ತಿಪಟೂರು ನಗರದ ಹಳೇಪಾಳ್ಯದ ನಿವಾಸಿ 12 ವರ್ಷದ ಚಂದನ ಜು.23ರಂದು ಶಾಲೆ ಮುಗಿಸಿ ಬರುವಾಗ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಚಂದನ (Chandana) ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಕೂಡಲೇ ಹಾಸನದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಂದನ ಸಾವನಪ್ಪಿದ್ದಳು.
ಇದೀಗ ಸಾವನ್ನಪ್ಪಿದ ಮಗಳ ಅಂಗಾಂಗ ದಾನ ಮಾಡಿ ಚಂದನ ಪೋಷಕರು ಮಾದರಿಯಾಗಿದ್ದಾರೆ. ಪೋಷಕರ ದಿಟ್ಟ ನಿರ್ಧಾರಕ್ಕೆ ಆಸ್ಪತ್ರೆಯ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ಚಂದನಾಳ ಅಂಗಾಂಗವನ್ನು ಮೈಸೂರು ಮತ್ತು ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಿಸಲಾಗಿದೆ. ಇಂದು ಸಂಜೆ ತಿಪಟೂರಿನ ಹಳೆಪಾಳ್ಯದಲ್ಲಿ ಚಂದನ ಅಂತ್ಯಸಂಸ್ಕಾರ ನೆರವೇರಲಿದೆ.
ಬಹುಭಾಷಾ ನಟಿ ಹರಿಪ್ರಿಯಾ ತಮ್ಮ ಮುದ್ದು ನಟನೆ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ. ನಟನೆ ಜೊತೆಗೆ ಪ್ರಾಣಿಗಳ ಮೇಲೆ ಹೆಚ್ಚು ಕಾಳಜಿ ಇರುವ ಈ ನಟಿ ತಮ್ಮ ಮನೆಗೆ ಹೊಸದಾಗಿ ತಂದಿರುವ ಮುದ್ದು ಸದಸ್ಯನನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಪ್ರಾಣಿಗಳ ಜೊತೆ ಮನುಷ್ಯರ ಸಂಬಂಧ ಮೀರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸ್ಪಂದಿಸುವ ಜೀವಗಳಾಗಿ ಈ ಮುದ್ದು ಪ್ರಾಣಿಗಳು ಮನುಷ್ಯರಲ್ಲಿ ಬೆರೆತು ಹೋಗಿರುತ್ತೆ. ಇದಕ್ಕೆ ಹರಿಪ್ರಿಯಾ ಸಹ ಹೊರತಲ್ಲ. ಅವರು ಎಲ್ಲೇ ಹೋದರು ಪ್ರಾಣಿಗಳ ಜೊತೆ ಕಾಲ ಕಳೆಯುತ್ತಾ ಇರುತ್ತಾರೆ. ಇದನ್ನೂ ಓದಿ: ಡ್ಯಾನ್ಸ್ ಮಾಸ್ಟರ್ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ
Meet Crystal ????newest addition 2 our family,3.5 months old blue-eyed husky????Wn I was missing Lucky,Crystal came in home 2 months ago as a surprise gift☺️It’s as though I’m meeting Lucky all over again????He was also born on d same day as Lucky-Dec 6th!❤️Shower ur blessings 2 him ???? pic.twitter.com/BJSvcoDx0w
ಈ ನಟಿ ತಮ್ಮ ಮನೆಗೆ ಹೊಸದಾಗಿ ಸೇರುತ್ತಿರುವ ಮುದ್ದು ಸದಸ್ಯನ ಬಗ್ಗೆ ಟ್ವಟ್ಟರ್ನಲ್ಲಿ, ಕ್ರಿಸ್ಟಲ್ನನ್ನು ಮೀಟ್ ಮಾಡಿ. ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ. 3.5 ತಿಂಗಳ ವಯಸ್ಸಿನ ನೀಲಿ ಕಣ್ಣಿನ ಹಸ್ಕಿ. ನಾನು ನನ್ನ ಲಕ್ಕಿಯನ್ನು ಕಳೆದುಕೊಂಡ ನಂತರ, ನಮ್ಮ ಮನೆಗೆ 2 ತಿಂಗಳ ಹಿಂದೆ ಸರ್ಪ್ರೈಸ್ ಗಿಫ್ಟ್ ಆಗಿ ಇವನು ಬಂದನು. ನಾನು ಮತ್ತೆ ನಿಮಗೆ ಲಕ್ಕಿಯನ್ನು ಭೇಟಿ ಮಾಡಿಸುತ್ತಿದ್ದೇನೆ. ಏಕೆಂದರೆ ಲಕ್ಕಿ ಕೂಡ ಡಿಸೆಂಬರ್ 6 ರಂದು ಜನಿಸಿದ್ದು, ಕ್ರಿಸ್ಟಲ್ ಸಹ ಅದೇ ದಿನ ಜನಿಸಿದ್ದಾನೆ. ನಿಮ್ಮ ಆಶೀರ್ವಾವಾದವನ್ನು ಕ್ರಿಸ್ಟಲ್ಗೆ ನೀಡಿ ಎಂದು ಬರೆದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಈ ಫೋಟೋದಲ್ಲಿ ಮುದ್ದು ಹಸ್ಕಿ ಕ್ಯಾಮರಾ ಕಡೆ ನೋಡುತ್ತಿದ್ದು, ಮುದ್ದಾಗಿ ಕಾಣಿಸುತ್ತಿದೆ. ಹರಿಪ್ರಿಯಾ ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳ ಜೊತೆ ಕಾಲಕಳೆಯುವ ವೀಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಲ್ಲದೆ ಶಿವರಾತ್ರಿ ಸಮಯದಲ್ಲಿ ಉಡುಪಿ ಮಠಕ್ಕೆ ಹೋಗಿದ್ದ ಈ ನಟಿ ಆನೆಗಳ ಜೊತೆ ಸಮಯ ಕಳೆದಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?
ಹರಿಪ್ರಿಯಾ ತಮ್ಮ ಬೋಲ್ಡ್ ನಟನೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದರು ಪ್ರಸ್ತುತ ಯಾವುದೇ ಹೊಸ ಸಿನಿಮಾಗಳನ್ನು ಘೋಷಣೆ ಮಾಡಿಲ್ಲ.
ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಚಂದನಾ ಅವರು ಎಂಟ್ರಿ ಕೊಟ್ಟು ಮನೆಯ ಸ್ಪರ್ಧಿಗಳ ಬಳಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಶುಕ್ರವಾರ ಹಾಡು ಹಾಡುವ ಮೂಲಕವೇ ಚಂದನಾ ಕನ್ಛೇಶನ್ ರೂಮಿನಿಂದ ಮನೆಯೊಳಗೆ ಪ್ರವೇಶಿಸಿದರು. ಚಂದನಾ ಬರುತ್ತಿದ್ದಂತೆ ಮೊದಲು ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಬಳಿಕ ಮನೆಯ ಸದಸ್ಯರೆಲ್ಲಾ ಚಂದನಾ ಅವರನ್ನು ತಪ್ಪಿಕೊಂಡು ಸ್ವಾಗತಿಸಿದ್ದಾರೆ. ಚಂದನಾರನ್ನು ನೋಡಿ ಸದಸ್ಯರು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ.
ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ನಾನು ನಿಮ್ಮೆಲ್ಲರಾ ಜೊತೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯವನ್ನು ನಾನು ಇದುವರೆಗೂ ಯಾರ ಬಳಿಯೂ ಹಂಚಿಕೊಂಡಿಲ್ಲ. ಮೊದಲ ಬಾರಿಗೆ ನಿಮ್ಮೆಲ್ಲರಾ ಬಳಿ ಹೇಳುತ್ತಿದ್ದೇನೆ ಎಂದರು. ಚಂದನಾ ಈ ರೀತಿ ಹೇಳುತ್ತಿದ್ದಂತೆ ತಕ್ಷಣ ವಾಸುಕಿ ನಿಮಗೆ ಮದುವೆ ಫಿಕ್ಸ್ ಆಯ್ತಾ ಎಂದು ಹೇಳಿದ್ದಾರೆ. ಇದನ್ನು ಕೇಳಿ ಚಂದನಾ ಹಾಗೂ ಮನೆಯ ಸದಸ್ಯರು ನಕ್ಕಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಹೊಸದೊಂದು ಹಾಡಿನ ಕಾರ್ಯಕ್ರಮ ಶುರುವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಂದನಾ ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದಾರೆ. ಈ ವಿಷಯವನ್ನು ಚಂದನಾ ಬಿಗ್ ಬಾಸ್ ಮನೆಯ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕಾಗಿ ವಾಸುಕಿ ಅವರಿಗೆ ಶೀರ್ಷಿಕೆ ಗೀತೆ ಬರೆದುಕೊಡಲು ಹೇಳಿದ್ದಾರೆ. ವಾಸುಕಿ ಕಾರ್ಯಕ್ರಮಕ್ಕಾಗಿ ಹಾಡನ್ನು ಬರೆದು ಅದನ್ನು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಹಾಡು ಹಾಡಿದ್ದಾರೆ. ವಾಸುಕಿ ಹಾಡು ಹಾಡಿದ ಬಳಿಕ ಬಿಗ್ ಬಾಸ್ ಚಂದನಾರನ್ನು ಮನೆಯಿಂದ ಹೊರಡುವಂತೆ ಹೇಳುತ್ತಾರೆ. ಆಗ ವಾಸುಕಿ, ಚಂದನಾರನ್ನು ತಪ್ಪಿಕೊಂಡು ಮುತ್ತು ನೀಡಿ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.
84 ದಿನಗಳ ಕಾಲ ಬಿಗ್ ಮನೆಯಲ್ಲಿದ್ದು ಅಭಿಮಾನಿಗಳನ್ನು ರಂಜಿಸಿದ್ದ ಚಂದನಾ ಈಗ ಬಿಗ್ ಮನೆಯ ಆಟ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ. ಬಿಗ್ಬಾಸ್ ಪ್ರಾರಂಭವಾದ ಮೊದಲ ದಿನದಿಂದನೂ ಚಂದನಾ ಸ್ಟ್ರಾಂಗ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಜೊತೆ ಚಂದನಾ ಉತ್ತಮ ಸ್ನೇಹ ಹೊಂದಿದ್ದರು. ಇದೀಗ ಆ ಸ್ನೇಹವೇ ಚಂದನಾ ಅವರಿಗೆ ಮುಳುವಾಯ್ತು ಅನ್ನಿಸುತ್ತದೆ. ಇದನ್ನೂ ಓದಿ: ಶೈನ್ಗೆ ವಾರ್ನಿಂಗ್ ಕೊಟ್ಟ ಸುದೀಪ್
ಬಿಗ್ಬಾಸ್ ಶುರುವಾದಗಿನಿಂದ ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಹೆಸರನ್ನೇ ತೆಗೆದುಕೊಳ್ಳುತ್ತಿದ್ದರು. ಇದು ಮನೆಯ ಇತರೆ ಸದಸ್ಯರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸ್ಪರ್ಧಿಗಳು ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಮೇಲೆ ಅವಲಂಬಿತರಾಗಿದ್ದಾರೆ ಎಂದು ನಾಮಿನೇಟ್ ಮಾಡಿದ್ದರು. ಅಲ್ಲದೇ ಚಂದನಾ ಅವರು ವಾಸುಕಿ ಹಾಗೂ ಶೈನ್ ಶೆಟ್ಟಿಯನ್ನು ನಾಮಿನೇಟ್ ಮಾಡಲೂ ಹಿಂಜರಿಯುತ್ತಿದ್ದರು.
ವಾಸುಕಿ ಮತ್ತು ಶೈನ್ ಮಾತ್ರ ಯಾವುದೇ ಮುಲಾಜಿಲ್ಲದೆ ಚಂದನಾರನ್ನು ನಾಮಿನೇಟ್ ಮಾಡುತ್ತಿದ್ದರು. ಆದರೆ ಇದ್ಯಾವುದೂ ಚಂದನಾರ ಗಮನಕ್ಕೆ ಬರಲೇ ಇಲ್ಲ. ಅತಿಯಾಗಿ ಅವರಿಬ್ಬರನ್ನೂ ನೆಚ್ಚಿಕೊಂಡಿದ್ದೇ ಅವರ ಪಾಲಿಗೆ ಮುಳುವಾಯ್ತು ಅನ್ನಿಸುತ್ತದೆ. ಇತ್ತ ಮನೆಯಲ್ಲಿ ಚಂದನಾ ಅವರಿಗಾಗಿ ಆಡಲಿಲ್ಲ, ಬೇರೆಯವರನ್ನು ಉಳಿಸಲು ಆಡಿದರು ಎಂದು ಚಂದನಾ ಅಕ್ಕ ಸಹ ಹೇಳಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಡ್ಯಾನ್ಸರ್ ಕಿಶನ್ ಸ್ಪರ್ಧಿ ಚಂದನಾರಿಗೆ ಮುತ್ತು ನೀಡಿದ್ದಾರೆ. ಮುತ್ತು ನೀಡಿದ್ದ ಕಿಶನ್ಗೆ ಡೈರೆಕ್ಟ್ ನಾಮಿನೇಟ್ ಮಾಡುವ ಮೂಲಕ ಚಂದನಾ ಶಾಕ್ ಕೊಟ್ಟಿದ್ದಾರೆ.
ಸೋಮವಾರ ಡೈನಿಂಗ್ ಏರಿಯಾದಲ್ಲಿ ವಾಸುಕಿ, ದೀಪಿಕಾ, ಚೈತ್ರಾ ಕೊಟ್ಟೂರು ಹಾಗೂ ಶೈನ್ ಶೆಟ್ಟಿ ಕುಳಿತಿರುತ್ತಾರೆ. ಈ ವೇಳೆ ಚಂದನಾ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಿಶನ್ ಹಾಗೂ ಚೈತ್ರಾರ ರೊಮ್ಯಾಂಟಿಕ್ ದೃಶ್ಯ ಸೆರೆ ಹಿಡಿಯುತ್ತಿದ್ದರು. ಆಗ ವಾಸುಕಿ, ಕಿಶನ್ ಅವರನ್ನು ಕರೆದು ಚಂದನಾರಿಗೆ ಮುತ್ತು ನೀಡುವಂತೆ ಹೇಳುತ್ತಾರೆ.
ವಾಸುಕಿ ಮಾತನ್ನು ಕೇಳಿ ಕಿಶನ್, ಚಂದನಾರಿಗೆ ಮುತ್ತು ಕೊಟ್ಟು ಓಡಿ ಹೋಗುತ್ತಾರೆ. ವಾಸುಕಿ ಮುತ್ತು ನೀಡಲು ಹೇಳಿದರೂ ಹಾಗಾಗಿ ನೀಡಿದೆ ಎಂದು ಕಿಶನ್ ಹೇಳಿದ್ದರು. ಕಿಶನ್ ಮಾತು ಕೇಳಿ ಚಂದನಾ, ಕೋಪದಿಂದ ವಾಸುಕಿರನ್ನು ನೋಡಿದರು.
ಇದಾದ ಬಳಿಕ ಬಿಗ್ ಬಾಸ್ ನಾಮಿನೇಶನ್ ಪ್ರಕ್ರಿಯೆ ನಡೆಸಿದ್ದರು. ಈ ವೇಳೆ ಮನೆಯ ಕ್ಯಾಪ್ಟನ್ ಆಗಿದ್ದ ಚಂದನಾ ಅವರಿಗೆ ಡೈರೆಕ್ಟ್ ನಾಮಿನೇಟ್ ಮಾಡಲು ಹೇಳಿದರು. ಆಗ ಚಂದನಾ, ಕಿಶನ್ರನ್ನು ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ. ಚಂದನಾ ಡೈರೆಕ್ಟ್ ನಾಮಿನೇಟ್ ಮಾಡಿದಕ್ಕೆ ಕಿಶನ್ ಬೇಸರಗೊಂಡು ಅಲ್ಲಿಂದ ಹೊರಟು ಹೋಗುತ್ತಾರೆ.
ಈ ವಾರ ಮನೆಯಿಂದ ಹೊರಹೋಗಲು ಕಿಶನ್ ಜೊತೆಗೆ ಶೈನ್ ಶೆಟ್ಟಿ, ವಾಸುಕಿ ವೈಭವ್, ರಾಜು ತಾಳಿಕೋಟೆ, ಭೂಮಿ ಶೆಟ್ಟಿ, ಚಂದನ್ ಅಚಾರ್, ಚೈತ್ರಾ ನಾಮಿನೇಟ್ ಆಗಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಕಿಶನ್ ಕೆಲವು ದಿನಗಳ ಹಿಂದೆ ಚಂದನಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದರು. ಆದರೆ ಈಗ ಕಿಶನ್ ಮತ್ತೊಬ್ಬ ಸ್ಪರ್ಧಿಗೆ ಮುತ್ತು ಕೊಟ್ಟಿದ್ದಾರೆ.
ಸ್ಪರ್ಧಿಗಳಾದ ಭೂಮಿ ಶೆಟ್ಟಿ, ಕಿಶನ್, ಜೈ ಜಗದೀಶ್, ಪ್ರಿಯಾಂಕಾ, ಫೃಥ್ವಿ, ರಾಜು ತಾಳಿಕೋಟೆ, ಕುರಿ ಪ್ರತಾಪ್, ಹರೀಶ್ ರಾಜ್ ಮತ್ತು ಚಂದನ್ ಆಚಾರ್ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಯಾರು ಬರುತ್ತಾರೆ ಎಂದು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಪ್ರಿಯಾಂಕಾ, ವೈಲ್ಡ್ ಕಾರ್ಡ್ ಮೂಲಕ ಹುಡುಗಿ ಬಂದರೆ ಕಿಶನ್ ಮುತ್ತು ಕೊಡಬೇಕು ಎಂದು ಹೇಳಿದ್ದಾರೆ. ಇದ್ದನ್ನೂ ಓದಿ: ಚಂದನಾ ಕೆನ್ನೆಗೆ ಮುತ್ತು ಕೊಟ್ಟ ಕಿಶನ್
ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ, ಈ ಮನೆಯಲ್ಲಿ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೀರಿ ಅಲ್ವಾ. ಚಂದನಾ, ಭೂಮಿ, ದೀಪಿಕಾ, ರಶ್ಮಿ, ಸುಜಾತ, ಚೈತ್ರಾ ವಾಸುದೇವನ್ ಹಾಗೂ ಚೈತ್ರಾ ಕೊಟ್ಟೂರು ಅವರಿಗೆ ಕಿಸ್ ಮಾಡಿದ್ದೀರಾ ಎಂದು ಕೇಳಿದರು. ಆಗ ಕಿಶನ್ ಸುಜಾತಾ ಅವರಿಗೆ ನಾನು ಮುತ್ತು ಕೊಟ್ಟಿಲ್ಲ. ಆದರೆ ದೀಪಿಕಾ ಅವರಿಗೆ ಮುತ್ತು ಕೊಡುವುದು ತುಂಬಾ ಕಷ್ಟವಾಯಿತು. ಆದರೂ ಅವರಿಗೂ ಕೊಟ್ಟಿದ್ದೀನಿ ಎಂದರು. ಇದ್ದನ್ನೂ ಓದಿ: ಚಂದನಾಗೆ ಕಿಸ್ ಕೊಡು ಎಂದ ಶೈನ್ – ಓಡಿ ಹೋಗಲು ಮುಂದಾದ ವಾಸುಕಿ
ಬಳಿಕ ಪ್ರಿಯಾಂಕಾ ಕುರಿ ಪ್ರತಾಪ್ಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದಾಗ ಕಿಶನ್ ಇಲ್ಲ ಕೊಟ್ಟಿಲ್ಲ ಎಂದು ಉತ್ತರಿಸಿದರು. ರಾಜು ತಾಳಿಕೋಟೆ ಮತ್ತು ಭೂಮಿ ಮಧ್ಯೆ ಕಿಶನ್ ಕುಳಿತಿದ್ದರು. ಈ ವೇಳೆ ರಾಜು ಅವರು ಕಿಶನ್ಗೆ ಮುತ್ತು ಕೊಟ್ಟು ಪಾಸ್ ಮಾಡು ಎಂದರು. ತಕ್ಷಣ ಕಿಶನ್, ಭೂಮಿ ಕೆನ್ನೆಗೆ ಎಲ್ಲರ ಮುಂದೆಯೇ ಕಿಸ್ ಮಾಡಿದ್ದಾರೆ. ಈ ವಿಡಿಯೋ ಟಿವಿಯಲ್ಲಿ ಪ್ರಸಾರವಾಗಿಲ್ಲ. ಅನ್ಸೀನ್ನಲ್ಲಿ ಈ ವೀಡಿಯೋವನ್ನು ನೋಡಬಹುದಾಗಿದೆ.
ಈ ಹಿಂದೆಯೇ ಕಿಶನ್ ಚಂದನಾರನ್ನು ಅಪ್ಪಿಕೊಂಡು ಕಿಶ್ ಮಾಡಿದ್ದರು. ಒಂದು ಟಾಸ್ಕ್ ಮಾಡುವಾಗ ಚಂದನಾ, ಕಿಶನ್ಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್ಗೆ ದೂರದಿಂದ ನಿಂತುಕೊಂಡು ಸಾರಿ ಕೇಳಿದ್ದಾರೆ. ಆಗ ಕಿಶನ್ ಚಂದನಾ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದರು. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದರು. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್ ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದರು.
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರಲ್ಲಿ ಶೈನ್ ಶೆಟ್ಟಿ ಅವರು ಸ್ಪರ್ಧಿ ಚಂದನಾ ಅವರ ಜೊತೆ ಜಗಳವಾಡಿ ಅವಾಜ್ ಹಾಕಿದ್ದಾರೆ. ಶೈನ್ ವರ್ತನೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ.
ಚಂದನಾ ಅವರು ಟಾಸ್ಕ್ ಮಾಡಿ ಮೈ ಹಾಗೂ ತಲೆಯಲ್ಲೆಲ್ಲ ಮರಳು ಆಗಿದ್ದ ಕಾರಣ ಸ್ನಾನ ಮಾಡಿದ್ದರು. ಆದರೆ ಇದು ಶೈನ್ ಹಾಗೂ ಕಿಶನ್ ಅವರಿಗೆ ಇಷ್ಟವಾಗಲಿಲ್ಲ. ಬಿಗ್ ಬಾಸ್ ಹೇಳುವ ಮೊದಲೇ ನೀವು ಏಕೆ ಸ್ನಾನ ಮಾಡಿದ್ದೀರಿ ಎಂದು ಚಂದನಾರನ್ನು ಪ್ರಶ್ನಿಸಿದ್ದರು. ಆಗ ಚಂದನಾ ಬಿಗ್ ಬಾಸ್ ಆದೇಶ ನೀಡಿದ್ದರು. ಹಾಗಾಗಿ ನಾನು ಸ್ನಾನ ಮಾಡಿಕೊಂಡು ಬಂದೆ ಎಂದು ಹೇಳಿದ್ದಾರೆ. ಈ ವೇಳೆ ಶೈನ್ ಹಾಗೂ ಕಿಶನ್ ಬಿಗ್ ಬಾಸ್ ಬೇರೆ ಆದೇಶ ನೀಡಿದ್ದರು ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಚಂದನಾ ಹಾಗೂ ಶೈನ್ ನಡುವೆ ವಾದ ನಡೆಯುತ್ತೆ. ಈ ವೇಳೆ ಶೈನ್ ಬಿಗ್ ಬಾಸ್ ಗಾರ್ಡನ್ ಏರಿಯಾಗೆ ಬರಲು ಹೇಳಿದ್ದರು ಅಷ್ಟೇ. ಅವರು ಬೇರೆ ಆದೇಶ ನೀಡಲಿಲ್ಲ. ಹಾಗಿದರೆ ನಾವು ಕೂಡ ಬ್ಯಾಗ್ ಎತ್ತಿಕೊಂಡು ಗಾರ್ಡನ್ಗೆ ಬಂದು ಕೂರುತ್ತಿದ್ದೆವು ಎಂದಾಗ ನೀವು ಮಾಡಬೇಕಿತ್ತು ಎಂದು ಚಂದನಾ ಹೇಳಿದ್ದಾರೆ. ನನ್ನ ತಲೆಯಲ್ಲಿ ಬ್ರೈನ್ ಎನ್ನುವುದು ಸ್ವಲ್ಪ ಇದೆ ಎಂದು ಶೈನ್ ಹೇಳಿದಾಗ ಚಂದನಾ ನನಗೆ ಬ್ರೈನ್ ಇಲ್ಲ, ಲದ್ದಿ ಇದೆ ಎಂದು ಕೋಪಗೊಂಡು ಪತ್ರಿಕ್ರಿಯಿಸಿದ್ದಾರೆ.
ವಾದ-ವಿವಾದ ಹೆಚ್ಚಾಗುತ್ತಿದ್ದಂತೆ ಶೈನ್ ಹೋಗಮ್ಮ ಕಂಡಿದ್ದೀನಿ ಎಂದು ಹೇಳಿದ್ದಾರೆ. ಆಗ ಚಂದನಾ ಕಂಡಿದ್ದೀರಾ? ಹೌದು. ಮತ್ತೆ ಬಂದು ಅದು ಮಾಡು ಇದು ಮಾಡು ಎಂದು ಹೇಳಿ ಆಗ ನೋಡಿಕೊಳ್ಳುತ್ತೀನಿ ಎಂದು ಹೇಳಿದ್ದಾರೆ. ಇದರಿಂದ ಮತ್ತೆ ಕೋಪಗೊಂಡ ಶೈನ್ ನಾನು ಯಾವಾಗ ಅದು ಮಾಡು ಇದು ಮಾಡು ಎಂದು ಹೇಳಿದ್ದೇನೆ. ನಿನ್ನ ವಯಸ್ಸಿಗೆ ತಕ್ಕಂತೆ ಮಾತಾಡು, ಬಾಯಿಗೆ ಬಂದಂತೆ ಮಾತನಾಡಬೇಡ ಎಂದು ಚಂದನಾಗೆ ಹೇಳಿದ್ದಾರೆ. ಆಗ ಚಂದನಾ ನಾನು ಮಾತನಾಡಲ್ಲ ಏನಿವಾಗ ಎಂದು ಪತ್ರಿಕ್ರಿಯಿಸಿದ್ದಾರೆ.
ಪ್ರತಿ ಮಾತಿಗೆ ಚಂದನಾ ವಾದ ಮಾಡುತ್ತಿರುವುದನ್ನು ನೋಡಿ ಶೈನ್, ಇದೆಲ್ಲ ನನ್ನ ಹತ್ತಿರ ಇಟ್ಟುಕೊಳ್ಳಬೇಡಿ. ಯಾರ ಹತ್ತಿರ ಇಟ್ಟಕೊಳ್ಳಬೇಕೋ ಅವರ ಹತ್ತಿರ ಇಟ್ಟುಕೊಳ್ಳಿ ಎಂದು ಅವಾಜ್ ಹಾಕಿದ್ದಾರೆ. ಶೈನ್ ಈ ರೀತಿ ಹೇಳುತ್ತಿದ್ದಂತೆ ಗಾರ್ಡನ್ ಏರಿಯಾದಲ್ಲಿ ಕುಳಿತ್ತಿದ್ದ ಚಂದನಾ ಅಳುತ್ತಾ ಮನೆಯೊಳಗೆ ಹೋಗಿದ್ದಾರೆ. ಚಂದನಾ ಅಳುತ್ತಿರುವುದನ್ನು ನೋಡಿ ಶೈನ್ ನಾನು ತಮಾಷೆ ಮಾಡಿದ್ದು, ಸಿರಿಯಸ್ ಆಗಿ ತಗೋಬೇಡ ಎಂದು ಚಂದನಾರನ್ನು ಸಮಾಧಾನ ಮಾಡಲು ಮುಂದಾದರು.
ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಇತ್ತೀಚೆಗೆ ಕಿಶನ್ ಸ್ಪರ್ಧಿ ಚಂದನಾ ಅವರಿಗೆ ಮುತ್ತು ನೀಡಿದ್ದರು. ಈ ಬಗ್ಗೆ ಮಾತನಾಡುತ್ತಿದ್ದ ಶೈನ್ ಶೆಟ್ಟಿ ಮುತ್ತು ಕೊಡು ಎಂದು ಚಂದನಾಗೆ ಹೇಳಿದಾಗ ಗಾಯಕ ವಾಸುಕಿ ಓಡಿ ಹೋಗಲು ಮುಂದಾದರು.
ಸ್ಪರ್ಧಿಗಳಾದ ಶೈನ್, ವಾಸುಕಿ ಹಾಗೂ ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಶೈನ್, ಚಂದನಾರಿಗೆ ಕಿಶನ್ ಮುತ್ತು ನೀಡಿದರ ಬಗ್ಗೆ ಕೇಳಿದ್ದಾರೆ. ಬಳಿಕ ಈ ವಿಷಯವನ್ನು ನೀನು ನನ್ನ ಬಳಿ ಏಕೆ ಹೇಳಿಲಿಲ್ಲ ಎಂದು ಪ್ರಶ್ನಿಸಿದಾಗ ಚಂದನಾ ನನಗೆ ಈ ವಿಷಯವನ್ನು ದೊಡ್ಡ ಸುದ್ದಿ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ನಾನು ಈ ಬಗ್ಗೆ ಯಾರ ಬಳಿಯೂ ಹೇಳಲಿಲ್ಲ ಎಂದು ಉತ್ತರಿಸಿದ್ದಾರೆ.
ಬಳಿಕ ಶೈನ್, ಕಿಶನ್ ನಿನಗೆ ಎಲ್ಲಿ ಮುತ್ತು ಕೊಟ್ಟರು. ಅವನು ನಿನಗೆ ಮುತ್ತು ಕೊಟ್ಟಾಗ ನಿನಗೆ ಹೇಗೆ ಎನಿಸಿತ್ತು. ಇದು ನಿನ್ನ ಮೊದಲ ಮುತ್ತಾ? ಎಂದು ಪ್ರಶ್ನಿಸಿದ್ದಾರೆ. ಆಗ ಚಂದನಾ, ಕಿಶನ್ ನನಗೆ ಕೆನ್ನೆ ಮೇಲೆ ಮುತ್ತು ಕೊಟ್ಟನು. ಸೀರಿಯಲ್ನಲ್ಲಿ ಒಬ್ಬರು ಒಂದು ಬಾರಿ ಮಾತ್ರ ಮುತ್ತು ಕೊಟ್ಟಿದ್ದರು ಅಷ್ಟೇ. ಅದನ್ನು ಬಿಟ್ಟು ಬೇರೆ ಯಾರೂ ನನಗೆ ಮುತ್ತು ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಚಂದನಾ ಈ ರೀತಿ ಹೇಳುತ್ತಿದ್ದಂತೆ ಶೈನ್, ವಾಸುಕಿಗೆ ಒಂದು ಮುತ್ತು ಕೊಡು ಎಂದಿದ್ದಾರೆ. ಈ ವೇಳೆ ಚಂದನಾ ಪಕ್ಕದಲ್ಲಿಯೇ ಕುಳಿತ್ತಿದ್ದ ವಾಸುಕಿ ಎದ್ದು ಓಡಿ ಹೋಗಲು ಮುಂದಾದರು. ಬಳಿಕ ಶೈನ್ ಹಾಗೂ ಚಂದನಾ ನೀವು ಭೂಮಿಗೆ ಮುತ್ತು ನೀಡಲಿಲ್ವಾ ಎಂದು ಹೇಳಿದ್ದಾರೆ. ಆಗ ವಾಸುಕಿ ನಾನು ಅವರಿಗೆ ಮುತ್ತು ನೀಡಲಿಲ್ಲ, ಅವರೇ ನನಗೆ ಮುತ್ತು ನೀಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಸಂಚಿಕೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿಲ್ಲ. ಬದಲಾಗಿ ಅನ್ಸೀನ್ನಲ್ಲಿ ಪ್ರಸಾರವಾಗಿತ್ತು.
ಕಳೆದ ವಾರ ಬಿಗ್ಬಾಸ್ ಮನೆಯ ಮಂದಿಗೆಲ್ಲಾ ಒಂದು ಟಾಸ್ಕ್ ಕೊಟ್ಟಿದ್ದರು. ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕು ಎಂಬ ಟಾಸ್ಕ್ ಕೊಟ್ಟಿದ್ದರು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ಮಧ್ಯೆ ಜೋರಾಗಿ ಜಗಳ, ಗಲಾಟೆ ನಡೆದಿದೆ. ಕೊನೆಗೆ ಬಿಗ್ಬಾಸ್ ಈ ಟಾಸ್ಕ್ ನಿಂದ ಬ್ರೇಕ್ ಕೊಟ್ಟಿದ್ದರು. ಆಗ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್ನಲ್ಲಿ ನಡೆದ ಜಗಳದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.
ಟಾಸ್ಕ್ ಮಾಡುವಾಗ ಚಂದನಾ, ಕಿಶನ್ಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್ಗೆ ದೂರದಿಂದ ನಿಂತುಕೊಂಡು ಸಾರಿ ಕೇಳಿದ್ದಾರೆ. ಆಗ ಕಿಶನ್ ಚಂದನಾ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತುಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್ ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸೀಸನ್-7 ಕಾರ್ಯಕ್ರಮದಲ್ಲಿ ಸ್ಪರ್ಧಿ ಡ್ಯಾನ್ಸರ್ ಕಿಶನ್ ಅವರು ಚಂದನಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದಾರೆ.
ಮಂಗಳವಾರ ಬಿಗ್ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ವೊಂದನ್ನು ನೀಡಿದ್ದು, ಇದರಲ್ಲಿ ಸ್ಪರ್ಧಿಗಳು ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕಿತ್ತು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ನಡುವೆ ಜೋರಾಗಿ ಜಗಳ ನಡೆದಿದೆ.
ಸ್ಪರ್ಧಿಗಳು ಜಗಳವಾಡುತ್ತಿರುವುದನ್ನು ನೋಡಿದ ಬಿಗ್ಬಾಸ್ ಕೊನೆಗೆ ಮನೆ ಮಂದಿಗೆ ಈ ಟಾಸ್ಕ್ ನಿಂದ ಸ್ಪಲ್ಪ ಬ್ರೇಕ್ ಕೊಟ್ಟಿದ್ದರು. ಈ ವೇಳೆ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್ ವೇಳೆ ನಡೆದ ಜಗಳದ ಬಗ್ಗೆ ಮಾತನಾಡುತ್ತಿದ್ದರು.
ಈ ಟಾಸ್ಕ್ ಮಾಡುವಾಗ ಚಂದನಾ, ಕಿಶನ್ ಅವರಿಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್ಗೆ ದೂರದಿಂದ ನಿಂತುಕೊಂಡು ‘ಸಾರಿ’ ಕೇಳಿದ್ದಾರೆ. ಚಂದನಾ ಕ್ಷಮೆ ಕೇಳುತ್ತಿದ್ದಂತೆ ಅವರ ಬಳಿ ಬಂದಿದ್ದಾರೆ.
ಚಂದನಾರ ಬಳಿ ಬಂದ ಕಿಶನ್ ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್, ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಾಲ್ಕನೇ ವಾರ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ರಾಜ ತಾಳಿಕೋಟೆ, ಚಂದನ್ ಆಚಾರ್, ಚೈತ್ರಾ ಕೊಟ್ಟೂರು ಮತ್ತು ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ.
ತುಮಕೂರು: ಕರ್ನಾಟಕ ಪರೀಕ್ಷಾ ಮಂಡಳಿಯ ಎಡವಟ್ಟು ಮುಂದುವರಿದಿದ್ದು ಡಿಪ್ಲೋಮ ವಿದ್ಯಾರ್ಥಿನಿ ಜೊತೆ ಚೆಲ್ಲಾಟ ಆಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಎಂಜಿನಿಯರಿಂಗ್ ಮಾಡಲು ಚಂದನಾ ಎಂಬವರು 2016 ರಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದರೂ ಈಗ ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶವನ್ನು ಬಿಡುಗಡೆ ಮಾಡದೇ ಆಟ ಆಡುತ್ತಿದೆ ಎಂದು ಚಂದನಾ ಪೋಷಕರು ಆರೋಪಿಸಿದ್ದಾರೆ.
ಯಾಕೆ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ ಎಂದು ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ, ಅಪ್ಲಿಕೇಷನ್ ತುಂಬುವಾಗ ನೀವು ಡಿಪ್ಲೋಮ ಮೊದಲ ವರ್ಷದ ಅಂಕಪಟ್ಟಿಯನ್ನೇ ನೀಡಿಲ್ಲ. ಹಾಗಾಗಿ ರಿಸಲ್ಟ್ ಬಂದಿಲ್ಲ ಎಂದು ಉತ್ತರಿಸಿದ್ದಾರೆ.
ಆದರೆ ಚಂದನಾ ಅಪ್ಲಿಕೇಷನ್ ತುಂಬಿದ ನಂತರ ಅದರ ನಕಲಿ ಪ್ರತಿಯನ್ನು ಇಟ್ಟುಕೊಂಡಿದ್ದು ಅದರಲ್ಲಿ ಎಲ್ಲಾ ಮಾಹಿತಿಯನ್ನು ತುಂಬಿರುವ ದಾಖಲೆ ಸ್ಪಷ್ಟವಾಗಿದೆ. ಈಗ ಅಪ್ಲಿಕೇಷನ್ ಸರಿಯಿಲ್ಲ ಎಂದು ಹೇಳಿರುವ ಪರೀಕ್ಷಾ ಮಂಡಳಿ ಚಂದನಾರ ಅಪ್ಲಿಕೇಷನ್ ನೋಡಿ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಅಷ್ಟೇ ಅಲ್ಲದೇ ಅಲ್ಲದೆ ಅಪ್ಲಿಕೇಷನ್ ಪರಿಶೀಲನೆಯ ಕೊನೆಯ ದಿನದ ನಂತರದ ದಿನ ನೀವೇ ಮಾಹಿತಿಗಳನ್ನು ಬದಲಾಯಿಸಿದ್ದೀರಿ ಎಂದು ಐಪಿ ಅಡ್ರೆಸ್ ವೊಂದನ್ನು ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂಗೆ ದೂರು ಸಲ್ಲಿಸಲು ಚಂದನಾ ಪೋಷಕರು ನಿರ್ಧರಿಸಿದ್ದಾರೆ.