Tag: Chikkamagaluru

  • ಅಪ್ರಾಪ್ತೆಯ ಮೇಲೆ ಐವರಿಂದ ಗ್ಯಾಂಗ್‍ರೇಪ್- ವಿಡಿಯೋ ಮಾಡಿ 2000 ರೂ.ಗೆ ಬ್ಲಾಕ್‍ಮೇಲ್

    ಅಪ್ರಾಪ್ತೆಯ ಮೇಲೆ ಐವರಿಂದ ಗ್ಯಾಂಗ್‍ರೇಪ್- ವಿಡಿಯೋ ಮಾಡಿ 2000 ರೂ.ಗೆ ಬ್ಲಾಕ್‍ಮೇಲ್

    ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಮೇಲೆ ಐವರು ಯುವಕರು ಸೇರಿಕೊಂಡು ಅತ್ಯಾಚಾರ ಮಾಡಿರುವ ಘಟನೆ ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚಂದನ್(19), ಮನು(18), ದರ್ಶನ್(19) ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿಯನ್ನು ಫೋನ್ ಕೊಡುವ ಮೂಲಕ ಪುಸಲಾಯಿಸಿಕೊಂಡು ನಗರದ ರತ್ನಗಿರಿ ಬಡಾವಣೆಯಲ್ಲಿರುವ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿ ರೇಪ್ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಅತ್ಯಾಚಾರ ಮಾಡಿದ್ದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

    ಕಾಮುಕರಿಂದ ತಪ್ಪಿಸಿಕೊಂಡ ಬಾಲಕಿ ಮರ್ಯಾದೆಗೆ ಅಂಜಿ ಮನೆಯಲ್ಲಿ ಯಾರಿಗೂ ಈ ವಿಷಯವನ್ನ ಹೇಳಿರಲಿಲ್ಲ. ಮಾರನೇ ದಿನ ಅಪ್ರಾಪ್ತ ಬಾಲಕರಿಬ್ಬರು 2000 ರೂ. ಹಣ ಕೊಡು. ಇಲ್ಲವಾದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‍ಲೋಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    ಇದೇ ಬೆದರಿಕೆಯೊನ್ನೊಡ್ಡಿ ಬಾಲಕಿಯನ್ನು ಕರೆಸಿಕೊಂಡ ಅಪ್ರಾಪ್ತ ಬಾಲಕರು ಎರಡನೇ ಬಾರಿ ಅತ್ಯಾಚಾರ ಮಾಡಿದ್ದಾರೆ. ಎರಡನೇ ಬಾರಿಯೂ ಅತ್ಯಾಚಾರದ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಕೊನೆಗೆ ಬಾಲಕಿ ವಿಷಯವನ್ನು ಪೋಷಕರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಚೆನ್ನಾಗಿದ್ರೂ ಏಡ್ಸ್ ಬಂದಿದೆ ಅಂತಾನೆ, ನರ್ಸ್ ಗೆ ಬಿಪಿ ಚೆಕ್ ಮಾಡ್ಬೇಕು ಏಪ್ರಾನ್ ಬಿಚ್ಚು ಅಂತಾನೆ- ಚಿಕ್ಕಮಗಳೂರಲ್ಲಿ ಮೆಂಟಲ್ ಡಾಕ್ಟರ್

    ಚೆನ್ನಾಗಿದ್ರೂ ಏಡ್ಸ್ ಬಂದಿದೆ ಅಂತಾನೆ, ನರ್ಸ್ ಗೆ ಬಿಪಿ ಚೆಕ್ ಮಾಡ್ಬೇಕು ಏಪ್ರಾನ್ ಬಿಚ್ಚು ಅಂತಾನೆ- ಚಿಕ್ಕಮಗಳೂರಲ್ಲಿ ಮೆಂಟಲ್ ಡಾಕ್ಟರ್

    ಚಿಕ್ಕಮಗಳೂರು: ರಕ್ತ ಟೆಸ್ಟ್ ಮಾಡ್ತೀನಿ ಅಂತ ಸೂಜಿಯಲ್ಲಿ ಮುಖಕ್ಕೆ ಚುಚ್ತಾನೆ. ನಿಮಗೆ ಏಡ್ಸ್ ಇದೆ ಅಂತಾನೆ. ನರ್ಸ್‍ಗೆ ನಿನ್ನ ಏಪ್ರಾನ್ ಬಿಚ್ಚು, ಬಿಪಿ ಟೆಸ್ಟ್ ಮಾಡ್ಬೇಕು ಅಂತಾ ಎಳೆದಾಡ್ತಾನೆ. ರಾತ್ರಿ ಆಸ್ಪತ್ರೆಗೆ ಬರೋ ರೋಗಿಗಳಿಂದ ಒಂದೊಂದು ಬಾಟಲಿ ರಕ್ತ ತೆಗೆದುಕೊಳ್ಳಿ ಎಂದು ಶೂಶ್ರುಕಿಯರಿಗೆ ಸೂಚಿಸ್ತಾನೆ. ಹೌದು ಚಿಕ್ಕಮಗಳೂರನಲ್ಲಿ ಇಂತಹ ಮೆಂಟಲ್ ಡಾಕ್ಟರ್‍ವೊಬ್ಬ ಇದ್ದಾನೆ.

    ಆತನ ಹೆಸರು ವೀರೇಶ್ ವೈ ನರೇಗಲ್. ಎಂಬಿಬಿಎಸ್, ಡಿ ಆರ್ಥೋ ಅಂಡ್ ಎಂಎಸ್ ಆರ್ಥೋ ಓದಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್. 35 ವರ್ಷ ಸರ್ವೀಸ್ ಇರೋ ಈತ ಇಲ್ಲಿಗೆ ಬಂದು ವರ್ಷವಾಗಿದೆ. ಸುಸ್ತು, ಜ್ವರ ಅಂತ ಆಸ್ಪತ್ರೆಗೆ ಬಂದ ರೋಗಿಗೆ ಯಾವುದೇ ರೀತಿಯ ಬ್ಲಡ್ ಟೆಸ್ಟ್ ಮಾಡ್ದೆ ನಿನಗೆ ಏಡ್ಸ್ ಇದೆ. ಬೆಂಗಳೂರು ಅಥವಾ ಮಂಗಳೂರಿಗೆ ಹೋಗಿ ಅಂತ ರೆಫರ್ ಮಾಡಿದ್ದಾನೆ. ಹೀಗಾಗಿ ರೋಗಿ ಭಯ ಬಿದ್ದು ಬ್ಲಡ್ ಟೆಸ್ಟ್ ಮಾಡಿಸಿದ್ರೆ ಯಾವ ಏಡ್ಸ್ ಕೂಡ ಇರಲಿಲ್ಲ.

    ಇನ್ನೊಂದು ಕೇಸ್ ನೋಡೋದಾದ್ರೆ ಕಾಲು ನೋವು ಅಂತಾ ವಯೋವೃದ್ಧೆಯೊಬ್ಬರು ಬಂದ್ರೆ ರಕ್ತ ಟೆಸ್ಟ್ ಮಾಡ್ತೀನಿ ಅಂತಾ ಸೂಜಿ ತಗೊಂಡು ಮೂಗು, ಮುಖ, ಹಣೆಗೆಲ್ಲಾ ರಕ್ತ ಬರುವಂತೆ ಚುಚ್ಚಿದ್ದಾನೆ. ಡ್ಯೂಟಿ ಮಾಡ್ತಿದ್ದ ಸಿಸ್ಟರ್ ಬಳಿ ಬಂದು ನಿನ್ನ ಏಪ್ರೋನ್ ಬಿಚ್ಚು, ನಿನಗೆ ಬಿಪಿ ಚೆಕ್ ಮಾಡ್ಬೇಕು ಅಂತ ಹಿಂಸೆ ನೀಡಿದ್ದಾನೆ.

    ಈ ಡಾಕ್ಟರ್‍ನ ಇನ್ನಷ್ಟು ಪುರಾಣ ನೋಡೋದಾದ್ರೆ, ಹೆರಿಗೆಯಾದ ಮಹಿಳೆಗೆ ಯಾವ್ಯಾವುದೋ ಔಷಧಿ ಕೊಡ್ತಾನೆ. ನೈಟ್ ಡ್ಯೂಟಿ ಮಾಡೋ ಡಿ ದರ್ಜೆ ನೌಕರರ ಮೇಲೆ ಕಾರಣವಿಲ್ಲದೆ ಕಂಪ್ಲೆಂಟ್ ಕೊಡ್ತಾನೆ. ಹೀಗಾಗಿ ಡಾಕ್ಟರ್ ಮೇಲೆ ನರ್ಸ್‍ಗಳೇ ದೂರು ನೀಡಿದ್ದಾರೆ.

    ಒಟ್ನಲ್ಲಿ ಈ ವೈದ್ಯನ ಹುಚ್ಚಾಟಕ್ಕೆ ಆಸ್ಪತ್ರೆಯ ಸಿಬ್ಬಂದಿಗಳೇ ಬೆಚ್ಚಿ ಬಿದ್ದಿದ್ದಾರೆ.

     

  • ವಿದ್ಯಾರ್ಥಿನಿಯ ಮೈ,ಕೈ ಮುಟ್ತಾನೆ-ತಾನೇ ದುಡ್ಡು ಕೊಟ್ಟು ಟೂರ್‍ಗೆ ಕರ್ಕೊಂಡು ಹೋಗ್ತಾನೆ

    ವಿದ್ಯಾರ್ಥಿನಿಯ ಮೈ,ಕೈ ಮುಟ್ತಾನೆ-ತಾನೇ ದುಡ್ಡು ಕೊಟ್ಟು ಟೂರ್‍ಗೆ ಕರ್ಕೊಂಡು ಹೋಗ್ತಾನೆ

    – ಎಸ್‍ಪಿ ಕಚೇರಿಗೆ ಬಂತು ಅನಾಮಧೇಯ ಪತ್ರ

    ಚಿಕ್ಕಮಗಳೂರು: ಟ್ಯೂಷನ್ ಕೊಡ್ತೀನಿ ಅಂತ ಮನೆಗೆ ಕರೆದ, ಮನೇಗೆ ಹೋದ್ಮೇಲೆ ಮೈಮೇಲೆ ಕೈ ಹಾಕ್ದ. ಸರ್, ನೀವ್ ನಮ್ಮ ಗುರುಗಳು ಅಂದಿದ್ಕೆ ನಿಮ್ಗೆ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಬರುವಂತೆ ಮಾಡ್ತೀನಿ ಎಂದ. ಟೂರ್‍ಗೆಂದು ಕೇರಳಕ್ಕೆ ಕರೆದ್ಕೊಂಡ ಹೋಗಿದ್ದ. ಹೆಣ್ಮಕ್ಕಳು ಡ್ರೆಸ್ ಚೇಂಜ್ ಮಾಡುವಾಗ ಕ್ಯಾಮರಾ ಹಿಡಿದು ಒಳಗೇ ಬಂದ. ಇದು ಚಿಕ್ಕಮಗಳೂರಿನ ಪೋಲಿ ಮೇಷ್ಟ್ರ ಸ್ಟೋರಿ.

    ಹೌದು. ಚಿಕ್ಕಮಗಳೂರಿನ ವಿಶ್ವವಿದ್ಯಾಲಯ ಪ್ರೌಢಶಾಲೆಯ ಗಣಿತ ಶಿಕ್ಷಕ ಲೋಕೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಶತಮಾನದ ಇತಿಹಾಸವಿರುವ ಈ ಶಾಲೆಯ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರೇ ಬರೆದ್ರೋ ಅಥವಾ ಶಿಕ್ಷಕರೇ ಬರೆದ್ರೋ ಗೊತ್ತಿಲ್ಲ. ಆದರೆ ಎಸ್ಪಿ ಕಚೇರಿಗೆ ಬಂದ ಅನಾಮಧೇಯ ದೂರಿನನ್ವಯ ವಿಚಾರಣೆ ನಡೆಸಿದಾಗ ಈ ಶಿಕ್ಷಕನ ಕಾಮಪುರಾಣ ಬಯಲಾಗಿದೆ.

    ಲೋಕೇಶ್ 6 ವಿದ್ಯಾರ್ಥಿನಿಯರನ್ನ ಮನೆಗೆ ಕರೆಸಿಕೊಂಡಿದ್ದನು. ನಿಮಗೆ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಬರುವಂತೆ ಮಾಡ್ತೀನಿ ಎಂದು ಮೈ-ಕೈ ಮುಟ್ಟುತ್ತಿದ್ದನು. ವಿದ್ಯಾರ್ಥಿನಿಯರ ಶಾಲೆ, ಟೂರ್ ಫೀಸ್‍ನ ಇವನೇ ಕಟ್ಟಿ ಕರೆದುಕೊಂಡು ಹೋಗುತ್ತಿದ್ದ. ಅಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಶಿಕ್ಷಕನ ಈ ಪುಂಡಾಟವನ್ನ ವಿದ್ಯಾರ್ಥಿನಿಯರು ಹೆಡ್ ಮಾಸ್ಟರ್ ಗಮನಕ್ಕೆ ತಂದ್ರೂ ಅವ್ರು ನಕ್ಕು ಸುಮ್ಮನಾಗುತ್ತಿದ್ದರು ಎಂದು ಹೆಣ್ಮಕ್ಕಳು ಪೊಲೀಸರ ತನಿಖೆ ವೇಳೆ ಹೇಳಿದ್ದಾರೆ. ಈಗ ಶಾಲೆಯ ಹೆಡ್ ಮಾಸ್ಟರ್ ಶ್ರೀನಿವಾಸ್, ಹೌದು, ಶಿಕ್ಷಕ ಲೋಕೇಶ್ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಾರೆ.

    ವಿದ್ಯಾರ್ಥಿನಿಯರನ್ನ ಟೂರ್‍ಗೆ ಕರೆದುಕೊಂಡು ಹೋಗಿ ಮೈಮೇಲೆ ಕೈ ಹಾಕಿದ್ದಾನೆ. ಅವರು ಬಟ್ಟೆ ಚೇಂಜ್ ಮಾಡುವಾಗ ಕ್ಯಾಮರಾ ಹಿಡಿದು ಹೇಳದೆ-ಕೇಳದೆ ರೂಂಗೆ ನುಗ್ಗಿದ್ದಾನೆ. ವಿಜ್ಞಾನ ವಸ್ತು ಪ್ರದರ್ಶನಕ್ಕೆಂದು ಧಾರವಾಡಕ್ಕೆ ಹೋದಾಗ ಒಬ್ಬಳೇ ವಿದ್ಯಾರ್ಥಿಯನ್ನ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಇಷ್ಟೆಲ್ಲಾ ಮಾಡಿದ ಕಾಮುಕ ಟೀಚರ್ ನಮಗೆ ಬೇಡ. ಇವನು ಇಲ್ಲೇ ಇದ್ರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಸ್ಪಿ ಕಚೇರಿಗೆ ಅನಾಮಧೇಯ ಪತ್ರ ಬಂದಿದೆ.

  • ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ಚಿಕ್ಕಮಗಳೂರು: ತಮಟೆ ಬಾರಿಸಿದ್ದೇನು, ಡ್ಯಾನ್ಸ್ ಮಾಡಿದ್ದೇನು. ನೆಲದ ಮೇಲೆ ಮಲಗಿ ಪೋಸ್ ಕೊಟ್ಟಿದ್ದೇನು. ಅಬ್ಬಬ್ಬಾ ನಮ್ಮ ಸಮಾಜ ಕಲ್ಯಾಣ ಸಚಿವರ ಹಾಡಿ ವಾಸ್ತವ್ಯ ನೋಡೋಕೆ ಎರಡು ಕಣ್ಣು ಸಾಲದಾಗಿತ್ತು. ಇವರು ಬಂದಾಗ ನಮ್ಮ ಸಮಸ್ಯೆ ದೂರವಾಗುತ್ತೆ ಅಂತ ಜನ ಕನಸು ಕಂಡಿದ್ರು. ಆದ್ರೆ ಆಗಿದ್ದೇ ಬೇರೆ. ಊರು ಉದ್ದಾರ ಆಗ್ಲಿಲ್ಲ. ಸಚಿವ ಆಂಜನೇಯ ಬರುವಾಗ ಹಾಕಿದ್ದ ರಸ್ತೆ, ಲೈಟ್ ಉಳಿದಿದ್ದು ಎರಡೇ ದಿನ.

    ಇಷ್ಟೇ ಆಗಿದ್ರೆ ಈ ರಾಜಕಾರಣಿಗಳ ಹಣೆಬರಹನೇ ಇಷ್ಟು ಅನ್ಕೊಂಡು ಸುಮ್ಮನಿರಬಹುದಿತ್ತು. ಆದ್ರೆ ಈ ಒಂದು ರಾತ್ರಿಯ ವಾಸ್ತವ್ಯಕ್ಕೆ ಖರ್ಚು ಮಾಡಿದ್ದು ಬರೋಬ್ಬರಿ ಮೂರು ಲಕ್ಷ.

    ಹೌದು. ಬೋಗಸ್ ಬಿಲ್ ಮಾಡಿ ಸಚಿವರ ಹೆಸರಲ್ಲಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಭ್ರಷ್ಟರು. ಅವರ ಬಿಲ್‍ನಲ್ಲಿ ಯಾವುದಕ್ಕೆ ಎಷ್ಟೆಲ್ಲಾ ಖರ್ಚಾಗಿದೆ ಅಂತಾ ನೋಡೋದಾದ್ರೆ: ಕುಡಿಯೋ ನೀರಿಗೆ 4,800 ರೂಪಾಯಿ, ಪ್ಲಾಸ್ಟಿಕ್ ಗ್ಲಾಸ್‍ಗೆ 4,400 ರೂಪಾಯಿ, ಫ್ಲೆಕ್ಸ್‍ಗೆ 56,000 ರೂಪಾಯಿ, ಊಟ-ತಿಂಡಿಗೆ 1.20 ಲಕ್ಷ ರೂಪಾಯಿ, ಶಾಮಿಯಾನ ಹಾಗೂ ಲೈಟಿಂಗ್ಸ್‍ಗೆ 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ.

    ರಸ್ತೆ, ಅಂಗನವಾಡಿ, ಸಮುದಾಯ ಭವನ ಎಲ್ಲವೂ ಆಗ್ಬೇಕಿತ್ತು. ಆದ್ರೆ ಯಾವುದೂ ಮಾಡಿಕೊಟ್ಟಿಲ್ಲ. ಇಲ್ಲಿ ಬಂದು ಹೋಗಿ ಆಶ್ವಾಸನೆ ಕೊಟ್ಟಿದ್ದು ಯಾವುದೂ ಆಗಿಲ್ಲ. 3 ಸ್ಟ್ರೀಟ್ ಲೈಟ್, 2 ಹೋಮ್ ಲೈಟ್ ಹಾಕಿದ್ರು. ಎರಡು ತಿಂಗಳು ಉರಿಯಿತು. ಆಮೇಲೆ ಯಾವುದೂ ಉರೀತಿಲ್ಲ ಎಂದು ಸ್ಥಳೀಯರಾದ ಮಹೇಶ್ ಹೇಳಿದ್ದಾರೆ.

    ಮನೆ ಮಾಡಿಕೊಡ್ತೀನಿ ಎಂದು ಹೇಳಿದ್ರು. 32 ಮನೆ ಕೊಡ್ತೀವಿ ಎಂದಿದ್ರು. ಯಾರಿಗೂ ಮನೆ ಕೊಟ್ಟಿಲ್ಲ. ನಿಮ್ಮಲ್ಲಿ ಯಾರಾದ್ರೂ ಅಂಗನವಾಡಿ ಟೀಚರ್ ಆಗ್ಬೇಕು ಎಂದಿದ್ರು. ಟೀಚರ್ ಬಿಡಿ, ಮಕ್ಕಳಿಗೆ ಅಂಗನವಾಡಿ ಮಾಡಿಕೊಟ್ಟಿದ್ರೆ ಎಷ್ಟೋ ಸಹಾಯವಾಗ್ತಿತ್ತು ಅಂತ ಮತ್ತೊಬ್ಬ ಸ್ಥಳೀಯರು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    ಒಟ್ನಲ್ಲಿ ಸಚಿವರು ಗ್ರಾಮವಾಸ್ತವ್ಯದ ವೇಳೆ ಕ್ಯಾಮೆರಾ ಮುಂದೆ ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಬುರುಡೆ ಬಿಟ್ರೆ, ಅಧಿಕಾರಿಗಳು ಸಚಿವರ ಹೆಸರಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕಿದ್ದಾರೆ. ಇದನ್ನೆಲ್ಲಾ ನೋಡಿ ಹಾಡಿ ಜನ ತಲೆ ಚಚ್ಚಿಕೊಳ್ತಿದ್ದಾರೆ.

  • ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!

    ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!

    ಚಿಕ್ಕಮಗಳೂರು: ಈ ಹಿಂದೆ ಕಬಡ್ಡಿ, ವಾಲಿಬಾಲ್ ಆಡುವ ಮೂಲಕ ಜನರನ್ನು ಮನರಂಜಿಸಿದ್ದ ಶಾಸಕ ಸಿ.ಟಿ ರವಿ, ಇದೀಗ ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ತಾಗಿ ಸ್ಟೆಪ್ ಹಾಕೋ ಮೂಲಕ ಡ್ಯಾನ್ಸ್ ಗೂ ಸೈ ಎಂದಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಗಾಳಿಪೂಜೆಯಲ್ಲಿ ಶನಿವಾರ ಗ್ರಾಮ ವಾಸ್ತವ್ಯದ ವೇಳೆ ಗ್ರಾಮಸ್ಥರೊಂದಿಗೆ ವೇದಿಕೆ ಮೇಲೆಯೇರಿ ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಬಳಿಕ ಸಿಟಿ ರವಿ ವೇದಿಕೆಯೇರಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಬೂಲನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಸಿ ಟಿ ರವಿ ಅವರು ಗ್ರಾಮ ಸಭೆಯ ಬಳಿಕ ಚಡ್ಡಿ ಹಾಗೂ ಟೀ ಶರ್ಟ್ ತೊಟ್ಟು ಸ್ಥಳೀಯ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು.

    ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ-ಫೋಟೋಗಳಲ್ಲಿ ನೋಡಿ

    ಕ್ರೀಡಾಂಗಣಕ್ಕಿಳಿದ ಬಳಿಕ ಪ್ರೋಫೆಷನಲ್ ಆಟಗಾರನಂತೆ ಮೈದಾನದಲ್ಲಿದ್ದ ಕಲ್ಲುಗಳನ್ನ ಆಯ್ದು ಗ್ರೌಂಡ್ ಗೆ ನಮಸ್ಕರಿಸಿ ಕೋರ್ಟ್ ಒಳಗೆ ಪ್ರವೇಶಿಸಿದ್ದರು. ಶಾಸಕರು ಕಬಡ್ಡಿ ಆಡುವುದನ್ನು ನೋಡಲು ಗ್ರಾಮದ ಜನರೆಲ್ಲಾ ಆಸೀನರಾಗಿದ್ದರು. ಮಹಿಳೆಯರು ಕೂಡ ಮಕ್ಕಳ ಸಮೇತ ಗ್ರೌಂಡ್ ಸುತ್ತಲೂ ಕಿಕ್ಕಿರಿದು ಸೇರಿದ್ರು. ಶಾಸಕ ರವಿ ರೈಡ್ ಗೆ ಇಳಿಯುತ್ತಿದ್ದಂತೆ ಕೂಗುತ್ತಾ ಬೆಂಬಲಿಸಿದ್ದರು. ನಾನು ವಿಧಾನಸೌಧದ ಶಾಸಕನಲ್ಲ, ಜನಸಾಮಾನ್ಯರ ಶಾಸಕ ಎಂದು ಹೇಳ್ತಿದ್ದ ರವಿ ಅದೇ ರೀತಿ ನಡೆದುಕೊಂಡ್ರು ಅಂತ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದರು.

    ಕಬಡ್ಡಿಯ ಬಳಿಕ ಗ್ರಾಮೀಣ ಕ್ರೀಡಾಕೂಟವಾದ ಹಗ್ಗಜಗ್ಗಾಟದಲ್ಲೂ ಭಾಗವಹಿಸಿ, ವಾಲಿಬಾಲ್ ಆಡುವ ಮೂಲಕ ಎಲ್ಲರ ಮನರಂಜಿಸಿದ್ದರು.

  • ಹಾಲು ಕುಡಿಯುತ್ತೆ, ಜನರೊಂದಿಗೆ ಆಟವಾಡುತ್ತೆ- ಕಾಡು ಬಿಟ್ಟು ಆಂಜನೇಯ ದೇವಸ್ಥಾನದಲ್ಲೇ ವಾಸವಾದ ನರಿ!

    ಹಾಲು ಕುಡಿಯುತ್ತೆ, ಜನರೊಂದಿಗೆ ಆಟವಾಡುತ್ತೆ- ಕಾಡು ಬಿಟ್ಟು ಆಂಜನೇಯ ದೇವಸ್ಥಾನದಲ್ಲೇ ವಾಸವಾದ ನರಿ!

    ಚಿಕ್ಕಮಗಳೂರು: ಅದೊಂದು ಕ್ರೂರ ಪ್ರಾಣಿ. ಏಕಾಏಕಿ ದಾಳಿ ಮಾಡೋದು ಅದರ ಚಾಳಿ. ರಾತ್ರಿಯಲ್ಲಷ್ಟೆ ಸಂಚರಿಸೋ ಅದು ಸಾಮಾನ್ಯವಾಗಿ ಹಗಲಲ್ಲಿ ಯಾರ ಕಣ್ಣಿಗೂ ಹೆಚ್ಚಾಗಿ ಕಾಣಲ್ಲ. ಆದ್ರೆ ಅಂತಹ ಪ್ರಾಣಿ ಇಲ್ಲಿ ಆಂಜನೇಯನ ಪರಮಭಕ್ತನಾಗಿದೆ. ಮೂರ್ ಹೊತ್ತು ಊಟ ಮಾಡ್ಕೊಂಡ್ ಅಲ್ಲೇ ವಾಸವಿದೆ. ಶನಿವಾರ ಬಂತೆಂದ್ರೆ ಆಂಜನೇಯನನ್ನ ಬಿಟ್ಟು ಕದಲೋದಿಲ್ಲ.

    ಹೀಗೆ ನಿಂತಲ್ಲಿ ನಿಲ್ಲದೆ, ಕಾಲಿಗೆ ಚಕ್ರ ಕಟ್ಕೊಂಡಂತೆ ಓಡಾಡ್ತಿರೋ ಇದನ್ನ ನೋಡಿ. ಹ್ಹೇ….ನಾಯಿ ಅನ್ಕೋಬೇಡಿ, ಇದು ನರಿ. ತುಂಬಾನೇ ಸೂಕ್ಷ್ಮ ಹಾಗೂ ಡೆಂಜರಸ್ ಪ್ರಾಣಿ. ಕೇವಲ ಅರಣ್ಯದಲ್ಲಷ್ಟೇ ಇರುತ್ತೆ. ಆದ್ರೆ ದಾರಿ ತಪ್ಪಿ ಅಮ್ಮನಿಂದ ಬೇರಾದ ಈ ನರಿಮರಿ, ನಾಡಲ್ಲೇ ಸೆಟ್ಲ್ ಆಗಿದೆ.

    ಇದು ಸೆಟ್ಲ್ ಆಗಿರೊದು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಮಲ್ಲೇಶ್ವರ ಗ್ರಾಮದಲ್ಲಿ. ಇಲ್ಲಿನ ಆಂಜನೇಯ ದೇವಾಲಯದ ಆವರಣವನ್ನ ಬಿಟ್ಟು ಎಲ್ಲೂ ಹೋಗದ ನರಿಮರಿ, ಚಿಕ್ಕ ನಾಯಿಗಳು ಬಂದ್ರೆ ಹೆದರಿ ಓಡಿಸುತ್ತೆ, ದೊಡ್ಡವು ಬಂದ್ರೆ ಓಡಿಹೋಗುತ್ತೆ. ಸ್ಥಳೀಯರು ಕೊಡೋ ಹಾಲು, ಬಿಸ್ಕೆಟ್, ತೆಂಗಿನಕಾಯಿಯನ್ನ ತಿನ್ಕೊಂಡು ಕಳೆದ ಎರಡು ತಿಂಗಳಿನಿಂದ ಇಲ್ಲೇ ಇದೆ. ನರಿಯ ಈ ಜೀವನಶೈಲಿಯನ್ನ ಕಂಡ ಸ್ಥಳೀಯರು ನರಿ ಹೀಗೆಲ್ಲಾ ಇರೋ ಪ್ರಾಣಿಯಲ್ಲ, ಕಲಿಗಾಲ ಏನ್ ಬೇಕಾದ್ರು ಆಗ್ಬೋದು ಅಂತಿದ್ದಾರೆ.

    ದೇಗುಲದ ಹಿಂದಿನ ಕಲ್ಲಿನ ಗುಡ್ಡದಲ್ಲಿ ನರಿಮರಿ ವಾಸ ಮಾಡುತ್ತೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹಾಲು ಕರೆಯೋ ವೇಳೆಗೆ ಪಕ್ಕದಲ್ಲೇ ಇರೋ ಮನೆಗೆ ಬರುತ್ತೆ. ಹಾಲು ಕುಡಿದು ಮತ್ತೆ ದೇವಾಲಯದ ಆವರಣಕ್ಕೆ ಹೋಗುತ್ತೆ. ದೇವಾಲಯಕ್ಕೆ ಬರೋ ಭಕ್ತರ ಕೈ ನೆಕ್ಕುತ್ತಾ, ಕಾಲು ಮೂಸೂತ್ತಾ ಆಟವಾಡುತ್ತೆ.

    ನರಿಯನ್ನು ಅದೃಷ್ಟದ ಪ್ರಾಣಿ ಅಂತಾ ಭಾವಿಸಲಾಗಿದೆ. ಬೆಳಗೆದ್ದು ನರಿ ಮುಖ ನೋಡಿದ್ರೆ ಅದೃಷ್ಟ ಖುಲಾಯಿಸುತ್ತೆ ಅಂತಾರೆ. ಅದಕ್ಕೆ ಏನೋ, ನರಿ ನೋಡಲು ದೇಗುಲಕ್ಕೆ ಜನ ಸಾಗರವೇ ಬರ್ತಿದೆ.

  • ಮೇವಿಲ್ಲದೇ ಎರಡೇ ದಿನದಲ್ಲಿ 9 ಕರುಗಳ ಸಾವು

    ಮೇವಿಲ್ಲದೇ ಎರಡೇ ದಿನದಲ್ಲಿ 9 ಕರುಗಳ ಸಾವು

    ಚಿಕ್ಕಮಗಳೂರು: ತಿನ್ನೋಕೆ ಮೇವು ಇಲ್ಲದೆ ಎರಡೇ ದಿನದಲ್ಲಿ 9 ಕರುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ರವಿವಾರ ಐದು ಹಾಗೂ ಇಂದು ನಾಲ್ಕು ಕರುಗಳು ಹಸಿವಿನ ಬೇಗೆಯಿಂದ ಪ್ರಾಣಬಿಟ್ಟಿವೆ. ಕಡೂರು ತಾಲೂಕು ಎರಡು ದಶಕಗಳಿಂದ ಶಾಶ್ವತ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿನ ಜನ-ಜಾನುವಾರುಗಳು ನೀರು, ಮೇವಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ.

    ಗೋಶಾಲೆ ತೆರೆಯಿರಿ ಎಂದು ಎಷ್ಟೇ ಬಾರಿ ಅಂಗಲಾಚಿದ್ದರೂ ಜಿಲ್ಲಾಡಳಿತ ಎನ್.ಜಿ.ಓ ಗಾಗಿ ಕಾದು ಕೂತಿರೋದು ಜಾನುವಾರುಗಳ ಮಾರಣಹೋಮಕ್ಕೆ ಕಾರಣವಾಗಿದೆ. ಈಗಾಗಲೇ ಪಂಚನಹಳ್ಳಿಯಲ್ಲಿ ಒಂದು ಗೋಶಾಲೆ ತೆರೆದಿರೋ ಜಿಲ್ಲಾಡಳಿತ ಅದನ್ನೂ ಮುಚ್ಚೋಕೆ ಮುಂದಾಗಿದ್ರು. ಆದ್ರೆ ಸ್ಥಳೀಯರ ಹೋರಾಟದಿಂದ ಮತ್ತೆ ಮುಂದುವರೆಯುತ್ತಿದೆ.

    ಇನ್ನೆರಡು ಗೋಶಾಲೆ ತೆರೆಯೋದಕ್ಕೆ ಅವಕಾಶವಿದ್ರೂ ಜಿಲ್ಲಾಡಳಿತ ಮೀನಾಮೇಷ ಏಣಿಸ್ತಿರೋದು ಕರುಗಳ ಮಾರಣಹೋಮಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

    ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

    ಚಿಕ್ಕಮಗಳೂರು: ಬಿಜೆಪಿ ಮುಖಂಡ, ಶಾಸಕ ಸಿ.ಟಿ.ರವಿ ಒಳ್ಳೆ ಕಬಡ್ಡಿ ಆಟಗಾರ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಅವರ ಕಬಡ್ಡಿ ಆಟವನ್ನ ನೋಡ್ದೋರು ತುಂಬಾ ವಿರಳ. ಆದ್ರೆ, ಇಂದು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಬೂಲನಹಳ್ಳಿ ತಾಂಡ್ಯದ ಜನರಿಗೆ ಅದನ್ನ ನೋಡೋ ಭಾಗ್ಯ ಸಿಕ್ತು.

    ಇಂದು ಬೂಲನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಸಿ.ಟಿ.ರವಿ ಗ್ರಾಮ ಸಭೆಯ ಬಳಿಕ ಚೆಡ್ಡಿ ಹಾಗೂ ಟೀ ಶರ್ಟ್ ತೊಟ್ಟು ಸ್ಥಳಿಯ ಯುವಕರೊಂದಿಗೆ ಕಬಡ್ಡಿ ಆಡಿ ತಮ್ಮ ಹಳೆಯ ದಿನಗಳನ್ನ ನೆನಪಿಸಿಕೊಂಡ್ರು.

    ಕ್ರೀಡಾಂಗಣಕ್ಕಿಳಿದ ಬಳಿಕ ಪ್ರೋಫೆಷನಲ್ ಆಟಗಾರನಂತೆ ಮೈದಾನದಲ್ಲಿದ್ದ ಕಲ್ಲುಗಳನ್ನ ಆಯ್ದು ಗ್ರೌಂಡ್ ಗೆ ನಮಸ್ಕರಿಸಿ ಕೋರ್ಟ್ ಒಳಗೆ ಪ್ರವೇಶಿಸಿದ್ರು. ಶಾಸಕ ರವಿ ಕಬಡ್ಡಿ ಆಡುವುದನ್ನು ನೋಡಲು ಗ್ರಾಮದ ಜನರೆಲ್ಲಾ ಆಸೀನರಾಗಿದ್ರು. ಮಹಿಳೆಯರು ಕೂಡ ಮಕ್ಕಳ ಸಮೇತ ಗ್ರೌಂಡ್ ಸುತ್ತಲೂ ಕಿಕ್ಕಿರಿದು ಸೇರಿದ್ರು. ಶಾಸಕ ರವಿ ರೈಡ್ ಗೆ ಇಳಿಯುತ್ತಿದ್ದಂತೆ ಕೂಗುತ್ತಾ ಬೆಂಬಲಿಸಿದ್ರು. ನಾನು ವಿಧಾನಸೌಧದ ಶಾಸಕನಲ್ಲ, ಜನಸಾಮಾನ್ಯರ ಶಾಸಕ ಎಂದು ಹೇಳ್ತಿದ್ದ ರವಿ ಅದೇ ರೀತಿ ನಡೆದುಕೊಂಡ್ರು ಎನ್ನುವುದು ಗ್ರಾಮಸ್ಥರ ಮಾತು.

    ಕಬಡ್ಡಿಯ ಬಳಿಕ ಗ್ರಾಮೀಣ ಕ್ರೀಡಾಕೂಟವಾದ ಹಗ್ಗಜಗ್ಗಾಟದಲ್ಲೂ ಭಾಗವಹಿಸಿ, ವಾಲಿಬಾಲ್ ಆಡುವ ಮೂಲಕ ಎಲ್ಲರ ಮನರಂಜಿಸಿದರು.

     

     

  • ಕಾಲೇಜು ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರಿಗೆ ಬೆವರಿಳಿಸಿದ ಎಸ್‍ಪಿ ಅಣ್ಣಾಮಲೈ

    ಕಾಲೇಜು ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರಿಗೆ ಬೆವರಿಳಿಸಿದ ಎಸ್‍ಪಿ ಅಣ್ಣಾಮಲೈ

    ಚಿಕ್ಕಮಗಳೂರು: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ನಡುವಿನ ಕಿತ್ತಾಟಕ್ಕೆ ಮಧ್ಯಸ್ಥಿಕೆ ವಹಿಸೋಕೆ ಬಂದ ಎಬಿವಿಪಿ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರಿಗೆ ಎಸ್‍ಪಿ ಅಣ್ಣಾಮಲೈ ಚಾರ್ಜ್ ತೆಗೆದುಕೊಂಡಿದ್ದಾರೆ.

    ಎಸ್‍ಪಿ ಅಣ್ಣಾಮಲೈ ಅವರು ವಿದ್ಯಾರ್ಥಿಗಳು ಹಾಗೂ ಮ್ಯಾನೇಜ್‍ಮೆಂಟ್ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಒಳಹೋಗಲು ಯತ್ನಿಸಿದ ಸಂಘಟನಾ ಕಾರ್ಯಕರ್ತರಿಗೆ, ಇದು ಕಾಲೇಜು. ನಿಮಗೆ ಅನುಮತಿ ಹಾಗೂ ದೂರು ಕೊಟ್ಟೋರು ಯಾರೆಂದು ಕಿಡಿಕಾರಿ ಸ್ವತಃ ಎಸ್ಪಿಯವರೇ ಕಾರ್ಯಕರ್ತರನ್ನು ಹೊರದೂಡಿದ್ದಾರೆ.

    ಇದಕ್ಕೂ ಮುನ್ನ ಕಾಲೇಜಿನಲ್ಲಿ ಮೂಲಭೂತ ಸೌಕರ್ಯವಿಲ್ಲ, ಪ್ರಧ್ಯಾಪಕರೇ `ಐ ಲವ್ ಯು’ ಅಂತಾ ಮೆಸೇಜ್ ಮಾಡ್ತಾರೆ. ಹುಡುಗಿಯರನ್ನ ಮೈಕೈ ಮುಟ್ಟಿ ಮಾತನಾಡಿಸ್ತಾರೆ ಅಂತ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ಧ ತಿರುಗಿಬಿದ್ದಿದ್ರು.

  • ತಂದೆಯನ್ನ 50 ಮೀಟರ್ ದೂರ ಅಟ್ಟಾಡಿಸಿ, ಇಟ್ಟಿಗೆ-ಕಬ್ಬಿಣದ ಸಲಾಕೆಯಿಂದ ಜಜ್ಜಿ ಕೊಲೆಗೈದ!

    ತಂದೆಯನ್ನ 50 ಮೀಟರ್ ದೂರ ಅಟ್ಟಾಡಿಸಿ, ಇಟ್ಟಿಗೆ-ಕಬ್ಬಿಣದ ಸಲಾಕೆಯಿಂದ ಜಜ್ಜಿ ಕೊಲೆಗೈದ!

    ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಮಗನೇ ತನ್ನ ತಂದೆಯನ್ನ ಐವತ್ತು ಮೀಟರ್‍ನಷ್ಟು ದೂರ ಅಟ್ಟಾಡಿಸಿಕೊಂಡು ಹೋಗಿ ಕೊಲೆಗೈದ ಘಟನೆ ಚಿಕ್ಕಮಗಳೂರು ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ನಡೆದಿದೆ.

    50 ವರ್ಷದ  ತಂದೆ ಕೃಷ್ಣ ಅವರನ್ನ ಮಗ ನಾಗ (35) ಕೊಲೆ ಮಾಡಿದ್ದಾನೆ. ಇಟ್ಟಿಗೆಯಿಂದ ತನ್ನ ತಂದೆಯ ತಲೆ ಜಜ್ಜಿ ಬಳಿಕ ಅರ್ಧಗಂಟೆಗಳ ಕಾಲ ತಲೆಯನ್ನ ಕಬ್ಬಿಣದ ಸಲಾಖೆಯಿಂದ ಜಜ್ಜಿದ್ದಾನೆ. ಮನೆಯ ಸುತ್ತಮುತ್ತಲಿನ ಗೋಡೆಗಳೆಲ್ಲಾ ರಕ್ತಮಯವಾಗಿದೆ. ಕೂಡಲೇ ಸ್ಥಳೀಯರು ನಾಗನನ್ನ ಕಂಬಕ್ಕೆ ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕಾಗಿಮಿಸಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಮಗ ನಾಗನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಗನೇ ತನ್ನ ತಂದೆಯನ್ನ ಕೊಲೈಗದ ದೃಶ್ಯವನ್ನ ನೋಡಿದ ಪಕ್ಕದ ಮನೆಯ ಮಹಿಳೆಯರು ನಡುಗುತ್ತಾ ಬೆಚ್ಚಿ ಬಿದ್ದಿದ್ದಾರೆ.