Tag: Chikkamagaluru

  • ಮಂಡ್ಯ ಎಸ್‍ಪಿಗೆ ಸಿಎಂ ಜೋರು ಮಾಡಿದ್ದು ಸರಿ: ಪರಮೇಶ್ವರ್ ಸಮರ್ಥನೆ

    ಮಂಡ್ಯ ಎಸ್‍ಪಿಗೆ ಸಿಎಂ ಜೋರು ಮಾಡಿದ್ದು ಸರಿ: ಪರಮೇಶ್ವರ್ ಸಮರ್ಥನೆ

    ಚಿಕ್ಕಮಗಳೂರು: ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ ಹಿನ್ನೆಲೆಯಲ್ಲಿ ಸಿಎಂ ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿ ಅವರಿಗೆ ಜೋರು ಮಾಡಿದ್ದು ಸರಿ ಇದೆ ಅಂತಾ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಕಪ್ಪು ಬಾವುಟ ತೋರಿಸುವ ಬದಲು ಕಲ್ಲು ಎಸೆದಿದ್ದರೆ ಏನಾಗ್ತಿತ್ತು? ಹೀಗಾಗಿ ಸಿಎಂ ಎಸ್‍ಪಿಗೆ ಜೋರು ಮಾಡಿದ್ದು ಸರಿ. ಈ ವಿಚಾರದ ಬಗ್ಗೆ ಈಗಾಗಲೇ ಮಂಡ್ಯ ಎಸ್‍ಪಿ ಬಳಿ ಮಾತನಾಡಿದ್ದೇನೆ. ಅಲ್ಲದೇ ಘಟನೆ ನಡೆದ ಸಂದರ್ಭ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಹೇಳಿದ್ರು.

    ಇದನ್ನೂ ಓದಿ: ನಿನಗ್ಯಾರು ಐಪಿಎಸ್ ಕೊಟ್ಟಿದ್ದು?- ಮಂಡ್ಯ ಎಸ್‍ಪಿಗೆ ಸಿಎಂ ಸಾರ್ವಜನಿಕ ಬೈಗುಳ

    ಶೆಟ್ಟರ್ ಹೇಳಿಕೆಗೆ ತಿರುಗೇಟು: ಉಪಚುನಾವಣೆಯಲ್ಲಿ ಗೆದ್ದು ಐಸಿಯುನಲ್ಲಿದ್ದ ಕಾಂಗ್ರೆಸ್ ಸರ್ಕಾರ ಚೇತರಿಸಿಕೊಂಡಿದೆ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಪರಂ, ಜಗದೀಶ್ ಶೆಟ್ಟರ್ ಬಾಯಿಗೆ ಬಂದಂತೆ ಮಾತನಾಡಬಾರದು. 2013ರಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿತ್ತು. 20 ಉಪಚುನಾವಣೆಗಳು ನಡೆದವು. ಅವರು ಸಹ ಹಣ ಹಾಗೂ ಹೆಂಡದ ಹೊಳೆ ಹರಿಸಿದ್ದಾರೆ ಅಂತ ನಾವು ಹೇಳಬೇಕಾಗುತ್ತದೆ. ಇದು ಮತದಾರರು ನೀಡಿರುವ ತೀರ್ಪು. ಸರ್ಕಾರ ಹಾಗೂ ಸಿಎಂ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಕಾರಣ ಅಂದ್ರು.

    ಉಪಚುನಾವಣೆ ಫಲಿತಾಂಶ 2018ರ ಸೆಮಿಫೈನಲ್ ಎಂದು ಯಡಿಯೂರಪ್ಪ ಹೇಳಿದ್ರು. ಆದರೇ ಅವರು ಸೆಮಿಫೈನಲ್‍ನಲ್ಲಿ ಸೋತಿದಾರೆ. ಸೆಮಿಫೈನಲ್‍ನಲ್ಲಿ ಸೋತವರು ಎಲ್ಲಿಗೆ ಹೋಗುತ್ತಾರೆ? ಆದರೂ 150 ಸೀಟ್ ಗೆಲ್ಲುತ್ತಾರೆ ಅಂತ ಹೇಳ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಅಂತಾ ಪರಂ ವಿಶ್ವಾಸ ವ್ಯಕ್ತಪಡಿಸಿದ್ರು.

    https://www.youtube.com/watch?v=EPh2F90UOc8

  • ಚಿಕ್ಕಮಗಳೂರಿನ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಹೇಳಿಕೊಟ್ರು ಹಾವಿನ ಮಾಹಿತಿ!

    ಚಿಕ್ಕಮಗಳೂರಿನ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಹೇಳಿಕೊಟ್ರು ಹಾವಿನ ಮಾಹಿತಿ!

    ಚಿಕ್ಕಮಗಳೂರು: `ಹಾವು’ ಅಂದಾಕ್ಷಣ ಆಡೋ ಮಕ್ಕಳಿಂದ ಮುದುಕ್ರು ಕೂಡ ಕಾಲಿಗೆ ಬುದ್ಧಿ ಹೇಳ್ತಾರೆ. ಹಾವನ್ನ ಕಂಡ ದಾರಿಯಲ್ಲಿ ವಾರವಾದ್ರು ಓಡಾಡೋದಿಲ್ಲ. ಆದ್ರೆ, ಎಲ್ಲಾ ಹಾವುಗಳು ಕೆಟ್ಟವಲ್ಲ. ಕೆಲ ಹಾವುಗಳು ಕಚ್ಚಿದ್ರೂ ಸಾಯೋದಿಲ್ಲ ಅನ್ನೋ ವಿಷಯ ಎಷ್ಟೋ ಜನಕ್ಕೆ ಗೊತ್ತಿಲ್ಲ. ಅದನ್ನ ತಿಳಿಯೋ ಪ್ರಯತ್ನಕ್ಕೂ ಯಾರು ಹೋಗೋದಿಲ್ಲ. ಚಿಕ್ಕಮಗಳೂರಿನ ವಿಶ್ವಮಾನವ ಎಜುಕೇಶನ್ ಟ್ರಸ್ಟ್ ಏರ್ಪಡಿಸಿರೋ ಬೇಸಿಗೆ ಶಿಬಿರ ತುಸು ಭಿನ್ನವಾಗಿದ್ದು, ಬರೀ ಆಡೋದು, ಕುಣುಯೋದನ್ನಷ್ಟೆ ಹೇಳಿ ಕೊಡ್ತಿಲ್ಲ. ಎಳೆಯ ಮನಸ್ಸಿಗೆ ಕೆಲ ಉಪಯುಕ್ತ ಮಾಹಿತಿಯನ್ನು ನೀಡ್ತಿದ್ದಾರೆ.

    ಹೌದು. ಚಿಕ್ಕಮಗಳೂರಿನ ವಿಶ್ವಮಾನವ ಟ್ರಸ್ಟ್ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಉರಗ ತಜ್ಞ ಸ್ನೇಕ್ ನರೇಶ್ ಹಾವಿನ ಬಗ್ಗೆ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದ್ರು. ಶಿಬಿರದಲ್ಲಿ ವಿಷಕಾರಿ ನಾಗರಹಾವು ಹಾಗೂ ಬೃಹತ್ ಗಾತ್ರದ ಕೆರೆ ಹಾವನ್ನ ತಂದು ಅವುಗಳ ಜಾತಿ, ವಾಸ, ಚಲನವಲನ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿ ಕೊಟ್ರು.

    ನರೇಶ್ ಸರ್ ಶಿಬಿರಕ್ಕೆ ಬಂದು ಹಾವುಗಳ ಬಗ್ಗೆ ಅನೇಕ ಮಾಹಿತಿಗಳನ್ನು ನೀಡಿದ್ರು. ವಿಷದ ಹಾವುಗಳು ಹೇಗಿರುತ್ತವೆ ಅನ್ನೋದನ್ನ ತೋರಿಸಿಕೊಟ್ರು. ಒಂದು ಹಾವು ಹೇಗಿರುತ್ತೆ ಅನ್ನೋದನ್ನ ಕ್ಲೀಯರ್ ಆಗಿ ಮೊದಲ ಬಾರಿಗೆ ನೋಡಿದೆ. ಫಸ್ಟ್ ನೋಡುವಾಗ ಭಯ ಆಯ್ತು. ಆಮೇಲೆ ಅದನ್ನ ಮುಟ್ಟಿದಾಗ ಅಷ್ಟೊಂದು ಭಯವಾಗಿಲ್ಲ ಅಂತಾ ವಿದ್ಯಾರ್ಥಿನಿ ಸಂಯುಕ್ತಾ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ರು.

    ಮಕ್ಕಳೂ ಸಹ ಹಾವುಗಳನ್ನ ಮುಟ್ಟಿ, ಅವುಗಳ ಜೊತೆ ಆಟ ಆಡಿ ಎಂಜಾಯ್ ಮಾಡಿದ್ರು. ಹಾವುಗಳ ಬಗ್ಗೆ ಇದ್ದಂಥ ಭಯವನ್ನ ದೂರ ಮಾಡಿಕೊಂಡ್ರು. ಬೇಸಿಗೆ ರಜೆಯಲ್ಲಿ ನೂರಾರು ಶಿಬಿರಗಳನ್ನು ನಡೆಸಿ ಜನ ಹಣ ವಸೂಲಿ ಮಾಡ್ತಾರೆ ಹೊರತು ಮಕ್ಕಳಿಗೆ ಬನೇಕಾದ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿಲ್ಲ. ಆದ್ರೆ ಚಿಕ್ಕಮಗಳೂರಿನ ವಿಶ್ವಮಾನವ ಟ್ರಸ್ಟ್ ನವ್ರು ವಿಭಿನ್ನ ಕಾರ್ಯಕ್ರಮ ಮಾಡಿರೋದು ಶ್ಲಾಘನೀಯ.

  • ಚಿಕ್ಕವಯಸ್ಸಿಗೇ ದೊಡ್ಡ ಜನೋಪಕಾರಿ ಕಾರ್ಯ- ಮೂರೇ ತಿಂಗಳಲ್ಲಿ 500 ಶೌಚಾಲಯ ನಿರ್ಮಾಣ!

    ಚಿಕ್ಕವಯಸ್ಸಿಗೇ ದೊಡ್ಡ ಜನೋಪಕಾರಿ ಕಾರ್ಯ- ಮೂರೇ ತಿಂಗಳಲ್ಲಿ 500 ಶೌಚಾಲಯ ನಿರ್ಮಾಣ!

    ಚಿಕ್ಕಮಗಳೂರು: ಮನೆ ಪಕ್ಕದ ಗರ್ಭಿಣಿಯೊಬ್ರು ಶೌಚಾಲಯವಿಲ್ಲದೆ ಪರದಾಡುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಯುವಕ ಇಡೀ ಗ್ರಾಮ ಪಂಚಾಯ್ತಿಯ ಹಳ್ಳಿಯ ಪ್ರತಿಯೊಂದು ಮನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಮಾಡಿದ್ದಾರೆ.

    ಹೌದು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜಿಗಣೆಹಳ್ಳಿ ನಿವಾಸಿ ಮಹಾಂತೇಶ್ ಈ ಮಹಾನ್ ಕಾರ್ಯ ಮಾಡಿದ ಯುವಕ. ಎಸ್‍ಎಸ್‍ಎಲ್‍ಸಿಗೆ ಶಾಲೆ ಬಿಟ್ಟ ಇವರ ವಯಸ್ಸೀಗ 18. ಈ ವಯಸ್ಸಿನಲ್ಲೇ ಇಡೀ ಗ್ರಾಮ ಪಂಚಾಯ್ತಿಯ ಗಮನ ಸೆಳೆದಿದ್ದಾರೆ. ಶೌಚಾಲಯ ನಿರ್ಮಾಣದ ಬಗ್ಗೆ ಅರಿವು ಮೂಡಿಸಿ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಹಳ್ಳಿಗಳಲ್ಲಿ ಮೂರೇ ತಿಂಗಳಲ್ಲಿ 500ಕ್ಕೂ ಹೆಚ್ಚು ಶೌಚಾಲಯ ನಿರ್ಮಾಣವಾಗುವಂತೆ ಮಾಡಿದ್ದಾರೆ.

    ಪ್ರತಿ ಮನೆಗೂ ಹೋಗಿ ಶೌಚಾಲಯದ ಉಪಯೋಗದ ಮಹತ್ವ ತಿಳಿಸಿದ್ದಾರೆ. ದಾಖಲೆ ಪಡೆದು, ಗ್ರಾಮ ಪಂಚಾಯಿತಿಗೆ ಅರ್ಜಿ ಬರೆದು, ಜಾಗದ ಫೋಟೋ ತೆಗೆದು, ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನ ಸ್ಥಳಕ್ಕೆ ಕರೆತಂದು ಕೆಲಸ ಮಾಡಿಸಿದ್ದಾರೆ. ನೀವು ಹಣ ಕೊಡೋದು ಬೇಡ, ಸರ್ಕಾರವೇ ಹಣ ಕೊಡುತ್ತೆ ಅಂತ ಹಳ್ಳಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ಮಹಾಂತೇಶ್ ಕಾರ್ಯಕ್ಕೆ ಮೊದಮೊದಲು ತಂದೆ ಬೈಯುತ್ತಿದ್ರಂತೆ. ಆದ್ರೆ, ಊರಿನ ಜನ ನಿನ್ನ ಮಗ ಒಳ್ಳೆ ಕೆಲಸ ಮಾಡ್ತಿದ್ದಾನೆ ಅಂದ ಮೇಲೆ ಸುಮ್ಮನಾದ್ರಂತೆ. ಸದ್ಯ ತನ್ನ ಕಾರ್ಯವನ್ನ ಮತ್ತಷ್ಟು ಹಳ್ಳಿಗಳಿಗೆ ಮುಂದುವರಿಸ್ತೇನೆ ಅಂತಿರೋ ಮಹಾಂತೇಶ್‍ಗೆ ಮತ್ತಷ್ಟು ಜನರ ಬೆಂಬಲ ಸಿಗಬೇಕಿದೆ.

    https://www.youtube.com/watch?v=cbkBNkXu0do

  • ಚಿಕ್ಕಮಗಳೂರಿನಲ್ಲಿ ಕಾಡು ಬಿಟ್ಟು ನಾಡಿನಲ್ಲಿ ನಕ್ಸಲರ ಸೈಲೆಂಟ್ ಹೋರಾಟ!

    ಚಿಕ್ಕಮಗಳೂರಿನಲ್ಲಿ ಕಾಡು ಬಿಟ್ಟು ನಾಡಿನಲ್ಲಿ ನಕ್ಸಲರ ಸೈಲೆಂಟ್ ಹೋರಾಟ!

    – ಜುಲ್ಫಿಕರ್, ಶ್ರೀಧರ್ ಮೇಲೆ ಖಾಕಿ ಕಣ್ಣು

    ಚಿಕ್ಕಮಗಳೂರು: ಇತ್ತೀಚಿಗೆ ರಾಜ್ಯದ ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸುತ್ತಿದೆ ಎಂದು ಸರ್ಕಾರ ಭಾವಿಸಿತ್ತು. ಆದ್ರೆ, ಇದೀಗ ನಕ್ಸಲರು ನಗರ ಪ್ರದೇಶಗಳಲ್ಲಿಯೇ ಸಂಘಟನೆ ಮಾಡ್ತಿದ್ದಾರೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದರಿಂದ ಈಗ ಶರಣಾಗಿರುವ ನಕ್ಸಲರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದೆ.

    ಇಷ್ಟು ದಿನ ಕಾಡೊಳಗೆ ಬಂದೂಕು ಹಿಡಿದು ಹೋರಾಟ ಮಾಡ್ತಿದ್ದ ನಕ್ಸಲರು ಇದೀಗ ಹೋರಾಟದ ದಿಕ್ಕನ್ನ ಬದಲಾಯಿಸಿದ್ದಾರೆ. ಕಾಡಲ್ಲಿದ್ದು ಹೋರಾಟ ಮಾಡೋಕೆ ಸ್ಥಳೀಯರ ಸಹಕಾರ ಅಗತ್ಯ ಆದ್ರೆ ಸ್ಥಳೀಯರು ಹೋರಾಟಕ್ಕೆ ಬೆಂಬಲ ನೀಡಲ್ಲ. ಅದಕ್ಕಾಗಿ ನಾಡಲ್ಲಿದ್ದು ಹೇಗೆ ಸಂಘಟನೆ, ಹೋರಾಟ ಬಲಪಡಿಸ್ಬೇಕು ಅಂತ ಪ್ಲಾನ್ ಮಾಡ್ತಿದ್ದಾರಂತೆ.

    ಈ ಹಿಂದೆ ಶರಣಾಗಿದ್ದ ನಕ್ಸಲರಾದ ನೂರ್ ಜುಲ್ಫಿಕರ್, ಶ್ರೀಧರ್ ಮುಖ್ಯವಾಹಿನಿಗೆ ಬಂದ್ಮೇಲೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಹೋರಾಟ ಮಾಡ್ತಿದ್ದಾರೆ. ಇವರ ಸಂಘಟನೆ ಮೇಲೂ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಜೊತೆಗೆ ಜಾಮೀನು ರದ್ದುಪಡಿಸುವಂತೆ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಅಂತಾ ಚಿಕ್ಕಮಗಳೂರು ಎಸ್ಪಿ ಅಣ್ಣಾ ಮಲೈ ಹೇಳಿದ್ದಾರೆ.

    `ಅರ್ಬನ್ ಆ್ಯಕ್ಷನ್ ಟೀಂ’ ಹೆಸರಿನಲ್ಲಿ ನಕ್ಸಲರು ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲವರು ಭೂಮಿ ಹೋರಾಟ ಸಮಿತಿ ಅಂತಾ ಹೇಳಿಕೊಂಡು ಸಂಘಟನೆಗಳನ್ನು ನಡೆಸುತ್ತಾ ಇದ್ದಾರೆ. ತೆರೆಮರೆಯಲ್ಲಿ ನಡೆಸ್ತಿದ್ದ ಹೋರಾಟ ನಾಡಿನಲ್ಲಿ ಶುರುವಾಗುತ್ತಾ ಅನ್ನೋ ಆತಂಕ ಹೆಚ್ಚಾಗಿದೆ.

  • ಚಿಕ್ಕಮಗಳೂರು: ಬೈಕ್-ಟಿಪ್ಪರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು

    ಚಿಕ್ಕಮಗಳೂರು: ಬೈಕ್-ಟಿಪ್ಪರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು

    -5 ಕಿ.ಮೀ. ದೂರದ ಹಳ್ಳಿಗೆ ಒಂದೂವರೆ ಗಂಟೆ ತಡವಾಗಿ ಬಂದ ಅಂಬುಲೆನ್ಸ್

    ಚಿಕ್ಕಮಗಳೂರು: ಬೈಕ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯೆ ಮುಗುಳುವಳ್ಳಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಚಿಕ್ಕಮಗಳೂರಿನ ರಾಮನಹಳ್ಳಿ ನಿವಾಸಿಗಳಾದ ಚನ್ನಕೇಶವ (30), ಕಾರ್ತಿಕ್ (28) ಮೃತ ದುರ್ದೈವಿಗಳು. ಕಾರ್ತಿಕ್ ತನ್ನ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವವನ್ನು ಮುಗಿಸಿಕೊಂಡು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುವಾಗ ಈ ಅವಘಡ ನಡೆದಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಮೂರ್ನಾಲ್ಕು ಕ್ರಷರ್‍ಗಳಿದ್ದು ಟಿಪ್ಪರ್ ಚಾಲಕರು ಅತ್ಯಂತ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಟಿಪ್ಪರ್ ಚಾಲಕರು ಹಾಗೂ ಕ್ರಷರ್ ಮಾಲೀಕರ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.

    ಅಪಘಾತದ ಕೂಡಲೇ ಸ್ಥಳೀಯರು ಸುಮಾರು 11 ಗಂಟೆ ವೇಳೆಗೆ 108 ಕ್ಕೆ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಬಂದಿದ್ದು ಮಾತ್ರ 12.30 ಕ್ಕೆ. ಅಪಘಾತ ಸಂಭವಿಸಿದ ಕೂಡಲೇ ಅಂಬುಲೆನ್ಸ್‍ಗೆ ಕರೆ ಮಾಡಿದ್ರೂ ಐದು ಕಿ.ಮೀ. ದೂರದ ಮುಗುಳುವಳ್ಳಿಗೆ ಬರೋದಕ್ಕೆ ಅವರು ತೆಗೆದುಕೊಂಡ ಸಮಯ ಒಂದೂವರೆ ಗಂಟೆ. ಇದ್ರಿಂದ ಸಿಟ್ಟಿಗೆದ್ದ ಸ್ಥಳಿಯರು ಕೆಲಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

    ಟಿಪ್ಪರ್ ಚಾಲಕರಿಗೆ ಸರಿಯಾಗಿ ಮೀಸೆಯೂ ಬಂದಿಲ್ಲ. ಅಂತಹವರೆಲ್ಲಾ ಟಿಪ್ಪರ್ ಚಾಲಾಯಿಸ್ತಾರೆ. ಕ್ರಷರ್ ಮಾಲೀಕರು ಹಾಗೂ ಪೊಲೀಸ್ ಇಲಾಖೆ ಅಂತವರ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಜೀವಕ್ಕೆ ಬೆಲೆಯೇ ಇರೋದಿಲ್ಲ. ಇನ್ನೊಮ್ಮೆ ಇಂತಹ ಘಟನೆ ನಡೆದ್ರೆ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

    ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

  • ಅಪ್ಪ ಇಲ್ಲ, ಅಮ್ಮನಿಗೆ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ- 5 ಮಕ್ಕಳ ಕುಟುಂಬಕ್ಕೆ ಬೇಕಿದೆ ಸಹಾಯ

    ಅಪ್ಪ ಇಲ್ಲ, ಅಮ್ಮನಿಗೆ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ- 5 ಮಕ್ಕಳ ಕುಟುಂಬಕ್ಕೆ ಬೇಕಿದೆ ಸಹಾಯ

    ಚಿಕ್ಕಮಗಳೂರು: ಜೀವನದ ಮೇಲೆ ವಿಧಿ ಸವಾರಿ ಮಾಡ ಹೊರಟ್ರೆ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಂದು ನಿಲ್ಲೋದು ಗ್ಯಾರಂಟಿ. ಅಂತಹ ವಿಧಿಯಾಟದ ಮುಂದೆ ಸತ್ತು ಬದುಕಿದವರು ಉಂಟು. ಬದುಕಿ ಪ್ರತಿದಿನ ಸಾಯ್ತಿರೋರು ಉಂಟು. ವಿಧಿಯ ಕೆಂಗಣ್ಣಿಗೆ ಗುರಿಯಾದವರ ಜೀವನ ಎಷ್ಟು ನಿಕೃಷ್ಟವಾಗಿರುತ್ತೆ ಅನ್ನೋದಕ್ಕೆ ನೂರಾರು ನಿದರ್ಶನಗಳಿವೆ. ಆದ್ರೆ, ಪ್ರಪಂಚದ ಅರಿವೇ ಇಲ್ಲದ ಈ ಮಕ್ಕಳು ಅದ್ಯಾವ ಜನ್ಮದಲ್ಲಿ ಏನ್ ತಪ್ ಮಾಡಿದ್ರೋ ಗೊತ್ತಿಲ್ಲ. ಎಳೆ ವಯಸ್ಸಿಗೆ ಸಂಸಾರದ ನೊಗ ಹೋರೋ ಸ್ಥಿತಿ ಬಂದಿದೆ. ಅಪ್ಪ ಇಲ್ಲ, ಅಮ್ಮ ಇದ್ರೂ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ, ತಿನ್ನೋಕೆ ಅನ್ನವಿಲ್ಲ. ಹೇಳ್ತಾ ಹೋದ್ರೆ ಇವ್ರ ನೋವು ನೂರಾರು. ಈ ಕುಟುಂಬದ ಸ್ಥಿತಿ ಕೇಳ್ದೋರ ಕಣ್ಣಲ್ಲಿ ನೀರು ಬರತ್ತೆ.

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆಯ ಗ್ರಾಮದ ಕುಟುಂಬವೊಂದು ಇದೀಗ ನಮಗೆ ಬದುಕೋ ಭಾಗ್ಯವಿಲ್ಲವೇನೋ ಎಂಬಂತೆ ಕುಳಿತಿದೆ. 15 ವರ್ಷಗಳಿಂದ ಕಾಫಿತೋಟದಲ್ಲಿ ಕೂಲಿ ಮಾಡ್ತಾ ಬದುಕ್ತಿದ್ದ ಈ ಕುಟುಂಬದ ಯಜಮಾನ ಸಂಸಾರದಲ್ಲಿನ ನೋವುಗಳಿಂದ ಬೇಸತ್ತು ಎರಡೂವರೆ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ತೀರಿಕೊಂಡ ಮೇಲೆ ಐವರು ಮಕ್ಕಳನ್ನ ಸಾಕೋಕೆ ತಾಯಿ ಸುಮಿತ್ರ ಹೋರಾಡ್ತಿರೋ ಪರಿ ಅಷ್ಟಿಷ್ಟಲ್ಲ. ಆದ್ರೆ, ಪೌಷ್ಟಿಕ ಆಹಾರದ ಕೊರತೆಯಿಂದ ತಾಯಿಗೂ ನಾನಾ ಕಾಯಿಲೆ. ಕೆಲಸ ಮಾಡೋಕೆ ಆಗ್ತಿಲ್ಲ. ಒಂದು ಗಂಟೆ ಕೆಲಸ ಮಾಡಿದ್ರೆ ತೀವ್ರ ಸುಸ್ತು. ಆದ್ರೆ ಸಂಜೆ ಮಕ್ಕಳ ಹೊಟ್ಟೆ ತುಂಬಿಸೋಕೆ ಕೆಲಸ ತೀರಾ ಅನಿವಾರ್ಯ. ವಾರದಲ್ಲಿ ಎರಡ್ಮೂರು ದಿನ ಮಾತ್ರ ಕೆಲಸ ಮಾಡೋಕಷ್ಟೆ ತಾಯಿ ಶಕ್ತಳು. ಮಕ್ಕಳು ಇನ್ನೂ ಚಿಕ್ಕವು. ಕೂಲಿಗೆ ಹೋದ್ರೆ ನೋಡಿಕೊಳ್ಳೋರು ಯಾರಿಲ್ಲ. ಹಾಗಂತ ಮನೆಯಲ್ಲಿ ಕೂರುವಂತಿಲ್ಲ. ಕಷ್ಟವೋ-ಸುಖವೋ ಪರಿಸ್ಥಿತಿ ಎಂತಹದ್ದಿದ್ರೂ ಕೆಲಸಕ್ಕೆ ಹೋಗಲೇಬೇಕು. ಇರೋಕೆ ಮನೆಯೂ ಇಲ್ಲ. ಸದ್ಯಕ್ಕೆ ಕಾಫಿತೋಟದ ಲೈನ್‍ಗಳಲ್ಲಿನ ಪಾಳು ಬಿದ್ದ ಮನೆಯಲ್ಲಿ ಬದುಕ್ತಿದ್ದಾರೆ. ನಾಲ್ಕು ಜನರಂತೆ ಬದುಕೋಕೆ ಆಶ್ರಯ ಯೋಜನೆ ಮನೆಗಾಗಿ ಎದುರು ನೋಡ್ತಿದ್ದಾರೆ.

    ಇವರಿಗೆ ಆಶ್ರಯ ಯೋಜನೆಯಡಿ ಸೈಟ್ ಇದೆ. ಆದ್ರೆ ಅಧಿಕಾರಿಗಳು ಮನೆ ಕಟ್ಟಿಸಿಕೊಡ್ತೀವಿ ಅಂತಾನೇ ದಿನ ದೂಡ್ತಿದ್ದಾರೆ. ದುಡಿದ ದುಡ್ಡು ಜೀವನಕ್ಕೆ ಸಾಕಾಗಾದ ಕಾರಣ ಮನೆಯನ್ನೂ ಕಟ್ಟಿಕೊಳ್ಳಲಿಲ್ಲ. 2007ರಲ್ಲಿ ಇವರಿಗೆ ರೇಷನ್ ಕಾರ್ಡ್ ಇತ್ತು. ಆದ್ರೆ ಯಾವ ಕಾರಣಕ್ಕೆಂದು ಗೊತ್ತಿಲ್ಲ. ಅದನ್ನ ಲ್ಯಾಪ್ಸ್ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ರೇಷನ್ ಕಾರ್ಡ್‍ಗಾಗಿ ಅರ್ಜಿ ಹಾಕಿದ್ದಾರೆ. ಬದುಕಿಗೆ ಬೆನ್ನೆಲುಬಾಗಿದ್ದ ತಂದೆ ತೀರಿಕೊಂಡ ಮೇಲೆ ತಾಯಿ ಐವರು ಮಕ್ಕಳನ್ನ ಸಾಕೋಕೆ ಪಡ್ತಿರೋ ಕಷ್ಟದಿಂದ 10ನೇ ತರಗತಿ ಹಾಗೂ ಎಂಟನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಮಾಡ್ತಿದ್ದಾರೆ. ಹಾಗಾಗಿ ಈ ಕುಟುಂಬ ನಮಗೆ ಒಂದು ರೇಷನ್ ಕಾರ್ಡ್, ಇರೋಕೊಂದು ಮನೆ ಜೊತೆ ಕೊನೆಯ ಇಬ್ಬರು ಮಕ್ಕಳಿಗೆ ಹಾಸ್ಟೆಲ್‍ನಲ್ಲಿ ಓದೋಕೆ ಅನುವು ಮಾಡ್ಕೊಡಿ ಎಂದು ಬೇಡಿಕೊಳ್ತಿದ್ದಾರೆ.

    ಒಟ್ಟಾರೆ, ಈ ಕುಟುಂಬವನ್ನ ನೋಡಿದ್ರೆ ಜೀವನ ಎಷ್ಟು ದುಸ್ತರದಲ್ಲಿದೆ ಅನ್ನಿಸುತ್ತೆ. ಆದ್ರೆ ಇಂತಹ ಕಷ್ಟದ ಸ್ಥಿತಿಯಲ್ಲೂ ಒಬ್ಬಂಟಿ ಹೆಂಗಸು ಮಗಳಿಗಾಗಿ ಪಡ್ತಿರೋ ಪಾಡು, ಕಷ್ಟಗಳನ್ನ ಮೆಟ್ಟಿ ನಿಲ್ತಿರೋ ಈಕೆಯ ಧೈರ್ಯಕ್ಕೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು. ಸುತ್ತಮುತ್ತಲಿನ ಜನ ಹೇಳ್ತಿರೋದು ಅದೇ. ಆದ್ರೆ ಕಷ್ಟ ಅಂದ್ರೆ ಯಾರೂ ಹತ್ತಿರ ಬಾರದಿರೋದು ಮಾತ್ರ ದುರಂತ.

     https://www.youtube.com/watch?v=rCklB16P5eM

  • ಯಗಚಿ ನೀರು ಹಾಸನಕ್ಕೆ ವಿರೋಧಿಸಿ ಚಿಕ್ಕಮಗಳೂರು ಬಂದ್

    ಯಗಚಿ ನೀರು ಹಾಸನಕ್ಕೆ ವಿರೋಧಿಸಿ ಚಿಕ್ಕಮಗಳೂರು ಬಂದ್

    ಚಿಕ್ಕಮಗಳೂರು: ಯಗಚಿ ಜಲಾಶಯದ ನೀರನ್ನು ಹಾಸನಕ್ಕೆ ಹರಿಯಬಿಡ್ತಿರೋದನ್ನ ವಿರೋಧಿಸಿ ಚಿಕ್ಕಮಗಳೂರಿನ ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ಇಂದು ಚಿಕ್ಕಮಗಳೂರು ಬಂದ್‍ಗೆ ಕರೆ ನೀಡಿವೆ.

    ಬಂದ್‍ಗೆ ಬೆಳಗ್ಗಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವರ್ತಕರು ಕೂಡ ಸ್ವಯಂಪ್ರೇರಿತರಾಗಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್‍ಗೆ ಬೆಂಬಲ ನೀಡಿವೆ. ವಿವಿಧ ಕನ್ನಡಪರ ಸಂಘಟನೆಗಳು ಚಿಕ್ಕಮಗಳೂರಿನ ವಾಹನ ಹಾಗೂ ಆಟೋಗಳನ್ನ ಬಂದ್ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಬಹುತೇಕ ಆಟೋಗಳು ಸಂಚಾರ ಸ್ಥಗಿತಗೊಳಿಸಿವೆ. ಜನಸಾಮಾನ್ಯರು ಕೂಡ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡಪರ ಸಂಘಟಕರು ಉರುಳು ಸೇವೆ ಕೈಗೊಂಡಿದ್ದರು. ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್‍ಗೆ ಮುತ್ತಿಗೆ ಹಾಕಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಿಕ್ಕಮಗಳೂರು ಡಿಪೋ ಗಾಡಿಗಳು ರಸ್ತೆಗಿಳಿಯದಂತೆ ಆಗ್ರಹಿಸಿದ್ರು. ಇದರಿಂದ ಬಸ್ ಸ್ಟ್ಯಾಂಡ್‍ನಲ್ಲಿದ್ದ ಕೆಲ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

  • ಚಿಕ್ಕಮಗಳೂರಿನ ಈ ಅರಣ್ಯದಲ್ಲಿ ಬೆಂಕಿ -ಲಕ್ಷಾಂತರ ರೂ. ಮೌಲ್ಯದ ಮರ ನಾಶ!

    ಚಿಕ್ಕಮಗಳೂರಿನ ಈ ಅರಣ್ಯದಲ್ಲಿ ಬೆಂಕಿ -ಲಕ್ಷಾಂತರ ರೂ. ಮೌಲ್ಯದ ಮರ ನಾಶ!

    ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಸಮೀಪದಲ್ಲಿರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಾಗುವಾನಿ ಮರ ಸೇರಿದಂತೆ ಇತರೆ ಮರಗಳಿಗೂ ಬೆಂಕಿ ಪಸರಿಸಿ ಲಕ್ಷಾಂತರ ರೂ. ಮೌಲ್ಯದ ಮರ ನಾಶವಾಗಿರುವ ಘಟನೆ ಸಂಭವಿಸಿದೆ.

    ಚಿಕ್ಕಮಗಳೂರು ಜಿಲ್ಲೆಯ ಎನ್‍ಆರ್‍ಪುರ ತಾಲೂಕಿನ ಬಾಳೆಹೊನ್ನೂರಿನ ಮುದುಗುಣಿ ಅರಣ್ಯದಲ್ಲಿ ಬೆಂಕಿ ಕಾಣಿಸಿದೆ. ವಿಷಯ ತಿಳಿಸಿದ್ದರೂ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ತಡವಾಗಿ ಆಗಮಿಸಿದ್ದಕ್ಕೆ ಸ್ಥಳೀಯರು ಇಲಾಖೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ಹೊರಬೀಳುತ್ತಿದ್ದಂತೆಯೇ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳಿಯರಿಂದ ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ.

  • ಚಿಕ್ಕಮಗಳೂರು: ಕಾಂಗ್ರೆಸ್‍ನಲ್ಲಿ ಭಿನ್ನಮತ, 6 ಪದಾಧಿಕಾರಿಗಳ ರಾಜೀನಾಮೆ

    ಚಿಕ್ಕಮಗಳೂರು: ಕಾಂಗ್ರೆಸ್‍ನಲ್ಲಿ ಭಿನ್ನಮತ, 6 ಪದಾಧಿಕಾರಿಗಳ ರಾಜೀನಾಮೆ

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರ ಉಸ್ತುವಾರಿ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಭಿನ್ನಮತ ಎದ್ದಿದ್ದು, 6 ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.

    ಮಾಜಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಧೋರಣೆಯನ್ನ ವಿರೋಧಿಸಿ ಲೋಕಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕೌಶಿಕ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಸೇರಿ ಆರು ಮಂದಿ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

    ಗೃಹ ಸಚಿವರಿಗೆ ಗೊತ್ತಿಲ್ಲದ್ದಂತೆ ಸಿಡಿಎ ಅಧ್ಯಕ್ಷ ಸ್ಥಾನವನ್ನು ಗಾಯತ್ರಿ ಶಾಂತೇಗೌಡ ಸಿಎಂ ಬಳಿ ಮಾಡಿಸಿಕೊಂಡು ಬಂದಿದ್ದಾರೆ. ಅಲ್ಲದೆ ನಗರಸಭೆಯ ನಾಲ್ವರು ನಾಮನಿರ್ದೇಶಕ ಸ್ಥಾನಕ್ಕೂ ತಮ್ಮ ಹಿಂಬಾಲಕರನ್ನೇ ನೇಮಿಸಿದ್ದಾರೆ. ಉಸ್ತುವಾರಿ ಸಚಿವರನ್ನೂ ಮೀರಿ ತಮ್ಮಿಚ್ಚೆಯಂತೆ ಗಾಯತ್ರಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ರಾಜೀನಾಮೆ ನೀಡಿದ್ದಾರೆ.

     

  • ಸಾಕು ತಂದೆಯಿಂದಲೇ ಅತ್ಯಾಚಾರ- ತಂದೆಯ ಕೃತ್ಯಕ್ಕೆ ಗರ್ಭಿಣಿಯಾದ ಬಾಲಕಿ

    ಚಿಕ್ಕಮಗಳೂರು: ಸಾಕು ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗಳನ್ನ ಗರ್ಭಿಣಿ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಮಕ್ಕಳಿಲ್ಲದ ಕಾರಣ ಹೆಣ್ಣು ಮಗುವೊಂದನ್ನ ದತ್ತು ತೆಗೆದುಕೊಂಡು ಸಾಕಿದ್ದ 59 ವರ್ಷದ ಕೃಷ್ಣಪ್ಪ ತಾನೇ ಎತ್ತಿ, ಮುದ್ದಾಡಿ ಬೆಳೆಸಿದ್ದ ಏಳನೇ ತರಗತಿ ಓದುತ್ತಿರೋ ಮಗಳನ್ನ ನಿರಂತರವಾಗಿ ಲೈಂಗಿಕ ತೃಪ್ತಿಗೆ ಬಳಸಿಕೊಂಡಿದ್ದ. ಆ ಬಾಲಕಿ ಈಗ ಮೂರು ತಿಂಗಳ ಗರ್ಭೀಣಿ. ಕೃಷ್ಣಪ್ಪ ಬಾಲಕಿಗೆ ಕೆಲ ನಾಟಿ ಔಷಧಿಗಳನ್ನು ಕೊಡಿಸಿದ್ದ ಎಂದು ಹೇಳಲಾಗ್ತಿದೆ.

    ಇದೀಗ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರೋ ಕೊಪ್ಪ ತಾಲೂಕಿನ ಜೈಪುರ ಪೊಲೀಸರು ಆರೋಪಿ ಕೃಷ್ಣಪ್ಪನನ್ನ ಬಂಧಿಸಿದ್ದಾರೆ. ಸಂತ್ರಸ್ಥ ಬಾಲಕಿಗೆ ಕೊಪ್ಪದ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.