Tag: champions trophy

  • ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

    ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

    ಮುಂಬೈ: ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ. ಕುಂಬ್ಳೆ ದಿಢೀರ್ ಆಗಿ ರಾಜೀನಾಮೆ ನೀಡಿದ್ದು ಯಾಕೆ ಎನ್ನುವುದಕ್ಕೆ ಈಗ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂ ಅಸಮಾಧಾನಗಳು ಒಂದೊಂದಾಗಿ ಹೊರ ಬರುತ್ತಿದೆ.

    ಫೈನಲ್‍ನಲ್ಲಿ ಪಾಕ್ ವಿರುದ್ಧ 180 ರನ್‍ಗಳಿಂದ ಸೋತಿದ್ದಕ್ಕೆ ಕೋಚ್ ಅನಿಲ್ ಕುಂಬ್ಳೆ ಗರಂ ಆಗಿ ಟೀಂ ಇಂಡಿಯಾ ಆಟಗಾರನ್ನು 30 ನಿಮಿಷ ತೀವ್ರ ತರಾಟೆ ತೆಗೆದುಕೊಂಡಿದ್ದರು. ಇದರಿಂದ ನೊಂದ ಕ್ರಿಕೆಟಿಗರು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ದೂರು ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

    ಕುಂಂಬ್ಳೆ ಕ್ಲಾಸ್ ಹೀಗಿತ್ತಂತೆ!
    ಮ್ಯಾಚ್ ಬಳಿಕ ಒಬ್ಬೊಬ್ಬರೇ ಆಟಗಾರರನ್ನು ಕರೆದು ಕುಂಬ್ಳೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಹಿರಿಯ ಆಟಗಾರರನ್ನು ಉದಾಹರಿಸಿ ಚೆನ್ನಾಗಿ ಕ್ಲಾಸ್ ಮಾಡಿದ್ದಾರೆ. ತಂಡದ ಬೌಲರ್‍ಗಳ ಬಗ್ಗೆ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿ ಫುಲ್ ಕ್ಲಾಸ್ ಮಾಡಿದ್ದಾರೆ. ಕುಂಬ್ಳೆ ಕಟು ಪದಗಳಿಂದ ಟೀಕಿಸಿದ್ದಕ್ಕೆ ಆಟಗಾರರು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಆರಂಭಗೊಳ್ಳುವ ಎರಡು ದಿನದ ಮೊದಲು ಕೊಹ್ಲಿ ಮತ್ತು ಕುಂಬ್ಳೆ ನಡುವೆ ವಾಗ್ವಾದ ನಡೆದಿತ್ತು ಎನ್ನುವ ವಿಚಾರವನ್ನು ಮಾಧ್ಯಮಗಳು ವರದಿ ಮಾಡಿವೆ. ಕೋಚ್ ಕುಂಬ್ಳೆಗೆ ನಿಮ್ಮ ಪರ ನಮ್ಮ ತಂಡದ ಆಟಗಾರರಿಗೆ ಒಲವು ಇಲ್ಲ. ನೀವು ಕೋಚ್ ಆಗಿ ಮುಂದುವರಿಯಲು ನಾನೂ ಸೇರಿದಂತೆ ಆಟಗಾರರ ಒಮ್ಮತವಿಲ್ಲ ಎಂದು ಕುಂಬ್ಳೆಗೆ ಆಟಗಾರರ ಎದುರೇ ಕೊಹ್ಲಿ ನಿಂದಿಸಿದ್ದಾರೆ. ಕೊಹ್ಲಿ ಮಾತಿನಿಂದ ಆಕ್ರೋಶಗೊಂಡ ಕುಂಬ್ಳೆ, ಕೋಚ್ ಆಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನೀನು ಸುಮ್ಮನೆ ಇರು ಎಂದು ಕೊಹ್ಲಿಗೆ ತಿರುಗೇಟು ನೀಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಧರ್ಮಶಾಲಾ ಟೆಸ್ಟ್ ನಿಂದ ಭಿನ್ನಮತ ಆರಂಭ?
    ಕೊಹ್ಲಿ ಮತ್ತು ಕುಂಬ್ಳೆ ಮಧ್ಯೆ ಮೊದಲು ಅಸಮಾಧಾನ ಸ್ಫೋಟಗೊಳ್ಳಲು ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ 4 ಟೆಸ್ಟ್ ಪಂದ್ಯ ಕಾರಣ ಎಂದು ಹೇಳಲಾಗುತ್ತಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕೊಹ್ಲಿ ನಾಲ್ಕನೇಯ ಟೆಸ್ಟ್ ಆಡಿರಲಿಲ್ಲ. ಹೀಗಾಗಿ ಟೀಂ ಇಂಡಿಯಾವನ್ನು ಅಜಿಂಕ್ಯಾ ರೆಹಾನೆ ಮುನ್ನಡೆಸಿದ್ದರು. ಈ ಪಂದ್ಯಕ್ಕೆ ಕುಂಬ್ಳೆ ಸ್ಪಿನ್ನರ್ ಕುಲ್‍ದೀಪ್ ಯಾದವ್ ಅವರಿಗೆ ಸ್ಥಾನವನ್ನು ನೀಡಿದ್ದರು. ಆದರೆ ಈ ಪಂದ್ಯದಲ್ಲಿ ಕುಲ್‍ದೀಪ್ ಯಾದವ್ ಅವರಿಗೆ ಸ್ಥಾನ ನೀಡಿದ್ದು ನಾಯಕ ಕೊಹ್ಲಿ ಇಷ್ಟವಿರಲಿಲ್ಲ. ಸ್ಥಾನ ನೀಡಿದ್ದನ್ನು ಪ್ರಶ್ನಿಸಿದ್ದರು ಎಂದು ವರದಿಯಾಗಿದೆ. ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಕುಲ್‍ದೀಪ್ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರು. ಆಗ್ರ ಬ್ಯಾಟ್ಸ್ ಮನ್‍ಗಳನ್ನು ಪೆವಿಲಿಯನ್ ಗೆ ಕಳುಹಿಸಿದ್ದ ಕುಲ್‍ದೀಪ್ ಯಾದವ್‍ಗೆ ಈ ಪಂದ್ಯದಲ್ಲಿ ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಕುಂಬ್ಳೆ ಪರ ಹಿರಿಯರ ಬ್ಯಾಟಿಂಗ್: ಕುಂಬ್ಳೆ ಮಾಜಿ ಆಟಗಾರರದಾದ ಬಿಷನ್ ಸಿಂಗ್ ಬೇಡಿ, ಸುನೀಲ್ ಗವಾಸ್ಕರ್ ಬ್ಯಾಟಿಂಗ್ ಮಾಡಿದ್ದಾರೆ. ಕುಂಬ್ಳೆ ತಮ್ಮ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ, ಒಂದು ವೇಳೆ ಟೀಂ ಇಂಡಿಯಾ ಆಟಗಾರರಿಗೆ ಮೃದು ಸ್ವಭಾವದ ಕೋಚ್ ಬೇಕಿದ್ದರೆ ಕುಂಬ್ಳೆ ಹೋಗಿದ್ದೇ ಒಳ್ಳೆಯದು ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

    ಅಭಿನವ್ ಬಿಂದ್ರಾ ಬ್ಯಾಟಿಂಗ್:
    ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಟ್ವೀಟ್ ಮಾಡಿ ಪರೋಕ್ಷವಾಗಿ ಕೊಹ್ಲಿಗೆ ಟಾಂಗ್ ನೀಡಿದ್ದಾರೆ. ನನ್ನ ದೊಡ್ಡ ಟೀಚರ್ ನನ್ನ ಕೋಚ್, ನಾನು ಅವರನ್ನು ದ್ವೇಷಿಸುತ್ತಿದ್ದೆ. 20 ವರ್ಷಗಳ ಕಾಲ ನಾನುದ ಅವರೊಂದಿಗೆ ಇದ್ದೆ. ನನಗೆ ಇಷ್ಟವಾಗದ ವಿಚಾರಗಳನ್ನು ಅವರು ಹೇಳುತ್ತಿದ್ದರು ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಕುಂಬ್ಳೆಯನ್ನು ಬೆಂಬಲಿಸಿದ್ದಾರೆ.

  • ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    ಓವಲ್: ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಪಾಕ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ 7 ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರರಾಗಿದ್ದಾರೆ. ಶ್ರೀಲಂಕಾದ ಆಟಗಾರರಾದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ, ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾ ರಿಕ್ಕಿಪಾಟಿಂಗ್ ಇದೂವರೆಗೆ 6 ಫೈನಲ್ ಆಡಿದ್ದರು.

    ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ 32 ಎಸೆತಗಳಲ್ಲಿ 53 ರನ್ ಯುವರಾಜ್ ಚಚ್ಚಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. 2000 ನೇ ಇಸ್ವಿಯಲ್ಲಿ 17ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟ ಯುವಿ ಇದೂವರೆಗೆ 301 ಏಕದಿನ ಪಂದ್ಯ, 58 ಟಿ 20 ಪಂದ್ಯಗಳನ್ನು ಆಡಿದ್ದಾರೆ.

    ಆ 7  ಫೈನಲ್‍ಗಳು
    1. ಐಸಿಸಿ ಚಾಂಪಿಯನ್ಸ್ ಟ್ರೋಫಿ 2000 – ಭಾರತ ವರ್ಸಸ್ ನ್ಯೂಜಿಲೆಂಡ್
    2. ಐಸಿಸಿ ಚಾಂಪಿಯನ್ಸ್ ಟ್ರೋಫಿ 2002 – ಭಾರತ ವರ್ಸಸ್ ಶ್ರೀಲಂಕಾ
    3. ಐಸಿಸಿ ವಿಶ್ವಕಪ್ ಕ್ರಿಕೆಟ್ 2003 – ಭಾರತ ವರ್ಸಸ್ ಆಸ್ಟ್ರೇಲಿಯಾ
    4. ಐಸಿಸಿ ಟಿ20 ವಿಶ್ವಕಪ್ 2007 – ಭಾರತ ವರ್ಸಸ್ ಪಾಕಿಸ್ತಾನ
    5. ಐಸಿಸಿ ವಿಶ್ವಕಪ್ ಕ್ರಿಕೆಟ್ 2011- ಭಾರತ ವರ್ಸಸ್ ಶ್ರೀಲಂಕಾ
    6. ಐಸಿಸಿ ಟಿ20 ವಿಶ್ವಕಪ್ 2014- ಭಾರತ ವರ್ಸಸ್ ಶ್ರೀಲಂಕಾ
    7. ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 – ಭಾರತ ವರ್ಸಸ್ ಪಾಕಿಸ್ತಾನ

  • 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

    76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

    ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾ ಸೋತಿದ್ದರೂ ಭಾರತದ ಪರ ಭರ್ಜರಿಯಾಗಿ ಆಡಿದ್ದ ಹಾರ್ದಿಕ್ ಪಾಂಡ್ಯ ಹೊಸ ದಾಖಲೆ ಬರೆದಿದ್ದಾರೆ.

    ಐಸಿಸಿ ಆಯೋಜಿಸಿದ್ದ ಟೂರ್ನಿಯ ಫೈನಲ್ ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.

    32 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಆಡಂ ಗಿಲ್‍ ಕ್ರಿಸ್ಟ್ ದಾಖಲೆಯನ್ನು ಪಾಂಡ್ಯ ಮುರಿದಿದ್ದಾರೆ. 1999ರಲ್ಲಿ ಪಾಕ್ ವಿರುದ್ಧದ ಇಂಗ್ಲೆಂಡಿನ ಲಾರ್ಡ್ಸ್  ನಲ್ಲಿ ನಡೆದ ವಿಶ್ವಕಪ್ ಫೈನಲ್‍ನಲ್ಲಿ ಗಿಲ್‍ ಕ್ರಿಸ್ಟ್ 33 ಎಸೆತದಲ್ಲಿ 50 ರನ್ ಹೊಡೆದ್ದರು.

    ಇಂದಿನ ಪಂದ್ಯದಲ್ಲಿ ಹಫೀಸ್ 34 ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ವೇಗದ ಅರ್ಧಶತಕ ಹೊಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

    ಹಾರ್ದಿಕ್ ಪಾಂಡ್ಯ 76 ರನ್( 43 ಎಸೆತ, 4 ಬೌಂಡರಿ, 6 ಸಿಕ್ಸರ್) ಸಿಡಿಸಿದ್ದಾಗ ರನೌಟ್‍ಗೆ ಬಲಿಯಾದರು.

    ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದ್ದರೆ ಭಾರತ 30.3 ಓವರ್ ಗಳಲ್ಲಿ 158 ರನ್‍ಗಳಿಗೆ ಆಲೌಟ್ ಆಯ್ತು. 180 ರನ್‍ಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮೊದಲ ಬಾರಿಗೆ ಗೆದ್ದುಕೊಂಡ ಸಾಧನೆ ಮಾಡಿತು.

    ಇದನ್ನೂ ಓದಿ:ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

     

     

     

  • ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

    ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?

    ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ನಗದು ಬಹುಮಾನ ಸಿಕ್ಕಿದೆ.

    ಈ ಟೂರ್ನಿಗೆ ಒಟ್ಟು 4.5 ದಶಲಕ್ಷ ಡಾಲರ್(ಅಂದಾಜು 28 ಕೋಟಿ ರೂ.) ನಗದು ಬಹುಮಾನ ನೀಡುವುದಾಗಿ ಐಸಿಸಿ ತಿಳಿಸಿದ್ದು, ದ್ವಿತೀಯ ಸ್ಥಾನಿ ಭಾರತಕ್ಕೆ 1.1 ದಶಲಕ್ಷ ಡಾಲರ್(ಅಂದಾಜು 7ಕೋಟಿ ರೂ.) ಬಹುಮಾನ ಸಿಕ್ಕಿದೆ.

    ಸೆಮಿಫೈನಲ್‍ನಲ್ಲಿ ಸೋತ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಕ್ಕೆ 4.50 ಲಕ್ಷ ಡಾಲರ್(ಅಂದಾಜು 2.8 ಕೋಟಿ ರೂ.) ಸಿಕ್ಕಿದರೆ, ಗುಂಪಿನಲ್ಲಿ ಮೂರನೇ ಸ್ಥಾನವನ್ನು ಪಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗೆ 90 ಸಾವಿರ ಡಾಲರ್(ಅಂದಾಜು 57 ಲಕ್ಷ ರೂ.), ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಪಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್‍ಗೆ 60 ಸಾವಿರ ಡಾಲರ್( ಅಂದಾಜು 38 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    2013ರ ಟೂರ್ನಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ಬಹುಮಾನದ ಮೊತ್ತವನ್ನು ಹೆಚ್ಚಿಸಿದ್ದು, ಒಟ್ಟು 5 ಲಕ್ಷ ಡಾಲರ್(ಅಂದಾಜು 3 ಕೋಟಿ ರೂ.) ಹೆಚ್ಚಿನ ಅನುದಾನವನ್ನು ನೀಡಿತ್ತು. ಜೂನ್1 ರಿಂz ಆರಂಭಗೊಂಡ ಟೂರ್ನಿ ಜೂನ್ 18ರವರೆಗೆ ಇಂಗ್ಲಡಿನಲ್ಲಿ ನಡೆದಿತ್ತು.

    2013ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಪಂದ್ಯಾಟದಲ್ಲಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತ್ತು.

     

  • ಭಾನುವಾರ ಇಂಡೋ- ಪಾಕ್ ಫೈನಲ್ ಪಂದ್ಯ: ಹಿಂದಿನ ಟಾಪ್-3 ಪಂದ್ಯಗಳಲ್ಲಿ ಗೆದ್ದವರು ಯಾರು?

    ಭಾನುವಾರ ಇಂಡೋ- ಪಾಕ್ ಫೈನಲ್ ಪಂದ್ಯ: ಹಿಂದಿನ ಟಾಪ್-3 ಪಂದ್ಯಗಳಲ್ಲಿ ಗೆದ್ದವರು ಯಾರು?

    ಬೆಂಗಳೂರು: ಭಾರತ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾನುವಾರ ಇಂಗ್ಲೆಂಡಿನ ಓವೆಲ್‍ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 3 ಗಂಟೆಗೆ ಆರಂಭವಾಗಲಿರುವ ಈ ಪಂದ್ಯ ವೀಕ್ಷಿಸಲು ಜನರು ಈಗ ತುದಿಗಾಲಿನಲ್ಲಿ ನಿಂತಿದ್ದಾರೆ.

    ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಡಕ್‍ವರ್ಥ್ ಲೂಯಿಸ್ ನಿಯಮದ ಪ್ರಕಾರ 124 ರನ್‍ಗಳಿಂದ ಗೆದ್ದ ಟೀಂ ಇಂಡಿಯಾ ಫೈನಲ್ ನಲ್ಲೂ ಜಯಗಳಿಸಲಿ ಎಂದು ಭಾರತೀಯರು ಶುಭ ಹಾರೈಸುತ್ತಿದ್ದಾರೆ. ಹೀಗಾಗಿ 50 ಓವರ್‍ಗಳ ಪಂದ್ಯವಾಗಿರುವುದರಿಂದ ಈ ಹಿಂದಿನ ಮೂರು ದೊಡ್ಡ ಟೂರ್ನಿಯಲ್ಲಿ ಯಾವ ತಂಡ ಗೆದ್ದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    2015ರ ವಿಶ್ವಕಪ್:
    ಆಸ್ಟ್ರೇಲಿಯಾದ ಆಡಿಲೆಡ್‍ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 107 ರನ್(126 ಎಸೆತ, 8 ಬೌಂಡರಿ) ಹೊಡೆದಿದ್ದರು. 301ರನ್‍ಗಳ ಗುರಿಯನ್ನು ಪಡೆದ ಪಾಕಿಸ್ತಾನ 47 ಓವರ್ಗಳಲ್ಲಿ 224 ರನ್‍ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಶಮಿ 35 ರನ್‍ಗಳಿಗೆ 4 ವಿಕೆಟ್ ಪಡೆದಿದ್ದರು. ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಈ ಮೂಲಕ 6 ವಿಶ್ವಕಪ್‍ನಲ್ಲಿ ಭಾರತ ಪಾಕ್ ವಿರುದ್ಧ ಜಯಗಳಿಸಿದ ಸಾಧನೆ ಮಾಡಿತು.

    2014ರ ಏಷ್ಯಾಕಪ್:
    ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯ ಕಪ್‍ನಲ್ಲಿ ಭಾರತವನ್ನು ಒಂದು ವಿಕೆಟ್‍ನಿಂದ ಪಾಕಿಸ್ತಾನ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತ್ತು. ಭಾರತದ ಪರ ಅಂಬಾಟಿ ರಾಯಡು 58 ರನ್ ಹೊಡೆದಿದ್ದರೆ, ರವೀಂದ್ರ ಜಡೇಜಾ ಔಟಾಗದೇ 52 ರನ್ ಹೊಡೆದಿದ್ದರು. ಪಾಕಿಸ್ತಾನ 49.4 ಓವರ್ ಗಳಲ್ಲಿ 249 ರನ್ ಗಳಿಸಿ 1 ವಿಕೆಟ್‍ಗಳ ಜಯವನ್ನು ಸಂಪಾದಿಸಿತ್ತು. ಮೊಹಮ್ಮದ್ ಹಫೀಸ್ 75ರನ್ ಭಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    2013ರ ಚಾಂಪಿಯನ್ಸ್ ಟ್ರೋಫಿ:
    ಇಂಗ್ಲೆಂಡಿನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 165 ರನ್‍ಗಳಿಗೆ ಆಲೌಟ್ ಆಗಿತ್ತು. ಮಳೆ ಬಂದ ಹಿನ್ನೆಲೆಯಲ್ಲಿ ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 22 ಓವರ್ ಗಳಲ್ಲಿ 102 ರನ್‍ಗಳ ಟಾರ್ಗೆಟ್ ನೀಡಲಾಗಿತ್ತು. ಭಾರತ 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ವಿಜಯಿ ಆಯ್ತು. 8 ಓವರ್ ಎಸೆದು 2 ಮೇಡನ್ ಮಾಡಿ 19 ರನ್ ನೀಡಿ 2 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಇದನ್ನೂ ಓದಿ: ಸೆಮಿಫೈನಲಲ್ಲಿ ಮತ್ತೊಂದು ದಾಖಲೆ ಬರೆದ ಕೊಹ್ಲಿ!

     

  • ಹರಿಣಗಳನ್ನು ಬಗ್ಗು ಬಡಿದು ಸೆಮಿಗೆ ಟೀಂ ಇಂಡಿಯಾ ಎಂಟ್ರಿ

    ಹರಿಣಗಳನ್ನು ಬಗ್ಗು ಬಡಿದು ಸೆಮಿಗೆ ಟೀಂ ಇಂಡಿಯಾ ಎಂಟ್ರಿ

    ಓವಲ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಎಂದೇ ಬಿಂಬಿಸಲ್ಪಟ್ಟಿದ್ದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 44.3 ಓವರ್‍ಗಳಲ್ಲಿ 191 ರನ್‍ಗಳಿಗೆ ಆಲೌಟ್ ಆಯ್ತು. ಸುಲಭ ಸವಾಲನ್ನು ಪಡೆದ ಭಾರತ ಶಿಖರ್ ಧವನ್ ಮತ್ತು ನಾಯಕ ಕೊಹ್ಲಿ ಅವರ ಅರ್ಧಶತಕದಿಂದಾಗಿ 38 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 193 ರನ್‍ಗಳಿಸಿ ಗುರಿ ಮುಟ್ಟಿತು.

    ರೋಹಿತ್ ಶರ್ಮಾ 12 ರನ್‍ಗಳಿಸಿ ಔಟಾದಾಗ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ವಿಕೆಟ್‍ಗೆ ಧವನ್ ಮತ್ತು ಕೊಹ್ಲಿ 148 ಎಸೆತಗಳಲ್ಲಿ 128 ರನ್ ಜೊತೆಯಾಟವಾಡುವ ಮೂಲಕ ಭದ್ರ ಆಡಿಪಾಯ ಹಾಕಿದರು. 61 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಧವನ್ 78 ರನ್(83 ಎಸೆತ, 12 ಬೌಂಡರಿ, 1 ಸಿಕ್ಸರ್)ಗಳಿಸಿದ್ದಾಗ ಇಮ್ರಾನ್ ತಾಹಿರ್ ಎಸೆತದಲ್ಲಿ ಬಲವಾಗಿ ಹೊಡೆಯಲು ಹೋಗಿ ಡು ಪ್ಲಸೆಸ್‍ಗೆ ಕ್ಯಾಚ್ ನೀಡಿ ಔಟಾದರು.

    ಕೊಹ್ಲಿ ಮಿಂಚು: ಪಾಕ್ ವಿರುದ್ಧದ ಪಂದ್ಯದಲ್ಲಿ ಔಟಾಗದೇ 81 ರನ್ ಗಳಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. 71 ಎಸೆತದಲ್ಲಿ 50 ಅರ್ಧಶತಕ ಪೂರ್ಣಗೊಳಿಸಿದ ಕೊಹ್ಲಿ ಅಂತಿಮವಾಗಿ 76 ರನ್(101 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದ ಔಟಾಗದೇ ಉಳಿದರು. ಯವರಾಜ್ ಸಿಂಗ್ ಮತ್ತು ಕೊಹ್ಲಿ ಮುರಿಯದ ಮೂರನೇ ವಿಕೆಟ್‍ಗೆ 47 ಎಸೆತಗಳಲ್ಲಿ 42 ರನ್ ಜೊತೆಯಾಟ ಆಡಿದರು. 23 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದ ಯುವಿ ತಾಹಿರ್ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‍ಗಳು ಕೈಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ಉತ್ತಮವಾಗಿದ್ದ ಕಾರಣ ಗೆಲುವು ಸಾಧಿಸಿದೆ. ಮೂರು ರನ್ ಔಟ್ ಆಫ್ರಿಕಾದ ಸೆಮಿಫೈನಲ್ ಬಾಗಿಲನ್ನು ಬಂದ್ ಮಾಡಿತು.

    115 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಆಫ್ರಿಕಾ ಕೊನೆಯ 9 ವಿಕೆಟ್ ಗಳನ್ನು 75 ರನ್‍ಗಳ ಅಂತರದಲ್ಲಿ ಕಳೆದುಕೊಂಡಿತು. ಎಬಿಡಿ ವಿಲಿಯರ್ಸ್ 16 ರನ್‍ಗಳಿಸಿದ್ದಾಗ ರನೌಟ್ ಆದರೆ, ನಂತರ ಬಂದ ಡೇವಿಡ್ ಮಿಲ್ಲರ್ 1 ರನ್‍ಗಳಿಸಿ ರನ್ ಔಟ್‍ಗೆ ಬಲಿಯಾಗಿದ್ದು ಭಾರತಕ್ಕೆ ನೆರವಾಯಿತು.

    ಭಾರತದ ಪರ ಭುವನೇಶ್ವರ್ ಕುಮಾರ್ 23 ರನ್ ನೀಡಿ 2 ವಿಕೆಟ್ ಪಡೆದರೆ ಬುಮ್ರಾ 28 ರನ್ ನೀಡಿ 2 ವಿಕೆಟ್ ಪಡೆದರು. ಜಡೇಜಾ, ಅಶ್ವಿನ್, ಹಾರ್ದಿಕ್ ಪಾಂಡ್ಯಾ ತಲಾ ಒಂದೊಂದು ವಿಕೆಟ್ ಪಡೆದರು. 6 ಲೆಗ್‍ಬೈ, 10 ವೈಡ್ ಎಸೆಯುವ ಮೂಲಕ ಭಾರತ ಇತರೇ ರೂಪದಲ್ಲಿ 16 ರನ್ ನೀಡಿತು. ಜಸ್‌ಪ್ರೀತ್‌ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

    ಎ ಗುಂಪಿನಿಂದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ಬಾಂಗ್ಲಾ ವಿರುದ್ಧ ಸೆಣಸಲಿದ್ದರೆ, ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ಪಂದ್ಯದ ವಿಜೇತ ತಂಡ ಇಂಗ್ಲೆಂಡ್ ಜೊತೆ ಆಡಬೇಕಿದೆ.

  • ಲಂಕಾಗೆ 7 ವಿಕೆಟ್‍ಗಳ ಭರ್ಜರಿ ಜಯ

    ಲಂಕಾಗೆ 7 ವಿಕೆಟ್‍ಗಳ ಭರ್ಜರಿ ಜಯ

    ಓವಲ್: ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ  ಶ್ರೀಲಂಕಾ  7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

    ಗೆಲ್ಲಲು 322 ರನ್‍ಗಳ ಕಠಿಣ ಸವಾಲನ್ನು ಪಡೆದ ಲಂಕಾ 48.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ.

    11 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟಿಗೆ 139 ಎಸೆತಗಳಲ್ಲಿ 159 ರನ್ ಜೊತೆಯಾಟವಾಡುವ ಮೂಲಕ ಗುಣತಿಲಕ ಮತ್ತು ಕುಸಲ್ ಮೆಂಡಿಸ್ ಭದ್ರ ಅಡಿಪಾಯ ಹಾಕಿದರು.

    ಗುಣತಿಲಕ 76 ರನ್(72 ಎಸೆತ, 7 ಬೌಂಡರಿ, 2ಸಿಕ್ಸರ್) ಸಿಡಿಸಿ ರನ್ ಔಟ್ ಔಟಾದರೆ, ಮೆಂಡಿಸ್ 89 ರನ್(93 ಎಸೆತ, 11 ಬೌಂಡರಿ, 1 ಸಿಕ್ಸರ್) ಸಿಡಿಸಿ ರನ್ ಔಟ್ ಆದರು.

    ಕುಸಲ್ ಪಿರೇರಾ 47 ರನ್‍ಗಳಿಸಿ ನಿವೃತ್ತರಾದರೆ, ಆಂಜಲೋ ಮಾಥ್ಯುಸ್ ಔಟಾಗದೇ 52 ರನ್(44 ಎಸೆತ, 6 ಬೌಂಡರಿ) ಗುಣರತ್ನೆ ಔಟಾಗದೇ 34 ರನ್(21 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಭುನವೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರೆ, ಭಾರತ 11 ಲೆಗ್ ಬೈ, 5 ವೈಡ್, 1 ನೋಬಾಲ್ ಎಸೆಯುವ ಮೂಲಕ ಇತರೆ ರೂಪದಲ್ಲಿ 17 ರನ್ ಬಿಟ್ಟುಕೊಟ್ಟಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 10.3 ಓವರ್
    100 ರನ್ – 19.2 ಓವರ್
    150 ರನ್ – 25.4 ಓವರ್
    200 ರನ್ – 33.4 ಓವರ್
    250 ರನ್ – 40.3 ಓವರ್
    300 ರನ್ – 45.5 ಓವರ್
    322 ರನ್ – 48.4 ಓವರ್

    ಉತ್ತಮ ಮೊತ್ತ: ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ ಶತಕ, ರೋಹಿತ್ ಶರ್ಮಾ ಮತ್ತು ಧೋನಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತ್ತು.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 149 ಎಸೆತಗಳಲ್ಲಿ 138 ರನ್‍ಗಳ ಜೊತೆಯಾಟ ಆಡಿದರು. ಮಲಿಂಗ ಎಸೆತದಲ್ಲಿ ಔಟಾಗುವ ವೇಳೆ ರೋಹಿತ್ ಶರ್ಮಾ 78 ರನ್(79 ಎಸೆತ, 6 ಬೌಂಡರಿ, 3ಸಿಕ್ಸರ್) ಸಿಡಿಸಿದ್ದರು.

    ನಂತರ ಬಂದ ವಿರಾಟ್ ಕೊಹ್ಲಿ 5 ಎಸೆತದ ಎದುರಿಸಿ ಶೂನ್ಯಕ್ಕೆ ಔಟಾದರು. ಮೂರನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ಯುವರಾಜ್ 46 ಎಸೆತಗಳಲ್ಲಿ 40 ರನ್ ಜೊತೆಯಾಟ ಆಡಿದರು. ಇದರಲ್ಲಿ ಯುವರಾಜ್ ಪಾಲು 7 ರನ್.

    ಯುವರಾಜ್ ಔಟಾದ ಬಳಿಕ ಕ್ರೀಸಿಗೆ ಬಂದ ಧೋನಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಧೋನಿ ಮತ್ತು ಧವನ್ 4ನೇ ವಿಕೆಟಿಗೆ 64 ಎಸೆತಗಳಲ್ಲಿ 82 ರನ್ ಪೇರಿಸಿದರು.

    ಶಿಖರ್ ಧವನ್ ಶತಕ: 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಧವನ್ 112 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ಬಾಳ್ವೆಯ 10 ನೇ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 125 ರನ್(128 ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದ್ದಾಗ ಮೆಂಡಿಸ್‍ಗೆ ಕ್ಯಾಚ್ ನೀಡಿ ಔಟಾದರು.

    ಧೋನಿ 63 ರನ್(52 ಎಸೆತ, 7 ಬೌಂಡರಿ, 2ಸಿಕ್ಸರ್), ಕೇಧಾರ್ ಜಾಧವ್ ಔಟಾಗದೇ 25 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 300 ರನ್‍ಗಳ ಗಡಿ ದಾಟಿತು. ಲಸಿತ್ ಮಾಲಿಂಗ, 2 ವಿಕೆಟ್ ಪಡೆದರೆ, ಲಕ್ಮಲ್, ಪ್ರದೀಪ್, ಪಿರೇರಾ ಗುಣರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.

    ರನ್ ಏರಿದ್ದು ಹೀಗೆ:
    50 ರನ್ – 10.2 ಓವರ್
    100 ರನ್ – 19.2 ಓವರ್
    150 ರನ್- 27.1 ಓವರ್
    200 ರನ್ – 37.6 ಓವರ್
    250 ರನ್ – 42.4 ಓವರ್
    300 ರನ್ – 48.2 ಓವರ್
    321 ರನ್ – 50 ಓವರ್

    ಬಿ ಗುಂಪಿನ ಎಲ್ಲ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿದೆ. ಜೂನ್ 11 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಭಾರತ ಗೆದ್ದಲ್ಲಿ ಸೆಮಿಫೈನಲ್ ಪ್ರವೇಶಿಸಲಿದೆ.

     

     

  • ಶಿಖರ್ ಧವನ್ 125 ರನ್: ಶ್ರೀಲಂಕಾಗೆ 322 ರನ್ ಗುರಿ

    ಶಿಖರ್ ಧವನ್ 125 ರನ್: ಶ್ರೀಲಂಕಾಗೆ 322 ರನ್ ಗುರಿ

    ಓವಲ್: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಶ್ರೀಲಂಕಾಗೆ 322 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ ಶತಕ, ರೋಹಿತ್ ಶರ್ಮಾ ಮತ್ತು ಧೋನಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದೆ.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 149 ಎಸೆತಗಳಲ್ಲಿ 138 ರನ್‍ಗಳ ಜೊತೆಯಾಟ ಆಡಿದರು. ಮಲಿಂಗ ಎಸೆತದಲ್ಲಿ ಔಟಾಗುವ ವೇಳೆ ರೋಹಿತ್ ಶರ್ಮಾ 78 ರನ್(79 ಎಸೆತ, 6 ಬೌಂಡರಿ, 3ಸಿಕ್ಸರ್) ಸಿಡಿಸಿದ್ದರು.

    ನಂತರ ಬಂದ ವಿರಾಟ್ ಕೊಹ್ಲಿ 5 ಎಸೆತದ ಎದುರಿಸಿ ಶೂನ್ಯಕ್ಕೆ ಔಟಾದರು. ಮೂರನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ಯುವರಾಜ್ 46 ಎಸೆತಗಳಲ್ಲಿ 40 ರನ್ ಜೊತೆಯಾಟ ಆಡಿದರು. ಇದರಲ್ಲಿ ಯುವರಾಜ್ ಪಾಲು 7 ರನ್.

    ಯುವರಾಜ್ ಔಟಾದ ಬಳಿಕ ಕ್ರೀಸಿಗೆ ಬಂದ ಧೋನಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಧೋನಿ ಮತ್ತು ಧವನ್ 4ನೇ ವಿಕೆಟಿಗೆ 64 ಎಸೆತಗಳಲ್ಲಿ 82 ರನ್ ಪೇರಿಸಿದರು.

    ಶಿಖರ್ ಧವನ್ ಶತಕ: 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಧವನ್ 112 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ಬಾಳ್ವೆಯ 10 ನೇ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 125 ರನ್(128 ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದ್ದಾಗ ಮೆಂಡಿಸ್‍ಗೆ ಕ್ಯಾಚ್ ನೀಡಿ ಔಟಾದರು.

    ಧೋನಿ 63 ರನ್(52 ಎಸೆತ, 7 ಬೌಂಡರಿ, 2ಸಿಕ್ಸರ್), ಕೇಧಾರ್ ಜಾಧವ್ ಔಟಾಗದೇ 25 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 300 ರನ್‍ಗಳ ಗಡಿ ದಾಟಿತು.

    ಲಸಿತ್ ಮಾಲಿಂಗ,  2 ವಿಕೆಟ್ ಪಡೆದರೆ, ಲಕ್ಮಲ್, ಪ್ರದೀಪ್, ಪಿರೇರಾ ಗುಣರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.

    ರನ್ ಏರಿದ್ದು ಹೀಗೆ:
    50 ರನ್ – 10.2 ಓವರ್
    100 ರನ್ – 19.2 ಓವರ್
    150 ರನ್- 27.1 ಓವರ್
    200 ರನ್ – 37.6 ಓವರ್
    250 ರನ್ – 42.4 ಓವರ್
    300 ರನ್ – 48.2 ಓವರ್
    321 ರನ್ – 50 ಓವರ್

  • ಕೊಹ್ಲಿಯನ್ನು ನಮ್ಗೆ ಕೊಡಿ, ಇಡೀ ನಮ್ಮ ತಂಡ ಕೊಡ್ತೀವಿ: ಪಾಕ್ ಪತ್ರಕರ್ತ

    ಕೊಹ್ಲಿಯನ್ನು ನಮ್ಗೆ ಕೊಡಿ, ಇಡೀ ನಮ್ಮ ತಂಡ ಕೊಡ್ತೀವಿ: ಪಾಕ್ ಪತ್ರಕರ್ತ

    ನವದೆಹಲಿ: ವಿರಾಟ್ ಕೊಹ್ಲಿಯನ್ನು ನಮಗೆ ಕೊಟ್ಟು ಇಡೀ ಪಾಕ್ ತಂಡವನ್ನೇ ಭಾರತ ತೆಗೆದುಕೊಳ್ಳಲಿ ಎಂದು ಪಾಕ್ ಪತ್ರಕರ್ತ ನಜರಾನಾ ಗಫರ್ ಟ್ವೀಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನಕ್ಕೆ ಕೊಟ್ಬಿಡಿ.ಬೇಕಿದ್ರೆ ಇದಕ್ಕೆ ಬದಲಾಗಿ ಇಡೀ ಪಾಕ್ ತಂಡವನ್ನು ಭಾರತ ತೆಗೆದುಕೊಳ್ಳಲಿ. ಒಂದು ವರ್ಷದ ಮಟ್ಟಿಗೆ ಕೊಹ್ಲಿಯನ್ನು ಕೊಟ್ಬಿಡಿ ಎಂದು ಹೀಗಂತ ತಂಡದ ಸೋಲಿನ ಹತಾಶೆಯಲ್ಲಿ ಪಾಕ್ ಪತ್ರಕರ್ತ ನಜರಾನಾ ಗಫರ್ ಟ್ವಿಟ್ ಮಾಡಿದ್ದಾರೆ.

    ಇದಕ್ಕೆ ಭಾರೀ ಪ್ರಮಾಣದಲ್ಲಿ ಪರ ವಿರೋಧದ ಟ್ವೀಟ್‍ಗಳು ಹರಿದುಬಂದಿವೆ. ಟೀಂ ಇಂಡಿಯಾದ ಕಟ್ಟಾ ಅಭಿಮಾನಿಯಿಬ್ಬರು ರೀ ಟ್ವೀಟ್ ಮಾಡಿದ್ದು, ‘K’ ಅಕ್ಷರದಿಂದ ಕಾಶ್ಮೀರ ಬೇಕು ಅಂತಿದ್ರಿ.. ಇದೀಗ ‘K’ ಅಕ್ಷರದ ಕೊಹ್ಲಿಯೂ ಬೇಕಾ.. ಅವರೆಡು ನಿಮಗೆ ಸಿಗಲ್ಲ ಎಂದು ಕಿಚಾಯಿಸಿದ್ದಾರೆ.

    ಮತ್ತೊಬ್ಬರು ನಾವು ಭಿಕ್ಷುಕರನ್ನು ಪ್ರೋತ್ಸಾಹಿಸುವುದಿಲ್ಲ. ನಿಮ್ಮ ತಂಡವನ್ನು ಜಿಂಬಾಬ್ವೆ ಸಹ ಖರೀದಿಸಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನದ ಮಂದಿ ನಜರಾನಾ ಗಫರ್ ಮುಗಿ ಬಿದ್ದಿದ್ದು, ಈ ರೀತಿ ಅವಮಾನ ಮಾಡಿ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

     

     

  • ಐಸಿಸಿ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ- ಶ್ರೀಲಂಕಾ ಮುಖಾಮುಖಿ

    ಐಸಿಸಿ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ- ಶ್ರೀಲಂಕಾ ಮುಖಾಮುಖಿ

    ಲಂಡನ್‍: ಚಾಂಪಿಯನ್ಸ್ ಟ್ರೋಫಿಯಲ್ಲಿ ಇವತ್ತು ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಪಾಕಿಸ್ತಾನ ವಿರುದ್ಧ ದಾಖಲೆ ರನ್‍ಗಳಲ್ಲಿ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಇವತ್ತು ಲಂಕಾ ವಿರುದ್ಧ ಅಂಗಳಕ್ಕೆ ಇಳಿಯಲಿದೆ.

    ಪಾಕಿಸ್ತಾನ ವಿರುದ್ಧ ಗೆದ್ದ ಪಡೆಯನ್ನೇ ಕೊಹ್ಲಿ ಉಳಿಸಿಕೊಂಡಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿ ಮ್ಯಾಥ್ಯೂ ಬೌಲಿಂಗ್ ಅನುಮಾನ ಎಂದು ಹೇಳಲಾಗುತ್ತಿದೆ. ಶ್ರೀಲಂಕಾ ಇತ್ತೀಚೆಗೆ ನಡೆದ 23 ಪಂದ್ಯಗಳಲ್ಲಿ ಗೆದ್ದಿರೋದು ಕೇವಲ 8 ಪಂದ್ಯಗಳನ್ನು ಮಾತ್ರ.

    ಲಂಡನ್‍ನ ಓವಲ್ಸ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಭೇರಿ ಕಂಡ್ರೆ ಕೊಹ್ಲಿ ಪಡೆ ಸೆಮಿಫೈನಲ್‍ಗೆ ತಲುಪುತ್ತೆ ಅನ್ನೋದು ಕ್ರಿಕೆಟ್ ತಜ್ಞರ ಲೆಕ್ಕಾಚಾರ ಆಗಿದೆ. ಆದರೆ ಮಳೆ ಬಂದರೆ ಪಂದ್ಯವನ್ನು ಯಾವ ದಿಕ್ಕಿಗಾದ್ರೂ ಬದಲಿಸಬಹುದು.