Tag: Character

  • ರಣವೀರ್ ನಗ್ನಶೂಟ್ ಓಕೆ, ನಾನಾದರೆ ಕ್ಯಾರೆಕ್ಟರ್ ಲೆಸ್: ಶೆರ್ಲಿನ್ ಚೋಪ್ರಾ ನೋವು

    ರಣವೀರ್ ನಗ್ನಶೂಟ್ ಓಕೆ, ನಾನಾದರೆ ಕ್ಯಾರೆಕ್ಟರ್ ಲೆಸ್: ಶೆರ್ಲಿನ್ ಚೋಪ್ರಾ ನೋವು

    ಬಾಲಿವುಡ್ ನಟ ರಣವೀರ್ ಸಿಂಗ್ ನಗ್ನ ಫೋಟೋಶೂಟ್ ಮಾಡಿಸಿಕೊಂಡು ಸಖತ್ ಸುದ್ದಿ ಆಗಿದ್ದರು. ಈ ಕಾರಣಕ್ಕಾಗಿ ಅವರು ಪೊಲೀಸ್ ಸ್ಟೇಶನ್ ಮೆಟ್ಟಿಲು ಕೂಡ ಹತ್ತಬೇಕಾಯಿತು. ನಗ್ನತೆಯ ಅಶ್ಲೀಲತೆಯನ್ನು ಸಮಾಜಕ್ಕೆ ತೋರಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ಕೂಡ ದಾಖಲಾಯಿತು. ಆದರೂ, ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮಾಧಾನ ಆದಂತೆ ತೋರುತ್ತಿಲ್ಲ. ಹಾಗಾಗಿ ರಣವೀರ್ ನಗ್ನ ಫೋಟೋ ಶೂಟ್ ಬಗ್ಗೆ ಅವರು ಕಾಮೆಂಟ್ ಮಾಡಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಶೆರ್ಲಿನಾ, ಈ ನಗ್ನತೆಯ ಕುರಿತಾಗಿ ಹೆಣ್ಣು ಮತ್ತು ಗಂಡಸನ್ನು ಕಾಣುವ ಬಗೆಯ ಕುರಿತು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಗಂಡಸು ನಗ್ನನಾದರೆ ಸಮಾಜ ಏನೂ ಅನ್ನುವುದಿಲ್ಲ. ಓಕೆ ಅಂದು ಮುಂದೆ ಸಾಗುತ್ತದೆ. ಅದೇ ಹೆಂಗಸು ಈ ರೀತಿ ಮಾಡಿದರೆ, ಅವಳನ್ನು ಕಾಣುವ ರೀತಿಯೇ ಬೇರೆ ಎಂದಿದ್ದಾರೆ. ನಗ್ನದ ವಿಷಯದಲ್ಲಿ ಗಂಡು, ಹೆಣ್ಣು ಸರಿಯಾದ ರೀತಿಯಲ್ಲೇ ಕಾಮೆಂಟ್ ಬರಬೇಕು ಅಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.

    ರಣವೀರ್ ಸಿಂಗ್ ನಗ್ನ ಫೋಟೋ ಶೂಟ್ ಮಾಡಿಸಿಕೊಂಡಾಗ ಸಾಕಷ್ಟು ಜನರು ಅವರ ಬೆಂಬಲಕ್ಕೆ ನಿಂತರು. ಕೆಲವರಂತೂ ಅದೇ ಹಾದಿಯಲ್ಲೇ ಹೋಗಿ ಅವರೂ ಹಾಗೆಯೇ ಫೋಟೋ ಶೂಟ್ ಮಾಡಿಸಿಕೊಂಡರು. ಆದರೆ, ಈ ಹಿಂದೆ ನನಗೆ ಯಾರೂ ಬೆಂಬಲ ನೀಡಲಿಲ್ಲ. ನಗ್ನ ಫೋಟೋ ಶೂಟ್ ನಲ್ಲಿ ಭಾಗಿಯಾದಾಗ ನನ್ನನ್ನು ಕ್ಯಾರೆಕ್ಟರ್ ಲೆಸ್ ಎಂದು ಜರಿದರು. ಯಾರಿಗೆಲ್ಲ ಹೋಲಿಸಿದರು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ರೂಪೇಶ್ ಶೆಟ್ಟಿ ಹೇಳೋದೇನು?

    ಶೆರ್ಲಿನಾ ಚೋಪ್ರಾರನ್ನು ಯಾರು ಕ್ಯಾರೆಕ್ಟರ್ ಲೆಸ್ ಎಂದು ಜರಿದಿದ್ದರೋ, ಅವರು ಕೂಡ ನನ್ನಂತೆಯೇ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ಆವಾಗ ಅವರು ಅದನ್ನು ಕರೆದುಕೊಂಡಿದ್ದು ಗ್ಲಾಮರ್ ಅಂತ. ಈ ಉದ್ಯಮದಲ್ಲಿ ತಮಗೆ ಬೇಕಾದಾಗ ಒಂದು ರೀತಿ, ಬೇಡವಾದಾಗ ಮತ್ತೊಂದು ರೀತಿ ಕಾಣುವ ಜನರಿದ್ದಾರೆ ಎಂದು ತಮ್ಮ ಅಳಲನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಶೆರ್ಲಿನಾ.

    Live Tv
    [brid partner=56869869 player=32851 video=960834 autoplay=true]

  • ನನಗೆ ಆ ಪಾತ್ರ ಮಾಡಲು ಆಗಲ್ಲ- ರಶ್ಮಿಕಾರಿಂದ ಬಾಲಿವುಡ್ ಸಿನಿಮಾ ರಿಜೆಕ್ಟ್

    ನನಗೆ ಆ ಪಾತ್ರ ಮಾಡಲು ಆಗಲ್ಲ- ರಶ್ಮಿಕಾರಿಂದ ಬಾಲಿವುಡ್ ಸಿನಿಮಾ ರಿಜೆಕ್ಟ್

    ಬೆಂಗಳೂರು: ನನಗೆ ಆ ಪಾತ್ರವನ್ನು ಮಾಡಲು ಆಗಲ್ಲ ಎಂದು ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಆಫರ್‍ವೊಂದನ್ನು ತಿರಸ್ಕರಿಸಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ ಅವರು, ತೆಲುಗಿನ ಜೆರ್ಸಿ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ಅಭಿನಯಿಸಲಿದ್ದಾರೆ. ಈ ಮೂಲಕ ಕೊಡಗಿನ ಬೆಡಗಿ ಬಾಲಿವುಡ್‍ಗೆ ಹಾರಲಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದರ ಜೊತೆಗೆ ಬಾಲಿವುಡ್‍ಗೆ ಹೋಗಲು ರಶ್ಮಿಕಾ ಸೌತ್ ಸಿನಿಮಾರಂಗದ ಹಲವಾರು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಕೂಡ ಹೇಳಲಾಗಿತ್ತು.

    ಈಗ ಹಿಂದಿಗೆ ರಿಮೇಕ್ ಆಗುತ್ತಿರುವ ಜೆರ್ಸಿ ಸಿನಿಮಾದ ಕಲಾವಿದರ ಮತ್ತು ತಂತ್ರಜ್ಞರ ಹೆಸರನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆದರೆ ಚಿತ್ರತಂಡ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಕಂಡುಬಂದಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಂದಣ್ಣ, ಆ ಸಿನಿಮಾದಿಂದ ಅವರು ನನ್ನನ್ನು ಕೈಬಿಡಲಿಲ್ಲ. ನಾನೇ ಆ ಪಾತ್ರ ಮಾಡಲು ಆಗಲ್ಲ ಎಂದು ಹಿಂದೆ ಸರಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ, ಜೆರ್ಸಿಯಂತಹ ಸಿನಿಮಾದ ರಿಮೇಕ್‍ನಲ್ಲಿ ಅಭಿನಯಿಸುವುದು ಸುಲಭವಲ್ಲ. ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇವೆ ಎಂದರೆ, ಆ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ನನ್ನಿಂದ ಆ ಪಾತ್ರಕ್ಕೆ ಜೀವ ತುಂಬಲು ಆಗುವುದಿಲ್ಲ ಅಂದರೆ ನಾನು ಆ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಬ್ಯುಸಿ ಇರುವ ರಶ್ಮಿಕಾ, ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲು ಆಗಲ್ಲ ಎಂದು ಹೇಳಿರುವುದು ವಿಶೇಷವಾಗಿದೆ. ಜೊತೆಗೆ ಜೆರ್ಸಿ ಹಿಂದಿ ರಿಮೇಕ್‍ನಲ್ಲಿ ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅವರು ಅಭಿನಯಿಸುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ರಶ್ಮಿಕಾ ಆ ಪಾತ್ರಕ್ಕಾಗಿ ಎನರ್ಜಿ ತುಂಬುವ ಉತ್ತಮ ನಟಿಯನ್ನು ಆಯ್ಕೆ ಮಾಡಬೇಕಿತ್ತು ಎಂದಿದ್ದಾರೆ.

    2019ರಲ್ಲಿ ಬಿಡುಗಡೆಯಾದ ತೆಲುಗಿನ ಜೆರ್ಸಿ ಸಿನಿಮಾದಲ್ಲಿ ನಾನಿ ಮತ್ತು ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರು ಅಭಿನಯಿಸಿದ್ದರು. 2019ರ ಏಪ್ರಿಲ್‍ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರ 10 ವರ್ಷದ ನಂತರ ಬ್ಯಾಟ್ ಹಿಡಿದು ತನ್ನ ಮಗನಿಗಾಗಿ ಇಂಡಿಯಾ ಕ್ರಿಕೆಟ್‍ಗೆ ಆಯ್ಕೆಯಾಗುವುದೇ ಸಿನಿಮಾ ಮುಖ್ಯ ಕಥೆ. ಇದರ ಜೊತೆ ಪ್ರೀತಿ, ವೈಫಲ್ಯಗಳ ಮಧ್ಯೆ ಜೀವನದಲ್ಲಿ ಗೆಲ್ಲುವುದಕ್ಕೆ ಸ್ಫೂರ್ತಿ ಯಾವುದು ಎಂಬದನ್ನು ಚಿತ್ರದಲ್ಲಿ ಬಹಳ ಚೆನ್ನಾಗಿ ತೋರಿಸಲಾಗಿತ್ತು.

  • 25 ಅವತಾರದಲ್ಲಿ ನಟ ವಿಕ್ರಮ್

    25 ಅವತಾರದಲ್ಲಿ ನಟ ವಿಕ್ರಮ್

    ಹೈದರಾಬಾದ್: ಸಿನಿಮಾಗಳಲ್ಲಿ ದ್ವಿಪಾತ್ರ- ತ್ರಿಪಾತ್ರ ಸೇರಿದಂತೆ ಅನೇಕ ಪಾತ್ರಗಳಿಗೆ ಒಬ್ಬರೇ ಬಣ್ಣ ಹಚ್ಚಿಕೊಂಡು ಅಭಿನಯಿಸುತ್ತಿದ್ದರು. ನಟ ಕಮಲ್ ಹಾಸನ್ ಅವರು `ದಶಾವತಾರಂ’ ಸಿನಿಮಾದಲ್ಲಿ ಬರೋಬ್ಬರಿ 10 ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಾಲಿವುಡ್ ನಟ ಬರೋಬ್ಬರಿ 25 ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಕಾಲಿವುಡ್ ನಟ ವಿಕ್ರಮ್ ಅವರು 25 ಗೆಟಪ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆಯುವುದಕ್ಕೆ ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅವರು 25 ಅವತಾರಗಳಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

    `ಇಮೈಕಾ ನೋಡಿಗಲ್’ ಖ್ಯಾತಿಯ ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಲಿರುವ ಈ ಸಿನಿಮಾದಲ್ಲಿ ವಿಕ್ರಮ್ ಇಂಥದ್ದೊಂದು ಸಾಹಸ ಮಾಡಲಿದ್ದಾರೆ. ವಿಕ್ರಮ್ ಅವರಿಗೆ ಸಿನಿಮಾದಲ್ಲಿ ಅಮೆರಿಕ ಮೂಲದ ಸಂಸ್ಥೆಯೊಂದು ಮೇಕಪ್ ಮಾಡಲಿದೆ. ಇವರಿಗೆ ಜೋಡಿಯಾಗಿ ಪ್ರಿಯಾ ಭವಾನಿಶಂಕರ್ ಅಭಿನಯಿಸಲಿದ್ದಾರೆ.

    ಇತ್ತೀಚೆಗೆ ವಿಕ್ರಮ್ ಅಭಿನಯದ ‘ಕಡರಾಮ್ ಕೊಂಡನ್’ ಸಿನಿಮಾ ರಿಲೀಸ್ ಆಗಿದ್ದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ 1964ರಲ್ಲಿ ತೆರೆಕಂಡಿದ್ದ ಶಿವಾಜಿ ಗಣೇಶನ್ ಅಭಿನಯದ `ನವರಾತ್ರಿ’ ಸಿನಿಮಾದಲ್ಲಿ ಅವರು 9 ಪಾತ್ರಗಳನ್ನು ನಿರ್ವಹಿಸಿದ್ದರು.

    2009ರಲ್ಲಿ ನಟಿ ಪ್ರಿಯಾಂಕಾ ಅಭಿನಯದ `ವಾಟ್ಸ್ ಯುವರ್ ರಾಶಿ’ ಸಿನಿಮಾದಲ್ಲಿ 12 ಪಾತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುವ ಮೂಲಕ ಮೋಡಿ ಮಾಡಿದ್ದರು. ಆಗ ಒಂದೇ ಚಿತ್ರದಲ್ಲಿ ಹೆಚ್ಚು ಗೆಟಪ್‍ಗಳಲ್ಲಿ ಕಾಣಿಸಿಕೊಂಡ ಕಲಾವಿದೆ ಎಂಬ ಹೆಗ್ಗಳಿಕೆಗೆ ಪ್ರಿಯಾಂಕಾ ಅವರು ಪಾತ್ರರಾಗಿದ್ದರು.

  • ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಜೈಪುರ್: ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ಆಕೆಯ ಮೇಲೆ ಆಸಿಡ್ ಎರಚಿದ ಘಟನೆ ಶನಿವಾರ ಸಂಜೆ ರಾಜಸ್ಥಾನದ ಜೈಪುರ್ ಜಿಲ್ಲೆಯ ಮಾಲಾಪದದಲ್ಲಿ ನಡೆದಿದೆ.

    ಭಾಗಿರಥಿ ಮಹಾಲಿಕ್ (45) ಪತ್ನಿಗೆ ಆಸಿಡ್ ಹಾಕಿದ ಆರೋಪಿ ಪತಿ. ಆಸಿಡ್ ದಾಳಿಯಿಂದ 40 ವರ್ಷದ ಮಹಿಳೆಯ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಹಿಳೆ ಆಸಿಡ್ ದಾಳಿಯಿಂದ ಬಳಲುತ್ತಿದ್ದಾಗ ಅಕ್ಕಪಕ್ಕದ ಮನೆಯವರು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನನ್ನ ತಂದೆ, ತಾಯಿಯ ಶೀಲದ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಮನೆಗೆ ಬಂದ ತಕ್ಷಣ ನನ್ನ ತಾಯಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು ಎಂದು 20 ವರ್ಷದ ಮಗಳೇ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಈ ಘಟನೆ ಶನಿವಾರ ನಡೆದಿದ್ದು, ಮನೆಗೆ ಬಂದ ತಕ್ಷಣ ಭಾಗಿರಥಿ ತನ್ನ ಹೆಂಡತಿಯ ಜೊತೆ ಜಗಳವಾಡಿ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಭಾನುವಾರ ಪೊಲೀಸರು ಭಾಗಿರಥಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಭಾಗಿರಥಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಿದೆ ಎಂದು ಜೈಪುರ್ ನ ಉಪ-ವಿಭಾಗದ ಪೊಲೀಸ್ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಮಾಲಾ ತಿಳಿಸಿದ್ದಾರೆ.