Tag: Chikkamagaluru

  • ಕಾಫಿನಾಡಿನಲ್ಲೊಂದು ವಿಶೇಷ ಮದುವೆ- 3 ಅಡಿ ವರ, 3 ಅಡಿ ವಧು..!

    ಕಾಫಿನಾಡಿನಲ್ಲೊಂದು ವಿಶೇಷ ಮದುವೆ- 3 ಅಡಿ ವರ, 3 ಅಡಿ ವಧು..!

    ಚಿಕ್ಕಮಗಳೂರು: ಸಾಮಾನ್ಯವಾಗಿ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅನ್ನೋದಕ್ಕೆ ಕಾಫಿನಾಡಿನ ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ ಇಂದು ನಡೆದ ವಿವಾಹವೊಂದು ಸಾಕ್ಷಿಯಾಗಿದೆ.

    ಈ ವಿಶೇಷ ಮದುವೆಯಲ್ಲಿ ಕಳಸಾಪುರದ ಪುನೀತ್ (24) ಎಂಬ ವರ ಅರಸೀಕೆರೆ ಸಮೀಪದ ಅಯ್ಯನಹಳ್ಳಿಯ ಲಾವಣ್ಯ (22) ಎಂಬು ವಧುವನ್ನು ವರಿಸಿದ್ದಾರೆ. ಮೂರು ಅಡಿ ಇರುವ ಗಂಡು ಹಾಗೂ ಹೆಣ್ಣಿಗೆ ಕಳೆದ ಎರಡು ವರ್ಷಗಳಿಂದ ಎರಡೂ ಮನೆಯವರು ವಧು-ವರರನ್ನ ಹುಡುಕುತ್ತಿದ್ದರು. ಆದರೆ ಎಲ್ಲೂ ವಧು-ವರ ಸಿಗಲಿಲ್ಲ. ಕೊನೆಗೆ ಹುಡುಕುತ್ತಿದ್ದ ಜೋಡಿಗಳೇ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪುನೀತ್ ಮನೆಯವರು ಹುಡುಗಿ ಹುಡುಕಾಟದಲ್ಲಿದ್ದರು. ಇದೇ ಸಂದರ್ಭದಲ್ಲಿ ಮದುವೆಯೊಂದರಲ್ಲಿ ಮೂರು ಅಡಿ ಹುಡುಗಿಯನ್ನು ನೋಡಿದ್ದಾರೆ. ನಂತರ ಅವರು ನಮ್ಮದೊಂದು ಹುಡುಗ ಇದೆ ಹೆಣ್ಣು ಕೊಡುತ್ತೀರಾ ಎಂದು ಕೇಳಿದ್ದಾರೆ. ಈ ವೇಳೆ ಹುಡುಗಿ ಮನೆಯವರು ಒಪ್ಪಿಗೆ ನೀಡಿದ್ದಾರೆ. ಕೊನೆಗೆ ಎರಡು ಮನೆಯವರು ಒಪ್ಪಿ ಇಂದು ಮದುವೆಯನ್ನು ನಿಶ್ಚಯಿಸಿದ್ದರು.

    ಮೂರು ಅಡಿಯ ವಧು-ವರರಿಗೆ ಅದ್ಧೂರಿಯಾಗಿ ಮದುವೆ ಮಾಡಿ ಎಲ್ಲರೂ ಅವರಿಗೆ ಶುಭಹಾರೈಸಿದ್ದಾರೆ. ನವಜೀವನಕ್ಕೆ ಕಾಲಿಟ್ಟ ಇಬ್ಬರೂ ದಂಪತಿಗಳಿಗೂ ಸುತ್ತಮುತ್ತಲಿನ ಜನ ಕೂಡ ಶುಭಕೋರಿದ್ದಾರೆ. ವಧು-ವರರಿಬ್ಬರೂ ಕೂಡ ನಾನು ಕುಳ್ಳ- ನೀನೂ ಕುಳ್ಳಿ ಎಂದು ಒಬ್ಬರಿಗೊಬ್ಬರು ಹಾಸ್ಯ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

     

  • ವಸತಿ ಶಾಲೆಯಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ

    ವಸತಿ ಶಾಲೆಯಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥ- ಇಬ್ಬರ ಸ್ಥಿತಿ ಗಂಭೀರ

    ಚಿಕ್ಕಮಗಳೂರು: ವಸತಿ ಶಾಲೆಯೊಂದರಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿರುವ ಘಟನೆ ತರೀಕೆರೆ ಹೊರವಲಯದ ತುಂಗಾಭದ್ರಾ ವಸತಿ ಶಾಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಸಂಸದ ಬಿಎನ್ ಚಂದ್ರಪ್ಪ ಅವರಿಗೆ ಸೇರಿರುವ ಈ ವಸತಿ ಶಾಲೆಯಲ್ಲಿ ಇಂದು ಬೆಳಗ್ಗೆ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.

    ಹಾಸ್ಟೆಲ್‍ನಲ್ಲಿ ಬೆಳಗ್ಗೆ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಿಂದ ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ಪಡೆದಿರುವ ಶಿಕ್ಷಣ ಇಲಾಖೆ ಬಿಇಒ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಕುರಿತು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

  • ನಾಡಿನ ಜನರನ್ನ ಸಾಲಗಾರರನ್ನಾಗಿ ಮಾಡಿದ್ದೇ ಸಿಎಂ ಸಾಧನೆ: ಹೆಚ್‍ಡಿಕೆ

    ನಾಡಿನ ಜನರನ್ನ ಸಾಲಗಾರರನ್ನಾಗಿ ಮಾಡಿದ್ದೇ ಸಿಎಂ ಸಾಧನೆ: ಹೆಚ್‍ಡಿಕೆ

    ಚಿಕ್ಕಮಗಳೂರು: ಪ್ರತಿಕುಟುಂಬದ ಮೇಲೆ 50 ಸಾವಿರ ಹೊರೆ ನೀಡಿರೋದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನ ಮುಗುಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀರಾವರಿ, ರಸ್ತೆ, ಹಣ ದೋಚಿದೆ. ಅಲ್ಲದೇ ನಾಡಿನ ಜನರನ್ನ ಸಾಲಗಾರನ್ನಾಗಿ ಮಾಡಿದೆ. ಒಟ್ಟಿನಲ್ಲಿ ಜಾಹಿರಾತು ಮೂಲಕ ನಡೆಯುತ್ತಿರುವ ಸರ್ಕಾರ ಅಂದ್ರೆ ಸಿದ್ದರಾಮಯ್ಯನವರ ಸರ್ಕಾರ ಅಂತ ಅವರು ಹೇಳಿದ್ದಾರೆ.

     

    ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಅಗಲು ಹೆಚ್.ಡಿ.ರೇವಣ್ಣ ಕಾರಣ. ಸಿಎಂ ಸಾಲಮನ್ನಾ ಘೋಷಣೆ ಮಾಡಿ 4 ತಿಂಗಳ ಅಗಿದೆ ಎಷ್ಟು ಜನರಿಗೆ ಸಾಲಮನ್ನ ಮಾಡಲು ಹಣ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಫೋಟೋ ಹಾಕಿ ಸಾಲ ಮನ್ನಾ ಮಾಡಿದ್ದೇವೆ ಎಂದು ಕರಪತ್ರ ಹಂಚುತ್ತಿದ್ದಾರೆ ಅಂತ ಅಂದ್ರು.

    ಇದನ್ನೂ ಓದಿ: ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್

    ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಯನ್ನ ಆಲಿಸಿ ಪ್ರಣಾಳಿಕೆಯಲ್ಲಿ ನೀಡುವ ಉದ್ದೇಶದಿಂದ ನೀಡಲಾಗುತ್ತಿದೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುವುದು ಅಂತ ಹೇಳಿದ್ರು.

    ಇದನ್ನೂ ಓದಿ: ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

    ಎರಡು ರಾಷ್ಟ್ರೀಯ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿದ್ದು, ಲೂಟಿಕಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಜಯಂತಿಗಳನ್ನ ನಡೆಸಿ ಸಮುದಾಯದ ಜನರನ್ನ ತೃಪ್ತಿಪಡಿಸಲು ಮುಂದಾಗಿವೆ. ಇದನ್ನ ಬಿಟ್ಟು ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಲಿ ಎಂದು ಹೆಚ್‍ಡಿಕೆ ಸಲಹೆ ನೀಡಿದರು.

    ಇದನ್ನೂ ಓದಿ: ನಾಳೆ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ- ಮತ್ತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಹೆಚ್‍ಡಿಕೆ

  • ಜಿಲ್ಲಾಧ್ಯಕ್ಷರ ಎದುರೇ ಕೈ-ಕೈ ಮಿಲಾಯಿಸಿದ `ಕೈ’ ಕಾರ್ಯಕರ್ತರು!

    ಜಿಲ್ಲಾಧ್ಯಕ್ಷರ ಎದುರೇ ಕೈ-ಕೈ ಮಿಲಾಯಿಸಿದ `ಕೈ’ ಕಾರ್ಯಕರ್ತರು!

    ಚಿಕ್ಕಮಗಳೂರು: ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಜಿಲ್ಲಾಧ್ಯಕ್ಷರೆದುರೇ ಕಾಂಗ್ರೆಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಇಂದು ನಡೆದಿದೆ.

    ಕಡೂರಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾಧ್ಯಕ್ಷ ಡಾ. ವಿಜಯ್ ಕುಮಾರ್ ಎದುರೇ ಕಾರ್ಯಕರ್ತರು ಹೊಡೆದಾಡಿದ್ದಾರೆ. ಸಭೆಗೆ ಕೆಪಿಸಿಸಿ ಲೀಗಲ್ ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ್ ಆಗಮಿಸಿದ್ರು. ಧನಂಜಯ್ ಮುಂಬರೋ ಚುನಾವಣೆಗೆ ಕಡೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯೂ ಕೂಡ. ಅವರಿಗೆ ಸ್ವಾಗತ ನೀಡದ್ದಕ್ಕೆ ತೆಂಗುನಾರು ಮಂಡಳಿ ಮಾಜಿ ಅಧ್ಯಕ್ಷ ಸಿ.ನಂಜಪ್ಪ ಆಕ್ಷೇಪ ವ್ಯಕ್ತಪಡಿಸದರು

    ಕೂಡಲೇ ಆಕ್ರೋಶಕ್ಕೊಳಗಾದ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು ಅವರು ಕಡೂರಿಗೆ ಏನೂ ಅಲ್ಲ. ಅವರಿಗ್ಯಾಕೆ ಸ್ವಾಗತ. ಚುನಾವಣೆ ಸಂದರ್ಭದಲ್ಲಿ ನಾನು ಆಕಾಂಕ್ಷಿ ಎಂದು ಹತ್ತಾರು ಜನ ಬರ್ತಾರೆ. ಪಕ್ಷಕ್ಕಾಗಿ ದುಡಿದ ಸ್ಥಳೀಯ ಕಾರ್ಯಕರ್ತರ ಏನ್ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಹೊರಗಿನವರಿಗೇನು ಕೆಲಸ ಎಂದೆಲ್ಲ ಪ್ರಶ್ನಿಸಿ ಎಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇಷ್ಟೆಲ್ಲಾ ತನ್ನ ಕಣ್ಮುಂದೆಯೇ ನಡೆಯುತ್ತಿದ್ರು ಮೂಕಪ್ರೇಕ್ಷಕರಾದ ಅಧ್ಯಕ್ಷ ವಿಜಯ್ ಕುಮಾರ್ ಅರ್ಧಕ್ಕೆ ಸಭೆಯಿಂದ ಎದ್ದು ಹೊರನಡೆದಿದರು.

    https://www.youtube.com/watch?v=evI_Gu1Md7A&feature=youtu.be

    ಇದನ್ನೂ ಓದಿ: ಗಾಂಧಿ ಜಯಂತಿ ವೇಳೆ ಸಚಿವ, ಶಾಸಕರ ಎದುರೇ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

    https://www.youtube.com/watch?v=iyOiyLIam98

     

  • ಚಾರ್ಮಾಡಿಯಲ್ಲಿ ಗುಡ್ಡ ಕುಸಿತ- ಪ್ರವಾಸಿಗರಿಗೆ ಆತಂಕ

    ಚಾರ್ಮಾಡಿಯಲ್ಲಿ ಗುಡ್ಡ ಕುಸಿತ- ಪ್ರವಾಸಿಗರಿಗೆ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿಯಲ್ಲಿ ಸುರಿಯುತ್ತಿರೋ ಭಾರೀ ಮಳೆಯಿಂದಾಗಿ ಮೂಡಿಗೆರೆಯಿಂದ ಧರ್ಮಸ್ಥಳ, ಮಂಗಳೂರು, ಮಣಿಪಾಲ್‍ಗೆ ಸಂಪರ್ಕ ಕಲ್ಪಿಸೋ ಚಾರ್ಮಾಡಿಯಲ್ಲಿ ಗುಡ್ಡ ಕುಸಿದಿದೆ.

    ಅದೃಷ್ಟವತಾಶ್ ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಭಾನುವಾರ ಸಂಜೆ ಸುಮಾರು 5.30 ರಿಂದ 6 ಗಂಟೆಗೆ ಗುಡ್ಡ ಕುಸಿದಿದ್ದು ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ. ಗುಡ್ಡ ಕುಸಿತದಿಂದಾಗಿ ಒಂದು ಗಂಟೆಗೂ ಅಧಿಕ ಕಾಲ ಸುಮಾರು ಎರಡು ಕಿ.ಮೀ.ನಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಈ ಮಾರ್ಗ ಕಿರಿದಾದ ರಸ್ತೆಯಾಗಿರೋದ್ರಿಂದ ವಾಹನಗಳು ನಿಂತಲ್ಲೇ ನಿಂತಿದ್ವು. ಕೂಡಲೇ ಸ್ಥಳಕ್ಕಾಗಮಿಸಿದ ಬಣಕಲ್ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.

    ಇಲ್ಲಿ ವರ್ಷಪೂರ್ತಿ ಮಳೆ ಸುರಿಯುತ್ತಿದ್ದು, ಸದಾ ನೀರು ಹರಿಯೋದರಿಂದ ವಾಹನಸವಾರರು ಯಾವಾಗ, ಏನಾಗುತ್ತೆ ಎಂದು ಆತಂಕದಲ್ಲಿ ಸಂಚರಿಸುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಮಂಗಳೂರಿನಿಂದ ಮರಳಿನ ಲಾರಿಗಳು ಎಗ್ಗಿಲ್ಲದೇ ಸಂಚರಿಸೋದರಿಂದ ಹೀಗೆ ಆಗ್ತಿದೆ. ಮೊನ್ನೆ ಸಂಜೆಯೂ ಬೆಟ್ಟ ಕುಸಿದಿದ್ದು, ನಿನ್ನೆ ಸಂಜೆಯೂ ಕುಸಿದಿದೆ. ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ವರುಣನ ಆರ್ಭಟಕ್ಕೆ ಜಿಲ್ಲೆಗಳಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸಿವೆ?- ಸಂಪೂರ್ಣ ಮಾಹಿತಿ ಇಲ್ಲಿದೆ

    ವರುಣನ ಆರ್ಭಟಕ್ಕೆ ಜಿಲ್ಲೆಗಳಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸಿವೆ?- ಸಂಪೂರ್ಣ ಮಾಹಿತಿ ಇಲ್ಲಿದೆ

    ಬೆಂಗಳೂರು: ನಗರದ ಸೇರಿದಂತೆ ಜಿಲ್ಲೆಯಾದ್ಯಂತ ನಿನ್ನೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿತ್ತು. ಸಿಲಿಕಾನ್ ಸಿಟಿಯಲ್ಲಿ ಮಳೆಗೆ ಐವರು ಬಲಿಯಾಗಿದ್ದಾರೆ. ಅಲ್ಲದೇ ಜಾನುವಾರುಗಳು ಕೂಡ ಬಲಿಯಾಗಿವೆ.

    ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಕೂಡಾ ರಾತ್ರಿ ವರುಣ ಆರ್ಭಟಿಸಿದ್ದಾನೆ. ಅದರಲ್ಲೂ ಚನ್ನಪಟ್ಟಣ ಹಾಗೂ ಕನಕಪುರ ತಾಲೂಕುಗಳಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಇನ್ನು ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೇ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಮಳೆಯ ನೀರು ನಿಂತು ಬೈಕ್ ಸವಾರರು ಪರದಾಡಿದ್ದಾರೆ. ಜೋರು ಮಳೆಯಾಗಿ ನಿಂತ ಬಳಿಕ ಮಧ್ಯರಾತ್ರಿವರೆಗೂ ಸಹ ತುಂತುರು ಮಳೆ ಬೀಳುತ್ತಲೇ ಇದೆ.


    ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜೋಗಿಮಟ್ಟಿ ರಸ್ತೆ, ಐಯುಡಿಪಿ ಲೇಔಟ್, ನೆಹರೂನಗರ, ಜೈನ್ ಕಾಲೋನಿ, ಮಾರುತಿನಗರ, ಹೌಸಿಂಗ್ ಬೋರ್ಡ್ ಕಾಲೋನಿ ಸೇರಿದಂತೆ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ. ರಾಜಕಾಲುವೆಗಳ ಒತ್ತುವರಿಯಿಂದ ರಸ್ತೆಗೆ ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ. ಐತಿಹಾಸಿಕ ಹೊಂಡಗಳು ಭರ್ತಿಯಾಗಿ ನೀರು ಕೋಡಿ ಹರಿಯುತ್ತಿದೆ.

    ಚಿನ್ನದ ನಾಡು ಕೋಲಾರದಲ್ಲೂ ರಾತ್ರಿ ಸುರಿದ ಮಳೆ ಅನೇಕ ಅವಾಂತರ ಸೃಷ್ಟಿಸಿದೆ. ಬಂಗಾರಪೇಟೆ ತಾಲೂಕಿನ ತೊರಗನದೊಡ್ಡಿ ಗ್ರಾಮದ ಕೆರೆ ಕೋಡಿ ಒಡೆದು ರೈತರ ಬೆಳೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳೆ ನಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಅಂತ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ. ಇನ್ನು ಸ್ಥಳಕ್ಕೆ ಬಾರದ ಕಂದಾಯ ಅಧಿಕಾರಿಗಳ ವಿರುದ್ದ ರೈತರ ಕಿಡಿಕಾರಿದ್ರು.


    ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕೂಡ ಗುಡುಗು ಸಹಿತ ಸುರಿದ ಅಬ್ಬರದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗೆ ನೀರು ನುಗ್ಗಿ ವಾಹನ ಸವಾರರ ಪರದಾಡಿದ್ದಾರೆ. ಚಿಕ್ಕಮಗಳೂರಿನ ಅಂಬಳೆ ಗ್ರಾಮದಲ್ಲಿ ಸಿಡಿಲು ಬಡಿದು ರೈತ 55 ವರ್ಷದ ಲಕ್ಷ್ಮಯ್ಯ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಪಟ್ಟಣ ಅಲ್ಲದೇ ಅಲ್ಲಂಪುರ, ಹಿರೇಮಗಳೂರು, ಅಂಬಳೆ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಇನ್ನು ನೋವು ಕೇಳದ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸಿಡಿಲು,ಗುಡುಗು ಸಹಿತ ಭಾರಿ ಮಳೆಯಾಗಿದೆ. ಜಂಬಾನಿ ಗ್ರಾಮದಲ್ಲಿ ಸಿಡಿಲು ಬಡಿದು ಮೇಯಲು ಬಿಟ್ಟಿದ್ದ ಹಸು ಸಾವನ್ನಪ್ಪಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಭಾರಿ ಮಳೆಗೆ ರಸ್ತೆ ಕಾಣದೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‍ಗೆ ಕ್ರೂಸರ್ ಡಿಕ್ಕಿಯಾಗಿ 8 ಮಂದಿಗೆ ಗಾಯವಾಗಿದೆ.

    ಚಿಕ್ಕೋಡಿ ಹೊರವಲಯದ ಅಂಕಲಿ ರಸ್ತೆಯ ಬಿ.ಕೆ.ಕಾಲೇಜು ಬಳಿ ಘಟನೆ ನಡೆದಿದೆ. ಗಾಯಾಳುಗಳಿಗೆ ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹುಕ್ಕೇರಿ, ಅಥಣಿ ತಾಲೂಕಿನಲ್ಲಿ ವರುಣ ಆರ್ಭಟಿಸಿದ್ದಾನೆ. ಅಥಣಿ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಸಿಡಿಲು ಬಡಿದು ಸಿದ್ದಪ್ಪ ಭೀಮಪ್ಪ ವಾಘಮೋಡೆ ಮೃತಪಟ್ಟಿದ್ದಾರೆ. ಗುಡುಗು ಸಿಡಿಲಿನ ಮಳೆ ಸುರಿಯುವ ವೇಳೆ ಮನೆ ಮುಂದಿದ್ದ ಗುಡಿಸಲುಗಳನ್ನು ಒಳಗೆ ಕಟ್ಟುವ ವೇಳೆ ಸಿಡಿಲು ಬಡಿದಿದೆ.

    ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಳೆ ನೀರು ನುಗ್ಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದಾವಣಗೆರೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸತತ ಮಳೆಯಾಗ್ತಿದೆ.


    ಮೈಸೂರಿನಲ್ಲಿ ಅಬ್ಬರದ ಮಳೆಗೆ ಅರಮನೆ, ಅಗ್ರಹಾರ, ನಜರ್‍ಬಾದ್, ಅರಸು ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹಕ್ಯಾಳ ಬಳಿ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಯುವಕ ನೀರುಪಾಲಾಗಿದ್ದಾನೆ. ನೀರುಪಾಲಾದ ಯುವಕನ್ನ ಹಂದಿಖೇರಾ ಗ್ರಾಮದ 26 ವರ್ಷದ ಶಿವಾಜಿ ಚವ್ಹಾಣ ಎಂಬುವುದಾಗಿ ಗುರುತಿಸಲಾಗಿದೆ.

  • ವಿಡಿಯೋ: 80 ಅಡಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ: 40 ಅಡಿಯಲ್ಲಿ ಸಿಲುಕಿದ್ದ ವೃದ್ಧೆ ರಕ್ಷಣೆ

    ವಿಡಿಯೋ: 80 ಅಡಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ: 40 ಅಡಿಯಲ್ಲಿ ಸಿಲುಕಿದ್ದ ವೃದ್ಧೆ ರಕ್ಷಣೆ

    ಚಿಕ್ಕಮಗಳೂರು: ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ 85 ವರ್ಷದ ವೃದ್ಧೆಯನ್ನ ಸ್ಥಳೀಯರು ರಕ್ಷಣೆ ಮಾಡಿರುವ ಫಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಾಲುಮುತ್ತೂರು ಗ್ರಾಮದಲ್ಲಿ ನಡೆದಿದೆ.

    ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮನನೊಂದು ಮಲಕಮ್ಮ ಎಂಬ ವೃದ್ಧೆ ಇಂದು ಮಧ್ಯಾಹ್ನ ಹಾಲುಮುತ್ತೂರು ಗ್ರಾಮದಲ್ಲಿರುವ 80 ಅಡಿ ಆಳದ ಕುಡಿಯುವ ನೀರಿನ ಬಾವಿಗೆ ಧುಮುಕಿ ಅತ್ಮಹತ್ಯೆಗೆ ಯತ್ನಿಸಿದ್ದರು.

    ಆದ್ರೆ 40 ಅಡಿ ಆಳದಲ್ಲಿದ್ದ ಬಾವಿಯ ನೀರು ಎತ್ತುವ ಮೋಟರ್ ಪೈಪ್‍ಗೆ ವೃದ್ಧೆ ಸಿಕ್ಕಿಹಾಕಿಕೊಂಡಿದ್ರು. ನಂತರ ಸ್ಥಳೀಯರು ಬುಟ್ಟಿಗೆ ಹಗ್ಗ ಕಟ್ಟಿ ಬಾವಿಯೊಳಗೆ ಇಳಿಬಿಟ್ಟು ವೃದ್ಧೆಯನ್ನ ರಕ್ಷಣೆ ಮಾಡಿದ್ದಾರೆ.

    ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=TJ_0TH5zqt0&feature=youtu.be

  • ಹೆಂಡ್ತಿ ಹೃದಯಾಘಾತದಿಂದ ಸತ್ತಿದ್ದಾಳೆಂದು ನಾಟಕವಾಡಿದ್ರು- ಚಿಕ್ಕಪ್ಪ ಪೊಲೀಸ್ ಕಂಪ್ಲೇಂಟ್ ನೀಡಿದ್ಮೇಲೆ ಹೊರಬಂತು ಸತ್ಯ

    ಹೆಂಡ್ತಿ ಹೃದಯಾಘಾತದಿಂದ ಸತ್ತಿದ್ದಾಳೆಂದು ನಾಟಕವಾಡಿದ್ರು- ಚಿಕ್ಕಪ್ಪ ಪೊಲೀಸ್ ಕಂಪ್ಲೇಂಟ್ ನೀಡಿದ್ಮೇಲೆ ಹೊರಬಂತು ಸತ್ಯ

    ಚಿಕ್ಕಮಗಳೂರು: ದೇಹದಲ್ಲಿ ಜೀವ ಇರ್ಲಿಲ್ಲ. ಕುತ್ತಿಗೆಯಲ್ಲಿ ಹಗ್ಗದ ಜೊತೆ ಉಗುರಿನ ಗುರುತಿತ್ತು. ಮಾರ್ಕಿನ ಮೇಲೆಲ್ಲಾ ಅರಿಶಿನ ಮೆತ್ತಿತ್ತು. ಹೆತ್ತವರು ಬರುವ ಮುನ್ನವೇ ಮೃತದೇಹ ರೂಮಿನಿಂದ ಆಚೆ ಬಂದಿತ್ತು. ಹೆತ್ತವರಿಗೆ ಚೆನ್ನಾಗಿದ್ಲು, ಎದೆ ನೋವು ಅಂತಿದ್ಲಷ್ಟೆ, ಹೃದಯಾಘಾತದಿಂದ ತೀರ್ಕೊಂಡಿದ್ದಾಳೆಂದು ಕಥೆ ಕಟ್ಟಿದ್ರು. ಮಗಳನ್ನ ಕಳೆದುಕೊಂಡ ನೋವಲ್ಲಿ ಇದ್ಯಾವುದನ್ನೂ ಗಮನಿಸಲೇ ಇಲ್ಲ. ಆದ್ರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ಇದೊಂದು ಕೊಲೆ ಅನ್ನೋ ಸತ್ಯವನ್ನ ಸಾರಿ ಹೇಳ್ತಿತ್ತು.

    ಈಕೆ ಹೆಸರು ಯಶೋಧ. ವಯಸ್ಸು 30ರ ಆಸುಪಾಸು. ಚಿಕ್ಕಮಗಳೂರಿನ ಗಿಡ್ಡೇನಹಳ್ಳಿ ನಿವಾಸಿ. ಈಕೆಯನ್ನ ಐದು ವರ್ಷಗಳ ಹಿಂದೆ ಮಂಜೇಗೌಡ ಅನ್ನೋ ವ್ಯಕ್ತಿ ಮದುವೆಯಾಗಿದ್ದ. ಇವರಿಗೆ ಒಂದು ಹೆಣ್ಣು ಮಗುವೂ ಆಗಿದೆ. ಹೆಣ್ಣು ಮಗು ಆಯ್ತೆಂದು ಆರಂಭವಾದ ಜಗಳ ಕೊಲೆಯಲ್ಲಿ ಕೊನೆಗೊಂಡಿದೆ.

    ಮೂರು ತಿಂಗಳ ಹಿಂದೆ ಯಶೋಧ ಗಂಡ ಮಂಜೇಗೌಡ, ಅತ್ತೆ ಮಾವನಿಗೆ ಫೋನ್ ಮಾಡಿ ನಿಮ್ಮ ಮಗಳು ಹೃದಯಾಘಾತದಿಂದ ತೀರಿಕೊಂಡಿದ್ದಾಳೆ ಎಂದಿದ್ದ. ಹೆತ್ತವರು ಬರುವಷ್ಟರಲ್ಲಿ ಮೃತದೇಹಕ್ಕೆ ಸ್ನಾನ ಮಾಡಿಸಿ ಮೈತುಂಬ ಅರಿಶಿನ ಮೆತ್ತಿಟ್ಟಿದ್ರಂತೆ. ಅನಕ್ಷರಸ್ಥ ತಂದೆ-ತಾಯಿಯೂ ಹೃದಯಾಘಾತದಿಂದ ತೀರಿಕೊಂಡಿದ್ದಾಳೆಂದು ಭಾವಿಸಿದ್ರು. ಆದ್ರೆ ಹುಡುಗಿಯ ಚಿಕ್ಕಪ್ಪ ಬಂದು ಪೊಲೀಸ್ ಕಂಪ್ಲೇಂಟ್ ನೀಡಿದ ಮೇಲೆ ಇದೀಗ ಸತ್ಯ ಹೊರಬಿದ್ದಿದೆ. ಮರಣೋತ್ತರ ವರದಿಯಲ್ಲಿ ಈಕೆ ಆಕಸ್ಮಿಕವಾಗಿ ಸತ್ತಿಲ್ಲ, ಇದೊಂದು ಕೊಲೆ ಎಂದು ಗೊತ್ತಾಗಿದೆ.

    ಯಶೋಧಗೆ ಹೆಣ್ಣು ಮಗುವಾದ ಮೇಲೆ ಸಾಕಷ್ಟು ಬಾರಿ ಗಲಾಟೆ ಮಾಡಿ ಮನೆಗೆ ವಾಪಸ್ಸು ಕಳಿಸಿದ್ದರು ಎನ್ನಲಾಗಿದೆ. ಹಲವು ರಾಜಿ-ಪಂಚಾಯಿತಿಗಳು ನಡೆದಿದೆ. ಆದ್ರೆ ದಿನಕಳೆದಂತೆ ಗಂಡು ಮಗುವಾಗಲಿಲ್ಲ ಎಂದು ಅತ್ತೆ, ಮಾವ, ಗಂಡ ಕೋಪ ಮಾಡಿಕೊಂಡಿದ್ದರು. ಒಂದಿನ ಎಲ್ಲರೂ ಸೇರಿ ಕೊಲೆ ಮಾಡಿದ್ರು. ಆಮೇಲೆ ಹೃದಯಾಘಾತದ ನಾಟಕವಾಡಿದ್ದಾರೆ. ಈಗ ಗಂಡ-ಅತ್ತೆ-ಮಾವ ಮೂವರು ಅಂದರ್ ಆಗಿದ್ದಾರೆ.

  • ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಐಟಿ ದಾಳಿ – ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ರೇಡ್

    ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಐಟಿ ದಾಳಿ – ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ರೇಡ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಐಟಿ ದಾಳಿ ನಡೆದಿದೆ.

    ಕಾಫಿ ಡೇ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕಾಫಿ ಡೇ ಸಮೂಹದ ಮುಖ್ಯಸ್ಥರ ಮನೆ, ಮಲ್ಯ ರಸ್ತೆಯಲ್ಲಿರುವ ಮುಖ್ಯ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸ್ತಿದ್ದಾರೆ. ಬೆಂಗಳೂರು ಮತ್ತು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಐಟಿ ಅಸಿಸ್ಟೆಂಟ್ ಡೈರೆಕ್ಟರ್ ಶರೀಫ್ ನೇತೃತ್ವದಲ್ಲಿ 10 ಅಧಿಕಾರಿಗಳಿಂದ ತಪಾಸಣೆ ನಡೆಯುತ್ತಿದೆ. ಹೋಟೆಲ್ ಸೆರಾಯ್ ಹಾಗೂ ಎಬಿಸಿ ಕಾಫಿ ಡೇ ಗ್ಲೋಬಲ್ ಕಚೇರಿ ಮೇಲೆ ದಾಳಿ ನಡೆದಿದೆ. ಚಿಕ್ಕಮಗಳೂರು ನಗರದ ಮೂಡಿಗೆರೆಯ ರಸ್ತೆಯಲ್ಲಿರುವ ಹೋಟೆಲ್ ಹಾಗೂ ಕಂಪನಿಗಳ ಮೇಲೆ ಪೊಲೀಸ್ ಭದ್ರತೆಯೊಂದಿಗೆ ದಾಳಿ ನಡೆದಿದೆ.

  • ಶಿಕಾರಿಗೆ ಹೋಗಿದ್ದ ವೇಳೆ ಮಿಸ್ ಫೈರ್- ವ್ಯಕ್ತಿ ಸ್ಥಳದಲ್ಲೇ ಸಾವು

    ಶಿಕಾರಿಗೆ ಹೋಗಿದ್ದ ವೇಳೆ ಮಿಸ್ ಫೈರ್- ವ್ಯಕ್ತಿ ಸ್ಥಳದಲ್ಲೇ ಸಾವು

    ಚಿಕ್ಕಮಗಳೂರು: ಶಿಕಾರಿಗೆ ಹೋದ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಸಾರ್ಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ ಧರ್ಮಯ್ಯ ಹಾಗೂ ಗಂಗಾಧರ್ ಎಂಬವರು ಶಿಕಾರಿಗೆ ಹೋಗಿದ್ರು. ಈ ವೇಳೆ ಗಂಗಾಧರ್ ಫೈರ್ ಮಾಡಿದ ಬುಲೆಟ್ ಧರ್ಮಯ್ಯಗೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಧರ್ಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಎನ್‍ಆರ್ ಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಗಂಗಾಧರ್‍ರನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    https://www.youtube.com/watch?v=oiT8z6159Dw