Tag: Chicken Biryani

  • ಕೋಲಾರ| ಮಳೆ, ಚಳಿಯನ್ನೂ ಲೆಕ್ಕಿಸದೇ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಜನ

    ಕೋಲಾರ| ಮಳೆ, ಚಳಿಯನ್ನೂ ಲೆಕ್ಕಿಸದೇ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಜನ

    ಕೋಲಾರ: ರಾಜ್ಯಾದ್ಯಂತ ಜಡಿ ಮಳೆ (Rain) ಸುರಿದು ಚಳಿಯ ವಾತಾವಣರಣ ನಿರ್ಮಾಣವಾಗಿದ್ದರೂ ಮಳೆಯನ್ನು ಲೆಕ್ಕಿಸದೇ ಬಿಸಿಬಿಸಿ ಚಿಕನ್ ಬಿರಿಯಾನಿಗಾಗಿ (Chicken Biryani) ಜನ ಮುಗಿಬಿದ್ದ ಘಟನೆ ಕೋಲಾರ (Kolar) ಜಿಲ್ಲೆ ಮಾಲೂರು (Malur) ಪಟ್ಟಣದಲ್ಲಿ ನಡೆದಿದೆ.

    ಮಾಲೂರು ಪಕ್ಷೇತರ ಪರಾಜಿತ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ 500 ಕೆಜಿ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 4,000 ಜನರಿಗೆ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆ ಊರಿನ ಜನರು ನಾಮುಂದು ತಾಮುಂದು ಎಂದು ಚಿಕನ್ ಬಿರಿಯಾನಿಗಾಗಿ ಪೈಪೋಟಿ ನಡೆಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆ – ನ.23 ರಂದು ಮತ ಎಣಿಕೆ

    ಬಿರಿಯಾನಿ ಪಾತ್ರೆಯ ಸುತ್ತಲೂ ಪ್ಲೇಟ್ ಹಿಡಿದು ನಿಂತು ಜನರು ಬಿರಿಯಾನಿಗಾಗಿ ಪೈಪೋಟಿ ನಡೆಸಿದ್ದಾರೆ. ಈ ವೇಳೆ ಜನರನ್ನು ನಿಯಂತ್ರಿಸಲು ಮುಖಂಡರು ಹರಸಾಹಸವೇ ಪಡಬೇಕಾಯಿತು. ಇದನ್ನೂ ಓದಿ: ನಾನು ರಾಜಕಾರಣ ಮಾತಾಡಲ್ಲ.. ಮೋದಿಗಾಗಿ ಮಾತ್ರ ಮಾತನಾಡ್ತೀನಿ: ಚಕ್ರವರ್ತಿ ಸೂಲಿಬೆಲೆ

  • ಬಿರಿಯಾನಿಗಾಗಿ ನೂಕುನುಗ್ಗಲು- ಜೆಡಿಎಸ್ ಕಾರ್ಯಕರ್ತರನ್ನ ನಿಭಾಯಿಸಲು ಪೊಲೀಸರಿಂದ ಹರಸಾಹಸ

    ಬಿರಿಯಾನಿಗಾಗಿ ನೂಕುನುಗ್ಗಲು- ಜೆಡಿಎಸ್ ಕಾರ್ಯಕರ್ತರನ್ನ ನಿಭಾಯಿಸಲು ಪೊಲೀಸರಿಂದ ಹರಸಾಹಸ

    ಕೋಲಾರ: ಜೆಡಿಎಸ್(JDS) ಅಲ್ಪಸಂಖ್ಯಾತರ ಸಮಾವೇಶದಲ್ಲಿ ಚಿಕನ್ ಬಿರಿಯಾನಿಗಾಗಿ(Chicken Biryani) ನೂಕುನುಗ್ಗಲು ಉಂಟಾಗಿದ್ದು, ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರು(Police) ಹರಸಾಹಸಪಟ್ಟರು.

    ಸಮಾವೇಶದಲ್ಲಿ ಭಾಗವಹಿಸುವ ಜನರಿಗೆ ಕೋಲಾರದಲ್ಲಿ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೋಲಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸುಮಾರು 2,500 ಕೆ.ಜಿ ಚಿಕನ್ ಬಿರಿಯಾನಿ ಸಿದ್ಧತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋಲಾರದ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಬಿರಿಯಾನಿಗಾಗಿ ಜನ ತಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಆದರೆ ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

    ಸಾವಿರಾರು ಮಂದಿ ಅಲ್ಪಸಂಖ್ಯಾತರು ಭಾಗವಹಿಸಿದ್ದ ಸಮಾವೇಶದಲ್ಲಿ ಬಿರಿಯಾನಿ ಗಲಾಟೆ ನಡೆದಿದೆ. ಬಿರಿಯಾನಿ ಖಾಲಿಯಾಗುತಿದ್ದಂತೆ ಕಾರ್ಯಕರ್ತರ ರೋಷಾವೇಶ ವ್ಯಕ್ತಪಡಿಸಿದ್ದು, ಮತ್ತೊಂದು ಬಿರಿಯಾನಿ ಪಾತ್ರ ತರುವಷ್ಟರಲ್ಲಿಯೆ ಕಾರ್ಯಕರ್ತರು ಗಲಾಟೆಗಳಿದಿದ್ದಾರೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ಬೆಂಗಳೂರಿನಲ್ಲಿ ವಿಶಿಷ್ಟ ಸರ್ಕಾರಿ ಆಸ್ಪತ್ರೆ ಲೋಕಾರ್ಪಣೆ

    ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಇಬ್ರಾಹಿಂ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದು, ಸುಮಾರು 10 ರಿಂದ 15 ಸಾವಿರ ಮಂದಿ ಭಾಗವಹಿಸಿದ್ದರು. ಇದನ್ನೂ ಓದಿ: ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ

    Live Tv
    [brid partner=56869869 player=32851 video=960834 autoplay=true]

  • ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ಸೋಮವಾರ ರಂಜಾನ್ ಹಬ್ಬ ಇದೆ. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ನಿಮಗಾಗಿ ರುಚಿಯಾದ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಅಕ್ಕಿ – 1/2 ಕೆ.ಜಿ
    2. ಚಿಕನ್ – 1/2 ಕೆ.ಜಿ
    3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    4. ಎಣ್ಣೆ – 5 ಚಮಚ
    5. ಚಕ್ಕೆ – 3-4
    6. ಲವಂಗ- 10
    7. ಏಲಕ್ಕಿ – 5
    8. ಮರಾಠಿ ಮೊಗ್ಗು – 4
    9. ತುಪ್ಪ- 2 ಚಮಚ
    10. ಗರಂ ಮಸಾಲ – 2 ಚಮಚ

    11. ಖಾರದ ಪುಡಿ – 1 ಚಮಚ
    12. ಅರಿಶಿಣ – 1/2 ಚಮಚ
    13. ದನಿಯಾ ಪುಡಿ – 1 ಚಮಚ
    14. ಈರುಳ್ಳಿ – 2
    15. ಮೊಸರು – ಅರ್ಧ ಕಪ್
    16. ಟೊಮೆಟೊ – 4
    17. ಕೊತ್ತಂಬರಿ ಸೊಪ್ಪು, ಪುದಿನ – ಸ್ವಲ್ಪ
    18. ಉಪ್ಪು – ರುಚಿಗೆ ತಕ್ಕಷ್ಟು
    19. ಹಸಿರು ಮೆಣಸಿನ ಕಾಯಿ – 8

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಮತ್ತು ತುಪ್ಪ ಹಾಕಿ. ಬಿಸಿಯಾಗುತ್ತಿದ್ದಂತೆ ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಈರುಳ್ಳಿ, ಹಸಿರು ಮೆಣಸಿಕಾಯಿ ಹಾಕಿ ಫ್ರೈ ಮಾಡಿ
    * ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿ
    * ಬಳಿಕ ಖಾದರ ಪುಡಿ, ಅರಿಶಿಣ, ಟೊಮೆಟೊ ಹಾಕಿ ಚೆನ್ನಾಗಿ ಮೇಯಿಸಿ.
    * ಈಗ ತೊಳೆದ ಚಿಕನ್, ಮೊಸರು, ಕೊತ್ತಂಬರಿ, ಪುದಿನ ಸೊಪ್ಪು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ.
    * ದನಿಯಾ ಪುಡಿ, ಗರಂ ಮಸಲಾ ಹಾಕಿ ಪ್ಲೇಟ್ ಮುಚ್ಚಿ 15 ನಿಮಿಷ ಚೆನ್ನಾಗಿ ಬೇಯಿಸಿ. (ಕಡಿಮೆ ಉರಿಯಲ್ಲಿ ಬೇಯಿಸಿ)
    * ಈಗ ನಾಲ್ಕು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ, ನೀರು ಕುದಿಯುತ್ತಿದ್ದಂತೆ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ.
    * ನಂತರ ಕುಕ್ಕರ್ 2 ವಿಶಲ್ ಬಂದರೆ ಚಿಕನ್ ಬಿರಿಯಾನಿ ಸವಿಯಲು ರೆಡಿ