Tag: Chennai Super King

  • CSK ತಂಡದ ರನ್ ಮೆಷಿನ್ ರೈನಾ ಮೇಲಿದೆ ಹಲವು ಫ್ರಾಂಚೈಸಿಗಳ ಕಣ್ಣು

    CSK ತಂಡದ ರನ್ ಮೆಷಿನ್ ರೈನಾ ಮೇಲಿದೆ ಹಲವು ಫ್ರಾಂಚೈಸಿಗಳ ಕಣ್ಣು

    ಚೆನ್ನೈ: ಐಪಿಎಲ್‍ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಸುರೇಶ್ ರೈನಾ ಸಿಎಸ್‍ಕೆ ಪರ ಹಲವು ದಾಖಲೆಯ ಒಡೆಯ. ಆದರೆ 15ನೇ ಆವೃತ್ತಿ ಐಪಿಎಲ್‍ಗೂ ಮುನ್ನ ಸಿಎಸ್‍ಕೆ ಅವರನ್ನು ಹರಾಜಿಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಈ ರನ್ ಮೆಷಿನ್ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿದೆ.

    ಸಿಎಸ್‍ಕೆ ತಂಡ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಈ ನಾಲ್ಕು ಬಾರಿ ಚಾಂಪಿಯನ್ ಆದಾಗಲೂ ರೈನಾ ಸಿಎಸ್‍ಕೆ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಆಗಿ ತಂಡಕ್ಕೆ ಬಲ ತುಂಬಿದ್ದರು. ಅದಲ್ಲದೆ ಚೆನ್ನೈ ಪರ 171 ಪಂದ್ಯಗಳಿಂದ 1 ಶತಕ ಮತ್ತು 33 ಅರ್ಧಶತಕ ಸಹಿತ 4,687 ರನ್ ಗಳಿಸಿದ್ದಾರೆ. ಇದು ಸಿಎಸ್‍ಕೆ ತಂಡದಲ್ಲಿದ್ದ ಆಟಗಾರನ ವ್ಯಯಕ್ತಿಕ ಹೆಚ್ಚು ರನ್, ಅದೇ ರೀತಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ ಕೂಡ ರೈನಾ. ಇಷ್ಟು ಮಾತ್ರವಲ್ಲದೆ ರೈನಾ ಬ್ಯಾಟಿಂಗ್ ಜೊತೆಗೆ ಅದ್ಭುತ ಫೀಲ್ಡಿಂಗ್ ಕೂಡ ಮಾಡಿದ್ದಾರೆ. ಸಿಎಸ್‍ಕೆ ಪರ ಪರ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಕೂಡ ರೈನಾ ಹೆಸರಲ್ಲೇ ಇದೆ. ಇದನ್ನೂ ಓದಿ: ಬೌಲ್ಡಾದರೂ DRS ಮೊರೆ ಹೋಗಿ ಲೆಜೆಂಡ್ ಎನಿಸಿಕೊಂಡ ಅಶ್ವಿನ್

    ಸಿಎಸ್‍ಕೆ ತಂಡಕ್ಕಾಗಿ ಇಷ್ಟೆಲ್ಲ ಸಾಧನೆ ಮಾಡಿದರೂ ಕೂಡ ರೈನಾರನ್ನು ಚೆನ್ನೈ ತಂಡ ಈ ಬಾರಿ ಮೆಗಾ ಹರಾಜಿಗೆ ಬಿಟ್ಟುಕೊಟ್ಟಿದೆ. ಇದೀಗ ರೈನಾರನ್ನು ಖರೀದಿಸಲು ಯಾವ ತಂಡ ಮುಂದೆಬರಲಿದೆ, ಹರಾಜಿನಲ್ಲಿ ಯಾವ ತಂಡ ರೈನಾ ಮೇಲೆ ಹಣ ಸುರಿಯಲಿದೆ ಎಂಬುದನ್ನು ನೋಡಲು ಜನವರಿ ವರೆಗೆ ಕಾಯಬೇಕಾಗಿದೆ. ಇದನ್ನೂ ಓದಿ: NCA ಮುಖ್ಯಸ್ಥರಾಗಿ ಲಕ್ಷ್ಮಣ್ ಡಿ.13ಕ್ಕೆ ಪದಗ್ರಹಣ

  • ಐಪಿಎಲ್‍ನಲ್ಲಿದೆ ಧೋನಿಗೆ ಸಾಲು ಸಾಲು ದಾಖಲೆಗಳ ಅವಕಾಶ

    ಐಪಿಎಲ್‍ನಲ್ಲಿದೆ ಧೋನಿಗೆ ಸಾಲು ಸಾಲು ದಾಖಲೆಗಳ ಅವಕಾಶ

    ಚೆನ್ನೈ: ಕ್ರೀಡಾ ಲೋಕದ ಬಹು ನಿರೀಕ್ಷಿತ ಕ್ರಿಕೆಟ್ ಟೂರ್ನಿ ಐಪಿಎಲ್ 14 ನೇ ಆವೃತ್ತಿ ಆರಂಭಗೊಂಡಿದೆ. ಭಾರತ ಸಹಿತ ಹಲವು ವಿದೇಶಿ ಆಟಗಾರರು ಟೂರ್ನಿಯಲ್ಲಿ ಆಡುತ್ತಿದ್ದು, ಹಿರಿಯ ಕಿರಿಯ ಆಟಗಾರರ ಮಹಾ ಸಮ್ಮಿಲನವಾಗುತ್ತಿದೆ. ಈಗಾಗಲೇ 13 ಆವೃತ್ತಿಗಳಲ್ಲಿ ಆಡಿರುವ ಹಲವು ಆಟಗಾರರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಪ್ರಾರಂಭಗೊಂಡಿರುವ 14ನೇ ಆವೃತ್ತಿಯಲ್ಲಿ ಮತ್ತೆ ದಾಖಲೆಯ ಪಟ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಇರಾದೆಯಲ್ಲಿ ಹಲವು ಆಟಗಾರರು ಇದ್ದಾರೆ. ಇದೇ ಹಾದಿಯಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಇದ್ದು, ಇವರಿಗೆ ಐಪಿಎಲ್‍ನಲ್ಲಿ ಹಲವು ದಾಖಲೆಗಳನ್ನು ಮಾಡುವ ಸುವರ್ಣ ಅವಕಾಶವಿದೆ.

    ಭಾರತ ತಂಡದ ಯಶಸ್ವಿ ನಾಯಕನಾಗಿ ನಿವೃತ್ತಿ ಹೊಂದಿರುವ ಧೋನಿ ಐಪಿಎಲ್‍ನಲ್ಲಿ ಮಾತ್ರ ಆಡುತ್ತಿದ್ದಾರೆ. ಕಳೆದ 13 ಆವೃತ್ತಿಗಳಲ್ಲಿ ಐಪಿಎಲ್‍ನಲ್ಲಿ ಬಿಗ್‍ಹಿಟ್ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಮಾಹಿ ಈ ಬಾರಿ ಐಪಿಎಲ್‍ನಲ್ಲಿ 179 ರನ್ ಬಾರಿಸಿದರೆ, ಅಂತಾರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್ ನಲ್ಲಿ 7000 ರನ್ ಬಾರಿಸಿದ ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಈ ಬಾರಿ ಈ ದಾಖಲೆಯ ನಿರೀಕ್ಷೆಯಲ್ಲಿದ್ದಾರೆ ಎಂಎಸ್‍ಡಿ ಅಭಿಮಾನಿಗಳು.

    ಐಪಿಎಲ್ ಎಂದರೆ ಸಿಕ್ಸರ್ ಸಿಡಿಸುವ ದಾಂಡಿಗರ ಹಬ್ಬ ಈ ಹಬ್ಬದಲ್ಲಿ ಧೋನಿ ಕೂಡ ಹೆಸವಾಸಿಯಾಗಿದ್ದಾರೆ. ಅದರಲ್ಲೂ ಧೋನಿ ಐಪಿಎಲ್ ಕೆರಿಯರ್‍ ನ ಕೊನೆಯ ಓವರ್, 20ನೇ ಓವರ್‍ ನಲ್ಲಿ ಒಟ್ಟು 49 ಸಿಕ್ಸರ್‍ ಗಳನ್ನು ಈಗಾಗಲೇ ಸಿಡಿಸಿದ್ದಾರೆ ಇನ್ನು ಕೊನೆಯ ಓವರ್‍ ನಲ್ಲಿ ಒಂದು ಸಿಕ್ಸ್ ಸಿಡಿಸಿದರೆ 20ನೇ ಓವರ್‍ ನಲ್ಲಿ 50 ಸಿಕ್ಸ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಧೋನಿ ಪಾಲಾಗಲಿದೆ. ಹಾಗೆ ಐಪಿಎಲ್‍ನಲ್ಲಿ ಧೋನಿ ಒಟ್ಟು 209 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

    ಇದರೊಂದಿಗೆ ವಿಕೆಟ್ ಹಿಂದೆ ಮ್ಯಾಜಿಕ್ ಮಾಡುವ ಧೋನಿ 204 ಪಂದ್ಯಗಳಲ್ಲಿ 4632 ರನ್ ಗಳಿಸಿದ್ದಾರೆ. ಅವರು ಇನ್ನು 368 ರನ್ ಸಿಡಿಸಿದರೆ ವಿಕೆಟ್ ಕೀಪರ್ ಆಗಿ ಐಪಿಎಲ್‍ನಲ್ಲಿ 5000 ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಐಪಿಎಲ್‍ನಲ್ಲಿ 110 ಕ್ಯಾಚ್‍ಗಳನ್ನು ಹಿಡಿಯುವ ಮೂಲಕ ಅತೀ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್ ಅವರ ದಾಖಲೆಯನ್ನು ಮುರಿಯಲು ಧೋನಿಗೆ ಇನ್ನು ಕೇವಲ 2 ಕ್ಯಾಚ್ ಬೇಕಾಗಿದ್ದು, ಈಗಾಗಲೇ 109 ಕ್ಯಾಚ್ ಹಿಡಿದು ಕಾರ್ತಿಕ್ ನಂತರದ ಸ್ಥಾನದಲ್ಲಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಇಬ್ಬರು ಆಟಗಾರರು ಆಡುತ್ತಿದ್ದು ಯಾರ ಹೆಸರಲ್ಲಿ ಈ ದಾಖಲೆ ನಿರ್ಮಾಣವಾಗುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

    ಇಷ್ಟೆಲ್ಲ ಪ್ರಮುಖ ದಾಖಲೆಗಳ ಒಡೆಯನಾಗಲು ಈಗಾಗಲೇ ರಾಂಚಿ ರ‍್ಯಾಂಬೋ ಸಿದ್ಧವಾಗಿದ್ದು ಮುಂದಿನ ಪಂದ್ಯಗಳಲ್ಲಿ ಮಾಹಿಯ ಬ್ಯಾಟಿಂಗ್ ಸೊಗಸನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

  • ಐಪಿಎಲ್ ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ ಶುರುವಾಯ್ತು ‘ಸಾಂಬಾರ್ ವಾರ್’

    ಐಪಿಎಲ್ ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ ಶುರುವಾಯ್ತು ‘ಸಾಂಬಾರ್ ವಾರ್’

    ಬೆಂಗಳೂರು: 2019ರ ಐಪಿಎಲ್ ಆವೃತ್ತಿ ಆರಂಭದ ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಹಾಲಿ ಚಾಂಪಿಯನ್ ಚೆನ್ನೈ ಹಾಗೂ ಆರ್ ಸಿಬಿ ನಡುವೆ ಟ್ವಿಟ್ಟರ್ ವಾರ್ ಆರಂಭವಾಗಿದೆ.

    ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹಾಲಿ ನಾಯಕ ಇತ್ತಂಡಗಳ ನಾಯಕತ್ವವನ್ನು ವಹಿಸಿದ್ದು, ಪಂದ್ಯ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದರ ನಡುವೆಯೇ ಆರ್ ಸಿಬಿ ಟ್ವಿಟ್ಟರ್ ನಲ್ಲಿ ಮೊದಲ ಪಂದ್ಯದ ಬಗ್ಗೆ ಟ್ವೀಟ್ ಮಾಡಿ ಪಂದ್ಯಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದೆ.

    ಆರ್ ಸಿಬಿ ಸ್ಪೈಸಿ ಸೌತ್ ಇಂಡಿಯನ್ ಸ್ಟಾರ್ಟರ್ಸ್ ಆದರೆ ನಾವು ಸ್ವೀಟ್ ಸಾಂಬಾರ್ ಇಷ್ಟಪಡುತ್ತೇವೆ ಎಂದು ಟ್ವೀಟ್ಟರ್ ನಲ್ಲಿ ಆರ್ ಸಿಬಿ ಬರೆದುಕೊಂಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಚೆನ್ನೈ, ಸಾಂಬಾರ್ ಯಾವತ್ತಿದ್ದರೂ ಹಳದಿ ಬಣ್ಣವಲ್ಲವೇ ಎಂದು ಹೇಳಿ ಆರ್ ಸಿಬಿ ಕಾಲೆಳೆಯಲು ಪ್ರಯತ್ನಿಸಿದೆ. ಎರಡು ತಂಡಗಳ ಟ್ವೀಟ್ ಗಳಿಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಸಾಂಬಾರ್ ಯಾವಾಗಲೂ ಕೆಪ್ಪು ಬಣ್ಣದಲ್ಲಿ ಇರುತ್ತದೆ ಎಂದು ಟ್ವಿಟ್ವಿಗರೊಬ್ಬರು ಬರೆದುಕೊಂಡಿದ್ದಾರೆ.

    ಅಂದಹಾಗೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ ಸಿಬಿ ನಡುವಿನ ಪಂದ್ಯ ಮಾರ್ಚ್ 23 ರಂದು ಚೆನ್ನೈನ ಪಿ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಕಳೆದ ಟೂರ್ನಿಯಲ್ಲಿ 2 ವರ್ಷಗಳ ಬ್ಯಾನ್ ಬಳಿಕ ಕಮ್ ಬ್ಯಾಕ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ  3ನೇ ಬಾರಿ ಕಪ್ ಗೆದ್ದು ಸಂಭ್ರಮಿಸಿತ್ತು. ಇತ್ತ ಮೂರು ಬಾರಿ ರನ್ನರ್ ಆಪ್ ಆಡಿರುವ ಆರ್ ಸಿಬಿ ಮೊದಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv