Tag: Chandrappa

  • ಹೊಳಲ್ಕೆರೆ ಬಿಜೆಪಿ ಶಾಸಕನಿಂದ ಬೆದರಿಕೆ – ಡೆತ್‌ನೋಟ್‌ ಬರೆದು ಗ್ರಾ.ಪಂ. ಕ್ಲರ್ಕ್‌ ಆತ್ಮಹತ್ಯೆ

    ಹೊಳಲ್ಕೆರೆ ಬಿಜೆಪಿ ಶಾಸಕನಿಂದ ಬೆದರಿಕೆ – ಡೆತ್‌ನೋಟ್‌ ಬರೆದು ಗ್ರಾ.ಪಂ. ಕ್ಲರ್ಕ್‌ ಆತ್ಮಹತ್ಯೆ

    ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ (Holalkere BJP MLA Chandrappa) ಹೆಸರನ್ನು ಬರೆದಿಟ್ಟು ಗ್ರಾಮ ಪಂಚಾಯತ್‌ ಕ್ಲರ್ಕ್‌ (Village Panchayat Clerk) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ (Chitradurga ) ಜಿಲ್ಲೆಯ ಹೊಸದುರ್ಗದ ಜಾನಕಲ್‌ ಬಳಿ ನಡೆದಿದೆ.

    ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮಪಂಚಾಯತ್‌ನ ತಿಪ್ಪೇಸ್ವಾಮಿ ಆತ್ಮಹತ್ಯೆಗೆ (Suicide) ಶರಣಾದ ಕ್ಲರ್ಕ್‌. ಅಕ್ರಮ ಖಾತೆ ಮಾಡಿಕೊಡುವ ವಿಚಾರಕ್ಕೆ ಹೊಳಲ್ಕೆರೆ ಕ್ಷೇತ್ರದ ಶಾಸಕ‌ಎಂ. ಚಂದ್ರಪ್ಪ,ತಾಪಂ ಇಒ‌ ರವಿ ಹಾಗೂ ಗ್ರಾಪಂ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ‌ಒತ್ತಡ‌ ಹೇರಿದ್ದರು. ಪದೇ ಪದೇ ಫೋನ್ ಮಾಡಿ ಕಿರುಕುಳ‌ ನೀಡುತ್ತಿದ್ದರು. ಹೀಗಾಗಿ ಮನನೊಂದು ಅವರ ಕಿರುಕುಳ‌ ತಾಳಲಾರದೇ ನಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮರಣ ಪತ್ರದಲ್ಲಿ ‌ಮೃತ ತಿಪ್ಪೇಸ್ವಾಮಿ ಉಲ್ಲೇಖಿಸಿದ್ದಾರೆ.

    ಶನಿವಾರ ಸಂಜೆ ಆತಹತ್ಯೆಗೆ ಶರಣಾಗಿರುವ ತಿಪ್ಪೇಸ್ವಾಮಿ ಚಿತ್ರದುರ್ಗ ತಾಲ್ಲೂಕಿನ ಸೊಂಡೆಕೊಳ ಮೂಲದವರಾಗಿದ್ದಾರೆ. ಅವರ ಸಂಬಂಧಿಕರಿದ್ದ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮಕ್ಕೆ ನಿನ್ನೆ ತೆರಳಿದ್ದರು. ಈ ವೇಳೆ ದೂರ‌ದ‌ ಜಮೀನಿಗೆ ತೆರಳಿ‌ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 2-3 ಸ್ಥಾನ ಅಲ್ಪಸಂಖ್ಯಾತರಿಗೆ ನೀಡಿ – ಕಾಂಗ್ರೆಸ್‌ಗೆ ಮುಖಂಡರ ಬೇಡಿಕೆ

    ಹೊಸದುರ್ಗ ಪೊಲೀಸ್ ಠಾಣೆಗೆ ತಿಪ್ಪೇಸ್ವಾಮಿಯವರ ಪುತ್ರಿ ಆಶಾ ರಾಜಶೇಖರ್ ದೂರು ನೀಡಿದ್ದಾರೆ‌. ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾ.ಪಂ ಇಓ ರವಿ ಹೆಸರು ಉಲ್ಲೇಖವಿಲ್ಲ. ಗ್ರಾ.ಪಂ ಸದಸ್ಯರ ಕಿರುಕುಳ ಹಿನ್ನಲೆ ಆತ್ಮಹತ್ಯೆ ಎಂದು‌ ಮಾತ್ರ ದೂರು‌ ದಾಖಲಾಗಿದೆ.‌

     
    ಈ ಸಂಬಂಧ ದೂರುದಾರರಾದ ಆಶಾ ಅವರನ್ನು ಸಂಪರ್ಕಿಸಿ ಡೆತ್ ನೋಟಲ್ಲಿ ಶಾಸಕರ ಹೆಸರಿದೆ. ಆದರೆ ನೀವ್ಯಾಕೆ ದೂರಿನಲ್ಲಿ ಕೇವಲ ಗ್ರಾಪಂ ಸದಸ್ಯರ ವಿರುದ್ಧ ದೂರು ನೀಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಈ ಪ್ರಕರಣ‌ದ ಸಂಬಂಧ ಏನು ಹೇಳುವುದಿಲ್ಲ.ನಾವು ದುಃಖದಲ್ಲಿದ್ದೇವೆ ಎಂದು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.

    ಚಿತ್ರದುರ್ಗ ಎಸ್ಪಿ ‌ಪರಶುರಾಮ್‌ ಅವರನ್ನು ಪ್ರಕರಣ ಸಂಬಂಧ ಪಬ್ಲಿಕ್ ಟಿವಿ ದೂರವಾಣಿ ಮೂಲಕ‌ ಸಂಪರ್ಕಿಸಿದೆ. ಆಗ ಅವರು ಈ ಸಂಬಂಧ ದೂರುದಾರರು ದೂರಿನಲ್ಲಿ ನೀಡಿರುವ ವಿಚಾರದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ಒಂದು ವೇಳೆ ಪ್ರಕರಣದ ಸಂಬಂಧ ಅಗತ್ಯವಿದ್ದರೆ ಶಾಸಕರನ್ನು ವಿಚಾರಣೆ ನಡೆಸುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊಸದುರ್ಗ ಠಾಣೆ ಪೊಲಿಸರು‌ ತನಿಖೆ ಮುಂದುವರೆಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಾಯೋರು ಎಲ್ಲಾದರೂ ಸಾಯಲಿ’ – ಶಾಸಕ ಎಂ.ಚಂದ್ರಪ್ಪ

    ‘ಸಾಯೋರು ಎಲ್ಲಾದರೂ ಸಾಯಲಿ’ – ಶಾಸಕ ಎಂ.ಚಂದ್ರಪ್ಪ

    ಚಿತ್ರದುರ್ಗ: ನಾನು ಇಲ್ಲಿ ಆಸ್ಪತ್ರೆ ಮಾಡೋದಿಲ್ಲ. ನನಗೆ ಅವಶ್ಯಕತೆ ಇಲ್ಲ. ‘ಸಾಯೋರು ಎಲ್ಲಾದರೂ ಸಾಯಲಿ’ ಎಂದು ಉಡಾಫೆಯ ಉತ್ತರ ನೀಡುವ ಮೂಲಕ ಹೊಳಲ್ಕೆರೆ ಬಿಜೆಪಿ ಶಾಸಕ ಹಾಗೂ ಸಾರಿಗೆ ನಿಗಮ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಟೀಕೆಗೆ ಗುರಿಯಾಗಿದ್ದಾರೆ.

    ಜಿಲ್ಲೆಯಲ್ಲಿ ಕೋವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಎಂ.ಚಂದ್ರಪ್ಪ, ಡಿಹೆಚ್‍ಓ ಡಾ.ಪಾಲಾಕ್ಷಗೆ ಹೇಳಿದ ವೀಡಿಯೋ ಸಂಭಾಷಣೆ ಇದಾಗಿದ್ದು, ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ 50 ಬೆಡ್‍ನ ಕೊವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಶಾಸಕರು ತಿಳಿಸಿದ್ದರು. ಆದರೆ 10 ಆಕ್ಸಿಜನ್ ಬೆಡ್ ನಿರ್ಮಾಣದ ಬಗ್ಗೆ ಶಾಸಕರಿಗೆ ಡಿಹೆಚ್‍ಓ ಮಾಹಿತಿ ನೀಡಿದ್ದರು. ಇದರಿಂದ ಕೆರಳಿದ ಚಂದ್ರಪ್ಪರವರು 50 ಆಕ್ಸಿಜನ್ ಬೆಡ್ ನಿರ್ಮಿಸಿ ಇಲ್ಲವಾದರೆ ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.

    ನಾನು ಆಸ್ಪತ್ರೆ ಮಾಡೋದಿಲ್ಲ ಇಲ್ಲಿ, ನನಗೆ ಅವಶ್ಯಕತೆ ಇಲ್ಲ. ಸಾಯೋರು ಎಲ್ಲಾದರೂ ಸಾಯಲಿ ಎಂದು ಚಂದ್ರಪ್ಪ ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.