Tag: chennai express

  • ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    `ಸಿಂಗಂ’ ಮತ್ತು `ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರಗಳನ್ನು ನಿರ್ದೇಶನ ಮಾಡುವುದರ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ನಿರ್ದೇಶಕ ಕಮ್ ನಿರ್ಮಾಪಕ ರೋಹಿತ್ ಶೆಟ್ಟಿ ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಅವರ ಬಯೋಪಿಕ್ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಚಿತ್ರಗಳನ್ನ ನಿರ್ದೇಶನ ಮತ್ತು ನಿರ್ಮಾಣ ಮಾಡುವುದರ ಮೂಲಕ ಗಮನ ಸೆಳೆದಿರೋ ರೋಹಿತ್ ಶೆಟ್ಟಿ ಈ ಬಾರಿ ಖಡಕ್ ಪೊಲೀಸ್ ಆಫೀಸರ್ ಕಥೆಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಮುಂಬೈನ ಮಾಜಿ ಕಾಪ್ ರಾಕೇಶ್ ಮಾರಿಯಾ ಜೀವನ ಚರಿತ್ರೆಯನ್ನ ರಿಲಯನ್ಸ್ ಎಂಟರ್‌ಟೈನ್ಮೆಂಟ್‌ನೊಂದಿಗೆ ಈ ಚಿತ್ರ ನಿರ್ಮಾಣ ಮಾಡಲು ಸಾಥ್ ನೀಡಿದ್ದಾರೆ.

    ರಾಕೇಶ್ ಮಾರಿಯಾ ಮುಂಬೈನ ಖಡಕ್ ಪೊಲೀಸ್ ಆಧಿಕಾರಿಯಾಗಿದ್ರು. 36 ವರ್ಷಗಳ ಕಾಲ ಭಯೋತ್ಪಾದನೆಯ ಮುಖವನ್ನು ಹತ್ತಿರದಿಂದ ನೋಡಿದರು. ಮುಂಬೈನಲ್ಲಿ ಸಾಕಷ್ಟು ಮೇಜರ್ ಸನ್ನಿವೇಷಗಳ ಕುರಿತು ಸಿನಿಮಾ ಮಾಡಲಾಗುತ್ತಿದೆ. 2020ರ ರಾಕೇಶ್ ಮಾರಿಯಾ ಅವರ ಜೀವನ ಚರಿತ್ರೆಯನ್ನ `ಲೆಟ್ ಮಿ ಸೇ ಇಟ್ ನೌ’ ಪುಸ್ತಕದ ಮೂಲಕ ಅನಾವರಣ ಮಾಡಲಾಗಿತ್ತು. ಇದೀಗ ಇದೇ ಬಯೋಗ್ರಫಿ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಇದನ್ನೂ ಓದಿ: ಸಾನಿಯಾ ಮಿರ್ಜಾ ಮಗನ ರೇಟು ರೂ.500 ಎಂದ ನಿರ್ದೇಶಕಿ ಫರಾ ಖಾನ್

    ಇತ್ತೀಚೆಗಷ್ಟೆ ನಿರ್ಮಾಪಕ ರಾಕೇಶ್ ಮಾರಿಯಾ ಅವರನ್ನ ಭೇಟಿಯಾಗಿ ಅವರ ಬಯೋಪಿಕ್ ಕುರಿತು ಮಾತಾನಾಡಿದ್ದಾರೆ. ಈ ಸುದ್ದಿ ಕೇಳಿ ಮಾಜಿ ಪೊಲೀಸ್ ಅಧಿಕಾರಿ ರಾಕೇಶ್ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಖಡಕ್ ಪೊಲೀಸ್ ಅಧಿಕಾರಿಯಾಗಿ ಅದ್ಯಾವ ಬಿಟೌನ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಅಂತಾ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಕೆರಳಿಸಿದೆ.

  • ‘ಚೆನ್ನೈ ಎಕ್ಸ್‌ಪ್ರೆಸ್‌’ ನಿರ್ಮಾಪಕನ ಮಗಳಿಗೆ ಕೊರೊನಾ

    ‘ಚೆನ್ನೈ ಎಕ್ಸ್‌ಪ್ರೆಸ್‌’ ನಿರ್ಮಾಪಕನ ಮಗಳಿಗೆ ಕೊರೊನಾ

    ಮುಂಬೈ: ‘ಚೆನ್ನೈ ಎಕ್ಸ್‌ಪ್ರೆಸ್‌’ ಸಿನಿಮಾ ನಿರ್ಮಾಪಕ ಕರೀಮ್ ಮೊರಾನಿ ಅವರ ಪುತ್ರಿ ಶಾಜಾ ಮೊರಾನಿಗೂ ಕೊರೊನಾ ಪಾಸಿಟಿವ್ ಬಂದಿದೆ.

    ಸದ್ಯಕ್ಕೆ ಶಾಜಾ ಮೊರಾನಿಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾದಿಂದ ಇಡೀ ದೇಶವನ್ನು ಲಾಕ್‍ಡೌನ್ ಮಾಡುವ ಮುನ್ನ ಶಾಜಾ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಬಂದಿದ್ದರು. ಹೀಗಾಗಿ ಕೊರೊನಾ ಸೋಂಕು ಹರಡಿದೆ ಎಂದು ವರದಿಯಾಗಿದೆ. ಅವರ ಕುಟುಂಬದ ಇತರ ಸದಸ್ಯರೂ ಕೂಡ ಕ್ವಾರಂಟೈನ್‍ನಲ್ಲಿದ್ದು, ಶೀಘ್ರದಲ್ಲೇ ಅವರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ.ಶಾಜಾ ಮೊರಾನಿಗೆ ಏಪ್ರಿಲ್ 5 ರಂದು ಸಂಜೆ ವೇಳೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

    ಶಾಜಾ ತನ್ನ ಪೋಷಕರು ಮತ್ತು ಸಹೋದರಿ ಜೊಯಾ ಮೊರಾನಿ ಜೊತೆಯಲ್ಲಿ ಜುಹು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಜುಹುನಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ. ಇದೇ ಪ್ರದೇಶದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್, ಶತ್ರುಘ್ನ ಸಿನ್ಹಾ, ಹೃತಿಕ್ ರೋಶನ್ ಮತ್ತು ಜೀತೇಂದ್ರ ಸೇರಿದಂತೆ ಇತರರು ವಾಸಿಸುತ್ತಿದ್ದಾರೆ.

    ಈಗಾಗಲೇ ಮೊರಾನಿ ವಾಸಿಸುತ್ತಿದ್ದ ಏರಿಯಾ ಸಂಪೂರ್ಣ ಲಾಕ್‍ಡೌನ್ ಆಗಿದೆ. ಶಾಜಾ ಮೊರಾನಿ ಅವರ ಕುಟುಂಬದಲ್ಲಿ 9 ಜನರಿದ್ದಾರೆ. ಎಲ್ಲಾ ಸದಸ್ಯರನ್ನು ಏಪ್ರಿಲ್ 6 ರಂದು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಿನಿಮಾ ಇಂಡಸ್ಟ್ರಿಯ ಕುಟುಂಬದಿಂದ ಬಂದಿರುವ ಶಾಜಾಗೆ ಬಾಲಿವುಡ್‍ನಲ್ಲಿ ಅನೇಕ ಸ್ನೇಹಿತರಿದ್ದಾರೆ. ಆಕೆಯ ತಂದೆ ಕರೀಮ್ ಮೊರಾನಿ ಮತ್ತು ಶಾರುಖ್ ಖಾನ್ ಅವರು ಆಪ್ತ ಸ್ನೇಹಿತರಾಗಿದ್ದು, ದೀಪಿಕಾ ಪಡುಕೋಣೆ ಅಭಿನಯದ ‘ಚೆನ್ನೈ ಎಕ್ಸ್‌ಪ್ರೆಸ್’ ಸೇರಿದಂತೆ ಅವರ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

    ಶಾಜಾ ಮೊರಾನಿ ಕೂಡ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಬಾಲಿವುಡ್ ಗಾಯಕಿ ಕನಿಕಾ ಕಪೂರ್ ನಂತರ ಶಾಜಾ ಮೊರಾನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕನಿಕಾಗೆ ಕೊರೊನಾ ಸೋಂಕು ತಗುಲಿರೋದು ಮಾರ್ಚ್ 20ರಂದು ದೃಢಪಟ್ಟಿತ್ತು. ಅಂದಿನಿಂದಲೇ ಐಸೋಲೇಷನ್ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಮಾರ್ಚ್ 30ರ ನಂತರ ಕನಿಕಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಇದೀಗ 16 ದಿನಗಳ ಬಳಿಕ ಆಸ್ಪತ್ರೆಯಿಂದ ಕನಿಕಾ ಕಪೂರ್ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಗಾಯಕಿಗೆ ಲಕ್ನೋನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

  • ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

    ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

    ಯಾದಗಿರಿ/ರಾಯಚೂರು: ಅಹಮದಾಬಾದ್- ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಖದೀಮ ಕಳ್ಳರು ಇಂದು ನಸುಕಿನ ಜಾವ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ರೈಲು ವಾಡಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ವಾಡಿ-ಯಾದಗಿರಿ ಮಧ್ಯೆ ಗಾಡಿ ಹತ್ತಿದ ಕಳ್ಳರು ಚಾಕು ತೋರಿಸಿ ನಾಲ್ವರು ಪ್ರಯಾಣಿಕರನ್ನು ದೋಚಿದ್ದಾರೆ.

     

    ಜೇಬುಗಳಿಗೆ ಕತ್ತರಿಹಾಕಿದ್ದು 50 ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಎಸ್-5 ಬೋಗಿಯಲ್ಲಿ ಮಹಿಳೆಯೊಬ್ಬರ ಸರ ಕದಿಯಲು ಮುಂದಾದಾಗ ಮಹಿಳೆ ಕೂಗಿಕೊಂಡಿದ್ದಾರೆ. ರಾಮಚಂದ್ರ ಎಂಬುವವರಿಗೆ ಚಾಕು ತೋರಿಸಿ ಬೆದರಿಸಿ 10 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ.

    ಕಳ್ಳರನ್ನ ಹಿಡಿಯಲು ಮುಂದಾದ ಪ್ರಯಾಣಿರೊಬ್ಬರಿಗೆ ಥಳಿಸಿ ಕಳ್ಳರು ಪರಾರಿಯಾಗಿದ್ದಾರೆ. ಮೂರು ಜನ ಕಳ್ಳರ ಗುಂಪು ಈ ಕೃತ್ಯವೆಸಗಿದೆ. ಕಳ್ಳತನ ಹಿನ್ನೆಲೆ ಯಾದಗಿರಿ ನಿಲ್ದಾಣಕ್ಕೆ 5:20 ಆಗಮಿಸಿದ ರೈಲ್ವೆ ಗಾಡಿ 50 ನಿಮಿಷ ನಿಲ್ದಾಣದಲ್ಲಿಯೇ ನಿಂತು ತಡವಾಗಿ ತೆರಳಿದೆ.

    ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.