Tag: Child Helpline

  • ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ

    ಹೆಂಡತಿ ಬಾರದಿದ್ದಕ್ಕೆ ಅಪ್ರಾಪ್ತ ನಾದಿನಿಯೊಂದಿಗೆ ಪರಾರಿಯಾಗಿದ್ದ 4 ಮಕ್ಕಳ ತಂದೆ

    ಪಾಟ್ನಾ: ತವರು ಮನೆಯಿಂದ ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದ ವ್ಯಕ್ತಿಯೊಬ್ಬ, ತನ್ನ ಹೆಂಡತಿ ಮನೆಗೆ ಬರಲು ನಿರಾಕರಿಸಿದ ನಂತರ ವ್ಯಕ್ತಿ ತನ್ನ ನಾದಿನಿಯೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದ ಛಪ್ರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    Child Marriage Bride

    ಕೃಷ್ಣರಾಮ್ ಎಂಬ ವ್ಯಕ್ತಿ ತನ್ನ ಹೆಂಡತಿ ಸಂಕಾಂತಿ ದೇವಿಯನ್ನು ಮರಳಿ ಕರೆತರಲು ಅತ್ತೆಯ ಮನೆಗೆ ಹೋಗಿದ್ದಾಗ, ಆಕೆ ಅವನೊಂದಿಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೃಷ್ಣರಾಮ್ ತನ್ನ ಅಪ್ರಾಪ್ತ ನಾದಿನಿಯನ್ನು ಪುಸಲಾಯಿಸಿ, ಸುಳ್ಳು ಭರವಸೆ ನೀಡಿ ಆಕೆಯೊಂದಿಗೆ ಓಡಿ ಹೋಗಿದ್ದಾನೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

    Child Marriage Bride

    ಪೋಷಕರಿಗೆ ಕಾದಿತ್ತು ಶಾಕ್: ತನ್ನ ಮಗಳನ್ನು ಅಪಹರಿಸಿದ್ದಕ್ಕಾಗಿ ಹುಡುಗಿಯ ತಂದೆ ತಕ್ಷಣವೇ ಕೃಷ್ಣರಾಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ವಿಷಯ ಮಹಿಳಾ ಸಹಾಯವಾಣಿಗೆ ತಲುಪಿದಾಗ, ಅಪ್ರಾಪ್ತ ಹುಡುಗಿ ಸ್ವಂತ ಕುಟುಂಬದ ವಿರುದ್ಧವೇ ಬಾಲ್ಯ ವಿವಾಹದ ಆರೋಪ ಮಾಡಿರುವುದು ಕಂಡುಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ ನಂತರವೇ ಸತ್ಯಾಂಶ ತಿಳಿದು ಬಂದಿದೆ. ಅಲ್ಲದೆ, ರಾಮ್ ಅಪ್ರಾಪ್ತ ಹುಡುಗಿಯನ್ನು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಕರೆದೊಯ್ದು ಅಲ್ಲಿ ಕುಟುಂಬದ ವಿರುದ್ಧವೇ ಸುಳ್ಳು ದೂರು ದಾಖಲಿಸುವಂತೆ ಮಾಡಿದ್ದಾನೆ ಎನ್ನುವುದೂ ಗೊತ್ತಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಹಾವಿನೊಂದಿಗೇ ನೃತ್ಯ – ಮುಂದೇನಾಯ್ತು ಗೊತ್ತಾ?

    CRIME 2

    ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ರಾಮ್ ನನ್ನು ಬಂಧಿಸಿದ್ದಾರೆ. ಆರೋಪಿ ರಾಮ್‌ಗೆ ಕಳೆದ 12 ವರ್ಷಗಳಿಂದ ಸಂಕಾಂತಿ ದೇವಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದ. ಈತನಿಗೆ 4 ಮಕ್ಕಳಿದ್ದಾರೆ. ಈತನಿಂದ ತೊಂದರೆಗೀಡಾದ ದೇವಿ ಮತ್ತೆ ತನ್ನ ತಂದೆ ತಾಯಿಯ ಮನೆಗೆ ಹೋಗಿದ್ದಳು ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

  • ಭಿಕ್ಷೆ ಬೇಡುವಂತೆ ತಂದೆಯಿಂದಲೇ 11 ವರ್ಷದ ಬಾಲಕನಿಗೆ ಒತ್ತಡ- 200 ರೂ. ಸಂಗ್ರಹಿಸದ್ದಕ್ಕೆ ಹಲ್ಲೆ

    ಭಿಕ್ಷೆ ಬೇಡುವಂತೆ ತಂದೆಯಿಂದಲೇ 11 ವರ್ಷದ ಬಾಲಕನಿಗೆ ಒತ್ತಡ- 200 ರೂ. ಸಂಗ್ರಹಿಸದ್ದಕ್ಕೆ ಹಲ್ಲೆ

    – ಬಾಲ ಸಹಾಯವಾಣಿಗೆ ಕರೆ ಮಾಡಿ ವಿದ್ಯಾರ್ಥಿ ಅಳಲು

    ಜೈಪುರ: ತನ್ನ 11 ವರ್ಷದ ಮಗನಿಗೆ ಭಿಕ್ಷೆ ಬೇಡುವಂತೆ ಒತ್ತಾಯಿಸಿದ್ದು, ಹಣ ಸಂಗ್ರಹಿಸಿಕೊಂಡು ಬಾರದ್ದಕ್ಕೆ ಮನಬಂದಂತೆ ಥಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ತಂದೆಯ ವಿಕೃತ ವರ್ತನೆಯಿಂದ ಬೇಸತ್ತು 11 ವರ್ಷದ ವಿದ್ಯಾರ್ಥಿ ಬಾಲ ಸಹಾಯವಾಣಿಗೆ ಕರೆ ಮಾಡಿದ್ದಾನೆ. ನಂತರ ಪಾಪಿ ತಂದೆಯನ್ನು ಬಂಧಿಸಲಾಗಿದೆ. ಬಾಲ ಸಹಾಯವಾಣಿಯ ಸ್ವಯಂ ಸೇವಕರು ಬಾಲಕನನ್ನು ರಕ್ಷಿಸಿದ್ದಾರೆ. ಸೋಮವಾರ ವಿದ್ಯಾರ್ಥಿ ಬಾಲ ಸಹಾಯವಾಣಿಗೆ ಕರೆ ಮಾಡಿ ಘಟನೆ ಕುರಿತು ವಿವರಿಸಿದ್ದಾನೆ. ನಂತರ ಸಂಸ್ಥೆಯ ಸದಸ್ಯರು ಗಂಜ್ ಪೊಲೀಸರಿಗೆ ಘಟನೆ ಕುರಿತು ವಿವರಿಸಿದ್ದಾರೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹದ ಮೇಲೆ ಗಾಯದ ಗುರುತುಗಳಾಗಿದ್ದಕ್ಕೆ ಚಿಕಿತ್ಸೆ ನೀಡಿದ್ದಾರೆ.

    ತಂದೆ ಮಗನನ್ನು ಶಾಲೆಗೆ ಕಳುಹಿಸುತ್ತಿದ್ದ ಅಲ್ಲದೆ ಕೊರೊನಾ ಅವಧಿಯಲ್ಲಿ ಆನ್‍ಲೈನ್ ತರಗತಿಗೂ ಕಳುಹಿಸಿದ್ದ. ದರೂ ಭಿಕ್ಷೆ ಬೇಡುವಂತೆ ಬಾಲಕನಿಗೆ ಒತ್ತಾಯಿಸುತ್ತಿದ್ದ. 11 ವರ್ಷದ ಬಾಲಕ ಭಿಕ್ಷೆ ಬೇಡಿ 200ರೂ. ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆ ಆರೋಪಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ.

    ಭಾನುವಾರ ಆರೋಪಿ ಅಪ್ರಾಪ್ತ ಭಾಲಕನನ್ನು ಕೋಲಿನಿಂದ ಥಳಿಸಿದ್ದು, ಗಲಾಟೆ ಮಾಡದಂತೆ ಬೆದರಿಸಿದ್ದಾನೆ. ಮರುದಿನ ಬಾಲಕ ಬಾಲ ಸಹಾಯವಾಣಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಬಾಲಕನನ್ನು ರಕ್ಷಿಸಲಾಗಿದೆ.

    ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. 11 ವರ್ಷದ ಬಾಲಕನನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಾಳೆ. ತಂದೆ ಮದ್ಯ ವ್ಯಸನಿಯಾಗಿದ್ದಾನೆ. ತಂದೆ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಬಾಲಕ ವಿವರಿಸಿದ್ದಾನೆ. ಅಲ್ಲದೆ ಮದ್ಯ ಸೇವಿಸಲು ಹಣವಿಲ್ಲದ ಕಾರಣ ಆರೋಪಿ ತನ್ನ ಮಗನನ್ನೇ ಭಿಕ್ಷೆ ಬೇಡಲು ಕಳುಹಿಸಿದ್ದಾನೆ.

  • ಮುಖ್ಯ ಶಿಕ್ಷಕನಿಂದ ಬಾಲಕಿ ಮೇಲೆ ಅತ್ಯಾಚಾರ, ಮನೆಗೆಲಸ ಮಾಡದ್ದಕ್ಕೆ ಥಳಿತ

    ಮುಖ್ಯ ಶಿಕ್ಷಕನಿಂದ ಬಾಲಕಿ ಮೇಲೆ ಅತ್ಯಾಚಾರ, ಮನೆಗೆಲಸ ಮಾಡದ್ದಕ್ಕೆ ಥಳಿತ

    ಹೈದರಾಬಾದ್: ಶಾಲೆಯ ಮುಖ್ಯ ಶಿಕ್ಷಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಮನೆಗೆಲಸ ಮಾಡಲು ಒತ್ತಾಯಿಸಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

    ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಟಸಿಂಗರಂನ ಜಾನೆಟ್ ಜಾರ್ಜ್ ಸ್ಮಾರಕ ವಸತಿ ಶಾಲೆಯ ಮುಖ್ಯ ಶಿಕ್ಷಕ ಕೆ.ಪ್ರಸಾದ್ ರಾವ್(51) ಹಾಗೂ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಈತನ ಪತ್ನಿ ಕೆ.ಶರಧಿ ಅವರನ್ನು ಹೈದರಾಬಾದ್‍ನ ಎಸ್‍ಇಇ ತಂಡದೊಂದಿಗೆ ಪೊಲೀಸರು ಬಂಧಿಸಿದ್ದಾರೆ.

    ಮಕ್ಕಳ ಸಹಾಯವಾಣಿ ಮೂಲಕ ಸಂತ್ರಸ್ತೆ ದೂರು ದಾಖಲಿಸಲಾಗಿದ್ದು, 15 ವರ್ಷದ ಬಾಲಕಿ 2015ರಲ್ಲಿ ಶಾಲೆಗೆ ದಾಖಲಾಗಿದ್ದಳು. ನಂತರ ಶಾಲೆಯ ವಸತಿ ನಿಲಯದಲ್ಲೇ ವಾಸವಿದ್ದಳು. ಬಾಲಕಿ ಮಲಗಿದ್ದಾಗ, ಹಾಸ್ಟೆಲ್ ವಾರ್ಡನ್ ಪ್ರಸಾದ್ ಬಾಲಕಿಯ ಕೋಣೆಗೆ ಆಗಮಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿ, ಆತ ಬಾಲಕಿ ಮೇಲೆ ಪದೇ ಪದೆ ಅತ್ಯಾಚಾರ ಎಸಗುತ್ತಿದ್ದ, ಅಲ್ಲದೆ ಅವಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ.

    ಪ್ರಸಾದ್ ಪತ್ನಿ ಶರಧಿ ಕೂಡ ಬಾಲಕಿಗೆ ಕಿರುಕುಳ ನೀಡಿ ದಂಪತಿಯ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಒತ್ತಾಯಿಸಿದ್ದರು. ಬಾಲಕಿ ಕೆಲಸ ಮಾಡಲು ನಿರಾಕರಿಸಿದಾಗ ಆಕೆಯನ್ನು ಥಳಿಸಲಾಗಿದೆ. ಮುಖ್ಯ ಶಿಕ್ಷಕ ಈ ಬಾಲಕಿಗೆ ಮಾತ್ರವಲ್ಲ ಹಾಸ್ಟೆಲ್‍ನಲ್ಲಿರುವ ಇತರ ಹುಡುಗಿಯರನ್ನೂ ನಿಂದಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಕಿರುಕುಳ ಸಹಿಸಲಾಗದೆ, ಸಂತ್ರಸ್ತೆ ಜೂನ್ ತಿಂಗಳಲ್ಲಿ ಶಾಲೆಯನ್ನು ತೊರೆದಿದ್ದಾಳೆ. ಶುಕ್ರವಾರ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾಳೆ. ನಂತರ ಪೊಲೀಸರು ಹಾಗೂ ಎಸ್‍ಇಇ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ದಂಪತಿ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

  • ಅಪ್ರಾಪ್ತೆಯ ಶವ ಸಂಸ್ಕಾರ ತಡೆದು ಅಧಿಕಾರಿಯಿಂದ ಪರಿಶೀಲನೆ

    ಅಪ್ರಾಪ್ತೆಯ ಶವ ಸಂಸ್ಕಾರ ತಡೆದು ಅಧಿಕಾರಿಯಿಂದ ಪರಿಶೀಲನೆ

    ವಿಜಯಪುರ: ಬಾಲ್ಯ ವಿವಾಹ ಮಾಡಿಕೊಡಲಾಗಿದ್ದ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಕಾರಣ ಮಕ್ಕಳ ಸಹಾಯವಾಣಿ ಅಧಿಕಾರಿ ಶವ ಸಂಸ್ಕಾರವನ್ನು ತಡೆದು ಪರಿಶೀಲನೆ ನಡೆಸಿರುವ ಘಟನೆ ಜಿಲ್ಲೆಯ ರಾಣಿ ಬಗಿಚಾದಲ್ಲಿ ನಡೆದಿದೆ.

    ರಾಣಿ ಬಗಿಚಾ ನಿವಾಸಿ ಅಪ್ರಾಪ್ತೆಯನ್ನು ಮೂರು ವರ್ಷದ ಹಿಂದೆ ಮಹಾರಾಷ್ಟ್ರದ ಕರಾಡ ತಾಲೂಕಿನ ವಾಟಾರ್ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗುರುವಾರ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಇಂದು ವಿಜಯಪುರಕ್ಕೆ ಅಪ್ರಾಪ್ತೆಯ ಶವ ತಂದು ಅಂತ್ಯ ಸಂಸ್ಕಾರಕ್ಕೆ ಪೋಷಕರು ಮುಂದಾಗಿದ್ದರು.

    ಈ ಬಗ್ಗೆ ವಿಷಯ ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿ ಸುನಂದಾ ತೋಳಬಂದಿ ಅವರು ಸ್ಥಳಕ್ಕೆ ಭೇಟಿ ನೀಡಿ ಶವ ಸಂಸ್ಕಾರಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗದಂತೆ ಕೆಲಕಾಲ ತಡೆದಿದ್ದರು.

    ಇದು ಕೇವಲ ಆತ್ಮಹತ್ಯೆ ಎಂದು ಮಹಾರಾಷ್ಟ್ರದ ಕರಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಈ ಪ್ರಕರಣ ಸಂಬಂಧ ಪೋಕ್ಸೋ ಹಾಗೂ ಜೆ.ಜೆ (ಬಾಲ್ಯವಿವಾಹ) ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಳ್ಳಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನಂತರ ಶವ ಸಂಸ್ಕಾರಕ್ಕೆ ಮಕ್ಕಳ ಸಹಾಯವಾಣಿ ಅಧಿಕಾರಿ ತೋಳಬಂದಿ ಅನುಮತಿ ನೀಡಿದರು.