Tag: chandigarh

  • ಪ್ರಿಯಕರನೊಂದಿಗೆ ಎಸ್ಕೇಪ್ ಆಗಲು ಪತಿಯನ್ನೇ ಹತ್ಯೆಗೈದ 2 ಮಕ್ಕಳ ತಾಯಿ

    ಪ್ರಿಯಕರನೊಂದಿಗೆ ಎಸ್ಕೇಪ್ ಆಗಲು ಪತಿಯನ್ನೇ ಹತ್ಯೆಗೈದ 2 ಮಕ್ಕಳ ತಾಯಿ

    – ಮಕ್ಕಳಿಂದ ತಾಯಿ ಕೃತ್ಯ ಬಯಲು

    ಚಂಡೀಗಢ: ಮಹಿಳೆಯೊಬ್ಬಳು ತಾನು ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನೊಂದಿಗೆ ಪರಾರಿಯಾಗಲು ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಪಂಜಾಬಿನ ತರನ್ ತರನ್ ಜಿಲ್ಲೆಯಲ್ಲಿ ನಡೆದಿದೆ.

    ರಾಜ್‍ಪ್ರೀತ್ ಸಿಂಗ್ ಕೊಲೆಯಾದ ಪತಿ. ಆರೋಪಿ ಪತ್ನಿ ಸಿಮ್ರಾನ್ ಕೌರ್ ಮೊದಲಿಗೆ ಪತಿಯ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿದ್ದಾಳೆ. ಪತಿ ವಿಷದಿಂದ ಸಾಯುವುದು ಅನುಮಾನ ಎಂದು ತಿಳಿದು ಭಯದಿಂದ ತಾನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಿಮ್ರಾನ್ ಮತ್ತು ಮೃತ ರಾಜ್‍ಪ್ರೀತ್ ಸಿಂಗ್ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಆರೋಪಿ ಸಿಮ್ರಾನ್ ಲವ್‍ಪ್ರೀತ್ ಸಿಂಗ್ ಲವ್ಲಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ತಿಳಿದ ಸಿಮ್ರಾನ್ ಕುಟುಂಬವು ಇಬ್ಬರ ಸಂಬಂಧವನ್ನು ತಡೆಯಲು ಪ್ರಯತ್ನಿಸಿದ್ದರು. ಸಿಮ್ರಾನ್‍ಗೆ ಮಕ್ಕಳ ಭವಿಷ್ಯದ ಬಗ್ಗೆ ಅರ್ಥಮಾಡಿಸಲು ಯತ್ನಿಸಿದ್ದಾರೆ. ಆದರೂ ಸಿಮ್ರಾನ್ ಆತನೊಂದಿಗೆ ತನ್ನ ಸಂಬಂಧವನ್ನು ಮುಂದುವರಿಸಿದ್ದಳು.

    ಕೊಲೆ:
    ಕೊನೆಗೆ ಸಿಮ್ರಾನ್ ಪ್ರಿಯಕರನೊಂದಿಗೆ ಓಡಿ ಹೋಗಲು ನಿರ್ಧರಿಸಿದ್ದು, ಇದಕ್ಕೆ ಅಡ್ಡಿಯಾಗುವ ಪತಿಯನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಳು. ಅದರಂತೆಯೇ ಪತಿ ರಾಜ್‍ಪ್ರೀತ್ ಮಾಡುವ ಊಟದಲ್ಲಿ ವಿಷ ಬೆರೆಸಿದ್ದಳು. ಅದನ್ನು ಪತಿ ತಿಂದಿದ್ದಾನೆ. ಆದರೂ ಆತ ಸಾಯುವುದಿಲ್ಲ ಎಂಬ ಭಯದಿಂದ ಪತಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ ಅವಳು ಪ್ರೇಮಿಯೊಂದಿಗೆ ಓಡಿಹೋಗುವ ಮೊದಲು ಮಕ್ಕಳನ್ನು ತನ್ನ ತಂದೆಯ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ.

    ಇತ್ತ ಮಕ್ಕಳು ತಾಯಿ ಸಿಮ್ರಾನ್ ತಂದೆಯನ್ನು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ತಮ್ಮ ಅಜ್ಜನಿಗೆ ಹೇಳಿದ್ದಾರೆ. ಆಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಆಕೆಯ ಮಕ್ಕಳು ತಮ್ಮ ತಾಯಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಕೆಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ.

    ಮಾಹಿತಿ ತಿಳಿದು ರಾಜ್‍ಪ್ರೀತ್‍ನ ಮನೆಗೆ ಹೋದಾಗ ಆತನ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜ್‍ಪ್ರೀತಿ ಮೃತಪಟ್ಟಿದ್ದಾನೆ. ಮೃತ ತಂದೆ ಸಿಮ್ರಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರಿನ ಮೇರೆಗೆ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳಾದ ಸಿಮ್ರಾನ್ ಮತ್ತು ಲವ್ಲಿಯನ್ನು ಬಂಧಿಸಲು ಶೋಧಕಾರ್ಯ ನಡೆಸುತ್ತಿದ್ದಾರೆ.

  • ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ತಯಾರಿ – 5ನೇ ಪ್ರಯತ್ನದಲ್ಲಿ ಐಎಎಸ್ ಆಫೀಸರ್

    ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ತಯಾರಿ – 5ನೇ ಪ್ರಯತ್ನದಲ್ಲಿ ಐಎಎಸ್ ಆಫೀಸರ್

    ಚಂಡೀಗಢ: ನಿರಂತರ ಪ್ರಯತ್ನ, ಕಠಿಣ ಪರಿಶ್ರಮದಿಂದ ಜನರು ಏನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಿಎಸ್‍ಎಫ್ ಯೋಧರೊಬ್ಬರು ಮಾದರಿಯಾಗಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿ 5ನೇ ಪ್ರಯತ್ನದಲ್ಲಿ ಬಿಎಸ್‍ಎಫ್ ಯೋಧ ಐಎಎಸ್ ಆಫೀಸರ್ ಆಗಿದ್ದಾರೆ.

    ಹರ್‌ಪ್ರೀತ್ ಸಿಂಗ್ ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಹರ್‌ಪ್ರೀತ್ ಅವರು ಗಡಿಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಬಳಿಕ ಬಿಡುವಿನ ಸಮಯದಲ್ಲಿ ಓದಿ 5ನೇ ಬಾರಿಗೆ ಐಎಎಸ್ ಪರೀಕ್ಷೆಯಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲದೆ ಹರ್‌ಪ್ರೀತ್ ಅವರು ದೇಶದ ಟಾಪ್ 20ಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

    2016ರಲ್ಲಿ ಯುಪಿಎಸ್‍ಸಿ ಮೂಲಕ ನಾನು ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಬಿಎಸ್‍ಎಫ್ ಸೇರಿದೆ. ಬಿಎಸ್‍ಎಫ್ ಸೇರಿದ ಬಳಿಕ ನನಗೆ ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಪೋಸ್ಟಿಂಗ್ ಆಯ್ತು. ಗಡಿಯಲ್ಲಿ ನನ್ನ ಡ್ಯೂಟಿ ನನಗೆ ಇಷ್ಟವಾಗುತಿತ್ತು. ನಾನು ಆ ಕಷ್ಟದ ಕೆಲಸವನ್ನು ಇಷ್ಟಪಡಲು ಶುರು ಮಾಡಿದೆ. ಆದರೆ ನಾನು ಐಎಎಸ್ ಆಫೀಸರ್ ಆಗಬೇಕು ಎಂದು ಕನಸು ಕಂಡಿದ್ದೆ. ಹಾಗಾಗಿ ಗಡಿಯಲ್ಲಿ ನನ್ನ ಕೆಲಸ ಮುಗಿದ ನಂತರ ಬಿಡುವಿನ ಸಮಯದಲ್ಲಿ ನನ್ನ ಗುರಿಯತ್ತ ಗಮನ ಹರಿಸಿದೆ ಎಂದು ಹರ್‌ಪ್ರೀತ್ ಹೇಳಿದ್ದಾರೆ.

    ನನ್ನ ಗುರಿ ನನ್ನ ತಲೆಯಲ್ಲಿ ಸ್ಪಷ್ಟವಾಗಿತ್ತು. ಹಾಗಾಗಿ ನನ್ನ ಗಮನ ಬೇರೆ ಕಡೆ ಹೋಗಲ್ಲ. ಕರ್ತವ್ಯ ಹೊರತಾಗಿ ನಾನು ನನ್ನ ಸಂಪೂರ್ಣ ಸಮಯವನ್ನು ನೋಟ್ಸ್ ಓದುತ್ತಿದ್ದೆ. ಹಾಗಾಗಿ ನಾನು 5ನೇ ಬಾರಿ ಯಶಸ್ಸು ಕಂಡಿದ್ದೇನೆ. ಪಬ್ಲಿಕ್ ಆಡ್ಮಿನಿಸ್ಟ್ರೇಷನ್ ನನ್ನ ಐಚ್ಚಿಕ ವಿಷಯವಾಗಿತ್ತು. ಬಲವಾದ ನಿರ್ಧಾರ ಹಾಗೂ ನನ್ನ ಕಠಿಣ ಪರಿಶ್ರಮ ಈ ಎರಡು ವಿಷಯಗಳನ್ನು ನನ್ನ ಯಶಸ್ಸಿನ ಮೂಲ ಮಂತ್ರ ಎಂದು ನಾನು ಪರಿಗಣಿಸುತ್ತೇನೆ. ನನ್ನ ಪ್ರಕಾರ ನಾವು ನಮ್ಮ ಕನಸ್ಸನ್ನು ಹಿಂದೆ ಬಿಡಬಾರದು. ಎಷ್ಟೇ ಕಷ್ಟ ಆದರೂ ನಾವು ಪ್ರಯತ್ನ ಪಡಬೇಕು ಎಂದರು.

    ನಾನು ಮೂಲತಃ ಪಂಜಾಬ್‍ನವನಾಗಿದ್ದು, ಐಟಿಎಸ್ (ಇಂಡಿಯನ್ ಟ್ರೆಂಡ್ ಸರ್ವೀಸ್) ನಲ್ಲಿ ತೇರ್ಗಡೆಯಾದೆ. ಬಳಿಕ 2007ರಲ್ಲಿ ಸಿವಿಲ್ ಸೇವಾ ಪರೀಕ್ಷೆ ಬರೆದೆ. ಆಗ ನನಗೆ 454 ರ್‍ಯಾಂಕ್ ದೊರೆತಿದ್ದು, ನನ್ನನ್ನು ಭಾರತೀಯ ಟ್ರೆಂಡ್ ಸರ್ವಿಸ್‍ಗೆ ಆಯ್ಕೆ ಮಾಡಲಾಯಿತು. ಆ ಸಂದರ್ಭದಲ್ಲಿ ನಾನು ಬಿಎಸ್‍ಎಫ್ ತೊರೆದು ಐಟಿಎಸ್ ಸೇರಿಕೊಂಡೆ. ಮತ್ತೆ 2018ರಲ್ಲಿ ನಾನು 5ನೇ ಬಾರಿ ಸಿವಿಲ್ ಪರೀಕ್ಷೆ ಬರೆದೆ. ಈ ಬಾರಿ ನನಗೆ 19ನೇ ರ್‍ಯಾಂಕ್ ಬಂತು ಹಾಗೂ ನನ್ನ ಕನಸು ನನಸಾಯಿತು ಎಂದು ಹರ್‌ಪ್ರೀತ್ ಸಂತಸ ವ್ಯಕ್ತಪಡಿಸಿದ್ದಾರೆ.

    ಹರ್‌ಪ್ರೀತ್ ಅವರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಆಕಾಡೆಮಿ ಆಫ್ ಆಡ್ಮಿನಿಸ್ಟ್ರೇಸನ್‍ನಲ್ಲಿ ಟ್ರೈನಿಂಗ್ ನಡೆಯಲಿದೆ. ಹರ್‌ಪ್ರೀತ್ ಗ್ರೀನ್ ಗ್ರೀವ್ ಪಬ್ಲಿಕ್ ಶಾಲೆಯಲ್ಲಿ ಓದಿದ ಬಳಿಕ ಎಲೆಕ್ಟ್ರಾನಿಕ್ಸ್ ನಲ್ಲಿ ಬಿಇ ಪದವಿ ಪಡೆದಿದ್ದಾರೆ. ಹರ್‌ಪ್ರೀತ್ ಅವರ ತಂದೆ ಉದ್ಯಮಿಯಾಗಿದ್ದು ತಾಯಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ಸೈನ್ಯದ ರಹಸ್ಯ ಮಾಹಿತಿಯನ್ನ ಫೇಸ್‍ಬುಕ್ ಮಹಿಳೆಯೊಂದಿಗೆ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್

    ಸೈನ್ಯದ ರಹಸ್ಯ ಮಾಹಿತಿಯನ್ನ ಫೇಸ್‍ಬುಕ್ ಮಹಿಳೆಯೊಂದಿಗೆ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್

    ಚಂಡೀಗಢ: ಭಾರತದ ಸೇನೆಯ ಯೋಧರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಚಂಡೀಗಢದ ನರ್ನಾರ್ ನಗರದಲ್ಲಿ ನಡೆದಿದೆ. ಸುಮಾರು 2 ವರ್ಷಗಳಿಂದ ಫೇಸ್‍ಬುಕ್ ಮೂಲಕ ಪರಿಚಯವಾದ ವಿದೇಶಿ ಮಹಿಳೆಯೊಂದಿಗೆ ಸೈನ್ಯದ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಆರೋಪದ ಮೇಲೆ ಮೇಲೆ ಯೋಧನ ಬಂಧನವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಹರಿಯಾಣದ ಮಹೇಂದರ್‍ಗಢ್ ಜಿಲ್ಲೆಯ ಬಸ್ಸೈ ಗ್ರಾಮದ ರವೀಂದರ್ ಕುಮಾರ್ ಯಾದವ್ (21) ಬಂಧಿತ ಯೋಧ. ಬಂಧನದ ವೇಳೆ ಆತನಿಂದ 7 ಲೈವ್ ಕಾರ್ಟ್ರಿಡ್ಜ್ ಗಳು, 2 ಮೊಬೈಲ್ ಫೋನ್ ಮತ್ತು ಮೂರು ಸಿಮ್ ಕಾರ್ಡ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಂಧಿತ ಯೋಧ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಐದು ದಿನಗಳ ರಜೆಯನ್ನು ಮುಗಿಸಿ ಮನೆಯಿಂದ ಜುಲೈ 10ರಂದು ಹಿಂದಿರುಗುತ್ತಿದ್ದ ವೇಳೆ ಬಂಧಿಸಲಾಗಿದೆ. ಸ್ಥಳೀಯ ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ಡಾಬಾದಿಂದ ಟೀ ಕುಡಿದು ಆತ ಹೊರ ಬರುವಾಗ ನರ್ನಾಲ್ ಪೊಲೀಸರು ಆತನ್ನು ಬಂಧಿಸಿದ್ದಾರೆ. ಬಳಿಕ ಯೋಧನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಲಾಗಿದ್ದು, ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ನರ್ನಾಲ್ ಪೊಲೀಸ್ ಅಧಿಕಾರಿ ಚಂದರ್ ಮೋಹನ್ ಹೇಳಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಸೆಕ್ಷನ್ 4, 5, 9 ಮತ್ತು ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಫೇಸ್‍ಬುಕ್ ಪರಿಚಯ: 2017 ಮಾರ್ಚ್‍ನಲ್ಲಿ ಯಾದವ್ ಅವರನ್ನು ಸೇನೆಯ 5 ಕುಮಾವುನ್ ರೆಜಿಮೆಂಟ್‍ನಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಆ ಬಳಿಕ 2018 ರಲ್ಲಿ ಅಮೃತಸರದಲ್ಲಿ ಪೋಸ್ಟ್ ನೀಡಲಾಗಿತ್ತು. ಈ ವೇಳೆ ಆತ ವಿದೇಶಿ ಮಹಿಳೆಯೊಂದಿಗೆ ಸಂಪರ್ಕವನ್ನು ಆರಂಭಿಸಿದ್ದು ತಿಳಿದು ಬಂದಿದೆ. ಮೊದಲು ಫೇಸ್ ಬುಕ್‍ನಲ್ಲಿ ಚಾಟ್ ಮೂಲಕ ಮಹಿಳೆ ಪರಿಚಯವಾಗಿತ್ತು. ಈ ಸಂದರ್ಭದಲ್ಲಿ ಆತ ಮಹಿಳೆಗೆ ತಾನು ಯೋಧ ಎಂದು ತಿಳಿಸಿದ್ದ. ಆ ಬಳಿಕ ಮಹಿಳೆ ಯೋಧನಿಗೆ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಳು.

    ಪಾಕ್ ಕೈವಾಡ: ಈ ಸಂದರ್ಭದಲ್ಲಿ ಆತ ಸೇನಾ ಘಟಕ ಮತ್ತು ಶಸ್ತ್ರಾಸ್ತ್ರಗಳ ಸ್ಥಳ ಫೋಟೋ ಹಾಗೂ ಮಾಹಿತಿಯನ್ನು ಮಹಿಳೆಯೊಂದಿಗೆ ಹಂಚಿಕೊಂಡಿದ್ದ. ಅಲ್ಲದೇ ತನ್ನ ವರ್ಗಾವಣೆಯ ಬಗ್ಗೆಯೂ ಮಾಹಿತಿ ನೀಡಿದ್ದ. ವಿದೇಶಿ ಮಹಿಳೆ ಯೋಧನ ಖಾತಗೆ ಸುಮಾರು 5,000 ರೂ.ಗಳನ್ನು ಡೆಪಾಸಿಟ್ ಮಾಡಿದ್ದಳು. ಈ ಮಾಹಿತಿ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ತಿಳಿದು ಬಂದಿತ್ತು. ಮಾಹಿತಿ ಪಡೆದ ಪೊಲೀಸರು ಯೋಧನನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸಿದ್ದಾರೆ.

    ಅಂದಹಾಗೇ ಯೋಧ ಯಾದವ್ ಮೂರು ವಾಟ್ಸಾಪ್ ಸಂಖ್ಯೆಗಳನ್ನು ಬಳಸುತ್ತಿದ್ದ. ಮಹಿಳೆಯೂ ಕೂಡ ಆತನಿಗೆ ನೇರ ಕರೆ ಮಾಡದೇ ಕೇವಲ ವಾಟ್ಸಾಪ್ ಕಾಲ್ ಮಾತ್ರ ಮಾಡುತ್ತಿದ್ದಳು. ಸದ್ಯ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆ ಪಾಕಿಸ್ತಾನಕ್ಕೆ ಸೇರಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಫೇಸ್‍ಬುಕ್ ದಾಖಲೆಯ ಪ್ರಕಾರ ಆಕೆ ತನ್ನನ್ನು ಕ್ಯಾಪ್ಟನ್ ಅನಿಕಾ ಎಂದು ಪರಿಚಯಿಸಿಕೊಂಡಿದ್ದಳು.

  • ತಪ್ಪು ಮಾಡಿ ಅಮಾಯಕ ಯುವಕನಿಗೆ ರಾಡ್‍ನಿಂದ ಥಳಿಸಿದ ಮಹಿಳೆ!

    ತಪ್ಪು ಮಾಡಿ ಅಮಾಯಕ ಯುವಕನಿಗೆ ರಾಡ್‍ನಿಂದ ಥಳಿಸಿದ ಮಹಿಳೆ!

    ಚಂಡೀಗಢ: ಮಹಿಳೆಯೊಬ್ಬಳು ತಾನೇ ತಪ್ಪು ಮಾಡಿ, ಅಮಾಯಕ ಯುವಕನ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಪೊಲೀಸ್ ಬಂಧನದಲ್ಲಿದ್ದ ಆರೋಪಿ ಮಹಿಳೆ ಜಾಮೀನು ಪಡೆದು ಬಿಡುಗಡೆಯಾಗಿದ್ದಾಳೆ.

    ಮೊಹಾಲಿ ನಿವಾಸಿ ಶೀತಲ್ ಶರ್ಮಾ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿ. ಚಂಡೀಗಢ ನಿವಾಸಿ ನಿತೀಶ್ ಹಲ್ಲೆಗೆ ಒಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ನಿತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆಗಿದ್ದೇನು?:
    ಶೀತಲ್ ಟ್ರಿಬ್ಯೂನ್ ಚೌಕ್ ಬಳಿ ರ್ಯಾಶ್ ಆಗಿ ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಅದೇ ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದ ನಿತೀಶ್, ನಿಧಾನವಾಗಿ ಕಾರನ್ನು ರಿವರ್ಸ್ ಮಾಡುವಂತೆ ಬುದ್ಧಿ ಹೇಳಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಾಗ್ವಾದ ಆರಂಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಶೀತಲ್ ತನ್ನ ಕಾರಿನಲ್ಲಿದ್ದ ಕಬ್ಬಿಣದ ರಾಡ್ ತಂದು ನಿತೀಶ್‍ಗೆ ಥಳಿಸಿದ್ದಾಳೆ. ಶೀತಲ್ ವರ್ತನೆಯಿಂದ ಕೋಪಗೊಂಡ ನಿತೀಶ್ ಕೂಡ ಕೈಗೆ ಸಿಕ್ಕ ವಸ್ತುವಿನಿಂದ ಮಹಿಳೆಯ ಕಾರಿಗೆ ಹೊಡೆದು ಗಾಜನ್ನು ಪುಡಿ ಮಾಡಿದ್ದಾರೆ.

    ನಿತೀಶ್ ಹಾಗೂ ಶೀತಲ್ ಮಧ್ಯೆ ನಡೆಯುತ್ತಿದ್ದ ಗಲಾಟೆ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆಯ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

    ಈ ವಿಡಿಯೋವನ್ನು ಆಧಾರಿಸಿ ಪೊಲೀಸರು ಆರೋಪಿ ಶೀತಲ್‍ಳನ್ನು ಬಂಧಿಸಿ, ಐಪಿಸಿ ಸೆಕ್ಷನ್ 279 (ರ್ಯಾಸ್ ಡ್ರೈವಿಂಗ್), 323 (ಉದ್ದೇಶಪೂರ್ವಕವಾಗಿ ಹಲ್ಲೆ), 506 (ಜೀವ ಬೆದರಿಕೆ) ಮತ್ತು 336 (ಅನ್ಯರ ಜೀವಕ್ಕೆ ಅಪಾಯವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ಶೀತಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.

  • ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಚಂಡೀಗಢ್: ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ಬರುತ್ತಿದ್ದ 29 ವರ್ಷದ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹರಿಯಾಣದ ಗುರುಗ್ರಾವ್‍ನಲ್ಲಿ ನಡೆದಿದೆ.

    ಈ ಘಟನೆ ಹುಡಾ ಸಿಟಿ ಸೆಂಟರ್ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ನಡೆದಿದೆ. ಈ ಕುರಿತು ಗುರುಗಾಂವ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ಜೂನ್ 14 ಸುಮಾರು ರಾತ್ರಿ 9.25ಕ್ಕೆ ನಡೆದಿದೆ. ಈ ಬಗ್ಗೆ ಮಹಿಳೆ ತನ್ನ ಟ್ವಿಟ್ಟರ್‌ನಲ್ಲಿ ಬರೆದುಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದೆಹಲಿ ಮೂಲದ ಮಹಿಳೆ ಗುರುಗ್ರಾಮ್‍ನಲ್ಲಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದರು. ಮಹಿಳೆ ಇಂಟೀರಿಯರ್ ಡಿಸೈನರ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 14 ರಂದು ಮೆಟ್ರೋ ನಿಲ್ದಾಣದ ಮಾಲ್‍ನಲ್ಲಿ ಶಾಪಿಂಗ್ ಮುಗಿಸಿ ಎಸ್ಕಲೇಟರ್ ಮೂಲಕ ಕೆಳಗೆ ಬರುತ್ತಿದ್ದರು. ಆಗ ಆಕೆಯ ಹಿಂದೆ ವ್ಯಕ್ತಿಯೊಬ್ಬ ಬರುತ್ತಿದ್ದನು. ಇದನ್ನು ಗಮನಿಸಿದ ಮಹಿಳೆ ಹಿಂದೆ ತಿರುಗಿ ನೋಡಿದ್ದಾರೆ. ಆಗ ಆತ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಕಂಡು ದಂಗಾದ ಮಹಿಳೆ ಆತನ ಕಪಾಳಕ್ಕೆ ಹೊಡೆದು ಬೈದಿದ್ದಾರೆ. ಅಷ್ಟೇ ಅಲ್ಲದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಮಹಿಳೆ ಕಿರುಚಾಟದಿಂದ ಭಯಗೊಂಡ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಹಿಳೆಯ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ನಾನು ಮನೆಗೆ ಬಂದು ಗುರುಗ್ರಾಮ್ ಪೊಲೀಸರಿಗೆ ಫೇಸ್‍ಬುಕ್ ಖಾತೆ ಮೂಲಕ ಮೆಸೇಜ್ ಮಾಡಿದೆ. ಆದರೆ ಪೊಲೀಸರು ಯಾವುದೇ ರೀತಿಯ ಉತ್ತರವನ್ನು ನೀಡಲಿಲ್ಲ. ನಂತರ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (ಡಿಎಂಆರ್​ಸಿ)ಗೆ ಮೆಸೇಜ್ ಮಾಡಿದ್ದೆ. ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ವ್ಯಕ್ತಿ ಹಸ್ತಮೈಥುನ ಮಾಡುತ್ತಿರುವುದು ಸೆರೆಯಾಗಿದೆ ಎಂದು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದಾರೆ. ಅದರ ಆಧಾರದ ಮೇರೆಗೆ ಐಪಿಸಿ ಸೆಕ್ಷನ್‍ಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಸಾಕ್ಷ್ಯಗಳಿಗಾಗಿ ಡಿಎಂಆರ್​ಸಿಯೊಂದಿಗೆ ಚರ್ಚೆ ಮಾಡಲಾಗಿದೆ. ಆದರೆ ಆರೋಪಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬೊಕೆನ್ ಹೇಳಿದ್ದಾರೆ.

  • ಗೆಳೆಯನನ್ನ ಮನೆಗೆ ಕರ್ಕೊಂಡು ಬಂದ ಪತಿ -ಆತನೊಂದಿಗೆ ಪತ್ನಿ ಲವ್ವಿಡವ್ವಿ

    ಗೆಳೆಯನನ್ನ ಮನೆಗೆ ಕರ್ಕೊಂಡು ಬಂದ ಪತಿ -ಆತನೊಂದಿಗೆ ಪತ್ನಿ ಲವ್ವಿಡವ್ವಿ

    -ಕೊನೆಗೆ ಪ್ರೀತ್ಸಿ ಮದ್ವೆಯಾಗಿದ್ದ ಗಂಡನನ್ನೇ ಕೊಲೈಗೈದ್ಳು

    ಚಂಡೀಗಢ: ಪತಿಯನ್ನು ಕೊಂದ ಆರೋಪದ ಮೇರೆಗೆ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಹರಿಯಾದ ಗುರುಗ್ರಾಮದಲ್ಲಿ ನಡೆದಿದೆ.

    ಬಂಧಿತ ಆರೋಪಿಗಳನ್ನು ಅನಿತಾ ಮತ್ತು ರಾಜನ್ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ ಅನಿತಾ ತನ್ನ ಪ್ರಿಯಕರ ರಾಜನ್ ಜೊತೆ ಸೇರಿಕೊಂಡು ಪತಿ ಅರವಿಂದ್‍ನನ್ನು ಬುಧವಾರ ಮುಂಜಾನೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನಿತಾ ತನ್ನ ಪತಿಯನ್ನು ರಾಜನ್ ಸಹಾಯದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ನಂತರ ಶನಿವಾರ ಆಕೆಯನ್ನು ಬಂಧಿಸಲಾಗಿದೆ. ಇನ್ನೂ ಗುರುಗ್ರಾಮದಲ್ಲಿರುವ ಅಡಗುತಾಣದಲ್ಲಿ ಆರೋಪಿ ರಾಜನ್‍ನನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬೊಕಾನ್ ಹೇಳಿದ್ದಾರೆ.

    ನಾನು ಪತಿಗೆ ಬ್ರೇಕ್‍ಫಾಸ್ಟ್ ನೀಡಲು ಹೋದಾಗ ಪತಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಬುಧವಾರ ಬೆಳಗ್ಗೆ ಅನಿತಾ ಪೊಲೀಸರಿಗೆ ತಿಳಿಸಿದ್ದಳು. ಆದರೆ ತನಿಖೆಯ ಸಂದರ್ಭದಲ್ಲಿ ಮೃತ ಅರವಿಂದ್ ತಂದೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು.

    ನನ್ನ ಮಗ ಅರವಿಂದ್ 10 ವರ್ಷಗಳ ಹಿಂದೆ ಬಿಹಾರದಲ್ಲಿ ಅನಿತಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ವಿವಾಹದ ನಂತರ ಇಬ್ಬರು ಗುರುಗ್ರಾಮದಲ್ಲಿ ವಾಸಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ನನ್ನ ಮಗನ ಸ್ನೇಹಿತ ರಾಜನ್‍ನನ್ನು ಭೇಟಿ ಮಾಡಿದ್ದನು. ಈ ವೇಳೆ ಮನೆಯ ಬಾಡಿಗೆಯನ್ನು ಅರ್ಧದಷ್ಟು ಹಂಚಿಕೊಳ್ಳುವ ಷರತ್ತಿನೊಂದಿಗೆ ರಾಜನ್ ಕೂಡ ಅವರೊಂದಿಗೆ ಇದ್ದನು. ದಿನಕಳೆದಂತೆ ರಾಜನ್ ಮತ್ತು ಅನಿತಾ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು ಎಂದು ತಂದೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಅವರಿಬ್ಬರ ಅನೈತಿಕ ಸಂಬಂಧ ತಿಳಿದ ತಕ್ಷಣ ಅರವಿಂದ್ ರಾಜನ್‍ನನ್ನು ಮನೆಯಿಂದ ಹೊರಹಾಕಿದ್ದನು. ನಂತರ ರಾಜನ್ ಆ ಮನೆಯ ಸಮೀಪದಲ್ಲಿ ಬೇರೆ ಬಾಡಿಗೆ ಮನೆ ಮಾಡಿಕೊಂಡಿದ್ದನು. ಆದರೂ ಪತ್ನಿ ಅನಿತಾ ಆತನನ್ನು ಭೇಟಿ ಮಾಡುತ್ತಿದ್ದಳು. ಇದನ್ನು ಗಮನಿಸಿದ ಅರವಿಂದ್ ಮತ್ತೆ ಭೇಟಿಯಾಗಬಾರದೆಂದು ಎಚ್ಚರಿಸಿದ್ದನು. ಇದೇ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಅಂದರೆ ಮಂಗಳವಾರ ರಾಜನ್ ರೂಮಿಗೆ ಪತ್ನಿ ಅನಿತಾ ಹೋಗುತ್ತಿದ್ದಳು. ಅದನ್ನು ಮೃತ ಅರವಿಂದ್ ತಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ ಪತಿಯನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿದ್ದಳು.

    ಅದರಂತೆಯೇ ಬುಧವಾರ ಮುಂಜಾನೆ ಅನಿತಾ ರಾಜನ್ ಮನೆಗೆ ಬರುವಂತೆ ಅನುಕೂಲ ಮಾಡಿಕೊಟ್ಟಿದ್ದಳು. ಇತ್ತ ಅರವಿಂದ್ ನಿದ್ದೆ ಮಾಡುವಾಗ ಇಬ್ಬರು ಸೇರಿಕೊಂಡು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಸದ್ಯಕ್ಕೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪತ್ನಿಯ ಅನೈತಿಕ ಸಂಬಂಧದ ರಹಸ್ಯ ಬಯಲು – ವಿಷ ಕುಡಿದ ಪತಿ

    ಪತ್ನಿಯ ಅನೈತಿಕ ಸಂಬಂಧದ ರಹಸ್ಯ ಬಯಲು – ವಿಷ ಕುಡಿದ ಪತಿ

    ಚಂಡೀಘಡ್: 38 ವರ್ಷದ ವ್ಯಕ್ತಿಯೊಬ್ಬ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂಡೀಗಢದ ಬಾಮುವಾಲ್‍ನಲ್ಲಿ ನಡೆದಿದೆ.

    ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪತಿ. ಈತ ಜೀವನಕ್ಕಾಗಿ ಮರಗೆಲಸ ಕೆಲಸ ಮಾಡಿಕೊಂಡಿದ್ದನು. ಮೂವರು ಮಕ್ಕಳ ತಂದೆಯಾಗಿರುವ ಸಿಂಗ್ ಶುಕ್ರವಾರ ತಮ್ಮ ಮನೆಯಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃತ ಸಿಂಗ್ ಪತ್ನಿಯನ್ನು ಸರಬ್ಜಿತ್ ಕೌರ್ ಎಂದು ಗುರುತಿಸಲಾಗಿದೆ. ಮೃತ ಸಿಂಗ್ ತಾಯಿ, ಸರಬ್ಜಿತ್ ಕೌರ್, ಆಕೆಯ ಪ್ರಿಯಕರ ಗೋಪಿ, ಆತನ ಸ್ನೇಹಿತರಾದ ಗುಪ್ರ್ರೀತ್ ಸಿಂಗ್ ಮತ್ತು ಲಾಧಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನನ್ನ ಮಗ ಇತ್ತೀಚೆಗೆ ಗೋಪಿಯ ಮನೆಯಲ್ಲಿ ಮರಗೆಲಸವನ್ನು ಪೂರ್ಣಗೊಳಿಸಿದ್ದನು. ಗುರುವಾರ ಕೆಲಸದ ಹಣವನ್ನು ಪಡೆಯಲು ಹೋಗಿದ್ದನು. ಆಗ ಗೋಪಿ ಮತ್ತು ಅವನ ಸ್ನೇಹಿತರು ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಮಾತನಾಡಿ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೇ ಹಣವನ್ನು ಕೊಡುವುದಕ್ಕೂ ನಿರಾಕರಿಸಿದ್ದರು. ಈ ಘಟನೆಯಿಂದ ಖಿನ್ನತೆಗೆ ಒಳಗಾದ ಅವನು ಶುಕ್ರವಾರ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಿಂಗ್ ತಾಯಿ ಪ್ರೀತಮ್ ಕೌರ್ ಹೇಳಿದ್ದಾರೆ.

    ಸದ್ಯಕ್ಕೆ ಸಿಂಗ್ ತಾಯಿ ಅವರು ನೀಡಿರುವ ದೂರಿನ ಅನ್ವಯ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆದರೆ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ತನಿಖೆ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಸೋಮ್ ನಾಥ್ ತಿಳಿಸಿದ್ದಾರೆ.

  • ಸಹೋದರಿಯ ಮದ್ವೆಗೆ ರಜೆ ನೀಡದಕ್ಕೆ ವೈದ್ಯ ಆತ್ಮಹತ್ಯೆ

    ಸಹೋದರಿಯ ಮದ್ವೆಗೆ ರಜೆ ನೀಡದಕ್ಕೆ ವೈದ್ಯ ಆತ್ಮಹತ್ಯೆ

    ಚಂಡಿಗಢ್: ಸಹೋದರಿಯ ಮದುವೆಗೆ ರಜೆ ನೀಡಲಿಲ್ಲ ಎಂದು ಕರ್ನಾಟಕದ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣಾದ ರೋಹ್ಟಕ್‍ನಲ್ಲಿ ನಡೆದಿದೆ.

    ಓಂಕಾರ್ (30) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಓಂಕಾರ್ ಮೂಲತಃ ಧಾರವಾಡದವರಾಗಿದ್ದು, ಹರಿಯಾಣಾದಲ್ಲಿ ಎಂಡಿ ಕೋರ್ಸ್ ಮಾಡುತ್ತಿದ್ದರು. ಸಹೋದರಿ ಮದುವೆಗೆ ರಜೆ ನೀಡಲಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರೋಹ್ಟಕ್ ಪೊಲೀಸ್ ಠಾಣೆಯ ಎಸ್‍ಎಚ್‍ಓ ಕೈಲಾಶ್ ಚಂದರ್ ಹೇಳಿದ್ದಾರೆ.

    ತಂಡದ ಮುಖ್ಯಸ್ಥೆಯ ಕಿರುಕುಳ ತಾಳಲಾರದೇ ಓಂಕಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓಂಕಾರ್ ತನ್ನ ಸಾವಿನ ಬಗ್ಗೆ ಯಾವುದೇ ಡೆತ್‍ನೋಟ್ ಬರೆದಿಲ್ಲ. ಆದರೆ ತಂಡದ ಮುಖ್ಯಸ್ಥ ಓಂಕಾರ್ ಗೆ ಕಿರುಕುಳ ನೀಡುತ್ತಿದ್ದರು ಎಂದು ಆತನ ಸಹದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಓಂಕಾರ್ ಸಹೋದರಿಯ ಮದುವೆ ಇತ್ತು. ಆದರೆ ಸಹೋದರಿಯ ಮದುವೆಗೆ ಹೋಗಲು ತಂಡದ ಮುಖ್ಯಸ್ಥೆ ಓಂಕಾರ್ ನಿಗೆ ಅನುಮತಿ ನೀಡಲಿಲ್ಲ. ಹಾಗಾಗಿ ಆತ ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಸ್‍ಎಚ್‍ಓ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಕೇಸ್‍ಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ಈ ಬಗ್ಗೆ ಇನ್ನೂ ವಿಚಾತಣೆ ನಡೆಯುತ್ತಿದೆ ಎಂದು ಕೈಲಾಶ್ ತಿಳಿಸಿದ್ದಾರೆ. ಓಂಕಾರ್ ಸಾವಿಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಿ ಎಂದು ಸಹದ್ಯೋಗಿಗಳು ಆಗ್ರಹಿಸಿದ್ದಾರೆ.

  • ಐಎಂಎನಿಂದ ತರಬೇತಿ ಪಡೆದು ಸೇನೆಗೆ ಸೇರಿ ಇತಿಹಾಸ ಸೃಷ್ಟಿಸಿದ ಅವಳಿ ಸಹೋದರರು

    ಐಎಂಎನಿಂದ ತರಬೇತಿ ಪಡೆದು ಸೇನೆಗೆ ಸೇರಿ ಇತಿಹಾಸ ಸೃಷ್ಟಿಸಿದ ಅವಳಿ ಸಹೋದರರು

    ಚಂಡೀಗಢ: ಇಬ್ಬರು ಅವಳಿ ಸಹೋದರರು ಉತ್ತಾರಖಂಡದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ)ಯಿಂದ ತರಬೇತಿ ಪಡೆದು ಒಂದೇ ಬಾರಿಗೆ ಸೇನೆಗೆ ಸೇರ್ಪಡೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಅವಳಿ ಸಹೋದರರಾದ ಅಭಿನವ್ ಮತ್ತು ಪರಿಣವ್ ಇಬ್ಬರು ಕೇವಲ ಎರಡು ನಿಮಿಷಗಳ ಅಂತರದಲ್ಲಿ ಹುಟ್ಟಿದ್ದಾರೆ. ಇವರಿಬ್ಬರೂ ಜಲಂಧರ್ ಮತ್ತು ಲುಧಿಯಾನಾದಲ್ಲಿ ಎಂಜಿನಿಯರಿಂಗ್ ಪದವಿ ಓದಿದ ಬಳಿಕ ಭಾರತೀಯ ಸೇನೆ ಸೇರುವ ಕನಸನ್ನು ಕಂಡಿದ್ದಾರೆ.

    ಕನಸು ನನಸು ಮಾಡುವ ನಿಟ್ಟಿನಲ್ಲಿ ಐಎಂಎ ಆಯ್ಕೆಯಾಗಿ ಶನಿವಾರ ಪದವಿ ಪಡೆದು ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇಬ್ಬರನ್ನು ಭಾರತೀಯ ಸೇನೆಯ ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ.

    ಈ ಬಗ್ಗೆ ಐಎಂಎ, “ಮಿಲಿಟರಿ ಅಕಾಡೆಮಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಭಿನವ್ ಮತ್ತು ಪರಿಣವ್ ಇಬ್ಬರೂ ಸಹೋದರರು ಐಎಂಎ ಡೆಹ್ರಾಡೂನ್‍ನಲ್ಲಿ ಪದವಿಯನ್ನು ಪಡೆದಿದ್ದಾರೆ. ಆದರೆ ಇಬ್ಬರನ್ನು ಬೇರೆ ಬೇರೆ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ” ಎಂದು ಟ್ವೀಟ್ ಮಾಡಿ ತಿಳಿಸಿದೆ.

    ಅನೇಕ ಬಾರಿ ಡ್ರಿಲ್ ಶಿಕ್ಷಕರು ಪರಿಣವ್ ಬದಲು ನನ್ನನ್ನು ಕರೆಯುತ್ತಿದ್ದರು. ನನ್ನ ಬದಲು ಅವನ ಹೆಸರು ಕರೆಯುತ್ತಿದ್ದರು. ಎಷ್ಟೋ ಬಾರಿ ಸೇನೆಯ ಬೋಧಕರು ಕೂಡ ಗೊಂದಲಕ್ಕೆ ಒಳಗಾಗಿದ್ದರು ಎಂದು ಅಭಿನವ್ ತರಬೇತಿ ವೇಳೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಕೆಲವೊಮ್ಮೆ ನನ್ನ ಊಟದ ಮೆಸ್‍ನಲ್ಲಿ ತುಂಬಾ ಸಿಬ್ಬಂದಿ ಇದ್ದರೆ, ನಾನು ನನ್ನ ಸಹೋದರನ ಮೆಸ್‍ಗೆ ಹೋಗುತ್ತಿದ್ದೆ. ಆಗ ಯಾರು ನನ್ನ ಗುರುತನ್ನು ಪತ್ತೆ ಮಾಡುತ್ತಿರಲಿಲ್ಲ ಎಂದು ಹಾಸ್ಯಮಯ ಸನ್ನಿವೇಶಗಳನ್ನು ಪರಿಣವ್ ಹಂಚಿಕೊಂಡಿದ್ದಾರೆ.

    ಇಬ್ಬರು ಸಹೋದರರು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದರು. ಒಬ್ಬ 100 ಅಂಕಗಳನ್ನು ಗಳಿಸಿದರೆ, ಮತ್ತೊಬ್ಬ ಅಷ್ಟೇ ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರು ಕೊನೆಗೆ 99 ಅಂಕ ಪಡೆಯುತ್ತಿದ್ದನು. ಇಬ್ಬರು ಸೇನೆಗೆ ಸೇರುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಂದೆ ಅಶೋಕ್ ತಿಳಿಸಿದರು.


    ಮಿಲಿಟರಿ ಆಕಾಡೆಮಿಯಲ್ಲಿ ನಡೆದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಇಬ್ಬರು ಎಲ್ಲರ ಗಮನ ಸೆಳೆದಿದ್ದರು. ಅವಳಿ ಮಕ್ಕಳ ಸಾಧನೆಯಿಂದ ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.

  • ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಚಂಢಿಗಡ್: ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಮಹಿಳೆ ಮೃತಪಟ್ಟ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

    ನೀತಾ, ಯಶಿಕಾ ಹಾಗೂ ಲಕ್ಕಿ ಮೃತ ದುರ್ದೈವಿಗಳು. ಅಗ್ನಿ ಅವಘಡದಿಂದ ಉಸಿರುಗಟ್ಟಿ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಕೆಳಮಹಡಿಯಲ್ಲಿ ಇದ್ದ ಬಟ್ಟೆಯ ಗೋಡೌನ್‍ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಕಟ್ಟಡದ ಮೊದಲ ಹಾಗೂ ಎರಡನೇಯ ಮಹಡಿಯಲ್ಲಿ ಶಾಲೆ ನಡೆಸಲಾಗುತಿತ್ತು. ಅಲ್ಲದೆ ಶಾಲೆಯ ನಿರ್ವಾಹಕ ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ವಾಸಿಸುತ್ತಿದ್ದರು.

    ಗ್ರೌಂಡ್ ಫ್ಲೋರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದ ಶಾಲೆಯ ನಿರ್ವಾಹಕ ಅದನ್ನು ನಂದಿಸಲು ಕೆಳಗೆ ಬಂದಿದ್ದಾನೆ. ಮೊದಲು ಗೋಡೌನ್‍ನ ಬೀಗ ತೆಗೆದು ಬಳಿಕ ಕೆಳಗಡೆ ನಿಂತಿದ್ದ ತಮ್ಮ ಕಾರನ್ನು ಹೊರಗೆ ನಿಲ್ಲಿಸಿ ಮತ್ತೆ ಮೇಲೆ ಹೋಗಲು ಯತ್ನಿಸಿದ್ದಾನೆ.

    ನೋಡುವಷ್ಟರಲ್ಲಿ ಬೆಂಕಿ ಮೊದಲನೇ ಹಾಗೂ ಎರಡನೇ ಮಹಡಿ ತಲುಪಿದೆ. ಎರಡನೇ ಮಹಡಿಯಲ್ಲಿ ನೀತಾ ಹಾಗೂ ಅವರ ಇಬ್ಬರ ಮಕ್ಕಳು ಯಶಿಕಾ ಹಾಗೂ ಲಕ್ಕಿ ಇದ್ದರು. ಹೊಗೆ ಹರಡಿಕೊಂಡಿದ್ದ ಕಾರಣ ಮೂವರು ಕೆಳಗೆ ಬರಲು ಸಾಧ್ಯವಾಗಲಿಲ್ಲ.

    ಹೊಗೆಯಿಂದ ಮೂವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ನಂತರ ಮನೆಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ.