Tag: CISF

  • ಮಿಸ್ ಮಾಡ್ಲೇಬೇಡಿ, ಯೋಧರಿಗೆ ಪುಟ್ಟ ಬಾಲಕಿಯಿಂದ ದೀಪಾವಳಿಯ ಶುಭಾಶಯ ಪತ್ರ!

    ಮಿಸ್ ಮಾಡ್ಲೇಬೇಡಿ, ಯೋಧರಿಗೆ ಪುಟ್ಟ ಬಾಲಕಿಯಿಂದ ದೀಪಾವಳಿಯ ಶುಭಾಶಯ ಪತ್ರ!

    ನವದೆಹಲಿ: ಪುಟ್ಟ ಬಾಲಕಿಯೊಬ್ಬಳು ದೇಶ ಕಾಯುವ ಸೈನಿಕರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಕೈಬರಹದ ಗ್ರೀಟಿಂಗ್ಸ್ ಕಾರ್ಡ್ ಎಲ್ಲರ ಮನ ಗೆದ್ದಿದೆ. ದೆಹಲಿಯ ಚಾಂದಿನಿ ಚೌಕ್ ಮೆಟ್ರೋ ರೈಲು ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಯ ಕೈಗೆ ಪುಟ್ಟ ಬಾಲಕಿ ಮಾನ್ವಿ ತನ್ನದೇ ಕೈ ಬರಹದಲ್ಲಿರುವ ಶುಭಾಶಯ ಪತ್ರ ನೀಡಿದ್ದಾರೆ. ಈ ಪತ್ರವನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿ.ಐ.ಎಸ್.ಎಫ್) ಟ್ವೀಟ್ ಮಾಡಿದ್ದು, ಎಲ್ಲರೂ ಪುಟ್ಟ ಬಾಲಕಿಯ ಮುದ್ದಾದ ಕೈಬರಹದ ಸಂದೇಶವನ್ನು ಹೊಗಳುತ್ತಿದ್ದಾರೆ.

    ಶುಭಾಶಯ ಪತ್ರದಲ್ಲೇನಿದೆ…?
    ‘ಪ್ರೀತಿಯ ಪೊಲೀಸ್ ಅಧಿಕಾರಿಗಳು ಹಾಗೂ ಸೈನಿಕರೇ, ನಿಮ್ಮ ಶೌರ್ಯ ಮತ್ತು ತ್ಯಾಗದ ಬಗ್ಗೆ ನಮಗೆ ಹೆಮ್ಮೆಯಿದೆ. ನೀವು ಏಕಾಂಗಿ ಎಂದು ಯಾವತ್ತೂ ಅಂದುಕೊಳ್ಳಬೇಡಿ. ಇಡೀ ರಾಷ್ಟ್ರ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೊತೆಗಿದೆ. ನಮ್ಮ ದೇಶದ ಬಗೆಗಿನ ನಿಮ್ಮ ಸಮರ್ಪಣಾ ಮನೋಭಾವಕ್ಕೆ ನಿಮಗೆ ಥ್ಯಾಂಕ್ಸ್. ನನಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ’ ಎಂದು ಬರೆದಿರುವ ಮಾನ್ವಿ ‘ಶುಭ ದೀಪಾವಳಿ’ ಎಂಬ ಸಂದೇಶವನ್ನೂ ಬರೆದಿದ್ದಾಳೆ. ಈ ಪತ್ರ ಈಗ ಸಿ.ಐ.ಎಸ್.ಎಫ್ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮೂಲಕ ಹೊರಬಂದಿದೆ.

    ಮಾನ್ವಿಯ ಈ ಪತ್ರವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಈ ಶುಭಾಶಯ ತುಂಬಾ ಮುದ್ದಾಗಿದೆ ಎಂದು ಕೆಲವರು ಹೇಳಿದರೆ, ಸಿಐಎಸ್‍ಎಫ್ ಯೋಧರು ಈ ಶುಭಾಶಯಕ್ಕೆ ಅರ್ಹರು. ಈ ಪತ್ರ ತುಂಬಾ ಖುಷಿ ನೀಡಿತು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ಎಷ್ಟು ಮುದ್ದಾದ ಬರಹ. ಶುಭ ದೀಪಾವಳಿ, ಜೈ ಹಿಂದ್…. ಪುಟ್ಟ ಹುಡುಗಿಯ ದೀಪಾವಳಿಯ ಶುಭಾಶಯ ನೋಡಿ ಖುಷಿಯಾಯಿತು ಎಂದು ಇನ್ನು ಕೆಲವರು ಬರೆದಿದ್ದಾರೆ.

    https://twitter.com/dilip98765/status/1188757712345034753?ref_src=twsrc%5Etfw%7Ctwcamp%5Etweetembed%7Ctwterm%5E1188757712345034753&ref_url=https%3A%2F%2Fwww.indiatoday.in%2Ftrending-news%2Fstory%2Fdelhi-girl-gifts-handmade-greeting-card-with-touching-note-to-cisf-jawan-on-diwali-internet-is-emotional-1613579-2019-10-29

  • ಉತ್ತರ ಪ್ರದೇಶದಲ್ಲಿ ಮೈಸೂರಿನ CISF ಯೋಧ ನಿಧನ

    ಉತ್ತರ ಪ್ರದೇಶದಲ್ಲಿ ಮೈಸೂರಿನ CISF ಯೋಧ ನಿಧನ

    ಮೈಸೂರು: ಉತ್ತರ ಪ್ರದೇಶಕ್ಕೆ ಚುನಾವಣಾ ಕರ್ತವ್ಯಕ್ಕೆಂದು ಹೋಗಿದ್ದ ಮೈಸೂರಿನ ಸಿಐಎಸ್‍ಎಫ್ ಯೋಧ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

    ಜಿಲ್ಲೆಯ ಹುಣಸೂರಿನ ಮಂಜುನಾಥ ಬಡಾವಣೆ ನಿವಾಸಿ ಆರ್.ಕೆ.ಪ್ರಕಾಶ್ ಮೃತಪಟ್ಟ ಯೋಧ. ಮೈಸೂರಿನ ಆರ್‌ಬಿಐ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಅವರು, ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ರಾಯ್ ಬರೇಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಪ್ರಕಾಶ್ ಅವರ ಪಾರ್ಥಿವಾ ಶರೀರ ಸ್ವಗ್ರಾಮಕ್ಕೆ ರವಾನೆಯಾಗಿದ್ದು, ಹುಟ್ಟೂರು ಪಿರಿಯಾಪಟ್ಟಣದಲ್ಲಿ ಅಂತ್ಯ ಸಂಸ್ಕಾರದ ಸಿದ್ಧತೆಗಳು ನಡೆದಿವೆ.

  • ಬಾಂಬ್ ಬೆದರಿಕೆ – ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

    ಬಾಂಬ್ ಬೆದರಿಕೆ – ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

    ಸಾಂದರ್ಭಿಕ ಚಿತ್ರ

    ಮುಂಬೈ: ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ಉತ್ತರಪ್ರದೇಶದ ಲಕ್ನೋಗೆ ತೆರಳಬೇಕಿದ್ದ ಇಂಡಿಗೋ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ.

    ಶನಿವಾರ ಬೆಳಗ್ಗೆ 6.05ಕ್ಕೆ ಇಂಡಿಗೋ ಸಂಸ್ಥೆಯ ಗೋ ಏರ್ ಫ್ಲೈಟ್ ಜಿ8 329 ವಿಮಾನ ಮುಂಬೈ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿತ್ತು. ಈ ವೇಳೆ ವಿಮಾನ ನಿಲ್ದಾಣದಲ್ಲಿದ್ದ ಓರ್ವ ಮಹಿಳೆ ಲಕ್ನೋಗೆ ಹೊರಟಿರುವ ವಿಮಾನದಲ್ಲಿ ಬಾಂಬ್ ಇದೆ ಎಂದು ರಂಪಾಟ ನಡೆಸಿದ್ದರು. ಅಲ್ಲದೇ ಕೆಲವು ವ್ಯಕ್ತಿಗಳ ಫೋಟೋಗಳನ್ನು ಹಿಡಿದುಕೊಂಡು ಇವರು ದೇಶದ ಭದ್ರತೆಗೆ ಅಪಾಯವುಂಟುಮಾಡುತ್ತಾರೆಂದು ಹೇಳಿದ್ದರು.

    ಕೂಡಲೇ ಅಧಿಕಾರಿಗಳು ವಿಮಾನದ ಹಾರಾಟವನ್ನು ತಡೆದು ತುರ್ತು ಭೂಸ್ಪರ್ಷ ಮಾಡಿಸಿದ್ದಾರೆ. ಸ್ಥಳಕ್ಕೆ ಬಂದ ಬಾಂಬ್ ತಪಾಸಣಾ ಅಧಿಕಾರಿಗಳು ವಿಮಾನವನ್ನು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಯಾವುದೇ ಬಾಂಬ್ ಇಲ್ಲ ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಸಂಬಂಧ ಕೇಂದ್ರೀಯ ಕೈಗಾರಿಕಾ ಭದ್ರತಾ ದಳ(ಸಿಐಎಸ್‍ಎಫ್) ಮಹಿಳೆಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com