Tag: Chikkamagalur

  • ಮಳೆಗಾಗಿ ಹೂತಿಟ್ಟ ಶವ ತೆಗೆದು ಸುಡ್ತಾರೆ ಈ ಗ್ರಾಮದ ಜನ!

    ಮಳೆಗಾಗಿ ಹೂತಿಟ್ಟ ಶವ ತೆಗೆದು ಸುಡ್ತಾರೆ ಈ ಗ್ರಾಮದ ಜನ!

    ಚಿಕ್ಕಮಗಳೂರು: ವರುಣ ದೇವ ಮುನಿಸಿಕೊಂಡ್ರೆ ಕಪ್ಪೆ, ಕತ್ತೆಗಳ ಮದುವೆ ಮಾಡೋದು ಎಲ್ಲಾ ಕಡೆ ನಡೆಯುತ್ತದೆ. ಆದರೆ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಜನ ಹೂತಿಟ್ಟ ಶವವನ್ನು ಹೊರಗೆ ತೆಗೆದು ಸುಡುವ ವಿಶಿಷ್ಟ ಆಚರಣೆ ನಡೆಸುತ್ತಾರೆ.

    ಈ ಗ್ರಾಮದ ಜನ ಮಳೆಗಾಗಿ ನಾಲ್ಕು ಹಳ್ಳಿಯ ವ್ಯಾಪ್ತಿಯಲ್ಲಿ ಕಳೆದ ಒಂದೆರೆಡು ತಿಂಗಳಲ್ಲಿ ಹೂತು ಹಾಕಿದ್ದ ಮೃತದೇಹಗಳ ತಲೆಯನ್ನ ತೆಗೆದು ಹಲ್ಲು ಹಾಗೂ ಕೂದಲಿನ ಭಾಗವನ್ನ ಕಿತ್ತು ಮೃತದೇಹದ ತಲೆಯೊಂದಿಗೆ ಕಿತ್ತ ಭಾಗವನ್ನೆಲ್ಲಾ ಬೆಂಕಿ ಹಾಕಿ ಸುಡ್ತಾರೆ. ಹೀಗೆ ಮಾಡಿದ್ರೆ ಒಂದೆರಡು ತಿಂಗಳಲ್ಲಿ ಮಳೆ ಬಂದು ಬರಗಾಲ ನಿವಾರಣೆಯಾಗುತ್ತೆ ಅನ್ನೋದು ಈ ಗ್ರಾಮದವರ ನಂಬಿಕೆಯಾಗಿದೆ. ಈ ಆಚರಣೆಯಲ್ಲಿ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಭಾಗವಹಿಸ್ತಾರೆ. ಎಲ್ಲರೂ ಒಂದುಗೂಡಿ ಆಚರಣೆ ಮಾಡುವುದರಿಂದ ಯಾರೊಬ್ಬರೂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಲ್ಲ.

    ಡಂಗೂರ ಸಾರ್ತಾರೆ : ಈ ಆಚರಣೆಗೆ ಸುತ್ತಮುತ್ತಲಿನ ನಾಲ್ಕು ಹಳ್ಳಿಯ ಜನ ಬರುವಂತೆ ಹಿಂದಿನ ದಿನ ಡಂಗೂರವನ್ನೂ ಸಾರ್ತಾರೆ. ಎಲ್ಲರೂ ಒಂದೆಡೆ ಸೇರಿ ತೀರ್ಮಾನಿಸಿದ ನಂತರವಷ್ಟೆ ಆಚರಣೆಗೆ ಸಿದ್ಧತೆ ನಡೆಯೋದು. ಕಳೆದೆರಡು ತಿಂಗಳಲ್ಲಿ ಗ್ರಾಮದಲ್ಲಿ ಯಾರ್ಯಾರು ಮೃತಪಟ್ಟಿದ್ದಾರೆ, ಅವರನ್ನ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಮಾಹಿತಿ ಕಲೆ ಹಾಕ್ತಾರೆ. ಬಳಿಕ ಎಲ್ಲರೂ ಸಮಾಧಿ ಬಳಿ ಹೋಗಿ ಶವದ ತಲೆಯನ್ನ ತೆಗೆದು ಬೆಂಕಿಗೆ ಹಾಕುತ್ತಾರೆ. ಮೃತ ದೇಹದ ತಲೆ ಬೆಂಕಿಯಲ್ಲಿ ಬೇಯುವಾಗ ಕುಣಿದು ಕುಪ್ಪಳಿಸುತ್ತಾರೆ.

    ಈ ಆಚರಣೆ ಇವರಿಗೆ ಹಬ್ಬ: ಗ್ರಾಮದವರು ಈ ಆಚರಣೆಯನ್ನ ಹಬ್ಬವಾಗಿ ಆಚರಿಸ್ತಾರೆ. ಈ ಆಚರಣೆಗೆ ಇವರು ಇಟ್ಟ ಹೆಸರು ಗಿಡ ಸವರೋ ಹಬ್ಬ. ಈ ಹಬ್ಬ ಮಾಡಿದ್ರೆ ನಾಡಿನ ಬರಗಾಲ ಹೋಗಿ ಸಮೃದ್ಧ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತೆ ಅನ್ನೋದು ಇವ್ರ ನಂಬಿಕೆ. ಈ ಹಿಂದೆ ಬರಗಾಲ ಬಂದಾಗ ಈ ಆಚರಣೆಯ ಬಳಿಕ ಮಳೆ ಬಂದಿತ್ತು. ಈ ಬಾರಿಯೂ ಮಳೆ ಬರುತ್ತೆ ಎಂದು ಸ್ಥಳೀಯರು ಹೇಳುತ್ತಾರೆ.

    ತೊನ್ನು ಹಾಗೂ ಇತರೆ ಕಾಯಿಲೆಯಿಂದ ಬಳಲಿ ಮೃತಪಟ್ಟವರ ಹಲ್ಲು, ಕೂದಲು ಬೆಳೆಯುತ್ತೆ. ಇದರಿಂದ ಮಳೆಯಾಗಲ್ಲ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ. ಹಾಗಾಗಿ ಊರಿನಲ್ಲಿ ಸತ್ತವರ ಸಮಾಧಿಗೆ ಹೋಗಿ ಶವ ತಂದು ಬೆಂಕಿಗೆ ಹಾಕಿ ಸುಡುತ್ತಾರೆ.

     

  • ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಚಿಕ್ಕಮಗಳೂರು: ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಸೋಮವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕೃಷ್ಣ ಜನ್ಮಾಷ್ಟಮಿ, ಹುತ್ತರಿ ಹಬ್ಬಗಳ ಸಂಭ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    ವೀರಗಾಸೆ, ಜನಪದ ಕಲಾ ತಂಡಗಳ ನೇತೃತ್ವದಲ್ಲಿ ನವದುರ್ಗಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಚೂಢ, ಕುಷ್ಮಾಂದ, ಸ್ಕಂದಮಾತ, ಕಾತ್ಯಾಯಿನಿ, ಸರಸ್ವತಿ, ದುರ್ಗಾಮಾತೆ, ಸಿದ್ಧಿಧತ್ರಿ ದೇವಿಗಳ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು ಖುಷಿಯ ಅಲೆಯಲ್ಲಿ ತೇಲಿದರು. ನಂತರ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ದಸರಾ ಹಬ್ಬಕ್ಕೆ ಮುನ್ನುಡಿ ಬರೆದ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಿ ಗಮನ ಸೆಳೆದರು. ಆವರಣದಲ್ಲಿ ವಿಶೇಷವಾಗಿ ರಚಿಸಿದ್ದ ಹೂವಿನ ಅಲಂಕಾರವುಳ್ಳ ರಂಗೋಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

    ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಶ್ರೀಕೃಷ್ಣನ ಹತ್ತು ಅವತಾರ ಬಿಂಬಿಸುವ ವೇಷದೊಂದಿಗೆ ನರ್ತಿಸಿ ಕೃಷ್ಣಾಷ್ಟಮಿ ನೆನಪಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರು ಕೊಡಗಿನ ಹುತ್ತರಿ ಹಬ್ಬ, ಕಾವೇರಮ್ಮ ಮತ್ತು ಈಶ್ವರನ ಪೂಜೆ, ಭತ್ತದ ಗದ್ದೆಯಲ್ಲಿ ಸುಗ್ಗಿಯೊಂದಿಗೆ ಕೊಡವರ ಸಾಂಪ್ರದಾಯಿಕ ಕುಣಿತವನ್ನ ಪ್ರದರ್ಶಿಸಿದ್ರು. ಅಂತಿಮ ಬಿ.ಕಾಂ ತಂಡ ಕುಡ್ಲದ ಪರ್ಬಕೋಲ ಪೂಜೆಯೊಂದಿಗೆ ಕೋಲ ಕಟ್ಟಿ ಕುಣಿದರು.

    ಗಾಯಕಿ ರೇಖಾ ಪ್ರೇಮ್‍ಕುಮಾರ್ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯೆ ಪ್ರೊ.ಜೆ.ಕೆ.ಭಾರತಿ, ಕಾಲೇಜು ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಶೇಖರ್, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಗೀತಾ, ಸುಷ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

     

  • ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

    ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

    ಚಿಕ್ಕಮಗಳೂರು: ಆಸ್ಟ್ರೇಲಿಯಾ ದೇಶದ ಹಾಲಿವುಡ್ ಬೆಡಗಿ ಇಸಾಬೆಲ್ ಲೂಕಾಸ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಆರೋಗ್ಯನಿಕೇತನ ಆಯುರ್ವೇದಾಶ್ರಮಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹಾಲಿವುಡ್‍ನ ಹೆಸರಾಂತ ನಟಿ. ಹಾಲಿವುಡ್ ಚಿತ್ರಗಳೆಂದ್ರೆ ಆ್ಯಕ್ಷನ್, ಸ್ಟಂಟು, ಫೈಟ್‍ಗೇನು ಕೊರತೆ ಇರೋಲ್ಲ. ಸಿನಿಮಾಕ್ಕಾಗಿ ದೇಶ-ದೇಶ ಸುತ್ತಿದ್ದ ಇವರು ಮಾನಸಿಕ ಹಾಗೂ ದೈಹಿಕ ಖಿನ್ನತೆಗೆ ಒಳಗಾಗಿದ್ದರು. ತನ್ನ ದೇಹದ ಸ್ಥಿತಿಗತಿಯನ್ನ ಹತೋಟಿಗೆ ತಂದುಕೊಳ್ಳಲು ಇಸಾಬೆಲ್ ಆಯ್ಕೆ ಮಾಡಿಕೊಂಡ ಜಾಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಆರೋಗ್ಯನಿಕೇತನ ಆಯುರ್ವೇದಾಶ್ರಮ. ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಸಬೆಲ್ಲಾ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಟ್ರೇಲಿಯಾಕ್ಕೆ ಹಿಂದಿರುಗಲಿದ್ದಾರೆ.

    ಭಾರತದ ಆಯುರ್ವೇದ ಚಿಕಿತ್ಸೆಯಿಂದಾಗಿ ನಾನೂ ಮೊದಲಿನಂತಾಗಿ ಸಂತೋಷದಿಂದ ನನ್ನ ದೇಶಕ್ಕೆ ಹಿಂತಿರುಗುತ್ತಿದ್ದೇನೆ. “ಹ್ಯಾಟ್ಸಾಫ್ ಇಂಡಿಯಾ ಅಂಡ್ ಇಂಡಿಯನ್ ಮೆಡಿಸಿನ್” ಎಂದು ನಟಿ ಇಸಾಬೆಲ್ ಲೂಕಾಸ್ ಹೇಳುವ ಮೂಲಕ ಆಯುರ್ವೇದ ಚಿಕಿತ್ಸೆಯನ್ನು ಹೊಗಳಿದರು.

    ಕೊಪ್ಪಗೆ ಬಂದಿದ್ದು ಹೇಗೆ?
    ಟ್ರಾನ್ಸ್ ಫಾರ್ಮರ್, ರಿವೇಂಜ್ ಆಫ್ ದಿ ಫಾಲೆನ್, ಡೇ ಬ್ರೇಕರ್ಸ್, ದಿ ಫೆಸಿಪಿಕ್, ಡಸ್ ನಾಟ್ ಮೀ ಸೇರರಿದಂತೆ 20 ಕ್ಕೂ ಹೆಚ್ಚು ಹಾಳಿವುಡ್ ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹೋಂ ಆಂಡ್ ವೇ ಕಿರುತೆರೆ ದಾರಾವಾಹಿ ಹೆಸರು ತಂದುಕೊಟ್ಟಿತ್ತು. ಇಸಾಬೆಲ್ ಸ್ನೇಹಿತೆ ಪಾಪ್ ಗಾಯಕಿ ಜೂಲಿಯಾ ಸ್ಟೋನ್ ಮ್ಯಾಗ್ಜೇನ್ ಮೂಲಕ ಹರಿಹರಪುರದ ಆಯುರ್ವೇದಾಶ್ರಮದ ಬಗ್ಗೆ ಮಾಹಿತಿ ಪಡೆದುಕೊಂಡು, ಒಮ್ಮೆ ಇಲ್ಲಿಗೆ ಭೇಟಿ ನೀಡಿದ್ದರು. ನಂತರ ನಟಿ ಇಸಾಬೆಲ್ ಅವರಿಗೆ ಇಲ್ಲಿಗೆ ಹೋಗಿ ಚಿಕತ್ಸೆ ಪಡೆಯೋದಕ್ಕೆ ಸಲಹೆ ನೀಡಿದ್ದರು. ಈ ಸಲಹೆಯ ಹಿನ್ನೆಲೆಯಲ್ಲಿ ಇಸಾಬೆಲ್ ಕೊಪ್ಪಗೆ ಬಂದಿದ್ದರು.

    ವಿದೇಶಿಯರಿಗೆ ಚಿಕಿತ್ಸೆ:
    ಚಿಕ್ಕಮಗಳೂರು ಜಿಲ್ಲೆ ಕೊಪ್ಪಾದ ಆರೋಗ್ಯನಿಕೇತನ ಆಯುರ್ವೇದಾಶ್ರಮದಲ್ಲಿ ಸದ್ಯ 15ಕ್ಕೂ ಹೆಚ್ಚು ವಿದೇಶಿಗರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 10 ವರ್ಷದಿಂದ ಆಯುರ್ವೇದ ಚಿಕಿತ್ಸೆ ನಡೆಸುತ್ತಿರುವ ಈ ಆಶ್ರಮದಲ್ಲಿ ಈವರಗೆ ಮೂರು ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆ ಪಡೆದಿದ್ದು, ಈಗಲೂ ವಾರ್ಷಿಕ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕ, ರಷ್ಯಾ, ಜಪಾನ್ ಸೇರಿದಂತೆ ನಾಲ್ಕೈದು ದೇಶದವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ ಆಯುರ್ವೇದ ಹಾಗೂ ಇಲ್ಲಿನ ಪಥ್ಯದ ಚಿಕಿತ್ಸೆಯಿಂದ ನಮ್ಮ ದೇಹದ ಆಂತರಿಕ ಹಾಗೂ ಬಾಹ್ಯ ಸ್ಥಿತಿಗತಿಗಳು ತುಂಬಾ ಬದಲಾಗಿದೆ ಎಂದು ಇಲ್ಲಿನ ಚಿಕಿತ್ಸೆ ಬಗ್ಗೆ ಹರ್ಷ ವ್ಯಕ್ತಪಡಿಸ್ತಾರೆ. ಜೊತೆಗೆ ಅಮೆರಿಕದ ಕೆಲ ವಿದ್ಯಾರ್ಥಿಗಳು ಇಲ್ಲಿನ ಆಯುರ್ವೇದದ ಚಿಕಿತ್ಸೆಯನ್ನು ಕಲಿಯುತ್ತಿದ್ದಾರೆ.