪದತ್ಯಾಗ ಪದವಿಗಾಗಿ ಅಲ್ಲ. ರಾಜ್ಯದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣ ವಿರೋಧಿಸಿ ರಾಜೀನಾಮೆ ಕೊಟ್ಟಿದ್ದು. ದುಡ್ಡಿಗಾಗಿ ಇಲ್ಲಿ ಯಾರು ಯಾರನ್ನೂ ಮಾರಿಕೊಂಡಿಲ್ಲ. ಕಳೆದು ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಎಂ.ಟಿ.ಬಿ. ನಾಗರಾಜ್ ಅವರ ಗುಂಪು 80 ಕೋಟಿ ರೂಪಾಯಿ ಕೊಟ್ಟಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂದು ಈ ಹಣ ಕೊಟ್ಟರು. ಈಗ ಅವರೇ ಇವರು ದುಡ್ಡಿಗಾಗಿ ಮಾರಿಕೊಂಡರು ಎಂದು ಹೇಳುತ್ತಿದ್ದಾರೆ ಎಂದು ಸಿದ್ದು ವಿರುದ್ಧವೂ ಕಿಡಿಕಾರಿದರು.

    ಏನೂ ಆಗಲ್ಲ, ಧೈರ್ಯವಾಗಿರಿ. ಖುದ್ದಾಗಿ ನಾನೇ ವಕೀಲರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ನಿನ್ನೆ ಕೆಲ ಅನರ್ಹ ಶಾಸಕರು ಸಿಎಂ ಭೇಟಿ ಮಾಡಿದ್ದಾರೆ ಇದು ಸಾಮಾನ್ಯ ಭೇಟಿ ಅಷ್ಟೇ. ವಿಶೇಷ ಅರ್ಥ ಇಲ್ಲ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.

    ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಮ್ಮ ಕೇಸ್ ಸುಪ್ರೀಂ ಕೋರ್ಟಿನಲ್ಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರಿಯಾದ ಮಾದರಿಯಲ್ಲಿ ರಾಜೀನಾಮೆ ಕೊಟ್ಟಿದ್ದೇವೆ. ರಾಜೀನಾಮೆಯ ಎಲ್ಲಾ ಬೆಳವಣಿಗೆಗಳು ಸುಪ್ರೀಂ ಕೋರ್ಟ್ ಗಮನದಲ್ಲಿದೆ. ಸುಪ್ರೀಂ ಕೋರ್ಟ್ ನಮ್ಮ ಅರ್ಹತೆಯನ್ನು ಎತ್ತಿಹಿಡಿಯಬೇಕು. ಇಲ್ಲವೇ ಅದನ್ನು ರದ್ದು ಮಾಡಬೇಕು ಅಥವಾ ಈ ಚುನಾವಣೆಗೆ ತಡೆಯಾಜ್ಞೆ ನೀಡಬೇಕು. ನಾಳೆ ಈ ಬಗ್ಗೆ ಸುಪ್ರೀಂ ಕೋರ್ಟ್ ಒಂದು ನಿರ್ಧಾರ ಪ್ರಕಟಿಸಲಿದೆ. ನಮ್ಮ ರಕ್ಷಣೆಗೆ ನ್ಯಾಯಾಲಯ ಬರಬೇಕಿದೆ ಎಂದು ವಿಶ್ವನಾಥ್ ತಿಳಿಸಿದರು.

  • ಸಿಎಂ ಬಿಎಸ್‍ವೈಗೆ ಕಿರುಕುಳ: ಬಸನಗೌಡ ಪಾಟೀಲ್ ಯತ್ನಾಳ್

    ಸಿಎಂ ಬಿಎಸ್‍ವೈಗೆ ಕಿರುಕುಳ: ಬಸನಗೌಡ ಪಾಟೀಲ್ ಯತ್ನಾಳ್

    ವಿಜಯಪುರ: ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಸಿಎಂ ಕನಸು ಕಂಡಿದ್ದಾರೆ. ಆದರೆ ಯಡಿಯೂರಪ್ಪವರಿಗೆ ಕಿರುಕುಳ ಆಗುತ್ತಿದ್ದು, ಎಲ್ಲ ಶಾಸಕರು ಸಹಕಾರ ನೀಡಬೇಕೆಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಿಷಯವನ್ನು ಪರೋಕ್ಷವಾಗಿ ತಿಳಿಸಿದರು.

    ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಅದಕ್ಕಾಗಿ ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ನಮ್ಮನ್ನು ಮಂತ್ರಿ ಮಾಡದೆ ಇದ್ದರೂ ಪರವಾಗಿಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪವರಿಗೆ ಕಿರುಕುಳ ಆಗುತ್ತಿದೆ. ಯಡಿಯೂರಪ್ಪವರಿಗೆ ಎಲ್ಲ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ಇದೇ ವೇಳೆ ಅನರ್ಹ ಶಾಸಕರಿಂದ ನಮ್ಮ ಬಿಜೆಪಿ ಸರ್ಕಾರ ಅಸ್ತಿತ್ವ ಬಂದಿದೆ. ಅನರ್ಹ ಶಾಸಕರು ಸಾಕಷ್ಟು ನೊಂದಿದ್ದಾರೆ. ರಾಜೀನಾಮೆ ನೀಡಿದ ಮೇಲೆ ಅನರ್ಹ ಶಾಸಕರಿಗೆ ಚಿತ್ರಹಿಂಸೆ ಆಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದು ಆಗಲಿ ಎಂದರು. ಅಲ್ಲದೆ ಅನರ್ಹ ಶಾಸಕರು ಮಂತ್ರಿಗಳಾಗಲಿ ಎಂದು ಹಾರೈಸಿದರು.

    ಸಂತ್ರಸ್ತರಿಗೆ 10 ಸಾವಿರ ಹೆಚ್ಚು ಎನ್ನುವ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಬಹಳ ಅನ್ಯಾಯವಾದಾಗ ಧ್ವನಿ ಎತ್ತುತ್ತೇನಿ. ಅದು ನನ್ನ ಪಕ್ಷ ಅಥವಾ ಬೇರೆ ಪಕ್ಷವಿದರೂ ಅನ್ಯಾಯ ಪರಾಕಾಷ್ಠೆ ಬಂದಾಗ ಉತ್ತರ ಕರ್ನಾಟಕದ ಪರ ಧ್ವನಿ ಮಾಡುತ್ತೇನೆ. ಸದ್ಯ ಈಶ್ವರಪ್ಪ ಹೇಳಿಕೆ ಪರ ಹಾಗೂ ವಿರೋಧ ಮಾಡಲ್ಲ. ಅದಕ್ಕಾಗಿ ನನ್ನನ್ನು ಬಲಿಪಶು ಮಾಡಬೇಡಿ ಎಂದು ಹೇಳಿದರು.