Tag: chandigarh

  • ವಯಸ್ಸು ಅರವತ್ತಾದರೂ ಸೂಪರ್ ಮಾಡೆಲ್- ದಿನೇಶ್ ಮೋಹನ್ ಫಿಟ್‍ನೆಸ್‍ಗೆ ಎಲ್ಲರೂ ಫಿದಾ

    ವಯಸ್ಸು ಅರವತ್ತಾದರೂ ಸೂಪರ್ ಮಾಡೆಲ್- ದಿನೇಶ್ ಮೋಹನ್ ಫಿಟ್‍ನೆಸ್‍ಗೆ ಎಲ್ಲರೂ ಫಿದಾ

    ಚಂಡೀಗಢ್: ವಯಸ್ಸು ಅರವತ್ತಾದರೂ ಯುವ ಮಾಡೆಲ್‍ಗಳೇ ನಾಚುವಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಹರ್ಯಾಣದ ದಿನೇಶ್ ಮೋಹನ್ ಮಿಂಚುತ್ತಿದ್ದಾರೆ. ಸರ್ಕಾರಿ ಉದೋಗ್ಯದಲ್ಲಿದ್ದವರು ಈಗ ಸೂಪರ್ ಮಾಡೆಲ್ ಆಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

    60ರ ವಯಸ್ಸಿನಲ್ಲೂ ಕಟ್ಟುಮಸ್ತಾಗಿ ದೇಹ ಮಾಡಿಕೊಂಡಿರುವ ಸೂಪರ್ ಮಾಡೆಲ್ ದಿನೇಶ್ ಮೋಹನ್ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ದಿನೇಶ್ ಮೋಹನ್ ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕೆಲಸ ಒತ್ತಡದಿಂದ ಹಾಗೂ ಸರಿಯಾಗಿ ಆರೋಗ್ಯ ನೋಡಿಕೊಳ್ಳದ ಕಾರಣಕ್ಕೆ ಅತಿಯಾದ ದಪ್ಪವಾಗಿ ಹಾಸಿಗೆ ಹಿಡಿದಿದ್ದರು.

    ಬಳಿಕ ವೈದ್ಯರ ಸಲಹೆ ಪಡೆದು ಆರೋಗ್ಯವನ್ನು ಚೇತರಿಸಿಕೊಂಡು, ದಢೂತಿ ದೇಹವನ್ನು ಇಳಿಸಿಕೊಂಡರು. ಬರೋಬ್ಬರಿ 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡರು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ಸಾಕಾಗಿ, ತಮಗೆ ಇಷ್ಟವಾಗಿದನ್ನ ಮಾಡಬೇಕೆಂದು ನಿರ್ಧಾರ ಮಾಡಿದರು. ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು 2016ರಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಹೊಸ ಜರ್ನಿ ಶುರು ಮಾಡಿದರು.

    ಅಂದಿನಿಂದ ಉತ್ತಮ ಆರೋಗ್ಯ, ಕಟ್ಟುಮಸ್ತಾದ ದೇಹವನ್ನು ಮಾಡಿಕೊಂಡು ಸೂಪರ್ ಮಾಡೆಲ್ ಆದರು. ಹಲವು ರ್ಯಾಂಪ್ ವಾಕ್, ಫೋಟೋಶೂಟ್‍ನಲ್ಲಿ ಮಿಂಚಿ ಹೆಸರು ಮಾಡಿದರು. ಸದ್ಯ ಇಳಿ ವಯಸ್ಸಿನಲ್ಲೂ ತಮ್ಮ ಖಡಕ್ ಲುಕ್ ಮೂಲಕ ದಿನೇಶ್ ಅವರು ಎಲ್ಲರ ಮನ ಗೆದ್ದಿದ್ದಾರೆ. ಯುವ ಮಾಡೆಲ್‍ಗಳೇ ನಾಚುವಂತೆ ರ್ಯಾಂಪ್ ವಾಕ್‍ನಲ್ಲಿ ಮಿಂಚಿ ಎಲ್ಲರ ಫೆವರೆಟ್ ಆಗಿಬಿಟ್ಟಿದ್ದಾರೆ.

    ಇವರು ಕೇವಲ ಯುವಕರಿಗೆ ಮಾತ್ರವಲ್ಲ ವಯಸ್ಸಾದವರಿಗೂ ಕೂಡ ಮಾದರಿಯಾಗಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‍ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಮನೋಬಲ ದೃಢವಾಗಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ, ನಾವು ಅಂದುಕೊಂಡಿರುವುದನ್ನು ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

  • ಸೆಕ್ಸ್ ವಿಡಿಯೋ ವೈರಲ್ ಆಗ್ತಿದ್ದಂತೆ ದೇವಮಾನವ ಎಸ್ಕೇಪ್

    ಸೆಕ್ಸ್ ವಿಡಿಯೋ ವೈರಲ್ ಆಗ್ತಿದ್ದಂತೆ ದೇವಮಾನವ ಎಸ್ಕೇಪ್

    ಚಂಡೀಗಢ: ಹುಡುಗಿಯರ ಜೊತೆಗಿನ ಸೆಕ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ವಯಂ ಘೋಷಿತ ದೇವಮಾನವನೊಬ್ಬ ಪರಾರಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    ಆರೋಪಿಯನ್ನು ದೇವಮಾನವ ಜ್ಯೋತಿಗಿರಿ ಎಂದು ಗುರುತಿಸಲಾಗಿದ್ದು, ಈತ ಗುರುಗ್ರಾಮ ಆಶ್ರಮದಿಂದ ಕಾಣೆಯಾಗಿದ್ದಾನೆ. ಈತ ಅನೇಕ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಎಎಪಿ ಮುಖಂಡ ಸುಧೀರ್ ಯಾದವ್ ದೂರು ದಾಖಲಿಸಿದ್ದಾರೆ.

    ಜ್ಯೋತಿಗಿರಿ ಹರಿಯಾಣದ ಗುರುಗ್ರಾಮದ ಬಹೇದಾ ಕಲಾ ಗ್ರಾಮದಲ್ಲಿ ವಾಸಿಸುತ್ತಿದ್ದನು. ಜೊತೆ ಆಶ್ರಮವೊಂದನ್ನು ನಡೆಸುತ್ತಿದ್ದು, ಅಲ್ಲಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿ ಜ್ಯೋತಿಗಿರಿ ಹುಡುಗಿಯರ ಜೊತೆ ಸೆಕ್ಸ್ ಮಾಡುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ಸೆಕ್ಸ್ ಟೇಪ್‍ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸೈಬರ್ ಸೆಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿ ಜ್ಯೋತಿಗಿರಿ ತನ್ನ ಆಶ್ರಮದಲ್ಲಿ ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡುವುದನ್ನು ಕಾಣಬಹುದು. ಜೊತೆ ಈತ ಹುಡುಗಿಯರ ಜೊತೆಯಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಮುಖ ಕಾಣಿಸಿಕೊಂಡಿರುವ ಸಂತ್ರಸ್ತೆಯೊಬ್ಬರು ಆನ್‍ಲೈನ್‍ನಲ್ಲಿ ವಿಡಿಯೋ ಲೀಕ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಪಾಕಿನಿಂದ ಸಟ್ಲೇಜ್ ನದಿಗೆ ಹರಿದು ಬಂದ ಕ್ಯಾನ್ಸರ್‌ಕಾರಕ ನೀರು

    ಪಾಕಿನಿಂದ ಸಟ್ಲೇಜ್ ನದಿಗೆ ಹರಿದು ಬಂದ ಕ್ಯಾನ್ಸರ್‌ಕಾರಕ ನೀರು

    – 17ಕ್ಕೂ ಹೆಚ್ಚು ಗಡಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ

    ಚಂಡೀಗಢ: ಪಾಕಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವುದು ತಿಳಿದ ಸಂಗತಿ. ಯಾವಾಗಲೂ ಭಾರತದ ವಿರುದ್ಧ ಸಂಚು ಮಾಡುತ್ತಲೇ ಇರುವ ಪಾಕ್, ಈಗ ನೀರಿನ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆಯಾ ಎನ್ನುವ ಅನುಮಾನಗಳು ಹುಟ್ಟುಕೊಂಡಿದೆ.

    ಹೌದು. ಪಾಕಿಸ್ತಾನದ ಭಾಗದಲ್ಲಿರುವ ಸಟ್ಲೇಜ್ ನದಿಯಿಂದ ಏಕಾಏಕಿ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದ ಕಾರಣಕ್ಕೆ ಪಂಜಾಬ್ ಗಡಿ ಭಾಗದ ಗ್ರಾಮಗಳಲ್ಲಿ ಗುರುವಾರ ದಿಢೀರ್ ಪ್ರವಾಹ ಪರಿಸ್ಥಿತಿ ತಲೆದೋರಿದೆ.

    ಪಾಕಿಸ್ತಾನವು ತನ್ನ ಕೌಸರ್ ನಗರ ಸಮೀಪದಲ್ಲಿರುವ ಸಟ್ಲೇಜ್ ನದಿಯ ಕ್ರಸ್ಟ್ ಗೇಟ್‍ಗಳನ್ನು ತೆಗೆದಿದೆ. ಇದರಿಂದಾಗಿ ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ 17ಕ್ಕೂ ಹೆಚ್ಚು ಗಡಿ ಗ್ರಾಮಗಳು ಜಲಾವೃತವಾಗಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಈ ಹಿನ್ನೆಲೆ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಜಾಗಗಳಿಗೆ ತಲುಪಿಸಲು ಭಾರತೀಯ ಸೇನೆ, ಎನ್‍ಡಿಆರ್‍ಎಫ್ ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    ಈ ಬಗ್ಗೆ ಫಿರೋಜ್‍ಪುರ ಜಿಲ್ಲಾಧಿಕಾರಿ ಚಂದರ್ ಗೈಂದ್ ಮಾತನಾಡಿ, ಪಾಕಿಸ್ತಾನ ಸಟ್ಲೇಜ್ ನದಿ ನೀರು ಬಿಟ್ಟಿರುವುದರಿಂದ ಗಡಿಭಾಗದ ಫಿರೋಜ್‍ಪುರ 17ಕ್ಕೂ ಗ್ರಾಮಗಳು ಜಲಾವೃತಗೊಂಡಿದೆ. ಸಟ್ಲೇಜ್ ನದಿಯಿಂದ ಫಿರೋಜ್‍ಪುರ ಕಡೆ ಹರಿಬಿಡಲಾಗಿರುವ ನೀರಿನಲ್ಲಿ ಚರ್ಮೋದ್ಯಮ ತ್ಯಾಜ್ಯದ ಕಲುಷಿತ ನೀರು ಮಿಶ್ರಣವಾಗಿದೆ. ಈ ಮಿಶ್ರಿತ ನೀರಿನಲ್ಲಿ ಕ್ಯಾನ್ಸರ್‌ಕಾರಕ ರೋಗಾಣುಗಳಿವೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದ ಕೌಸರ್ ಜಿಲ್ಲೆಯು ಚರ್ಮೋದ್ಯಮ ಘಟಕಗಳಿಗೆ ಹೆಸರುವಾಸಿಯಾಗಿದೆ. ಈ ಘಟಕಗಳ ಕಲುಷಿತ ನೀರನ್ನು ಕೂಡ ಸಟ್ಲೇಜ್ ನದಿಗೆ ಬಿಡಲಾಗಿದೆ. ಚರ್ಮೋದ್ಯಮ ಹಾನಿಕಾರದ ಕಲುಷಿತ ನೀರು ಕ್ಯಾನ್ಸರ್‌ಕಾರಕವಾಗಿದ್ದು, ಈ ನೀರನ್ನು ನದಿಗೆ ಬಿಟ್ಟಿರುವುದರಿಂದ ಜಲಚರಗಳಿಗೆ ಹಾಗೂ ನದಿ ಪಾತ್ರದ ಜನರಿಗೆ ಮಾರಕವಾಗಿ ಪರಿಣಮಿಸಲಿದೆ. ಈ ವಿಚಾರ ಗೊತ್ತಿದ್ದರೂ ಕೂಡ ಪಾಕಿಸ್ತಾನ ಕಲುಷಿತ ನೀರನ್ನು ನದಿಗೆ ಬಿಡುವುದನ್ನು ತಡೆಯದೆ, ಕ್ರಮ ತೆಗೆದುಕೊಳ್ಳದೆ ಸುಮ್ಮನಿದೆ.

    ಭಾರತ ಸರ್ಕಾರ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಕ್ರಮದ ವಿರುದ್ಧ ಪಾಕಿಸ್ತಾನ ರೊಚ್ಚಿಗೆದ್ದಿದೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಚರ್ಮೋದ್ಯಮ ಘಟಕಗಳ ಕಲುಷಿತ ನೀರನ್ನು ಸಟ್ಲೇಜ್ ನದಿಗೆ ಬಿಟ್ಟು, ನಂತರ ಕ್ರಸ್ಟ್ ಗೇಟ್ ತೆರೆದಿದೆ ಎಂಬ ಆರೋಪ ಕೂಡ ಪಾಕಿಸ್ತಾನದ ವಿರುದ್ಧ ಕೇಳಿಬರುತ್ತಿದೆ.

  • ಅಪ್ರಾಪ್ತನ ಜೊತೆ ಇಬ್ಬರು ಮಕ್ಕಳ ತಾಯಿ ಸೆಕ್ಸ್- ಚಪ್ಪಲಿ ಹಾರ ಹಾಕಿ ಮೆರವಣಿಗೆ

    ಅಪ್ರಾಪ್ತನ ಜೊತೆ ಇಬ್ಬರು ಮಕ್ಕಳ ತಾಯಿ ಸೆಕ್ಸ್- ಚಪ್ಪಲಿ ಹಾರ ಹಾಕಿ ಮೆರವಣಿಗೆ

    ಚಂಡೀಗಢ: ಅಪ್ರಾಪ್ತ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಕ್ಕೆ ಗ್ರಾಮಸ್ಥರು ಇಬ್ಬರು ಮಕ್ಕಳ ತಾಯಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಿದ ಘಟನೆ ಹರಿಯಾಣದ ಕರ್ನಾಲ್‍ನಲ್ಲಿ ನಡೆದಿದೆ.

    ಅಪ್ರಾಪ್ತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂಬ ಆರೋಪ ಕೇಳಿ ಗ್ರಾಮಸ್ಥರು ಮೊದಲು ಇಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂಚಾಯ್ತಿ ಇಬ್ಬರನ್ನು ಗ್ರಾಮದಿಂದ ಹೊರ ಹೋಗಲು ಆದೇಶಿಸಿದ್ದಾರೆ. ಈ ಬಗ್ಗೆ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಈ ಘಟನೆ ಬಗ್ಗೆ ಮೊದಲು ನಾವು ತನಿಖೆ ನಡೆಸುತ್ತೇವೆ. ಬಳಿಕ ತಪ್ಪಿತಸ್ಥರು ಯಾರು ಎಂಬುದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಅಗತ್ಯವಿದ್ದರೆ, ನಾವು ಅಪ್ರಾಪ್ತ ಬಾಲಕನಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತೇವೆ. ಅವನಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಡಿಎಸ್‍ಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮದ ಮುಖ್ಯಸ್ಥ, ಮಹಿಳೆ ಬಿಹಾರ್ ನಿವಾಸಿಯಾಗಿದ್ದು, ಬಾಲಕ 12ನೇ ತರಗತಿ ಓದುತ್ತಿದ್ದಾನೆ. ಈ ಘಟನೆ ಬಗ್ಗೆ ಪಂಚಾಯ್ತಿಯಲ್ಲಿ ಸಭೆ ನಡೆದಿದೆ ಎಂಬ ವಿಷಯ ತಿಳಿಯಿತು. ಆದರೆ ಅಲ್ಲಿ ಏನೂ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇದುವರೆಗೂ ವೈರಲ್ ವಿಡಿಯೋ ಕೂಡ ನೋಡಿಲ್ಲ. ಮಹಿಳೆಗೆ ಮದುವೆ ಆಗಿ ಮಕ್ಕಳಿದ್ದು, ಇಬ್ಬರು ಬೇರೆ ಜಾತಿಯವರು ಎಂದು ತಿಳಿಸಿದ್ದಾರೆ.

    ಅಲ್ಲದೆ ಇದನ್ನು ಬಂಜಾರಾ ಸಮುದಾಯದವರು ಮಾಡಿದ್ದಾರೆ. ಪಂಚಾಯ್ತಿ ಸದಸ್ಯರು ನನ್ನ ಮಗನಿಗೆ ಹಾಗೂ ಮಹಿಳೆಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ ಎಂದು ಬಾಲಕನ ತಂದೆ ಹೇಳುತ್ತಿದ್ದಾರೆ ಎಂದು ಗ್ರಾಮದ ಮುಖ್ಯಸ್ಥ ತಿಳಿಸಿದ್ದಾರೆ.

  • ಅಟ್ಟಾರಿ- ವಾಘಾ ಗಡಿಯಲ್ಲಿ ಯೋಧರಿಗೆ ರಾಕಿ ಕಟ್ಟಿ ಸಂಭ್ರಮಿಸಿದ ಮಹಿಳೆಯರು

    ಅಟ್ಟಾರಿ- ವಾಘಾ ಗಡಿಯಲ್ಲಿ ಯೋಧರಿಗೆ ರಾಕಿ ಕಟ್ಟಿ ಸಂಭ್ರಮಿಸಿದ ಮಹಿಳೆಯರು

    ಚಂಡೀಗಢ: ಈ ಬಾರಿ ಸ್ವಾತಂತ್ರ್ಯ ದಿನ ಹಾಗೂ ರಕ್ಷಾಬಂಧನ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಇಂದು ಬಿಎಸ್‍ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ.

    ಇಂದು ದೇಶದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಇಂದು ರಕ್ಷಾಬಂಧನ ಹಬ್ಬ ಕೂಡ ಬಂದಿರುವುದು ವಿಶೇಷವಾಗಿದೆ. ಹೀಗಾಗಿ ದೇಶದ ವಿವಿಧ ಕಡೆಗಳಿಂದ ವಾಘಾ ಗಡಿಗೆ ಆಗಮಿಸಿದ್ದ ಮಹಿಳೆಯರು ಭದ್ರತಾ ಪಡೆ ಸಿಬ್ಬಂದಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ಕೋರಿದರು.

    ಈ ವೇಳೆ ಪುಣೆಯಿಂದ ಬಂದಿದ್ದ ಮಹಿಳೆಯೊಬ್ಬರು ಮಾತನಾಡಿ, ಗಡಿ ಭಾಗದಲ್ಲಿ ರಕ್ಷಾ ಬಂಧನ ಆಚರಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ದೇಶಕ್ಕಾಗಿ ಹಗಲಿರುಳು ಶ್ರಮಪಟ್ಟು ಸೇವೆ ಸಲ್ಲಿಸುವ ಯೋಧರಿಗೆ ಧನ್ಯವಾದ ಎಂದು ಸಂತೋಷ ಹಂಚಿಕೊಂಡರು.

    ಅಷ್ಟೇ ಅಲ್ಲದೆ ಮಹಿಳೆಯರಿಂದ ರಾಕಿ ಕಟ್ಟಿಸಿಕೊಂಡ ಯೋಧರು ಕೂಡ ಪ್ರೀತಿಯಿಂದ ಸಿಹಿ ನೀಡಿ ಮಹಿಳೆಯರಿಗೆ ಶುಭಕೋರಿ ಸಂತಸಪಟ್ಟರು.

  • ಫ್ಲೈಯಿಂಗ್ ಕಿಸ್ ಕೊಟ್ಟ ವ್ಯಕ್ತಿಗೆ 3 ವರ್ಷ ಜೈಲು, 3 ಸಾವಿರ ದಂಡ

    ಫ್ಲೈಯಿಂಗ್ ಕಿಸ್ ಕೊಟ್ಟ ವ್ಯಕ್ತಿಗೆ 3 ವರ್ಷ ಜೈಲು, 3 ಸಾವಿರ ದಂಡ

    ಚಂಡೀಗಢ್: ಪಕ್ಕದ ಮನೆ ಮಹಿಳೆಗೆ ಫ್ಲೈಯಿಂಗ್ ಕಿಸ್ ನೀಡಿದ ವ್ಯಕ್ತಿಗೆ  ಮೂರು ವರ್ಷ ಜೈಲು ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.

    ವಿನೋದ್ ಜೈಲು ಸೇರಿದ ವ್ಯಕ್ತಿ. ವಿನೋದ್ ತನ್ನ ಪಕ್ಕದ ಮನೆ ಮಹಿಳೆಯನ್ನು ನೋಡಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದನು. ಅಲ್ಲದೆ ಸನ್ನೆ ಮಾಡುವ ಮೂಲಕ ಅನುಚಿತವಾಗಿ ವರ್ತಿಸುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಮಹಿಳೆ ತನ್ನ ಪತಿಯ ಜೊತೆ ವಾಸಿಸುತ್ತಿದ್ದರು. ಅಲ್ಲದೆ ಈ ವಿಷಯವನ್ನು ಪತಿಗೆ ಹೇಳಿದ್ದಾರೆ. ಬಳಿಕ ಇಬ್ಬರು ದೂರು ನೀಡಿದ್ದಾರೆ. ಮಹಿಳೆ ತನ್ನ ದೂರಿನಲ್ಲಿ, “ವಿನೋದ್ ಹಲವು ಬಾರಿ ಫ್ಲೈಯಿಂಗ್ ಕಿಸ್ ಮಾಡಿ ಅಶ್ಲೀಲ ಸನ್ನೆ ಮಾಡುವ ಮೂಲಕ ನನಗೆ ಕಿರುಕುಳ ನೀಡುತ್ತಿದ್ದಾನೆ” ಎಂದು ಉಲ್ಲೇಖಿಸಿದ್ದರು.

    ಆರೋಪಿ ವಿನೋದ್ ಟಾಪ್ ಫ್ಲೋರ್ ಫ್ಲಾಟ್‍ನಲ್ಲಿ ವಾಸಿಸುತ್ತಾನೆ. ಅಲ್ಲದೆ ಆತ ನನ್ನನ್ನು ನೋಡಿ ಅಶ್ಲೀಲವಾಗಿ ಸನ್ನೆ ಮಾಡುತ್ತಾನೆ. ಕೆಲವು ಬಾರಿ ಅಶ್ಲೀಲವಾಗಿ ಕಮೆಂಟ್ ಕೂಡ ಮಾಡುತ್ತಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

    ಮಹಿಳೆ ವಿರುದ್ಧ ದೂರು ದಾಖಲಿಸುತ್ತಿದ್ದಂತೆ, ಆರೋಪಿ ವಿನೋದ್ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪತಿ – ಪತ್ನಿ ಇಬ್ಬರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿನೋದ್ ಆರೋಪಿಸಿದ್ದಾನೆ. ಆದರೆ ಪೊಲೀಸರಿಗೆ ದಂಪತಿ, ವಿನೋದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಸಿಗಲಿಲ್ಲ.

    ಸದ್ಯ ಮೋಹಾಲಿ ನ್ಯಾಯಾಲಯ ಆರೋಪಿ ವಿನೋದ್‍ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ.

  • ಚುಡಾಯಿಸಿದ್ದನ್ನು ತಡೆದಿದ್ದಕ್ಕೆ ಗುಂಡಿಕ್ಕಿ ಸಿಎಂ ಸೆಕ್ಯೂರಿಟಿಯ ಹತ್ಯೆ

    ಚುಡಾಯಿಸಿದ್ದನ್ನು ತಡೆದಿದ್ದಕ್ಕೆ ಗುಂಡಿಕ್ಕಿ ಸಿಎಂ ಸೆಕ್ಯೂರಿಟಿಯ ಹತ್ಯೆ

    ಚಂಡೀಗಢ: ಡಿಸ್ಕೋದಲ್ಲಿ ಮಹಿಳೆಯನ್ನು ಚುಡಾಯಿಸುತ್ತಿದ್ದವರನ್ನು ತಡೆದಿದ್ದಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸೆಕ್ಯೂರಿಟಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಭಾನುವಾರ ಪಂಜಾಬ್‍ನ ಮೋಹಲಿಯಲ್ಲಿ ನಡೆದಿದೆ.

    ಸುಖ್ವಿಂದರ್ ಕುಮಾರ್ (25) ಕೊಲೆಯಾದ ಸೆಕ್ಯೂರಿಟಿ. ಸುಖ್ವಿಂದರ್ ಅವರನ್ನು ಪಂಜಾಬ್ ಪೊಲೀಸರ ನಾಲ್ಕನೇ ಕಮಾಂಡೋ ಬೆಟಾಲಿಯನ್ ಆಗಿ ಪೋಸ್ಟ್ ಮಾಡಲಾಗಿತ್ತು. ಭಾನುವಾರ ಡಿಸ್ಕೋದಲ್ಲಿ ಮಹಿಳೆಯನ್ನು ಚುಡಾಯಿಸಿದ್ದನ್ನು ತಡೆದಿದ್ದಕ್ಕೆ ಆರೋಪಿ ಚರಣ್‍ಜಿತ್ ಸಿಂಗ್ ಅಲಿಯಾಸ್ ಸಾಹಿಲ್ ಸಾಗರ್, ಸುಖ್ವಿಂದರ್ ನನ್ನು ಮೂರು ಬಾರಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

    ಕ್ಲಬ್‍ನಲ್ಲಿದ್ದ ಮಹಿಳೆಯರಿಗೆ ಕಿರುಕುಳ ನೀಡದಂತೆ ಸುಖ್ವಿಂದರ್ ಅವರು ಆರೋಪಿ ಚರಣ್‍ಜಿತ್ ಸಿಂಗ್‍ನನ್ನು ತಡೆದಿದ್ದರು. ಈ ವೇಳೆ ಚರಣ್‍ಜಿತ್ ಹಾಗೂ ಸುಖ್ವಿಂದರ್ ಕುಮಾರ್ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಈ ಕೊಲೆ ನಡೆದಿದೆ.

    ಚರಣ್‍ಜಿತ್ ಸಿಂಗ್ ತನ್ನ ಸ್ನೇಹಿತೆ ಹಾಗೂ ಇಬ್ಬರು ಸ್ನೇಹಿತರ ಜೊತೆ ಕ್ಲಬ್‍ಗೆ ಬಂದಿದ್ದನು. ಈ ವೇಳೆ ಚರಣ್‍ಜಿತ್ ಕ್ಲಬ್‍ನಲ್ಲಿ ಇದ್ದ ಮಹಿಳೆಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದನು. ಇದನ್ನು ನೋಡಿದ ಸುಖ್ವಿಂದರ್ ಆರೋಪಿ ಚರಣ್‍ಜಿತ್‍ನನ್ನು ಈ ರೀತಿ ಮಾಡದಂತೆ ತಡೆದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಚರಣ್‍ಜಿತ್ ಅಸಭ್ಯವಾಗಿ ವರ್ತಿಸುವುದನ್ನು ನಿಲ್ಲಿಸದಿದ್ದಾಗ ಸುಖ್ವಿಂದರ್ ಮಧ್ಯ ಪ್ರವೇಶಿಸಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆಯಿತು. ಈ ಗಲಾಟೆಯ ನಂತರ ಕ್ಲಬ್ ಸಿಬ್ಬಂದಿ ಚರಣ್‍ಜಿತ್ ಸಿಂಗ್ ಹಾಗೂ ಆತನ ಸ್ನೇಹಿತರಿಗೆ ಹೊರ ಹೋಗುವಂತೆ ಹೇಳಿದ್ದರು.

    ಗಲಾಟೆ ನಂತರ ಚರಣ್‍ಜಿತ್ ಕ್ಲಬ್‍ನಿಂದ ಹೊರ ಬಂದು ಸುಖ್ವಿಂದರ್ ಗಾಗಿ ಕಾಯುತ್ತಿದ್ದನು. ಸುಖ್ವಿಂದರ್ ಹೊರ ಬರುತ್ತಿದ್ದಂತೆ ಚರಣ್‍ಜಿತ್ ಅವರ ಜೊತೆ ಪಾರ್ಕಿಂಗ್‍ನಲ್ಲಿ ಜಗಳವಾಡಿದ್ದಾನೆ. ಈ ವೇಳೆ ಚರಣ್‍ಜಿತ್ ಗನ್ ತೆಗೆದು ಸುಖ್ವಿಂದರ್‍ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಕುಟುಂಬದ ಐವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣು

    ಕುಟುಂಬದ ಐವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣು

    – ಸ್ಥಳದಲ್ಲಿ ಸಿಕ್ತು 19 ಪುಟದ ಡೆತ್‍ನೋಟ್

    ಚಂಡೀಗಢ: ಯುವಕನೊಬ್ಬ ತನ್ನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಬಾಜ್‍ನ ಮೋಗದಲ್ಲಿ ನಡೆದಿದೆ.

    ಸಂದೀಪ್ ಸಿಂಗ್ (27) ಕೊಲೆ ಮಾಡಿದ ಯುವಕ. ಸಂದೀಪ್ ತನ್ನ ತಂದೆ, ತಾಯಿ, ತಾತ, ಅಜ್ಜಿ, ಸಹೋದರಿ ಹಾಗೂ ಸಹೋದರಿ ಮಗಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸಂದೀಪ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸಂದೀಪ್ ಮನೆಯಿಂದ ಬರುತ್ತಿದ್ದ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಈ ವೇಳೆ ಸಂದೀಪ್ ತಾತ ಗುರುಚರಣ್ ಸಿಂಗ್ ಸ್ಥಿತಿ ಗಂಭೀರವಾಗಿದ್ದನ್ನು ನೋಡಿದ ಸ್ಥಳೀಯರು ಅವರನ್ನು ಫರಿದ್‍ಕೋಟ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

    ಕೆಲವು ತಿಂಗಳಿನಲ್ಲಿ ಸಂದೀಪ್ ಮದುವೆವಿತ್ತು. ಸಂದೀಪ್ ಗುಪ್ತ ರೋಗದಿಂದ ಬಳಲುತ್ತಿದ್ದು, ಈ ವಿಷಯಕ್ಕಾಗಿ ಯಾವಾಗಲೂ ಒತ್ತಡದಲ್ಲಿ ಇರುತ್ತಿದ್ದನು. ಅಲ್ಲದೆ ಆತ ಮದ್ಯ ಸೇವನೆ ಮಾಡುವುದನ್ನು ಕೂಡ ಶುರು ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.

    ಈ ವಿಷಯ ತಿಳಿದ ಎಎಸ್‍ಪಿ ಹರಿಂದರ್ ಸಿಂಗ್ ತಮ್ಮ ಪೊಲೀಸ್ ತಂಡದ ಜೊತೆ ಘಟನಾ ಸ್ಥಳಕ್ಕೆ ತಲುಪಿದ್ದರು. ಸದ್ಯ ಪೊಲೀಸರು ಸಂದೀಪ್ ಸೇರಿದಂತೆ ಐವರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ 19 ಪುಟದ ಡೆತ್‍ನೋಟ್ ದೊರೆತಿದ್ದು, ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ರಾಜ್ಯಮಟ್ಟದ ಕುಸ್ತಿಪಟುವಿನ ಬರ್ಬರ ಹತ್ಯೆ

    ರಾಜ್ಯಮಟ್ಟದ ಕುಸ್ತಿಪಟುವಿನ ಬರ್ಬರ ಹತ್ಯೆ

    ಚಂಡೀಗಢ್: ರಾಜ್ಯಮಟ್ಟದ ಕುಸ್ತಿಪಟುವನ್ನು ಕತ್ತಿ ಮತ್ತು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್‍ನಲ್ಲಿ ನಡೆದಿದೆ.

    ಹರಿಯಾಣದ ಇಸ್ರಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಕುಲ್‍ದೀಪ್ ಅಲಿಯಾಸ್ ದೀಪಾ ಎಂದು ಗುರುತಿಸಲಾಗಿದೆ. ಗ್ರಾಮದ ಧಾನ್ಯ ಮಾರುಕಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಕುಲದೀಪ್‍ಗೆ ಬುಧವಾರ ರಾತ್ರಿ ಮಾರುಕಟ್ಟೆಯಲ್ಲಿ ಭೇಟಿಯಾಗುವಂತೆ ಫೋನ್ ಬಂದಿದೆ. ಫೋನಿನಲ್ಲಿ ಮಾತನಾಡಿದ ನಂತರ ಅವರನ್ನು ಭೇಟಿಯಾಗಲು ಮಾರುಕಟ್ಟೆಗೆ ಹೋಗಿದ್ದಾನೆ. ಆದರೆ ಈತ ಬರುವಷ್ಟರಲ್ಲೇ ಆರೋಪಿಗಳು ಮುಂಚಿತವಾಗಿ ಬಂದು ಪವರ್ ಕಟ್ ಮಾಡಿದ್ದಾರೆ. ನಂತರ ಕತ್ತಲೆಯಲ್ಲಿ ಕತ್ತಿ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ತೀವ್ರ ರಸ್ತಸ್ರಾವವಾಗಿ ಕಲ್‍ದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಕುಲ್‍ದೀಪ್ ಕುಟುಂಬ ಸದಸ್ಯರು ಈ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಶಂಕಿತರ ಹೆಸರನ್ನೂ ಸೂಚಿಸಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಕುಲ್‍ದೀಪ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದನು. ಇತ್ತೀಚೆಗೆ ಗಂಗಾನದಿಯ ಗೋಮುಖ್‍ನ ಕನ್ವಾಡ್ ಯಾತ್ರೆಗೆ ಹೋಗಿ ಮನೆಗೆ ಮರಳಿದ್ದನು. ಕುಲ್‍ದೀಪ್ ಕೆಲವು ಪುರುಷರೊಂದಿಗೆ ಫೋನ್‍ನಲ್ಲಿ ಮಾತಿನ ಚಕಮಕಿ ನಡೆಸಿದ್ದಾನೆ. ನಂತರ ಈ ಘಟನೆ ನಡೆದಿದೆ ಎಂದು ಆತನ ಸಹೋದರ ಆರೋಪಿಸಿದ್ದಾರೆ.

  • 2 ಬಾಳೆ ಹಣ್ಣಿಗೆ 442 ರೂ. ಬಿಲ್ – ಹೋಟೆಲ್‍ಗೆ 25 ಸಾವಿರ ರೂ. ದಂಡ

    2 ಬಾಳೆ ಹಣ್ಣಿಗೆ 442 ರೂ. ಬಿಲ್ – ಹೋಟೆಲ್‍ಗೆ 25 ಸಾವಿರ ರೂ. ದಂಡ

    ಚಂಡೀಗಢ: ಬಾಲಿವುಡ್ ನಟ ರಾಹುಲ್ ಬೋಸ್ ಅವರಿಗೆ ಎರಡು ಬಾಳೆ ಹಣ್ಣಿಗೆ 442 ರೂ. ಬಿಲ್ ನೀಡಿದ್ದ ಪಂಚತಾರಾ ಹೋಟೆಲ್‍ಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

    ನಟನಿಗೆ ದುಬಾರಿ ಬಿಲ್ ನೀಡಿ ಶಾಕ್ ನೀಡಿದ್ದ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‍ಗೆ ಗ್ರಾಹಕ ಪ್ರಾಧಿಕಾರ ಕ್ರಮಕೈಗೊಂಡಿದ್ದು, ಈ ಸಂಬಂಧ ವಿಚಾರಣೆ ನಡೆಸಿ ಪ್ರಕರಣದಲ್ಲಿ 25 ಸಾವಿರ ದಂಡ ರೂ. ದಂಡ ವಿಧಿಸಿದೆ.

    51 ವರ್ಷದ ನಟ ರಾಹುಲ್ ಬೋಸ್ ತಮಗೇ ದುಬಾರಿ ಬಿಲ್ ನೀಡಿದ್ದ ಕುರಿತು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ವಿಡಿಯೋದಲ್ಲಿ ಹೋಟೆಲ್ ನೀಡಿದ್ದ ಬಿಲ್ ಕೂಡ ಸ್ಪಷ್ಟವಾಗಿ ಕಂಡಿತ್ತು. ಬಿಲ್ ನಲ್ಲಿ ಹೋಟೆಲ್ ಹಣ್ಣುಗಳಿಗೂ ಕೂಡ ಜಿಎಸ್‍ಟಿ ವಿಧಿಸಿತ್ತು. ಆದರೆ ಹಣ್ಣುಗಳು ಜಿಎಸ್‍ಟಿ ಅಡಿ ಬರುವುದಿಲ್ಲ. ಪರಿಣಾಮ ತೆರಿಗೆ ಅಧಿಕಾರಿಗಳು ಹೋಟೆಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂದೀಪ್ ಸಿಂಗ್ ಬರಾರ್ ಅವರು, ನಟ ರಾಹುಲ್ ಬೋಸ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಹಾಗೂ ಬಿಲ್ ಆಧಾರದ ಮೇಲೆ ಆ ಪಂಚತಾರಾ ಹೋಟೆಲ್ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಮೊದಲು ಹೋಟೆಲ್ ಬಾಳೆಹಣ್ಣು ಸರ್ವ್ ಮಾಡಿದ್ದ ಬೆಳ್ಳಿ ತಟ್ಟೆಗೆ ಜಿಎಸ್‍ಟಿ ವಿಧಿಸಿದೆ ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು.

    ನಟ ರಾಹುಲ್ ಬೋಸ್ ಮಾಡಿರುವ ವಿಡಿಯೋ ಪೋಸ್ಟ್ ನಲ್ಲಿ, ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಗ್ ಮಾಡಿ ವ್ಯಂಗ್ಯವಾಡಿದ್ದರು. ರಾಹುಲ್ ಬೋಸ್ ತಮ್ಮ ಬೆಳಗಿನ ವ್ಯಾಯಾಮ ಮುಗಿಸಿ ಹೋಟೆಲ್‍ಗೆ ತೆರಳಿದ್ದು, ಈ ಸಂದರ್ಭದಲ್ಲಿ 2 ಬಾಳೆ ಹಣ್ಣು ಆರ್ಡರ್ ಮಾಡಿದ್ದಾರೆ. ಅವರಿಗೆ 445 ರೂ. ಗಳ ಬಿಲ್ ಅನ್ನು ಹೋಟೆಲ್ ಸಿಬ್ಬಂದಿ ನೀಡಿದ್ದರು.