ಸದ್ಯ ಒಂದು ದಿನದ ಮಟ್ಟಿಗೆ ಪ್ರಜ್ವಲ್ ಕೆಲಸ ಮಾಡಿದ್ದು, ದಿನಗೂಲಿಯಾಗಿ ದಿನಕ್ಕೆ 522 ರೂ. ಗಳನ್ನ ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳ ನೀಡಲಾಗುವುದಿಲ್ಲ. ಇದನ್ನೂಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ –ಇಬ್ಬರು ಯುವಕರ ಬಂಧನ
ಟ್ರಯಲ್ ಕೋರ್ಟ್ಗೆ ಆಗಾಗ ಬರಬೇಕಾಗಿರುವುದರಿಂದ ಹಾಗೂ ವಕೀಲರ ಜೊತೆ ಇತರೇ ಕೇಸ್ಗಳ ಸಂಬಂಧ ಚರ್ಚೆ ಮಾಡಬೇಕಾಗಿರುವ ಕಾರಣ ಪ್ರಜ್ವಲ್ ರೇವಣ್ಣ ಅವರನ್ನು ಪೂರ್ತಿ ಕೆಲಸಕ್ಕೆ ನಿಯೋಜಿಸಿಲ್ಲ.
ರಾಮನಗರ: ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮಾಗಡಿಯ ಖಾಸಗಿ ಶಾಲೆಯ ಕ್ಲರ್ಕ್ನನ್ನು ಬಂಧಿಸಿದ್ದಾರೆ.
ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಕ್ಲರ್ಕ್ ರಂಗೇಗೌಡ ಬಂಧಿತ ಆರೋಪಿ. ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪತ್ರಿಕೆಯು ವಾಟ್ಸಪ್ ಮೂಲಕ ಸೋರಿಕೆ ಆಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಿತ್ತು. ಅದೇ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಹೆಡ್ ಮಾಸ್ಟರ್ ಹಾಗೂ ಶಿಕ್ಷಕರಿರುವ ಗ್ರೂಪ್ನಲ್ಲೇ ಶೇರ್ ಮಾಡಲಾಗಿತ್ತು.
ಇದಲ್ಲದೇ ಕೆಂಪೇಗೌಡ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಗಳಿಸಿದ್ದು, ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ರಂಗೇಗೌಡ ವಾಟ್ಸಪ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು, ಅಲ್ಲಿನ ಒಬ್ಬ ಟೀಚರ್ ಹಾಗೂ ಸ್ಥಳೀಯ ವರದಿಗಾರರೊಬ್ಬರಿಗೆ ತಿಳಿದಿತ್ತು ಎಂಬ ಮಾಹಿತಿ ದೊರೆತಿದೆ. ಇದನ್ನೂ ಓದಿ: ಮಂಗಳೂರು ದರ್ಗಾ ವಿವಾದ – ಇಂದು ತಾಂಬೂಲ ಪ್ರಶ್ನೆ, ಪೊಲೀಸ್ ಬಂದೋಬಸ್ತ್
ಆದರೆ ಈ ಇಬ್ಬರಿಗೂ ಕ್ಲರ್ಕ್ ರಂಗೇಗೌಡ ಹಣ ನೀಡಿ ಯಾರಿಗೂ ಹೇಳದಂತೆ ತಿಳಿಸಿದ್ದ. ಆದರೆ ಈ ಆರೋಪ ಪರೀಕ್ಷೆ ಮುಗಿದು ತಿಂಗಳು ಕಳೆದ ಬಳಿಕ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಗಡಿ ಇನ್ಸ್ಪೆಕ್ಟರ್ ಕಿವಿಗೆ ಗಾಳಿ ಮಾತು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸಂದೇಹ ವ್ಯಕ್ತವಾಗಿ ರಂಗೇಗೌಡನನ್ನು ಸೋಮವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ಡಿಡಿಪಿಐ ಮಾಗಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ
ಕೊಪ್ಪಳ: ಮಹಿಳೆಯೊಂದಿಗೆ ಅನುಚಿತ ವರ್ತಿಸಿದ ವ್ಯಕ್ತಿಯನ್ನು ಥಳಿಸಿ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ ಘಟನೆ ಜಿಲ್ಲೆಯ ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ನಡೆದಿದೆ.
ಕುಕನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ ಹನುಮಂತಪ್ಪ ಥಳಿತಕ್ಕೊಳಗಾದ ವ್ಯಕ್ತಿ. ಮದ್ಯದ ನಶೆಯಲ್ಲಿ ಹನುಮಮಂತಪ್ಪ ಗ್ರಾಮದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದ ಹಿನ್ನೆಲೆ ಗ್ರಾಮಸ್ಥರು ಥಳಿಸಿದ್ದಾರೆ. ಹನುಮಂತಪ್ಪನ ಕೈ ಕಾಲು ಕಟ್ಟಿ ಹಿಮ್ಮುಖವಾಗಿ ಮಲಗಿಸಿ ನಡು ರಸ್ತೆಯಲ್ಲಿ ಥಳಿಸಿದ್ದಾರೆ. ಥಳಿಸುತ್ತಿರುವ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.
ಮತ್ತೊಂದು ವಿಡಿಯೋದಲ್ಲಿ ಗ್ರಾಮಸ್ಥರು ಸತ್ಯ ಒಪ್ಪಿಕೊ ಎಂದು ಹೇಳುತ್ತಿದ್ದರೆ ಆರೋಪಿ ನಾನು ಏನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾನೆ. ಕೊನೆಗೆ ಗ್ರಾಮಸ್ಥರು ಆರೋಪಿಯನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಹನುಮಂತಪ್ಪನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
– ಅರಿಶಿಣ ಶಾಸ್ತ್ರದ ದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೋಲಾರ: ಕೇವಲ ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಮಂಗಸಂದ್ರ ಗ್ರಾಮದಲ್ಲಿ ನಡೆದಿದೆ.
ಮಂಗಸಂದ್ರ ಗ್ರಾಮದ ಸತೀಶ್ (30) ನೇಣಿಗೆ ಶರಣಾದ ಯುವಕ. ಬುಧವಾರ ಹಿರಿಯರ ಸಮ್ಮುಖದಲ್ಲಿ ಅದೇ ಗ್ರಾಮದಲ್ಲಿಯೇ ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮ ಕೂಡ ಮನೆ ಮಾಡಿತ್ತು. ಶುಕ್ರವಾರ ಮದುವೆ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯಬೇಕಿತ್ತು. ಆದರೆ ಆ ದಿನವೇ ಸತೀಶ್ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮೃತ ಸತೀಶ್ ಪದವಿ ಮುಗಿಸಿದ್ದು, ಕೋಲಾರದ ಉತ್ತರ ವಿಶ್ವವಿದ್ಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ. ಮದುವೆಗಾಗಿ ಮನೆಯಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಕೊರೊನಾ ಇರುವುದರಿಂದ ಸಿಂಪಲ್ ಆಗಿ ಮನೆಯ ಬಳಿ ಹತ್ತಿರದವರನ್ನು ಕರೆದು ಮದುವೆ ಮಾಡಬೇಕೆಂದು ನಿರ್ಧಾರ ಮಾಡಿದ್ದರು. ಎಂದಿನಂತೆ ಗುರುವಾರ ಕೆಲಸಕ್ಕೆ ಹೋಗಿದ್ದ ಸತೀಶ್, ಕತ್ತಲೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಫೋನ್ ಮಾಡಿದ್ದಾರೆ. ಆಗ ಸತೀಶ್ ಬೆಂಗಳೂರಿನಲ್ಲಿ ಇರೋದಾಗಿ ಹೇಳಿದ್ದನು. ರಾತ್ರಿ ಸುಮಾರು 10 ಗಂಟೆಗೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಗುರುವಾರ ರಾತ್ರಿ ಪೂರ್ತಿ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಗ್ರಾಮದ ಹೊರವಲಯ ತಮ್ಮ ಜಮೀನು ಬಳಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಜಮೀನಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿ, ಅಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯಕ್ಕೆ ಸತೀಶ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಸತೀಶ್ಗೆ ಮದುವೆ ಇಷ್ಟವಿರಲಿಲ್ಲ ಅದಕ್ಕೆ ಹೀಗೆ ಮಾಡಿಕೊಂಡಿರಬೇಕು ಎಂಬ ಮಾತು ಗ್ರಾಮದಲ್ಲಿ ಕೇಳಿಬರುತ್ತಿತ್ತು. ವಿಷಯ ತಿಳಿದು ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲಕ್ನೋ: ಖಾಸಗಿ ಕಾಲೇಜುವೊಂದರ ಗುಮಾಸ್ತ ತನ್ನ ಮನೆಯಲ್ಲೇ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.
ಖಾಸಗಿ ಕಾಲೇಜುವೊಂದರ ಗುಮಾಸ್ತ ತನ್ನ ಮನೆ ಕಾಲೇಜಿನ ಪಕ್ಕದಲ್ಲೇ ಇದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆಯಿಸಿ ಪರೀಕ್ಷೆ ಮಾಡಿದ್ದಾನೆ. ಜೊತೆಗೆ ವಿದ್ಯಾರ್ಥಿಗಳ ಜೊತೆ ಅಕ್ರಮವಾಗಿ ಬೇರೆಯವರ ಕೈಯಲ್ಲಿ ದುಡ್ಡು ಕೊಟ್ಟು ಪರೀಕ್ಷೆ ಬರೆಸುತ್ತಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗುಮಾಸ್ತನ ಮನೆಯ ಮೇಲೆ ದಾಳಿಮಾಡಿದ್ದಾರೆ. ದಾಳಿ ವೇಳೆ ಗುಮಾಸ್ತ ಎಸ್ಕೇಪ್ ಆಗಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗ ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದಾಗ ನಾವು ಇಲ್ಲಿ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಮನೆಯಲ್ಲಿ ವಿದ್ಯಾರ್ಥಿಗಳ ಜೊತೆ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳ ಆರಂಭಗೊಂಡಿದ್ದು, ಸುಮಾರು 56 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯನ್ನು ಕಟ್ಟುನಿಟ್ಟಿನಿಂದ ನಡೆಸಬೇಕು ಎಂದು ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ಬಹಳ ಪ್ರಯತ್ನ ಮಾಡುತ್ತಿದೆ. ಈ ನಡುವೆ ಈ ರೀತಿಯ ಅವ್ಯವಹಾರ ನಡೆಯುತ್ತಿರುವುದು ಕಂಡು ಶಿಕ್ಷಣ ಇಲಾಖೆ ತಲೆಕೆಡಿಸಿಕೊಂಡಿದೆ.
ಕಳೆದ ವಾರವಷ್ಟೇ ಹೇಗೆ ಮೋಸ ಮಾಡಿ ಪರೀಕ್ಷೆ ಬರೆಯಬೇಕು ಮತ್ತು ನೀವು ನೀವೇ ಮಾತನಾಡಿಕೊಂಡು ಪರೀಕ್ಷೆ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದ ಖಾಸಗಿ ಶಾಲೆಯ ಪ್ರಾಂಶುಪಾಲನನ್ನು ಬಂಧಿಸಲಾಗಿತ್ತು.
ಧಾರವಾಡ: ವಿದ್ಯಾಕಾಶಿ ಧಾರವಾಡಕ್ಕೆ ಪ್ರತಿ ದಿನ ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗ್ತಾರೆ. ಅವರು ಬಂದಾಗ ಅವರಿಗೆ ಉಳಿದುಕೊಳ್ಳಲು ವಸತಿ ನಿಲಯವೊಂದು ನಿರ್ಮಾಣ ಮಾಡಲಾಗಿದೆ. ಅದುವೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ. ಇದು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಸತಿ ನಿಲಯವಾಗಿದ್ದರೂ, ಇದನ್ನು ಕರ್ನಾಟಕ ವಿವಿ ಸುಪರ್ದಿಗೆ ನೀಡಲಾಗಿದೆ. ಕರ್ನಾಟಕ ವಿವಿಯ ಸಿಬ್ಬಂದಿಯೇ ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಾರೆ.
ವಸತಿ ನಿಲಯದಲ್ಲಿ ಕೆಲಸ ಮಾಡುವ ಕ್ಲರ್ಕ್ ಮೇಡಂ ಶಿಲ್ಪಾ ಏರೆಸಿಮೇ ಇಲ್ಲಿ ಬರುವ ವೃತ್ತಿ ನಿರತ ಹಾಗೂ ವಿದ್ಯಾರ್ಥಿನಿಯರ ಬಾಡಿಗೆ ಹಣವನ್ನ ಬ್ಯಾಂಕಿಗೆ ಕಟ್ಟಬೇಕು. ಆದರೆ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಇವರು ಸಿಕ್ಕಿ ಬಿದ್ದಿದ್ದಾರೆ. ಈ ವಸತಿ ನಿಲಯದಲ್ಲಿ ಬಂದು ತಂಗುವ ಅತಿಥಿಗಳಿಗೆ ಪ್ರತಿ ದಿನಕ್ಕೆ 60 ರೂಪಾಯಿ ಬಾಡಿಗೆ ಇದೆ. ಇಲ್ಲಿ ಬಂದು ತಂಗುವವರು ಬ್ಯಾಂಕಿಗೆ ಹೋಗಿ ಹಣ ಕಟ್ಟಿ ಬರಬೇಕು. ಆದರೆ ಈ ಕ್ಲರ್ಕ್ ಅಮ್ಮಾ ಅದನ್ನು ಬ್ಯಾಂಕಿಗೆ ಕಟ್ಟದೇ ತನ್ನ ಜೇಬಿಗೆ ಇಳಿಸುತ್ತಿರುವುದು ಕಂಡು ಬಂದಿದೆ.
ಬಂದವರು ಯಾರು, ಅವರ ಗುರುತಿನ ಚೀಟಿ ಕೂಡಾ ಇಲ್ಲದೇ ಅವರಿಗೆ ಇಲ್ಲಿ ದಾಖಲಾತಿ ನೀಡಲಾಗುತ್ತಿದೆ. ಇಲ್ಲಿ ಒಬ್ಬ ಗೆಸ್ಟ್ ತಂಗಿದರೆ ಅವರಿಗೆ ಪ್ರತಿ ತಿಂಗಳಿಗೆ 1,800 ಬಾಡಿಗೆ ಇರುತ್ತದೆ. ಪ್ರತಿ ತಿಂಗಳು ಇಲ್ಲಿ 150 ಕ್ಕೂ ಹೆಚ್ಚು ಅತಿಥಿಗಳು ಬಂದು ಇರುತ್ತಾರೆ. ಆದರೆ ಅದರಲ್ಲಿ ಅರ್ಧ ಹಣ ಇದೇ ಕ್ಲರ್ಕ್ ಲಪಟಾಯಿಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಸೇರಬೇಕಾಗಿದ್ದ ಹಣದಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ಹಣ ಗುಳುಂ ಮಾಡಲಾಗುತ್ತಿದೆ.
ನೆಟ್-ಸೆಟ್ ಪರೀಕ್ಷೆಗಳಿದ್ದಾಗ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ. ಒಂದು ದಿನ ಬಂದು ಹೋಗುವ ಗೆಸ್ಟ್ ಗಳ ಲೆಕ್ಕವೇ ಇಲ್ಲಿ ಇಲ್ಲದಂತಾಗಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡುವ ವೇಳೆ ಕ್ಲರ್ಕ್, 4 ದಿನ ವಸತಿ ನಿಲಯದಲ್ಲಿ ಬಂದು ಇರುವ ಆ ವಿದ್ಯಾರ್ಥಿನಿಯ ಹಣ ಪಡೆದು, ಬ್ಯಾಂಕಿಗೆ ಕೂಡಾ ಕಟ್ಟಿಲ್ಲ. ಪ್ರತಿ ದಿನಕ್ಕೆ 60 ರಂತೆ ನಾಲ್ಕು ದಿನದ 240 ಹಣ ಕಟ್ಟಿರುವ ವಿದ್ಯಾರ್ಥಿನಿ ಜೊತೆ ಮಾತನಾಡಿರುವ ಕ್ಲರ್ಕ್ ಮೇಡಮ್, ವಿದ್ಯಾರ್ಥಿನಿ ಕೊಟ್ಟ ಹಣವನ್ನ ಬ್ಯಾಂಕ್ ಚಲನ್ ನಲ್ಲಿ ಸುತ್ತಿ ಇಟ್ಟುಕೊಂಡಿದ್ದಾಳೆ. ಇನ್ನು ಆ ವಿದ್ಯಾರ್ಥಿನಿ ಅಲ್ಲಿ ಬಂದು ಇದ್ದಳೋ, ಅಥವಾ ಇಲ್ಲವೋ ಎಂದು ಕೂಡಾ ಮೇಡಮ್ಗೆ ಗೊತ್ತೇ ಇಲ್ಲ. ಸರ್ಕಾರಿ ಸಂಬಳ ಪಡೆಯುವ ಶಿಲ್ಪಾ ಮೇಡಮ್ ಗೆ ಗಿಂಬಳ ಕೂಡಾ ಬೇಕೇ ಬೇಕು.
ಒಟ್ಟಿನಲ್ಲಿ ಸರ್ಕಾರಕ್ಕೆ ಕಟ್ಟುವ ಹಣ ಎಲ್ಲಾ ಮೇಡಮ್ ಅವರ ಪರ್ಸ್ನಲ್ಲಿ ಇಳಿಯುತ್ತಿದ್ದು, ಪ್ರತಿ ವರ್ಷ ಇವರು ಮಾಡಿದ ಈ ಕೆಲಸದಿಂದ ಸರ್ಕಾರಕ್ಕೆ 2 ಲಕ್ಷ ನಷ್ಟ ಆಗುತ್ತಿದೆ. ಇದರ ಹಿಂದೆ ಇನ್ನು ಎಷ್ಟು ಜನರು ಕೂಡಿ ಇದನ್ನು ಮಾಡುತ್ತಿದ್ದಾರೆ. ಅನ್ನೋದನ್ನು ಕರ್ನಾಟಕ ವಿವಿ ಆಡಳಿತ ಮಂಡಳಿಯೇ ತನಿಖೆ ನಡೆಸಬೇಕಿದೆ.
ಕ್ಲರ್ಕ್ ಹಾಗೂ ವಿದ್ಯಾರ್ಥಿನಿ ನಡುವೆ ನಡೆದ ಮಾತುಕತೆ: ವಿದ್ಯಾರ್ಥಿನಿ: ಮೇಡಮ್ ಹಾಸ್ಟೇಲ್ ಅಡ್ಮಿಷನ್ ಆಗಬೇಕಿತ್ತು. ಕ್ಲರ್ಕ್ ಶಿಲ್ಪಾ: ಇಲ್ಲ ಕೊಡಲ್ಲ, ಯಾರು ನೀವು?
ವಿದ್ಯಾರ್ಥಿನಿ: ನಾನು ಬಿಕಾಂ ಮುಗಿಸಿದ್ದೇನೆ, ಈಗ ಎಂಕಾಂ ಮಾಡೋಕೇ ಬಂದಿದ್ದೆನೆ, ಸ್ವಲ್ಪ ತೊಂದರೆ ಇರುವ ಕಾರಣ 10 ದಿನ ಇಲ್ಲೇ ಇರಬೇಕಾಗಿದೆ. ಕ್ಲರ್ಕ್ ಶಿಲ್ಪಾ: ಟೆನ್ ಡೇಸ್ ಅಷ್ಟೇನಾ? ಇದೇ ಯುನಿವರ್ಸಿಟಿ ಸ್ಟುಡೆಂಟಾ! ಮತ್ತೇ ಯುನಿಫಾರ್ಮ್ನಲ್ಲಿ ಬಂದಿರಲ್ಲ?
ವಿದ್ಯಾರ್ಥಿನಿ: ಮೊದಲು ನಾನು ಬೇರೆ ಕಾಲೇಜಿನಲ್ಲಿ ಓದ್ತಿದ್ದೆ, ಆ ಕಾಲೇಜಿನ ಡ್ರೆಸ್ ಇದು ಮೇಡಮ್. ಕ್ಲರ್ಕ್ ಶಿಲ್ಪಾ: 10 ಡೇಸ್ ಇರ್ತಿರಾ ಅಂದ ಮೇಲೆ ಹಾಲ್ನಲ್ಲಿ ಇರ್ತಿರಾ?
ವಿದ್ಯಾರ್ಥಿನಿ: ನಡೆಯುತ್ತೆ ಮೇಡಮ್. ಕ್ಲರ್ಕ್ ಶಿಲ್ಪಾ: ನಡೀತದಾ, ಓಕೆ ಹಾಗಿದ್ರೆ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಕೊಡಿ.
ವಿದ್ಯಾರ್ಥಿನಿ: ನಾಳೆ ತಂದು ಕೊಡುತ್ತೇನೆ ಮೇಡಂ, ಸದ್ಯಕ್ಕೆ ಅಮೌಂಟ್ ಕೊಟ್ಟು ಹೋಗ್ತೇನೆ. ಕ್ಲರ್ಕ್ ಶಿಲ್ಪಾ: ಸರಿ ಕೊಟ್ಟು ಹೋಗಿ, ಒಂದು ಆಧಾರ ಜೆರಾಕ್ಸ್ ಇಲ್ವಾ, ನಿಮ್ಮ ಹೆಸರೆನು?
ವಿದ್ಯಾರ್ಥಿನಿ: ಸೌಮ್ಯ ಪತ್ರಿಮಠ ಕ್ಲರ್ಕ್ ಶಿಲ್ಪಾ: 10 ಡೇಸ್ ಅಷ್ಟೇ ಇರಬೇಕು. ಮತ್ತೆ ವರ್ಷಗಟ್ಟಲೆ ಇರೋ ಹಾಗಿಲ್ಲ.
ವಿದ್ಯಾರ್ಥಿನಿ: ನಾನು ಪಿಜಿಯಲ್ಲಿ ಇದ್ದೆ ಮೇಡಮ್, ಸ್ವಲ್ಪ ಪ್ರಾಬ್ಲಂ ಆಗಿದೆ. ಅದಕ್ಕೆ ಇಲ್ಲಿ ಬಂದಿದ್ದೇನೆ. ಕ್ಲರ್ಕ್ ಶಿಲ್ಪಾ: ಹೌದಾ, ಹಾಲ್ನಲ್ಲಿರಬೇಕು ನೋಡಿ
ವಿದ್ಯಾರ್ಥಿನಿ: ಮೇಡಂ ಹಾಲ್ ಎಲ್ಲಿದೆ? ಕ್ಲರ್ಕ್ ಶಿಲ್ಪಾ: ಮೇಲಿದೆ, ನೋಡ್ಕೊಂಡ್ ಬರ್ತಿರಾ,
ವಿದ್ಯಾರ್ಥಿನಿ: ಅಮೌಂಟ್ ಎಷ್ಟು ಮೇಡಮ್, ನಾನು 10 ದಿನ ಇರುತ್ತೇನೆ. ಸದ್ಯ 5 ದಿನದ ಅಮೌಂಟ್ ತಗೊಳ್ಳಿ ಮೇಡಮ್, ಕ್ಲರ್ಕ್ ಶಿಲ್ಪಾ: ಹೌದಾ ಓಕೆ.. ನಿಮ್ ಆಧಾರ್ ಕಾರ್ಡ್ ಜೆರಾಕ್ಸ್ ಬೇಕಲ್ವ.. ನಾಳೆ ತಗೊಂಡ ಬರ್ತಿರಾ..?
ವಿದ್ಯಾರ್ಥಿನಿ: ಸರಿ ಮೇಡಮ್ ಕ್ಲರ್ಕ್ ಶಿಲ್ಪಾ: ಹೆಸರು ಹೇಳ್ರಿ ನಿಮ್ದು,
ವಿದ್ಯಾರ್ಥಿನಿ: ಸೌಮ್ಯ ಪತ್ರಿಮಠ ಕ್ಲರ್ಕ್ ಶಿಲ್ಪಾ: ಯಾವ ಊರು ನಿಮ್ದು
ವಿದ್ಯಾರ್ಥಿನಿ: ದೇಗುನ ಹಳ್ಳಿ ಕ್ಲರ್ಕ್ ಶಿಲ್ಪಾ: ಎಲ್ಲಿದೆ ಅದು
ವಿದ್ಯಾರ್ಥಿನಿ: ಕಿತ್ತೂರ ತಾಲೂಕು ಮೇಡಮ್ ಕ್ಲರ್ಕ್ ಶಿಲ್ಪಾ: ಇಲ್ಲೊಂದು ಸಹಿ ಮಾಡಿ, ನಾಳೆ ಬರಬೇಕು ಮತ್ತೆ.. ಬಂದು ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕು. ನಿಮ್ ಜೊತೆ ಬಂದವರು ಎಲ್ಲಿರುತ್ತಾರೆ?
ವಿದ್ಯಾರ್ಥಿನಿ: ಅವರು ಲೋಕಲ್ ಮೇಡಮ್.. ಕ್ಲರ್ಕ್ ಶಿಲ್ಪಾ: ಲೋಕಲ್ಲ.. ನಾಳೆ ಬರಬೇಕು.. ಆಧಾರ್ ಕಾರ್ಡ್ ಜೆರಾಕ್ಸ್ ತನ್ನಿ. ಒಂದು ವೇಳೆ ನಾನು ನಾಳೆ ಇಲ್ಲದೇ ಇದ್ದರೂ ಡೋರ್ ಕೆಳಗೆ ಹಾಕಿ.. ಚೇಂಜ್ ಕೊಡಿ ಚೇಂಜ್ ಬೇಕು. ಇದು ಅಂಗಡಿ ಅಲ್ಲ, ಚಲನ್ ತುಂಬಿಸೋದು ಅಷ್ಟೇ ಕೆಲಸ ಇಲ್ಲಿ. ಯಾವುರು ನಿಮ್ದು..?
ವಿದ್ಯಾರ್ಥಿನಿ: ದೇಗುನಹಳ್ಳಿ ಕ್ಲರ್ಕ್ ಶಿಲ್ಪಾ: ಎಲ್ಲದು?
ವಿದ್ಯಾರ್ಥಿನಿ: ಕಿತ್ತೂರ್ ಕ್ಲರ್ಕ್ ಶಿಲ್ಪಾ: ಬೆಳಗಾವಿಯಾ
ಪಕ್ಕದ ಗೆಳತಿ ಬಳಿ ಚೆಂಜ್ ತೆಗೆದುಕೊಂಡ ವಿದ್ಯಾರ್ಥಿನಿ ಮೇಡಮ್ ಬಳಿ ಕೊಡುತ್ತಾಳೆ.
ವಿದ್ಯಾರ್ಥಿನಿ: ಬಿಸಿಎಂ ಹಾಸ್ಟೆಲ್ಗೆ ಅರ್ಜಿ ಹಾಕಿದ್ದೇನೆ ಕ್ಲರ್ಕ್ ಶಿಲ್ಪಾ: ಬಿಸಿಎಂಗೆ ಹಾಕಿದ್ದಿರಾ?
ವಿದ್ಯಾರ್ಥಿನಿ: ಮೇಡಮ್ ಸದ್ಯಕ್ಕೆ 250 ರೂ ಇವೆ.. ಅಷ್ಟೇ ಚಲನ್ ನಲ್ಲಿ ತುಂಬಿದ್ರೆ ನಡೆಯುತ್ತಾ! ಕ್ಲರ್ಕ್ ಶಿಲ್ಪಾ: ನಾನು ನಿನ್ ಚಲನ್ ಬರೆದಿಲ್ಲಾ, ನಾನು ಆಧಾರ್ ಕಾರ್ಡ್ ಕೊಟ್ಟ ಮೇಲೆ ಚಲನ್ ಬರೆಯುವೆ.. ಇದು ಹಾಗೆ ದುಡ್ ಜೊತೆ ಚಲನ್ ಇಟ್ಕೊತೆನೆ, ನಾಳೆ ಕೊಡ್ರಿ..
ವಿದ್ಯಾರ್ಥಿನಿ ಗೆಳತಿ: ಇವತ್ತು ಇಷ್ಟು ದುಡ್ಡು ಇಟ್ಕೊಂಡ್ ಬಿಡಿ ಮೇಡಮ್ ಕ್ಲರ್ಕ್ ಶಿಲ್ಪಾ: ಇವತ್ತು ಇಷ್ಟೇ ತಗೊತೀನಿ, ನಾಳೆ ಉಳಿದ ದುಡ್ಡು ಕೊಡಿ, ನಿಮ್ ಚಲನ್ ಈಗಲೇ ತುಂಬಲ್ಲ, ನಾಳೆ ನೀವು ಬಂದು ಆಧಾರ್ ಕಾರ್ಡ್ ಕೊಟ್ಟ ಮೇಲೆ ತುಂಬ್ತನೆ..
ವಿದ್ಯಾರ್ಥಿನಿ: ಮೇಡಮ್ ರೂಂ ಎಲ್ಲಿದೆ ಕ್ಲರ್ಕ್ ಶಿಲ್ಪಾ: ನೋಡಿ ಬನ್ನಿ ಮೇಲಿದೆ ಹಾಲ್, ಮೇಲೆ ಹತ್ತಿ ಹೋಗಿ
ಪಾಟ್ನಾ: ಒಂಬತ್ತು ತಿಂಗಳಿನಿಂದ ನಿರಂತರವಾಗಿ ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಾಚಾರ್ಯನೊಬ್ಬನನ್ನು ಬಿಹಾರದ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ.
ಪಾಟ್ನಾದ ಫುಲ್ವಾರಿ ಶರೀಫ್ ನಗರ ಖಾಸಗಿ ಶಾಲೆಯೊಂದರ ಪ್ರಾಚಾರ್ಯ ಇಂತಹ ಅಮಾನವೀಯ ಕೃತ್ಯ ಎಸಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಲೆಯ ಕ್ಲರ್ಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದದ್ದು ಏನು?
ಬುಧವಾರ ಶಾಲೆಯಿಂದ ಬಂದ ಬಾಲಕಿ ವಾಂತಿ ಮಾಡಿಕೊಂಡಿದ್ದಾಳೆ. ಅಸ್ವಸ್ಥವಾಗಿದ್ದ ಆಕೆಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಬಾಲಕಿಯನ್ನು ವಿಚಾರಿಸಿದಾಗ ಪ್ರಾಚಾರ್ಯ ಅತ್ಯಾಚಾರ ಎಸಗಿರುವುದು ಬೆಳಕಿದೆ ಬಂದಿದೆ.
ನಿನ್ನ ಪುಸ್ತಕ ನೋಡಬೇಕು ತಗೆದುಕೊಂಡು ಆಫೀಸ್ಗೆ ಬಾ ಅಂತ ಪ್ರಾಚಾರ್ಯರು ಹೇಳಿದ್ದರು. ನಾನು ಆಫೀಸ್ಗೆ ಹೋದಾಗ ಹೆದರಿಸಿ, ನನ್ನ ಮೇಲೆ ಮೊದಲ ಬಾರಿಗೆ ಪ್ರಾಚಾರ್ಯ ಅತ್ಯಾಚಾರ ಎಸಗಿದ್ದ. ಜೊತೆಗೆ ಪ್ರಾಚಾರ್ಯನ ಈ ಕೃತ್ಯವನ್ನು ಶಾಲೆಯ ಕ್ಲರ್ಕ್ ವಿಡಿಯೋ ಮಾಡಿದ್ದ ಎಂದು ಸಂತ್ರಸ್ತ ಬಾಲಕಿ ಮಾಹಿತಿ ನೀಡಿದ್ದಾಳೆ.
ಕಳೆದ ಒಂಬತ್ತು ತಿಂಗಳಿನಿಂದಲೂ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಕ್ಲಾರ್ಕ್ ಹೆದರಿಸುತ್ತಿದ್ದ. ಅಷ್ಟೇ ಅಲ್ಲದೆ ಚಾಕು ತೊರಿಸಿ ಬಲವಂತವಾಗಿ ಆಫೀಸ್ ರೂಮ್ಗೆ ಕರೆಸಿಕೊಂಡು ಪ್ರಾಚಾರ್ಯ ಅತ್ಯಾಚಾರ ಎಸಗುತ್ತಿದ್ದ ಎಂದು ವಿವರಿಸಿದ್ದಾಳೆ.
ಬಾಲಕಿಯನ್ನು ಅತ್ಯಾಚಾರ ಮಾಡಲು ಆಫೀಸ್ನಲ್ಲಿಯೇ ಪ್ರತ್ಯೇಕ ರೂಮ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಪ್ರಾಚಾರ್ಯ ಇಂತಹ ಕೃತ್ಯಗಳನ್ನು ಎಸಗುತ್ತಿದ್ದ ಎಂದು ವರದಿಯಾಗಿದೆ.
ಸಂತ್ರಸ್ತ ಬಾಲಕಿ ಹಾಗೂ ಪೋಷಕರ ಹೇಳಿಕೆಯ ಅನ್ವಯ ಫುಲ್ವಾರಿ ಶರೀಫ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಆರೋಪಿಗಳಾದ ಪ್ರಾಚಾರ್ಯ ಹಾಗೂ ಕ್ಲರ್ಕ್ ನನ್ನು ಬಂಧಿಸಿ, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮೈಸೂರು: ನಗರದ ಮಹಾ ನಗರಪಾಲಿಕೆಯಲ್ಲಿ ಲಂಚಾವತಾರದ ಸದ್ದು ಜೋರಾಗಿದೆ. ಪಾಲಿಕೆಯ ವ್ಯಾಪ್ತಿಯ ರೋಜ್ ಗಾರ್ ಯೋಜನೆಯಲ್ಲಿ ಸಾಲ ಕೊಡಿಸಲು ಪಾಲಿಕೆಯ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರನೊಬ್ಬ ಲಂಚ ಸ್ವೀಕರಿಸುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಪಾಲಿಕೆಯಲ್ಲಿ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರ ಶಿವಕುಮಾರ್ ಎಂಬಾತ ಲಂಚ ಸ್ವೀಕರಿಸಿದ್ದಾನೆ. ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾನೆ. ಮೂಲ ಹುದ್ದೆಯಲ್ಲಿ ಮಾಲಿ ಎಂದು ಉಲ್ಲೇಖವಾಗಿದ್ದರು ತಾನೂ ಕ್ಲರ್ಕ್ ಎಂದು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾನೆ.
ತೇಜಸ್ಕುಮಾರ್ ಎಂಬವರಿಂದ 10 ಸಾವಿರ ಲಂಚ ಕೇಳಿ 3 ಸಾವಿರ ರೂ. ಹಣ ಸ್ವೀಕರಿಸಿದ್ದಾನೆ. 15 ದಿನದಲ್ಲಿ ಸಾಲ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದಾನೆ. ಪ್ರಶಾಂತ್ ಎಂಬ ಮಧ್ಯವರ್ತಿಯನ್ನ ಬಳಸಿಕೊಂಡು ಶಿವಕುಮಾರ್ ಲಂಚಾವತಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಸಾಲ ಕೇಳಿ ಬರುವವರಿಗೆ ಪುಸಲಾಯಿಸಿ ಲಂಚ ಪಡೆಯುವ ಈತನ ಅಸಲಿ ಬಣ್ಣವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಣ ಕಳೆದುಕೊಂಡು ಸಾಲವು ದೊರೆಯದ ಸಾರ್ವಜನಿಕರು ಈತನ ವಿರುದ್ಧ ಧ್ವನಿ ಎತ್ತಿದ್ದಾರೆ.