ತಮ್ಮ ಹುಟ್ಟುಹಬ್ಬಕ್ಕೆ (Birthday) ಕೇಕ್, ಹಾರ, ತುರಾಯಿ ತರದೇ ದಿನಸಿ (Grocery) ಸಾಮಾಗ್ರಿಗಳನ್ನು ನೀಡುವಂತೆ ದರ್ಶನ್ (Darshan) ಅಭಿಮಾನಿಗಳಿಗೆ ಕರೆಕೊಟ್ಟಿದ್ದರು. ಅದರಂತೆ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ದಿನಸಿ ನೀಡಿದ್ದರು. ಆ ದಿನಸಿಗಳನ್ನು ಇಂದು ಪೌರಕಾರ್ಮಿಕರಿಗೆ (Civic workers) ವಿತರಣೆ ಮಾಡಲಾಗಿದೆ.
ಪ್ರತಿ ವರ್ಷವೂ ದಿನಸಿಗಳನ್ನು ತಂದುಕೊಂಡುವಂತೆ ದರ್ಶನ್ ಮನವಿ ಮಾಡುತ್ತಾರೆ. ಅಕ್ಕಿ, ಬೆಳೆ ಸೇರಿದಂತೆ ಅಭಿಮಾನಿಗಳು ಕೊಟ್ಟ ದಿನಸಿಗಳನ್ನು ಕೆಲ ವರ್ಷಗಳ ಕಾಲ ಸಿದ್ಧಗಂಗಾ ಮಠಕ್ಕೆ ನೀಡಿದ್ದರು. ಜೊತೆಗೆ ಅನಾಥಾಶ್ರಮಗಳಿಗೂ ಕಳುಹಿಸಿಕೊಟ್ಟಿದ್ದರು. ಈ ಬಾರಿ ಪೌರಕಾರ್ಮಿಕರ ಹಂಚಿದ್ದಾರೆ.
ಈ ಬಾರಿ ದರ್ಶನ್ ಹುಟ್ಟು ಹಬ್ಬ ವಿಶೇಷವಾಗಿತ್ತು. ಫೆ.16ರಂದು ಅಭಿಮಾನಿಗಳ ಸಮ್ಮುಖದಲ್ಲಿ ಮನೆ ಮುಂದೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರೆ, 17ನೇ ತಾರೀಖು ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾಗಿ ಬೆಳ್ಳಿ ಪರ್ವ ಕಾರ್ಯಕಮ ನಡೆಯಿತು. ದರ್ಶನ್ ಸಿನಿಮಾ ರಂಗಕ್ಕೆ ಬಂದು 15 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದೆ.
ಈ ನಡುವೆ ಮತ್ತೊಂದು ಸಂಭ್ರಮದ ವಿಚಾರವೆಂದರೆ, ದರ್ಶನ್ ನಟನೆಯ ಕಾಟೇರ ಸಿನಿಮಾ ನಿನ್ನೆಗೆ 50 ದಿವಸಗಳನ್ನು ಪೂರೈಸಿದೆ. ನಿನ್ನೆಯೂ ಆ ಸಂಭ್ರಮವನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ನಡೆದಿದೆ.
ಚಿಕ್ಕೋಡಿ: ಬೆಳಗಾವಿ (Belgavi) ಜಿಲ್ಲೆಯ ಅಥಣಿ (Athani) ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ಪುರಸಭೆ ವಾಹನಗಳ ಮೂಲಕ ಕಸ ಸಂಗ್ರಹಿಸುವ ಪೌರಕಾರ್ಮಿಕರು (Civic Worker) ಕಸದಲ್ಲಿ ದೊರೆತ 50 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಸಂಬಂಧಪಟ್ಟ ಮಾಲೀಕರಿಗೆ ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರತಿದಿನದಂತೆ ಮುಂಜಾನೆ ಎಂ.ಜಿ. ಮಾರ್ಕೆಟ್ನಲ್ಲಿ (M.G.Market) ಕಸ ಸಂಗ್ರಹಿಸಿದ ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ವಾಹನ ಚಾಲಕ ಬಸವರಾಜ ಕೋರಿ ಪಟ್ಟಣದ ಹೊರವಲಯದಲ್ಲಿ ವಾಹನದಲ್ಲಿನ ಕಸವನ್ನು ವಿಲೇವಾರಿ ಮಾಡಿದ್ದರು. ಚಿನ್ನದ ಸರವನ್ನು ಕಳೆದುಕೊಂಡ ಮಾಳಿ ಜ್ಯುವೆಲರಿ ಮಾಲೀಕರು ಕಾಗದ ಒಂದರಲ್ಲಿ ಪ್ಯಾಕ್ ಮಾಡಿಟ್ಟಿದ್ದ ಚಿನ್ನದ ಸರ ಕಸದ ಡಬ್ಬಿಯಲ್ಲಿ ಹೋಗಿರುವ ಸಂದೇಹವಿದೆ. ಸ್ವಲ್ಪ ಹುಡುಕಿ ನೋಡಿ ಎಂದು ಪೌರಕಾರ್ಮಿಕರಿಗೆ ಹೇಳಿದ್ದಾರೆ. ಇದನ್ನೂ ಓದಿ: ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್
ನಂತರ ಎರಡನೇ ಬಾರಿಗೆ ಕಸ ವಿಲೇವಾರಿ ಮಾಡಲು ಹೋದಾಗ ಮೊದಲನೇ ಬಾರಿ ವಿಲೇವಾರಿ ಮಾಡಿದ್ದ ಕಸದಲ್ಲಿ ಚಿನ್ನದ ಸರ ದೊರಕಿದ್ದು, ಅದನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ಬಸವರಾಜು ಕೋರಿ ಅವರನ್ನು ಪಟ್ಟಣದ ವ್ಯಾಪಾರಸ್ಥರು, ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಮತ್ತು ಪೌರಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಕಾಂಬಳೆ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ- ವೀಡಿಯೋ ಮಾಡಿ ತಪ್ಪೊಪ್ಪಿಕೊಂಡ ತಂದೆ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಸಂಪುಟದಲ್ಲಿ (Legislative Assembly) ಪೌರ ಕಾರ್ಮಿಕರ (Civic Workers) ಕಾಯಂ ಮಾಡುವ ತೀರ್ಮಾನ ತೆಗೆದುಕೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಇಂದು ಪೌರಕಾರ್ಮಿರ ದಿನಾಚರಣೆಯ ಪ್ರಯುಕ್ತ ಉಪಾಹಾರ ಸವಿದಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪೌರಕಾರ್ಮಿಕರು ಯಾವ ರೀತಿ ಕೆಲಸ ಮಾಡ್ತಾರೆ ಅಂತಾ ನೋಡಿದ್ರೆ ಕಣ್ಣೀರು ಬರುತ್ತೆ ಎಂದು ಭಾವುಕರಾಗಿದ್ದಾರೆ.
ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗಾಗಿ ಒಂದು ಸಮಿತಿ ಮಾಡಿದ್ದೇವೆ. ಅಲ್ಲದೇ 11,133 ಪೌರ ಕಾರ್ಮಿಕರ ಕಾಯಂ ನೇಮಕಾತಿಯನ್ನು ತಕ್ಷಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ 43 ಸಾವಿರ ಪೌರಕಾರ್ಮಿಕರನ್ನೂ ಕಾಯಂ ಮಾಡಲಾಗುತ್ತದೆ. ಪೌರಕಾರ್ಮಿಕರಿಗೆ ಸೇವೆ ಮಾಡಲು ಭಗವಂತ ಅವಕಾಶ ಕೊಟ್ಟಿದ್ದಾನೆ. ಈ ವಿಚಾರದಲ್ಲಿ ಯಾರೂ ಗೊಂದಲ ಮಾಡಿಕೊಳ್ಳುವ ಅಗತ್ಯ ಇಲ್ಲ. ನಾನು ಸಿಎಂ ಆಗಿ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?
ಪೌರಕಾರ್ಮಿಕರು ಯಾವ ರೀತಿ ಕೆಲಸ ಮಾಡ್ತಾರೆ ಅಂತಾ ನೋಡಿದ್ರೆ ಕಣ್ಣೀರು ಬರುತ್ತೆ, ಯಾರಾದ್ರು ಸೇವೆ ಮಾಡಬೇಕು ಅಂದ್ರೆ ಮೊದಲು ನಿಮ್ಮ ಸೇವೆ ಮಾಡಬೇಕು. ನಮ್ಮ ಸರ್ಕಾರದಲ್ಲಿ ಎಲ್ಲರಿಗೂ ಸೇವಾ ಭದ್ರತೆ ಕೊಟ್ಟೆ ಕೊಡ್ತೀವಿ. ಹಿಂದಿನ ಸರ್ಕಾರಗಳು ಮಾಡದೇ ಇರೋದನ್ನ ನಮ್ಮ ಸರ್ಕಾರ ಮಾಡಿದೆ. ಇತರೆ ಸೌಲಭ್ಯ ಏನೇ ಇದ್ರು ನಮ್ಮ ಗಮನಕ್ಕೆ ತನ್ನಿ, ಅದನ್ನೂ ಮಾಡುವ ಕೆಲಸ ಮಾಡ್ತೀನಿ ಎಂಬ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ (Govind Karjol), ಕೋಟಾ ಶ್ರೀನಿವಾಸ ಪೂಜಾರಿ, ಸಿಸಿ ಪಾಟೀಲ್ ಪರಿಷತ್ ಸದಸ್ಯರಾದ ಚಲವಾದಿ ನಾರಾಯಣ ಸ್ವಾಮಿ, ಶಾಸಕ ಎನ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
ತವರು ಕ್ಷೇತ್ರದಲ್ಲೇ ಗ್ರಾಮವಾಸ್ತವ್ಯ:
ಮುಂದಿನ ವಾರದಿಂದ ಸಿಎಂ ಬೊಮ್ಮಾಯಿ 52 ವಿಧಾನಸಭಾ ಕ್ಷೇತ್ರಗಳ ಪ್ರವಾಸದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಹೂಡಲು ಸಿದ್ಧತೆ ನಡೆಸಿದ್ದಾರೆ. ತವರು ಕ್ಷೇತ್ರದಿಂದಲೇ ಗ್ರಾಮ ವಾಸ್ತವ್ಯಕ್ಕೆ ಚಿಂತಿಸಿರುವ ಸಿಎಂ, ಗ್ರಾಮವಾಸ್ತವ್ಯ ಮೂಲಕ ಶಿಗ್ಗಾಂವಿ ಮತದಾರರತ್ತಲೂ ಗಮನಹರಿಸಲು ಸಜ್ಜಾಗಿದ್ದಾರೆ. ರಾಜಕೀಯ ಒತ್ತಡದ ಮಧ್ಯೆಯೂ ಸ್ವಂತ ಕ್ಷೇತ್ರದತ್ತ ಹೆಚ್ಚು ಸುಳಿಯದ ಸಿಎಂ, ಇದೀಗ ಗ್ರಾಮ ವಾಸ್ತವ್ಯದ ಮೂಲಕ ಮತದಾರರ ವಿಶ್ವಾಸ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ 35 ಕ್ರಿಮಿನಲ್ ಕೇಸ್ಗಳನ್ನು (Criminal Case) ಹಿಂಪಡೆಯಲು ರಾಜ್ಯ ಸರ್ಕಾರ (Karnataka Government) ನಿರ್ಧರಿಸಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು (BJP Workers), ಹಿಂದೂ ಕಾರ್ಯಕರ್ತರು (Hindu Activists), ರೈತ ಮುಖಂಡರು ಮತ್ತು ಕನ್ನಡ ಪರ ಕಾರ್ಯಕರ್ತರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸಂಪುಟ ಉಪಸಮಿತಿ ಶಿಫಾರಸುಗಳನ್ನು ಆಧರಿಸಿ ಹಿಂಪಡೆಯಲು ನಿರ್ಧರಿಸಲಾಯ್ತು. ಆದರೆ ಯಾವ ಯಾವ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ
11,133 ಪೌರ ಕಾರ್ಮಿಕರಿಗೆ (Civic Workers) ಖಾಯಂ ನೌಕರಿ: ಸಿಹಿ ಸುದ್ದಿ ಅಂದ್ರೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳಲು ಸಂಪುಟ ನಿರ್ಧರಿಸಿದೆ. ಇದನ್ನೂ ಓದಿ: ಬಾಲಿವುಡ್ನ ಈ ನಟನ ಜೊತೆ ಹಸೆಮಣೆ ಏರಲು ರೆಡಿಯಾದ `ಗೂಗ್ಲಿ’ ನಟಿ
ಈ ನೌಕರರಿಗೆ 17,000-28,980 ವೇತನ ಶ್ರೇಣಿ ಅಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಅನೇಕ ದಿನಗಳಿಂದ ಹೋರಾಟ ಮಾಡ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಈ ಮಧ್ಯೆ ಮಹತ್ವದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಎಸ್ಎಸ್ಎಲ್ಸಿ ಬೋರ್ಡ್ನಲ್ಲಿ ಪಿಯುಸಿ ಬೋರ್ಡ್ ವಿಲೀನ ಮಾಡುವ ವಿಧೇಯಕವನ್ನು ನಾಳೆ ಸದನದಲ್ಲಿ ಮಂಡಿಸಲಾಗುತ್ತದೆ. ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಇದು ಕೂಡ ನಾಳೆ ಸದನದಲ್ಲಿ ಮಂಡನೆ ಆಗಲಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಇಂದಿರಾ ಕ್ಯಾಂಟೀನ್ ಊಟ ಮಾಡಿದ್ರೆ ಸ್ಮಶಾನಕ್ಕೆ ಹೋಗೊದು ಪಕ್ಕಾ ಅಂತೆ. ಬಡವರ ಹಸಿವು ನೀಗುತ್ತಿರುವ ಊಟ ಸ್ಲೋ ಪಾಯ್ಸನ್ ಆಗುತ್ತಿದೆ. ಹಾಗಿದ್ರೆ ವಿಷ ಯಾವುದು..? ತಿಂದರೆ ಏನ್ ಕಾಯಿಲೆ ಬರುತ್ತೆ..? ಈ ವಿಷ ತಿನ್ನುತ್ತಿರುವವರು ಯಾರು..? ಇದು ವಿಷ ಎಂದು ಸಾಬೀತಾಗಿದು ಹೇಗೆ? ನಿಮ್ಮೆಲ್ಲ ಈ ಕುತೂಹಲ ಮೂಡಿಸಿರೊ ಪ್ರಶ್ನೆಗಳಿಗೆ ಈ ಇನ್ವೆಷ್ಟಿಗೇಶನ್ ಸ್ಟೋರಿ ಇಲ್ಲಿದೆ.
ಪ್ರತಿನಿಧಿ: ಊಟ ಹೇಗಿದೆ? ಪೌರಕಾರ್ಮಿಕ: ನಾಯಿಗೆ ಹಾಕಿದಂತೆ ಹಾಕ್ತಾರೆ ಪ್ರತಿನಿಧಿ: ಊಟ ತಿಂದರೆ ಏನ್ ಆಗುತ್ತೆ? ಪೌರಕಾರ್ಮಿಕ: ಬೇದಿ ವಾಂತಿ ಆಗಿ ಒಬ್ಬರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಈಗ ಯಾರು ಊಟ ಮುಟ್ಟೊದೆ ಇಲ್ಲ. ಬೇರೆಯವರಿಗೆ ಗೊತ್ತಿಲ್ಲ ತಿನ್ನುತ್ತಾರೆ. ಆದ್ರೆ ನಾವು ಮುಟ್ಟಲ್ಲ. ಇದನ್ನ ತಿಂದು 10 ದಿನ ಮಲಗಿದ್ರೆ ಯಾರ್ ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಹೌದು. ಇದು ದಿನಾ ಬೆಳಗೆದ್ದು ರಾಜ್ಯ ರಾಜಧಾನಿಯನ್ನು ಸ್ವಚ್ಛಗೊಳಿಸೋ ಪೌರಕಾರ್ಮಿಕರ ಗೋಳಾಗಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಈ ಬಡ ಜೀವಗಳಿಗೆ ವಿಷ ಕೊಡಲು ಮುಂದಾಗಿದೆ. ಇಂದಿರಾ ಕ್ಯಾಂಟೀನ್ ಪೌರಕಾರ್ಮಿಕರಿಗೆ ನೀಡುತ್ತಿರೋ ಊಟ ಮನುಷ್ಯರು ಯಾಕೆ ಪ್ರಾಣಿಗಳು ತಿನ್ನಲೂ ಯೋಗ್ಯವಾಗಿಲ್ಲ. ರಾಜ್ಯ ಆಹಾರ ಇಲಾಖೆಯ ಪ್ರಯೋಗಾಲಯ ಹಾಗೂ ಎಂ.ಎಸ್ ರಾಮಯ್ಯ ಲ್ಯಾಬೋರೆಟರಿ ಪರೀಕ್ಷೆಯಲ್ಲಿ ಈ ಆಹಾರ ತಿನ್ನಲು ಯೋಗ್ಯವಿಲ್ಲ ಎಂದು ವರದಿ ನೀಡಿದೆ.
ಟಾಯ್ಲೆಟ್ ಬಳಿಯೇ ಊಟ..!
ಪೌರಕಾರ್ಮಿಕರಿಗೆ ನೀಡುತ್ತಿರುವ ಆಹಾರದ ಅಸಲಿಯತ್ತು ತಿಳಿಯಲು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಗೆ ಇಳಿಯಿತು. ಹೀಗೆ ಹೊರಟ ತಂಡಕ್ಕೆ ಸಿಎಂ ಮನೆ ಬಳಿಯೇ ಶಾಕ್ ಕಾದಿತ್ತು. ಆಗ ಸಿಎಂ ಮನೆಯ ಕೂಗಳತೆ ದೂರಲ್ಲಿ ಟಾಯ್ಲೆಟ್ ಪಕ್ಕದಲ್ಲೇ ಪೌರಕಾರ್ಮಿಕರಿಗೆ ಊಟ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಡಿಸಿಎಂ ಮನೆ ಬಳಿ ಬ್ಯಾಕ್ಟೀರಿಯಾಯುಕ್ತ ಪಲಾವ್..!
ಸಿಎಂ ಏರಿಯಾದಲ್ಲಿ ಪೌರಕಾರ್ಮಿಕರ ದುರವಸ್ಥೆ ಕಂಡ ತಂಡ ಅಲ್ಲಿಂದ ನೇರವಾಗಿ ಡಿಸಿಎಂ ಏರಿಯಾಗೆ ತೆರಳಿತು. ಅಲ್ಲಿನ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಪೌರಕಾರ್ಮಿಕರಿಗೆ ರಸ್ತೆ ಪಕ್ಕದಲ್ಲೇ ನಾಯಿಗೆ ಹಾಕಿದಂತೆ ಊಟ ಎಸೆದು ಹೋದ್ರು. ಈ ಪಲಾವ್ ಪರೀಕ್ಷೆಗೆ ಒಳಪಡಿಸಿದ್ರೆ, ಇ-ಕಾಯಲ್ ಎಂಬ ಅಂಶ ಹೆಚ್ಚಿದ್ದು, ಸೆಪಿಟಿಸ್ ಎಂಬ ಬ್ಯಾಕ್ಟೀರಿಯಾ ಇರೋದು ಬೆಳಕಿಗೆ ಬಂತು. ಈ ಬ್ಯಾಕ್ಟೀರಿಯಾ ಚಿಕನ್ಗುನ್ಯ, ಲೋ ಬಿಪಿ, ಜ್ವರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವರದಿ ಬಂದಿದೆ.
ಅಲ್ಲಿಂದ ಬಳಿಕ ಮೇಯರ್ ಗಂಗಾಂಬಿಕೆ ಇರುವ ಜಯನಗರ ವಾರ್ಡ್ ನಲ್ಲಂತೂ ಪೇಯಿಂಟ್ ಡಬ್ಬದಲ್ಲಿ ಊಟ ನೀಡಲಾಗ್ತಿದೆ. ಅದರಲ್ಲೂ ಸತ್ತ ಇರುವೆಗಳು ಸಿಕ್ಕೋದು ಕಾಮನ್. ಇಲ್ಲಿನ ಸಾಂಬಾರ್ ತಿನ್ನಲು ಯೋಗ್ಯವಿಲ್ಲ ಎಂದು ವರದಿಯಲ್ಲಿ ಗೊತ್ತಾಯ್ತು. ಇನ್ನು ಉಪಮೇಯರ್ ಭದ್ರೇಗೌಡ ವಾರ್ಡ್ ಕತೆ ಕೂಡಾ ಇದೇ ಆಗಿದೆ.
ಸಚಿವ ಕೃಷ್ಣಬೈರೇಗೌಡರ ಬ್ಯಾಟರಾಯನಪುರದ ಬಿಸಿ ಬೇಳೆಬಾತ್ ಕಥೆಯಂತೂ ಹೀನಾಯ. ಇದರಲ್ಲಿ ವಾಂತಿ, ಬೇದಿ, ಡಿಹೈಡ್ರೇಶನ್ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಪತ್ತೆಯಾದವು. ಪಿಎಚ್ ಎಂಬ ಅಂಶ 6ಕ್ಕಿಂತ ಕಡಿಮೆ ಇದ್ದು, ಇದ್ರಿಂದ ದೇಹದಲ್ಲಿ ಸೆಪಿಟಸ್ ಎಂಬ ಬ್ಯಾಕ್ಟೀರಿಯಾ ಉತ್ಪತ್ತಿಯಾಗಲಿದೆ ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.
ಸ್ವಚ್ಛತೆಯೇ ಇಲ್ಲದ ಅಡುಗೆ ಮನೆ..!
ಇಷ್ಟೆಲ್ಲಾ ನೋಡಿದ್ಮೇಲೆ ಇದನ್ನೆಲ್ಲಾ ತಯಾರು ಮಾಡುವ ಆ ಅಡುಗೆ ಮಾಡೋ ಜಾಗ ಹೇಗಿರಬಹುದೆಂದು ಪರೀಕ್ಷಿಸಲು ಪಬ್ಲಿಕ್ ಟಿವಿ ತಂಡ ಮುಂದಾಯ್ತು. ಅಡುಗೆ ಸೋಡಾ, ಅಜಿನೋ ಮೋಟೊ, ರಾಸಾಯನಿಕ ಪದಾರ್ಥಗಳ ಮಧ್ಯೆ ಕೊಳೆತ ತರಕಾರಿ, ನುಚ್ಚು ಅಕ್ಕಿ, ನುಚ್ಚು ತೊಗರಿಬೇಳೆ ಎಲ್ಲೆಂದ್ರಲ್ಲಿ ಬಿದ್ದಿರುವುದು ಕಂಡುಬಂದಿದೆ. ಮೊಸರನ್ನವಂತೂ ಪೌರಕಾರ್ಮಿಕರು ತಿನ್ನುವ ಮೊದಲೇ ನೊಣಗಳು ಟೇಸ್ಟ್ ನೋಡುತ್ತಿದ್ದವು.
ಪೌರಕಾರ್ಮಿಕರ ಒಂದು ಊಟಕ್ಕೆ ಸರ್ಕಾರ 20 ರೂಪಾಯಿಯಂತೆ ತಿಂಗಳಿಗೆ 1 ಕೋಟಿ ಖರ್ಚು ಮಾಡ್ತಿದೆ. ಆದ್ರೆ ಈ ಊಟ ಪೌರ ಕಾರ್ಮಿಕರ ಜೀವಕ್ಕೆ ಕಂಟಕವಾಗಿದೆ. ಆದ್ರೆ ಖರ್ಚು ಮಾತ್ರ ಸರಿಯಾಗಿ ತೋರಿಸೋ ಅಧಿಕಾರಿಗಳು, ಈ ಹಾಳು ಊಟ ಕೊಟ್ಟು ಉಳಿದ ದುಡ್ಡನ್ನ ಏನ್ಮಾಡ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಮನೆಯಲ್ಲಿ ಹೊತ್ತು ಹೊತ್ತಿಗೆ ಬಿಸಿ ಬಿಸಿ ಬೇಕಾದಂತೆ ಮಾಡಿಕೋಂಡು ತಿನ್ನೋ ಜನಪ್ರತಿನಿಧಿಗಳು ಇನ್ನಾದ್ರೂ ಪೌರಕಾರ್ಮಿಕರನ್ನು ಈ ನರಕದಿಂದ ಪಾರು ಮಾಡಬೇಕಿದೆ.
ನವದೆಹಲಿ: ಪಾದ ಪೂಜೆ ಸೇರಿದಂತೆ ಇತರೆ ಸನ್ಮಾನಗಳಿಂದ ಹೊಟ್ಟೆ ತುಂಬಲ್ಲ ಎಂದು ಪ್ರಧಾನಿ ಮೋದಿ ಅವರಿಂದ ಪಾದ ತೊಳೆಸಿಕೊಂಡ ಪೌರ ಕಾರ್ಮಿಕರು ಹೇಳಿದ್ದಾರೆ.
ಪಾದಪೂಜೆ ಮಾಡಿಸಿಕೊಂಡ ಪೌರ ಕಾರ್ಮಿಕರನ್ನು ಮಾಧ್ಯಮವೊಂದು ಸಂಪರ್ಕಿಸಿ ಅನುಭವಗಳನ್ನು ಬಿತ್ತರಿಸಿದೆ. ಕುಂಭ ಮೇಳದ ಕೊನೆಯ ದಿನ ಫೆಬ್ರವರಿ 24ರಂದು ಕಳೆದ ಐದು ನಿಮಿಷಗಳನ್ನು ಪೌರ ಕಾರ್ಮಿಕರು ಇನ್ನು ಮರೆತಿಲ್ಲ. ಕಣ್ಮುಚ್ಚಿದ್ರೆ ಸಾಕು ಪ್ರಧಾನಿಗಳು ನಮ್ಮ ಪಾದ ಪೂಜೆ ಮಾಡಿದ ದೃಶ್ಯಗಳು ಕಣ್ಮುಂದೆ ಬರುತ್ತವೆ. ಆದ್ರೆ ಪ್ರಧಾನಿಗಳ ಜೊತೆ ಮಾತನಾಡಲು ಅವಕಾಶ ಸಿಗಲಿಲ್ಲ. ಪ್ರಧಾನಿಗಳ ನಮ್ಮನ್ನು ಭೇಟಿ ಮಾಡಲಿದ್ದಾರೆ ಎಂಬ ವಿಷಯ ತಿಳಿದಾಗ, ಸಂಬಳ ಏರಿಕೆ, ಖಾಯಂ ನೌಕರಿ ಮತ್ತು ಸುಧಾರಿತ ಯಂತ್ರೋಪಕರಣಗಳನ್ನು ನೀಡಬೇಕೆಂದು ಮನವಿ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಅಲ್ಲಿ ನಮಗೆ ಯಾವುದೇ ರೀತಿಯ ಅವಕಾಶಗಳು ಸಿಗಲಿಲ್ಲ ಎಂದು 35 ವರ್ಷದ ಹೋರಿಲಾಲ್ ಬೇಸರ ವ್ಯಕ್ತಪಡಿಸುತ್ತಾರೆ.
ಒಂದು ಕೋಣೆಯಲ್ಲಿ ನಮ್ಮನ್ನು ಸೇರಿಸಿದ ಅಧಿಕಾರಿಗಳು ಪ್ರಧಾನಿಗಳು ಬರಲಿದ್ದಾರೆ. ಬಂದ ಕೂಡಲೇ ಪಾದಪೂಜೆ ಮಾಡಲಿದ್ದಾರೆ ಎಂಬುದನ್ನು ತಿಳಿಸಿದ್ದರು. ಪಾದ ಪೂಜೆಗೂ ಮುನ್ನ ನಮಗೆ ಸ್ನಾನ ಮಾಡಿಸಲಾಗಿತ್ತು. ದೊಡ್ಡ ವ್ಯಕ್ತಿಗಳಿಂದ ಪಾದಗಳನ್ನು ತೊಳೆಸಿಕೊಂಡಾಗ ತುಂಬಾನೇ ಸಂಕೋಚವಾಯ್ತು ಎಂದು ಹೋರಿಲಾಲ್ ಹೇಳುತ್ತಾರೆ.
ಹೋರಿಲಾಲ್ ಕುಂಭ ಮೇಳ ಕೆಲಸಕ್ಕಾಗಿಯೇ ಕುಟುಂಬ ಸಮೇತರಾಗಿ ನವೆಂಬರ್ ನಲ್ಲಿ ವಾರಣಾಸಿಗೆ ಆಗಮಿಸಿದ್ದರು. ಪತ್ನಿ ರಾಜಕುಮಾರಿ (32), ಮಕ್ಕಳಾದ ಅಮಿತ್ (15), ಆಕಾಶ್ (12) ಮತ್ತು ಕಪಿಲ್ (10) ಎಲ್ಲರೊಂದಿಗೆ ಆಗಮಿಸಿ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಕೊಂಡಿದ್ದರು. ಪತ್ನಿ ರಾಜಕುಮಾರಿ ಸಹ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ರೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಪೌರ ಕಾರ್ಮಿಕನಾಗಿ ನಾಲ್ಕನೇ ಬಾರಿಗೆ ಹೋರಿಲಾಲ್ ಕುಂಭಮೇಳದಲ್ಲಿ ಭಾಗಿಯಾಗಿದ್ದರು.
ಮೋದಿ ಅವರು ದೊಡ್ಡ ವ್ಯಕ್ತಿ. ನಮ್ಮನ್ನ ಸನ್ಮಾನಿಸಿದ್ದಕ್ಕೆ ನಾವೆಲ್ಲ ಆಭಾರಿಯಾಗಿದ್ದೇವೆ. ಈ ಸನ್ಮಾನದಿಂದ ಜೀವನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮೊದಲು ಸ್ವಚ್ಛತೆಯ ಕೆಲಸವನ್ನೇ ಮಾಡುತ್ತಿದ್ದೂ, ಸದ್ಯ ಕೂಡ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಸನ್ಮಾನದ ಬದಲಾಗಿ ಖಾಯಂ ನೌಕರಿ ಅಥವಾ ಸಂಬಳ ಸೇರಿದಂತೆ ಜೀವನಕ್ಕೆ ಏನಾದ್ರೂ ಭದ್ರತೆ ನೀಡಿದ್ದರೆ ಚೆನ್ನಾಗಿರುತ್ತಿತ್ತು ಅಂತಾ ಹೋರಿಲಾಲ್ ಹೇಳಿದ್ದಾರೆ.
ಮತ್ತೋರ್ವ ಪೌರಕಾರ್ಮಿಕ ಪ್ಯಾರೇ ಲಾಲ್ ಪ್ರತಿಕ್ರಿಯಿಸಿ, ತಮ್ಮ ಬಿಡುವಿಲ್ಲದ ಸಮಯಲ್ಲಿ ಪ್ರಧಾನಿಗಳು ನಮ್ಮನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಸನ್ಮಾನದ ಬಳಿಕ ಪ್ರಧಾನಿಗಳು ನಮ್ಮ ಸಂಬಳವನ್ನು ಹೆಚ್ಚಿಸಬೇಕಿತ್ತು. ಪ್ರತಿದಿನಕ್ಕೆ ಕನಿಷ್ಠ 500 ರೂ. ದಿನಗೂಲಿಯನ್ನು ಘೋಷಿಸಬೇಕಿತ್ತು. ಐದು ನಿಮಿಷದ ಕಾರ್ಯಕ್ರಮದಲ್ಲಿ ಪ್ರಧಾನಿಗಳ ಜೊತೆ ನಮಗೆ ಮಾತನಾಡುವ ಅವಕಾಶವೇ ಸಿಗಿಲಿಲ್ಲ ಎಂದರು.
ನಾನು ಕಳೆದ ಕೆಲವು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಪತಿಯೂ ಸಹ ಇದೇ ಉದ್ಯೋಗದಲ್ಲಿದ್ದಾರೆ. ಪ್ರಧಾನಿಗಳು ಭೇಟಿಯಾದಾಗ ನಮ್ಮನ್ನು ಖಾಯಂ ಮಾಡಿ ಎಂಬ ಬೇಡಿಕೆ ನನ್ನಲ್ಲಿತ್ತು. ಪಿಎಂ ಏನು ಬೇಕಾದರು ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಈ ಸನ್ಮಾನಗಳಿಂದ ದಿನನಿತ್ಯ ಹೊಟ್ಟೆ ತುಂಬಲ್ಲ ಎಂಬುವುದು ಪೌರ ಮಹಿಳೆ ಜ್ಯೋತಿ ಮಾತು.
ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ರೈತರಿಗೆ ಸಹಾಯ ಹಸ್ತ ನೀಡಿದ್ದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಈಗ ಪೌರ ಕಾರ್ಮಿಕರ ನೆರವಿಗೆ ಧಾವಿಸಿದ್ದು, 50 ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಯಂತ್ರಗಳನ್ನು ನೀಡಲು ಮುಂದಾಗಿದ್ದಾರೆ.
ಸಮಾಜದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳುವ ಪೌರ ಕಾರ್ಮಿಕರ ಜೀವನವನ್ನು ಮತ್ತಷ್ಟು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಅಮಿತಾಭ್ ಬಚ್ಚನ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ಈ ಕುರಿತು ತಮ್ಮ ಬ್ಲಾಗ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮಿತಾಭ್, ಮ್ಯಾನ್ಹೋಲ್ ಕ್ಲೀನ್ ಮಾಡುವ ವೇಳೆ ಹಲವು ಮಂದಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಪ್ರಕರಣಗಳು ನಿಧಾನವಾಗಿ ಬೆಳಕಿಗೆ ಬರುತ್ತದೆ. ಈ ಕಾರ್ಯಕ್ಕೆ ಅವರು ಸಾಮಾನ್ಯ ವಸ್ತುಗಳನ್ನು ಬಳಸುತ್ತಾರೆ. ಅದ್ದರಿಂದ ಅವರಿಗೆ ಹೆಚ್ಚಿನ ರಕ್ಷಣೆ ಹಾಗೂ ಆಧುನಿಕ ಯಂತ್ರಗಳ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಓದಿ: 1,398 ರೈತರ ಸಾಲ ಪಾವತಿಸಿದ ಅಮಿತಾಭ್ ಬಚ್ಚನ್
ಕ್ಲೀನ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ವೇಳೆ ನನಗೆ ಈ ಮಾಹಿತಿ ತಿಳಿಯಿತು. ಇದರಿಂದ 50 ಸ್ಪಚ್ಛತಾ ಯಂತ್ರಗಳನ್ನು ಖರೀದಿಸಲು ನಿರ್ಧಾರ ಮಾಡಿದ್ದು, ಮ್ಯಾನ್ ಹೋಲ್ಗಳಿಗೆ ಇಳಿಯದೇ ಸ್ಪಚ್ಛತೆ ಮಾಡಲು ಅವರಿಗೆ ಇವು ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ.
ತಾವು ಕೊಳ್ಳುವ ಯಂತ್ರಗಳ ಬಗ್ಗೆಯೂ ಮಾಹಿತಿ ನೀಡಿರುವ ಅಮಿತಾಭ್, ಕಾರ್ಯನಿರ್ವಹಿಸಲು ಸುಲಭವಿರುವ ಹಾಗೂ ಸೂಕ್ತ ಗಾತ್ರದ ಯಂತ್ರಗಳನ್ನು ಖರೀದಿ ಮಾಡಲಾಗುವುದು. ಈ ಕುರಿತು ಸ್ಥಳೀಯ ಮಹಾನಗರ ಪಾಲಿಕೆಗೆ ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಚಿಕ್ಕೋಡಿ: ಪಿಒಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾದ ಪೌರ ಕಾರ್ಮಿಕರನ್ನು ತಹಶೀಲ್ದಾರ್ ಮುಂದೆಯೇ ತಯಾರಕರು ಹಲ್ಲೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ಪಟ್ಟಣದಲ್ಲಿ ಪಿಒಪಿ ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದಾರೆ ಎನ್ನುವ ಮಾಹಿತಿ ಪುರಸಭೆ ಅಧಿಕಾರಿಗಳಿಗೆ ಸಿಕ್ಕಿತ್ತು. ಹೀಗಾಗಿ ಇಂದು ತಹಶೀಲ್ದಾರ್ ಎಂ.ಎನ್.ಬಳಿಗಾರ ಅವರು ಪುರಸಭೆಯ ಮುಖ್ಯಾಧಿಕಾರಿ ಹಾಗೂ ಪೌರ ಕಾರ್ಮಿಕರ ನೇತೃತ್ವದಲ್ಲಿ ಅಕ್ರಮವಾಗಿ ಪಿಒಪಿ ಗಣೇಶ ಮೂರ್ತಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿದ್ದರು.
ಅಧಿಕಾರಿಗಳ ದಾಳಿಗೆ ಹೆದರಿದ ತಯಾರಕರು, ಎಲ್ಲಿ ತಮ್ಮ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯುತ್ತಾರೆ ಎಂದು ತಿಳಿದು ಅಧಿಕಾರಿಗಳ ಜೊತೆಗೆ ಜಗಳಕ್ಕೆ ಇಳಿದಿದ್ದಾರೆ. ಮಾತಿನ ಚಕಮಕಿ ಮುಂದುವರಿದ ಪರಿಣಾಮ ತಯಾರಕರು ಹಾಗೂ ಪೌರಕಾರ್ಮಿಕರು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಗದ್ದಲ ಉಂಟಾಗಿ, ನೂಕಾಟದಲ್ಲಿ ಕೆಲವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದಾದ ಬಳಿಕ ಅಥಣಿ ಪುರಸಭೆಯಲ್ಲಿ ಸಭೆ ನಡೆಸಿ ತಿಳುವಳಿಕೆ ಹೇಳಿ, ಪಿಒಪಿ ಮೂರ್ತಿ ಮಾರಾಟ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿ: ವೇತನ ವಿಳಂಬ ನೀತಿ ವಿರೋಧಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿಯೇ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿತು. ನೇರ ವೇತನ, ವಿವಿಧ ಬೇಡಿಕೆ ಹಾಗೂ ನಾಲ್ಕು ತಿಂಗಳುಗಳಿಂದ ವೇತನ ನೀಡದ ಮಹಾನಗರ ಪಾಲಿಕೆ ಕ್ರಮ ಖಂಡಿಸಿ ಘೋಷಣೆ ಕೂಗಿದರು. ಕೆಲವರು ಪಾಲಿಕೆ ಆವರಣದಲ್ಲಿಯೇ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ 200 ಜನ ಪ್ರತಿಭಟನಾ ನಿರತರನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ನವನಗರದಲ್ಲಿರುವ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಮುಂದೆ ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ್ನನ್ನು ಬಂಧಿಸುವಂತೆ ಒತ್ತಾಯಿಸಿ, ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ವಿಜಯ ಗುಂಟ್ರಾಳ್, ಗುತ್ತಿಗೆ ಕಾರ್ಮಿಕರೊಂದಿಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿದ್ದಾರೆ. ಜೊತೆಗೆ ಆತನಿಂದ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ವಿಜಯ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ಎಂ.ಎನ್.ನಾಗರಾಜ್ ಅವರಿಗೆ ಪಾಲಿಕೆ ಸದಸ್ಯರು ಮನವಿ ಸಲ್ಲಿಸಿದರು.
ಚಾಮರಾಜನಗರ: ತಾಯಿಯೊಬ್ಬಳು ಆಗ ತಾನೇ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಚರಂಡಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕುರಬಗೇರಿಯ ಚರಂಡಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆಯಾಗಿದ್ದು, ಇಂದು ಬೆಳಗ್ಗೆ ಪೌರ ಕಾರ್ಮಿಕರು ಸ್ವಚ್ಛತೆಗೆಂದು ಬಂದಾಗ ಶಿಶುವಿನ ಚೀರಾಟವನ್ನು ಕೇಳಿ ಚರಂಡಿ ಬಳಿ ಹೋಗಿದ್ದಾರೆ. ಈ ವೇಳೆ ಆಗ ತಾನೇ ಜನಿಸಿದ ಹೆಣ್ಣು ಮಗುವನ್ನು ಚರಂಡಿಗೆ ಎಸೆದು ಹೋಗಿರುವುದು ಪತ್ತೆಯಾಗಿದೆ.
ಮಗುವನ್ನು ಕಂಡ ಪೌರಕಾರ್ಮಿಕ ಮಹಿಳೆಯರು ಚರಂಡಿಯಿಂದ ಮಗುವನ್ನು ರಕ್ಷಿಸಿ ಪೋಷಣೆ ಮಾಡಿದ್ದಾರೆ. ಬಳಿಕ ಗುಂಡ್ಲುಪೇಟೆಯ ಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಮೈಸೂರಿನ ಚಲುವಾಂಬ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.