Tag: Chandrashekhar Bandiappa

  • ತಾರಕಾಸುರ ಟ್ರೈಲರ್ ಬಿಡುಗಡೆ

    ತಾರಕಾಸುರ ಟ್ರೈಲರ್ ಬಿಡುಗಡೆ

    ಬೆಂಗಳೂರು: ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ನಿಗೂಢ ಜಗತ್ತನ್ನು ಬೆರಗಾಗುವಂತೆ ತೆರೆದಿಟ್ಟಿದ್ದವರು ಬಂಡಿಯಪ್ಪ. ತಾರಕಾಸುರ ಚಿತ್ರ ಎಂಥಾ ಕಥೆ ಹೊಂದಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇತ್ತು. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಅದನ್ನು ಸಣ್ಣದಾಗಿ ತಣಿಸುತ್ತಲೇ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಹುಟ್ಟುಹಾಕುವಂತಿದೆ!

    ಇದು ಪಕ್ಕಾ ಫೋರ್ಸ್ ಹೊಂದಿರೋ ಮಾಸ್ ಟ್ರೈಲರ್. ಚಂದ್ರಶೇಖರ್ ಈ ಹಿಂದೆ ತಾರಕಾಸುರ ಎಂಬುದು ತುಳಿತಕ್ಕೊಳಗಾಗಿ, ಅವಸಾನದಂಚಿನಲ್ಲಿರೋ ಜಾನಪದ ಸಂಸ್ಕøತಿ ಹಾಗೂ ಸಮುದಾಯದ ಕಥೆ ಹೊಂದಿದೆ ಎಂಬ ಸುಳಿವು ನೀಡಿದ್ದರು. ಅದು ಯಾವ ಸಮುದಾಯ ಎಂಬ ಸಣ್ಣ ಹಿಂಟ್ ಕೂಡಾ ಈ ಟ್ರೈಲರಿನಲ್ಲಿ ಕಾಣ ಸಿಗುತ್ತದೆ. ಹಾಲಿವುಡ್‍ನ ಖ್ಯಾತ ನಟ ಡ್ಯಾನಿ ಸಫಾನಿ ಭಯಾನಕ ಶೇಡ್ ಹೊಂದಿರೋ ಪಾತ್ರದಲ್ಲಿ ನಟಿಸಿರೋದೂ ಕೂಡಾ ಪಕ್ಕಾ ಆಗಿದೆ.

    ಬಿಡುಗಡೆಯಾಗಿ ಗಂಟೆ ಕಳೆಯೋದರೊಳಗೇ ಈ ಟ್ರೈಲರ್ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಕಲಾತ್ಮಕ ಚಿತ್ರವಾಗಿ ಕಳೆದು ಹೋಗಬಹುದಾದ ಕಥಾ ಎಳೆಯನ್ನೂ ಕೂಡಾ ಕಮರ್ಷಿಯಲ್ಲಾಗಿ ಹೇಳ ಬಲ್ಲ ಛಾತಿ ಹೊಂದಿರುವವರು ಚಂದ್ರಶೇಖರ್ ಬಂಡಿಯಪ್ಪ. ಅವರೊಳಗಿನ ಕುತೂಹಲದ ಕಣ್ಣು ಈ ಟ್ರೈಲರ್ ಮೂಲಕ ಎಲ್ಲರೆದೆಗೂ ಅಚ್ಚರಿಯೊಂದನ್ನು ರವಾನಿಸಿದೆ. ನಿರ್ಮಾಪಕ ಎಂ.ನರಸಿಂಹಲು ಈ ಚಿತ್ರವನ್ನು ರಿಚ್ ಆಗಿಯೇ ನಿರ್ಮಾಣ ಮಾಡಿರೋ ಸ್ಪಷ್ಟ ಸುಳಿವೂ ಸಿಕ್ಕಿದೆ. ಅವರ ಪುತ್ರ ವೈಭವ್ ನಟನೆಯೂ ಗಮನ ಸೆಳೆಯುತ್ತದೆ.

    ಒಟ್ಟಾರೆಯಾಗಿ ಈ ಚಿತ್ರ ಭಿನ್ನ ಕಥಾ ಹಂದರದ ಸುಳಿವು ನೀಡುತ್ತಲೇ ತನ್ನ ಮಾಸ್ ಲುಕ್ಕಿನ ಖದರ್ ಎಂಥಾದ್ದೆಂಬುದನ್ನು ಈ ಟ್ರೈಲರ್ ಮೂಲಕ ಅನಾವರಣಗೊಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆ ಆರ್ಭಟಿಸಲಿದೆ ತಾರಕಾಸುರ ಟ್ರೈಲರ್

    ನಾಳೆ ಆರ್ಭಟಿಸಲಿದೆ ತಾರಕಾಸುರ ಟ್ರೈಲರ್

    ಬೆಂಗಳೂರು: ಶ್ರೀಮುರಳಿಯವರ ಯಶಸ್ಸಿನ ಓಟ ನಾಗಾಲೋಟ ಪಡೆಯಲು ಕಾರಣವಾಗಿದ್ದ ಚಿತ್ರ ರಥಾವರ. ಈ ಚಿತ್ರದ ಮೂಲಕ ಭಿನ್ನವಾದ ಕಥೆಯೊಂದನ್ನು ಆರಿಸಿಕೊಂಡಿದ್ದವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಪ್ರೇಕ್ಷಕರನ್ನು ಅಚ್ಚರಿಗೀಡುಮಾಡಿದ್ದ ಕಂಟೆಂಟಿನಿಂದಲೇ ಗಮನ ಸೆಳೆದಿದ್ದ ಬಂಡಿಯಪ್ಪ ನಿರ್ದೇಶನ ಮಾಡಿರೋ ತಾರಕಾಸುರ ಚಿತ್ರದ ಬಗ್ಗೆ ಕುತೂಹಲದ ಕಣ್ಣು ನೆಡದಿರುತ್ತಾ?

    ತನ್ನ ರಗಡ್ ಪೋಸ್ಟರ್, ಹಾಲಿವುಡ್‍ನ ದೈತ್ಯ ನಟ ಡ್ಯಾನಿ ಸಫಾನಿಯ ಖಳನ ಪಾತ್ರ ಮತ್ತು ಹಾಡುಗಳ ಮೂಲಕ ಅಲೆಯೆಬ್ಬಿಸಿರೋ ಚಿತ್ರ ತಾರಕಾಸುರ. ಇದೀಗ ಆ ಕುತೂಹಲವನ್ನು ಇಮ್ಮಡಿಗೊಳಿಸಲೆಂದೇ ಟ್ರೈಲರ್ ಒಂದನ್ನು ರಿಲೀಸ್ ಮಾಡಲು ಚಿತ್ರ ತಂಡ ತೀರ್ಮಾನಿಸಿದೆ. ನಾಳೆ ಮಧ್ಯಾಹ್ನ 3.45ಕ್ಕೆ ಒರಾಯನ್ ಮಾಲ್‍ನಲ್ಲಿ ಈ ಟ್ರೈಲರ್ ಬಿಡುಗಡೆಯಾಗಲಿದೆ.

    ಈ ಟ್ರೈಲರ್ ಅನ್ನು ಈಗಾಗಲೇ ನಿರ್ದೇಶಕ ದುನಿಯಾ ಸೂರಿ ನೋಡಿದ್ದಾರೆ. ನಿರ್ದೇಶಕ ಚಂದರ್ರಶೇಖರ್ ಬಂಡಿಯಪ್ಪ ಅವರ ವಿಭಿನ್ನ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಮೂರು ಶೇಡುಗಳಲ್ಲಿ, ಸವಾಲಿನ ಪಾತ್ರದಲ್ಲಿ ನಟಿಸಿರೋ ವೈಭವ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಎಂ ನರಸಿಂಹಲು ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ನಟಿಸಿದ್ದಾರೆ. ರಥಾವರ ಚಿತ್ರದಲ್ಲಿ ಚಂದ್ರಶೇಖರ್ ಬಂಡಿಯಪ್ಪ ಮಂಗಳಮುಖಿಯರ ನಿಗೂಢ ಲೋಕವೊಂದನ್ನು ಅನಾವರಣಗೊಳಿಸಿದ್ದರು. ಆ ಮೂಲಕ ಪ್ರೇಕ್ಷಕರು ಬೆರಗಾಗುವಂತೆಯೂ ಮಾಡಿದ್ದರು. ಇದೀಗ ಅಂಥಾದ್ದೇ ಮತ್ತೊಂದು ಬೆರಗಾಗಿಸೋ ಕಥೆಯೊಂದಿಗೇ ಅವರು ತಾರಕಾಸುರನನ್ನು ಅಣಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv