Tag: city municiple corporation

  • ರಾಯಚೂರು ನಗರಸಭೆಯಿಂದ ಕಲುಷಿತ ನೀರು ಸರಬರಾಜು – ಮತ್ತೋರ್ವ ವ್ಯಕ್ತಿ ಸಾವು

    ರಾಯಚೂರು ನಗರಸಭೆಯಿಂದ ಕಲುಷಿತ ನೀರು ಸರಬರಾಜು – ಮತ್ತೋರ್ವ ವ್ಯಕ್ತಿ ಸಾವು

    ರಾಯಚೂರು: ನಗರಸಭೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದೆ. ನಗರಸಭೆ ಸರಬರಾಜು ಮಾಡುವ ಕಲುಷಿತ ನೀರನ್ನು ಕುಡಿದು ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗಳಲ್ಲಿ ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಡವರು ಆಸ್ಪತ್ರೆ ಬಿಲ್ ಕಟ್ಟಲು ಆಗದೇ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರಿಗೆ ಇಬ್ಬರು ಬಲಿಯಾದರು ನಗರಸಭೆ ಮಾತ್ರ ಇನ್ನೂ ಎಚ್ಚೆತ್ತಿಲ್ಲ.

    ನಗರದ ಅಂದ್ರೂನ್ ಕಿಲ್ಲಾ ನಿವಾಸಿ ಅಬ್ದುಲ್ ಗಫರ್ ರಾಯಚೂರು ನಗರಸಭೆ ಸರಬರಾಜು ಮಾಡುವ ಕಲುಷಿತ ನೀರನ್ನು ಕುಡಿದು ಸಾವನ್ನಪ್ಪಿದ್ದಾನೆ. ಏಕಾಏಕಿ ವಾಂತಿ, ಭೇದಿ ಜೊತೆಗೆ ಕಿಡ್ನಿಯ ಮೇಲೆ ಪರಿಣಾಮ ಬೀರಿ ಡೈಯಲೈಸಿಸ್ ಹಂತಕ್ಕೆ ತಲುಪಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ನಿರ್ಜಲೀಕರಣದಿಂದ ಇಂದಿರಾನಗರ ನಿವಾಸಿ 40 ವರ್ಷದ ಮಲ್ಲಮ್ಮ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ನೂರಾರು ಜನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಿರ್ಜಲೀಕರಣದಿಂದ ದಾಖಲಾಗಿದ್ದಾರೆ. ಆಸ್ಪತ್ರೆ ದಾಖಲಾಗದವರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಕುಡಿದು ವಾಂತಿ, ಭೇದಿ, ಕಿಡ್ನಿ ಸಮಸ್ಯೆ ಸೇರಿ ನಾನಾ ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಕೂಡ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

    ನಗರದ ಪ್ರತೀ ವಾರ್ಡ್‍ನ ಮನೆ ಮನೆಯಲ್ಲೂ ಅನಾರೋಗ್ಯದಿಂದ ಜನ ಬಳಲುತ್ತಿದ್ದಾರೆ. ಕುಡಿಯುವ ನೀರಿನ ಶುದ್ದೀಕರಣ ಘಟಕದ ಸ್ವಚ್ಛತಾ ಕಾರ್ಯ ಈಗ ಆರಂಭಗೊಂಡಿದ್ದು, ಪೂರ್ಣ ಸ್ವಚ್ಛಗೊಳಿಸಲು ಕನಿಷ್ಠ ಒಂದು ತಿಂಗಳ ಸಮಯ ಬೇಕಿದೆ. ನಗರಸಭೆಯ ಸುಮಾರು ವರ್ಷಗಳ ನಿರ್ಲಕ್ಷ್ಯಕ್ಕೆ ಈಗ ನಗರದಲ್ಲಿ ಇಬ್ಬರು ಬಲಿಯಾಗಿದ್ದು, ನೂರಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಲಕ್ಷ್ಯ ಹಿನ್ನೆಲೆ ನಗರಸಭೆ ಎಇಇ ವೆಂಕಟೇಶ್ ಹಾಗೂ ಜೆ.ಇ ಕೃಷ್ಣ ಮೇಲೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಆಲಂ, ಪೊಟ್ಯಾಸಿಯಂ, ಬ್ಲೀಚಿಂಗ್ ಪೌಡರ್‌ನ್ನು ಸಮರ್ಪಕವಾಗಿ ಬಳಸಿ ನೀರನ್ನು ಶುದ್ದೀಕರಿಸದೇ ಸರಬರಾಜು ಮಾಡುತ್ತಿರುವ ನಗರಸಭೆ ಜನರಲ್ಲಿ ಈಗ ಜಾಗೃತಿ ಮೂಡಿಸಲು ಮುಂದಾಗಿದೆ. ನೀರನ್ನು ಕಾಯಿಸಿ, ಸೋಸಿ ಕುಡಿಯಿರಿ ಅಂತ ಹೇಳುತ್ತಿದೆ. ಆದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಲೇ ಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಉಡುಪಿ ಬಸ್ ನಿಲ್ದಾಣದಲ್ಲಿ ಕೊರೊನಾ ಜಾಗೃತಿ – 4 ನಲ್ಲಿಯ ಬೇಸಿನ್ ಅಳವಡಿಸಿದ ನಗರಸಭೆ

    ಉಡುಪಿ ಬಸ್ ನಿಲ್ದಾಣದಲ್ಲಿ ಕೊರೊನಾ ಜಾಗೃತಿ – 4 ನಲ್ಲಿಯ ಬೇಸಿನ್ ಅಳವಡಿಸಿದ ನಗರಸಭೆ

    ಉಡುಪಿ: ಸ್ವಚ್ಛತೆಯ ವಿಚಾರದಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನದಲ್ಲಿರುವ ಉಡುಪಿ ನಗರಸಭೆ ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕರಲ್ಲಿ ಜನಜಾಗೃತಿ ಮಾಡಿಸುತ್ತಿದ್ದು, ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದೆ.

    ಸಿಟಿ ಬಸ್ ನಿಲ್ದಾಣದಲ್ಲಿ ನಾಲ್ಕು ನಲ್ಲಿಯಿರುವ ವಾಶ್ ಬೇಸಿನನ್ನು ನಗರಸಭೆ ಅಳವಡಿಸಿದೆ. ಬಸ್ ಆಟೋದಲ್ಲಿ ಪ್ರಯಾಣಿಸುವವರು ಆಗಾಗ ತಮ್ಮ ಕೈಯನ್ನು ಶುದ್ಧೀಕರಿಸಲು ಎಲ್ಲ ವ್ಯವಸ್ಥೆಗಳನ್ನು ನಗರಸಭೆ ಮಾಡಿಕೊಟ್ಟಿದೆ. ಈ ನಲ್ಲಿಗಳಿಗೆ 1 ಸಾವಿರ ಲೀಟರ್ ನೀರಿನ್ನು ಸಂಗ್ರಸುವ ಸಿಂಟೆಕ್ಸ್ ಅನ್ನು ಅಳವಡಿಸಿದ್ದು, ಸಾರ್ವಜನಿಕರು ಕೈಯನ್ನು ಶುಚಿಗೊಳಿಕೊಳ್ಳಲು ವಾಶ್ ಬೇಸಿನ್ ಪಕ್ಕದಲ್ಲೇ ನಮೂದಿಸಲಾಗಿದೆ. ಕೋವಿಡ್-19 ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರಿಗೆ ವಿವರಿಸಿರುವ ನಗರಸಭೆ ಕೊರೊನಾ ಬಗ್ಗೆ ಇರತರಲ್ಲೂ ಜಾಗೃತಿ ಮೂಡಿಸಿ ಎಂದು ಕರೆನೀಡಿದೆ.

    ಅಷ್ಟೇ ಅಲ್ಲದೇ ವಾಶ್ ಬೇಸಿನ್ ಆಗಾಗ ಶುಚಿಗೊಳಿಸಲು ಒಬ್ಬ ನಗರಸಭೆಯ ಕಾರ್ಮಿಕನನ್ನು ನೇಮಕ ಮಾಡಲಾಗಿದೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಸಾರ್ವಜನಿಕರಲ್ಲಿ ಎಚ್ಚರಿಕೆ ಇರಲಿ ಎಂದು ನಗರಸಭೆ ಬ್ಯಾನರ್‍ನಲ್ಲಿ ಉಲ್ಲೇಖಿಸಿದೆ. ಭಾನುವಾರದಿಂದ ಹ್ಯಾಂಡ್ ವಾಶ್, ಸೋಪ್ ಅನ್ನು ವಾಶ್ ಬೇಸಿನ್ ಬಳಿ ಇರಿಸುತ್ತೇವೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

    ಇತ್ತ ಉಡುಪಿ ನಗರಸಭೆ ಜನಪರವಾದ ಕೆಲಸ ಮಾಡಿದೆ ನಾವು ನಮ್ಮ ಶುಚಿತ್ವವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದ ಕೂಡಲೇ ಸಾರ್ವಜನಿಕರು ತಮ್ಮ ಕೈ, ಮುಖವನ್ನು ತೊಳೆದುಕೊಂಡು ನಗರಸಭೆ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.