Tag: Chandrashekar

  • ಕುಂಟು ನೆಪ ಹೇಳಿ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನ: ಚಂದ್ರಶೇಖರ್‌ ಅಮಾನತಿಗೆ ಜೆಡಿಎಸ್‌ ದೂರು

    ಕುಂಟು ನೆಪ ಹೇಳಿ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನ: ಚಂದ್ರಶೇಖರ್‌ ಅಮಾನತಿಗೆ ಜೆಡಿಎಸ್‌ ದೂರು

    ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಿರುದ್ದ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಐಜಿಪಿ, ಐಪಿಎಸ್‌ ಅಧಿಕಾರಿ ಚಂದ್ರಶೇಖರ್ (Chandrashekar) ವಿರುದ್ದ ಜೆಡಿಎಸ್ (JDS) ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ನೇತೃತ್ವದ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದೆ.

    ದೂರಿನಲ್ಲಿ ಏನಿದೆ?
    ಭ್ರಷ್ಟಾಚಾರ, ದುರ್ನಡತೆ ಮತ್ತು ಸುಲಿಗೆ ಮುಂತಾದ ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ (Lokayukta) ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ್ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರಿಯಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ ಕಳುಹಿಸಬೇಕು. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್‌

    ಭಾರತೀಯ ಪೊಲೀಸ್ ಸೇವೆಗೆ ಸೇರಿರುವ ಚಂದ್ರಶೇಖರ್ ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಹಿಮಾಚಲ ಪ್ರದೇಶ (Himachal Pradesh) ಐಪಿಎಸ್‌ ಕೇಡರ್‌ಗೆ ಸೇರಿದವರಾಗಿದ್ದಾರೆ. ತದನಂತರ ತನ್ನ ಪತ್ನಿಯ ಅನಾರೋಗ್ಯ ಮತ್ತು ಹಿಮಾಚಲ ಪ್ರದೇಶದ ವಾತಾವರಣ ಮತ್ತು ಹವಾಗುಣ ಹೊಂದುವುದಿಲ್ಲ ಎನ್ನುವ ಕುಂಟು ನೆಪ ಹೇಳಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಗೂ ರಾಜಕೀಯ ಪ್ರಭಾವ ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು, ತದನಂತರ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನಗೊಂಡಿದ್ದಾರೆ.

    ಚಂದ್ರಶೇಖರ್‌ ವಿರುದ್ಧ ಹಲವಾರು ಕೋರ್ಟ್ ಪ್ರಕರಣಗಳಲ್ಲಿ ಇವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಚಂದ್ರಶೇಖರ್‌ ಅವರೇ ಆಗಸ್ಟ್‌ 21 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಶ್ರೀಧರ್ ವಿರುದ್ಧ ಕೇಸು ದಾಖಲಿಸಿ ಮಧ್ಯಂತರ ಆದೇಶ ಪಡೆದಿದ್ದಾರೆ.

     

    ರಾಜ್ಯದ ಪೊಲೀಸ್ ಅಧಿಕಾರಿಯ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮಕೈಗೊಂಡಿದೆ ಮತ್ತು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಯಾವ ವರದಿಯನ್ನು ಸಲ್ಲಿಸಿದೆ ಎನ್ನುವುದನ್ನು ಇದುವರೆಗೂ ಯಾರಿಗೂ ತಿಳಿದಿಲ್ಲ. ಹೀಗಾಗಿ ಎಂ.ಚಂದ್ರಶೇಖರ್ ರವರ ವಿರುದ್ಧ ಈ ಮೇಲೆ ತಿಳಿಸಿದಂತೆ ದಾಖಲಾಗಿರುವ ದೂರುಗಳು ಎಫ್‌ಐಆರ್‌ ಕೋರ್ಟ್ ಪ್ರಕರಣಗಳು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ರವರ ವಿರುದ್ಧ ಅವಾಚ್ಯ, ಅಸಭ್ಯ ಮತ್ತು ಅವಹೇಳನಕಾರಿ ಪದಬಳಕೆ ಮಾಡಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ ಚಂದ್ರಶೇಖರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಿ ಇವರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಭಾರತೀಯ ಪೊಲೀಸ್ ಸೇವೆಗಳ ವೃಂದದ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಕಳುಹಿಸಬೇಕೆಂದು ಒತ್ತಾಯಿಸುತ್ತೇವೆ.

     

  • Valmiki Scam | ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್‌ ಆತ್ಮಹತ್ಯೆ

    Valmiki Scam | ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್‌ ಆತ್ಮಹತ್ಯೆ

    ಬೆಂಗಳೂರು/ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಲೆಕ್ಕ ಪರಿಶೋಧಕ ಚಂದ್ರಶೇಖರ್ (Chandrashekar) ಆತ್ಮಹತ್ಯೆಗೆ ಆಡಳಿತ ನಿರ್ದೇಶಕ ಪದ್ಮನಾಭ್ (Padmanabh) ಮತ್ತು ಲೆಕ್ಕಾಧಿಕಾರಿ ಪರುಶರಾಮ್ (Parashuram) ಕಾರಣ ವಿಶೇಷ ತನಿಖಾ (SIT) ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

    ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ (Shivamogga) ಜಿಲ್ಲಾಸತ್ರ ನ್ಯಾಯಾಲಯಕ್ಕೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರೋಪ ಪಟ್ಟಿಯಲ್ಲಿ ನಿಗಮದ ಹಗರಣದಲ್ಲಿ ಒಂದಷ್ಟು ಹಣವನ್ನು ಚಂದ್ರಶೇಖರ್ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮೀಡಿಯಾ, ಸಾರ್ವಜನಿಕರು ಬೈದ್ರೂ ನೀರಿನ ದರ ಏರಿಸಿಯೇ ಏರಿಸುತ್ತೇವೆ: ಡಿಕೆಶಿ

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಚಂದ್ರಶೇಖರ್ ಅವರನ್ನು ಗೋವಾ ಮತ್ತು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಪದ್ಮನಾಭ್ ಮತ್ತು ಪರಶುರಾಮ್‌ ಒತ್ತಡ ಹಾಕಿದ್ದರು. ನೀನು ಹಣವನ್ನು ಪಡೆದುಕೊಂಡಿದ್ದಿ. ಪ್ರಕರಣ ಬೆಳಕಿಗೆ ಬಂದರೆ ನೀನೊಬ್ಬನೇ ಜೈಲಿಗೆ ಹೋಗಬೇಕಾಗುತ್ತದೆ. ನಿನ್ನ ವಿರುದ್ಧ ನಾವೇ ದೂರು ಕೊಡುತ್ತೇನೆ ಎಂದು ಭಯಬೀಳಿಸಿದ್ದರು. ಜೈಲಿಗೆ ಹೋಗಬಹುದು ಎಂಬ ಭಯಕ್ಕೆ ಬಿದ್ದು ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

    300 ಪುಟಗಳ ದೋಷಾರೋಪ ಪಟ್ಟಿಗೆ ಚಂದ್ರಶೇಖರ್‌ ಪತ್ನಿ ಮತ್ತು ನಿಗಮದ ಅಧಿಕಾರಿಗಳನ್ನು ಎಸ್ ಐಟಿ ಸಾಕ್ಷ್ಯವನ್ನಾಗಿ ಮಾಡಿದೆ. ಈ ಪ್ರಕರಣದಲ್ಲೂ ನಾಗೇಂದ್ರ ಅವರ ಹೆಸರನ್ನು ಎಸ್‌ಐಟಿ ಕೈ ಬಿಟ್ಟಿದೆ.

     

  • ಪವಿತ್ರಾ ಜಯರಾಮ್‌ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ರಾ ಚಂದ್ರಕಾಂತ್‌?

    ಪವಿತ್ರಾ ಜಯರಾಮ್‌ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ರಾ ಚಂದ್ರಕಾಂತ್‌?

    ತೆಲುಗು ನಟ ಚಂದ್ರಶೇಖರ್ (Actor Chandrashekar) ಮತ್ತು ಪವಿತ್ರಾ ಜಯರಾಮ್ (Pavithra Jayaram) ಅವರದ್ದು 5 ವರ್ಷಗಳ ಗೆಳತನ. ಅದು ಕೇವಲ ಗೆಳತನವಾಗಿ ಉಳಿದಿರಲಿಲ್ಲ. ಅಲ್ಲೊಂದು ಸಂಬಂಧವಿತ್ತು. ಮನೆಯವರ ವಿರೋಧವಿತ್ತು. ಕಾರಣ, ಇಬ್ಬರಿಗೂ ಒಂದೊಂದು ಸಂಸಾರ. ಎರಡೆರಡು ಮಕ್ಕಳು. ಇದೆಂಥ ಸಂಬಂಧ ನೈತಿಕವಾ? ಅನೈತಿಕವಾ? ಏನೇ ಇರಲಿ. ಈಗ ಆ ಸಂಬಂಧ ಹೆಣವಾಗಿದೆ. ನಟಿ ಪವಿತ್ರಾ ಜಯರಾಮ್ ಹೆಣದ ಮುಂದೆ ಕೂತು ಎದೆ ಎದೆ ಬಡಿದುಕೊಂಡಿದ್ದ ಚಂದ್ರು ಅಲಿಯಾಸ್ ಚಂದ್ರಕಾಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪವಿತ್ರಾನ ಮರೆಯೋಕೆ ಆಗ್ತಿಲ್ಲ ಅಂತ ನೇಣಿಗೆ ಕೊರಳೊಡ್ಡಿದ್ದಾರೆ. ಈ ಸಾವು ಸಾವಿರ ಅನುಮಾನಗಳಿಗೆ ಕಾರಣವಾಗಿದೆ. ಸಾವಿನ ಹಿಂದಿರೋ ರಹಸ್ಯವೂ ಬಯಲಾಗಿದೆ.

    ಕನ್ನಡದ ನಟಿ ಪವಿತ್ರಾ ಜಯರಾಮ್ ಆಕ್ಸಿಡೆಂಟ್‌ನಲ್ಲಿ (Accident) ಸತ್ತಾಗ ಆಕೆಯ ಜೊತೆ ಟ್ರಾವೆಲ್ ಮಾಡ್ತಿದ್ದೋನು ಇದೇ ಚಂದ್ರು. ಅದೊಂದು ಭಯಾನಕ ಆಕ್ಸಿಡೆಂಟ್. ಕಾರಿನ ಹಿಂಬಂದಿ ಸೀಟ್‌ಲ್ಲಿ ಕೂತಿದ್ದ ಚಂದ್ರು ಬದುಕಿದ್ದ, ಪಕ್ಕದಲ್ಲೇ ಕೂತಿದ್ದ ಪವಿತ್ರಾ ಉಸಿರು ಚೆಲ್ಲಿದ್ದಳು. ನನಗಾದ ಗಾಯಕಂಡು ಪವಿತ್ರಾ ಶಾಕ್ ಆಗಿದ್ದಳು. ಸಡನ್ನಾಗಿ ಸ್ಟ್ರೋಕ್ ಆಗಿರಬೇಕು. ಅಂಬ್ಯುಲೆನ್ಸ್ ಬರೋದು ತಡವಾಯಿತು. ಬದುಕಲಿಲ್ಲ ಅಂತ ಇದೇ ಚಂದ್ರು ಹೇಳಿದ್ದ. ಪವಿತ್ರಾ ಸಾವಿಗೆ ನಾನೇ ಕಾರಣ ಅಂತ ಚಂದ್ರುಗೆ ಏನಾದ್ರೂ ಅನಿಸ್ತಾ. ಅದೇ ಆತ್ಮಹತ್ಯೆಗೆ ಕಾರಣ ಆಯ್ತಾ?

    ಪವಿತ್ರಾನ ಚಂದ್ರು ಅದೆಷ್ಟು ಪ್ರೀತಿಸ್ತಾ ಇದ್ದ ಅನ್ನೋಕೆ ಅವರೇ ಪೋಸ್ಟ್ ಮಾಡಿರೋ ವಿಡಿಯೋಗಳು ಸಾಕ್ಷಿ ಆಗುತ್ತವೆ. ಶೂಟಿಂಗ್ ಸೆಟ್, ಹೋಟೆಲ್, ಪಾರ್ಕ್, ಮನೆ ಹೀಗೆ ಸಿಕ್ಕ ಸಿಕ್ಕ ಕಡೆಯಲ್ಲ ಆತ್ಮೀಯ ಆಗಿರೋ ವಿಡಿಯೋ ಮಾಡಿದ್ದಾರೆ. ತಮ್ಮಿಬ್ಬರ ಮಧ್ಯ ಹೆಸರಿಡಲಾಗದ ಒಂದು ಸಂಬಂಧ ಇದೆ ಅಂತ ತರ‍್ಸಿದ್ದಾರೆ. ಈ ತೋರಿಕೆಯ ಹಿಂದೆಯೂ ಒಂದು ಟ್ರ್ಯಾಜಿಡಿ ಕಹಾನಿ ಇದೆ. ಅದು ಅಂತಿಂಥ ಕಹಾನಿಯಲ್ಲ, ಎರಡು ಮಕ್ಕಳ ಭವಿಷ್ಯ. ತನ್ನನ್ನೇ ನಂಬಿಕೊಂಡಿರೋ ಪತ್ನಿ. ಈಗ ಕಣ್ಣೀರು ಹಾಕ್ತಿದ್ದಾರೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ಚಂದ್ರುಗೆ ಈಗಾಗಲೇ ಮದುವೆ ಆಗಿತ್ತು. ಬರೋಬ್ಬರಿ ಇಪ್ಪತ್ತು ವರ್ಷಗಳ ಪ್ರೀತಿ, ಒಂಬತ್ತು ವರ್ಷಗಳ ದಾಂಪತ್ಯ. ಈ ಸಾಂಗತ್ಯಕ್ಕೆ ಜೊತೆಯಾಗಿದ್ದು ಎರಡು ಮುದ್ದಾದ ಮಕ್ಕಳು. ಪವಿತ್ರಾಗೂ ಮದುವೆ ಆಗಿದೆ. ಎರಡು ಮಕ್ಕಳಿದ್ದಾರೆ. ಗಂಡನಿಂದ ದೂರವಿದ್ದಾಕೆ ಚಂದ್ರುಗೆ ಹತ್ತಿರವಾಗೋಕೆ ಕಾರಣ ಆ ಸೀರಿಯಲ್. ಪ್ರೇಕ್ಷಕರ ಸೆಳೆಯಲು ಧಾರಾಹಿಯಲ್ಲಿ ಟ್ವಿಸ್ಟು-ಟರ್ನ್ ಇರತ್ತೆ ಸರಿ. ಆದರೆ, ಅದನ್ನೇ ಜೀವನ ಅನ್ಕೊಂಡ್ರೆ ಹೇಗೆ? ಪಾತ್ರಧಾರಿ ಆಗಬೇಕೆ ಹೊರತು ಪಾತ್ರ ಆಗಬಾರದು ಅಲ್ಲವಾ? ನಟ-ನಟಿ ಆಗಿದ್ದೋರು, ಸ್ನೇಹಿತರಾಗ್ತಾರೆ. ಆ ಸ್ನೇಹ ಒಟ್ಟಾಗಿ ಇರುವಂತೆ ಮಾಡತ್ತದೆ. ಇತ್ತ ಚಂದ್ರು ಹೆಂಡ್ತಿ, ಮಕ್ಕಳನ್ನು ತೊರೆದರೆ. ಪವಿತ್ರಾ ಕೂಡ ಒಂದೇ ಮನೆಯಲ್ಲಿ ಇರೋಕೆ ಒಪ್ಪುತ್ತಾರೆ. ಅಲ್ಲಿಂದ ಹೊಸ ಜರ್ನಿ ಶುರು ಮಾಡ್ತಾನೆ ಚಂದ್ರು.

    ಮೋಹವೇ ಹಾಗೆ.. ಅದೊಂದು ರೀತಿ ಯಡವಟ್ಟು. ಇಲಿ ಮೇಲೆ ಆನೆ ಸವಾರಿ ಮಾಡೋ ಕನಸು. ಇದು ಸಾಧ್ಯವಾ? ತಿಳಿಸಿ ಹೇಳೋರು ಯಾರು? ಆದ್ರೂ, ಹೇಳಿದ್ದಾರೆ. ನೀನು ಹೋಗ್ತಾ ಇರೋ ದಾರಿ ಸರಿ ಇಲ್ಲ ಅಂತ ತಾಯಿ ಗದರಿದ್ದಾಳೆ. ನನ್ನ ಗಂಡನ್ನ ನನಗೆ ಬಿಟ್ಟು ಕೊಡಿ ಅಂತ ಚಂದ್ರು ಹೆಂಡ್ತಿ ಉಡಿಯೊಡ್ಡಿದ್ದಾಳೆ. ತಾಯಿ ಮಾತನ್ನು ಚಂದ್ರು ಕೇಳಿಲ್ಲ. ಚಂದ್ರು ಹೆಂಡ್ತಿ ಮಾತನ್ನು ಪವಿತ್ರಾ ಕಿವಿಹಾಕ್ಕೊಂಡಿಲ್ಲ. ಈಗ ಆಗಿದ್ದೆಲ್ಲ ದುರಂತ.

     

    View this post on Instagram

     

    A post shared by Pavithra Jayaram (@pavithra_jayram_)

    ಚಂದ್ರುನ ಸರಿ ದಾರಿಗೆ ತರೋಕೆ ಏನೆಲ್ಲ ಪ್ರಯತ್ನ ಪಟ್ಟಿದ್ದಾಳೆ ಪತ್ನಿ ಶಿಲ್ಪಾ. ಐದು ವರ್ಷದಿಂದ ಕಾದಿದ್ದಾಳೆ. ಗಂಡ ಬಾರದೇ ಇದ್ದಾಗ ಪವಿತ್ರಾಗೆ ವಾರ್ನ್ ಕೂಡ ಮಾಡಿದ್ದಾಳೆ. ಏನೇ ಮಾಡಿದರೂ ಗಂಡ ಜಗ್ಗಿಲ್ಲ.. ಪವಿತ್ರಾ ಕೇರ್ ಮಾಡಿಲ್ಲ. ಈ ಜಗಳ ಅತಿರೇಕಕ್ಕೆ ಹೋದಾಗ ಪವಿತ್ರಾನೇ ನನ್ನ ಸರ್ವಸ್ವ ಅಂದಿದ್ದಾನೆ ಚಂದ್ರು. ಪವಿತ್ರಾ ಜೊತೆ ಮದುವೆ ಆಗೋದಾಗಿ ಹೇಳಿದ್ದಾನೆ. ಅಷ್ಟರ ಮಟ್ಟಿಗೆ ಈ ಸಂಬಂಧ ಗಟ್ಟಿಯಾಗಿದೆ. ಪವಿತ್ರಾ-ಚಂದ್ರು ಐದು ವರ್ಷದಿಂದ ಜೊತೆಯಲ್ಲೇ ಇದ್ದಾರೆ. ಒಂದೇ ನೆರಳಿನಲ್ಲಿ ಬದುಕ್ತಿದ್ದಾರೆ. ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ. ಒಟ್ಟೊಟ್ಟಿಗೆ ಜರ್ನಿ ಮಾಡಿದ್ದಾರೆ. ಜಗತ್ತು ಈ ಬದುಕಿಗೊಂದು ಹೆಸರು ಕೊಟ್ಟಿದೆ. ಅದೇ ಇವತ್ತು ಚಂದ್ರು ಸಾವಿಗೆ ಕಾರಣ ಆಯ್ತಾ? ಗೊತ್ತಿಲ್ಲ. ಚಂದ್ರು ಮಾತ್ರ ಬಾರದ ಲೋಕಕ್ಕೆ ಹೋಗಿದ್ದಾನೆ. ಪವಿತ್ರಾ ಸಾವಿನ ಶಾಕ್‌ನಲ್ಲಿದ್ದವನು ಎರಡೇ ದಿನದಲ್ಲಿ ನಿನ್ನ ಬಂದು ಸರ‍್ಕೋತೀನಿ ಮಮ್ಮು ಅಂತ ಪೋಸ್ಟ್ ಮಾಡಿ ನೇಣಿಗೆ ಶರಣಾಗಿದ್ದಾನೆ.

    ಪವಿತ್ರಾ ಸಾವಿನ ನಂತರ ಚಂದ್ರು ಖಿನ್ನತೆಗೆ ಜಾರಿದ್ದ ಅಂತ ಹೇಳ್ತಿದ್ದಾರೆ ಅವರ ತಾಯಿ. ದಿನವೂ ಕುಡ್ಕೊಂಡ್ ರ‍್ತಿದ್ನಂತೆ.. ಎರಡು ದಿನದಿಂದ ಯಾರ ಫೋನ್‌ಗೂ ಸಿಕ್ಕಿಲ್ಲ. ಪವಿತ್ರಾ ಜೊತೆಗಿನ ಫೋಟೋ ಶೇರ್ ಮಾಡಿದ್ದಾನೆ. ಸಾವಿನ ಮುನ್ಸೂಚನೆ ಕೊಟ್ಟಿದ್ದಾನೆ. ಯಾವ ಮನೆಯಲ್ಲಿ ಪವಿತ್ರಾ ಜೊತೆ ವಾಸವಿದ್ನೋ.. ಅದೇ ಮನೆಯಲ್ಲಿ ಉಸಿರು ಚೆಲ್ಲಿದ್ದಾನೆ. ಮಕ್ಕಳು ಅನಾಥ ಆಗಿವೆ. ಹೆಂಡತಿ, ತಾಯಿ, ತಂಗಿ ಬೀದಿಗೆ ಬಂದಿದ್ದಾರೆ. ಪ್ರೀತಿ ಅಂದರೆ ಸಾಯೋದಲ್ಲ. ಬದುಕೋದು ಚಂದ್ರು ನಟಿಸ್ತಿದ್ದ ಯಾವ ಸೀರಿಯಲ್‌ನಲ್ಲೂ ಈ ಡೈಲಾಗ್ ಇರಲಿಲ್ಲವಾ? ಅಥವಾ ಅದು ಬರೀ ಡೈಲಾಗ್ ಅಂತ ಹೇಳ್ಬಿಟ್ಟು ಮರೆತು ಬಿಟ್ಟರಾ? ಪಾತ್ರಧಾರಿಗಳು ಪಾತ್ರವಾದ್ಮೇಲೆ. ಪ್ರೀತಿ ಅಂದರೆ ಏನು ಅಂತಾನೂ ನೆನಪಿಡಬೇಕಲ್ಲವಾ? ಇಟ್ಟಿದ್ದರೆ ಚಂದ್ರು ಬದುಕರ‍್ತಿದ್ದ ಪತ್ನಿ ಶಿಲ್ಪಾ ಕಾಯುವಿಕೆಗೆ ಅಂತ್ಯನಾದ್ರೂ ಸಿಕ್ಕಿರೋದು ಅಲ್ವೇ.

  • ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ

    ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ

    ದಾವಣಗೆರೆ/ಬೆಂಗಳೂರು: ಮಾಜಿ ಮಂತ್ರಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ(Renukacharya) ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್(Chandrashekar) ನಾಪತ್ತೆ ಪ್ರಕರಣ ವಿಷಾದದಲ್ಲಿ ಅಂತ್ಯವಾಗಿದೆ. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಗುರುವಾರ ಮಧ್ಯಾಹ್ನದವರೆಗೂ ಚಂದ್ರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗಮಧ್ಯೆ ಬರುವ ಸೊರಟೂರಿನ ತುಂಗಭದ್ರಾ(Tungabhadra Canal) ನದಿಯ ಕಾಲುವೆಯಲ್ಲಿ ಕಾರೊಂದು ಇದೆ ಎಂಬ ಸುದ್ದಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು.

    ಕಾಲುವೆ ಮೇಲ್ಭಾಗದಲ್ಲಿ ಕಾರೊಂದರ ಬಿಡಿಭಾಗಳು ಪತ್ತೆ ಆಗಿದ್ದವು. ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಯಾರಚಣೆ ನಡೆಸಿ, ಕಾರನ್ನು ಮೇಲಕ್ಕೆ ಎತ್ತಿದರು. ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ

    ಶಾಸಕ ರೇಣುಕಾಚಾರ್ಯ ಸೇರಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಚಂದ್ರು ನಿನ್ನ ಸಾವಿಗೆ ನಾನೇ ಕಾರಣ. ಚಂದ್ರು ನನ್ನನ್ನು ಕರ್ಕೋಳೋ ಎಂದು ರೇಣುಕಾಚಾರ್ಯ ಗೋಳಾಡಿದ್ದಾರೆ.

    ಇದು ಕೊಲೆಯೋ? ಆತ್ಮಹತ್ಯೆಯೋ? ಅಪಘಾತದಿಂದ ಉಂಟಾದ ಸಾವೋ? ಎಂಬುದು ಖಚಿತವಾಗಿಲ್ಲ. ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಚಂದ್ರಶೇಖರ್ ಸಾವಿನ ನೈಜ ಕಾರಣ ತಿಳಿದುಬರಲಿದೆ.

    ಮತ್ತೊಂದು ಕಡೆ ಪೊಲೀಸರ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದ್ದಾರೆ. ಇದು ಸಹಜ ಸಾವಲ್ಲ. ಕೊಲೆ ನಡೆದಿದೆ ಈ ಬಗ್ಗೆ ತನಿಖೆ ಆಗಬೇಕು ಎಂದು ಶಾಸಕ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ ನಿರ್ಧಾರ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಶುಕ್ರವಾರ ಚಂದ್ರಶೇಖರ್ ಅಂತ್ಯಕ್ರಿಯೆ ಹೊನ್ನಾಳಿಯಲ್ಲಿ ನಡೆಯಲಿದೆ.

    ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ
    ಅನುಮಾನ 1 – ಡ್ರೈವರ್ ಸೀಟ್ ಬೆಲ್ಟ್ ಲಾಕ್ ಆಗಿದ್ರೂ ಹಿಂಬದಿ ಸೀಟ್‍ನಲ್ಲಿ ಮೃತದೇಹ ಸಿಕ್ಕಿದೆ.
    ಅನುಮಾನ 2 – ಕ್ರೇಟಾ ಕಾರಿನ ಮುಂಭಾಗದ ಗಾಜು ದೊಡ್ಡದಾಗಿ ಒಡೆದಿರುವುದು. ಯಾರೋ ಕಲ್ಲು ಎತ್ತಿ ಹಾಕಿ ಒಡೆದಂತೆ ಕಾಣುತ್ತಿದೆ.
    ಅನುಮಾನ 3 – ಕಾರು ಹಿಂಬದಿ ನಜ್ಜು ಗುಜ್ಜಾಗಿರುವುದು.
    ಅನುಮಾನ 4 – ನಾಲೆಯ ತಡೆಗೋಡೆಗೆ ಹೆಚ್ಚು ಹಾನಿ ಆಗದಿರುವುದು.
    ಅನುಮಾನ 5 – ಮೃತ ಚಂದ್ರು ಮೊಬೈಲ್ ಟವರ್ ಲೊಕೇಶನ್ ಬೇರೆ ಕಡೆ ಕೊನೆಯಾಗಿರುವುದು.

    ಏನಿದು ಪ್ರಕರಣ?
    ಅ.30ರ ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ಮರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದಾನೆ‌. ರಾತ್ರಿ 11:30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಸಿಗ್ನಲ್ ಪತ್ತೆಯಾಗಿಲ್ಲ. ಶಿವಮೊಗ್ಗದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ  ದೃಶ್ಯ ಸಿಸಿ ಕ್ಯಾಮೆರಾದಲ್ಲಿ  ಲಭ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೆಚ್‍ಡಿಕೆ, ಸುಮಲತಾ ವಾಕ್ಸಮರ- ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ

    ಹೆಚ್‍ಡಿಕೆ, ಸುಮಲತಾ ವಾಕ್ಸಮರ- ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅವರ ಪರ ನಾವಿದ್ದೇವೆ ಎಂದು ಅಂಬಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ರವರು ಹೇಳಿದ್ದಾರೆ.

    ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಾಕ್ ಸಮರ ಹಿನ್ನೆಲೆ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಬೆಂಗಳೂರು ಘಟಕದ ವತಿಯಿಂದ ಪ್ರತಿಭಟನೆ ಪ್ರಾರಂಭವಾಗಿದೆ. ಬೆಂಗಳೂರಿನ ಕಂಠೀರವ ಸ್ಟೋಡಿಯೋದ ಬಳಿ ಸುಮಾರು 50ಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದು, ಅಂಬರೀಷ್ ಫೋಟೋ ಹಿಡಿದು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಅಂಬರೀಶ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ರವರು ಮಾತನಾಡಿ, ಮಂಡ್ಯ ಸಂಸದೆ ಸುಮಲತಾ ಅವರ ಪರ ನಾವಿದ್ದೇವೆ. ಕುಮಾರಸ್ವಾಮಿ ಮನೆ ಮುಂದೆ ನಮಗೆ ಪ್ರೊಟೆಸ್ಟ್ ಮಾಡುವುದಕ್ಕೆ ಕೆಪಾಸಿಟಿ ಇಲ್ವಾ. ಪುಷ್ಪಾ ಅಮರನಾಥ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮಹಿಳಾ ಮಣಿಗಳಿದ್ದಾರೆ. ಯಾರೂ ಮಾತಾನಾಡುವುದಕ್ಕೆ ಮುಂದೆ ಬರುತ್ತಿಲ್ಲ. ಅಂಬರೀಶ್ ಅಣ್ಣ ಇದ್ದಾಗ ಯಾವ ನಾಯಿಗಳು ಬೊಗಳುತ್ತಿರಲಿಲ್ಲ. ಅಂಬರೀಶ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸುಮಲತಾ ಏಕಾಂಗಿಯಾಗಿ ಗೆದ್ದಿದ್ದಾರೆ ಏಕಾಂಗಿಯಾಗಿ ಎದುರಿಸ್ತಾರೆ: ಲಿಂಬಾವಳಿ

  • ನಿರೂಪಕ ಅರುಣ್ ಬಡಿಗೇರ್​​ಗೆ  ಪಿತೃ ವಿಯೋಗ

    ನಿರೂಪಕ ಅರುಣ್ ಬಡಿಗೇರ್​​ಗೆ ಪಿತೃ ವಿಯೋಗ

    ಹುಬ್ಬಳ್ಳಿ: ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್​​ಗೆ ಪಿತೃ ವಿಯೋಗವಾಗಿದೆ. 68 ವರ್ಷದ ಚಂದ್ರಶೇಖರ್ ಬಡಿಗೇರ್ ಅವರು ಕೊರೊನಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಚಂದ್ರಶೇಖರ್ ಬಡಿಗೇರ್ ಕೆಇ ಬೋರ್ಡ್ ಶಾಲೆಯ ನಿವೃತ್ತ ಶಿಕ್ಷಕರಾಗಿದ್ದರು. ಇದೀಗ ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ಚಂದ್ರಶೇಖರ್ ಅವರು ಅಗಲಿದ್ದಾರೆ. ಮೂರು ದಿನಗಳ ಹಿಂದೆ ಕಳೆದ 27 ರಂದು ಅರುಣ್ ತಾಯಿ 53 ವರ್ಷದ ಕಸ್ತೂರಮ್ಮ ಬಡಿಗೇರ್ ನಿಧನವಾಗಿದ್ದರು. ಅಂದಿನಿಂದ ಮತ್ತಷ್ಟು ಗಂಭೀರವಾಗಿದ್ದ ಅರುಣ್ ತಂದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

    ಅರುಣ್ ಸಹೋದರ, ಸಹೋದರಿ ಇಬ್ಬರಿಗೂ ಕೂಡ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ, ಇದೇ 25ಕ್ಕೆ ಅರುಣ್ ಸಹೋದರಿಯ ಮದುವೆ ನಿಶ್ಚಿತವಾಗಿತ್ತು.

    ನಿರೂಪಕ ಅರುಣ್ ಬಡಿಗೇರ್​​ಗೆ ತಂದೆ ನಿಧನಕ್ಕೆ ಪಬ್ಲಿಕ್ ಟಿವಿ ಬಳಗ ಕಂಬನಿ ಮಿಡಿದಿದೆ.

  • ಸರ್ಕಾರ ಉರುಳಿಸುವುದರಲ್ಲಿರುವ ಆಸಕ್ತಿ ಪಕ್ಷದ ಮೇಲಿಲ್ಲ – ಡಿಕೆ ಸುರೇಶ್ ಕಿಡಿ

    ಸರ್ಕಾರ ಉರುಳಿಸುವುದರಲ್ಲಿರುವ ಆಸಕ್ತಿ ಪಕ್ಷದ ಮೇಲಿಲ್ಲ – ಡಿಕೆ ಸುರೇಶ್ ಕಿಡಿ

    -ಕೈಗೆ ಬಾವುಟ ಕೊಟ್ಟು, ಏನಾಗಿದೆ ಅಂತ ಬಿಎಸ್‍ವೈ ಕೇಳಲಿಲ್ಲ

    ಬೆಂಗಳೂರು: ಚಂದ್ರಶೇಖರ್ ಅವರು ಮೂಲತಃ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ನಂಬಿ ಬೆಳೆದವರು. ಆದರೆ ಅವರಿಗೆ ಉಂಟಾದ ಕೆಲ ನಿರ್ಧಾರದಿಂದ ದುಡುಕಿದ್ದರು. ಆದರೆ ಇಂದು ಅವರು ತೆಗೆದುಕೊಂಡಿರುವ ನಿರ್ಣಯಕ್ಕೆ ಪಕ್ಷದ ಕಡೆಯಿಂದ ಸ್ವಾಗತ ಕೋರುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

    ರಾಮನಗರದ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಚಂದ್ರಶೇಖರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇಂದು ನಮ್ಮ ಪಕ್ಷದ ಪರವಾಗಿ ಹಾಗೂ ವೈಯಕಿಕ್ತವಾಗಿ ಚಂದ್ರಶೇಖರ್ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಚಂದ್ರಶೇಖರ್ ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ಬಿಜೆಪಿ ಪಕ್ಷ ನಾಯಕರು ಧೋರಣೆಯಿಂದ ಬೇಸತ್ತಿದ್ದಾರೆ. ಈಗ 5 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮಂಡ್ಯ ಚುನಾವಣೆಗೆ ಎಲ್ಲ ನಾಯಕರು ರಾಮನಗರದ ಮೇಲೆ ಹೋಗಬೇಕು. ಆದರೆ ರಾಮನಗರಕ್ಕೆ ಯಾವ ನಾಯಕರು ಪ್ರಚಾರಕ್ಕೆ ಬರುವುದಿಲ್ಲ. ಪ್ರಚಾರದ ವೇಳೆ ನಾಯಕರು ಬಾವುಟ ಕೊಟ್ಟು ಹೋದವರು, ಬಾವುಟ ಏನಾಯಿತು ಎಂದು ಕೇಳುವುದಿಲ್ಲ ಎಂದು ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

    ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಳಾರ್ಳಿ, ಮಂಡ್ಯ ಪ್ರತಿಷ್ಠೆಯ ಕಣವಾಗಿದ್ದು, ಶಿವಮೊಗ್ಗದಲ್ಲಿ ಮಗ ಬಿ.ವೈ ರಾಘವೇಂದ್ರ ಸ್ಪರ್ಧೆ ಮಾಡಿದ್ದಕ್ಕೆ ಅಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆ. ಈಗ ಬೇರೆಯವರು ನಿಂತಿರುವ ಕ್ಷೇತ್ರದಲ್ಲಿ ಅಸಡ್ಡೆ ತೋರುತ್ತಿದ್ದಾರೆ. ಯಾವ ಆಧಾರದ ಮೇಲೆ ಅಭ್ಯರ್ಥಿಯಾಗಲು ಇಷ್ಟಪಡುತ್ತಾರೆ. ಇದರಿಂದ ಮನನೊಂದು ನಮ್ಮ ಮನೆಯಲ್ಲಿರುವುದೇ ವಾಸಿ ಎಂದು ಚಂದ್ರಶೇಖರ್ ಬಂದಿದ್ದು, ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ ಅಂತಾ ತಿಳಿಸಿದರು.

    ನಾವು ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ. ಈಗಾಗಲೇ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಚುನಾವಣೆ ಅಧಿಕಾರಿಗಳಿಗೂ ಕೂಡ ಮೇಲ್ ಕಳುಹಿಸಿದ್ದಾರೆ. ನಾನು ಚುನಾವಣೆ ಅಭ್ಯರ್ಥಿಯಾಗಿ ಹಿಂದೆ ಸರಿದಿದ್ದೇನೆ. ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಮೇಲ್ ಮಾಡಿದ್ದು, ನಂತರ ಕಚೇರಿಗೆ ಹೋಗಿ ಪತ್ರ ನೀಡಲಿದ್ದಾರೆ. ಚಂದ್ರಶೇಖರ್ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರಿಗೆ ರಾಜಕೀಯದ ಅನುಭವಗಳು ಹಾಗೂ ಬೈ ಎಲೆಕ್ಷನ್ ಹೇಗೆ ನಡೆಯುವುದು ಎಂದು ಗೊತ್ತಿದೆ. ಬೈ ಎಲೆಕ್ಷನ್ ಮಾಡುವ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಶಿಸ್ತು ಇಲ್ಲ. ಕೇವಲ ಅಧಿಕಾರಕ್ಕಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯ ಕಾಲೆಳೆದರು.

    ಸದ್ಯ ನಾವು ಈ ಚುನಾವಣೆಯಲ್ಲಿ 5ಕ್ಕೆ 5 ಸ್ಥಾನ ಗೆಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬದಲಾವಣೆ ಕಾಣುತ್ತೀರಿ. ಅವರು ಮೂಲತಃ ಕಾಂಗ್ರೆಸ್‍ನವರು. ಅವರಿಗೆ ಕಾಂಗ್ರೆಸ್ ಸಂಸ್ಕøತಿ ಮತ್ತು ಇತಿಹಾಸ ಗೊತ್ತಿದೆ. ಅವರು ಈಗಾಗಲೇ ಹಿರಿಯ ನಾಯಕರಿಗೆ ಈ ಬಗ್ಗೆ ತಿಳಿಸಿ ನನಗೆ ನೋವಾಗಿದೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ಇದೂವರೆಗೂ ರಾಜ್ಯಾಧ್ಯಕ್ಷ ಕರೆ ಮಾಡಿ ಏನು ನೋವಾಗಿದೆ ಎಂದು ಕೇಳಲಿಲ್ಲ. ಅವರು ಬಳ್ಳಾರಿ, ಶಿವಮೊಗ್ಗ, ಮಂಡ್ಯ ಕ್ಷೇತ್ರದಲ್ಲಿ ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಕೇಳಿದ್ದೇನೆ. ಆದರೆ ರಾಮಗರ ಕ್ಷೇತ್ರಕ್ಕೆ ಯಾರು ಬಂದಿಲ್ಲ ಎಂದು ಡಿಕೆ. ಸುರೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    ಬೆಂಗಳೂರು: ಕನ್ನಡದ ಹಿರಿಯ ನಟ ಚಂದ್ರ ಶೇಖರ್ ಅವರು ವಿಧಿವಶರಾಗಿದ್ದಾರೆ. ಕೆನಡಾದಲ್ಲಿ ಅವರಿಗೆ ಹೃದಯಾಘಾತವಾಗಿ ಇಂದು ಮುಂಜಾನೆ 3.30ರ ಸುಮಾರಿಗೆ ಕನ್ನಡದ ನಟ ಕಣ್ಮುಚ್ಚಿದ್ದಾರೆ.

    1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಶಿವಲಿಂಗ, ಅಸ್ತಿತ್ವ, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

    ಡಾ. ರಾಜ ನನ್ನ ರಾಜ ಜೊತೆ ನಟಿಸಿದ್ದರು. ನಂತರ ಸಾಹಸ ಸಿಂಹ ವಿಷ್ಟುವರ್ಧನ್ ಜೊತೆ ವಂಶವೃಕ್ಷ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಮೃತರು ಪತ್ನಿ ಶೀಲಾ ಹಾಗೂ ಪುತ್ರಿ ತಾನ್ಯರನ್ನು ಅಗಲಿದ್ದಾರೆ.

    ಸದ್ಯ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲಾಗುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿ ತಿಳಿದಬಂದಿಲ್ಲ.