Tag: challenging star

  • ಕೇಕ್ ಕತ್ತರಿಸಿದ ‘ಯಜಮಾನ’

    ಕೇಕ್ ಕತ್ತರಿಸಿದ ‘ಯಜಮಾನ’

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ‘ಯಜಮಾನ’ ಸಿನಿಮಾದ ಶೂಟಿಂಗ್ ಸೆಟ್ಟಲ್ಲೇ ಹೊಸ ವರ್ಷ ಆಚರಿಸಿದ್ದಾರೆ.

    ನಗರದಲ್ಲಿ ‘ಯಜಮಾನ’ ಸಿನಿಮಾದ ಕೊನೆಯ ಹಾಡಿನ ಶೂಟಿಂಗ್ ನಡೆಯುತ್ತಿದ್ದು ಈ ವೇಳೆ ದರ್ಶನ್ ಯಜಮಾನ ಚಿತ್ರ ತಂಡದೊಂದಿಗೆ ಕೇಕ್ ಕಟ್ ಮಾಡುವುದರ ಮೂಲಕ ಹೊಸ ವರ್ಷವನ್ನ ಸ್ವಾಗತ ಮಾಡಿದರು.

    ಈ ಹಿಂದೆ ಹಾಡಿನ ಶೂಟಿಂಗ್‍ಗಾಗಿ ಸ್ವೀಡನ್ ತೆರಳಿದ್ದ ದರ್ಶನ್, ಅಂಬಿ ನಿಧನದ ಸುದ್ದಿ ತಿಳಿಯುತ್ತಿದಂತೆ ಶೂಟಿಂಗ್ ಪ್ಯಾಕ್ ಅಪ್ ಮಾಡಿ ವಾಪಸ್ಸಾಗಿದ್ರು. ಹೀಗಾಗಿ ಬಾಕಿ ಇದ್ದ ಹಾಡಿನ ಶೂಟಿಂಗ್ ಬೆಂಗಳೂರಿನಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಭಟ್ರ ಸಾಹಿತ್ಯವಿರುವ `ಆಗೋಯ್ತು ಮರ್ಯಾದೆ ಸಸ್ತಾ ಮಾಲು’ ಪದಕ್ಕೆ ವಿ.ಹರಿಕೃಷ್ಯ ಸಂಗೀತ ನೀಡಿರೋ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಹರಿಕೃಷ್ಣ ಹಾಗೂ ಪಿ.ಕುಮಾರ್ ನಿರ್ದೇಶನದ ಯಜಮಾನ ಚಿತ್ರವನ್ನ ಶೈಲಜಾ ನಾಗ್ ನಿರ್ಮಿಸಿದ್ದು, ಬಿ. ಸುರೇಶ್ ಹಾಗೂ ಅವರ ಪತ್ನಿ ಶೈಲಜ ನಾಗ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ದರ್ಶನ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಕಾಣಿಸಿಕೊಳ್ಳುತ್ತಿದ್ದಾರೆ.

    ಇತ್ತ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ ಟ್ವೀಟ್ ಮಾಡಿರುವ ದರ್ಶನ್, ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇತ್ತ ದರ್ಶನ್ ಪತ್ನಿ ಈ ಬಾರಿ ಕೊಂಚ ಭಿನ್ನವಾಗಿ ಹೊಸವರ್ಷದ ಶುಭಾಶಯ ತಿಳಿಸಿದ್ದು, ಹುಲಿಯೊಂದಿಗೆ ಕುಳಿರುತಿರುವ ತಮ್ಮ ಫೋಟೋ ಹಾಕಿ ವಿಶ್ ಮಾಡಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

    ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

    – ಚಾಕೃತಿಯ ಮೇಕಿಂಗ್ ವಿಡಿಯೋ ರಿಲೀಸ್

    ಚಿಕ್ಕಬಳ್ಳಾಪುರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿರುವ ಅಪರೂಪದ ಗಿಫ್ಟೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಗಿಫ್ಟ್ ನ ಹರಿಕಾರ ಚಾಕೃತಿ ಕರಕುಶಲ ಕಲಾವಿದ ಸಚಿನ್ ಸಂಘೆ ಎಂಬುದಾಗಿ ತಿಳಿದುಬಂದಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮುದುಗೆರೆ ಗ್ರಾಮದ ಕಲಾವಿದ ಸಚಿನ್ ಸಂಘೆ ಅವರು ಸುಮಾರು 15 ಗಂಟೆ ಕೆಲಸ ಮಾಡಿ ದರ್ಶನ್ ಗೆ ಈ ಚಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಅವರು ಇದರ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

    ಸುಣ್ಣದ ಬಳಪ (ಚಾಕ್ ಪೀಸ್) ನಲ್ಲಿ ಅರಳಿರುವ ದರ್ಶನ್ ರ ಭಾವಚಿತ್ರ ನೋಡುಗರ ಗಮನ ಸೆಳೆಯುವಂತಿದೆ. ಈಗ ಮೇಕಿಂಗ್ ವಿಡಿಯೋ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಸಲಿಗೆ ದರ್ಶನ್ ರ ಈ ಚಾಕೃತಿ ಆರಳಿಸೋಕೆ ಸಚಿನ್ ಸಂಘೆ 15 ಗಂಟೆಗಳ ಕಾಲ ತಮ್ಮ ಪರಿಶ್ರಮ ಹಾಕಿ ತುಂಬಾ ಸೊಗಸಾಗಿ ಮೂಡಿ ಬರುವಂತೆ ಮಾಡಿದ್ದಾರೆ. ಇನ್ನೂ 15 ಗಂಟೆಗಳ ತಮ್ಮ ಕಾರ್ಯವನ್ನ ಸ್ಲೋ ಮೋಷನ್ ವಿಡಿಯೋ ಮೂಲಕ 30 ಸೆಕೆಂಡ್ ಗೆ ಇಳಿಸಿ ಅದನ್ನ ತಮ್ಮ ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಯಾರು ಈ ಸಚಿನ್ ಸಂಘೆ…?:
    ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ರೈತ ಕುಟುಂಬವರು. ಸದ್ಯ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಚಿನ್ ಸಂಘೆ, ಸಿಸ್ಕೋ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದ ಹಾಗೆ ತಮ್ಮ ಬಿಡುವಿನ ವೇಳೆಯಲ್ಲಿ ಆಯಾ ಸಮಯದ ಟ್ರೆಂಡ್ ಗೆ ತಕ್ಕಂತೆ ಚಾಕೃತಿ ಗಳನ್ನ ಬಿಡಿಸೋದು ಇವರ ಹವ್ಯಾಸ.

    ತಮ್ಮ ಶಾಲಾ ದಿನಗಳಿಂದಲೇ ಇಂತಹ ನೂರಾರು ಚಾಕೃತಿಗಳನ್ನ ಬಿಡಿಸಿರುವ ಸಚಿನ್ ಸಂಘೆ, ಅವುಗಳಿಂದಲೇ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ನಟ ಅಮಿತಾಬ್‍ಬಚ್ಚನ್ ರ ಚಾಕೃತಿಯನ್ನೂ ಕೂಡ ಮಾಡಿದ್ದರು. ತನ್ನದೇ ಚಾಕೃತಿಯನ್ನ ಕಂಡ ಅಮಿತಾಬ್‍ಬಚ್ಚನ್ ಸಚಿನ್ ಸಂಘೆ ಕೌಶಲ್ಯಕ್ಕೆ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ಮಂತ್ರಿ ನರೇಂದ್ರ ಮೋದಿಯ ಚಾಕೃತಿ ಬಿಡಿಸಿದ್ದ ಸಚಿನ್ ಸಂಘೆ ಅದನ್ನ ನೇರವಾಗಿ ಮೋದಿಯವರಿಗೆ ತಲುಪಿಸಿ ಅವರಿಂದಲೂ ಮೆಚ್ಚುಗೆ ಪಡೆದಿದ್ದರು.

    ಮೋದಿಯವರು ಸಹ ಅದನ್ನ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟ ಮಾಡಿ ಸಚಿನ್ ಸಂಘೆಯವರ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದರು. ಸಚಿನ್ ಹೆಸರಿಟ್ಟಿಕೊಂಡಿರುವ ಈ ಸಚಿನ್ ಸಂಘೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾಕೃತಿ ಸಹ ಬಿಡಿಸಿ ಅವರನ್ನ ಭೇಟಿಯಾಗಿ ಉಡುಗೊರೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ಇತ್ತೀಚೆಗೆ ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಾಯ್ ಪಟೇಲರ ಬೃಹತ್ ಪ್ರತಿಮೆಯ ಚಾಕೃತಿಯನ್ನ ಸಹ ಸಚಿನ್ ಸಂಘೆ ಬಿಡಿಸಿದ್ದಾರೆ. 

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೈಸೂರಿನ ಹೊರವಲಯದ ಹಿನಕಲ್ ಬಳಿ ಈ ಅಪಘಾತ ನಡೆದಿದ್ದು, ದರ್ಶನ್ ಅವರಿಗೆ ಬಲಗೈ ಮೂಳೆ ಮುರಿದಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಭಾನುವಾರ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಮೃಸೂರಿನ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದರು. ಅಷ್ಟೇ ಅಲ್ಲದೇ ಪ್ರಾಣಿಗಳನ್ನು ದತ್ತು ಪಡೆದುಕೊಂಡು ಅರಮನೆಯ ಸುತ್ತ ಓಡಾಡಿ, ಮಾವಾಡಿಗಳ ಜೊತೆ ಊಟ ಮಾಡಿ, ಯದುವೀರ್ ಅವರೊಡನೆ ಮಾತನಾಡಿ ಇಂದು ಬೆಳಗಿನ ಜಾವ ಹೊರಟಿದ್ದರು.

    ಒಂದೇ ಕಾರಿನಲ್ಲಿ ದರ್ಶನ್, ನಟರಾದ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮೈಸೂರಿನ ಹೊರವಲಯದ ಹಿನಕಲ್ ಬಳಿ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಪರಿಣಾಮ ಅಪಘಾತದಲ್ಲಿ ದರ್ಶನ್ ಅವರ ಬಲಗೈನ ಮೂಳೆ ಮುರಿದಿದೆ. ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಈ ಘಟನೆಯಲ್ಲಿ ದೇವರಾಜ್ ಮತ್ತು ಪ್ರಜ್ವಲ್ ದೇವರಾಜು ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರು  ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೈಸೂರಿನಲ್ಲಿ ಮುಂಜಾನೆ ಮಳೆಯಾಗುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದ ಪರಿಣಾಮ ಕಾರ್ ಅಪಘಾತವಾಗಿದೆ ಎನ್ನಲಾಗಿದೆ. ಈಗಾಗಲೇ ಆಸ್ಪತ್ರೆಯ ಬಳಿ ಪತ್ನಿ ವಿಜಯಲಕ್ಷ್ಮಿ, ಮಗ ಮತ್ತು ಆಪ್ತರು ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ ‘ಯಜಮಾನ’ ಚಿತ್ರದ ಶೂಟಿಂಗ್ ಸ್ಥಳಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ.

    ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಕೆಲ ಸಮಯ ಚಿತ್ರತಂಡದೊಂದಿಗೆ ಕಾಲ ಕಳೆದ ವಿಜಯಲಕ್ಷ್ಮೀ ಅವರು ದರ್ಶನ್ ರೊಂದಿಗೆ ಮಾತುಕತೆ ನಡೆಸಿ ಬಳಿಕ ಅಲ್ಲಿಂದ ತೆರಳಿದ್ದಾರೆ.

    ಈ ಹಿಂದೆಯೂ ಹಲವು ಬಾರಿ ದರ್ಶನ್  ಅಭಿನಯದ ಸಿನಿಮಾಗಳ ಚಿತ್ರೀಕರಣದ ವೇಳೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆದರೆ ಕೆಲ ವರ್ಷಗಳ ಗ್ಯಾಪ್ ಬಳಿಕ ಪತಿಯ ಸಿನಿಮಾ ಚಿತ್ರೀಕರಣದ ವೇಳೆ ವಿಜಯಲಕ್ಷ್ಮೀ ಕಾಣಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ಪರಸ್ಪರ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸತತ ಎರಡ್ಮೂರು ತಿಂಗಳಿನಿಂದ ಯಜಮಾನ ಸಿನಿಮಾ ಚಿತ್ರೀಕರಣದಲ್ಲಿ ಭಾಗಹಿಸುತ್ತಿರುವ ದರ್ಶನ್ ನಿರಂತರ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಅಂತಿಮ ಹಂತ ತಲುಪಿದೆ. ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ ಹೇಗಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಇದೆ. ದರ್ಶನ್ ರೊಂದಿಗೆ ರಶ್ಮಿಕಾ ಮಂದಣ್ಣ ಜೋಡಿಯನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಶಿಕುಮಾರ್ ಪುತ್ರನ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್!

    ಶಶಿಕುಮಾರ್ ಪುತ್ರನ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್!

    ಬೆಂಗಳೂರು: ಹೊಸಾ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಲೇ ಬಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಿಡುವಿಲ್ಲದಿದ್ದರೂ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾ, ಒತ್ತಡಗಳಿದ್ದರೂ ಕಾರ್ಯಕ್ರಮಗಳಿಗೆ ಹೋಗಿ ಬೆನ್ನು ತಟ್ಟುವ ಮನಸ್ಥಿತಿ ಹೊಂದಿರೋ ದರ್ಶನ್ ಇದೀಗ ಶಶಿಕುಮಾರ್ ಪುತ್ರನ ಚಿತ್ರದ ಮುಹೂರ್ತದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

    ಶಶಿಕುಮಾರ್ ಪುತ್ರ ಆದಿತ್ಯ ನಾಯಕನಾಗಿ ಎಂಟ್ರಿ ಕೊಡುತ್ತಿರುವ ವಿಚಾರ ಗೊತ್ತೇ ಇದೆ. ಈ ಚಿತ್ರದ ಮುಹೂರ್ತ ಸಮಾರಂಭ ಸೆಪ್ಟೆಂಬರ್ 2ರ ಭಾನುವಾರ ಅದ್ಧೂರಿಯಾಗಿ ನೆರವೇರಲಿದೆ. ಈ ಸಮಾರಂಭದಲ್ಲಿ ಹಾಜರಿರಲಿರುವ ದರ್ಶನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಶಶಿಕುಮಾರ್ ಮಗನ ಚಿತ್ರಕ್ಕೆ ಅಪೂರ್ವ ನಾಯಕಿ!

    ಒಂದು ಅವಘಡದ ನಂತರ ಚಿತ್ರರಂಗದಿಂದ ದೂರವೇ ಉಳಿದಿರುವ ಶಶಿಕುಮಾರ್ ಇದೀಗ ತಮ್ಮ ಪುತ್ರನನ್ನು ಹೀರೋ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ನಾಯಕನಟನಾಗಿ ಉತ್ತುಂಗದಲ್ಲಿರುವಾಗಲೇ ಅಪಘಾತವೊಂದಕ್ಕೀಡಾಗಿ ನೇಪಥ್ಯಕ್ಕೆ ಸರಿದಿದ್ದವರು ಶಶಿಕುಮಾರ್. ಆ ನಂತರ ಸಾಕಷ್ಟು ನೋವುಂಡ ಅವರು ಚಿತ್ರರಂಗದಿಂದ ದೂರ ಸರಿದಿದ್ದರು. ಇದೀಗ ಅವರಲ್ಲಿ ಉಳಿದು ಹೋದಂತಿರೋ ಬಾಕಿ ಕನಸುಗಳನ್ನು ಮಗನ ಮೂಲಕ ನನಸಾಗಿಸಿಕೊಳ್ಳುವ ಹುರುಪಿನಿಂದಲೇ ಈ ಚಿತ್ರವನ್ನವರು ಆರಂಭಿಸಿದ್ದಾರೆ.

    ಹಿರಿಯ ನಟ ಶಶಿಕುಮಾರ್ ಮಗನ ಚಿತ್ರದ ಮುಹೂರ್ತಕ್ಕೆ ದರ್ಶನ್ ಖುಷಿಯಿಂದಲೇ ಬರಲೊಪ್ಪಿಕೊಂಡಿದ್ದಾರೆ. ಕ್ಲ್ಯಾಪ್ ಮಾಡುವ ಮೂಲಕ ಈ ಚಿತ್ರಕ್ಕೆ ಚಾಲನೆಯನ್ನೂ ಕೊಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫ್ಯಾಮಿಲಿ ಸಬ್ಜೆಕ್ಟಿನೊಂದಿಗೆ ಬರಲಿದ್ದಾರೆ ಚಾಲೆಂಜಿಂಗ್ ಸ್ಟಾರ್!

    ಫ್ಯಾಮಿಲಿ ಸಬ್ಜೆಕ್ಟಿನೊಂದಿಗೆ ಬರಲಿದ್ದಾರೆ ಚಾಲೆಂಜಿಂಗ್ ಸ್ಟಾರ್!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ಚಿತ್ರದ ಮುಹೂರ್ತವಾಗುತ್ತಲೇ ಮುಂದಿನ ಚಿತ್ರ ಯಾವುದೆಂಬ ಕುತೂಹಲ ಶುರುವಾಗಿರುತ್ತದೆ. ಇದೀಗ ಆ ಪ್ರಶ್ನೆಯನ್ನಿಟ್ಟುಕೊಂಡು ಕಾಯುವ ಗೋಜೇ ಇಲ್ಲದಂತೆ ದರ್ಶನ್ ಅವರ ಮತ್ತೊಂದು ಚಿತ್ರದ ವಿಚಾರಗಳು ಜಾಹೀರಾಗಿವೆ.

    ಅಭಿಮಾನಿಗಳೆಲ್ಲ ದರ್ಶನ್ ಅವರ ಒಡೆಯ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಒಂದಷ್ಟು ವಿವಾದವನ್ನೂ ಹುಟ್ಟಿಸಿದ್ದ ಒಡೆಯರ್ ಚಿತ್ರ ಒಡೆಯ ಆಗಿ ಈಗ ಟೇಕಾಫ್ ಆಗಿದೆ. ಅಭಿಮಾನಿಗಳೆಲ್ಲ ಅತ್ತ ದೃಷ್ಟಿ ನೆಟ್ಟಿರುವಾಗಲೇ ಇತ್ತ ಸದ್ದೇ ಇಲ್ಲದಂತೆ ಹೊಸಾ ಚಿತ್ರವೊಂದರ ಸ್ಕ್ರಿಪ್ಟ್ ಪೂಜೆ ನೆರವೇರಿದೆ!

    ತರುಣ್ ಸುಧೀರ್ ಅವರು ದರ್ಶನ್ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಾರೆಂಬ ಬಗ್ಗೆ ಈ ಹಿಂದೆಯೇ ಒಂದಷ್ಟು ಸುದ್ದಿಯಾಗಿತ್ತು. ಈಗ ಸ್ಕ್ರಿಪ್ಟ್ ಪೂಜೆ ನಡೆದಿರೋದೂ ಕೂಡಾ ತರುಣ್ ನಿರ್ದೇಶನದ ಚಿತ್ರದ್ದೇ. ಈ ಮೂಲಕ ಈ ಚಿತ್ರ ಅಧಿಕೃತವಾಗಿಯೇ ಪಕ್ಕಾ ಆಗಿದೆ. ಈ ಚಿತ್ರದ ಟೈಟಲ್ ಇನ್ನಷ್ಟೇ ಫೈನಲ್ ಆಗಬೇಕಿದೆ. ಆದರೆ ಈ ಚಿತ್ರ ಪಕ್ಕಾ ಫ್ಯಾಮಿಲಿ ಸಬ್ಜೆಕ್ಟ್ ಹೊಂದಿರಲಿದೆ ಎಂಬ ವಿಚಾರ ನಿಖರವಾಗಿಯೇ ಹೊರ ಬಿದ್ದಿದೆ.

    ಈ ಹಿಂದೆ ತಾರಕ್ ಚಿತ್ರ ಕೂಡಾ ಫ್ಯಾಮಿಲಿ ಕಥೆಯೊಂದಿಗೇ ಗೆದ್ದಿತ್ತು. ಅದರಲ್ಲಿನ ದರ್ಶನ್ ಅವರ ಭಾವಪೂರ್ಣ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಈ ಹೊಸ ಚಿತ್ರದ ಕಥೆ ತಾರಕ್ ಚಿತ್ರಕ್ಕಿಂತಲೂ ಭಿನ್ನವಾಗಿರಲಿದೆಯಂತೆ. ಫ್ಯಾ ಮಿಲಿ ಕಥೆಯಲ್ಲಿಯೇ ಭರ್ಜರಿ ಆಕ್ಷನ್ ದೃಷ್ಯಾವಳಿಗಳೂ ಇರಲಿವೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೆಟ್ಟೇರುವ ಮುನ್ನವೇ ದರ್ಶನ್ ಅಭಿನಯದ `ಒಡೆಯರ್’ ಚಿತ್ರಕ್ಕೆ ಮತ್ತೆ ವಿಘ್ನ

    ಸೆಟ್ಟೇರುವ ಮುನ್ನವೇ ದರ್ಶನ್ ಅಭಿನಯದ `ಒಡೆಯರ್’ ಚಿತ್ರಕ್ಕೆ ಮತ್ತೆ ವಿಘ್ನ

    ವಿಜಯಪುರ: ಸೆಟ್ಟೇರುವ ಮುನ್ನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಚಿತ್ರಕ್ಕೆ ಮತ್ತೆ ವಿಘ್ನ ಉಂಟಾಗಿದೆ. `ಒಡೆಯರ್’ ಚಿತ್ರದ ಹೆಸರು ಬದಲಿಸಲು ಕರ್ನಾಟಕ ಯುವಘರ್ಜನೆ ಸಂಘಟನೆ ದೂರು ದಾಖಲಿಸಿದೆ.

    ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಚಿತ್ರ ನಿರ್ಮಾಪಕ ಮತ್ತು ಚಿತ್ರ ತಂಡದ ವಿರುದ್ಧ ದೂರು ದಾಖಲಾಗಿದೆ. ಒಡೆಯರ್ ಎಂಬ ಹೆಸರಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಅವರು ನಾಡು ನುಡಿ, ನೆಲ, ಜಲ, ಕಲೆ ಸಂಸ್ಕೃತಿ ವೈಭವಗಳಿಗೆ ಕೊಟ್ಟಿರುವ ಕೊಡುಗೆ ಅನೇಕ ಇವೆ. ಅಲ್ಲದೆ ರಾಜ್ಯದ ಜನತೆ ಮೈಸೂರು ಅರಸರ ಬಗ್ಗೆ ಈಗಲೂ ಅಪಾರವಾದ ಗೌರವ ಹೊಂದಿದ್ದಾರೆ. ಹೀಗಿದ್ದಾಗ ವ್ಯಾಪಾರಿ ಚಿತ್ರಕ್ಕಾಗಲಿ, ಹಾಸ್ಯ ಅಥವಾ ರೌಡಿಸಂ ಚಿತ್ರಕ್ಕಾಗಲಿ ಆ ಹೆಸರು ಬಳಸಿದರೆ ಜನರ ಭಾವನೆಗೆ ಧಕ್ಕೆ ಉಂಟಾಗುತ್ತೆ. ಹೀಗಾಗಿ ಹೆಸರು ಬದಲಿಸಲಿ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

    ಹೆಸರು ಬದಲಾಯಿಸದಿದ್ದರೆ ಮೈಸೂರು ಅರಸರ ಚರಿತ್ರೆ ಕುರಿತು ಚಿತ್ರ ತೆಗೆಯಲಿ ಎಂದು ಒತ್ತಾಯಿಸಲಾಗಿದೆ. ಅಲ್ಲದೇ ಹೆಸರು ಬದಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಯುವಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಆಸೀಫ್ ಒತ್ತಾಯಿಸಿದ್ದಾರೆ.

    ಕಳೆದ ಕೆಲ ಚಿತ್ರಕ್ಕೆ ಒಡೆಯರ್ ಶೀರ್ಷಿಕೆ ನೀಡಿರುವ ವಿಚಾರವಾಗಿ ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು. ಅಲ್ಲದೇ ಅರಸು ಯುವಜನ ವೇದಿಕೆ ಜೂಡ ಒಡೆಯರ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿತ್ತು. ಆದರೆ ಚಿತ್ರಕ್ಕೆ ಒಡೆಯರ್ ಹೆಸರಿಡುವ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಜಮಾತೆ ಪ್ರಮೋದದೇವಿ ಒಡೆಯರ್ ಅವರು ಸಿನಿಮಾ ಒಡೆಯರ್ ಹೆಸರಿಡಲು ಯಾವುದೇ ಅಕ್ಷೇಪವಿಲ್ಲ. ಆದರೆ ಮೈಸೂರು ರಾಜವಂಶಕ್ಕೆ ಸಂಬಂಧಪಟ್ಟ ಅಂಶಗಳು ಚಿತ್ರದಲ್ಲಿ ಇದ್ದರೆ ನನ್ನ ಆಕ್ಷೇಪವಿದೆ ಎಂದು ಹೇಳಿದ್ದರು.

    ದರ್ಶನ್ ಹುಟ್ಟುಹಬ್ಬದ ದಿನ ಅವರ ಮುಂದಿನ ಚಿತ್ರ ಒಡೆಯರ್ ಶೀರ್ಷಿಕೆ ಬಹಿರಂಗವಾಗಿತ್ತು. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಒಡೆಯರ್ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ.

  • EXCLUSIVE: ದರ್ಶನ್ ಸೋದರಳಿಯ ‘ಟಕ್ಕರ್’ ಮನೋಜ್ ಫೈಟ್ ನೋಡಿ!

    EXCLUSIVE: ದರ್ಶನ್ ಸೋದರಳಿಯ ‘ಟಕ್ಕರ್’ ಮನೋಜ್ ಫೈಟ್ ನೋಡಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರೋದೇ. ಈ ಹಿಂದೆ ಮಾವ ದರ್ಶನ್ ಅವರ ಜೊತೆಗೆ ಅಂಬರೀಶ ಮತ್ತು ಚಕ್ರವರ್ತಿ ಸಿನಿಮಾಗಳಲ್ಲಿ ಮುಖಕ್ಕೆ ಬಣ್ಣ ಹಚ್ಚಿದ್ದ ಮನೋಜ್ ಈಗ ‘ಟಕ್ಕರ್’ ಸಿನಿಮಾದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಟಕ್ಕರ್ ಮೈಸೂರಿನ ಬೀದಿಬೀದಿಗಳಲ್ಲಿ ಚಿತ್ರೀಕರಣದಲ್ಲಿ ಬ್ಯುಸಿ!

    ಇಲ್ಲೊಂದು ವಿಡಿಯೋವನ್ನು ಪಬ್ಲಿಕ್ ಟಿವಿ ನಿಮಗಾಗಿ ನೀಡುತ್ತಿದೆ. ಈ ವಿಡಿಯೋದಲ್ಲಿ ಮನೋಜ್ ಬಾರೀ ಗಾತ್ರದ ಹೂಕುಂಡವನ್ನು ನಿರಾಯಾಸವಾಗಿ ಗುದ್ದಿ ಪುಡಿ ಮಾಡೋದು ಕಾಣುತ್ತಿದೆ. ಟಕ್ಕರ್ ಸಿನಿಮಾದಲ್ಲಿ ಡಿಫರೆಂಟ್ ಡ್ಯಾನಿ ಕಂಪೋಸ್ ಮಾಡುತ್ತಿರುವ ಭಿನ್ನ ಬಗೆಯ ಆ್ಯಕ್ಷನ್ ಸೀನುಗಳಿವೆಯಂತೆ. ಹುಲಿರಾಯ ಖ್ಯಾತಿಯ ನಾಗೇಶ್ ಕೋಗಿಲು ನಿರ್ಮಾಣದ ಈ ಚಿತ್ರವನ್ನು ನಿರ್ದೇಶನ ಮಾಡ್ತಿರೋದು ರನ್ ಆ್ಯಂಟನಿ ರಘು. ರಘು ಪಾಲಿಗೆ ಮೊದಲ ಸಿನಿಮಾ ವರ್ಕೌಟ್ ಆಗಿರಲಿಲ್ಲ. ಹೀಗಾಗಿ ಭಯಂಕರ ಶ್ರಮ ಹಾಕಿ ಟಕ್ಕರ್ ಸಿನಿಮಾವನ್ನು ರೆಡಿ ಮಾಡ್ತಿದ್ದಾರಂತೆ. ನಿರ್ಮಾಪಕ ನಾಗೇಶ್ ಕೋಗಿಲು ಅವರಂತೂ ಸಿನಿಮಾಗೆ ಏನೇನೂ ಕೊರತೆಯಾಗದಂತೆ ಧಾರಾಳವಾಗಿ ಖರ್ಚು ಮಾಡಿ ಟಕ್ಕರ್ ಗೆ ಪುಷ್ಠಿ ನೀಡುತ್ತಿದ್ದಾರೆ. ಇದನ್ನೂ ಓದಿ: ‘ಟಕ್ಕರ್’ ಕ್ಯಾಮೆರಾ ದರ್ಶನ್ ಮೆಚ್ಚಿದ ಛಾಯಾಗ್ರಾಹಕ ಕಿರಣ್ ಕೈಗೆ!

    ಇಲ್ಲಿರುವ ಹೊಡೆದಾಟದ ದೃಶ್ಯವನ್ನು ನೋಡಿದರೆ ಮನೋಜ್ ಕೂಡಾ ಮಾವ ದರ್ಶನ್ ಅವರಂತೆಯೇ ಆ್ಯಕ್ಷನ್ ಹೀರೋ ಆಗಿ ನಿಲ್ಲುವುದು ನಿಜ ಎನಿಸುತ್ತಿದೆ. ಈ ಸಿನಿಮಾಗಾಗಿ ಮನೋಜ್ ಸಾಕಷ್ಟು ತಯಾರಿ ನಡೆಸಿ ಕ್ಯಾಮೆರಾ ಎದುರಿಸುತ್ತಿದ್ದಾರೆ. ಪುಟ್ಟಗೌರಿ ಮದುವೆಯ ರಂಜನಿ ರಾಘವನ್ ಟಕ್ಕರ್ ಗೆ ನಾಯಕಿ. ಇನ್ನು ಭಜರಂಗಿ ಲೋಕಿ ಟಕ್ಕರ್ ಗೆ ಎದುರಾಗಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    https://youtu.be/ie-xeBo4DA4

  • ದರ್ಶನ್ ಅಭಿಮಾನಿಗಳು ಗಿಡ ನೆಡೋದರಲ್ಲಿ ಬ್ಯುಸಿ!

    ದರ್ಶನ್ ಅಭಿಮಾನಿಗಳು ಗಿಡ ನೆಡೋದರಲ್ಲಿ ಬ್ಯುಸಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರವಾದ ಪ್ರಾಣಿ ಪ್ರಿಯರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಬಗ್ಗೆ ಅವರ ಅಭಿಮಾನಿಗಳಿಗೆ ಇಂಚಿಂಚಾಗಿ ಗೊತ್ತಿದೆ. ಇದೀಗ ಅಭಿಮಾನಿಗಳಿಗೆಲ್ಲ ಹೆಮ್ಮೆ ಪಡುವಂಥಾದ್ದೊಂದು ಕೆಲಸಕ್ಕೆ ದರ್ಶನ್ ಕೈ ಹಾಕಿದ್ದಾರೆ. ಜೂನ್ ಐದರಂದು ವಿಶ್ವ ಪರಿಸರ ದಿನ ಇತ್ತಲ್ಲಾ? ಆ ಹಿನ್ನೆಲೆಯಲ್ಲಿ ಮರಗಿಡಗಳನ್ನು ಕಾಪಾಡಿಕೊಳ್ಳುವ ಅರಣ್ಯ ಇಲಾಖೆಯ ಅಭಿಯಾನಕ್ಕೆ ದರ್ಶನ್ ಅವರು ಸಾಥ್ ಕೊಟ್ಟಿದ್ದರು!

    ಸಿನಿಮಾಗಳಾಚೆಗೆ ಬೇರೆ ಕಾರ್ಯಕ್ರಮ ಮತ್ತು ಚಟುವಟಿಕೆಗಳಿಗೆ ದರ್ಶನ್ ಅವರನ್ನು ಕರೆಸುವುದೆಂದರೆ ಸವಾಲಿನ ಸಂಗತಿ. ಅವರು ಸಿನಿಮಾ ಬಿಟ್ಟರೆ ಬೇರ್ಯಾವುದರತ್ತಲೂ ಹೆಚ್ಚಾಗಿ ಗಮನ ಹರಿಸುವವರಲ್ಲ. ಆದರೆ ರಾಜ್ಯ ಅರಣ್ಯ ಇಲಾಖೆ ಪರಿಸರ ಜಾಗೃತಿಯ ಕಾಳಜಿಯೊಂದಿಗೆ ಇಂಥಾದ್ದೊಂದು ಪ್ರಪೋಸಲ್ ಮುಂದಿಟ್ಟಾಗ ಒಪ್ಪಿಕೊಂಡು ರಾಯಭಾರಿಯಾಗಿದ್ದರು. ಅದಕ್ಕೆ ಕಾರಣ ಅವರೊಳಗಿರುವ ಅಸೀಮ ಪರಿಸರ ಪ್ರೇಮ. ತಮ್ಮ ಅಭಿಮಾನಿಗಳನ್ನು ಸದಾ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಪ್ರೇರೇಪಿಸುತ್ತಲೇ ಬಂದಿರುವ ದರ್ಶನ್ ತಾವು ಪರಿಸರ ಕಾಳಜಿಯ ಬಗ್ಗೆ ಮಾತಾಡಿದರೆ ಖಂಡಿತಾ ತಮ್ಮ ಅಭಿಮಾನಿಗಳು ಅದರತ್ತ ಗಮನ ಹರಿಸಿ ಕಾರ್ಯಗತರಾಗುತ್ತಾರೆಂಬ ನಂಬಿಕೆಯಿಂದಲೇ ಈ ಅಭಿಯಾನದಲ್ಲಿ ಭಾಗಿಯಾಗಿದ್ದರು.

    ಆರಂಭಿಕ ಹಂತದಲ್ಲೇ ಅದು ಫಲಪ್ರದವಾಗಿದೆ. ಮೊನ್ನೆ ಜೂನ್ 8ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಫೀಷಿಯಲ್ ಫ್ಯಾನ್ಸ್ ಅಸೋಸಿಯೇಷನ್ ಆದ ‘ಡಿ ಕಂಪೆನಿ’ಗೆ ಏಳು ವರ್ಷ ತುಂಬಿತು. ಈ ಸಂದರ್ಭದಲ್ಲಿ ಡಿ ಕಂಪೆನಿಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದರ್ಶನ್ ಅವರ ಪ್ರತಿಯೊಬ್ಬ ಅಭಿಮಾನಿಯೂ ತಲಾ ಒಂದೊಂದು ಗಿಡ ನೆಡಬೇಕು ಅನ್ನೋದು ಡಿ ಕಂಪೆನಿಯ ಉದ್ದೇಶವಾಗಿತ್ತು. ಈ ಕಾರಣದಿಂದ ಆರಂಭವಾದ ಗಿಡನೆಡುವ ಅಭಿಯಾನ ಈಗ ರಾಜ್ಯವ್ಯಾಪಿ ಯಶಸ್ವಿಯಾಗಿ ನೆರೆವೇರುತ್ತಿದೆ.

    ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ದರ್ಶನ್ ಅವರಿಗೆ ಅಭಿಮಾನಿಗಳಿಲ್ಲದ ಭೂಭಾಗ ಕರ್ನಾಟಕದಲ್ಲಿಲ್ಲ ಎಂಬ ಮಾತಿದೆ. ಅಂಥಾ ಅಭಿಮಾನಿಗಳೆಲ್ಲ ಒಂದೊಂದು ಗಿಡ ನೆಟ್ಟರೂ, ಪರಿಸರದ ಬಗ್ಗೆ ಕಾಳಜಿ ಹೊಂದಿದರೂ ಕರ್ನಾಟಕದ ಅರಣ್ಯ ಸಂಪತ್ತು ಹೆಚ್ಚುತ್ತದೆ. ಅದರಿಂದ ಇನ್ನೊಂದಷ್ಟು ಮಂದಿ ಖಂಡಿತಾ ಸ್ಫೂರ್ತಿ ಹೊಂದುತ್ತಾರೆ. ನಿಜವಾಗಿಯೂ ದರ್ಶನ್ ಅಭಿಮಾನಿಗಳ ಜೊತೆ ಎಲ್ಲರೂ ಸೇರಿ ಇದೇ ರೀತಿ ಮನಸ್ಸು ಮಾಡಿದರೆ ಕರ್ನಾಟಕವೂ ಹಸಿರಿನಿಂದ ನಳನಳಿಸುತ್ತದೆ.

  • ಉಡುಪಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    ಉಡುಪಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    ಉಡುಪಿ: ಇಲ್ಲಿನ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಭೇಟಿ ನೀಡಿದ್ರು.

    ಉಡುಪಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನವನ್ನು ಮೂವತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಪ್ರಯುಕ್ತ ಪಡೆದ ಸಭಾ ಕಾರ್ಯಕ್ರಮದಲ್ಲಿ ದರ್ಶನ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ರು.

    ಕೈ ಮುಗಿದು ವೇದಿಕೆ ಹತ್ತಿದ ದರ್ಶನ್, ನಾಡಿನ ಹಿರಿಯ ಯತಿ ಪೇಜಾವರ ಸ್ವಾಮೀಜಿಯ ಆಶೀರ್ವಾದ ಪಡೆದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಅಪೂರ್ವ ಶಿಲ್ಪಕಲಾ ಕೆತ್ತನೆಯನ್ನು ಬೆರಗುಗಣ್ಣಿನಿಂದ ನೋಡಿದರು. ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.

    ದರ್ಶನ್ ಗೆ ಖ್ಯಾತ ನಟರಾದ ಸೃಜನ್ ಲೋಕೇಶ್, ಧನಂಜಯ್ ಮತ್ತಿತರರು ಸಾಥ್ ನೀಡಿದ್ರು. ದೇವರ ದರ್ಶನಕ್ಕೆ ಬಂದಿದ್ದ ಸಾವಿರಾರು ಭಕ್ತರು ದರ್ಶನ್ ದರ್ಶನದಿಂದ ಪುಳಕಿತರಾಗಿದ್ರು. ಈ ವೇಳೆ ಮಾತನಾಡಿದ ದರ್ಶನ್, ಪೂರ್ವಿಕರು ನೀಡಿದ ಆಸ್ತಿಯಯನ್ನು ಉಳಿಸುವುದು, ಜೀರ್ಣೋದ್ಧಾರಗೊಳಿಸುವುದು ಪುಣ್ಯದ ಕೆಲಸ. ಈ ಕಾರ್ಯ ಮಾಡಿದ ಹಿರಿಯಡ್ಕ ಜನತೆಗೆ ಧನ್ಯವಾದ ಅಂತ ಹೇಳಿದ್ರು.