Tag: chicken curry

  • ಚಿಕನ್ ಸಾರು ಖಾಲಿಯಾಗಿದ್ದಕ್ಕೆ ಜಗಳ- ಮಗನನ್ನೇ ಕೊಂದ ಅಪ್ಪ!

    ಚಿಕನ್ ಸಾರು ಖಾಲಿಯಾಗಿದ್ದಕ್ಕೆ ಜಗಳ- ಮಗನನ್ನೇ ಕೊಂದ ಅಪ್ಪ!

    ಮಂಗಳೂರು: ಚಿಕನ್ ಸಾರು ವಿಚಾರವಾಗಿ ಅಪ್ಪ-ಮಗನ ನಡುವೆ ನಡೆದ ಜಗಳ ಮಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಬ್ರಹ್ಮಣ್ಯದ ಗುತ್ತಿಗಾರು (Guttigaru) ಎಂಬಲ್ಲಿ ನಡೆದಿದೆ.

    ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಹಾಗೂ ಮಗ ಶಿವರಾಮ ನಡುವೆ ಕಲಹ ನಡೆದಿದೆ. ಕೋಳಿ ಪದಾರ್ಥದ ವಿಚಾರವಾಗಿ ತಂದೆ ಹಾಗೂ ಮಗನ ನಡುವೆ ಜಗಳ ನಡೆದಿದೆ. ಮಗ ಶಿವರಾಮ ಮನೆಗೆ ಬರುವಾಗ ಕೋಳಿ ಪದಾರ್ಥ (Chicken Curry) ಖಾಲಿಯಾಗಿತ್ತು. ಈ ವಿಚಾರವಾಗಿ ಅಪ್ಪ-ಮಗನ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ತಂದೆ, ಮಗನ ತಲೆಗೆ ಬಡಿಗೆಯಿಂದ ಹೊಡೆದಿದ್ದಾರೆ.

    ತಂದೆ ಕೊಟ್ಟ ಬಲವಾದ ಏಟಿನಿಂದ ತಲೆ ಒಡೆದು ಪುತ್ರ ಶಿವರಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಕೊಲೆ ಆರೋಪಿ ಶೀನನನ್ನ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಶಿವರಾಮ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನ ಅಗಲಿದ್ದಾರೆ. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

  • ಮಟನ್ ಕರಿ ಬದಲಿಗೆ ಚಿಕನ್ ಕರಿ ಡೆಲಿವರಿ – 20 ಸಾವಿರ ದಂಡ ಕಟ್ಟಿದ ರೆಸ್ಟೋರೆಂಟ್

    ಮಟನ್ ಕರಿ ಬದಲಿಗೆ ಚಿಕನ್ ಕರಿ ಡೆಲಿವರಿ – 20 ಸಾವಿರ ದಂಡ ಕಟ್ಟಿದ ರೆಸ್ಟೋರೆಂಟ್

    ಭೋಪಾಲ್: ಫುಡ್ ಡೆಲಿವರಿ ಆ್ಯಪ್‍ಗಳು ಜನರ ಬದುಕನ್ನು ಬಹಳ ಸುಲಭಗೊಳಿಸಿದೆ. ಆದರೆ ಕೆಲವೊಮ್ಮೆ ಇದೇ ಫುಡ್ ಡೆಲಿವರಿ ವಿಚಾರ ಜನರನ್ನು ಆತಂಕಕ್ಕೀಡು ಮಾಡುತ್ತದೆ. ಹೌದು ಇತ್ತೀಚೆಗಷ್ಟೇ ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿರುವ ಜಿವಾಜಿ ಕ್ಲಬ್ ಎಂಬ ರೆಸ್ಟೋರೆಂಟ್ ಸಸ್ಯಾಹಾರಿ ಕುಟುಂಬಕ್ಕೆ ಮಟರ್ ಪನೀರ್ ಕಳುಹಿಸುವ ಬದಲಿಗೆ ಚಿಕನ್ ಕರಿ ಕಳುಹಿಸಿ 20,000ರೂ. ದಂಡ ಪಾವತಿಸಿದೆ.

    ವೃತ್ತಿಯಲ್ಲಿ ವಕೀಲರಾದ ಸಿದ್ಧಾರ್ಥ್ ಶ್ರೀವಾಸ್ತವ ಅವರು, ಫುಡ್ ಡೆಲಿವರಿ ಆ್ಯಪ್ ಮೂಲಕ ಮಟರ್ ಪನೀರ್ ಅನ್ನು ಆರ್ಡರ್ ಮಾಡಿದ್ದರು. ಆದರೆ ಚಿಕನ್ ಕರಿ ಬಂದಿರುವುದನ್ನು ನೋಡಿ ಅವರ ಕುಟುಂಬಸ್ಥರು ಸಾಕ್ ಆಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಮನೆಯವರು ಗ್ರಾಹಕರ ಪರಿಹಾರ ವೇದಿಕೆಗೆ ದೂರು ನೀಡಿದ್ದು, ರೆಸ್ಟೊರೆಂಟ್‍ಗೆ 20,000 ರೂ. ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಜನಾಕ್ರೋಶಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ

    ಈ ಘಟನೆಯು ನಮ್ಮ ಕುಟುಂಬಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವನ್ನುಂಟು ಮಾಡಿದೆ. ಅಲ್ಲದೇ ಈ ವಿಚಾರವನ್ನು ಜಿವಾಜಿ ಕ್ಲಬ್‍ನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಕೀಲರು ಆರೋಪಿಸಿದ್ದರು. ಹೀಗಾಗಿ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಈ ಬಗ್ಗೆ ಕಾನೂನು ಹೋರಾಟ ನಡೆಸಿದ ಸಂದರ್ಭದಲ್ಲಿ ದೂರುದಾರರು ಮಾಡಿದ ವೆಚ್ಚವನ್ನು ಮರುಪಾವತಿಸಲು ಜಿವಾಜಿ ಕ್ಲಬ್ ನಿರ್ದೇಶನ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ನಡೀತು ಕೊಲೆ

    ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ನಡೀತು ಕೊಲೆ

    ಮಡಿಕೇರಿ: ಊಟ ಮಾಡುವ ಸಂದರ್ಭದಲ್ಲಿ ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಕೊಲೆ ನಡೆದಿದೆ.

    25 ವರ್ಷದ ಕುಮಾರ್ ದಾಸ ಕೊಲೆಯಾದ ಯುವಕ. ನಂಜನಗೂಡು ತಾಲೂಕಿನ ಕೊತ್ತೆನಾಹಳ್ಳಿಯ ಕುಮಾರ್ ಮತ್ತು 17 ವರ್ಷದ ಹುಡುಗನ ಜೊತೆ ನಾಲ್ಕೇರಿ ಗ್ರಾಮದ ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 25 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದರು.

    ಸೋಮವಾರ ಸಂಜೆ ಮಹೇಶ್ ಅವರ ಕಾಫಿ ತೋಟದ ಅಂಗಳಲ್ಲಿ ಬಾಡೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸುಮಾರು ರಾತ್ರಿ 10.30ಕ್ಕೆ ಊಟ ಮಾಡುತ್ತಿರುವಾಗ ತನಗೆ ಕಡಿಮೆ ಚಿಕನ್ ಸಾಂಬಾರ್ ಹಾಕಲಾಗಿದೆ ಎಂದು ಬಾಲಕ ಜಗಳ ತೆಗೆದಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ಬ್ಯಾಟ್ ಮತ್ತು ಒಲೆಯಲ್ಲಿದ್ದ ಸೌದೆಯಿಂದ ಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಅಪ್ರಾಪ್ತ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಮಸಾಲ ಎಂದು ಕೀಟನಾಶಕ ಮಿಕ್ಸ್ ಮಾಡಿದ ಅಜ್ಜಿ- ಚಿಕನ್ ಕರ್ರಿ ಸೇವಿಸಿ ಮೊಮ್ಮಕ್ಕಳು ಸಾವು

    ಮಸಾಲ ಎಂದು ಕೀಟನಾಶಕ ಮಿಕ್ಸ್ ಮಾಡಿದ ಅಜ್ಜಿ- ಚಿಕನ್ ಕರ್ರಿ ಸೇವಿಸಿ ಮೊಮ್ಮಕ್ಕಳು ಸಾವು

    – ಅಜ್ಜಿ ಮನೆಯಲ್ಲಿ ರಜಾದಿನಗಳನ್ನ ಕಳೆಯುತ್ತಿದ್ದ ಮಕ್ಕಳು
    – ಸಾವು, ಬದುಕಿನ ಮಧ್ಯೆ ಹೋರಾಡ್ತಿರೋ ಅಜ್ಜಿ

    ಹೈದರಾಬಾದ್: ಚಿಕನ್ ಮಸಾಲ ಎಂದು ಚಿಕನ್ ಕರ್ರಿಗೆ ಕೀಟನಾಶಕ ಮಿಕ್ಸ್ ಮಾಡಿದ್ದು, ಅದೇ ಆಹಾರವನ್ನು ಸೇವಿಸಿ ಮಕ್ಕಳಿಬ್ಬರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ರೋಹಿತ್ (11) ಮತ್ತು ಜೀವನ್ (8) ಎಂದು ಗುರುತಿಸಲಾಗಿದೆ. ಗುಡಿಪಾಲ ಮಂಡಲದ ಎ.ಎಲ್.ಪುರಂನಲ್ಲಿ ಈ ಘಟನೆ ನಡೆದಿದೆ. ಚಿತ್ತೂರು ಗ್ರಾಮೀಣ ಮಂಡಳಿಯ ಚೆರ್ಲೋಪಳ್ಳಿ ಗ್ರಾಮದ ರೋಹಿತ್ ಮತ್ತು ಜೀವನ ಇಬ್ಬರು ತಮ್ಮ ರಜಾದಿನಗಳನ್ನು ಎಎಲ್ ಪುರಂನಲ್ಲಿರುವ ತಮ್ಮ ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದರು.

    ಸೋಮವಾರ ಅಜ್ಜಿ ಗೋವಿಂದಮ್ಮ (70) ಚಿಕನ್ ಕರ್ರಿ ಮಾಡಿದ್ದಾರೆ. ಆದರೆ ಗೋವಿಂದಮ್ಮ ಚಿಕನ್ ಮಸಾಲ ಎಂದು ಕೊಂಡು ಕೀಟನಾಶಕಗಳನ್ನು ಚಿಕನ್ ಕರ್ರಿಗೆ ಬೆರೆಸಿ ಅಡುಗೆ ಮಾಡಿದ್ದರು. ಇದರ ಅರಿವೇ ಇಲ್ಲದೆ ಗೋವಿಂದಮ್ಮ ಪ್ರೀತಿಯಿಂದ ತಾನು ಮಾಡಿದ್ದ ಚಿಕನ್ ಕರ್ರಿಯನ್ನು ಮೊಮ್ಮಕ್ಕಳಿಗೆ ಬಡಿಸಿದ್ದಾರೆ.

    ಕೀಟನಾಶಕ ಮಿಕ್ಸ್ ಮಾಡಿದ್ದ ಆಹಾರ ಸೇವಿಸಿದ ಬಳಿಕ ಮಕ್ಕಳಿಬ್ಬರು ಪ್ರಜ್ಞೆ ತಪ್ಪಿದ್ದಾರೆ. ಅಜ್ಜಿಯೂ ಕೂಡ ಅದೇ ಊಟವನ್ನು ಮಾಡಿದ್ದು, ಅವರು ಕೂಡ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಚಿತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ರೋಹಿತ್ ಮತ್ತು ಜೀವನ್ ಮೃತಪಟ್ಟಿದ್ದಾರೆ.

    ಸದ್ಯಕ್ಕೆ ಅಜ್ಜಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಗ್ರಾಮಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

  • ಭಾರತೀಯ ರೆಸ್ಟೊರೆಂಟ್‍ನಿಂದ ಫ್ರಾನ್ಸ್ ಗೆ ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿ ಡೆಲಿವರಿ!

    ಭಾರತೀಯ ರೆಸ್ಟೊರೆಂಟ್‍ನಿಂದ ಫ್ರಾನ್ಸ್ ಗೆ ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿ ಡೆಲಿವರಿ!

    ಪ್ಯಾರಿಸ್: ಕೆಲವೊಮ್ಮೆ ಆ್ಯಪ್ ಅಥವಾ ಆನ್‍ಲೈನ್ ಮೂಲಕ ಊಟ ಆರ್ಡರ್ ಮಾಡುವಾಗ ಕೆಲವು ಪ್ರದೇಶಗಳಿಗೆ ಡೆಲಿವರಿ ನೀಡಲು ಸಾಧ್ಯವಿಲ್ಲ ಅನ್ನೋದನ್ನ ಕೇಳಿ ಬೇಸವಾಗಿರುತ್ತೆ. ಆದ್ರೆ ಇಂಗ್ಲೆಂಡ್‍ನಲ್ಲಿನ ಭಾರತೀಯ ರೆಸ್ಟೊರೆಂಟ್‍ವೊಂದು 500 ಮೈಲಿ ದೂರಕ್ಕೆ ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿಯನ್ನ ಡೆಲಿವರಿ ಮಾಡಿದೆ ಅಂದ್ರೆ ನೀವು ನಂಬಲೇಬೇಕು.

    ಇಂಗ್ಲೆಂಡ್ ನ ಹ್ಯಾಂಪ್‍ಶೈರ್‍ನಲ್ಲಿರುವ ಆಕಾಶ್ ರೆಸ್ಟೊರೆಂಟಿನಿಂದ ಬ್ರಿಟಿಷ್ ವ್ಯಕ್ತಿಯೊಬ್ಬರಿಗಾಗಿ ಚಿಕನ್ ಫಾಲ್ ಕರ್ರಿ ಜೊತೆಗೆ ಮತ್ತಷ್ಟು ಖಾದ್ಯಗಳನ್ನ ಫ್ರಾನ್ಸ್ ನ ಬಾರ್ಡಿಯಾಕ್ಸ್ ಗೆ ವಿಮಾನದ ಮೂಲಕ ಡೆಲಿವರಿ ಮಾಡಲಾಗಿದೆ.

    ಫ್ರಾನ್ಸ್ ನಲ್ಲಿ ವಾಸವಿರುವ ಪೈಲಟ್ ಜೇಮ್ಸ್ ಎಮೆರಿ ಹಾಗೂ ಅವರ ಸ್ನೇಹಿತರಿಗಾಗಿ ಊಟವನ್ನ 500 ಕಿ.ಮೀ ದೂರ ಕಳಿಸಿಕೊಡಲಾಗಿದೆ. 100 ಚಿಕನ್ ಕರ್ರಿ ಜೊತೆಗೆ, 170 ಡಿಶ್‍ಗಳು, 75 ಪ್ಲೇಟ್ ಅನ್ನ, 100 ಹಪ್ಪಳ ಹಾಗೂ 10 ಮಾವಿನಕಾಯಿ ಚಟ್ನಿಯನ್ನ ಆರ್ಡರ್ ಮಾಡಲಾಗಿತ್ತು. ಆಕಾಶ್ ರೆಸ್ಟೊರೆಂಟ್ ತನ್ನ ಫೇಸ್‍ಬುಕ್ ಪೇಜಿನಲ್ಲಿ ಚಿಕನ್ ಕರ್ರಿಯನ್ನ ಫ್ರಾನ್ಸ್ ಗೆ ಕಳಿಸಿಕೊಡುತ್ತಿರುವ ವಿಡಿಯೋಗಳನ್ನ ಹಂಚಿಕೊಂಡಿದೆ.

    ನಾನು ಕಳೆದ 20 ವರ್ಷಗಳಿಂದ ಆಕಾಶ್ ರೆಸ್ಟೊರೆಂಟಿನ ಗ್ರಾಹಕನಾಗಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲಾ ಫ್ರಾನ್ಸ್ ನಲ್ಲಿ ಸಿಗೋ ಭಾರತೀಯ ಊಟದ ರುಚಿ ಅಷ್ಟೊಂದು ಚೆನ್ನಾಗಿರಲ್ಲ ಅಂತ ದೂರುತ್ತಿರುತ್ತೇನೆ ಅಂತ ಎಮೆರಿ ಹೇಳಿದ್ದಾರೆ. ಎಮೆರಿ ಅತಿಥಿಗಳಂತೂ ಆಕಾಶ್ ರೆಸ್ಟೊರೆಂಟಿನ ಭಾರತೀಯ ಖಾದ್ಯಗಳನ್ನ ಸವಿದು ಆಹಾ… ಎಂದಿದ್ದಾರೆ.

    ಕರ್ರಿಯ ಒಟ್ಟು ಮೊತ್ತ 600-700 ಪೌಂಡ್ಸ್ (ಅಂದಾಜು 50-60ಸಾವಿರ ರೂ.) ಆಗುತ್ತದೆ. ಇವರು ನಮಗೆ ಪ್ರತಿ ತಲೆಗೆ 32 ಕ್ವಿಡ್(ಅಂದಾಜು 2800 ರೂ.) ನೀಡುತ್ತಿದ್ದಾರೆ. 12 ಪೌಂಡ್ಸ್ ಗಿಂತ ಹೆಚ್ಚಿನ ಮೊತ್ತದ ಆರ್ಡರ್‍ಗೆ ಫ್ರೀ ಡೆಲಿವರಿ ನೀಡಲಾಗುತ್ತೆ. ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಆಕಾಶ್ ರೆಸ್ಟೊರೆಂಟಿನ ಫಾಸ್ ಅಹಮದ್ ಹೇಳಿದ್ದಾರೆ.

    ವಿಮಾನದ ಬಾಡಿಗೆ ಮೊತ್ತವೇ 15 ಸಾವಿರ ಪೌಂಡ್ಸ್(ಅಂದಾಜು 13 ಲಕ್ಷ ರೂ.) ಆಗುತ್ತದೆ. ಆದ್ರೆ ಸ್ಪಾನ್ಸರರ್‍ಗಳು ಇದಕ್ಕೆ ನೆರವು ನೀಡಿದ್ದಾರೆ. ತೆಗೆದುಕೊಂಡು ಹೋದ ಊಟವನ್ನ 50 ಅತಿಥಿಗಳಿಗೆ ಬಡಿಸಲಾಗಿದೆ ಎಂದು ವರದಿಯಾಗಿದೆ.

    ಇದರಿಂದ ಆಕಾಶ್ ರೆಸ್ಟೊರೆಂಟ್ ಹಾಗೂ ಫಾಸ್ ಅಹಮದ್ ಅವರಿಗೆ ವಿದೇಶದಲ್ಲಿ ಭಾರೀ ಪಬ್ಲಿಸಿಟಿಯೂ ಸಿಕ್ಕಿದೆ. ಕರ್ರಿ ಬೈ ಏರ್ ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ವರದಿಗಳು ಪ್ರಸಾರವಾಗಿವೆ.

    https://www.facebook.com/TheAkashRest/videos/10156208418829235/

    https://www.facebook.com/TheAkashRest/videos/10156208276479235/