Tag: Chamarajendra Zoo

  • ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ, ವೀಕ್ಷಣೆಗೆ ಮುಕ್ತ

    ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ, ವೀಕ್ಷಣೆಗೆ ಮುಕ್ತ

    -ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಮೈಸೂರು

    ಮೈಸೂರು: ಹೊಸ ವರ್ಷದ ಮೊದಲ ದಿನ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.

    ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ ಪ್ರಾಕೃತಿಕ ಉದ್ಯಾನವನ, ಚಾಮುಂಡಿ ಬೆಟ್ಟದಲ್ಲಿ ಹೊಸ ವರ್ಷದ ಮೊದಲ ದಿನದಂದು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಹಲವು ಪ್ರವಾಸಿ ಕೇಂದ್ರಗಳ ಬಳಿ ಸಹಾಯವಾಣಿ ಕೇಂದ್ರಗಳು ತೆರೆಯಲಾಗಿದೆ. ಅಲ್ಲದೆ ಟಿಕೆಟ್ ಕೌಂಟರ್ ಗಳನ್ನು ತಾತ್ಕಾಲಿಕ ವಾಗಿ ಹೆಚ್ಚಿಸಲಾಗಿದೆ. ಮೈಸೂರು ಅರಮನೆಯಲ್ಲಿ ವಿಶೇಷ ಫಲಪುಷ್ಪ ಪ್ರದರ್ಶನ ಕೂಡ ನಡೆಯುತ್ತಿದ್ದು, ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ.

    ಅಲ್ಲದೆ ಮೈಸೂರು ಅರಮನೆಯಲ್ಲಿ ಇಂದು ಸಂಜೆ ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಶಬ್ದ ರಹಿತ ಸಿಡಿಮದ್ದು ಸಿಡಿತ ಕೂಡ ನಡೆಯಲಿದೆ. ಪ್ರವಾಸಿಗರಿಗೆ ಮೈಸೂರು ಪ್ರವಾಸ ಹೆಚ್ಚು ಖುಷಿಯಿಂದ ಕೂಡಿರಲು ಎಲ್ಲ ವ್ಯವಸ್ಥೆಯನ್ನೂ ಮೈಸೂರಲ್ಲಿ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರು ಸಂತೋಷದಿಂದ ಮೈಸೂರ ಸವಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ
    ಚಾಮರಾಜೇಂದ್ರ ಮೃಗಾಲಯಕ್ಕೆ ಅರಣ್ಯ ಇಲಾಖೆ ಖಾತೆ ಸಚಿವ ಸಿ.ಸಿ.ಪಾಟೀಲ್ ಇಂದು ಭೇಟಿ ನೀಡಿದ್ದರು. ಈ ವೇಳೆ ಪಶ್ಚಿಮ ಹೂಲನ್ ಗಿಬ್ಬನ್ ಜೋಡಿಯನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದರು. ಇತ್ತೀಚೆಗೆ ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯಕ್ಕೆ ಪಶ್ಚಿಮ ಹೂಲನ್ ಗಿಬ್ಬನ್ ಜೋಡಿ ತರಲಾಗಿತ್ತು. ಹೊಸ ವರ್ಷದ ಮೊದಲ ದಿನ ಕಿಕ್ಕಿರಿದು ತುಂಬಿದ್ದ ಪ್ರವಾಸಿಗರ ವೀಕ್ಷಣೆಗೆ ಅನುವಾಗುವಂತೆ ಗಿಬ್ಬನ್ ಜೋಡಿ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ಪ್ರಾಣಿ ಮನೆಯಿಂದ ಹೊರ ಬರುತ್ತಿದ್ದಂತೆ ವೀಕ್ಷಕರ ಗಮನವನ್ನು ಗಿಬ್ಬನ್ ಗಳು ಸೆಳೆಯುತ್ತಿದ್ದು, ತುಂಟಾಟಗಳ ಮೂಲಕ ಪ್ರವಾಸಿಗರನ್ನು ರಂಜಿಸುತ್ತಿವೆ.

  • ಮೈಸೂರು ಝೂ ವಿಚಾರದಲ್ಲಿ ಸಿಹಿ-ಕಹಿ ಸುದ್ದಿ

    ಮೈಸೂರು ಝೂ ವಿಚಾರದಲ್ಲಿ ಸಿಹಿ-ಕಹಿ ಸುದ್ದಿ

    ಮೈಸೂರು: ವಿಶ್ವ ವಿಖ್ಯಾತ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ವಿಚಾರದಲ್ಲಿ ಒಂದು ಸಿಹಿ ಸುದ್ದಿ ಇನ್ನೊಂದು ಕಹಿ ಸುದ್ದಿ ಇದೆ.

    ಮೈಸೂರಿನ ಚಾಮರಾಜೇಂದ್ರ ಮೃಗಾಲಯವು ಮೈಸೂರಿಗೆ ಬರುವ ಪ್ರವಾಸಿಗರಲ್ಲಿ ಕಿರಿಯರಿಂದ ಹಿರಿಯರವರಗೆ ಹಾಟ್ ಫೇವರೆಟ್ ಪ್ಲೇಸ್ ಆಗಿದೆ. ಮೃಗಾಲಯಕ್ಕೆ ದೇಶ-ವಿದೇಶದಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈಗ ಇಲ್ಲಿಗೆ ಬರುವ ಪ್ರವಾಸಿಗರ ಜೇಬಿಗೆ ಮೃಗಾಲಯ ಪ್ರಾಧಿಕಾರ ಬರೆ ಹಾಕಿದೆ.

    ಒಂದು ವರ್ಷದ ಅಂತರಕ್ಕೆ ಮೃಗಾಲಯದ ಪ್ರವೇಶ ದರ ಡಬಲ್ ಆಗಿದೆ. ಇದು ಮೃಗಾಲಯ ವಿಚಾರದ ಕಹಿ ಸುದ್ದಿ. ಮೃಗಾಲಯದ ಹೊಸ ದರ ಪಟ್ಟಿಯ ಪ್ರಕಾರ 20 ರಿಂದ 30 ರೂ. ಪ್ರವೇಶ ದರ ಹೆಚ್ಚಳವಾಗಿದೆ. ಮೃಗಾಲಯ ಅಧಿಕಾರಿಗಳು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದು, ಸಿಬ್ಬಂದಿ ಸಂಬಳ, ಮೃಗಾಲಯ ಮೆಂಟೆನೆನ್ಸ್ ಕಾಸ್ಟ್ ಹೆಚ್ಚಾಗಿದ್ದರಿಂದ ದರ ಹೆಚ್ಚಳ ಅನಿವಾರ್ಯ ಎನ್ನುತ್ತಿದ್ದಾರೆ.

    ಒಂದೆಡೆ ದರ ಹೆಚ್ಚಳ ಪ್ರವಾಸಿಗರಿಗೆ ಕಹಿ ಸುದ್ದಿ ಆದರೆ ಸಿಹಿ ಸುದ್ದಿ ಕೂಡ ಇದೆ. ಮೃಗಾಲಯಕ್ಕೆ ಹೊಸದಾಗಿ ಗುಜರಾತ್‍ನಿಂದ 5 ಸಿಂಹಗಳು ಬರುತ್ತಿದೆ. ಗುಜರಾತ್‍ನಿಂದ ಎರಡು ಗಂಡು ಮೂರು ಹೆಣ್ಣು ಸಿಂಹಗಳನ್ನು ತರಲಾಗುತ್ತಿದೆ. ಈಗಾಗಲೇ ಎಲ್ಲಾ ಪ್ರಕ್ರಿಯೆ ಮುಗಿದಿದೆ.

    ಪ್ರವೇಶ ದರ ಪಟ್ಟಿ:
    ಹಳೆ ದರ 60 ರೂ ಇದ್ದು, ಹೊಸ ದರ 80 ರೂ. ಆಗಿದೆ. 20 ರೂ. ಹೆಚ್ಚಳ ಆಗಿದೆ. ಮಕ್ಕಳಿಗೆ ಮೊದಲಿನ ದರ 30 ಇತ್ತು. ಆದರೆ ಈಗ 40 ರೂ. ಆಗಿದ್ದು, 10 ರೂ. ಹೆಚ್ಚಳ ಆಗಿದೆ. ವಾರಂತ್ಯದಲ್ಲಿ ವಯಸ್ಕರಿಗೆ ಹಳೆ ದರ 80 ಇದ್ದು, ಹೊಸ ದರ 100 ಆಗಿದೆ. ಒಟ್ಟು 20 ರೂ. ಹೆಚ್ಚಳ ಆಗಿದೆ. ವಾರಂತ್ಯದಲ್ಲಿ ಮಕ್ಕಳಿಗಾಗಿ ಮೊದಲು 40 ರೂ. ಇತ್ತು. ಆದರೆ ಈಗ 50 ರೂ. ಆಗಿದ್ದು, 10 ರೂ. ಹೆಚ್ಚಾಗಿದೆ.

    ಬ್ಯಾಟರಿ ಚಾಲಿತ ವಾಹನ ದರ ಪಟ್ಟಿ( ವಿಕೆಂಡ್)
    ಹಳೆ ದರ 150 ಇದ್ದು, ಈಗ 180 ರೂ. ಹೆಚ್ಚಾಗಿದೆ. ವಾರಂತ್ಯದಲ್ಲಿ ಒಟ್ಟು 30 ರೂ. ಹೆಚ್ಚಾಗಿದೆ. ಬ್ಯಾಟರಿ ಚಾಲಿತ ವಾಹನ ಮಕ್ಕಳಿಗೆ ಮೊದಲು 90 ರೂ ಇದ್ದು, ಈಗ 100 ರೂ. ಆಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಾಕು ಮಗನನ್ನ ಭೇಟಿ ಮಾಡಿದ್ರು ದರ್ಶನ್

    ಸಾಕು ಮಗನನ್ನ ಭೇಟಿ ಮಾಡಿದ್ರು ದರ್ಶನ್

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿರುವ ತಮ್ಮ ಸಾಕು ಮಗನನ್ನ ಭೇಟಿ ಮಾಡಿದ್ದಾರೆ.

    ಸಾಕು ಮಗ ಅಂದರೆ ದರ್ಶನ್ ದತ್ತು ಪಡೆದಿರುವ ಹುಲಿ. ಸುಮಾರು ಆರೇಳು ವರ್ಷದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ದರ್ಶನ್ ಹುಲಿಯನ್ನ ದತ್ತು ಪಡೆದಿದ್ದಾರೆ. ಮಗ ವಿನೀಶ್ ಜೊತೆ ಮೃಗಾಲಯಕ್ಕೆ ತೆರಳಿರುವ ದರ್ಶನ್ ಹುಲಿಯನ್ನ ಪ್ರೀತಿಯಿಂದ ಮಾತನಾಡಿಸಿದ್ದಾರೆ.

    ತಮ್ಮ ಮಗನ ಬಳಿ ನಿನಗಿಂತ ನಾಲ್ಕು ವರ್ಷ ಚಿಕ್ಕವನು ಇವನು ಎಂದು ಹೇಳುತ್ತಾ ಹುಲಿಯನ್ನ ನೋಡ್ತಾ ಸ್ವಲ್ಪ ಸಮಯ ಮೃಗಾಲಯದಲ್ಲೇ ಕಾಲ ಕಳೆದಿದ್ದಾರೆ. ವಿಶ್ವ ಹುಲಿ ದಿನಾಚರಣೆ ಪ್ರಯುಕ್ತ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

    ಕಾಡು ಉಳಿಸಿದರೆ ನಾಡು ಸುರಕ್ಷಿತವಾಗಿರಲಿದೆ. ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿಗಳು ಕಾಣಿಸುತ್ತಿಲ್ಲ ಅತಿಯಾದ ಮೊಬೈಲ್ ವಿಕಿರಣದಿಂದ ಹೀಗಾಗಿದೆ ಎಂದು ವಿಶ್ಲೇಷಿಸಿದರು. ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ ಮಾತ್ರ ಪ್ರಾಣಿ ಪ್ರಿಯರಾಗುವುದಿಲ್ಲ. ಪ್ಲಾಸ್ಟಿಕ್ ಮುಕ್ತ ಮಾಡಿ ಪರಿಸರ ಉಳಿಸಿ. ವನ್ಯ ಜೀವಿಗಳ ಸಂತತಿ ದಿನೇ ದಿನೇ ನಶಿಸುತ್ತಿದೆ. ಡೈನೋಸಾರ್ ಗಳು ಇದ್ದ ಬಗ್ಗೆ ನಾವೀಗ ಅಂತೆ ಕಂತೆಗಳನ್ನು ಕೇಳುತ್ತಿದ್ದೇವೆ. ಮುಂದಿನ ಕನಿಷ್ಠ 50 ವರ್ಷಗಳಲ್ಲಿ ಹುಲಿ, ಸಿಂಹ ಇತ್ತಂತೆ ಎಂದು ಹೇಳುವ ಪರಿಸ್ಥಿತಿ ಬರಲಿದೆ ಎಂದು ದರ್ಶನ್ ಕಳವಳ ವ್ಯಕ್ತಪಡಿಸಿದ್ದರು.

    https://www.youtube.com/watch?v=tgKPdAVizK8

  • ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಮಾತ್ರ ಪ್ರಾಣಿ ಪ್ರಿಯರಾಗಲ್ಲ: ದರ್ಶನ್

    ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಮಾತ್ರ ಪ್ರಾಣಿ ಪ್ರಿಯರಾಗಲ್ಲ: ದರ್ಶನ್

    ಮೈಸೂರು: ವಿಶ್ವ ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ದಿನಾಚರಣೆ ಮತ್ತು ಯುವ ಸಂಘಟನೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಅರಣ್ಯ ಇಲಾಖೆಯ ರಾಯಭಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದರು.

    ಸಮಾರಂಭದಲ್ಲಿ ಮಾತನಾಡಿದ ದರ್ಶನ್, ಕಾಡು ಉಳಿಸಿದರೆ ನಾಡು ಸುರಕ್ಷಿತವಾಗಿರಲಿದೆ. ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿಗಳು ಕಾಣಿಸುತ್ತಿಲ್ಲ ಅತಿಯಾದ ಮೊಬೈಲ್ ವಿಕಿರಣದಿಂದ ಹೀಗಾಗಿದೆ ಎಂದು ವಿಶ್ಲೇಷಿಸಿದರು. ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ ಮಾತ್ರ ಪ್ರಾಣಿ ಪ್ರಿಯರಾಗುವುದಿಲ್ಲ. ಪ್ಲಾಸ್ಟಿಕ್ ಮುಕ್ತ ಮಾಡಿ ಪರಿಸರ ಉಳಿಸುವ ಮೂಲಕ ಪ್ರಾಣಿ ಪ್ರಿಯರಾಗುವಂತೆ ಕರೆ ನೀಡಿದರು.

    ವನ್ಯ ಜೀವಿಗಳ ಸಂತತಿ ದಿನೇ ದಿನೇ ನಶಿಸುತ್ತಿದೆ. ಡೈನೋಸಾರ್ ಗಳು ಇದ್ದ ಬಗ್ಗೆ ನಾವೀಗ ಅಂತೆ ಕಂತೆಗಳನ್ನು ಕೇಳುತ್ತಿದ್ದೇವೆ. ಮುಂದಿನ ಕನಿಷ್ಠ 50 ವರ್ಷಗಳಲ್ಲಿ ಹುಲಿ, ಸಿಂಹ ಇತ್ತಂತೆ ಎಂದು ಹೇಳುವ ಪರಿಸ್ಥಿತಿ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ನಂತರ ನಟ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದು ಪೈಪೋಟಿ ನಡೆಸಿದರು. ಅಭಿಮಾನಿಗಳಿಗೆ ನಿರಾಸೆ ಮಾಡದೇ ನಗು ಮೊಗದೊಂದಲೇ ಸೆಲ್ಫಿಗೆ ನಟ ದರ್ಶನ್ ಪೋಸ್ ಕೊಟ್ಟರು.