Tag: christmas

  • ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE  ಮಾಡೋದು ಹೇಗೆ?

    ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE ಮಾಡೋದು ಹೇಗೆ?

    ಕ್ರಿಸ್‍ಮಸ್ ಹಬ್ಬ ಬಂದರೆ ಸಾಕು ಥಟ್ಟನೆ ನೆನಪಾಗೋದು ಕೇಕ್. ಹೆಚ್ಚಿನ ಕೇಕ್ ಗಳನ್ನು ಮೊಟ್ಟೆ ಹಾಕಿಯೇ ಮಾಡುತ್ತಾರೆ. ಆದ್ರೆ ಈ ರೀತಿಯ ಕೇಕ್ ಎಲ್ಲರಿಗೂ ಇಷ್ಟವಾಗಲ್ಲ. ಆದ್ದರಿಂದ ಕೆಲವರಿಗಾಗಿ ಎಗ್‍ಲೆಸ್ ಕೇಕ್ ಮಾಡೋ ವಿಧಾನವನ್ನು ಇಲ್ಲಿ ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    * ಮಿಕ್ಸೆಡ್ ಫ್ರೂಟ್ ಜ್ಯೂಸ್ / ಆರೆಂಜ್ / ದ್ರಾಕ್ಷಿ / ಮಾಂಗ್ಯೋ – 50 ಎಂಎಲ್
    * ಗೋಡಂಬಿ – 3-4
    * ದ್ರಾಕ್ಷಿ – 6-7
    * ಖರ್ಜೂರ – 4-5
    * ಬಾದಾಮಿ – 5-6
    * ಟೂಟಿ ಫ್ರೂಟಿ – ಅರ್ಧ ಕಪ್
    * ಕಪ್ಪು ದ್ರಾಕ್ಷಿ – 5-10
    * ವಾಲ್‍ನಟ್ – 3-4
    * ಚಕ್ಕೆ -ಅರ್ಧ ಇಂಚು
    * ಲವಂಗ – 4
    * ಏಲಕ್ಕಿ – 2-3
    * ಶುಂಠಿ ಪೌಡರ್ – ಕಾಲು ಚಮಚ (ಒಣಶುಂಠಿ)
    * ಸಕ್ಕರೆ – ಅರ್ಧ ಕಪ್
    * ಮೈದಾ ಹಿಟ್ಟು – ಮುಕ್ಕಾಲು ಕಪ್
    * ಬೇಕಿಂಗ್ ಪೌಡರ್ – ಅರ್ಧ ಚಮಚ
    * ಬೇಕಿಂಗ್ ಸೋಡಾ – ಕಾಲು ಚಮಚ
    * ಮಿಲ್ಕ್ ಪೌಡರ್ – 2 ಚಮಚ
    * ಎಣ್ಣೆ – 3-4 ಚಮಚ (ಬೇಕಿದ್ದರೆ ಬೆಣ್ಣೆ, ತುಪ್ಪ ಬಳಸಬಹುದು)
    * ವೆನಿಲಾ ಎಸೆನ್ಸ್ – 3-4 ಹನಿ
    * ಹಾಲು – ಅರ್ಧ ಕಪ್

    ಮಾಡುವ ವಿಧಾನ
    * ಮೊದಲಿಗೆ ಒಂದು ಬೌಲ್‍ಗೆ ಮೇಲೆ ಹೇಳಿದ ಜ್ಯೂಸ್‍ಗಳಲ್ಲಿ ಯಾವುದಾದರು ಒಂದನ್ನು 50 ಎಂಎಲ್‍ರಷ್ಟು ಹಾಕಿಕೊಳ್ಳಿ. ಅದಕ್ಕೆ ಸಣ್ಣಗೆ ಕಟ್ ಮಾಡಿದ ಗೋಡಂಬಿ, ದ್ರಾಕ್ಷಿ, ಖರ್ಜೂರ, ಬಾದಾಮಿ, ಕಪ್ಪು ದ್ರಾಕ್ಷಿ, ವಾಲ್‍ನಟ್, ಟೂಟಿಫ್ರೂಟಿ ಸೇರಿಸಿ 1 ಗಂಟೆಗಳ ಕಾಲ ನೆನಸಿಡಿ. (ಫ್ರೀಜರ್ ನಲ್ಲಿ ಬೇಕಾದ್ರೂ ಇಡಬಹುದು)

    * ಒಂದು ಮಿಕ್ಸಿಂಗ್ ಬೌಲ್‍ಗೆ ಅರ್ಧ ಕಪ್ ಮೈದಾ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಮಿಲ್ಡ್ ಪೌಡರ್ ಹಾಕಿ ಕಲಸಿ.
    * ಬಳಿಕ ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಪೌಡರ್ ಸೇರಿಸಿ ಪುಡಿ ಮಾಡಿದ ಮಿಶ್ರಣವನ್ನು ಅರ್ಧ ಚಮಚ ಸೇರಿಸಿ. (ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಮಸಾಲ ಸೇರಿಸಬಹುದು)
    * ಬಳಿಕ ಅದಕ್ಕೆ ಎಣ್ಣೆ, ವೆನಿಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ.

    * ಇತ್ತ ಜ್ಯೂಸ್‍ನಲ್ಲಿ ನೆನಸಿಟ್ಟ ಡ್ರೈ ಫ್ರೂಟ್ಸ್ ಅನ್ನು ಸೇರಿಸಿ. ಬಳಿಕ ಸ್ವಲ್ಪ ಸ್ವಲ್ಪವೇ ಹಾಲನ್ನು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ.
    * ಕೇಕ್ ಮಿಶ್ರಣ ತುಂಬಾ ತೆಳ್ಳಗೆ ಆಗಬಾರದು. ತುಂಬಾ ಗಟ್ಟಿಯೂ ಆಗಬಾರದು. ಹೀಗಾಗಿ ಹಾಲನ್ನು ಮಿಶ್ರಣದ ಹದ ನೋಡಿಕೊಂಡು ಸೇರಿಸಬೇಕು.

    * ಬಳಿಕ ಬೆಣ್ಣೆ/ಎಣ್ಣೆ/ತುಪ್ಪ ಸವರಿದ ಕೇಕ್, ಪ್ಯಾನ್‍ಗೆ ಮಿಶ್ರಣವನ್ನು ಹಾಕಿ. ಓವನ್‍ನಲ್ಲಿ 180 ಡಿಗ್ರಿಯಲ್ಲಿ 30ರಿಂದ 35ನಿಮಿಷ ಬೇಕ್ ಮಾಡಿ.
    * ಓವನ್ ಇಲ್ಲದಿದ್ದರೆ ಕುಕ್ಕರ್ ಒಲೆ ಮೇಲಿಟ್ಟು ಅದಕ್ಕೆ ಮರಳು/ಉಪ್ಪು/ತಟ್ಟೆ ಇಡ್ಲಿ ಸ್ಟ್ಯಾಂಡ್ ಇಟ್ಟು 5 ನಿಮಿಷ ಕಾಯಲು ಬಿಡಿ.
    * ಆಮೇಲೆ ಕೇಕ್ ಮಿಶ್ರಣ ಹಾಕಿದ್ದ ಪ್ಯಾನ್ ಅನ್ನು ಇಟ್ಟು ವಿಷಲ್ ತೆಗೆದು ಅರ್ಧ ಗಂಟೆಗಳ ಕಾಲ ಲೋ ಫ್ಲೇಮ್‍ನಲ್ಲಿ ಕುಕ್ ಮಾಡಿ.
    * ಕೇಕ್ ಬೆಂದಿದ್ಯಾ ಎಂದು ಸ್ಟಿಕ್ ಇಟ್ಟು ನೋಡಿ. ತಣ್ಣಗಾದ ಬಳಿಕ ಕೇಕ್ ಅನ್ನು ಸಣ್ಣ ಸಣ್ಣಗೆ ಕಟ್ ಮಾಡಿ ಸರ್ವ್ ಮಾಡಿ. ಇದು ಎಗ್‍ಲೆಸ್ ಕೇಕ್ ಆಗಿರುವುದರಿಂದ ಹಲವು ದಿನಗಳವರೆಗೆ ಸ್ಟೋರ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲೊಂದು ಚಾಕ್ಲೇಟ್ ಜಂಕ್ಷನ್- ಸಿಹಿ ಪ್ರಿಯರಿಗೆ ಹಬ್ಬವೋ ಹಬ್ಬ

    ಬೆಂಗ್ಳೂರಲ್ಲೊಂದು ಚಾಕ್ಲೇಟ್ ಜಂಕ್ಷನ್- ಸಿಹಿ ಪ್ರಿಯರಿಗೆ ಹಬ್ಬವೋ ಹಬ್ಬ

    ಬೆಂಗಳೂರು: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಹಾಲು ಹಲ್ಲಿನ ಕಂದನಿಂದ ಹಿಡಿದು ಹಲ್ಲು ಬಿದ್ದ ಅಜ್ಜಿವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹೀಗಾಗಿಯೇ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ವೆರೈಟಿ ವೆರೈಟಿ ಚಾಕ್ಲೇಟ್ ಗಳು ಸಿಲಿಕಾನ್ ಸಿಟಿಗೆ ಲಗ್ಗೆಯಿಟ್ಟಿವೆ.

    ಹೌದು. ಹಲಸೂರು ಹತ್ತಿರದ ಚಾಕಲೇಟ್ ಜಂಕ್ಷನ್‍ನಲ್ಲಿ ಪ್ಲೇನ್ ಚಾಕ್ಲೆಟ್, ಆರೆಂಜ್ ಫ್ಲೇವರ್, ನೆಟ್ಸ್, ಬಟರ್ ಸ್ಕಾಚ್, ಡಾರ್ಕ್, ಕಾಫಿ ಸೇರಿ 70 ಬಗೆಯ ಚಾಕ್ಲೇಟ್ಸ್ ಗಳನ್ನು ಕಾಣಬಹುದಾಗಿದೆ.

    ಚಾಕ್ಲೇಟ್ ನಿಂದ ತಯಾರಾಗಿರೋ ಸಾಂತಾಕ್ಲಾಸ್ ಕಲರ್ ಪುಲ್ ಆಗಿ ಮಿಂಚುತ್ತಿದೆ. ತೊಟ್ಟಿಲ ಬುಟ್ಟಿಯಲ್ಲಿ ಅರಳಿನಿಂತ ಜೋಡಿಗಳು, ಅಲ್ಲಲ್ಲಿ ಕಂಡು ಬರೋ ಪುಟ್ ಪುಟಾಣಿ ಗೊಂಬೆಗಳು, ಕಣ್ ಮಿಟುಕಿಸುತ್ತಿರೋ ಪಪ್ಪಿಸ್. ಇವೆಲ್ಲವೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು ಟೇಸ್ಟೂ ಕೂಡ ಬೊಂಬಾಟ್ ಆಗಿದೆ.

    ಕ್ರಿಸ್ ಮಸ್ ಹಬ್ಬ ಆರಂಭವಾಗುತ್ತಿದೆ. ಹೀಗಾಗಿ 100 ರೂ. ನಿಂದ 1,700 ರೂ. ವರೆಗಿನ ಎಲ್ಲಾ ವಿಧದ ಚಾಕ್ಲೇಟ್ ಗಳು ಲಭ್ಯವಿದೆ. ಕ್ರಿಸ್ ಕೇಕ್ ಕೂಡ ಮಾಡಿದ್ದೇವೆ ಅಂತ ಮಾಲೀಕರಾದ ಅನುಪಮಾ ಅಮರನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಈ ಬಾರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಪೆಷಲ್ ಆಗಿ ಸಂತಾಕ್ಲಾಸ್, ಟೆಡ್ಡಿ ಬಿಯರ್, ಪಪ್ಪಿಸ್, ಜೀಸೆಸ್ ಚಾಕ್ಲೇಟ್ ತಯಾರಿಸಲಾಗಿದೆ. ಹಾಗೇ ಚಾಕ್ಲೇಟ್ ಫೋಟೋ ಪ್ರೇಮ್‍ಗಳು ಕಣ್ಣಿಗೆ ಮುದ ನೀಡ್ತಿವೆ. ಭರ್ಜರಿ ವ್ಯಾಪಾರ ನಡೆಯುತ್ತಿದೆ ಅಂತ ಗ್ರಾಹಕಿ ಪುಷ್ಪಾ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಚಾಕ್ಲೇಟ್ ಕರಾಮತ್ತೆ ಹಾಗೆ. ಡಿಸೈನೂ ಡಿಫೆರೆಂಟ್, ಟೆಸ್ಟೂ ಬೊಂಬಾಟ್ ಆಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್‍ಮಸ್‍ಗಾಗಿ ಸಿಂಪಲ್ ಕೇಕ್ ರೆಸಿಪಿ

    ಕ್ರಿಸ್‍ಮಸ್‍ಗಾಗಿ ಸಿಂಪಲ್ ಕೇಕ್ ರೆಸಿಪಿ

    ವಿಶೇಷ ದಿನಗಳು ಬಂದರೆ ಸಾಕು ಹಬ್ಬದ ಸಂಕೇತವಾಗಿ ಸಿಹಿ ಮಾಡುತ್ತೇವೆ. ಅದೇ ರೀತಿ ಕ್ರಿಸ್‍ಮಸ್ ಹಬ್ಬ ಬಂದರೆ ವಿವಿಧ ಕೇಕ್ ಗಳನ್ನು ಮಾಡಲಾಗುತ್ತದೆ. ಹಬ್ಬದಲ್ಲೂ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಕೇಕ್ ಮಾಡೋಣ ಅಂದುಕೊಂಡಿರುತ್ತೀರಾ. ಹೀಗಾಗಿ ನಿಮಗಾಗಿ ಸಿಂಪಲ್ ಆಗಿ ಕೇಕ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮೈದಾ – 200 ಗ್ರಾಂ
    2. ಸಕ್ಕರೆ – 200 ಗ್ರಾಂ
    3. ಮೊಟ್ಟೆ – 3
    4. ಎಣ್ಣೆ – 100 ಗ್ರಾಂ
    5. ಬೇಕಿಂಗ್ ಪೌಡರ್
    6. ವೆನಿಲಾ ಎಸೆಲ್ಸ್ – 3-4 ಹನಿ
    7. ಟೂಟಿ ಫ್ರೂಟಿ – ಅರ್ಧ ಕಪ್

    ಮಾಡುವ ವಿಧಾನ
    * ಒಂದು ಮಿಕ್ಸಿ ಜಾರಿಗೆ ಸಕ್ಕರೆ ಹಾಕಿ ಅದನ್ನು ಪೌಡರ್ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಮೈದಾ, ಮೊಟ್ಟೆ ಒಡೆದು ಹಾಕಿ, ಎಣ್ಣೆ, ಬೇಕಿಂಗ್, ಸೋಡ, ವೆನಿಲಾ ಎಸೆನ್ಸ್ ಸೇರಿಸಿ ಎಲ್ಲಾ ಮಿಕ್ಸ್ ಆಗುವಂತೆ ಗ್ರೈಂಡ್ ಮಾಡಿ. (ಸೂಚನೆ: ಯಾವುದೇ ಕಾರಣಕ್ಕೂ ನೀರು ಬಳಸಬಾರದು. ಬ್ಲೆಂಡರ್ ಇದ್ದರೆ ಅಗಲವಾದ ಬೌಲ್‍ಗೆ ಹಾಕಿ ಬೀಟ್ ಮಾಡಬಹುದು)
    * ಈಗ ಒಂದು ಅಗಲವಾದ ಕೇಕ್ ಪ್ಯಾನ್ ಅಥವಾ ಅಗಲವಾದ ಪಾತ್ರೆಗೆ ಎಣ್ಣೆ ಸವರಿ. ಗ್ರೈಂಡ್ ಮಾಡಿದ ಬ್ಯಾಟರ್ ಅನ್ನು ಸಮಪ್ರಮಾಣದಲ್ಲಿ ಹಾಕಿ. ಮೇಲೆ ಟೂಟಿ ಫ್ರೂಟಿ ಸೇರಿಸಿ.
    * ಬಳಿಕ ಒಮ್ಮೆ ಪ್ಯಾನ್ ಅನ್ನು ಶೇಕ್ ಮಾಡಿ. ಇದರಿಂದ ಬ್ಯಾಟರ್ ಪಾತ್ರೆಯಲ್ಲಿ ಸಮವಾಗಿ ಸೆಟಲ್ ಆಗುತ್ತೆ.
    * ಒಂದು ಅಗಲವಾದ ಕುಕ್ಕರ್ ಪ್ಯಾನ್‍ಗೆ 4-5 ಹಿಡಿಯಷ್ಟು ಪುಡಿ ಉಪ್ಪನ್ನು ಹಾಕಿ. 5 ನಿಮಿಷ ಬಿಸಿ ಮಾಡಿ.
    * ಬಳಿಕ ಉಪ್ಪಿನ ಮೇಲೆ ಬ್ಯಾಟರ್ ಹಾಕಿದ ಪ್ಯಾನ್ ಇಟ್ಟು. ಕುಕ್ಕರ್ ಮುಚ್ಚಳ ಮುಚ್ಚಿ. (ಉಪ್ಪಿನ ಬದಲಿಗೆ ಮರಳು, ಕುಕ್ಕರ್ ಒಳಗೆ ಇಡುವ ಸ್ಟ್ಯಾಂಡ್ ಬಳಸಬಹುದು)
    * 10-15 ನಿಮಿಷದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಪ್ಯಾನ್‍ನಿಂದ ಕೇಕ್ ತೆಗೆದು ಕಟ್ ಮಾಡಿ ಸೇವಿಸಿ. ಎಂಜಾಯ್ ಮಾಡಿ. ( ಸೂಚನೆ: ಕುಕ್ಕರ್ ಗೆ ವಿಷಲ್ ಅಥವಾ ವೈಟ್ ಹಾಕಬಾರದು. ಹಾಕಿದರೆ ಕುಕ್ಕರ್ ಸಿಡಿಯುವ ಸಾಧ್ಯತೆ ಇರುತ್ತದೆ).

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಂತಾ ಕ್ಲಾಸ್ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಅಮೆರಿಕಾ ಮಾಜಿ ಅಧ್ಯಕ್ಷ

    ಸಾಂತಾ ಕ್ಲಾಸ್ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಅಮೆರಿಕಾ ಮಾಜಿ ಅಧ್ಯಕ್ಷ

    ವಾಷಿಂಗ್ಟನ್: ಅಮೆರಿಕದಲ್ಲಿ ಕ್ರಿಸ್‍ಮಸ್ ತಯಾರಿ ಜೋರಾಗಿ ನಡೆಯುತ್ತಿದ್ದು, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ್ ಸಾಂತಾ ಕ್ಲಾಸ್ ವೇಷ ಧರಿಸಿ, ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಿಗೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದ್ದಾರೆ.

    ಬರಾಕ್ ಒಬಾಮಾ ತಮ್ಮ ಸರಳತೆಯಿಂದ ಹೆಸರಾದವರು. ಕ್ರಿಸ್‍ಮಸ್ ನಿಮಿತ್ತ ಅವರು ಸಾಂತಾ ಕ್ಲಾಸ್‍ನಂತೆ ಕೆಂಪು ಟೋಪಿ ಧರಿಸಿ, ಕೈಯಲ್ಲಿ ಉಡುಗೊರೆಗಳ ಜೋಳಿಗೆ ಹಿಡಿದು ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡಿ, ಕಾಯಿಲೆಯಿಂದ ದಾಖಲಾಗಿರುವ ಮಕ್ಕಳಿಗೆ ಅಪ್ಪುಗೆ ನೀಡಿ, ಶುಭಾಶಯ ಕೋರಿ ಜೊತೆಗೆ ಉಡುಗೊರೆಗಳನ್ನು ನೀಡಿ ಸಂತಸ ಹಂಚಿಕೊಂಡಿದ್ದಾರೆ.

    ಒಬಾಮರವರ ಭೇಟಿಯಿಂದಾಗಿ ಆಸ್ಪತ್ರೆಯಲ್ಲಿದ್ದ ಮಕ್ಕಳ ಖುಷಿಯಿಂದ ಕೇಕೆ ಹಾಕುತ್ತಾ ಜೋರಾಗಿ ಕೂಗಿಕೊಂಡಿದ್ದಾರೆ. ಇವನ್ನೆಲ್ಲಾ ಅವರ ಸಹಾಯಕರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದರು. ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಈಗಾಗಲೇ 2.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಲ್ಲದೇ ಒಬಾಮಾರವರ ಕರುಣೆ ತುಂಬಿದ ಕಾರ್ಯಕ್ಕೆ ಮೆಚ್ಚುಗೆಯ ಸುರಿಮಳೆಯೇ ಬಂದಿದೆ.

    ನ್ಯಾಷನಲ್ ಆಸ್ಪತ್ರೆ ಕೂಡ ವಿಡಿಯೋವನ್ನು ಶೇರ್ ಮಾಡಿ, ಬರಾಕ್ ಒಬಾಮಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ನಮ್ಮಲ್ಲಿನ ರೋಗಪೀಡಿತ ಮಕ್ಕಳಲ್ಲಿ ಉತ್ಸಾಹ ಮೂಡಿಸಿದ್ದೀರಿ. ನಿಮ್ಮೊಂದಿಗೆ ಕಳೆದ ಕ್ಷಣಗಳು ಅವರಿಗೆ ಸದಾ ಸ್ಮರಣೀಯ. ನಿಮ್ಮ ಉಡುಗೊರೆಗಳಿಂದ ತುಂಬ ಸಂತೋಷ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನು ಆಸ್ಪತ್ರೆಯಲ್ಲಿ ಮಾತನಾಡಿದ ಒಬಾಮಾ ಅವರು, ನನಗೆ ಇಲ್ಲಿನ ಮಕ್ಕಳು ಹಾಗೂ ಅವರ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಎರಡು ಹೆಣ್ಣು ಮಕ್ಕಳ ತಂದೆಯಾಗಿ ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಪಾಲಕರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸವರ್ಷ, ಕ್ರಿಸ್‍ಮಸ್ ವೇಳೆ ಖಾಸಗಿ ಬಸ್ಸುಗಳಿಂದ ಲೂಟಿ – ದರ ಕೇಳಿದ್ರೆ ಶಾಕ್ ಆಗ್ತೀರಿ

    ಹೊಸವರ್ಷ, ಕ್ರಿಸ್‍ಮಸ್ ವೇಳೆ ಖಾಸಗಿ ಬಸ್ಸುಗಳಿಂದ ಲೂಟಿ – ದರ ಕೇಳಿದ್ರೆ ಶಾಕ್ ಆಗ್ತೀರಿ

    ಬೆಂಗಳೂರು: ಶುಕ್ರವಾರದಿಂದ ಕ್ರಿಸ್‍ಮಸ್ ರಜೆ ಶುರುವಾಗುತ್ತೆ, ಮಕ್ಕಳಿಗೆ ಸಾಲು ಸಾಲು ರಜೆ ಮುಂದಿನ ವಾರದವರೆಗೆ ಆರಮಾಗಿ ಇರೋಣ ಅಂತ ಎಲ್ಲರೂ ಪ್ರವಾಸಕ್ಕೆ ಪ್ಲಾನ್ ಮಾಡೋದು ಸಹಜ. ಆದರೆ ಪ್ರವಾಸಕ್ಕಾಗಿ ಖಾಸಗಿ ಟ್ರಾವೆಲ್ಸ್ ಕಡೆ ಹೋದರೆ ಪ್ರಯಾಣ ದರ ಕೇಳಿ ದಂಗಾಗೋದು ಗ್ಯಾರಂಟಿಯಾಗಿದೆ.

    ಖಾಸಗಿ ಬಸ್ ಮಾಲೀಕರು ಸಾಲುಸಾಲು ರಜೆ ಇರುವ ಕಾರಣ ಬಸ್ ದರವನ್ನು ದುಪ್ಪಟ್ಟು ಮಾಡಿ ದರೋಡೆಗೆ ಇಳಿದಿದ್ದಾರೆ. ಬೆಂಗಳೂರಿನ ಎರಡು ಫೇಮಸ್ ತಾಣಗಳಲ್ಲಿ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿದ್ದು, ಈ ವೇಳೆ ಟ್ರಾವೆಲ್ ಏಜೆಂಟ್ ದರ ಏರಿಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

    ಬೆಂಗಳೂರು ಟು ಅಲೆಪ್ಪಿ
    ಪ್ರತಿನಿಧಿ: ಅಲೆಪ್ಪಿ (ಕೇರಳ) ಎಷ್ಟಿದೆ ಅಂತ ನೋಡಿ ಸರ್?
    ಟ್ರಾವೆಲ್ಸ್ ಏಜೆಂಟ್: ಎಷ್ಟಿದೆ ನೋಡಿ. ಸಿಕ್ಕಾಪಟ್ಟೆ ಇದೆ.
    ಪ್ರತಿನಿಧಿ: ಏನ್ ಸರ್? ಕೊಚ್ಚಿನ್ ಟಿಕೆಟ್ 2 ಸಾವಿರಕ್ಕೆ ಸಿಗುತ್ತಲ್ಲ?
    ಟ್ರಾವೆಲ್ಸ್ ಏಜೆಂಟ್: ಕೊಚ್ಚಿನ್ ಈಗ 2 ಸಾವಿರಕ್ಕೆ ಸಿಗೋದಿಲ್ಲ ಬಿಡಿ.
    ಟ್ರಾವೆಲ್ಸ್ ಏಜೆಂಟ್: 3,200, 3,500., 3,000 ಅಲೆಪ್ಪಿಗೆ!
    ಪ್ರತಿನಿಧಿ: ಹಳೆದಾ?
    ಟ್ರಾವೆಲ್ಸ್ ಏಜೆಂಟ್: ಹಳೆಯದಲ್ಲ. 22ನೇ ತಾರೀಖಿಗೆ.
    ಪ್ರತಿನಿಧಿ: ಏನ್ ಸರ್ ಸ್ಪೆಷಲ್?
    ಟ್ರಾವೆಲ್ಸ್ ಏಜೆಂಟ್: ಸ್ಪೆಷಲ್ ಅಂದರೆ ಕ್ರಿಸ್‍ಮಸ್ ಮತ್ತು ನ್ಯೂ ಹಿಯರ್ ಸೀಸನ್ ಇದೆ. ಎಲ್ಲರೂ ಕ್ರಿಶ್ಚಿಯನ್ ಹಬ್ಬ ಮಾಡುತ್ತಾರೆ. ಮುಸ್ಲಿಮರು ಮತ್ತು ಹಿಂದುಗಳು ಪ್ಯಾಕೇಜ್‍ಗಳಿಗೆ ಹೋಗುತ್ತಾರೆ. ಆ ಉದ್ದೇಶದಿಂದ ಇಷ್ಟೊಂದು ದರ ಹೆಚ್ಚಾಗಿದೆ. ಈ ರೇಟ್ ಇರುತ್ತೆ. ಬೇರೆ ದಿನಗಳಲ್ಲಿ 900 ರೂ. ಯಿಂದ 1000 ರೂಪಾಯಿ ಇರುತ್ತದೆ.

    ಬೆಂಗಳೂರು ಟು ಗೋವಾ
    ಪ್ರತಿನಿಧಿ: ಗೋವಾಗೆ 4 ಟಿಕೆಟ್ ಬೇಕಾಗಿತ್ತು ಸರ್..
    ಟ್ರಾವೆಲ್ಸ್ ಏಜೆಂಟ್– ಯಾವಾಗ ಸರ್?
    ಪ್ರತಿನಿಧಿ: 22ಕ್ಕೆ ಸರ್
    ಟ್ರಾವಲ್ಸ್ ಏಜೆಂಟ್– ಶನಿವಾರ ಅಲ್ವಾ?
    ಪ್ರತಿನಿಧಿ: ಹೌದು ಸರ್.
    ಟ್ರಾವೆಲ್ಸ್ ಏಜೆಂಟ್– ಎಸಿ. ನಾನ್ ಎಸಿ?
    ಪ್ರತಿನಿಧಿ: ಸ್ಲೀಪರ್
    ಟ್ರಾವಲ್ಸ್ ಏಜೆಂಟ್– 2550
    ಪ್ರತಿನಿಧಿ: ಅಷ್ಟೊಂದಾ ಸರ್?
    ಟ್ರಾವಲ್ಸ್ ಏಜೆಂಟ್– ನೀವೇ ನೋಡಿ.
    ಪ್ರತಿನಿಧಿ: ಹೋದ ವಾರ 900 ಸಾವಿರ ಇತ್ತು.
    ಟ್ರಾವಲ್ಸ್– ಅದು ರೆಗ್ಯೂಲರ್ ಆವತ್ತು ರೇಟ್ ಕಡಿಮೆ. ಈಗ ರಜೆ ಇದೆ 22, 23, 24, 25 ರಜೆ ಕ್ರಿಸ್‍ಮಸ್ ಹಾಲಿಡೆ.
    ರಿಪೋರ್ಟ್‍ರ್– 1500 ಒಳಗಡೆ ಯಾವುದಾದರೂ ಇದ್ದರೆ ನೊಡಿ ಸರ್
    ಟ್ರಾವಲ್ಸ್– 18 ಅಲ್ವ ಇವತ್ತು ನೋಡಿ ನಾನ್ ಎಸಿ ಸ್ಲೀಪರ್ 500
    ರಿಪೋರ್ಟ್‍ರ್– 4 ಜನಕ್ಕೆ 1500 ಒಳಗಡೆ ನಮಗೆ ಬೇಕು ಸರ್.
    ಟ್ರಾವಲ್ಸ್– 22 ಬೆಂಗಳೂರು ಟು ಗೋವ ನೀವೆ ನೋಡಿ ಸರ್ ಯಾವುದು ಕಡಿಮೆ ಇದೆ. ನೋಡಿ ಸರ್ ಇದೊಂದು ಯಾವುದು ಶ್ಯಾಮಲಾ ಟ್ರಾವಲ್ಸ್ ಸಿಟ್ಟಿಂಗ್ ಎಸಿ  ಎಷ್ಟಿದೆ?
    ರಿಪೋರ್ಟ್‍ರ್– 2149
    ಟ್ರಾವಲ್ಸ್– ನಾನ್ ಎಷ್ಟು ಹೇಳಿದೆ ಸುಗಮ ವಿಆರ್‍ಎಲ್ ಎಷ್ಟಿದೆ ನೋಡಿ ಇದೊಂದೆ ಕಡಿಮೆ ಇರೋದು ಇಲ್ಲಿ. ಇನ್ನು ಉಳಿದವೆಲ್ಲ ಪುಲ್ ಜಾಸ್ತಿ.
    ರಿಪೋರ್ಟ್‍ರ್– ಎಲ್ಲಿವರೆಗೂ ಈ ರೇಟ್ ಇರುತ್ತೆ ಸರ್
    ಟ್ರಾವಲ್ಸ್– 24 ರವರೆಗೆ ಈ ರೇಟ್ ಇರುತ್ತೆ

    ಪ್ರಸ್ತುತ ಖಾಸಗಿ ಬಸ್ ದರಗಳು:
    ಬೆಂಗಳೂರಿನಿಂದ ಅಲೆಪ್ಟಿ ಹೋಗಲು ಇಂದಿನ ಬೆಲೆ 1000 ರೂ. ಇದೆ. ಆದರೆ ದಿನಾಂಕ 22ಕ್ಕೆ 2500 ರೂ. ಆಗಿದೆ. ಇನ್ನೂ ಗೋವಾಗೆ ಹೋಗಲು 800 ರೂ. ಪ್ರಯಾಣ ದರ ಇದ್ದುದ್ದು, ಕ್ರಿಸ್‍ಮಸ್ ಗೆ 2999 ರೂ. ಅಧಿಕವಾಗಿದೆ. ಬೆಂಗಳೂರಿನಿಂದ ಮುನ್ನಾರ್ ಗೆ ಇಂದಿನ ಪ್ರಯಾಣದ 900 ರೂ. ಆದರೆ ಇದೇ ಸ್ಥಳಕ್ಕೆ  22ರಂದು ಹೋಗಲು 1800 ರೂ. ಹೆಚ್ಚಾಗಿದೆ. ಊಟಿಗೆ ಹೋಗಲು 500 ಇದ್ದ ದರ. ಕ್ರಿಸ್‍ಮಸ್ ರಜೆಯ ಕಾರಣ 1800 ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು 1500 ರೂ. ಅಧಿಕವಾಗಿದೆ. ಇಂದು ಹೋಗುವುದಾದರೆ ಕೇವಲ 500 ರೂ.ಗೆ ಹೋಗಬಹುದು. ಇಂದು ಬೆಂಗಳೂರಿಂದ ಮರುಡೇಶ್ವರಕ್ಕೆ  ಹೋಗಲು 600 ರೂ. ಬಸ್ ದರವಾಗುತ್ತದೆ. ಆದರೆ 22 ಕ್ಕೆ 1200 ರೂ. ಹೆಚ್ಚಳವಾಗಿದೆ.

    ಸರ್ಕಾರ ಪ್ರತಿ ಬಾರಿ ಕಡಿವಾಣ ಹಾಕುತ್ತೀವಿ ಅಂದರ ಖಾಸಗಿ ಬಸ್‍ ಗಳ ಲಾಭಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳೇ ಮಣಿದಿದ್ದಾರೆ. ಎಷ್ಟೇ ಕಡಿವಾಣ ಹಾಕಿದರೂ ಕೇವಲ ಸುತ್ತೋಲೆಯಲ್ಲಿ ಇರುತ್ತೆ ವಿನಃ ಜಾರಿಗೆ ಬಂದ ಉದಾಹರಣೆನೆ ಇಲ್ಲ. ಇನ್ನಾದರೂ ಸರ್ಕಾರ ಈ ಹಗಲು ದರೋಡೆಯನ್ನ ತಡೆಯುತ್ತಾ ಅಥವಾ ಖಾಸಗಿ ಲಾಭಿಗೆ ಮಣಿಯುತ್ತಾ ಅನ್ನೋದನ್ನ ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಹಕರೇ ಬ್ಯಾಂಕ್ ಕೆಲ್ಸ ಬೇಗ  ಮುಗಿಸಿಕೊಳ್ಳಿ- ಡಿ.25ರಿಂದ 5 ದಿನ ಸಾಲು ಸಾಲು ರಜೆ

    ಗ್ರಾಹಕರೇ ಬ್ಯಾಂಕ್ ಕೆಲ್ಸ ಬೇಗ ಮುಗಿಸಿಕೊಳ್ಳಿ- ಡಿ.25ರಿಂದ 5 ದಿನ ಸಾಲು ಸಾಲು ರಜೆ

    ಬೆಂಗಳೂರು: ಬ್ಯಾಂಕ್ ಗ್ರಾಹಕರೇ ಎಚ್ಚರ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಪ್ರತಿಭಟನೆ ಹಾಗೂ ಸಾಲು ಸಾಲಾಗಿ ಬಂದ ರಜೆಯಿಂದಾಗಿ ದೇಶಾದ್ಯಂತ ಡಿಸೆಂಬರ್ 21ರಿಂದ ಐದು ದಿನಗಳ ಕಾಲ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವುದಿಲ್ಲ.

    ವೇತನ ಪರಿಷ್ಕರಣೆ ಬೇಡಿಕೆ ಮುಂದಿಟ್ಟುಕೊಂಡು ಎಐಬಿಒಸಿ ಪ್ರತಿಭಟನೆ ಡಿಸೆಂಬರ್ 21ರಂದು ಮುಷ್ಕರಕ್ಕೆ ಕರೆ ನೀಡಿದೆ. ನಂತರದ ದಿನ (ಡಿಸೆಂಬರ್ 22) ನಾಲ್ಕನೇ ಶನಿವಾರದ ರಜೆ ಹಾಗೂ ಡಿಸೆಂಬರ್ 23 ಭಾನುವಾರದ ರಜೆ. ಮಂಗಳವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇರುತ್ತದೆ. ಹೀಗಾಗಿ ಸಾಲು ಸಾಲು ರಜೆಗಳು ಬರುವುದರಿಂದ ಗ್ರಾಹಕರು ಆದಷ್ಟು ಬೇಗ ನಿಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಿ.

    ದೇನಾ, ವಿಜಯ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಒ) ಡಿಸೆಂಬರ್ 26ರಂದು ಮುಷ್ಕರ ನಡೆಸಲಿದೆ. ಹೀಗಾಗಿ ಡಿಸೆಂಬರ್ 24 (ಸೋಮವಾರ) ಹೊರತುಪಡಿಸಿದರೆ ಒಟ್ಟಾರೆ ಐದು ದಿನ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ. ಸಾಲು ರಜೆ ಇರುವುದರಿಂದ ಕೆಲವು ಸಿಬ್ಬಂದಿ ಡಿಸೆಂಬರ್ 24ರಂದು ಕೂಡಾ ರಜೆ ಪಡೆಯುವ ಸಾಧ್ಯಗಳಿದ್ದು, ಬ್ಯಾಂಕ್ ವಹಿವಾಟು ನಡೆಯುವ ಸಾಧ್ಯತೆ ವಿರಳ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕ್ರಿಸ್‍ಮಸ್ ಹಬ್ಬ ಬರ್ತಿದ್ದಂತೆ ಕಲರ್‌ಫುಲ್ ಆದ ಸಿಲಿಕಾನ್ ಸಿಟಿ ಮಾಲ್‍ಗಳು

    ಕ್ರಿಸ್‍ಮಸ್ ಹಬ್ಬ ಬರ್ತಿದ್ದಂತೆ ಕಲರ್‌ಫುಲ್ ಆದ ಸಿಲಿಕಾನ್ ಸಿಟಿ ಮಾಲ್‍ಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಎಲ್ಲಿ ನೋಡಿದರೂ ಚಾಕಲೆಟ್ಸ್, ಕೇಕ್ಸ್, ಸಾಂಟಾಕ್ಲಾಸ್ ಗಳು ಕಣ್ಣಿಗೆ ಬೀಳುತ್ತವೆ. ಕ್ರಿಸ್‍ಮಸ್ ಹಬ್ಬ ಹತ್ತಿರ ಬರುತ್ತಿದ್ದಂತೆ ಸಿಟಿ ಫುಲ್ ಕಲರ್ ಫುಲ್ ಆಗತ್ತಿದೆ.

    ಗರುಡಾ ಮಾಲ್‍ನಲ್ಲಿ ಮಿಂಚು ಹುಳದ ಹಾಗೆ ಲೈಟ್ಸ್ ಗಳು ಜಗಮಗಿಸುತ್ತಿದ್ದು, ಬೆಳಕಿನ ಚಿತ್ತಾರದ ನಡುವೆ ಚಿಟ್ಟೆಗಳು ಬ್ರೈಟ್ ಆಗಿ ಕಾಣಿಸುತ್ತಿದೆ. ಕ್ರಿಸ್‍ಮಸ್ ಟ್ರಿ ನೋಡುತ್ತಿದ್ದರೆ, ಎಲ್ಲರಿಗೂ ನೋಡತ್ತಾನೇ ಇರಬೇಕು ಎಂದು ಅನಿಸುತ್ತದೆ.

    ಗರುಡಾ ಮಾಲ್ ನಲ್ಲಿ ಕ್ರಿಸ್‍ಮಸ್ ಹಬ್ಬದ ಖುಷಿ ಎದ್ದು ಕಾಣುತ್ತಿದೆ. ಈ ಫೆಸ್ಟ್ ಗಾಗಿ ಮಾಲ್‍ನ್ನು ವಿಶೇಷವಾಗಿ ಎಲೆಕ್ಟ್ರಿಕ್ ಬೃಹತ್ ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ವಿಶೇಷವಾದ ಶಾಪಿಂಗ್ ಫೆಸ್ಟ್ ಆಯೋಜಿಸಲಾಗಿದೆ. ಈ ಲೈಟ್ ಫೆಸ್ಟಿವಲ್‍ಗೆ ನಟಿ ಹರಿಪ್ರಿಯ ಚಾಲನೆ ನೀಡಿದರು.

    ಗರುಡಾಮಾಲನ್ನು ಸುಮಾರು 2 ಲಕ್ಷಕ್ಕೂ ಹೆಚ್ಚು ಎಲ್‍ಇಡಿ ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ಜೈಪುರ ಅರಮನೆಯ ಪ್ರತಿಕೃತಿ ಪ್ಯಾಲೇಸ್ ಆಫ್ ವಿಂಡ್ಸ್, ಹವಾ ಮಹಲ್ ನಿರ್ಮಿಸಲಾಗಿದೆ. 45 ಅಡಿ ಅಗಲ ಮತ್ತು 38 ಅಡಿ ಎತ್ತರದ ಚಿಟ್ಟೆಗಳ ಕ್ರಿಸ್‍ಮಸ್ ಟ್ರೀ ಮಾಲ್‍ನ ಮುಂಭಾಗದಲ್ಲಿ ಎಲ್ಲರನ್ನು ಬರಮಾಡಿಕೊಳ್ಳುತ್ತದೆ.

    ಕ್ರಿಸ್‍ಮಸ್ ಅಂದರೆ ಹೊಸತನ ಇರಲೇಬೇಕು. ಈ ಹಬ್ಬಕ್ಕೆ ಜನರನ್ನು ಸೆಳೆಯಲು ಮಾಲ್ ಗಳು ಡಿಫರೆಂಟ್ ಆಗಿ ರೆಡಿಯಾಗಿದ್ದು, ಐಟಿ ಸಿಟಿ ಮಂದಿಯನ್ನು ಕೈ ಬೀಸಿ ಕರೆಯುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್ಮಸ್, ಹೊಸವರ್ಷದ ನೆಪದಲ್ಲಿ ಬಾಡೂಟ- ಮತದಾರರ ಓಲೈಕೆಗೆ ಶಾಸಕ ಜೆ.ಆರ್ ಲೋಬೊ ಯತ್ನ?

    ಕ್ರಿಸ್ಮಸ್, ಹೊಸವರ್ಷದ ನೆಪದಲ್ಲಿ ಬಾಡೂಟ- ಮತದಾರರ ಓಲೈಕೆಗೆ ಶಾಸಕ ಜೆ.ಆರ್ ಲೋಬೊ ಯತ್ನ?

    ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಎಚ್ಚೆತ್ತುಕೊಂಡಿದ್ದು, ಮತದಾರರ ಓಲೈಕೆಗೆ ಕಸರತ್ತು ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಶಾಸಕ ಜೆ.ಆರ್ ಲೋಬೊ ಕ್ರಿಸ್ಮಸ್ ಹಾಗೂ ಹೊಸವರ್ಷದ ಆಚರಣೆ ನೆಪದಲ್ಲಿ ಮತದಾರರಿಗೆ ಬಾಡೂಟ ಆಯೋಜಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಡಿ.30 ರಂದು ಮಂಗಳೂರಿನ ಆಗ್ನೆಸ್ ಸ್ಪೆಷಲ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಬಿರಿಯಾನಿ, ಕಬಾಬ್ ಜೊತೆಗೆ ಬಾಡೂಟ ಸವಿದ ಮತದಾರರಿಗೆ ಸ್ವತಃ ಶಾಸಕ ಲೋಬೊ ಅಭಿನಂದನೆ ಸಲ್ಲಿಸುತ್ತಿದ್ದರು. ಶಾಸಕ ಲೋಬೊ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಬಾಡೂಟ ಆಯೋಜನೆ ಮಾಡಿದ್ದರು.

    ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಳೆದ ಮೂರು ವರ್ಷದಿಂದ ಕ್ರಿಸ್ಮಸ್ ಮತ್ತು ದೀಪಾವಳಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಐವನ್ ಡಿಸೋಜ ಕ್ರಿಸ್ಮಸ್ ಆಚರಣೆ ಮಾಡಿದ್ದರು. ಆದರೆ ಈ ಸಲ ಚುನಾವಣಾ ವರ್ಷವಾಗಿದ್ದು ಮತ್ತೊಂದು ಕಡೆ ಐವನ್ ಡಿಸೋಜ ವಿಧಾನಸಭೆಗೆ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ.

    ಈ ಕಾರಣದಿಂದಲೋ ಏನೋ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಭರ್ಜರಿ ಊಟ, ಆರ್ಕೆಸ್ಟ್ರಾ ಮೂಲಕ ಮನರಂಜನೆ ನೀಡಿ ಮಂಗಳೂರಿನಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಕ್ರಿಶ್ಚಿಯನ್ ಮತದಾರರ ಓಲೈಕೆ ಮಾಡಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

  • ಮಂಗಳೂರು: ಮನೆಯಲ್ಲಿ ಕ್ರಿಸ್‍ಮಸ್ ಪಾರ್ಟಿ ಮಾಡ್ತಿದ್ದ ರೌಡಿಶೀಟರ್ ನನ್ನು ಅಟ್ಟಾಡಿಸಿ ಬರ್ಬರ ಹತ್ಯೆ

    ಮಂಗಳೂರು: ಮನೆಯಲ್ಲಿ ಕ್ರಿಸ್‍ಮಸ್ ಪಾರ್ಟಿ ಮಾಡ್ತಿದ್ದ ರೌಡಿಶೀಟರ್ ನನ್ನು ಅಟ್ಟಾಡಿಸಿ ಬರ್ಬರ ಹತ್ಯೆ

    ಮಂಗಳೂರು: ನಗರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಕ್ರಿಸ್ಮಸ್ ಹಬ್ಬದ ಗುಂಗಿನಲ್ಲಿದ್ದ ರೌಡಿಶೀಟರ್ ಓರ್ವನನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಮಂಗಳೂರಿನ ವೆಲೆನ್ಸಿಯಾದ ಗೋರಿಗುಡ್ಡದಲ್ಲಿ ಘಟನೆ ನಡೆದಿದ್ದು, 25 ವರ್ಷದ ಮೆಲ್ರಿಕ್ ಡಿಸೋಜ ಹತ್ಯೆಯಾದ ಯುವಕ. ಈ ಗೋರಿಗುಡ್ಡದ ಮನೆಯಲ್ಲಿ ತಡರಾತ್ರಿ ಕ್ರಿಸ್ಮಸ್ ಪಾರ್ಟಿಯಲ್ಲಿದ್ದ ವೇಳೆ ಐವರು ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿದ್ದು, ಮನೆಯ ಆವರಣದಲ್ಲಿ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.

    ಮೆಲ್ರಿಕ್ ಡಿಸೋಜ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣ ಸೇರಿದಂತೆ ಪಾಂಡೇಶ್ವರ ಮತ್ತು ಬಂದರು ಠಾಣೆಗಳಲ್ಲಿ ಪ್ರಕರಣ ಎದುರಿಸುತ್ತಿದ್ದ. ಕಳೆದ ವರ್ಷ 2016 ಆಗಸ್ಟ್ ತಿಂಗಳಲ್ಲಿ ವೆಲೆನ್ಸಿಯಾ ಸಮೀಪದ ಮಾರ್ನಮಿಕಟ್ಟೆ ಎಂಬಲ್ಲಿ ಸಂದೀಪ್ ಶೆಟ್ಟಿ ಎಂಬಾತನ ಕೊಲೆ ಯತ್ನ ನಡೆದಿತ್ತು. ಆ ಪ್ರಕರಣದಲ್ಲಿಯೂ ಮೆಲ್ರಿಕ್ ಡಿಸೋಜ ಆರೋಪಿಯಾಗಿದ್ದ.

     

    ಇದೀಗ ಸೇಡು ತೀರಿಸಿದ ಮಾದರಿಯಲ್ಲಿ ಈ ಕೊಲೆ ನಡೆದಿದ್ದು, ಯಾರು ಕೃತ್ಯ ನಡೆಸಿದ್ದಾರೆಂದು ಇನ್ನಷ್ಟೆ ಗೊತ್ತಾಗಬೇಕು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಶ್ವದಾದ್ಯಂತ ಕ್ರಿಸ್‍ಮಸ್ ಸಂಭ್ರಮ – ಕಣ್ಮನ ಸೆಳೀತಿದೆ ಶಿವಾಜಿನಗರದ ಸೆಂಟ್ ಬೆಸಿಲಿಕಾ ಚರ್ಚ್

    ವಿಶ್ವದಾದ್ಯಂತ ಕ್ರಿಸ್‍ಮಸ್ ಸಂಭ್ರಮ – ಕಣ್ಮನ ಸೆಳೀತಿದೆ ಶಿವಾಜಿನಗರದ ಸೆಂಟ್ ಬೆಸಿಲಿಕಾ ಚರ್ಚ್

    ಬೆಂಗಳೂರು: ದೇಶಾದ್ಯಂತ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದೆ. ಎಲ್ಲಾ ಚರ್ಚ್‍ಗಳಲ್ಲಿ ಕ್ರಿಶ್ಚಿಯನ್ನರು ಯೇಸುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಕೆಜಿಎಫ್ ಸೇರಿದಂತೆ ರಾಜ್ಯದ ಎಲ್ಲಾ ಚರ್ಚ್‍ಗಳು ವರ್ಣರಂಜಿತವಾಗಿದ್ದು, ಕಣ್ಮನ ಸೆಳೀತಿದೆ.

    ಬೆಂಗಳೂರಿನಲ್ಲಿ ಕ್ರಿಸ್‍ಮಸ್ ಆಚರಣೆ ಜೋರಾಗಿದೆ. ಕ್ಯಾಥೋಲಿಕರ ಅತ್ಯಂತ ಪ್ರಾಚೀನ ಚರ್ಚ್‍ಗಳಲ್ಲಿ ಒಂದಾದ ಶಿವಾಜಿನಗರದ ಸಂತ ಮರಿಯ ಬೆಸಲಿಕ್ ಚರ್ಚಿನಲ್ಲಿ ತಡರಾತ್ರಿಯಿಂದಲೇ ಕ್ರಿಸ್‍ಮಸ್ ಆಚರಣೆ ಜೋರಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಚರ್ಚಿನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ರು. ವಿದ್ಯುತ್ ದೀಪಾಲಂಕಾರದೊಂದಿಗೆ ಚರ್ಚ್ ಝಗಮಗಿಸುತ್ತಿತ್ತು. ಯುವ ಜನತೆ ಸಾಂತಾ ಕ್ಲಾಸ್ ಟೋಪಿಗಳನ್ನ ಧರಿಸಿ ಸೆಲ್ಫೀ ಮೂಡ್ ನಲ್ಲಿದ್ರು.

    ಬೆಸಿಲಿಕ ಚರ್ಚಿಗೆ ಕೇವಲ ಕ್ರೈಸ್ತರು ಮಾತ್ರವಲ್ಲದೇ ಎಲ್ಲಾ ಧರ್ಮಿಯರು ಆಗಮಿಸಿ ಕ್ರಿಸ್ ಮಸ್ ಆಚರಣೆ ಮಾಡಿದ್ರು. ಅತ್ತ ಬೇಥ್ಲೆಹೇಮ್, ಜೆರುಸಲೇಂ, ರೋಮ್, ವ್ಯಾಟಿಕನ್ ಸಿಟಿಗಳಲ್ಲಿ ಕ್ರಿಸ್‍ಮಸ್ ಸಂಭ್ರಮ ಉಕ್ಕಿ ಹರೀತಿದೆ. ಈ ಮಧ್ಯೆ ಒಡಿಶಾದ ಪುಚಿ ಸಮುದ್ರ ತೀರದಲ್ಲಿ ವಿಶ್ವದ ಅತಿದೊಡ್ಡ ಸಾಂತಾ ಕ್ಲಾಸ್ ಚಿತ್ರವನ್ನ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬಿಡಿಸಿದ್ದಾರೆ.

    ಮಂಗಳೂರಿನ ಬಹುತೇಕ ಎಲ್ಲ ಚರ್ಚ್‍ಗಳಲ್ಲಿಯೂ ರಾತ್ರಿಯೇ ವಿಶೇಷ ಪ್ರಾರ್ಥನೆ ನಡೆದ್ವು. ಕುಲಶೇಖರ, ಆಗ್ನೆಸ್, ಮಿಲಾಗ್ರಿಸ್ ಸೇರಿದಂತೆ ಮಂಗಳೂರಿನ ಹೆಸರಾಂತ ಚರ್ಚ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕ್ರೈಸ್ತರು ಸೇರಿದ್ದರು.

    ಉತ್ತರ ಕನ್ನಡ ಜಿಲ್ಲೆಯಲ್ಲೂ ಕ್ರಿಸ್‍ಮಸ್ ಸಂಭ್ರಮ ಮನೆ ಮಾಡಿದೆ. ಕಾರವಾರ ನಗರದ ಕ್ಯಾಥಡ್ರಲ್ ಚರ್ಚನಲ್ಲಿ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು.

    ಶಿವಮೊಗ್ಗದಲ್ಲಿ ಕ್ರೈಸ್ತರು ಕ್ರಿಸ್‍ಮಸ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಮಧ್ಯರಾತ್ರಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಿವಮೊಗ್ಗ ಪ್ರಾಂತ್ಯ ಧರ್ಮಾಧ್ಯಕ್ಷ ಪ್ರಾಸಿಸ್ ಮೊರಾಸ್ ವಿಶೇಷ ಪೂಜೆ ಸಲ್ಲಿಸಿ, ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು.