Tag: Chickballapur

  • ಸಿಎಂ ರಾಜಕೀಯ ಕಾರ್ಯದರ್ಶಿ ಸಹಿ ಫೋರ್ಜರಿ- ಸಿಕ್ಕಿಬಿದ್ದ ಅಧಿಕಾರಿ

    ಸಿಎಂ ರಾಜಕೀಯ ಕಾರ್ಯದರ್ಶಿ ಸಹಿ ಫೋರ್ಜರಿ- ಸಿಕ್ಕಿಬಿದ್ದ ಅಧಿಕಾರಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ಸಹಿಯನ್ನು ಫೋರ್ಜರಿ ಮಾಡಿ ಓರ್ವ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಬಿ.ಕೆ.ಚಂದ್ರಕಾಂತ್ ಸಿಕ್ಕಿಬಿದ್ದ ಅಧಿಕಾರಿ. ಚಂದ್ರಕಾಂತ್ ತಮ್ಮ ವರ್ಗಾವಣೆಗಾಗಿ ಈ ರೀತಿ ಮಾಡಿದ್ದಾರೆ. ಎಸ್.ಆರ್.ವಿಶ್ವನಾಥ್ ಅವರ ಹೆಸರಿನ ಲೆಟರ್ ಹೆಡ್ ಬಳಸಿ ಸಿಎಂ ಶಿಫಾರಸು ಪತ್ರವನ್ನು ಚಂದ್ರಕಾಂತ್ ತಲುಪಿಸಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾ ಅಧಿಕಾರಿ ವಿಠಲ್ ಕಾವಳೆ ಜಾಗಕ್ಕೆ ತಮ್ಮನ್ನು ವರ್ಗಾಯಿಸುವಂತೆ ಚಂದ್ರಕಾಂತ್ ಮನವಿ ಮಾಡಿದ್ದರು. ನಕಲಿ ಶಿಫಾರಸು ಪತ್ರಕ್ಕೆ ಸಹಿ ಮಾಡಿ ಸಿಎಂ ಕೂಡ ವರ್ಗಾವಣೆ ಆದೇಶ ಹೊರಡಿಸಿದ್ದರು. ಇದೀಗ ಫೋರ್ಜರಿ ಪ್ರಕರಣ ಬಯಲಾಗಿದ್ದು, ಆರೋಪಿ ಚಂದ್ರಕಾಂತ್ ವಿರುದ್ಧ ಪೊಲೀಸ್ ದೂರು ಕೊಡಲು ಎಸ್.ಆರ್.ವಿಶ್ವನಾಥ್ ಮುಂದಾಗಿದ್ದಾರೆ.

    ಪತ್ರದಲ್ಲಿ ಏನಿದೆ?
    ಚಂದ್ರಕಾಂತ್ ಬಿ.ಕೆ. ಸಹಾಯಕ ಕಾರ್ಯದರ್ಶಿಯಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನನಗೆ ಪರಿಚಿತರಿರುತ್ತಾರೆ. ಇವರು ವಯೋವೃದ್ಧ ತಂದೆ-ತಾಯಿಯ ಆರೋಗ್ಯದ ಕಡೆ ಗಮನಿಸಬೇಕಾದ ಕಾರಣ ಅವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯಲ್ಲಿ ಸಹಾಯಕ ಯೋಜನಾ ಅಧಿಕಾರಿ-1 ಆಗಿ ಕಾರ್ಯನಿರ್ವಹಿಸುತ್ತಿರವ ವಿಠಲ್ ಕಾವಳೆ ಜಾಗಕ್ಕೆ ತಮ್ಮನ್ನು ವರ್ಗಾಯಿಸುವಂತೆ ಸೂಕ್ತ ಆದೇಶ ನೀಡಬೇಕು ಎಂದು ಕೋರುತ್ತೇನೆ.

    ಪತ್ರದ ಕೆಳಗೆ ತಮ್ಮ ವಿಶ್ವಾಸಿ ಎಸ್.ಆರ್.ವಿಶ್ವನಾಥ್ ಎಂದು ಬರೆದು ಅವರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಈ ಪತ್ರವನ್ನು ಚಂದ್ರಕಾಂತ್ ಬಿ.ಕೆ. ಸೆಪ್ಟೆಂಬರ್ 18ರಂದು ಸಿಎಂ ಯಡಿಯೂರಪ್ಪ ಅವರಿಗೆ ನೀಡಿದ್ದರು. ಇದಕ್ಕೆ ಸಿಎಂ ಅಕ್ಟೋಬರ್ 9ರಂದು ಸಹಿ ಮಾಡಿದ್ದರು.

  • ದೇವರ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಹಾಗೂ ನಿಷೇಧಿತ ನೋಟು ಪತ್ತೆ

    ದೇವರ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಹಾಗೂ ನಿಷೇಧಿತ ನೋಟು ಪತ್ತೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹಣ್ಯ ಕ್ಷೇತ್ರದ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, 28,18,831 ರೂ. ಹಣ ಸಂಗ್ರಹವಾಗಿದೆ.

    ಪ್ರತಿ ತಿಂಗಳು ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಲಿದ್ದು ಏಪ್ರಿಲ್ ತಿಂಗಳ ಹುಂಡಿ ಎಣಿಕೆ ಕಾರ್ಯ ಇಂದು ನಡೆಯಿತು. ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ರಜಾ ದಿನಗಳಿದ್ದ ಕಾರಣ ದೇವಾಲಯಕ್ಕೆ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗಿದ್ದು, ಅತಿ ಹೆಚ್ಚಿನ ಹಣ ಸಂಗ್ರಹವಾಗಿದೆ.

    ಹುಂಡಿಯಲ್ಲಿ ಬ್ಯಾನ್ ಆಗಿದ್ದ 500 ಮುಖಬೆಲೆಯ 23 ನೋಟುಗಳು ಹಾಗೂ ಅಮೇರಿಕ, ಮಲೇಷ್ಯಾ ಕರೆನ್ಸಿ ಪತ್ತೆಯಾಗಿವೆ. ಇದಲ್ಲದೆ 2 ಗ್ರಾಂ ಬಂಗಾರ ಹಾಗೂ 1 ಕೆಜಿ 250 ಗ್ರಾಂ ಬೆಳ್ಳಿ ಅಭರಣಗಳು ಸಹ ಸಂಗ್ರಹವಾಗಿವೆ. ಈ ಬಾರಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಕ್ತರು ಸಹ ಭಾಗವಹಿಸಿದ್ದರು. ವಿಡಿಯೋ ಚಿತ್ರೀಕರಣದೊಂದಿಗೆ ಎಣಿಕೆ ಕಾರ್ಯ ನಡೆಸಲಾಗಿದೆ.

  • ಸಾವನ್ನಪ್ಪಿದ ಪ್ರೀತಿಯ ಶ್ವಾನಕ್ಕೆ ಸಮಾಧಿ ನಿರ್ಮಿಸಿದ ಕುಟುಂಬ

    ಸಾವನ್ನಪ್ಪಿದ ಪ್ರೀತಿಯ ಶ್ವಾನಕ್ಕೆ ಸಮಾಧಿ ನಿರ್ಮಿಸಿದ ಕುಟುಂಬ

    ಚಿಕ್ಕಬಳ್ಳಾಪುರ: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅದೆಷ್ಟೊ ಮಂದಿ ತಮ್ಮ ಮನೆ ಕಾವಲಿಗೆ ಇರಲಿ ಅಂತ ನಾಯಿಗಳನ್ನ ಸಾಕೋದು ಸಾಮಾನ್ಯ. ಒಂದು ವೇಳೆ ಆ ಸಾಕು ನಾಯಿ ಸತ್ತರೆ ಎಲ್ಲೋ ಬಿಸಾಡಿ ಇಲ್ಲ ಮಣ್ಣಲ್ಲಿ ಮಣ್ಣು ಮಾಡಿ ಸುಮ್ಮನಾಗುತ್ತಾರೆ. ಆದ್ರೆ ಇಲ್ಲೊಂದು ಕುಟುಂಬ ಮಾತ್ರ ಮೃತಪಟ್ಟ ತಮ್ಮ ಪ್ರೀತಿಯ ಶ್ವಾನಕ್ಕೆ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೇರವೇರಿಸಿದ್ದಲ್ಲದೆ, ಶ್ವಾನಕ್ಕೆ ಸಮಾಧಿ ಸಹ ನಿರ್ಮಾಣ ಮಾಡಿ ತಮ್ಮ ಪ್ರೀತಿಯನ್ನ ತೋರಿ ಮಾನವೀಯತೆ ಮೆರೆದಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಸಂತೆ ಮಾರುಕಟ್ಟೆ ಬಳಿಯ ಪ್ರಾವಿಷನ್ ಸ್ಟೋರ್‍ನ ಮಾಲೀಕ ಸುನಿಲ್ ಕುಟುಂಬಸ್ಥರು ತಮ್ಮ ಪ್ರೀತಿಯ ಶ್ವಾನ ಸೋನುವಿಗೆ ಸಮಾಧಿ ನಿರ್ಮಾಣ ಮಾಡಿದ್ದಾರೆ. 14 ವರ್ಷಗಳ ಕಾಲ ತಮ್ಮ ಮನೆ ಮಗಳಾಗಿದ್ದ ಪ್ರೀತಿಯ ಶ್ವಾನ ಸೋನು ಜೂನ್ 14 ರಂದು ವಯೋಸಹಜ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಹೀಗಾಗಿ ಅಂದು ಮನೆ ಮಂದಿಯೆಲ್ಲಾ ಸೇರಿ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ ವಿಧಾನಗಳ ಮೂಲಕ ಅಚ್ಚು ಮೆಚ್ಚಿನ ಶ್ವಾನ ಸೋನುವಿನ ಅಂತ್ಯಕ್ರಿಯೆ ನೇರವೇರಿಸಿದ್ದರು.

    ಮೂರು ದಿನದ ಕಾರ್ಯ ಸೇರಿದಂತೆ 11 ದಿನದ ಕಾರ್ಯ ಸಹ ಮಾಡಿ ಶ್ವಾನ ಸೋನುವಿನ ಮೇಲಿನ ತಮ್ಮ ಪ್ರೀತಿಯನ್ನ ತೋರಿದ್ದರು. ಆದರೆ ಇತ್ತೀಚೆಗೆ ಬಂದ ಪಿತೃ ಪಕ್ಷದ ಸಮಯದಲ್ಲಿ ಪ್ರೀತಿಯ ಶ್ವಾನ ಸೋನುವಿಗೆ ಕಲ್ಲುಗಳ ಮೂಲಕ ಅಚ್ಚು ಕಟ್ಟಾದ ಸಮಾಧಿ ಸಹ ನಿರ್ಮಾಣ ಪೂಜೆ ಪುನಸ್ಕಾರ ಮಾಡಿದ್ದಾರೆ. ಪ್ರೀತಿ ಶ್ವಾನ ಸೋನುವಿಗೆ ಸಮಾಧಿ ನಿರ್ಮಾಣ ಮಾಡಿ ತಮ್ಮ ಮತ್ತಷ್ಟು ಪ್ರೀತಿಯನ್ನ ತೋರಿ ಮಾನವೀಯತೆ ಮರೆದಿದ್ದಾರೆ.

    3 ತಿಂಗಳಿರುವಾಗಲೇ ಸುನಿಲ್ ಮನೆಗೆ ಅತಿಥಿಯಾಗಿ ಬಂದಿದ್ದ ಈ ಶ್ವಾನ, ಕುಟುಂಬದ ಸದಸ್ಯೆ ಆಗಿದ್ದಳು. ಇದಕ್ಕೆ ಸ್ಪಷ್ಟ ನಿದರ್ಶನ, ಸುನೀಲ್ ಅಕ್ಕ ಅವರು ಉದ್ಯೋಗ ಮಾಡುವ ಸಂಸ್ಥೆಗೆ ಕುಟುಂಬದ ಗ್ರೂಪ್ ಫೋಟೋ ನೀಡಬೇಕಾದ ಸಂಧರ್ಭದಲ್ಲಿ ತಮ್ಮ ತಂದೆ-ತಾಯಿ ತಮ್ಮನ ಜೊತೆ ಸೋನು ಕೂಡ ತನ್ನ ಕುಟುಂಬದ ಸದಸ್ಯೆ ಅಂತ ಗ್ರೂಪ್ ಫೋಟೋ ತೆಗೆಸಿಕೊಂಡು ಕೊಟ್ಟಿದ್ರಂತೆ, ಇಂತಹ ಮನೆ ಮಗಳು ಸೋನುವಿನ ಆಗಲಿಕೆ ಈಗಲೂ ಈ ಕುಟುಂಬಸ್ಥರನ್ನ ಕಾಡ್ತಿದೆ.

    ಒಟ್ಟಿನಲ್ಲಿ ಕೆಲವರು ಬದುಕಿದ್ದಾಗಲೇ ಹೆತ್ತರವನ್ನೇ ಬೀದಿ ಪಾಲು ಮಾಡಿ ಆಮಾನವೀಯವಾಗಿ ನಡೆದುಕೊಳ್ತಾರೆ. ಸತ್ತರೂ ಸಹ ಕೊನೆ ಬಾರಿ ನೋಡೋಕು ಹೋಗದವರು ಇದ್ದಾರೆ. ಅಂತಹದರಲ್ಲಿ ಶ್ವಾನಕ್ಕೆ ಸಮಾಧಿ ಕಟ್ಟಿ ಪೂಜೆ ಪುನಸ್ಕಾರ ನೇರೇವೇರಿಸ್ತಿರೋ ಈ ಕುಟುಂಬಸ್ಥರ ಕಾರ್ಯ ನಿಜಕ್ಕೂ ಮಾದರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನಕಲುಕುತ್ತಿದೆ ಮೂಕ ಮಂಗಗಳ ರೋಧನ

    ಮನಕಲುಕುತ್ತಿದೆ ಮೂಕ ಮಂಗಗಳ ರೋಧನ

    ಚಿಕ್ಕಬಳ್ಳಾಪುರ: ಅನುಮಾನಸ್ಫದ ರೀತಿಯಲ್ಲಿ ಮಂಗಗಳು ಅಸ್ವಸ್ಥಗೊಂಡು, ಕೂತಲ್ಲೇ ಕೂತು, ಕನಿಷ್ಠ ಒಂದು ಹೆಜ್ಜೆಯೂ ಇಡಲಾಗದ ನಿತ್ರಾಣ ಸ್ಥಿತಿಗೆ ತಲುಪಿರೋ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಕಳೆದರೆಡು ದಿನಗಳಿಂದ 10 ಕ್ಕೂ ಹೆಚ್ಚು ಕೋತಿಗಳು ಮೃತಪಟ್ಟಿವೆ. ಇನ್ನೂ ಹಲವು ಕೋತಿಗಳು ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕೋತಿಗಳ ಮೂಕವೇದನೆಗೆ ಮರುಗಿದ ಗ್ರಾಮಸ್ಥರು ಕೂಡ ಕೋತಿಗಳಿಗೆ ಆರೈಕೆ ಮಾಡಲು ಮುಂದಾಗಿದ್ದಾರೆ. ಕೋತಿಗಳಿಗೆ ವಿಷ ಪ್ರಾಷನವಾಗಿರುವ ಶಂಕೆ ವ್ಯಕ್ತವಾಗಿದೆ.

    ಇನ್ನೂ ಕೋತಿಗಳ ಜೊತೆಗೆ ಜೇನು ನೊಣಗಳು ಸಹ ಎಲ್ಲಂದರಲ್ಲಿ ಸತ್ತು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾಕೆ ಕೋತಿಗಳು ಅಸ್ವಸ್ಥಗೊಂಡಿವೆ ಅಂತ ಕಾರಣ ತಿಳಿದು ಬಂದಿಲ್ಲ. ಸದ್ಯ ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ, ಅಸ್ವಸ್ಥ ಕೋತಿಗಳಿಗೆ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ.

  • ಮಾವನ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಅಳಿಯ ಅರೆಸ್ಟ್

    ಮಾವನ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಅಳಿಯ ಅರೆಸ್ಟ್

    ಚಿಕ್ಕಬಳ್ಳಾಪುರ: ಮಾವನ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದ ಅಳಿಯ ಪೊಲೀಸರ ಅತಿಥಿಯಾಗಿರುವ ಘಟನೆ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ.

    ನೂರ್ ಮಹಮದ್ ಪೊಲೀಸರ ಅತಿಥಿಯಾಗಿರುವ ಕಳ್ಳ ಅಳಿಯ. ಮೂಲತಃ ಆಂಧ್ರದ ಹಿಂದೂಪುರ ಮೂಲದ ನೂರ್ ಮಹಮದ್ ಗುಡಿಬಂಡೆ ತಾಲೂಕಿನ ರಾಮಪಟ್ಟಣ ಗ್ರಾಮದ ಮಹಬೂಬ್ ಸಾಬ್ ರ ಕಿರಿಯ ಮಗಳು ಕೌಸರ್ ಉನ್ನೀಸಾರನ್ನ ವಿವಾಹವಾಗಿದ್ದ.

    2 ವರ್ಷಗಳ ಹಿಂದೆ ಕೌಸರ್ ಉನ್ನೀಸಾ ಅನಾರೋಗ್ಯದ ಹಿನ್ನೆಲೆಯಲ್ಲಿ ತವರು ಮನೆ ಸೇರಿದ್ದರು. ಮಹಮದ್ ಪತ್ನಿ ಕೌಸರ್ ಉನ್ನೀಸಾರನ್ನ ನೋಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದ. ಮನೆಯಲ್ಲಿ ಹಳೆಯ ಕಾಲದ ಪೆಟ್ಟಿಗೆಯಲ್ಲಿದ್ದ 370 ಗ್ರಾಂ ಚಿನ್ನಾಭರಣಗಳು, 450 ಗ್ರಾಂ ಬೆಳ್ಳಿ ಅಭರಣಗಳು ಸೇರಿದಂತೆ 6000 ರೂ. ನಗದು ಕಳವು ಮಾಡಿ ಪರಾರಿಯಾಗಿದ್ದ.

    ಈ ಸಂಬಂಧ ಅಳಿಯನ ಮೇಲೆ ಅನುಮಾನಗೊಂಡಿದ್ದ ಮಾವ ಮೆಹಬೂಬ್ ಸಾಬ್ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳ ಅಳಿಯ ನೂರ್ ಮಹಮದ್ ನನ್ನ ಬಂಧಿಸಿದ್ದಾರೆ. ಬಂಧಿತನಿಂದ 6000 ರೂ. ನಗದು ಸೇರಿದಂತೆ 11 ಲಕ್ಷದ 35 ಸಾವಿರದ 600 ರೂ. ಮೌಲ್ಯದ ಅಭರಣಗಳನ್ನ ವಶಪಿಡಿಸಿಕೊಂಡಿದ್ದಾರೆ.