Tag: christmas

  • ದುಬೈ ರಸ್ತೆ ಅಪಘಾತದಲ್ಲಿ  ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

    ದುಬೈ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು

    ಅಬುಧಾಬಿ: ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

    ರೋಹಿತ್ ಕೃಷ್ಣಕುಮಾರ್(19) ಹಾಗೂ ಶರತ್ ಕುಮಾರ್ (21) ಮೃತಪಟ್ಟ ವಿದ್ಯಾರ್ಥಿಗಳು. ರೋಹಿತ್ ಹಾಗೂ ಶರತ್ ಮೂಲತಃ ಕೇರಳದವರಾಗಿದ್ದು, ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾಗಲು ಹೋಗಿದ್ದರು.

    ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾದ ನಂತರ ಶರತ್ ಬುಧವಾರ ನಸುಕಿನ ಜಾವದಲ್ಲಿ ರೋಹಿತ್‍ನನ್ನು ಮನೆಗೆ ಡ್ರಾಪ್ ಮಾಡಲು ಹೋಗುತ್ತಿದ್ದರು. ಈ ವೇಳೆ ಕಾರು ಅಪಘಾತ ಸಂಭವಿಸಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಶರತ್ ಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ್ದನು. ಇತ್ತ ರೋಹಿತ್ ಕೃಷ್ಣಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಲಂಡನ್‍ಗೆ ತೆರಳಿದ್ದನು. ಕ್ರಿಸ್ಮಸ್ ಹಬ್ಬವನ್ನು ಆಚರಿಸಲು ಇಬ್ಬರು ಮಂಗಳವಾರ ರಾತ್ರಿ ದುಬೈಯಲ್ಲಿ ಭೇಟಿ ಆಗಿದ್ದರು.

  • ತೂಗುದೀಪ ನಿಲಯದಲ್ಲಿ ಕ್ರಿಸ್ಮಸ್ ಆಚರಣೆ

    ತೂಗುದೀಪ ನಿಲಯದಲ್ಲಿ ಕ್ರಿಸ್ಮಸ್ ಆಚರಣೆ

    ಬೆಂಗಳುರು: ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ‘ರಾಬರ್ಟ್’ ಸಿನಿಮಾದ ಫಸ್ಟ್‌ಲುಕ್‌ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಜೊತೆಗೆ ಕ್ರಿಸ್‍ಮಸ್ ಹಬ್ಬವನ್ನು ಕೂಡ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

    ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ ‘ರಾಬರ್ಟ್’ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ದರ್ಶನ್ ಅವರ ಫಸ್ಟ್‌ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಯೂಟ್ಯೂಬ್‍ನಲ್ಲಿ ಧೂಳೆಬ್ಬಿಸುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ತೂಗುದೀಪ ನಿಲಯದಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಆಚರಣೆ ಮಾಡಿದೆ.

    ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ಖಾತೆಯಲ್ಲಿ ಕ್ರಿಸ್‍ಮಸ್ ಆಚರಣೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಅದರಲ್ಲಿ ತರುಣ್ ಸುಧೀರ್, ದರ್ಶನ್ ಸೇರಿದಂತೆ ಚಿತ್ರತಂಡದವರು ಕೇಕ್ ಕಟ್ ಮಾಡಿ, ಪರಸ್ಪರ ತಿನ್ನಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ‘ರಾಬರ್ಟ್’ ಮೋಷನ್ ಪೋಸ್ಟರ್ ಯೂಟ್ಯೂಬ್‍ನಲ್ಲಿ 4.5 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ.

    ಮೋಷನ್ ಪೋಸ್ಟರಿನಲ್ಲಿ ದರ್ಶನ್ ಖಡಕ್ ಆದ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಬ್ಲಾಕ್ ಬಣ್ಣದಿಂದ ಮೂಡಿ ಬಂದಿದ್ದು, ಕಪ್ಪು ಬಣ್ಣದ ಜಾಕೆಟ್, ಕತ್ತಿನಲ್ಲಿ ಶಿಲುಬೆಯ ಚೈನ್, ಗಡ್ಡಧಾರಿಯಾಗಿ ಕೈಯಲ್ಲಿ ಗನ್ ಹಿಡಿದುಕೊಂಡು ದರ್ಶನ್ ರಗಡ್ ಪೋಸ್ ಕೊಟ್ಟಿದ್ದಾರೆ. ಪೋಸ್ಟರಿನಲ್ಲಿ ಲಾಂಗ್ ಹೇರಿನಲ್ಲಿ ಕಾಣಿಸಿಕೊಂಡಿದ್ದಾರೆ.

    ‘ರಾಬರ್ಟ್’ ಸಿನಿಮಾವನ್ನು ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಇತ್ತೀಚೆಗಷ್ಟೆ ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ದರ್ಶನ್ ಅವರಿಗೆ ನಟಿ ಆಶಾ ಭಟ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  • ಮಂಜಿನ ನಗರಿ ಮಡಿಕೇರಿಯಲ್ಲಿ ಕ್ರಿಸ್ಮಸ್ ಸಂಭ್ರಮ -ನಾಡಿನ ಜನತೆ ಸುಖ ಶಾಂತಿಯಿಂದ ಬಾಳಲ್ಲಿ ಎಂದು ಪ್ರಾರ್ಥನೆ

    ಮಂಜಿನ ನಗರಿ ಮಡಿಕೇರಿಯಲ್ಲಿ ಕ್ರಿಸ್ಮಸ್ ಸಂಭ್ರಮ -ನಾಡಿನ ಜನತೆ ಸುಖ ಶಾಂತಿಯಿಂದ ಬಾಳಲ್ಲಿ ಎಂದು ಪ್ರಾರ್ಥನೆ

    ಮಡಿಕೇರಿ: ಡಿಸೆಂಬರ್ 25ರಂದು ಜಗತ್ತಿನೆಲ್ಲೆಡೆ ಕ್ರಿಸ್ಮಸ್ ಸಂಭ್ರಮ ಮೇಳೈಸುತ್ತೆ. ಹಲವು ತಿಂಗಳಿಂದ ಕಾದು ಕುಳಿತ ಕ್ರಿಸ್ತನ ಆರಾಧಕರು ರಾತ್ರಿಯಿಂದಲೆ ವಿಶೇಷ ಪ್ರಾರ್ಥನೆಗಳ ಮೂಲಕ ಏಸುವಿಗೆ ನಮಿಸುತ್ತಿದ್ದಾರೆ.

    ಮಂಜಿನ ನಗರಿ ಮಡಿಕೇರಿಯಲ್ಲಿಯೂ ಸಂಭ್ರಮ ಸಡಗರದಿಂದ ಕ್ರಿಸ್ತನ ಹುಟ್ಟುಹಬ್ಬವನ್ನು ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ನಗರದ ಸಂತ ಮೈಕೆಲರ ಚರ್ಚ್ ನವವಧುವಿನಂತೆ ಸಿಂಗಾರಗೊಂಡಿದ್ದು, ಬಣ್ಣ ಬಣ್ಣದ ಲೈಟಿಂಗ್ ಬಲೂನ್‍ಗಳಿಂದ ಮೂಡಿದ ಚಿತ್ತಾರ ನಯನ ಮನೋಹರವಾಗಿದೆ.

    ಇಡೀ ಚರ್ಚ್ ಸುಂದರ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಬಾಂಧವರು ಆಗಮಿಸಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾತ್ರಿ 12 ಗಂಟೆಗೆ ಏಸುವನ್ನು ಗೋಧಳಿಕೆ ಇಟ್ಟು ಸಂಭ್ರಮಿಸಿದ ಭಕ್ತರು ವಿಶೇಷ ಪ್ರಾರ್ಥನೆ ಮೂಲಕ ಕ್ರಿಸ್ತನನ್ನು ಸ್ಮರಿಸಿದರು.

    ರಾತ್ರಿಯಿಂದ ಆರಂಭವಾಗಿರುವ ಕ್ರಿಸ್ಮಸ್ ಸಡಗರ ಇಂದು ಬೆಳಗ್ಗೆವರೆಗೂ ಮುಂದುವರಿದಿದೆ. ಅಷ್ಟೇ ಅಲ್ಲದೇ ನಾಡಿನ ಜನರಿಗೆ ಒಳ್ಳೆಯದು ಮಾಡಲ್ಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ನಂತರ ಮನೆಗೆ ತರೆಳಿ ಬಗೆ ಬಗೆಯ ಕೇಕ್, ವೈನ್, ಆಹಾರ ತಯಾರಿಸಿ ಬಂಧುಗಳೊಂದಿಗೆ ಸಹಭೋಜನ ಮಾಡಿ ಖುಷಿಪಡುತ್ತಾರೆ.

  • ಕ್ರಿಸ್ಮಸ್‍ಗೆ 2 ಅಮೂಲ್ಯ ಗಿಫ್ಟ್ ಕೊಟ್ಟ ಸಂತಾಗೆ ರಾಧಿಕಾ ಥ್ಯಾಂಕ್ಸ್

    ಕ್ರಿಸ್ಮಸ್‍ಗೆ 2 ಅಮೂಲ್ಯ ಗಿಫ್ಟ್ ಕೊಟ್ಟ ಸಂತಾಗೆ ರಾಧಿಕಾ ಥ್ಯಾಂಕ್ಸ್

    ಬೆಂಗಳೂರು: ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಟಿ ರಾಧಿಕಾ ಪಂಡಿತ್ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

    ರಾಧಿಕಾ ಪಂಡಿತ್ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಕ್ರಿಸ್‍ಮಸ್ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. “ಕಳೆದ ಎರಡು ಕ್ರಿಸ್‍ಮಸ್‍ಗೆ ಐರಾ ಮತ್ತು ಜೂನಿಯರ್ ಯಶ್ ಅಂತಹ ಅಮೂಲ್ಯವಾದ ಉಡುಗೊರೆಯನ್ನು ನಮಗೆ ನೀಡಿರುವುದಕ್ಕೆ ಸಂತಾಗೆ ಧನ್ಯವಾದಗಳು. ನಮ್ಮ ಜಾರುಬಂಡಿಯ ಮೇಲೆ ಸವಾರಿ ಮಾಡಲು ನಾವು ಸಿದ್ಧ. ಎಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಕ್ರಿಸ್‍ಮಸ್ ಹಬ್ಬಕ್ಕಾಗಿ ಅಲಂಕೃತವಾಗಿರುವ ಜಾರುಬಂಡಿಯ ಪಕ್ಕದಲ್ಲಿ ಪತಿ ಯಶ್ ಜೊತೆ ರಾಧಿಕಾ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ರಾಧಿಕಾ ವಿಶ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.

    ರಾಧಿಕಾ 2018 ಡಿಸೆಂಬರ್ ತಿಂಗಳಲ್ಲಿ ಐರಾಗೆ ಜನ್ಮ ಕೊಟ್ಟಿದ್ದರು. ಇನ್ನೂ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯಕ್ಕೆ ಜೂನಿಯರ್ ಯಶ್‍ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/B6d8oG0g0Cc/

    ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೇಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.

  • ಬೆಂಗಳೂರಿನಲ್ಲಿ ಮಧ್ಯರಾತ್ರಿ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರಿನಲ್ಲಿ ಮಧ್ಯರಾತ್ರಿ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರು: ಕ್ರಿಸ್‍ಮಸ್ ಅಂದ್ರೆನೇ ಕಲರ್ ಫುಲ್. ಸಿಲಿಕಾನ್ ಸಿಟಿ ಸೇರಿದಂತೆ ನಾಡಿನ ಚರ್ಚ್, ಕ್ರೈಸ್ತ ಬಾಂಧವರ ಮನೆಗಳು ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿದೆ. ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ.

    ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೇಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.

    ಶಿವಾಜಿನಗರದ ಸೇಂಟ್ ಮರಿಯಾ ಚರ್ಚ್ ನಲ್ಲಿಯೂ ಕೂಡ ಕ್ರಿಸ್ ಮಸ್ ಸಡಗರ ತುಸು ಜೋರಾಗೆ ಇತ್ತು. ಶಾಂತಿ, ಸೌಹಾರ್ದತೆಗೆ ಸಂಕೇತವಾಗಿ ಕ್ರಿಸ್‍ಮಸ್ ಅನ್ನು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಪಟಾಕಿ ಸಿಡಿಸುವ ಮೂಲಕ ಕ್ರೈಸ್ತ ಬಾಂಧವರು ಬರಮಾಡಿಕೊಂಡ್ರು.

    ಚರ್ಚ್ ನಲ್ಲಿ ಕ್ರೈಸ್ತಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಯೇಸುವಿಗೆ ನಮನ ಸಲ್ಲಿಸಿದ್ರು. ಜೊತೆಗೆ ಈ ಕ್ರಿಸ್ ಮಸ್ ಹಬ್ಬದಲ್ಲಿ ಬೇರೆ ಧರ್ಮದವರೂ ಭಾಗಿಯಾಗಿ ಕ್ರಿಸ್ ಮಸ್ ಹಬ್ಬವನ್ನ ಸಂಭ್ರಮಿಸಿದ್ದು, ಸಾವಿರಾರು ಜನ ತಡ ರಾತ್ರಿಯೇ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹಬ್ಬದ ವಿಶೇಷವಾಗಿ ಚರ್ಚ್ ನಲ್ಲಿ ಇಟ್ಟಿದ್ದ ಸ್ಯಾಂತ ಹಾಗೂ ಆತನ ಕುದುರೆಗಳು, ಕರ್ತನಾದ ಯೇಸು, ತಾಯಿ ಮೇರಿ ಸೇರಿದಂತೆ ಹಲವಾರು ಗೊಂಬೆಗಳಿದ್ದು ಬಂದವರ ಕಣ್ಮನ ಸೆಳೆಯಿತು.

  • ಕೇಕ್‍ನಲ್ಲಿ ಅರಳಿದ ವಿಂಗ್ ಕಮಾಂಡರ್ ಅಭಿನಂದನ್

    ಕೇಕ್‍ನಲ್ಲಿ ಅರಳಿದ ವಿಂಗ್ ಕಮಾಂಡರ್ ಅಭಿನಂದನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಕ್ರಿಸ್ಮಸ್ ಸೆಲೆಬ್ರೆಷನ್ ಶುರುವಾಗಿದೆ. ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ ಕೇಕ್‍ಗಳ ಲೋಕ ಧರೆಗಿಳಿದಿದೆ. ವಿಶೇಷ ಎಂದರೆ ಕೇಕ್‍ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರತಿರೂಪದ ಮೂಡಿದೆ.

    ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ 45ನೇ ವರ್ಷದ ಕೇಕ್ ಶೋ ಆಯೋಜಿಸಿದ್ದು, ತನ್ನ ವಿಶಿಷ್ಟತೆಯ ಮೂಲವೇ ಗಮನ ಸೆಳೆಯುತ್ತಿದೆ. ಜೊತೆಗೆ ರಾಷ್ಟ್ರಭಕ್ತಿಯನ್ನು ಮೆರೆಯುತ್ತಿದೆ.

    ಈ ಶೋನಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ರಫೇಲ್ ಯುದ್ಧ ವಿಮಾನ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪ್ರತಿರೂಪದ ಮೂಡಿದ್ದು, ಎಲ್ಲರ ಗಮನ ತನತ್ತ ಸೆಳೆಯುತ್ತಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಧರೆಗಿಳಿದ ಕೇಕ್‍ಗಳ ಲೋಕ

    ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪವನ್ನು 3.5 ಅಡಿ ಎತ್ತರ, 2 ಫೀಟ್ ಅಗಲ ಹಾಗೂ 2 ಫೀಟ್ ಉದ್ದದಲ್ಲಿ 225 ಕೆಜಿ ಕೇಕ್‍ನಲ್ಲಿ ತಯಾರಿಸಲಾಗಿದೆ. ಹಾಗೆಯೇ ರಫೇಲ್ ಯುದ್ಧ ವಿಮಾನ 4 ಅಡಿ ಉದ್ದ, 3 ಅಡಿ ಅಗಲ, 1.5 ಫೀಟ್ ಎತ್ತರ ಹಾಗೂ 125 ಕೆ.ಜಿ ಕೇಕ್ ನಲ್ಲಿ ತಯಾರಾಗಿದೆ.

    ಜನರು ರಫೇಲ್ ಯುದ್ಧ ವಿಮಾನ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪದ ಕೇಕ್ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

  • ಮನೆಯಲ್ಲಿ ಹನಿಕೇಕ್ ಮಾಡಿ ಆರೋಗ್ಯಕರ ಕ್ರಿಸ್‍ಮಸ್ ಆಚರಿಸಿ

    ಮನೆಯಲ್ಲಿ ಹನಿಕೇಕ್ ಮಾಡಿ ಆರೋಗ್ಯಕರ ಕ್ರಿಸ್‍ಮಸ್ ಆಚರಿಸಿ

    ಮಂಗಳವಾರ ಕ್ರಿಸ್‍ಮಸ್ ಹಬ್ಬ. ಈಗಾಗಲೇ ಜನರು ಕ್ರಿಸ್‍ಮಸ್ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲಂಕಾರಿಕ ವಿದ್ಯುತ್ ದೀಪಗಳು, ಕ್ರಿಸ್‍ಮಸ್ ಟ್ರೀ, ಸಾಂತಾ ಡ್ರೆಸ್ ಹೀಗೆ ಸಿದ್ಧತೆ ಭರ್ಜರಿಯಾಗಿಯೇ ನಡೆದಿದೆ. ಮಾರುಕಟ್ಟೆಗಳಲ್ಲಿ ಕ್ರಿಸ್‍ಮಸ್ ಟ್ರೀಗಳ ಅಲಂಕಾರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಹಬ್ಬ ಅಂದಮೇಲೆ ಮನೆಯಲ್ಲಿ ಸಿಹಿ ಇರಲೇಬೇಕು. ಕ್ರಿಸ್‍ಮಸ್ ಅಂದ್ರೆ ಕೇಕ್ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ಕೆಲ ವ್ಯಾಪಾರಿ ಅಪಾಯಕಾರಿ ಕೆಮಿಕಲ್ ಬಳಸಿ ನೋಡಲು ಚೆನ್ನಾಗಿ ಕಾಣುವ ಕೇಕ್ ತಯಾರಿಸಿ ಮಾರಟಕ್ಕೀಡುತ್ತಾರೆ. ಕೆಮಿಕಲ್ ಮಿಶ್ರಿತ ಕೇಕ್ ತಿನ್ನುವ ಬದಲು ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಕ್ರಿಸ್‍ಮಸ್ ಆಚರಿಸಿ.

    ಸಿಂಪಲ್ ಹನಿಕೇಕ್ ಮಾಡುವ ವಿಧಾನಗಳು

    ಬೇಕಾಗುವ ಸಾಮಾಗ್ರಿಗಳು
    * ಮೈದಾ ಹಿಟ್ಟು – 1 ಕಪ್
    * ಜೋಳದ ಹಿಟ್ಟು – 1.5 ಸ್ಪೂನ್
    * ಉಪ್ಪು – ಚಿಟಿಕೆ
    * ಬೇಕಿಂಗ್ ಪೌಡರ್, ಸೋಡಾ – 1 ಸ್ಪೂನ್
    * ಕಂಡೆನ್ಡ್ಸ್ ಮಿಲ್ಕ್ – 200 ಎಂಎಲ್
    * ಸಕ್ಕರೆ ಪುಡಿ – 3 ಸ್ಪೂನ್
    * ವೆನಿಲಾ ಎಸೆನ್ಸ್ – 1 ಸ್ಪೂನ್
    * ಅಡುಗೆ ಎಣ್ಣೆ – ಅರ್ಧ ಕಪ್
    * ಹಾಲು – ಅರ್ಧ ಕಪ್
    * ವೆನಿಗರ್ – ಅರ್ಧ ಸ್ಪೂನ್
    * ಸಕ್ಕರೆ – ಅರ್ಧ ಕಪ್
    * ಜೇನುತುಪ್ಪ – 2-3 ಸ್ಪೂನ್
    * ಜಾಮ್ – ಅರ್ಧ ಕಪ್
    * ಒಣಕೊಬ್ಬರಿ ಪೌಡರ್ – ಅರ್ಧ ಕಪ್

    ಮಾಡುವ ವಿಧಾನ
    * ಮೊದಲು ಒಂದು ಬೌಲ್‍ಗೆ ಮೈದಾ ಹಿಟ್ಟು, ಜೋಳದ ಹಿಟ್ಟು, ಚಿಟಿಕೆ ಉಪ್ಪು, ಬೇಕಿಂಗ್ ಪೌಡರ್, ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಕಂಡೆನ್ಡ್ಸ್ ಮಿಲ್ಕ್, 1 ಸ್ಪೂನ್ ಸಕ್ಕರೆ ಪುಡಿ, 1 ಸ್ಪೂನ್ ವೆನಿಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ..
    * ಮಿಶ್ರಣಕ್ಕೆ ಅರ್ಧ ಕಪ್ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಈಗ ಮೊದಲು ಮಿಶ್ರಣ ಮಾಡಿದ ಮೈದಾ, ಜೋಳದ ಹಿಟ್ಟು ಮಿಶ್ರಣವನ್ನು ಸೇರಿಸಿ ಹಾಲು ಸೇರಿಸಿ ಮಿಕ್ಸ್ ಮಾಡಿ
    * ಮಿಶ್ರಣದ ಬ್ಯಾಟರ್‍ನಲ್ಲಿ ಯಾವುದೇ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ಮಿಶ್ರಣ ತೀರ ಗಟ್ಟಿಯಾಗಿ, ತೆಳ್ಳಗೂ ಇರಬಾರದು.
    * ಈಗ ಅರ್ಧ ಸ್ಪೂನ್ ವೆನಿಗರ್ ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಿ.
    * ಈಗ ಒಂದು ಕೇಕ್ ಪ್ಯಾನ್‍ಗೆ ಎಣ್ಣೆ ಸವರಿ ಕೇಕ್ ಪೇಪರ್ ಹಾಕಿ. ಅದರ ಮೇಲೆ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ಹಾಕಿ.

    * ಈಗ ಪ್ರಿಹೀಟ್ ಆಗಿರುವ ಓವನ್‍ನಲ್ಲಿ ಪ್ಯಾನ್ ಇಟ್ಟು 180 ಡಿಗ್ರಿಯಲ್ಲಿ 35 ನಿಮಿಷ ಬೇಯಿಸಿ.
    * ಕೇಕ್ ಬೇಯುವಷ್ಟರಲ್ಲಿ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅರ್ಧ ಕಪ್ ಸಕ್ಕರೆ, ಅರ್ಧ ಕಪ್ ನೀರು ಸೇರಿಸಿ. ಕರಗುವ ತನಕ ಕಾಯಿಸಿ. ದಪ್ಪ ಪಾಕ ಬೇಡ.
    * ಸಕ್ಕರೆ ಕರಗಿದ ಮೇಲೆ ಕೆಳಗಿಳಿಸಿ. ಸ್ವಲ್ಪ ಆರಿದ ಮೇಲೆ 2-3 ಸ್ಪೂನ್ ಜೇನು ಸೇರಿಸಿ.
    * ಬಳಿಕ ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ರೆಡಿ ಇರುವ ಜಾಮ್ ತೆಗೆದುಕೊಳ್ಳಿ. (ಕಿಸಾನ್ ಜಾಮ್, ಫ್ರೂಟ್ ಜಾಮ್ ಯಾವುದಾದರೂ ಬಳಸಬಹುದು)
    * ಒಂದು ಕಪ್‍ನಷ್ಟು ಜಾಮ್‍ಗೆ 1 ಸ್ಪೂನ್ ಪುಡಿ ಸಕ್ಕರೆ ಸೇರಿಸಿ. 2 ನಿಮಿಷ ಬೇಯಿಸಿ. ಜಾಮ್ ಲಿಕ್ವಿಡ್ ರೂಪಕ್ಕೆ ಬಂದಾಗ ಕೆಳಗಿಳಿಸಿ.
    * ಈಗ ಓವನ್‍ನಲ್ಲಿಟ್ಟ ಕೇಕ್ ಹೊರ ತೆಗೆದು ಒಂದು ಗಾರ್ನಿಷಿಂಗ್ ಪ್ಲೇಟ್‍ಗೆ ಹಾಕಿ.
    * ಕೇಕ್‍ನ ಅಂಚುಗಳನ್ನು ಕಟ್ ಮಾಡಿ.
    * ಕೇಕ್ ಮೇಲ್ಭಾಗದಲ್ಲಿ ಫೋರ್ಕ್‍ನಿಂದ ಸಣ್ಣ ಸಣ್ಣ ರಂಧ್ರಗಳನ್ನ ಮಾಡಿ..
    * ಈಗ ಆ ರಂಧ್ರಗಳ ಮೂಲಕ ಕೇಕ್‍ಗೆ ಸಕ್ಕರೆ ಪಾಕವನ್ನು ಹಾಕಿರಿ.
    * ಬಳಿಕ ಮೇಲ್ಭಾಗದಲ್ಲಿ ಕರಗಿಸಿಟ್ಟ ಜಾಮ್ ಅನ್ನು ಲೇಪಿಸಿ.
    * ಈಗ ಚಿಕ್ಕ ಚಿಕ್ಕಿ ಭಾಗವಾಗಿ ಕೇಕ್ ಅನ್ನು ಕತ್ತರಿಸಿ, ಮಿಕ್ಕ ಸಕ್ಕರೆ ಪಾಕದಲ್ಲಿ ಕೇಕ್‍ಅನ್ನು ಡಿಪ್ ಮಾಡಿ.
    * ಬಳಿಕ ಜಾಮ್ ಭಾಗವನ್ನು ಒಣಕೊಬ್ಬರಿ ಪೌಡರ್ ನಲ್ಲಿ ಡಿಪ್ ಮಾಡಿದ್ರೆ ಹನಿ ಕೇಕ್ ರೆಡಿ.

    ಇದನ್ನೂ ಓದಿ: ಕ್ರಿಸ್‍ಮಸ್ ಸ್ಪೆಷಲ್- ಮನೆಯಲ್ಲಿಯೇ ಮಾಡಿ ಕಾರ್ನ್ ಕೇಕ್

  • ನಟಿ ತಾರಾ ಅನುರಾಧ, ಯುವ ನಟಿ ನಿಶ್ವಿಕಾರಿಂದ ಅರ್ಥಪೂರ್ಣ ಕ್ರಿಸ್ಮಸ್ ಆಚರಣೆ

    ನಟಿ ತಾರಾ ಅನುರಾಧ, ಯುವ ನಟಿ ನಿಶ್ವಿಕಾರಿಂದ ಅರ್ಥಪೂರ್ಣ ಕ್ರಿಸ್ಮಸ್ ಆಚರಣೆ

    ಬೆಂಗಳೂರು: ಕ್ರಿಸ್ಮಸ್‍ಗೆ ಈಗಾಗಲೇ ಕೌಂಟ್ ಡೌನ್ ಆರಂಭಗೊಂಡಿದೆ. ಹಬ್ಬದ ಆಚರಣೆಗೆ ಸಿಲಿಕಾನ್ ಸಿಟಿ ಸಕಲ ರೀತಿಯಿಂದಲೂ ಸಜ್ಜುಗೊಂಡಿದ್ದು, ಕೆಲವೆಡೆ ಸೆಲೆಬ್ರೇಷನ್ ಸಹ ಮಾಡುತ್ತಿದ್ದಾರೆ. ಇಂದು ಕನ್ನಡ ಚಲನ ಚಿತ್ರರಂಗದ ನಟಿ ತಾರಾ ಅನುರಾಧ ಹಾಗೂ ಯುವ ನಟಿ ನಿಶ್ವಿಕಾ, ಕೊಳಗೇರಿಯ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಿಸಿದ್ರು.

    ಭಾರತಿ ನಗರ ನಾಗರಿಕ ವೇದಿಕೆ ಕಾಕ್ಸ್ ಟೌನ್ ಗಂಗಮ್ಮ ದೇವಸ್ಥಾನದ ಆವರಣದಲ್ಲಿ, ನೂರಾರು ಸ್ಲಂ ಮಕ್ಕಳಿಗೆ ಕೇಕ್ ಮತ್ತು ಊಟ ವಿತರಿಸುವ ಮೂಲಕ ಕ್ರಿಸ್ಮಸ್ ಹಾಗೂ ಹೊಸ ವರ್ಷ 2020ನ್ನು ಅರ್ಥಪೂರ್ಣವಾಗಿ ಆಚರಿಸಿದರು.

    ಸಾಂತಾ ಕ್ಲಾಸ್ ವೇಷ ಧರಿಸಿದ ನೂರಾರು ಮಂದಿ ಮಕ್ಕಳೊಂದಿಗೆ ನಟಿ ಮಣಿಯರು ಮಕ್ಕಳಾದರು. ಈ ವೇಳೆ ಮಾತನಾಡಿದ ನಟಿ ತಾರಾ ಅನುರಾಧ, ಎಲ್ಲಾ ಧರ್ಮದ ಹಬ್ಬಗಳು ಪರಸ್ಪರ ಪ್ರೀತಿ, ಸೌಹಾರ್ದತೆಯ ಸಂದೇಶ ಸಾರುತ್ತವೆ. ಅದೇ ರೀತಿ ಕ್ರಿಸ್ಮಸ್ ಹಬ್ಬ ಪ್ರೀತಿಯ ಸಂಕೇತವಾಗಿದೆ ಎಂದರು.

    ನಟಿ ನಿಶ್ವಿಕಾ ಮಾತನಾಡಿ, ಮಕ್ಕಳು ದೇವರ ಸಮ. ಮುದ್ದು ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬ ಆಚರಿಸುವುದೇ ಜೀವನದ ಸಂತಸದ ಕ್ಷಣವಾಗಿದೆ ಎಂದರು. ಈ ವೇಳೆ ಭಾರತಿ ನಗರ ನಾಗರಿಕ ವೇದಿಕೆ ಅಧ್ಯಕ್ಷ ಎನ್.ಎಸ್.ರವಿ ಹಾಜರಿದ್ದರು.

  • ಕ್ರಿಸ್‍ಮಸ್ ಸ್ಪೆಷಲ್- ಮನೆಯಲ್ಲಿಯೇ ಮಾಡಿ ಕಾರ್ನ್ ಕೇಕ್

    ಕ್ರಿಸ್‍ಮಸ್ ಸ್ಪೆಷಲ್- ಮನೆಯಲ್ಲಿಯೇ ಮಾಡಿ ಕಾರ್ನ್ ಕೇಕ್

    ಕ್ರಿಸ್‍ಮಸ್ ಬಂದ್ರೆ ಮನೆಯಲ್ಲಿ ಕೇಕ್ ಇರಲೇಬೇಕು. ಅಂಗಡಿಗಳಲ್ಲಿ ಸಿಗುವ ಕೇಕ್ ಹೇಗಿರುತ್ತೋ? ಆರೋಗ್ಯಕರವಾಗಿರುತ್ತೋ ಎಂಬಿತ್ಯಾದಿ ಪ್ರಶ್ನೆಗಳು ಗೃಹಿಣಿಯರ ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಕೆಲಸದ ನಿಮಿತ್ತ ಕುಟುಂಬದಿಂದ ದೂರ ಇರುವವರು ಬೇಕರಿಯಲ್ಲಿ ಸಿಗುವ ಕೇಕ್ ತಿಂದು ಸಾಕಾಗಿದೆ ಎಂಬ ಮನಸ್ಥಿತಿಗೆ ಬಂದಿರುತ್ತಾರೆ. ಕೇಕ್ ಮಾಡಬೇಕೆಂದ್ರೆ ಓವನ್ ಇರಬೇಕು ಮತ್ತಿತ್ತರ ಸಾಮಾಗ್ರಿಗಳು ನಮ್ಮಲ್ಲಿ ಇಲ್ಲ ಎಂದು ಪೇಚಾಡುವರರೂ ಇರುತ್ತಾರೆ. ಓವನ್ ಇಲ್ಲದೇ ಸರಳವಾಗಿ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು

    ಜೋಳದ ಹಿಟ್ಟು – 1 ಕಪ್
    ಗಟ್ಟಿ ಹಾಲು – 1 ಕಪ್
    ಪಚ್ಚೆ ಬಾಳೆಹಣ್ಣು – 1
    ಅಡುಗೆ ಸೋಡಾ – ಅರ್ಧ ಸ್ಪೂನ್
    ಬೆಲ್ಲ – ಸ್ವಲ್ಪ
    ತುಪ್ಪ – 2 ಸ್ಪೂನ್
    ಡ್ರೈಫ್ರೂಟ್ಸ್ ಅಥವಾ ಟೂಟಿ ಫ್ರೂಟಿ

     

    ಮಾಡುವ ವಿಧಾನ
    * ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಮಾಗಿದ ಪಚ್ಚೆ ಬಾಳೆಹಣ್ಣನ್ನು ಸಿಪ್ಪೆ ಸುಲಿದು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.
    * ನಂತರ ಅದೇ ಬೌಲ್‍ಗೆ ಪುಡಿ ಮಾಡಿದ ಬೆಲ್ಲ, ತುಪ್ಪ, ಸೋಡಾ ಹಾಕಿ ಚೆನ್ನಾಗಿ ಗಂಟು ಬಾರದಂತೆ ಮಿಕ್ಸ್ ಮಾಡಿ.
    * ಬಳಿಕ ಅದೇ ಮಿಶ್ರಣಕ್ಕೆ ಗಟ್ಟಿ ಹಾಲು, ಜೋಳದ ಹಿಟ್ಟು ಸೇರಿಸಿ ಚೆನ್ನಾಗಿ ಗಂಟು ಇಲ್ಲದಂತೆ ಮಿಕ್ಸ್ ಮಾಡಿ
    * ಈಗ ಕೇಕ್‍ನ ಮಿಶ್ರಣ ರೆಡಿ.
    * ಇತ್ತ ಒಂದು ತುಪ್ಪ ಸವರಿದ ಕೇಕ್ ಪ್ಯಾನ್ ಅಥವಾ ಅಗಲವಾದ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ.
    * ಪಾತ್ರೆಯಲ್ಲಿ ಸಮ ಪ್ರಮಾಣದಲ್ಲಿ ಮಿಶ್ರಣವನ್ನು ಕೂರಿಸಲು ಸ್ವಲ್ಪ ನೆಲಕ್ಕೆ ಕುಟ್ಟಿ. ಬಳಿಕ ಮಿಶ್ರಣದ ಮೇಲೆ ಸಣ್ಣಗೆ ಹೆಚ್ಚಿದ ಡ್ರೈಫ್ರೂಟ್ಸ್ ಅಥವಾ ಟೂಟಿ ಫ್ರೂಟಿ ಹಾಕಿ.
    * ಈಗ ಈ ಪ್ಯಾನ್ ಅನ್ನು ಕುಕ್ಕರ್‍ಗೆ ನೀರು ಹಾಕಿ ಕುದಿ ಬಂದ ಮೇಲೆ ಪ್ಯಾನ್ ಸ್ಟ್ಯಾಂಡ್ ಇಟ್ಟು ಅದರ ಮೇಲೆ ಕೇಕ್ ಮಿಶ್ರಣ ಇಟ್ಟು 15 ನಿಮಿಷ ಬೇಯಿಸಬೇಕು.
    * ಕುಕ್ಕರ್ ಬಿಸಿ ಕಡಿಮೆ ಆದ ಮೇಲೆ ತೆಗೆದು ಮಿಶ್ರಣವನ್ನು ಚಾಕುವಿನಿಂದ ಕತ್ತರಿಸಿ
    * ನಿಮಗೆ ಬೇಕಾದ ಶೇಪ್‍ಗೆ ಕತ್ತರಿಸಿ ಸವಿಯಿರಿ.

  • ಸೀಕ್ರೆಟ್ ಸಾಂತಾ ಆಗಿ ಮಕ್ಕಳ ಜೊತೆ ವಿರಾಟ್ ಕ್ರಿಸ್ಮಸ್ ಆಚರಣೆ: ವಿಡಿಯೋ

    ಸೀಕ್ರೆಟ್ ಸಾಂತಾ ಆಗಿ ಮಕ್ಕಳ ಜೊತೆ ವಿರಾಟ್ ಕ್ರಿಸ್ಮಸ್ ಆಚರಣೆ: ವಿಡಿಯೋ

    ಕೋಲ್ಕತ್ತಾ: ಭಾರತ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ‘ಸೀಕ್ರೆಟ್ ಸಾಂತಾ’ ಆಗಿ ಪಶ್ಚಿಮ ಬಂಗಳಾದ ಕೋಲ್ಕತ್ತಾದಲ್ಲಿರುವ ದೀನದಲಿತರ ಮಕ್ಕಳ ಜೊತೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ.

    ಖಾಸಗಿ ವಾಹಿನಿಯೊಂದು ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೋಲ್ಕತ್ತಾದ ಆಶ್ರಮದಲ್ಲಿರುವ ಮಕ್ಕಳು ತಮ್ಮ ನೆಚ್ಚಿನ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ಕ್ರಿಸ್ಟಿಯಾನೊ ರೊನಾಲ್ಡೊ, ಪಿ.ವಿ ಸಿಂಧು ಹಾಗೂ ಕ್ರಿಸ್ಮೆಸ್ ಸಮಯದಲ್ಲಿ ಇಷ್ಟವಾಗುವ ವಸ್ತುಗಳನ್ನು ನೀಡಬೇಕೆಂದು ಹೇಳಿದ್ದಾರೆ. ಮಕ್ಕಳು ಮಾತನಾಡಿದ ಈ ವಿಡಿಯೋವನ್ನು ವಿರಾಟ್ ಅವರು ನೋಡಿದ್ದಾರೆ. ಇದನ್ನೂ ಓದಿ: ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಮಕ್ಕಳ ವಿಡಿಯೋ ನೋಡಿದ ನಂತರ ವಿರಾಟ್ ಸಾಂತಾ ಕ್ಲಾಸ್‍ನಂತಯೆ ಉಡುಪು ಧರಿಸಿ, ಮಕ್ಕಳಿಗೆ ಉಡುಗೊರೆಯನ್ನು ಹಂಚಿದ್ದಾರೆ. ಉಡುಗೊರೆ ಎಲ್ಲ ಹಂಚಿದ ಬಳಿಕ ವಿರಾಟ್ ತಾವು ಹಾಕಿದ ನಕಲಿ ಗಡ್ಡವನ್ನು ತೆಗೆದಿದ್ದಾರೆ. ವಿರಾಟ್‍ರನ್ನು ನೋಡುತ್ತಿದ್ದಂತೆ ಮಕ್ಕಳು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ. ಅಲ್ಲದೆ ವಿರಾಟ್‍ರನ್ನು ತಬ್ಬಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ಕೊನೆಯಲ್ಲಿ ವಿರಾಟ್, ಈ ಮಕ್ಕಳು ವರ್ಷವಿಡೀ ನಮಗೆ ಬೆಂಬಲಿಸುತ್ತಾರೆ. ಮಕ್ಕಳ ಜೊತೆ ಸಮಯ ಕಳೆದಿದ್ದು ಹಾಗೂ ಅವರನ್ನು ಸಂತೋಷ ತಂದ ಕ್ಷಣ ಅದ್ಭುತವಾಗಿತ್ತು. ನಾನು ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ವಿರಾಟ್ ಅವರ ಈ ಕೆಲಸಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/StarSportsIndia/status/1207927652079812608?ref_src=twsrc%5Etfw%7Ctwcamp%5Etweetembed%7Ctwterm%5E1207927652079812608&ref_url=https%3A%2F%2Fwww.timesnownews.com%2Fsports%2Fcricket%2Farticle%2Fvideo-virat-kohli-turns-secret-santa-for-underprivileged-kids-ahead-of-christmas%2F529935