Tag: church blast

  • ಚರ್ಚ್ ಬ್ಲಾಸ್ಟ್ ಪ್ರಕರಣದ ಆರೋಪಿ ಪತ್ನಿಯ ವೀಸಾ ರದ್ದು- ಪಾಕಿಸ್ತಾನಕ್ಕೆ ಕಳುಹಿಸಿದ ಗೃಹ ಇಲಾಖೆ

    ಚರ್ಚ್ ಬ್ಲಾಸ್ಟ್ ಪ್ರಕರಣದ ಆರೋಪಿ ಪತ್ನಿಯ ವೀಸಾ ರದ್ದು- ಪಾಕಿಸ್ತಾನಕ್ಕೆ ಕಳುಹಿಸಿದ ಗೃಹ ಇಲಾಖೆ

    ಕಾರವಾರ: 2015ರಲ್ಲಿ ಬೆಂಗಳೂರು ಚರ್ಚ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳ ಮೂಲದ ಭಯೋತ್ಪಾದಕ ಅಫಾಕ್ ಲಂಕಾ ಪತ್ನಿ ಅರ್ಸಲ ಅಬೀರ್ ವೀಸಾವನ್ನು ಕೇಂದ್ರ ಗೃಹ ಇಲಾಖೆ ರದ್ದು ಪಡಿಸಿ, ಮರಳಿ ಪಾಕಿಸ್ತಾನಕ್ಕೆ ಕಳುಹಿಸಿದೆ.

    ಒಂದು ತಿಂಗಳ ಹಿಂದೆಯೇ ಪಾಕಿಸ್ತಾನಕ್ಕೆ ತೆರಳುವಂತೆ ಅರ್ಸಲ ಅಬೀರ್ ಗೆ ನೋಟಿಸ್ ನೀಡಲಾಗಿತ್ತು. 2006ರಿಂದ ದೀರ್ಘ ಅವಧಿಯ ವೀಸಾ ಪಡೆದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂವರು ಮಕ್ಕಳೊಂದಿಗೆ ಅರ್ಸಲ ಅಬೀರ್ ವಾಸವಿದ್ದರು. ಅಪಕಾ ಲಂಕಾ ಪಾಕಿಸ್ತಾನ ಮೂಲದ ಅರ್ಸಲಳನ್ನು ದುಬೈನಲ್ಲಿ ಮದುವೆಯಾಗಿದ್ದನು. ನಂತರ ಪಾಕಿಸ್ತಾನದಲ್ಲಿ ಇಬ್ಬರೂ ಕೆಲವು ವರ್ಷ ನೆಲೆಸಿ ನಂತರ ಭಟ್ಕಳದ ಆಜಾದ್ ನಗರದಲ್ಲಿ ಅಫಾಕ್ ಲಂಕಾ ಯುನಾನಿ ವೈದ್ಯಕೀಯ ಚಿಕಿತ್ಸಾ ಕೇಂದ್ರ ತೆರೆದಿದ್ದನು. ಈ ವೇಳೆ ಬೆಂಗಳೂರಿನ ಚರ್ಚ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

    ಈತನ ಪತ್ನಿ ಹಾಗೂ ಈತನ ಖಾತೆಗೆ ಪಾಕಿಸ್ತಾನದ ಕೆಲವು ನಿಷೇಧಿತ ಸಂಘಟನೆಗಳು ಹಣ ವರ್ಗಾವಣೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಅರ್ಸಲ ಅಬೀರ್‍ಳನ್ನು ಕೂಡ ತನಿಖೆ ನಡೆಸಲಾಗಿತ್ತು. ಇದೀಗ ದೇಶದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಗೃಹ ಇಲಾಖೆ ಈಕೆಯ ವೀಸಾವನ್ನು ರದ್ದು ಪಡಿಸಿದ್ದು, ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ.

    ಚರ್ಚ್ ಸ್ಫೋಟ ಪ್ರಕರಣ:
    ಬೆಂಗಳೂರು ನಗರದ ಹೃದಯ ಭಾಗವಾದ ಎಂ.ಜಿ.ರಸ್ತೆ ಬಳಿಯ ಚರ್ಚ್ ಸ್ಟ್ರೀಟ್‍ನಲ್ಲಿ ಡಿ.28ರ ರಾತ್ರಿ ಸುಮಾರು 8.30ರ ವೇಳೆಗೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ತಮಿಳುನಾಡು ಮೂಲದ ಭವಾನಿ(37) ಎಂಬ ಮಹಿಳೆ ಸಾವನ್ನಪ್ಪಿದ್ದರು. ವಿದ್ಯಾರ್ಥಿ ಕಾರ್ತಿಕ್(23), ಸಾಫ್ಟ್‍ವೇರ್ ಎಂಜಿನಿಯರ್, ರಾಜರಾಜೇಶ್ವರಿ ನಗರದ ನಿವಾಸಿ ಸಂದೀಪ್(30) ಮತ್ತು ಐಬಿಎಂ ಉದ್ಯೋಗಿ ವಿನಯ್(39) ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ದೂರು ದಾಖಲಿಸಿಕೊಂಡಿದ್ದರು. ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಸದ್ದಾಂ ಹುಸೇನ್ (35) ಹಾಗೂ ಸೈಯದ್ ಇಸ್ಮಾಯಿಲ್ ಅಫಾಕ್ (34) ಹಾಗೂ ಎಂಬಿಎ ವಿದ್ಯಾರ್ಥಿ ಅಬ್ದುಸ್ ಸುಬುರ್ (24) ಬಂಧಿಸಿದ್ದರು.

  • ಬೆಂಗಳೂರು ಚರ್ಚ್ ಸ್ಫೋಟ ಕೇಸ್- 12 ಅಪರಾಧಿಗಳಿಗೆ ಜಾಮೀನು ನೀಡಲ್ಲ: ಸುಪ್ರೀಂ

    ಬೆಂಗಳೂರು ಚರ್ಚ್ ಸ್ಫೋಟ ಕೇಸ್- 12 ಅಪರಾಧಿಗಳಿಗೆ ಜಾಮೀನು ನೀಡಲ್ಲ: ಸುಪ್ರೀಂ

    ನವದೆಹಲಿ: ಚರ್ಚ್‍ಗಳ ಮೇಲೆ ಸರಣಿ ಬಾಂಬ್ ಸ್ಫೋಟ ಮಾಡಿದ ಅಪರಾಧಿಗಳಿಗೆ ಜಾಮೀನು ನೀಡುವುದಿಲ್ಲ ಅಂತಾ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

    2000ನೇ ಇಸವಿಯಲ್ಲಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಯ ಚರ್ಚ್ ಗಳ ಮೇಲೆ ದಾಳಿ ಮಾಡಿದ್ದ 12 ಜನ ಅಪರಾಧಿಗಳಿಗೆ ಜಾಮೀನು ನೀಡುವುದಿಲ್ಲ ಅಂತಾ ಸುಪ್ರೀಂಕೋರ್ಟ್ ಹೇಳಿದೆ.

    ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಜನ ಅಪರಾಧಿಗಳಿಗೆ ಹೈಕೊರ್ಟ್ ವಿಧಿಸಿದ್ದ ಜೀವವಾಧಿ ಶಿಕ್ಷೆಯನ್ನು ವಜಾಗೊಳಿಸಿ ಜಾಮೀನು ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

    ದೀನ್‍ಧಾರ್ ಅಂಜುಮನ್ ಸಂಘಟನೆಯ ಒಟ್ಟು ಹದಿಮೂರು ಮಂದಿ ಸದಸ್ಯರು 2000 ಇಸವಿಯಲ್ಲಿ ರಾಜ್ಯದ ಮೂರು ಜಿಲ್ಲೆಯಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಾಗಿಯಾಗಿದ್ರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೊರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು.

    ಪ್ರಕರಣದ ಒಂಭತ್ತನೇ ಆರೋಪಿ ಸೈಯದ್ ಅಬ್ದುಲ್ ಗಿಲಾನಿ ಸುಪ್ರೀಂಕೋರ್ಟ್ ಮೂಲಕ ಈ ಹಿಂದೆ ಜಾಮೀನು ಪಡೆದಿದ್ದ. ಹೈಕೊರ್ಟ್ ಆದೇಶ ಪ್ರಶ್ನಿಸಿದ 12 ಅಪರಾಧಿಗಳು ಜಾಮೀನು ನೀಡುವಂತೆ ಸುಪ್ರಿಂಕೊರ್ಟ್ ಗೆ ಅರ್ಜಿ ಸಲ್ಲಿಸಿದ್ರು. ಇಂದು ವಿಚಾರಣೆ ನಡೆಸಿದ ನ್ಯಾ. ಪಿನಾಕಿ ಚಂದ್ರ ಘೋಷ್ ನೇತೃತ್ವದ ದ್ವಿಸದಸ್ಯ ಪೀಠ, ರಾಷ್ಟ್ರೀಯ ಭದ್ರತಾ ವಿಚಾರವಾಗಿರುವುದರಿಂದ ಅಪರಾಧಿಗಳೀಗೆ ಜಾಮೀನು ನೀಡುವುದಿಲ್ಲ ಎಂದಿದೆ.

    ಸರ್ಕಾರದ ಪರ ವಕೀಲ ದೇವವತ್ ಕಾಮತ್, ಈ ಹಿಂದೆ ಜಾಮೀನು ಪಡೆದಿದ್ದ ಸೈಯದ್ ಅಬ್ದುಲ್ ಗಿಲಾನಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಈ ಹಿನ್ನಲೆ ಗಿಲಾನಿಗೆ ನೀಡಿದ್ದ ಜಾಮೀನು ವಜಾ ಮಾಡಬೇಕು. ಇದು ರಾಷ್ಟ್ರೀಯ ಭದ್ರತಾ ವ್ಯವಸ್ಥೆ ಗೆ ಸಂಬಂಧಿಸಿದ ವಿಷಯ ಎಂದು ಸವಾದ ಮಂಡಿಸಿದ್ರು. ಆದ ಆಲಿಸಿದ ಸುಪ್ರೀಂಕೋರ್ಟ್ ಜಾಮೀನು ರದ್ದು ಗೊಳಿಸುಂತೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿದ್ದು, ಗಿಲಾನಿಗೂ ನೀಡಿದ್ದ ಜಾಮೀನು ರದ್ದು ಮಾಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

    ಇನ್ನೂ 12 ಅಪರಾಧಿಗಳ ಅರ್ಜಿಗಳನ್ನು ವಿಚಾರಣೆಗೆ ಅಂಗೀಕಾರ ಮಾಡಿರುವ ಕೋರ್ಟ್ ಬೇಸಿಗೆ ರಜೆಯ ಬಳಿಕ ವಿಚಾರಣೆ ಮಾಡುವುದಾಗಿ ಹೇಳಿದೆ.