Tag: Chitra Naman

  • ಪೇಜಾವರ ಶ್ರೀಗಳಿಗೆ ‘ಅಂತಿಮ ಚಿತ್ರನಮನ’

    ಪೇಜಾವರ ಶ್ರೀಗಳಿಗೆ ‘ಅಂತಿಮ ಚಿತ್ರನಮನ’

    ಬೆಂಗಳೂರು: ನಮ್ಮನ್ನು ಅಗಲಿದ ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಫಿಡಿಲಿಟಸ್ ಗ್ಯಾಲರಿಯ ಕಲಾವಿದರು ಅಂತಿಮ ಚಿತ್ರನಮನ ಸಲ್ಲಿಸಿದರು.

    ತಮ್ಮ ಧಾರ್ಮಿಕ ಹಾಗೂ ರಾಜಕೀಯ ನಿಲುವುಗಳಿಂದ, ಸಾಮಾಜಿಕ ಸುಧಾರಣೆಗಳ ಬಗ್ಗೆ ಒಲವಿದ್ದ ಹಾಗೂ ತಮ್ಮ ಸರಳ ಧಾರ್ಮಿಕ ಜೀವನದಿಂದ ಗಮನ ಸೆಳೆದಿದ್ದ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ವೈಕುಂಠವಾಸಿಯಾದುದು ಅವರ ಶಿಷ್ಯರಿಗೆ ಹಾಗೂ ಅಭಿಮಾನಿಗಳಿಗೆ ಅತ್ಯಂತ ದುಃಖದ ವಿಚಾರವಾಗಿದೆ.

    ಹೀಗಾಗಿ ಬೆಂಗಳೂರಿನ ಪ್ರಸಿದ್ಧ ಕಲಾ ಗ್ಯಾಲರಿಯಾದ ಫಿಡಿಲಿಟಸ್ ಗ್ಯಾಲರಿಯ ಕಲಾವಿದ ಕೋಟೆ ಗದ್ದೆ ಎಸ್ ರವಿಯವರು ಶ್ರೀಗಳ ಶೀಘ್ರ ಚಿತ್ರಣವನ್ನು ರಚಿಸಿ ಫಿಡಿಲಿಟಸ್ ಗ್ಯಾಲರಿ ಹಾಗೂ ಕಲಾ ಸಮೂಹದ ಪರವಾಗಿ ಶ್ರೀಗಳಿಗೆ ಅಂತಿಮ ಚಿತ್ರ ನಮನವನ್ನು ಸಲ್ಲಿಸಿದ್ದಾರೆ.