Tag: Chetan Sakariya

  • ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಅಹಮದಾಬಾದ್: ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡದ ಬೌಲರ್ ಚೇತನ್ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಚಿಯರ್ ಅಪ್ ಮಾಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‍ನಲ್ಲಿ ಚೇತನ್ ಸಕಾರಿಯಾ ಡೆಲ್ಲಿ ಕಾಪಿಟಲ್ಸ್ ಪರ ಆಡಿದ್ದರು. ಡೆಲ್ಲಿ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿ ಲೀಗ್ ಪಂದ್ಯದಿಂದಲೇ ಹೊರಬಿದ್ದಿತು. ಆದರೆ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಚೇತನ್ ಸಕಾರಿಯಾ 14ನೇ ಆವೃತ್ತಿ ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ರಾಜಸ್ಥಾನ ತಂಡದ ಪರ ಉತ್ತಮ ಪ್ರದರ್ಶನ ತೋರಿ ತನ್ನ ಬೌಲಿಂಗ್ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದರು. ನಂತರ ಕೊರೊನಾದಿಂದಾಗಿ ಐಪಿಎಲ್ ಅರ್ಧದಲ್ಲಿ ಸ್ಥಗಿತಗೊಂಡು ಮನೆಗೆ ಸಕಾರಿಯಾ ಹಿಂದಿರುಗುತ್ತಿದ್ದಂತೆ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಸಂದರ್ಭ ತನಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ತಂದೆಗೆ ಗುಜರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದೆ ಎಂದು ಸಕಾರಿಯಾ ರಾಜಸ್ಥಾನ ತಂಡದ ಸಹಾಯವನ್ನು ನೆನಪಿಸಿಕೊಂಡಿದ್ದರು. ಜೊತೆಗೆ ರಾಜಸ್ಥಾನ ತಂಡಕ್ಕೆ ಯಾವತ್ತು ಚಿರಋಣಿಯಾಗಿರುವುದಾಗಿ ಹೇಳಿಕೊಂಡಿದ್ದರು. ಅದರಂತೆ ಈ ಬಾರಿಯ ಫೈನಲ್‍ನಲ್ಲಿ ಸಕಾರಿಯಾ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿ ತಮ್ಮ ಈ ಹಿಂದಿನ ಮಾತಿನಂತೆ ನಡೆದುಕೊಂಡಿದ್ದಾರೆ. ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    https://twitter.com/Joydip30406345/status/1530957263489290241

    ಇದೀಗ ಸಕಾರಿಯಾರ ಈ ನಡೆ ಕುರಿತಾಗಿ ಅಭಿಮಾನಿಗಳು ಹೊಗಳಿಕೆ ವ್ಯಕ್ತಪಡಿಸುತ್ತಿದ್ದು, ಸಕಾರಿಯಾ ರಾಜಸ್ಥಾನ ತಂಡಕ್ಕೆ ಇಟ್ಟಿರುವ ನಿಷ್ಠೆ ತುಂಬಾ ಅಮೂಲ್ಯವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    ಮುಂಬೈ: ಕೋಲ್ಕತ್ತಾ ತಂಡದ ಆರಂಭಿಕ ಆಟಗಾರ ಆರನ್ ಫಿಂಚ್ ವಿಕೆಟ್ ಪಡೆದ ಡೆಲ್ಲಿ ಬೌಲರ್ ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಮಾಡಿ ನಿನ್ನೆಯ ಪಂದ್ಯದಲ್ಲಿ ಎಲ್ಲರ ಗಮನಸೆಳೆದಿದ್ದಾರೆ.

    ಚೇತನ್ ಸಕಾರಿಯಾ ಡೆಲ್ಲಿ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಆರಂಭದಲ್ಲೇ ಆರನ್ ಫಿಂಚ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಈ ವಿಕೆಟ್ ಕಬಳಿಸಿದ ಬಳಿಕ ಸಕಾರಿಯಾ ಬಲಗೈ ಮುಷ್ಟಿ ಹಿಡಿದು ಎಡಗೈನ ಎರಡು ಬೆರಳುಗಳನ್ನು ಹಣೆಯ ಮೇಲೆ ಇಟ್ಟು ಸಂಭ್ರಮಿಸಿದ್ದರು. ಈ ಸಂಭ್ರಮಾಚರಣೆ ಡ್ರ್ಯಾಗನ್ ಬಾಲ್ Z ಕಾರ್ಟೂನ್ ಪಾತ್ರ ಗೊಕು ರೀತಿ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೊರೊನಾ ಸೋಂಕಿನಿಂದ ತಂದೆಯನ್ನು ಕಳೆದುಕೊಂಡ ಚೇತನ್ ಸಕಾರಿಯಾ

    ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಸಕಾರಿಯಾ, ಇದು ಭಾವನಾತ್ಮಕ ಸಂಭ್ರಮಾಚರಣೆ ನನ್ನ ತಂದೆಗಾಗಿ. ನನ್ನ ತಂದೆ ಯಾವತ್ತು ನಾನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್‌ ವಿಕೆಟ್ ಪಡೆಯುವುದನ್ನು ಎದುರು ನೋಡುತ್ತಿದ್ದರು. ಹಾಗಾಗಿ ತಂದೆಗಾಗಿ ಈ ರೀತಿ ಸಂಭ್ರಮಾಚರಣೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

    IPL DC VS KKR 7

    2021ರಲ್ಲಿ ಸಕಾರಿಯಾ ಐಪಿಎಲ್‍ನಲ್ಲಿ ಆಡುತ್ತಿದ್ದಾಗ ಅವರ ತಂದೆ ಕಾಂಜಿಭಾಯ್ ಸಕಾರಿಯಾಗೆ ಕೊರೊನಾ ಸೋಂಕು ಕಾಣಿಸಿಕೊಂಡು ಮರಣ ಹೊಂದಿದ್ದರು. ಈ ವೇಳೆ ಸಕಾರಿಯಾ ರಾಜಸ್ಥಾನ ಪರ ಉತ್ತಮ ಪ್ರದರ್ಶನ ತೋರಿ ಗಮನಸೆಳೆದಿದ್ದರು. ನಂತರ ಟೀಂ ಇಂಡಿಯಾ ಪರ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡರು. 15ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ಸಕಾರಿಯಾ ಅವರನ್ನು ಡೆಲ್ಲಿ ತಂಡ 4.20 ಕೋಟಿ ರೂ. ನೀಡಿ ಖರೀದಿಸಿತು. ನಿನ್ನೆ 2022ರ ಐಪಿಎಲ್‍ನಲ್ಲಿ ಡೆಲ್ಲಿ ಪರ ಮೊದಲ ಪಂದ್ಯವಾಡಿದ ಸಕಾರಿಯಾ 3 ಓವರ್ ಎಸೆದು 17 ರನ್ ನೀಡಿ 1 ವಿಕೆಟ್ ಪಡೆಯಲು ಯಶಸ್ವಿಯಾದರು.

     

    View this post on Instagram

     

    A post shared by IPL (@iplt20)

    ಈ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ 146 ರನ್‍ಗಳ ಸಾಧರಣ ಮೊತ್ತ ಬೆನ್ನಟ್ಟಿದ ಡೆಲ್ಲಿ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ರನ್ ಸಿಡಿಸಿ 4 ವಿಕೆಟ್‍ಗಳ ಜಯ ದಾಖಲಿಸಿತು.

  • ಕೊರೊನಾ ಸೋಂಕಿನಿಂದ ತಂದೆಯನ್ನು ಕಳೆದುಕೊಂಡ ಚೇತನ್ ಸಕಾರಿಯಾ

    ಕೊರೊನಾ ಸೋಂಕಿನಿಂದ ತಂದೆಯನ್ನು ಕಳೆದುಕೊಂಡ ಚೇತನ್ ಸಕಾರಿಯಾ

    ಗಾಂಧಿನಗರ: ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕಾರಿಯಾ ಅವರ ತಂದೆ ಕಾಂಜಿಭಾಯ್ ಸಕಾರಿಯಾ ಅವರು ಕೊರೊನಾ ಸೋಂಕಿನಿಂದಾಗಿ ಇಂದು ಗುಜಾರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

    ಕೊರೊನಾದಿಂದಾಗಿ ಐಪಿಎಲ್ ಅರ್ಧದಲ್ಲೇ ಸ್ಥಗಿತಗೊಂಡ ಬಳಿಕ ಚೇತನ್ ಸಕಾರಿಯಾ ಮನೆಗೆ ಬಂದಿದ್ದರು. ಈ ವೇಳೆ ಅವರ ತಂದೆ ಕಾಂಜಿಭಾಯ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಗುಜಾರಾತ್‍ನ ಖಾಸಗಿ ಆಸ್ಪತ್ರೆಯೊಂರಲ್ಲಿ ಸೇರಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಟ್ವಿಟ್ಟರ್‍ ನಲ್ಲಿ ತಿಳಿಸಿರುವ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, ಕೊರೊನಾದಿಂದಾಗಿ ಚೇತನ್ ಸಕಾರಿಯಾ ಅವರ ತಂದೆ ಮೃತಪಟ್ಟಿದ್ದಾರೆ ಇದು ದುಂಬಾ ದುಃಖ ತರಿಸಿದೆ. ನಮ್ಮಿಂದ ಸಾಧ್ಯವಾಗುವಷ್ಟು ಚೇತನ್ ಮತ್ತು ಅವರ ಕುಟುಂಬಕ್ಕೆ ಸಹಾಯ ಮಡಲು ಪ್ರಯತ್ನಿಸುತ್ತೇವೆ ಎಂದು ಬರೆದುಕೊಂಡಿದೆ.

    ಕೆಲದಿನಗಳ ಹಿಂದೆ ಚೇತನ ಸಕಾರಿಯಾ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿ ನಾನು ತುಂಬಾ ಅದೃಷ್ಟಶಾಲಿ ಯಾಕೆಂದರೆ ಐಪಿಎಲ್‍ನಲ್ಲಿ ಆಡಿದ್ದಕ್ಕಾಗಿ ರಾಜಸ್ಥಾನ ಫ್ರಾಂಚೈಸಿ ನನಗೆ ಹಣ ಕೊಟ್ಟಿದೆ. ಆ ಹಣವನ್ನು ನಾನು ನನ್ನ ಕುಟುಂಬದ ಕಷ್ಟ ಕಾಲದ ನೆರವಿಗಾಗಿ ಬಳಸುತ್ತಿದ್ದೇನೆ. ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ಇದೀಗ ನನ್ನ ತಂದೆಗೆ ಗುಜಾರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊರೊನಾ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದಿದ್ದರು.

    23 ವರ್ಷದ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು 1.2 ಕೋಟಿ ರೂಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡಿತ್ತು. 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಸಕಾರಿಯಾ ಒಟ್ಟು 7 ಪಂದ್ಯಗಳಿಂದ 7 ವಿಕೆಟ್ ಪಡೆದು ಭರವಸೆ ಮೂಡಿಸಿದ್ದರು.

  • ಐಪಿಎಲ್‍ನಲ್ಲಿ ಸಿಕ್ಕ ಹಣದಿಂದ ತಂದೆಗೆ ಕೊರೊನಾ ಚಿಕಿತ್ಸೆ – ಚೇತನ್ ಸಕಾರಿಯಾ

    ಐಪಿಎಲ್‍ನಲ್ಲಿ ಸಿಕ್ಕ ಹಣದಿಂದ ತಂದೆಗೆ ಕೊರೊನಾ ಚಿಕಿತ್ಸೆ – ಚೇತನ್ ಸಕಾರಿಯಾ

    ಗಾಂಧಿನಗರ: ರಾಜಸ್ಥಾನ ರಾಯಲ್ಸ್ ತಂಡ ಯುವ ವೇಗಿ ಚೇತನ್ ಸಕಾರಿಯಾ ತನ್ನ ತಂದೆಯ ಕೊರೊನಾ ಚಿಕಿತ್ಸೆಗಾಗಿ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣವನ್ನು ವ್ಯಯಿಸುತ್ತಿರುವುದಾಗಿ ತಿಳಿಸಿದ್ದಾರೆ.

    23 ವರ್ಷ ವಯಸ್ಸಿನ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು 1.2 ಕೋಟಿ ರೂಪಾಯಿ ನೀಡಿ ರಾಜಸ್ಥಾನ ತಂಡ ಐಪಿಎಲ್‍ನಲ್ಲಿ ಖರೀದಿ ಮಾಡಿತ್ತು. ಅದರಂತೆ 14ನೇ ಆವೃತ್ತಿಯ ಐಪಿಎಲ್‍ನ ಕೆಲಪಂದ್ಯಗಳಲ್ಲಿ ರಾಜಸ್ಥಾನ ತಂಡದ ಪರ ಸಕಾರಿಯಾ ಕಾಣಿಸಿಕೊಂಡಿದ್ದರು.

    ಸಕಾರಿಯಾ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುವ ಮುಂಚೆ ಸೌರಷ್ಟ್ರ ತಂಡದ ಪರ ಆಡುತ್ತಿದ್ದರು. ಹಲವು ಅಡೆತಡೆಗಳನ್ನು ಮೆಟ್ಟಿನಿಂತು ಕ್ರಿಕೆಟ್‍ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸಕಾರಿಯಾ ಐಪಿಎಲ್‍ಗೂ ಕೆಲದಿನಗಳ ಹಿಂದೆ ತನ್ನ ಸಹೋದರನ ಮರಣದಿಂದ ಕುಗ್ಗಿದ್ದರು. ಬಳಿಕ ಐಪಿಎಲ್‍ನಲ್ಲಿ ರಾಜಸ್ಥಾನ ತಂಡದ ಪರ ಉತ್ತಮ ಪ್ರದರ್ಶನ ತೋರಿ ತನ್ನ ಬೌಲಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ನಂತರ ಐಪಿಎಲ್ ಅರ್ಧದಲ್ಲಿ ಸ್ಥಗಿತಗೊಂಡು ಮನೆಗೆ ಸಕಾರಿಯಾ ಹಿಂದಿರುಗುತ್ತಿದ್ದಂತೆ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಸಂದರ್ಭ ತನಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ಇದೀಗ ಗುಜರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಚೇತನ್ ಸಕಾರಿಯಾ, ನಾನು ತುಂಬಾ ಅದೃಷ್ಟಶಾಲಿ ಯಾಕೆಂದರೆ ಐಪಿಎಲ್‍ನಲ್ಲಿ ಆಡಿದ್ದಕ್ಕಾಗಿ ರಾಜಸ್ಥಾನ ಫ್ರಾಂಚೈಸಿ ನನಗೆ ಹಣ ಕೊಟ್ಟಿದೆ. ಅ ಹಣವನ್ನು ಇದೀಗ ನಾನು ನನ್ನ ಕುಟುಂಬದ ಕಷ್ಟ ಕಾಲದ ನೆರವಿಗಾಗಿ ಬಳಸುತ್ತಿದ್ದೇನೆ ಎಂದಿದ್ದಾರೆ.

    ಇದೀಗ ನನ್ನ ಬಳಿ ಹಣ ಇರುವುದರಿಂದಾಗಿ ನಾನು ನನ್ನ ತಂದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಉತ್ತಮವಾದ ಆಸ್ಪತ್ರೆ ಸೇರಿಸಿದ್ದೇನೆ. ನಮ್ಮದು ಬಡ ಕುಟುಂಬ. ನನ್ನ ಅಮ್ಮನಿಗೆ ಕೋಟಿಗೆ ಎಷ್ಟು ಸೊನ್ನೆ ಎಂಬುದೆ ಗೊತ್ತಿಲ್ಲ, ಆದರೆ ಇದೀಗ ನಾನು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದೇನೆ. ಇದೆಲ್ಲ ಸಿಕ್ಕಿದ್ದು ಐಪಿಎಲ್‍ನಿಂದಾಗಿ ಎಂದು ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.