Tag: Charaka

  • ಗುಜರಾತ್‍ನಲ್ಲಿ ತಾಯಿ ಹೀರಾಬೆನ್‌ರನ್ನು ಭೇಟಿಯಾದ ಮೋದಿ

    ಗುಜರಾತ್‍ನಲ್ಲಿ ತಾಯಿ ಹೀರಾಬೆನ್‌ರನ್ನು ಭೇಟಿಯಾದ ಮೋದಿ

    ಗಾಂಧಿನಗರ: ಗುಜರಾತಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಅವರನ್ನು ಶನಿವಾರ ಸಂಜೆ ಭೇಟಿಯಾಗಿದ್ದಾರೆ.

    ಎರಡು ದಿನಗಳ ಕಾಲ ಗುಜರಾತ್‍ಗೆ ಭೇಟಿ ನೀಡಿರುವ ಮೋದಿ ಅವರು ಶನಿವಾರ ಅಹಮದಾಬಾದ್‍ನಲ್ಲಿ ನಡೆದ ಖಾದಿ ಉತ್ಸವದಲ್ಲಿ ಭಾಗವಹಿಸಿದರು. ನಂತರ ಸಂಜೆ ಗಾಂಧಿನಗರದ ರೈಸನ್ ಪ್ರದೇಶದಲ್ಲಿರುವ ನಿವಾಸದಲ್ಲಿ ಹೀರಾಬೆನ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾಲ ಕಳೆದರು ಎಂದು ಅವರ ಕಿರಿಯ ಸಹೋದರ ಪಂಕಜ್ ಮೋದಿ ಹೇಳಿದ್ದಾರೆ.

    ಭಾನುವಾರ ಕಛ್ ಮತ್ತು ಗಾಂಧಿನಗರದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಶನಿವಾರ ರಾತ್ರಿ ಗಾಂಧೀನಗರದಲ್ಲಿಯೇ ಕಳೆದಿದ್ದಾರೆ. ಇದನ್ನೂ ಓದಿ: ಮುಂಬರುವ ಹಬ್ಬಗಳಲ್ಲಿ ಖಾದಿ ಉತ್ಪನ್ನಗಳನ್ನೇ ಗಿಫ್ಟ್ ಕೊಡಿ – ಜನರಿಗೆ ಮೋದಿ ಕರೆ

    ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮಹತ್ವವನ್ನು ನೆನಪಿಸಿಕೊಳ್ಳುವ ಸಲುವಾಗಿ ಸಾಬರಮತಿ ನದಿ ತೀರದಲ್ಲಿಂದು ಆಯೋಜಿಸಿದ್ದ `ಖಾದಿ ಉತ್ಸವ’ದಲ್ಲಿ ಮಾತನಾಡಿದ ಅವರು, ಚರಕದೊಂದಿಗೆ ತಾವು ಹೊಂದಿದ್ದ ಸಂಬಂಧವನ್ನು ಮತ್ತು ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ತಾಯಿ ಚರಕದಲ್ಲಿ ಕೆಲಸ ಮಾಡುತ್ತಿದ್ದದ್ದನ್ನು ನೆನಪಿಸಿಕೊಂಡರು.

    ಮುಂಬರುವ ಹಬ್ಬಗಳಲ್ಲಿ ಈ ಬಾರಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಖಾದಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ಕೊಡಿ. ನೀವು ಹಲವು ರೀತಿಯ ಬಟ್ಟೆಗಳನ್ನು ಹೊಂದಿರಬಹುದು. ಆದರೆ ಖಾದಿಗೆ ಸ್ಥಾನ ನೀಡಿದರೆ `ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    Live Tv
    [brid partner=56869869 player=32851 video=960834 autoplay=true]

  • ಉತ್ಪಾದನೆ ಸ್ಥಗಿತಗೊಳಿಸಿದ ಹೆಗ್ಗೋಡು ಚರಕ ಸಂಸ್ಥೆ

    ಉತ್ಪಾದನೆ ಸ್ಥಗಿತಗೊಳಿಸಿದ ಹೆಗ್ಗೋಡು ಚರಕ ಸಂಸ್ಥೆ

    ಶಿವಮೊಗ್ಗ: ಕಳೆದ 30 ವರ್ಷಗಳಿಂದ ಯಾವುದೇ ಸಂಕಷ್ಟವಿಲ್ಲದ ನಡೆಸಲಾಗುತ್ತಿದ್ದ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಚರಕ ಸಂಸ್ಥೆ ಸದ್ಯ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

    ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಹಾಗೂ ಹೆಣ್ಣು ಮಕ್ಕಳು ಚರಕದಲ್ಲಿ ನೂಲು ನೇಯಬೇಕೆಂಬ ಕನಸು ಕಂಡಿದ್ದ ಗಾಂಧೀಜಿಯವರ ಆಶಯದಂತೆ ನಡೆದಿದ್ದ ಚರಕ ಸಂಸ್ಥೆ ಕೊರೊನಾ ಲಾಕ್‍ಡೌನ್ ನಿಂದಾಗಿ ಚೇತರಿಸಿಕೊಳ್ಳಲು ಆಗದೇ ನಷ್ಟದ ಹಾದಿ ಹಿಡಿದಿದ್ದು, ಇದಕ್ಕೆ ಚೇತರಿಕೆ ನೀಡಬೇಕಾದ ಸರ್ಕಾರ ಮಾತ್ರ ನಿದ್ರೆಗೆ ಜಾರಿದೆ.

    ಕೊರೊನಾ ಲಾಡೌನ್ ಹಿನ್ನೆಲೆಯಲ್ಲಿ ಕೈಮಗ್ಗದ ಉತ್ಪನ್ನಗಳು ಮಾರುಕಟ್ಟೆಯನ್ನು ಕಳೆದುಕೊಂಡಿವೆ. ಇಲ್ಲಿನ ಹೊನ್ನೇಸರದಲ್ಲಿರುವ ಚರಕ ಮಹಿಳಾ ವಿವಿಧೋದ್ದೇಶ ಸಂಘವು ಆಗಸ್ಟ್ 28 ರಿಂದ ದಿವಾಳಿ ಘೋಷಿಸಿಕೊಂಡಿದ್ದು, ನೇಕಾರರಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನಿಲ್ಲಿಸಿದೆ.

    ಪ್ರಸ್ತುತ ಕೊರೊನಾ ಸಂಕಷ್ಟದಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿದಿದೆ. ಲಾಕ್‍ಡೌನ್ ಸಮಯದಲ್ಲಿ ಉತ್ಪಾದಿಸಿದ ಕೈಮಗ್ಗದ ಸಿದ್ಧ ಉಡುಪುಗಳು ಬಿಕರಿಯಾಗದೆ ಗೋದಾಮಿನ ತುಂಬಾ ತುಂಬಿದೆ. ಉತ್ಪಾದಿಸಿದ ಕೈಮಗ್ಗ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಸಿಗದೇ ಇರುವುದರಿಂದ ಇನ್ನಷ್ಟು ಉತ್ಪಾದಿಸುವ ಶಕ್ತಿ ಚರಕ ಸಂಸ್ಥೆಗೆ ಇಲ್ಲವಾಗಿದೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಕೋವಿಡ್ ಮತ್ತು ಆರ್ಥಿಕ ಸಂಕಷ್ಟ ಕಾರಣವಾದರೆ, ಬಹಳ ದೊಡ್ಡಮಟ್ಟದಲ್ಲಿ ಕಾರಣವಾಗಿರುವುದು ನಮ್ಮ ಅಧಿಕಾರ ಶಾಹಿ ಅವರ ಮಾನಸಿಕ ಸ್ಥಿತಿ. ಸುಮಾರು ಎರಡೂವರೆ ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಅದು ಬ್ಯಾಲೆನ್ಸ್ ಇದ್ದು ಇದೇ ಚರಕ ಸಂಸ್ಥೆ ನಿಲ್ಲಲು ಕಾರಣವಾಗಿದೆ.

    ಅಷ್ಟಕ್ಕೂ ಚರಕ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿಕೊಂಡಿದ್ದರೂ ಗ್ರಾಮೀಣ ಬಡ ಜನರ ಕೈಗೆ ಕೆಲಸ ನೀಡಲೇಬೇಕೆಂಬ ನಿಟ್ಟಿನಲ್ಲಿ ಪಣತೊಟ್ಟು ಮಣ್ಣಿನ ಕೆಲಸ, ಸಾರ್ವಜನಿಕ ಕೆರೆ ಅಭಿವೃದ್ಧಿ ಹಾಗೂ ಹಸೆ ಚಿತ್ತಾರ ಇನ್ನಿತರೇ ಕೆಲಸವನ್ನು ಚರಕ ಸಂಸ್ಥೆ ಪ್ರಾರಂಭಿಸಿದೆ.

    ಆಗಸ್ಟ್ 31 ರಿಂದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘದ ನೇಕಾರರು, ಬಣ್ಣಗಾರರು, ಹೊಲಿಗೆಗಾರರು, ಹಾಗೂ ಇತರೆ ಕುಶಲ ಕರ್ಮಿಗಳೆಲ್ಲ ಸೇರಿ ಎನ್‍ಆರ್ ಐಜಿ ಯೋಜನೆಯಡಿ ಹೊನ್ನೇಸರ ಗ್ರಾಮದಲ್ಲಿರುವ ಚರಕ ಶ್ರಮಜೀವಿ ಆಶ್ರಮದ ಹಿಂಭಾಗದಲ್ಲಿರುವ ವಿರೂಪಾಕ್ಷ ಕೆರೆಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೆರೆ ಹೂಳೆತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

    ಚರಕದ ಮೂಲಕ ನೂಲು ನೇಯ್ದು ಉಡುಪು ಸಿದ್ಧಪಡಿಸಿ ಮಾರುಕಟ್ಟೆಯಲ್ಲಿ ಜನರ ಅಭಿರುಚಿಗೆ ತಕ್ಕಂತೆ ಮಾರಾಟ ಮಾಡುತ್ತಿದ್ದ ಚರಕ ಸಂಸ್ಥೆ ಪ್ರಸ್ತುತ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಈಗಾಗಲೇ ಈ ವಿಷಯ ತಿಳಿದ ಬಳಿಕ ಹಲವಾರು ಸಹಾಯದ ಕರೆಗಳು ಬರುತ್ತಿದ್ದು, ಸರ್ಕಾರವೂ ಕೂಡ ಕಣ್ತೆರೆದು ದೇಶಿಯ ಉತ್ಪನ್ನದ ಸಂಸ್ಥೆ ಕಡೆ ಗಮನಹರಿಸಬೇಕಿದೆ. ಈ ಮೂಲಕ ಪ್ರಧಾನಿ ಮೋದಿ ಆಶಯದಂತಿರುವ ಆತ್ಮ ನಿರ್ಭರತೆಯ ಸಂಸ್ಥೆಯನ್ನು ಸಲುಹಬೇಕಿದೆ.

  • ದೇಶದ ಅತಿ ಚಿಕ್ಕ ಚರಕಕ್ಕೆ ಏಷ್ಯನ್ ಬುಕ್ ಆಫ್ ರೆಕಾರ್ಡ್

    ದೇಶದ ಅತಿ ಚಿಕ್ಕ ಚರಕಕ್ಕೆ ಏಷ್ಯನ್ ಬುಕ್ ಆಫ್ ರೆಕಾರ್ಡ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸನ್ನ ಚಂದ್ರಕಾಂತ್ ಶೇಠ್ ಅವರು ಬಂಗಾರದಲ್ಲಿ ತಯಾರಿಸಿದ ಕಿರು ಪ್ರತಿಕೃತಿಗಳು ದೇಶದ ಪ್ರತಿಷ್ಠಿತ ದಾಖಲೆಗಳ ಪುಟ ಸೇರಿವೆ.

    ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ನಿಮಿತ್ತ ಪ್ರಸನ್ನ ಅವರು ಅತಿ ಸೂಕ್ಷ್ಮವಾಗಿ ತಯಾರಿಸಿದ 150 ಮಿಲಿ ಗ್ರಾಂ. ಚಿನ್ನದ ಚಾಲನೆಯಲ್ಲಿರುವ ‘ಚರಕ’ವನ್ನು ನಿರ್ಮಿಸಿದ್ದರು. ಇದೇ ಸಂದರ್ಭದಲ್ಲಿ  8 ಮಿ.ಗ್ರಾಂ ತೂಕದ ಚಿನ್ನದ ರಾಷ್ಟ್ರಧ್ವಜವನ್ನು ಸಿದ್ಧಪಡಿಸಿದ್ದರು.

    ಪ್ರಸನ್ನ ಅವರ ಈ ಅತೀ ಸೂಕ್ಷ್ಮ ಕಲೆಯು ‘ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್’ನ ಪುಟ ಸೇರಿದೆ. 150 ಮಿ.ಗ್ರಾ. ಚಿನ್ನದ ಚಾಲನೆ ಮಾಡಬಹುದಾದ ಅತಿ ಚಿಕ್ಕ ಚರಕವು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಮತ್ತು ‘ಏಷ್ಯನ್ ಬುಕ್ ಆಫ್ ರೆಕಾರ್ಡ್’ ಗಳಿಸಿಕೊಂಡಿದೆ. 8 ಮಿ.ಗ್ರಾಂ. ತೂಕದ ಚಿನ್ನದ ರಾಷ್ಟ್ರಧ್ವಜ ‘ಇಂಟರ್ ನಾಷನಲ್ ಬುಕ್ ಆಫ್ ರೆಕಾರ್ಡ್’ನ ಪುಟ ಸೇರಿ ವಿಶ್ವ ದಾಖಲೆಗೆ ಸೇರಿದೆ.

    ಪ್ರಸನ್ನ ಅವರು ಹೊನ್ನಾವರದ ಮಾರುತಿ ಪ್ರಸನ್ನ ಜ್ಯೂವೆಲ್ಲರಿಯ ಮಾಲೀಕ ಚಂದ್ರಕಾಂತ್ ಶೇಠ್ ಮತ್ತು ಶೋಭಾ ದಂಪತಿಯ ಪುತ್ರರಾಗಿದ್ದಾರೆ. ಅವರು ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸನ್ನ ಅವರು ವಿಶ್ವ ದಾಖಲೆ ಮಾಡುವ ಮೂಲಕ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.