Tag: church

  • ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು

    ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು

    ಅಬುಜಾ: ಕಾಲ್ತುಳಿತದಲ್ಲಿ 31 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ನೈಜೀರಿಯಾದ ಚರ್ಚ್ ಚಾರಿಟಿ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

    ರಿವರ್ಸ್ ಸ್ಟೇಟ್‍ನಲ್ಲಿರುವ ಕಿಂಗ್ಸ್ ಅಸೆಂಬ್ಲಿ ಪೆಂಟೆಕೋಸ್ಟಲ್ ಚರ್ಚ್ ಆಯೋಜಿಸಿದ್ದ ವಾರ್ಷಿಕ ಶಾಪ್ ಫಾರ್ ಫ್ರೀ ಚಾರಿಟಿ ಕಾರ್ಯಕ್ರಮಕ್ಕೆ ಜನರು ಬಂದಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದಾಗಿ ಗರ್ಭಿಣಿ ಹಾಗೂ ಹಲವು ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರಿಗೆ ಗಂಭೀರ ಗಾಯಗಳಾಗಿವೆ.

    crime

    ದತ್ತಿ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಸರತಿ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜನರು ಬೆಳಗ್ಗೆ 5 ಗಂಟೆಗೆ ಜನರು ಆಗಮಿಸಿದ್ದರು. ಇದಾದ ಬಳಿಕ ಗೇಟ್‍ಗೆ ಬೀಗ ಹಾಕಿದ್ದನ್ನು ಒಡೆದು ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ ಕಾಲ್ತುಳಿತವಾಗಿದೆ. ಇದನ್ನೂ ಓದಿ: ನಾಲ್ಕೈದು ದಿನ ತಿರುಪತಿ ಭೇಟಿಯನ್ನು ಮುಂದೂಡಿ: ಟಿಟಿಡಿ ಮನವಿ

    ಸರ್ಕಾರದ ಅಂಕಿಅಂಶಗಳ ಪ್ರಕಾರ 80 ಮಿಲಿಯನ್‍ಗಿಂತಲೂ ಹೆಚ್ಚು ಜನರು ಬಡತನದಲ್ಲಿ ವಾಸಿಸುವ ಆಫ್ರಿಕಾದ ಅತಿದೊಡ್ಡ ಆರ್ಥಿಕತೆಯಾದ ನೈಜೀರಿಯಾದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ಇದನ್ನೂ ಓದಿ: ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ಕಾಲ್ತುಳಿತದ ನಂತರ ಸಂತ್ರಸ್ತರ ಸಂಬಂಧಿಕರು ಕೆಲವು ಚರ್ಚ್ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಚರ್ಚ್ ನಿರಾಕರಿಸಿದೆ. ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕಾಯಿಲೆಯೆಂದು ಮಗುವನ್ನೇ ಬಿಟ್ಟುಹೋದ ಪೋಷಕರು

    ಕಾಯಿಲೆಯೆಂದು ಮಗುವನ್ನೇ ಬಿಟ್ಟುಹೋದ ಪೋಷಕರು

    ಮಂಡ್ಯ: ಕಾಯಿಲೆಯಿದೆ ಎಂದು ಮಗುವನ್ನು ಬಿಟ್ಟು ಹೋದ ಘಟನೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ನಡೆದಿದೆ.

    ನಮಗೆ ಒಂದು ಹೊತ್ತಿನ ಊಟವಿಲ್ಲದಿದ್ದರೂ ಪರವಾಗಿಲ್ಲ. ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಅದೇಷ್ಟೋ ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳಿಗೋಸ್ಕರ ಬದುಕುತ್ತಿದ್ದಾರೆ. ಅಂತಹದರಲ್ಲಿ ತಮ್ಮ ಮಗುವಿಗೆ ಕಾಯಿಲೆ ಇದೆ ಎಂದು ಆ ಮಗುವನ್ನು ಅನಾಥ ಮಾಡಿ ಪೋಷಕರು ಬಿಟ್ಟು ಹೋಗಿದ್ದು, ಇತ್ತ ತಂದೆ ತಾಯಿಗಳ ಲಾಲನೆ ಪಾಲನೆ ಇಲ್ಲದೇ ಮಗು ಒದ್ದಾಡುತ್ತಿದೆ.

    ಇಂದು ಬೆಳಗ್ಗೆ 6:30ರ ವೇಳೆಗೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ಪೋಷಕರು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡ ಚರ್ಚ್‍ನ ಸಿಬ್ಬಂದಿ ಆ ಕಂದಮ್ಮನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ.

    ಮಗುವನ್ನು ವಶಕ್ಕೆ ಪಡೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ಆರೋಗ್ಯ ಚೆನ್ನಾಗಿ ಇಲ್ಲ ಎಂದು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪಾಪ ಈ ಎಳೆಯ ಕಂದಮ್ಮನಿಗೆ ಅಪಸ್ಮಾರ ಇದ್ದು, ಒದ್ದಾಡುತ್ತಿದೆ. ಅಲ್ಲದೇ ಈ ಮಗುವಿಗೆ ಬುದ್ಧಿಮಾಂದ್ಯತೆಯೂ ಸಹ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಮಿಮ್ಸ್ ವೈದ್ಯರು ಮಗುವಿಗೆ ಚಿಕಿತ್ಸೆ ನೀಡುತ್ತಾ ಇದ್ದಾರೆ.

  • ಕರಾವಳಿಯಲ್ಲಿ ಚರ್ಚ್‍ಗೆ ನುಗ್ಗಿ ದಾಂಧಲೆ- ಭಗವಾಧ್ವಜ ಹಾರಿಸಿ ಹನುಮಂತನ ಪೂಜೆ!

    ಕರಾವಳಿಯಲ್ಲಿ ಚರ್ಚ್‍ಗೆ ನುಗ್ಗಿ ದಾಂಧಲೆ- ಭಗವಾಧ್ವಜ ಹಾರಿಸಿ ಹನುಮಂತನ ಪೂಜೆ!

    ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಅಂದ್ರೆನೇ ಕೋಮುಸೂಕ್ಷ್ಮ ಪ್ರದೇಶ. ಇಲ್ಲಿ ಕೋಮುಗಲಭೆ, ವಿವಾದಗಳು ಮಾಮೂಲಿ. ಕೆಲ ಕಿಡಿಗೇಡಗಳು ಶಾಂತಿ ಕದಡೋ ಸಲುವಾಗಿಯೇ ಕಾದು ಕುಳಿತಿರ್ತಾರೆ. ಇಷ್ಟು ದಿನ ಮಂದಿರ-ಮಸೀದಿಗಳಿಗೆ ಸೀಮಿತವಾಗಿದ್ದ ಗಲಾಟೆ ಇದೀಗ ಚರ್ಚ್‍ನಲ್ಲೂ ಶುರುವಾಗಿದೆ. ಚರ್ಚ್‍ನ ಬಾಗಿಲು ಒಡೆದೋಗಿದೆ. ಶಿಲುಬೆ ಜಾಗದಲ್ಲಿ ಭಗವಾಧ್ವಜ ಹಾರಾಡ್ತಿದೆ. ಒಳಗೋದ್ರೆ ಟೇಬಲ್ ಮೇಲೆ ಹನುಮಂತನ ಫೋಟೋ ಇದೆ. ಮುಂದೆ ದೀಪ ಬೆಳಗ್ತಿದೆ. ಇದು ಕಿಡಿಗೇಡಿಗಳ ಕೃತ್ಯವೋ..? ಅಕ್ರಮ ಒತ್ತುವರಿ ತೆರವೋ ಗೊತ್ತಿಲ್ಲ. ಆದ್ರೆ ವಿವಾದದ ಕಿಡಿ ಮಾತ್ರ ಹೊತ್ತಿ ಉರೀತಿದೆ.

    ಹೌದು. ದಕ್ಷಿಣಕನ್ನಡ ಜಿಲ್ಲೆ ಕಡಬ ತಾಲೂಕಿನ ಪೇರಡ್ಕದಲ್ಲಿರೋ ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಚರ್ಚ್‍ನ ಅವಸ್ಥೆಯಿದು. ಇಲ್ಲಿ ದುರಸ್ಥಿ ಕಾಮಗಾರಿ ನಡೀತಿತ್ತು. ಆದರೆ ರಾತ್ರೋರಾತ್ರಿ ಚರ್ಚ್‍ಗೆ ನುಗ್ಗಿದ ಕಿಡಿಗೇಡಿಗಳು ಶಿಲುಬೆ ಒಡೆದಾಕಿ ಅಲ್ಲಿ ಭಗವಾಧ್ವಜ ಹಾರಿಸಿದ್ದಾರೆ. ಕಬೋರ್ಡ್‍ನಲ್ಲಿದ್ದ ದಾಖಲೆಗಳನ್ನು ನಾಶ ಮಾಡಿ ಎಲೆಕ್ಟ್ರಾನಿಕ್ ಸಾಮಗ್ರಿ ಕಳವು ಮಾಡಿದ್ದಾರಂತೆ. ಈ ಬಗ್ಗೆ ಪಾಸ್ಟರ್ ಜೋಸ್ ವರ್ಗಿಸ್ ಕಡಬ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಎನ್‍ಕೌಂಟರ್‌ನಲ್ಲಿ ಮೂರು ಭಯೋತ್ಪಾದಕರ ಪೈಕಿ ಒಬ್ಬ ಬದುಕುಳಿದ

    ದೂರುದಾರರ ಪ್ರಕಾರ, 30 ವರ್ಷಗಳಿಂದ ಕಟ್ಟಡದ ತೆರಿಗೆ ಕಟ್ಟುತ್ತಿದ್ದಾರಂತೆ. ಚರ್ಚ್ ಅಧಿಕೃತ ಅಂತ ದೂರಿನಲ್ಲೂ ಉಲ್ಲೇಖಿಸಿದ್ದಾರೆ. ವಿಷ್ಯ ಗೊತ್ತಾಗ್ತಿದ್ದಂತೆಯೇ ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ರು. ಚರ್ಚ್ ಖಾಸಗಿ ವ್ಯಕ್ತಿಗೆ ಸೇರಿದ್ದು. ಮೊದಲು ಬಾಡಿಗೆಗೆ ಪಡೆದು ಆ ಬಳಿಕ ಕೃಷಿ ಭೂಮಿ ಮಾಡ್ಕೊಂಡಿದ್ದಾರೆ. ನಂತ್ರ ಸುತ್ತಲಿನ ಜಾಗವನ್ನೂ ಒತ್ತುವರಿ ಮಾಡ್ಕೊಂಡಿದ್ದಾರೆ. ಇದನ್ನು ತೆರವುಗೊಳಿಸದಿದ್ರೆ ಉಗ್ರ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ರು.

    ಒಟ್ಟಿನಲ್ಲಿ ದೂರು ದಾಖಲಿಸಿಕೊಂಡಿರೋ ಪೊಲೀಸರು ಸದ್ಯ ತನಿಖೆ ನಡೆಸ್ತಿದ್ದಾರೆ. ಜಾಗ ಯಾರದ್ದು..? ದಾಂಧಲೆ ನಡೆಸಿರೋರು ಯಾರು..? ಅನ್ನೋದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡೋರು ಯಾರೇ ಆಗಿದ್ರೂ ಅವರಿಗೆ ತಕ್ಕಶಿಕ್ಷೆ ಆಗಲೇಬೇಕಿದೆ.

  • ಯೇಸುವಿನ ಮರಣದ ಜೀವಂತ ದೃಶ್ಯ ರೂಪಕ ಕಂಡು ಕಣ್ಣೀರು ಹಾಕಿದ ಭಕ್ತರು

    ಯೇಸುವಿನ ಮರಣದ ಜೀವಂತ ದೃಶ್ಯ ರೂಪಕ ಕಂಡು ಕಣ್ಣೀರು ಹಾಕಿದ ಭಕ್ತರು

    ಮಡಿಕೇರಿ: ಯೇಸು ಕ್ರಿಸ್ತ ಸಾಯುವ ಮುನ್ನ ಅನುಭವಿಸಿದ ನೋವು, ಯಾತನೆಯ ಜೀವಂತ ದೃಶ್ಯ ರೂಪಕವನ್ನು ಕಂಡು ಕ್ರೈಸ್ತ ಧರ್ಮದ ಜನರು ಕಣ್ಣೀರು ಹಾಕಿದ ಘಟನೆ ಸೋಮವಾರಪೇಟೆ ತಾಲೂಕಿನ ಗೋಪುರದ ಗ್ರಾಮದಲ್ಲಿ ನಡೆದಿದೆ.

    ಗೋಪಾಲಪುರ ಸಂತ ಅಂತೋಣಿ ಚರ್ಚ್‍ನಲ್ಲಿ ಗುಡ್ ಫ್ರೈಡೆ(ಶುಭ ಶುಕ್ರವಾರ) ಅಂಗವಾಗಿ ಕ್ರೈಸ್ತ ಭಕ್ತರು ಉಪವಾಸವೆಂದು ಶ್ರದ್ಧೆ ಭಕ್ತಿಯಿಂದ ಗೋಪಾಲಪುರದ ಚರ್ಚ್‍ಗೆ ಆಗಮಿಸಿದ್ದರು. ಈ ವೇಳೆ ಗೋಪಾಲಪುರ ಚರ್ಚ್‍ನ ಹಿಂದೆ ಇರುವ ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ಫಾದರ್ ಜಾಕಬ್ ಕೊಳನೂರು ಅವರು ಪ್ರಾರ್ಥನೆಯ ವಿಧಿ ವಿಧಾನಗಳು ಸಲ್ಲಿಸಿದರು. ಇದನ್ನೂ ಓದಿ: ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ 

    ಇದೇ ಸಂದರ್ಭದಲ್ಲಿ ಗೋಪಾಲಪುರ ಚರ್ಚ್‍ನ ಯುವತಂಡ, ಶಿಲುಬೆಯ ಹಾದಿಯಲ್ಲಿ ಯೇಸು ಅನುಭವಿಸಿದ ಯಾತನೆ ಹಾಗೂ ಮರಣದ ಬಗ್ಗೆ ನೈಜತೆಯಿಂದ ದೃಶ್ಯ ವೃತ್ತಾಂತವನ್ನು ಅಭಿನಯಿಸಿದ ಹಿನ್ನೆಲೆಯಲ್ಲಿ ಚರ್ಚ್‍ಗೆ ಬಂದ ಭಕ್ತರು ಅಂದಿನ ದಿನಗಳಲ್ಲಿ ಯೇಸು ಕ್ರೈಸ್ತ ಅನುಭವಿಸಿದ ನೋವುಗಳನ್ನು ನೋಡಿ ಕಣ್ಣೀರು ಹಾಕಿದ್ರು.

    ವಿಭಿನ್ನವಾಗಿ ದೃಶ್ಯ ರೂಪಕ ಪ್ರಸ್ತುತ ಪಡಿಸಿದವರನ್ನು ಮನಸೂರೆಗೊಳ್ಳಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಚರ್ಚ್‍ನ ಫಾದರ್ ಜಾಕಬ್ ಕೊಳನೂರು ಎಲ್ಲರಿಗೂ ಆಶೀರ್ವಚನ ನೀಡಿದರು. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

  • ಚರ್ಚ್ ಸಭಾಪಾಲನಾ ಸದಸ್ಯನಿಂದ ಲೈಂಗಿಕ ದೌರ್ಜನ್ಯ- ಗರ್ಭಪಾತಕ್ಕೊಳಗಾದ ಯುವತಿ ಸಾವು

    ಚರ್ಚ್ ಸಭಾಪಾಲನಾ ಸದಸ್ಯನಿಂದ ಲೈಂಗಿಕ ದೌರ್ಜನ್ಯ- ಗರ್ಭಪಾತಕ್ಕೊಳಗಾದ ಯುವತಿ ಸಾವು

    ತುಮಕೂರು: ನಿನ್ನೆ ತಾನೇ ವಿಶ್ವ ಮಹಿಳಾ ದಿನಾಚರಣೆ ಆಚರಿಸಿದೆವು ‘ಯತ್ರ ನಾರಿಯಂತು ಪೂಜ್ಯಂತೆ ರಮಂತೆ ತತ್ರ ದೇವತಾ ಎಂದು ಹಾಡಿ ಹೊಗಳಿದೆವು. ಈ ಸಂಭ್ರಮದಲ್ಲಿರಬೇಕಾದರೆ ಜಿಲ್ಲೆಯಿಂದ ಒಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ. ಚರ್ಚ್‍ನ ಸಭಾಪಾಲನಾ ಸದಸ್ಯನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಪಾತಕ್ಕೊಸಳಗಾದ ಯುವತಿಯೊಬ್ಬರು ಸಾವನಪ್ಪಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಶಿರಾ ಗೇಟ್‍ನ ಹೌಸಿಂಗ್ ಬೋರ್ಡ್ ನಿವಾಸಿ ಗ್ರೇಸ್ ಪ್ರೀರ್ತನಾ ಗರ್ಭಪಾತಕ್ಕೊಳಗಾಗಿ ಸಾವನಪ್ಪಿದ್ದ ಯುವತಿ. ಶಿರಾಗೇಟ್ ಬಳಿ ಇರುವ ಸಿ.ಎಸ್.ಐ ವೆಸ್ಲಿ ಚರ್ಚ್‍ನ ಸಭಾಪಾಲನಾ ಸದಸ್ಯ ರಾಜೇಂದ್ರಕುಮಾರ್ ಎಂಬಾತನಿಂದ ಯುವತಿಯು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು. ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರ ಕುಟುಂಬ ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಅವನು, ಯುವತಿಯೊಂದಿಗೆ ಸಲಿಗೆ ಬೆಳೆಸಿದ್ದಾನೆ. ಅವರ ಜೊತೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅವರಿಗೆ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ. ಈ ವೇಳೆ ಅಧಿಕ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ

    ನವೆಂಬರ್ 8 ರಂದು ಯುವತಿ ಗ್ರೇಸ್ ಪ್ರೀರ್ತನಾ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ಎಲ್ಲಿಯೂ ಬಹಿರಂಗಪಡಿಸದಂತೆ ಯುವತಿ ತಾಯಿ ಸಂತೋಷ್ ಸ್ಟೆಲ್ಲಾಗೆ ಪಾಸ್ಟರ್‌ನು ಹಣದ ಆಮಿಷದ ಜೊತೆಗೆ ಬೆದರಿಕೆಯನ್ನೂ ಒಡ್ಡಿದ್ದಾನೆ. ಆದರೆ ತಡವಾಗಿ ಮಂಗಳವಾರ ಯುವತಿ ತಾಯಿ ತುಮಕೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಎಫ್‍ಐಆರ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ: ಡೀಮ್ಡ್ ಅಧ್ಯಕ್ಷ

  • ಚರ್ಚ್‍ನಲ್ಲಿ ತಂದೆಯಿಂದಲೇ ಮಕ್ಕಳ ಕೊಲೆ- ಐವರು ಸಾವು

    ಚರ್ಚ್‍ನಲ್ಲಿ ತಂದೆಯಿಂದಲೇ ಮಕ್ಕಳ ಕೊಲೆ- ಐವರು ಸಾವು

    ಕ್ಯಾಲಿಫೋರ್ನಿಯಾ: ಮೂರು ಮಕ್ಕಳನ್ನು ತಂದೆಯೇ ಗುಂಡಿಕ್ಕಿ ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯುಎಸ್ ಚರ್ಚ್‍ನಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ. ಆದರೆ ಆ ವ್ಯಕ್ತಿಯು ಆ ಮನೆಗೆ ಸಂಬಂಧಿಸಿದ ವ್ಯಕ್ತಿಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಮೂವರು ಮಕ್ಕಳು 15 ವರ್ಷದ ಕೆಳಗಿನವರಾಗಿದ್ದಾರೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಸಾಜೆರ್ಂಟ್ ರಾಡ್ ಗ್ರಾಸ್‍ಮನ್ ತಿಳಿಸಿದರು. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

    ಚರ್ಚ್‍ನಲ್ಲಿ ಈ ಕೃತ್ಯ ನಡೆದಿದ್ದು, ಈ ಬಗ್ಗೆ ಸ್ಥಳೀಯರಿಂದ ಕರೆಬಂದಿದೆ. ಮೂರು ಗಂಡು ಮಕ್ಕಳ ಮೃತದೇಹವನ್ನು ಈಗಾಗಲೇ ಪರಿಶೀಲಿಸಲಾಗಿದೆ. ನಗರದ ಆರ್ಡೆನ್ ಆರ್ಕೇಡ್ ಪ್ರದೇಶದ ಚರ್ಚ್ ಆಫ್ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮತ್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕೌಟುಂಬಕ ಸಮಸ್ಯೆಯಿಂದಾಗಿ ಈ ಘಟನೆಯಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಟ್ವಿಟರ್ ಪೋಸ್ಟ್‌ನಲ್ಲಿ ಈ ಕೊಲೆಗಳನ್ನು ಪ್ರಜ್ಞಾಶೂನ್ಯ ಎಂದು ಕರೆದಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

  • ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

    ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

    ಮುಂಬೈ: ಪಾದ್ರಿಯೊಬ್ಬರು ಚರ್ಚ್ನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಮಹಾರಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ಹಿರಿಯ ಪಾದ್ರಿಗಳು ನೀಡುತ್ತಿದ್ದ ಕಿರುಕುಳವೇ ಆತ್ಮಹತ್ಯೆ ಯತ್ನಿಸಲು ಕಾರಣ ಎಂದು ಆರೋಪಿಸಲಾಗಿದೆ.

    ಭಾನುವಾರ ಶಾಲಿಮಾರ್ ಚೌಕ್‌ನಲ್ಲಿರುವ ಸೇಂಟ್ ಥಾಮಸ್ ಚರ್ಚ್ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಘಟನೆ ನಡೆದಿದೆ. ಚರ್ಚ್ನಲ್ಲಿ ಫಾದರ್ ಅನಂತ್ ಆಪ್ಟೆ(61) ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಇದನ್ನೂ ಓದಿ: iPhone ಕಾರ್ಖಾನೆ ಆಹಾರ ಸೇವಿಸಿ 150 ಮಂದಿ ಅಸ್ವಸ್ಥ

    ಈ ಸಮಯದಲ್ಲಿ ಅಲ್ಲಿದ್ದ ಜನರು ಬೆಂಕಿಯನ್ನು ನಂದಿಸಿದ್ದಾರೆ. ಸುಟ್ಟ ಗಾಯಗಳಾಗಿದ್ದರಿಂದ ಅವರನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಿರಿಯ ಪಾದ್ರಿಗಳ ಕಿರುಕುಳ ತಾಳಲಾರದೆ ತಾನು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಅವರು ಹೇಳಿದ್ದು, ಈ ಕುರಿತು ಭದ್ರಕಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಲೀಕನ ಮೇಲಿದ್ದ ಸಿಟ್ಟಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡ್ಕೊಂಡು ಎಸ್ಕೇಪ್!

  • ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಉಡುಪಿ: ಕೇಂದ್ರ ಸರ್ಕಾರದ ಮಾಜಿ ಸಚಿವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ವಿಧಿವಶರಾಗಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ಮೃತದೇಹವನ್ನು ಉಡುಪಿ ನಗರದ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

    ಮಂಗಳವಾರ ಮುಂಜಾನೆ 9 ಗಂಟೆ ಸುಮಾರಿಗೆ ಕರೆತರಲಾಗುತ್ತದೆ. ಚರ್ಚ್‍ನಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಧರ್ಮಗುರುಗಳು ನೆರವೇರಿಸಲಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪ್ರಾರ್ಥನೆ ನೆರವೇರಲಿದೆ.

    ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಚರ್ಚ್ ಫಾದರ್ ಚಾಲ್ರ್ಸ್ ಮಿನೇಜಸ್ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಡುತ್ತಾರೆ. ಜಿಲ್ಲೆಯ ಕೆಲ ಗಣ್ಯರು ಇದೇ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ಅಂತಿಮ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ:  ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

    ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಸ್ಕರ್ ಫರ್ನಾಂಡಿಸ್ ಮೃತದೇಹವನ್ನು ರವಾನೆ ಮಾಡಲಾಗುತ್ತದೆ. ಜಿಲ್ಲೆಯ ಹಿರಿಯ ನಾಯಕರು ಕಾರ್ಯಕರ್ತರು ಆಸ್ಕರ್ ಫರ್ನಾಂಡಿಸ್ ಹಿತೈಷಿಗಳು ಆಪ್ತರು ಬಂದು ದರ್ಶನ ಮಾಡುವ ವ್ಯವಸ್ಥೆಯನ್ನು. ಮಧ್ಯಾಹ್ನ 1.30ರವರೆಗೆ ಅಂತಿಮ ದರ್ಶನ ವ್ಯವಸ್ಥೆ ಇದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮಾಹಿತಿ ನೀಡಿದೆ.

  • ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    -ದೇವಸ್ಥಾನಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿ
    -ದೇವಸ್ಥಾನದಲ್ಲಿ ವಿಗ್ರಹವಿದೆ ಚರ್ಚ್ ಮಸೀದಿಗಳಲ್ಲಿ ಇಲ್ಲ

    ಮೈಸೂರು: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ. ಕಳ್ಳರು ಬರುವ ರೀತಿ ಬೆಳಗಿನ ಜಾವ ಬಂದು ದೇವಸ್ಥಾನ ಹೊಡೆದು ಹಾಕುತ್ತಿದ್ದಾರೆ. ಬರೀ ದೇವಸ್ಥಾನ ತೆರವು ಯಾಕೆ? ಮಸೀದಿ, ಚರ್ಚ್‍ಗಳು ಕಣ್ಣಿಗೆ ಕಾಣವುದಿಲ್ಲವೇ ಎಂದು ಜಿಲ್ಲಾಡಳಿತ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, ದೇವಸ್ಥಾನವನ್ನು ಜಿಲ್ಲಾಡಳಿತ ಏಕಾಏಕಿ ಧ್ವಂಸ ಮಾಡುತ್ತದೆ. ಆದರೆ ಫುಟ್‍ಪಾತ್‍ನಲ್ಲಿ ಇರುವ ಗೋರಿ, ಚರ್ಚ್‍ಗಳು ನಿಮ್ಮ ಕಣ್ಣಿಗೆ ಕಾಣಲ್ವಾ. ಜಿಲ್ಲಾಡಳಿತ ಕಳ್ಳರು ಬಂದ ಹಾಗೆ ಬಂದು, ಬರುವ ವೇಳೆ ಕಾರ್ಯಚಾರಣೆಗೆ ಜೆಸಿಬಿ ತೆಗೆದು ಕೊಂಡು ಬರುತ್ತಾರೆ. ಕ್ಯಾತಮಾರನಹಳ್ಳಿ, ನರಸಿಂಹರಾಜ ರಸ್ತೆಗಳಲ್ಲಿ ಅನಧಿಕೃತವಾಗಿ ಮಸೀದಿ ಬಂತು. ಯಾಕೆ ಜಿಲ್ಲಾಡಳಿತ ತಡೆಯಲಿಲ್ಲ? ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಅಲ್ಲವೇ? ಜನವಸತಿ ಪ್ರದೇಶದಲ್ಲಿ ಎನ್.ಆರ್. ಕ್ಷೇತ್ರದಲ್ಲಿ ಅನಧಿಕೃತ ಮಸೀದಿ, ಚರ್ಚ್ ಕಟ್ಟಲು ನೀವೆ ಬಿಟ್ಟಿದ್ದಿರಿ? ಇದು ಕೋರ್ಟ್ ಆದೇಶ ಉಲ್ಲಂಘನೆ ಅಲ್ವಾ? 90 ದೇವಾಲಯ ಪಟ್ಟಿ ಮಾಡುವಾಗ ಕೋರ್ಟ್ ನಿರ್ದೇಶದಂತೆ ಜನರ ಅಭಿಪ್ರಾಯ ಕೇಳಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

    ದೇವಾಲಯಗಳಿಗೆ ಎದುರಾಗಿರೋ ಕಂಟಕ ನಿವಾರಣೆ ಮಾಡು ಎಂದು ಗಣಪತಿಯಲ್ಲಿ ಬೇಡಿದ್ದೇನೆ. ಈ ದೇವಸ್ಥಾನದ ಮೇಲೆ ಅಪರಿಮಿತಿ ನಂಬಿಕೆ ಈ ದೇವಸ್ಥಾನದ ಮೇಲಿದೆ. ವಿಶ್ವಾಸದ ಈಡುಗಂಟು ಈ ದೇವಸ್ಥಾನದಲ್ಲಿ ಜನ ಇಟ್ಟಿದ್ದಾರೆ. ದೇವಸ್ಥಾನದ ನೆಲ ಸಮ ಮಾಡಲು ಜಿಲ್ಲಾಡಳಿತ ನೋಟಿಸ್ ನೋಡಿದೆ. 1955 ರಲ್ಲಿ ದೇವಸ್ಥಾನ ಆರಂಭವಾಗಿದೆ. 90ಕ್ಕಿಂತ ಹೆಚ್ಚು ದೇವಸ್ಥಾನ ನೆಲ ಸಮ ಮಾಡಲು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಇದಕ್ಕೆ ಜನಸಾಮಾನ್ಯರಿಂದ ಪ್ರತಿರೋಧ ವ್ಯಕ್ತವಾಗಿದೆ. ಜನರ ಜೊತೆ ಚರ್ಚೆ ಮಾಡದೆ ನೆಲಸಮಮಾಡುವ ಕ್ರಮ ಸರಿಯಲ್ಲ. ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ ಎಂದು 2009ರ ಸುಪ್ರೀಂಕೋರ್ಟ್ ಆದೇಶವನ್ನು ಸಂಸದರು ಓದಿ ತಿಳಿಸದರು. 2009 ಕ್ಕಿಂತಾ ಮುಂಚೆ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಸ್ಥಳಗಳು ನಿರ್ಮಾಣವಾಗಿದ್ದರೆ ಏನೂ ಮಾಡಬೇಕು ಎಂಬುದು ಆದೇಶದಲ್ಲಿ ವಿವರಿಸಲಾಗಿದೆ. 2009 ರಿಂದ ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಅವಕಾಶ ಕೊಟ್ಟಿಲ್ವಾ? ಎಂದು ಜಿಲ್ಲಾಡಳಿತ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

    ದೇವಸ್ಥಾನದಲ್ಲಿ ವಿಗ್ರಹಗಳಿವೆ ಆದರೆ ಮಸೀದಿ, ಚರ್ಚ್‍ನಲ್ಲಿ ವಿಗ್ರಗಳಿಲ್ಲ. ದೇವಸ್ಥಾನದ ಮೇಲೆ ವಿಶೇಷವಾದ ನಂಬಿಕೆ ಇದೆ ಮಸೀದಿ, ಚರ್ಚ್‍ಗಳಲ್ಲಿ ಕೇವಲ ಪ್ರಾರ್ಥನೆ ಮಾತ್ರ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಹಾಗಲ್ಲ ಭಕ್ತರು ನಂಬಿಕೆ ಇಟ್ಟಿರುತ್ತಾರೆ. ದೇವಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಇಲ್ವಾ? ಅದನ್ನು ಮಾಡಿ ಎಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಜನ ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್

  • ಗಂಭೀರವಾಗಿ ಆಶೀರ್ವದಿಸಲು ಬಂದ ಪಾದ್ರಿಗೆ ಹೈ ಫೈ ನೀಡಿದ ಬಾಲಕಿ- ವಿಡಿಯೋ ವೈರಲ್

    ಗಂಭೀರವಾಗಿ ಆಶೀರ್ವದಿಸಲು ಬಂದ ಪಾದ್ರಿಗೆ ಹೈ ಫೈ ನೀಡಿದ ಬಾಲಕಿ- ವಿಡಿಯೋ ವೈರಲ್

    ನವದೆಹಲಿ: ತಾಯಿ-ಮಗಳು ಚರ್ಚ್‍ಗೆ ತೆರಳಿದ ವೇಳೆ ಪಾದ್ರಿ ಪುಟ್ಟ ಬಾಲಕಿಗೆ ಆಶೀರ್ವದಿಸಲು ಮುಂದಾಗಿದ್ದು, ಪಾದ್ರಿ ಕೈ ಮುಂದೆ ತರುತ್ತಿದ್ದಂತೆ ತನ್ನ ಕೈ ಸೇರಿಸಿ ಬಾಲಕಿ ಹೈ ಫೈ ಮಾಡಿದ್ದಾಳೆ. ಈ ಕ್ಯೂಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಡಿಯೋವನ್ನು ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಪ್‍ಮಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಫಾದರ್ ಆಶೀರ್ವದಿಸಲು ಕೈ ಮುಂದೆ ತಂದರೆ, ಮುಗ್ಧ ಬಾಲಕಿ ಹೈ ಫೈ ಮಾಡುತ್ತಾಳೆ. ಆಗ ಫಾದರ್ ನಗು ತಡೆಯಲು ಯತ್ನಿಸುತ್ತಾರೆ. ತುಂಬಾ ಒಳ್ಳೆಯದನ್ನು ನೀವು ಇಂದು ನೋಡುತ್ತಿದ್ದೀರಿ ಎಂದು ಬರೆದುಕೊಂಡಿದ್ದಾರೆ.

    https://twitter.com/RexChapman/status/1318935111627321347

    ವಿಡಿಯೋದಲ್ಲಿ ಏನಿದೆ?
    ಪುಟ್ಟ ಬಾಲಕಿ ತನ್ನ ತಾಯಿಯೊಂದಿಗೆ ಚರ್ಚ್‍ಗೆ ತೆರಳಿದ್ದಾಳೆ. ಈ ವೇಳೆ ಚರ್ಚ್‍ನ ಫಾದರ್ ಆಶೀರ್ವಾದ ಪಡೆಯಲು ತೆರಳಿದ್ದಾರೆ. ಅದೇ ರೀತಿ ಫಾದರ್ ಸಹ ಬಾಲಕಿಗೆ ಆಶೀರ್ವಾದ ಮಾಡಲು ಕೈ ಮುಂದೆ ತಂದಿದ್ದು, ಇದನ್ನು ಗಮನಿಸಿದ ಕ್ಯೂಟ್ ಬೇಬಿ ಸಹ ತನ್ನ ಕೈ ಮುಂದೆ ತಂದಿದ್ದಾಳೆ. ಅಲ್ಲದೆ ಅವರಿಗೆ ಹೈ ಫೈ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕಮೆಂಟ್ ಮಾಡುವ ಮೂಲಕ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಬಾಲಕಿಯ ಮುಗ್ಧತೆ ಕಂಡು ಫಾದರ್ ಬೆರಗಾಗಿದ್ದು, ನಗುವಿನಲ್ಲಿ ತೇಲುವಂತೆ ಮಾಡಿದೆ. ನಂತರ ಮುಖವನ್ನು ಕೈಯಿಂದ ಮುಚ್ಚಿಕೊಂಡು ಬಾಲಕಿಗೆ ಆಶೀರ್ವದಿಸುತ್ತಾರೆ.

    ಈ ವಿಡಿಯೋ ನಿರೀಕ್ಷೆಯಂತೆ ಸಖತ್ ವೈರಲ್ ಆಗಿದ್ದು, 22 ಲಕ್ಷ ಬಾರಿ ವೀಕ್ಷಣೆಯಾಗಿದೆ. 29,100ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಅಲ್ಲದೆ 6,300ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಬಾಲಕಿ ಹೈ ಫೈ ಮಾಡಿರುವುದು, ಫಾದರ್ ನಗುವಿನಲ್ಲಿ ತೇಲಿರುವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

    ಚಿಕ್ಕ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಹೈ ಫೈ ಮಾಡುವುದು ಕಲಿಸಿಲ್ಲ ಎಂದಾದರೆ ನೀವು ಸರಿಯಾಗಿ ಬೆಳೆದಿಲ್ಲ ಎಂದರ್ಥ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಚರ್ಚ್‍ನಲ್ಲಿ ಗಂಭೀರ ಕ್ಷಣದ ಮಧ್ಯೆ ನಗುವುದಕ್ಕಿಂತ ಇನ್ನಾವುದೇ ನಗುವನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

    ಮಗುವಿನ ಕಣ್ಣಿನ ಮೂಲಕ ಪ್ರಪಂಚ ನೋಡುವುದು ಅದ್ಭುತ ಕ್ಷಣ ಎಂದು ಮೂರನೇಯವರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೋಡಿ ಚರ್ಚ್‍ನ ವ್ಯವಸ್ಥೆಯಲ್ಲಿಯೂ ನಮಗೆ ಸ್ವಲ್ಪ ಮಟ್ಟಿನ ಅವಶ್ಯಕತೆ ಇದೆ. ಒಳ್ಳೆಯ ಫಾದರ್ ತಮ್ಮ ಇತರ ಅನುಯಾಯಿಗಳಿಗೂ ಇದೇ ರೀತಿ ಹೇಳಿಕೊಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.