Tag: chitah

  • 30 ಅಡಿ ಆಳದ ಬಾವಿಗೆ ಬಿದ್ದ ಚಿರತೆಯ ರಕ್ಷಣೆ- ಮನಮುಟ್ಟುವ ವಿಡಿಯೋ ನೋಡಿ

    30 ಅಡಿ ಆಳದ ಬಾವಿಗೆ ಬಿದ್ದ ಚಿರತೆಯ ರಕ್ಷಣೆ- ಮನಮುಟ್ಟುವ ವಿಡಿಯೋ ನೋಡಿ

    ಮುಂಬೈ: ಮಹಾರಾಷ್ಟ್ರದ ಯಡವ್ ವಾಡಿ ಗ್ರಾಮದಲ್ಲಿ 30 ಅಡಿ ಆಳದ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಇಂದು ರಕ್ಷಣೆ ಮಾಡಿದೆ. ಚಿರತೆ ರಕ್ಷಣೆಯ ಮನಮುಟ್ಟುವ ವಿಡಿಯೋವನ್ನು ಪ್ರಾಣಿಗಳ ಕಲ್ಯಾಣ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?:
    7 ವರ್ಷದ ಹೆಣ್ಣು ಚಿರತೆಯೊಂದು ಬಾವಿಯೊಳಗೆ ಬಿದ್ದಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಸಣ್ಣ ಮರದ ಏಣಿಯನ್ನು ಬಾವಿಗಿಳಿಸಿದ್ದಾರೆ. ಹೀಗಾಗಿ ಚಿರತೆ ಅದರ ಮೇಲೆ ಕುಳಿತಿರುವುದನ್ನು ಕಾಣಬಹುದು. ಇತ್ತ ಸಾರ್ವಜನಿಕರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಸೇರಿಕೊಂಡು ಚಿರತೆಯ ರಕ್ಷಣೆಗೆಂದು ಗೂಡನ್ನು ಸಿದ್ಧಪಡಿಸಿ ಅದನ್ನು ಬಾವಿಗೆ ಇಳಿಸಿದ್ದಾರೆ.

    ಈ ವೇಳೆ ಯಾವುದೇ ಮುಲಾಜಿಲ್ಲದೇ ಚಿರತೆ ಮರದ ಏಣಿಯಿಂದ ಕೂಡಲೇ ಗೂಡಿನೊಳಗೆ ಸೇರಿಕೊಂಡಿದೆ. ಚಿರತೆ ಗೂಡೊಳಗೆ ನುಗ್ಗುತ್ತಿದ್ದಂತೆಯೇ ಗೂಡಿನ ಬಾಗಿಲನ್ನು ಮುಚ್ಚಿದ್ದಾರೆ. ನಂತರ ಗೂಡನ್ನು ಬಾವಿಯೊಳಗಿಂದ ಮೇಲಕ್ಕೆತ್ತಲಾಗಿದೆ. ಈ ಮೂಲಕ ಚಿರತೆಯನ್ನು ರಕ್ಷಿಸಲಾಗಿದೆ.

    ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ. ವೈಲ್ಡ್ ಲೈಫ್ ಎಸ್‍ಒಎಸ್ ಗೆ ನಾನು ಧನ್ಯವಾದ ಸಮರ್ಪಿಸುತ್ತೇನೆ. ಅವರಿಂದಾಗಿ ಇಂದು ಒಂದು ಸುಂದರ ಚಿರತೆಯ ಪ್ರಾಣ ಉಳಿದಿದೆ. ಒಳ್ಳೆಯ ಕೆಲಸ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ರಕ್ಷಣೆಯ ವಿಡಿಯೋ ನೋಡುತ್ತಿದ್ದ ನನಗೆ ಚಿರತೆ ಅಷ್ಟು ಸುಲಭದಲ್ಲಿ ಗೂಡಿನ ಒಳಗೆ ಹೋಗಿದ್ದನ್ನು ನಂಬಲಾಗಿಲ್ಲ. ಇದು ಅದ್ಭುತವಾಗಿತ್ತು. ಉತ್ತಮ ಕೆಲಸ ಅಂತ ಮತ್ತೊಬ್ಬರು ಹೇಳಿದ್ದಾರೆ.

    ಬಾವಿಯಿಂದ ಹೊರತೆಗೆದ ಚಿರತೆಯನ್ನು ಸದ್ಯ ಮಣಿಕ್ಡೊದಲ್ಲಿನ ಚಿರತೆಗಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ ಅಂತ ವೈಲ್ಡ್ ಲೈಫ್ ಎಸ್‍ಒಎಸ್ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.facebook.com/wildlifesosindia/videos/2377705512270267/

  • ಮಂಡ್ಯದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

    ಮಂಡ್ಯದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

    ಮಂಡ್ಯ: ಹಲವು ದಿನಗಳಿಂದ ಗ್ರಾಮದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆಯಾಗಿದೆ.

    ಮಂಡ್ಯದ ಪಾಂಡವಪುರದ ಚಿಕ್ಕಾಡೆ ಗ್ರಾಮದಲ್ಲಿ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಚಿರತೆ ಕಾಣಿಸಿಕೊಂಡಿತ್ತು.

    ಹೀಗಾಗಿ ಚಿಕ್ಕಾಡೆ ಗ್ರಾಮದ ರೈತರು ಆತಂಕದಿಂದ ತಮ್ಮ ಹೊಲಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದರಿಂದ ಗ್ರಾಮದ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ದೂರು ನೀಡಿದ್ದರು.

    ದೂರಿನನ್ವಯ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಕುಂತಿ ಬೆಟ್ಟದ ತಪ್ಪಲಿನಲ್ಲಿ ಬೋನೊಂದನ್ನ ಇಟ್ಟಿದ್ದರು. ಆ ಬೋನಿಗೆ ತಡರಾತ್ರಿ ಚಿರತೆ ಸೆರೆಯಾಗಿದೆ. ಸದ್ಯ ಚಿರತೆ ಸೆರೆಯಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನರು ಕುತೂಹಲದಿಂದ ಚಿರತೆ ವೀಕ್ಷಿಸುತ್ತಿದ್ದಾರೆ.

  • ಮರಿಗಳನ್ನು ಹುಡುಕಿಕೊಂಡು ಬಂದು ಬೋನಿಗೆ ಬಿದ್ದ ತಾಯಿಚಿರತೆ

    ಮರಿಗಳನ್ನು ಹುಡುಕಿಕೊಂಡು ಬಂದು ಬೋನಿಗೆ ಬಿದ್ದ ತಾಯಿಚಿರತೆ

    ಮಂಡ್ಯ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ತಾಯಿ ಚಿರತೆಯೊಂದು ಸೆರೆಯಾದ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಕೆಆರ್ ಪೇಟೆಯ ಕಳ್ಳನಕೆರೆ ಗ್ರಾಮದ ದೇವರಾಜು ಎಂಬವರ ಜಮೀನಿನಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಬಳಿಕ ಚಿರತೆ ಮರಿಗಳನ್ನು ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಲಾಗಿತ್ತು.

    ಮರಿಗಳು ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಚಿರತೆ ಇರುವ ಬಗ್ಗೆ ಖಚಿತಗೊಂಡ ಹಿನ್ನಲೆ ಅರಣ್ಯ ಇಲಾಖೆ ಸಿಬ್ಬಂದಿ ಮರಿಗಳು ಸಿಕ್ಕ ಜಾಗದಲ್ಲಿ ಒಂದು ಬೋನು ಇರಿಸಿದ್ದರು. ಇದ್ರಿಂದ ತನ್ನ ಮೂರು ಮರಿಗಳನ್ನ ಹುಡುಕಿಕೊಂಡು ಬಂದ ತಾಯಿ ಚಿರತೆ ಇಂದು ಬೋನಿಗೆ ಬಿದ್ದಿದೆ.

    ಸದ್ಯ ಚಿರತೆ ಆತಂಕದಿಂದ ಕಂಗಾಲಾಗಿದ್ದ ಗ್ರಾಮಸ್ಥರು, ಚಿರತೆ ಸೆರೆಯಾದ ಹಿನ್ನಲೆ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಸೆರೆಯಾದ ಚಿರತೆ ನೋಡಲು ಸ್ಥಳಕ್ಕೆ ಜನರ ದಂಡೆ ಹರಿದು ಬಂದಿದೆ. ಆದ್ರೆ ವಿಚಾರ ತಿಳಿಸಿದ್ರೂ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಬಾರದೇ ಇದ್ದಿದ್ದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.