Tag: Chitte

  • ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಬಾಲಿವುಡ್ (Bollywood) ಖ್ಯಾತ ನಟಿ ಅನನ್ಯ ಪಾಂಡ್ಯ (Ananya Pandey) ಕಾಸ್ಟ್ಯೂಮ್ (Costume) ವಿಷಯದಲ್ಲಿ ಪಕ್ಕಾ ಕಟ್ಟುನಿಟ್ಟು. ಅವರು ತಮಗಿಷ್ಟದ ಬಟ್ಟೆ ಹೊರತಾಗಿ ಬೇರೆ ಕಾಸ್ಟ್ಯೂಮ್ ಧರಿಸುವುದಿಲ್ಲ. ಈ ಕುರಿತಂತೆ ಹಲವಾರು ಬಾರಿ ಹೇಳಿದ್ದೂ ಇದೆ. ಇತರರಿಗೆ ಮುಜಗರ ಅನಿಸುವಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದಿಲ್ಲ ಎಂದು ಘೋಷಿಸಿ ಆಗಿದೆ. ಆದರೆ, ಎಲ್ಲರೂ ಅಚ್ಚರಿ ಪಡುವಂತಹ ಕಾಸ್ಟ್ಯೂಮ್ ಅನ್ನು ಅನನ್ಯ ಧರಿಸಿದ್ದಾರೆ.

    ಎದೆಯ ಭಾಗವನ್ನು ಚಿಟ್ಟೆಯಿಂದ ಮುಚ್ಚಿಕೊಂಡಿರುವಂತಹ ಕಾಸ್ಟ್ಯೂಮ್ ಅದಾಗಿದ್ದು, ಎದೆ ಮೇಲಿನ ಚಿಟ್ಟೆ (Butterfly) ಕಂಡು ಹಲವರು ಹಲವು ರೀತಿಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿದ್ದರೆ, ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಈ ಚಿಟ್ಟೆ ಯಾಕೆ ಎಂದು ಕೇಳಲಾದ ಪ್ರಶ್ನೆಗೆ ಅನನ್ಯ ಸೊಗಸಾಗಿ ಉತ್ತರಿಸಿದ್ದಾರೆ.

    ಅನನ್ಯ ಪಾಂಡೆ ಈ ಬಟ್ಟೆಯನ್ನು ಹಾಕಿದ್ದು ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ಶೋ ನಲ್ಲಿ. ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ರಾಹುಲ್ ಮಿಶ್ರಾ. ಪರಿಸರ ಮತ್ತು ಕೀಟಗಳ ಮೇಲಿನ ಪ್ರೀತಿಯಿಂದಾಗಿ ಇಂಥದ್ದೊಂದು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರಂತೆ ರಾಹುಲ್. ಅಳಿವಿನಂಚಿಗೆ ತಳ್ಳಿರುವ ಕೀಟಗಳನ್ನು ಉಳಿಸೋ ಜಾಗೃತಿ ಕೂಡ ಇದಾಗಿದೆಯಂತೆ.

     

    ಪ್ರಾಣಿ, ಪಕ್ಷಿಗಳು ಹಾಗೂ ಕೀಟಗಳ ಬಗ್ಗೆ ಅನನ್ಯ ಯಾವಾಗಲೂ ಕಾಳಜಿ ತೋರಿಸುತ್ತಲೇ ಇರುತ್ತಾರೆ. ಈ ಬಾರಿ ಕಾಸ್ಟ್ಯೂಮ್ ಹಾಕುವ ಮೂಲಕ ಫ್ಯಾಷನ್ ವೇದಿಕೆಯ ಮೇಲೆ ಕಾಳಜಿ ಪ್ರದರ್ಶಿಸಿದ್ದಾರೆ.

  • ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ ಚಿಟ್ಟೆ ಹರ್ಷಿಕಾ!

    ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ ಚಿಟ್ಟೆ ಹರ್ಷಿಕಾ!

    ಬೆಂಗಳೂರು: ಒಂದಷ್ಟು ಕಾಲ ಚಿತ್ರರಂಗದಿಂದ ಮರೆಯಾದಂತಿದ್ದ ಹರ್ಷಿಕಾ ಪೂಣಚ್ಚ ಚಿಟ್ಟೆ ಚಿತ್ರದ ಮೂಲಕ ಮರಳಿ ಬಂದಿದ್ದಾರೆ. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದರ ಜೊತೆಗೇ ಹರ್ಷಿಕಾರ ಪಾತ್ರ ಮತ್ತು ಅಭಿನಯವನ್ನೂ ಕೂಡಾ ಮೆಚ್ಚಿಕೊಂಡಿದ್ದಾರೆ. ರೀಎಂಟ್ರಿ ಕೊಟ್ಟ ಘಳಿಗೆಯಲ್ಲಿಯೇ ಇಂಥಾದ್ದೊಂದು ಗೆಲುವು ಸಿಕ್ಕಿದ್ದರಿಂದ ಹರ್ಷಿಕಾ ಖುಷಿಗೊಂಡಿದ್ದಾರೆ.

    ಈ ಖುಷಿಯನ್ನು ಡಿಫರೆಂಟಾಗಿ ಸೆಲೆಬ್ರೇಟ್ ಮಾಡೋ ಇರಾದೆಯಿಂದ ಸೀದಾ ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ್ದಾರಂತೆ. ಈ ವಿಚಾರವನ್ನು ಖುದ್ದು ಹರ್ಷಿಕಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ.

    https://twitter.com/actressharshika/status/1021661279453425664

    ಆಮ್‍ಸ್ಟರ್ ಡ್ಯಾಮ್‍ಗೆ ಹರ್ಷಿಕಾ ಕೆಲ ಸ್ನೇಹಕೂಟದೊಂದಿಗೆ ತೆರಳಿದ್ದಾರೆ. ಅಲ್ಲಿನ ಸುಂದರವಾದ ವಾತಾವರಣದಲ್ಲಿ ಇವರೆಲ್ಲರೊಂದಿಗೆ ಅವರು ಚೆಂದದ್ದೊಂದು ಪಾರ್ಟಿ ಆಯೋಜಿಸಿದ್ದಾರಂತೆ. ಅಚಾನಕ್ಕಾಗಿ ಬಹುಕಾಲದಿಂದ ಹಂಬಲಿಸಿದ್ದ ಗೆಲುವೊಂದು ಸಿಕ್ಕು ಬಿಟ್ಟರೆ ಮನಸು ಚಿಟ್ಟೆಯಾಗಿ ಹಾರಾಡುತ್ತದಲ್ಲಾ, ಅಂಥಾದ್ದೇ ಮೂಡಿನಲ್ಲಿರುವ ಹರ್ಷಿಕಾ ಖುಷಿಗೆ ಎಣೆಯಿಲ್ಲದಂತಾಗಿದೆ.

    ಚಿಟ್ಟೆ ಚಿತ್ರದ ನಂತರ ಹಲವಾರು ಕನ್ನಡ ಚಿತ್ರಗಳ ಅವಕಾಶಗಳು ಹರ್ಷಿಕಾರನ್ನು ಅರಸಿ ಬರಲಾರಂಭಿಸಿವೆಯಂತೆ. ಆದರೆ ಅವೆಲ್ಲವನ್ನೂ ಪರಿಶೀಲಿಸಿ ಈ ಪಾರ್ಟಿ ಮುಗಿಸಿಕೊಂಡು ಬಂದ ನಂತರವಷ್ಟೇ ಹರ್ಷಿಕಾ ಹೊಸಾ ಚಿತ್ರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳೋ ತೀರ್ಮಾನ ಮಾಡಿದಂತಿದೆ.

  • ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

    ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

    ಬೆಂಗಳೂರು: ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಬ್ಬ ಕನ್ನಡದ ನಟಿ ಮಾತನಾಡಿದ್ದಾರೆ. ಬಾಲಿವುಡ್ ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ.

    ಬಾಲಿವುಡ್‍ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಸಿನಿಮಾ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಅನುಭವವನ್ನು ಹಂಚಿಕೊಂಡಿದ್ದಾರೆ.

    ಹರ್ಷಿಕಾ ಪೂಣಚ್ಚ ಹೇಳಿದ್ದು ಹೀಗೆ:
    ಅವಕಾಶ ಇದೆ ಎನ್ನುವ ಕಾರಣಕ್ಕೆ ನಾನು ಬಾಲಿವುಡ್‍ಗೆ ಹೋಗಿದ್ದೆ. ಆದರೆ ಸಿನಿಮಾ ಶುರುವಾಗಿರಲಿಲ್ಲ. ಸಿನಿಮಾ ಶೂಟಿಂಗ್‍ಗಾಗಿ ಫೋಟೋಶೂಟ್‍ ಕೂಡ ಮಾಡಿಸಿ ಎಲ್ಲ ತಯಾರಿ ನಡೆಸಿಕೊಳ್ಳಲಾಗಿತ್ತು. ಸಿನಿಮಾ ಶೂಟಿಂಗ್‍ಗೆ ಒಂದು ವಾರ ಇದ್ದಾಗ ಮ್ಯಾನೇಜರ್ ಕರೆ ಮಾಡಿ, ನಮ್ಮ ಪ್ರೊಡಕ್ಷನ್ ನಿಮ್ಮ ಜೊತೆ ಕಮಿಟ್‍ಮೆಂಟ್ ಮಾಡಲು ಇಚ್ಛಿಸುತ್ತಿದೆ ಎಂದು ಹೇಳಿದ್ದರು.

    ಈ ಕರೆಗೆ ಸಿಟ್ಟಾಗಿ ನಾನು, ಸರಿ ಎಂದು ಹೇಳಿ ಮೊದಲ ಫ್ಲೈಟ್‍ನಲ್ಲೇ ಮುಂಬೈನಿಂದ ಬೆಂಗಳೂರಿಗೆ ಬಂದೆ. ನಾನು ಅವರಿಗೆ ಒಂದು ಮಾತನ್ನು ಹೇಳಲಿಲ್ಲ. ಅವರಿಗೆ ನಾನು ಎಲ್ಲಿ ಹೋದೆ ಎಂಬುದು ತಿಳಿಯಲಿಲ್ಲ. ನನ್ನ ಫೋನ್ ಕೂಡ ಸ್ವಿಚ್ ಆಫ್ ಮಾಡಿ ನಾನು ಅಲ್ಲಿಂದ ಹೊರಡಿದ್ದೆ ಮತ್ತೆ ಅವರನ್ನು ನಾನು ಸಂಪರ್ಕಿಸಲು ಇಷ್ಟಪಡಲಿಲ್ಲ. ಏಕೆಂದರೆ ಇದು ನನ್ನ ನಿರ್ಧಾರ. ನನಗೆ ಒಂದು ಇಷ್ಟವಿಲ್ಲ ಎಂದರೆ ಅದು ನನಗೆ ಇಷ್ಟವಿಲ್ಲ ಎಂದೇ ಅರ್ಥ.

    ಈ ವಿಷಯದಲ್ಲಿ ನಾನು ಯಾರನ್ನೂ ಆರೋಪಿಸುವುದಿಲ್ಲ. ಏಕೆಂದರೆ ನಮ್ಮ ಸ್ಯಾಂಡಲ್‍ವುಡ್ ನಲ್ಲಿ ಈ ರೀತಿ ಎಂದಿಗೂ ನಡೆಯಲಿಲ್ಲ. ಹಾಗಾಗಿ ನಾನು ಆರಾಮಾಗಿ ಆಟವಾಡಿಕೊಂಡು ಸಿನಿಮಾ ಮಾಡುತ್ತಿದ್ದೆ. ಒಂದೇ ಬಾರಿಗೆ ಒಂದು ದೊಡ್ಡ ಹೆಜ್ಜೆ ಇಟ್ಟು ದೊಡ್ಡ ಮೀನು ಹಿಡಿಯುವುದಕ್ಕೆ ಬಾಲಿವುಡ್‍ಗೆ ಕಾಲಿಟ್ಟೆ. ಆದರೆ ಈ ವಿಚಾರ ಗೊತ್ತಾಗಿ ನನಗೆ ಬೇಸರವಾಯಿತು. ಇದನ್ನೂ ಓದಿ: ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

    ನಾನು 15 ವರ್ಷವಿರುವಾಗ ಚಿತ್ರರಂಗಕ್ಕೆ ಕಾಲಿಟ್ಟಿದೆ. ಆಗ ಸ್ಯಾಂಡಲ್‍ವುಡ್‍ನಲ್ಲಿ ನನಗೆ ತುಂಬಾ ಚೆನ್ನಾಗಿ ನೋಡಿಕೊಂಡರು. ಹಾಗಾಗಿ ಆಟವಾಡಿಕೊಂಡು ಸಿನಿಮಾಗಳನ್ನು ಮಾಡುತ್ತಿದೆ. ಹಾಗಾಗಿ ನನಗೆ ಕಾಸ್ಟಿಂಗ್ ಕೌಚ್ ಬಗ್ಗೆ ತಿಳಿದಿರಲಿಲ್ಲ. ಮೊದಲ ಬಾರಿಗೆ ಬಾಲಿವುಡ್‍ಗೆ ಹೋದಾಗ ನನಗೆ ಈ ರೀತಿಯ ಅನುಭವ ಆಯ್ತು. ಅವರು ಆ ರೀತಿ ಹೇಳಿದ್ದಾಗ ನಾನು ಅವರ ಚಿತ್ರಕ್ಕೆ ಸೂಕ್ತ ವ್ಯಕ್ತಿ ಅಲ್ಲ ಎಂದು ಅಲ್ಲಿಂದ ನನ್ನ ತಂದೆ ಜೊತೆ ಹೊರಟು ಬೆಂಗಳೂರಿಗೆ ಬಂದೆ. ಇದನ್ನೂ ಓದಿ: ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಬೆಂಗಳೂರಿಗೆ ಬಂದಾಗ ಪ್ರತಿಯೊಬ್ಬರು ನಾನು ಬಾಲಿವುಡ್‍ಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿದೆ ಎಂದು ಹೇಳುತ್ತಿದ್ದರು. ಆದರೆ ನನಗೆ ಆ ಸಮಯ ಏನು ಹೇಳಬೇಕೆಂಬುದು ತಿಳಿದಿರಲಿಲ್ಲ. ಬಾಲಿವುಡ್ ಸಿನಿಮಾ ಅವಕಾಶ ಸಿಕ್ಕ ಖುಷಿಗೆ ನಾನು ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದೆ. ಆ ಸಮಯದಲೇ ನನಗೆ ಆ ವಿಷಯದ ಬಗ್ಗೆ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನಾನು ಅದರ ಬಗ್ಗೆ ಯೋಚಿಸುತ್ತಿರಲಿಲ್ಲ. ಆಗ ನಾನು ಅಲ್ಲಿ ನನಗೆ ತೊಂದರೆ ಆಗಿದೆ ಎಂದು ಎಲ್ಲರಿಗೂ ಹೇಳುತ್ತಿದ್ದೇನೆ ಎಂದರು.

    https://www.youtube.com/watch?v=5JRSNBMt95Q

  • ಚೆಲುವೆ ಹರ್ಷಿಕಾ ಮೈ ಮೇಲೆ ಚಿಟ್ಟೆಯ ಚಿತ್ತಾರ

    ಚೆಲುವೆ ಹರ್ಷಿಕಾ ಮೈ ಮೇಲೆ ಚಿಟ್ಟೆಯ ಚಿತ್ತಾರ

    ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ತಮ್ಮ ಮೈ ಮೇಲೆ ಸುಂದರವಾದ ಚಿಟ್ಟೆಯ ಚಿತ್ತಾರವನ್ನು ಬಿಡಿಸಿಕೊಂಡಿದ್ದಾರೆ. ಚಿಟ್ಟೆ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕಾಗಿ ಪಾತರಗಿತ್ತಿಯ ಚಿತ್ರದ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

    ಹೊಸದಾಗಿ ಮದುವೆಯಾದ ನವಜೋಡಿ ತಮ್ಮ ಹನಿಮೂನ್ ಬಳಿಕ ಹೊಸ ಜೀವನ ಕಟ್ಟಿಕೊಳ್ಳುವ ಸುಂದರ ಕಥೆಯನ್ನು ಸಿನಿಮಾ ಹೊಂದಿದೆ. `ರಂಗಪ್ಪ ಹೋಗಿ ಬಿಟ್ನಾ’ ಸಿನಿಮಾ ನಿರ್ದೇಶನ ಮಾಡಿದ್ದ ಎಂ.ಎಲ್.ಪ್ರಸನ್ನ ಚಿಟ್ಟೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಚಿತ್ರಕ್ಕಾಗಿ ಹರ್ಷಿಕಾ ಮೈ ಮೇಲೆ ವಸ್ತ್ರ ವಿನ್ಯಾಸಕಿ ಚಂದನಾ ಆರಾಧ್ಯ ಅವರು ಚಿತ್ರ ಬಿಡಿಸಿದ್ದಾರೆ. ಹರ್ಷಿಕಾ ಮೈ ಮೇಲೆ ಚಿಟ್ಟೆ ಚಿತ್ರ ಬಿಡಿಸುವಾಗ ಚಂದನಾ ನರ್ವಸ್ ಆಗಿದ್ದರೂ ಸತತ 4 ಗಂಟೆಗಳ ಪರಿಶ್ರಮದಲ್ಲಿ ಸುಂದರ ಚಿಟ್ಟೆಯನ್ನು ಸೃಷ್ಟಿಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಹರ್ಷಿಕಾ ಅವರ ಮೈ ಮೇಲೆ ಚಿಟ್ಟೆಯ ಚಿತ್ರವಿತ್ತು.

    ಮೈ ಮೇಲೆ ಚಿಟ್ಟೆ ಹಾಕಿಸಿಕೊಂಡಾಗ ನನ್ನ ಹೈಸ್ಕೂಲ್ ದಿನಗಳು ನೆನಪಿಗೆ ಬಂದವು. ಚಿಟ್ಟೆಯಲ್ಲಿ ನಾನು ನಟಿಸುತ್ತಿರುವುದು ಸಾಕಷ್ಟು ಖುಷಿಯನ್ನು ಕೊಟ್ಟಿದೆ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕೆಂದು ಹಲವು ದಿನಗಳ ಕಾಯುತ್ತಿದ್ದೇವೆ. ಆ ವೇಳೆ ನನಗೆ ದೊರೆತಿದ್ದು `ಚಿಟ್ಟೆ’ ಸಿನಿಮಾ ಎಂದು ಹರ್ಷಿಕಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

    ಚಿತ್ರದಲ್ಲಿ ನಾಯಕ ನಟನಾಗಿ ಯಶಸ್ ಸೂರ್ಯ ನಟಿಸಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣವಿದ್ದು, ಪ್ರಸನ್ನ ಮತ್ತು ಬಿ.ಶ್ರೀನಿವಾಸ ಚಿಟ್ಟೆಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳ ಚಿತ್ರೀಕರಣ ಮುಗಿದಿದೆ. ನಿದೇಶಕ ಪ್ರಸನ್ನ ಅವರ ಸಿನಿಮಾಗೆ ಸಂಗೀತ ನೀಡಿದ್ದಾರೆ.

    https://twitter.com/actressharshika/status/925281087449735170