Tag: chakravarthy

  • ಪ್ರಶಾಂತ್, ಚಕ್ರವರ್ತಿ ಜಗಳಕ್ಕೆ ದಿವ್ಯಾ ಸುರೇಶ್ ಕಾಮೆಂಟ್

    ಪ್ರಶಾಂತ್, ಚಕ್ರವರ್ತಿ ಜಗಳಕ್ಕೆ ದಿವ್ಯಾ ಸುರೇಶ್ ಕಾಮೆಂಟ್

    ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರು ವೈಷ್ಣವಿಯವರ ವಿಚಾರವಾಗಿ ದೊಡ್ಮನೆಯಲ್ಲಿ ಜಗಳವಾಡಿದ್ದಾರೆ.

    ಟಾಸ್ಕ್ ವಿಚಾರವಾಗಿ ಸಂಬರಗಿ ವೈಷ್ಣವಿಗೆ ಸಲಹೆ ನೀಡಿದ್ದರ ಬಗ್ಗೆ ಮಾತನಾಡಿದ್ದನ್ನು ಚಕ್ರವರ್ತಿ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸಂಬರಗಿ ವೈಷ್ಣವಿ ಬಳಿ ಕೇಳಿದ್ದು, ನಾನು ಆ ರೀತಿ ಹೇಳಿಲ್ಲ ಎಂದು ವೈಷ್ಣವಿ ಖಡಕ್ ಆಗಿ ಉತ್ತರಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಚಕ್ರವರ್ತಿ, ಇಂತಹ ಹೊಲಸು ಕೆಲಸ ಮಾಡಬೇಡ. ನಾನು ಕೇಳಬೇಡ ಅಂದ್ರೂ ವೈಷ್ಣವಿ ಬಳಿ ಯಾಕೆ ಕೇಳಿದೆ. ಇದು ಹೊಲಸು ಕೆಲಸ, ನಾಮಕರಮ್ ಎಂದೆಲ್ಲಾ ಪ್ರಶಾಂತ್‍ರವರಿಗೆ ಚಕ್ರವರ್ತಿ ಸಿಕ್ಕಾಪಟ್ಟೆ ಎಲ್ಲರ ಮುಂದೆ ಬೈದಿದ್ದಾರೆ.

    ಈ ಮಧ್ಯೆ ಗಾರ್ಡನ್ ಏರಿಯಾದಲ್ಲಿ ದಿವ್ಯಾ ಸುರೇಶ್, ಪ್ರಿಯಾಂಕ, ರಘು ಕುಳಿತುಕೊಂಡಿರುತ್ತಾರೆ. ಈ ವೇಳೆ ಇವರಿಬ್ಬರ ಜಗಳ ನೋಡುತ್ತಾ ದಿವ್ಯಾ ಸುರೇಶ್, ಇಲ್ಲಿ ಇಬ್ಬರು ಕುಳಿತುಕೊಂಡು ಹೇಗೆ ಎಂದು ಲೆಕ್ಕಾಚಾರ ಹಾಕಿಕೊಂಡು ಪ್ಲಾನ್ ಮಾಡಿಕೊಳ್ಳುತ್ತಾರೆ. ನಂತರ ಎಲ್ಲಾ ಒಂದೇ ಬಾರಿಗೆ ಈ ತರಹ ಬ್ಲಾಸ್ಟ್ ಆಗುತ್ತದೆ ಆಗ ಜಗಳವಾಡುತ್ತಾರೆ. ಬಳಿಕ ಎಲ್ಲಾ ಕಾವು ಕಡಿಮೆಯಾದ ಮೇಲೆ ಮತ್ತೆ ಇದೇ ಸೋಫಾ ಮೇಲೆ ಬಂದು ಕುಳಿತುಕೊಳ್ಳುತ್ತಾರೆ. ಹಾಗೇ ಮಾಡೋಣ, ಹೀಗೆ ಮಾಡೋಣ ಎಂದು ಮಾತನಾಡುತ್ತಾರೆ. ಮತ್ತೆ ಸಂಜೆ ಇನ್ನೊಂದು ಯಾವುದಾದರೂ ವಿಚಾರಕ್ಕೆ ಜಗಳ ಆಡುತ್ತಾರೆ. ಜನರಲ್ ಆಗಿ ಹೇಳುತ್ತೇನೆ, ಚಕ್ರವರ್ತಿಯವರು ಸುಳ್ಳು ಹೇಳಿದರೂ ಸತ್ಯ ತಲೆಯ ಮೇಲೆ ಹೊಡೆದಂತೆ ಹೇಳುತ್ತಾರೆ. ನಾನು ಹೇಳುತ್ತಿರುವುದೇ ಸರಿ ಎಂದು ವಾದಿಸುತ್ತಾರೆ ಎಂದು ದಿವ್ಯಾ ಸುರೇಶ್ ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

  • ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ನೀಡಿದ್ದ ಚಿನ್ನದ ಮೊಟ್ಟೆ ಟಾಸ್ಕ್ ವೇಳೆ ಪ್ರಿಯಾಂಕ ತಿಮ್ಮೇಶ್ ತಲೆಯ ಮೇಲೆ ದಿವ್ಯಾ ಸುರೇಶ್ ಮೊಟ್ಟೆ ಒಡೆದು ಗೆಲ್ಲುತ್ತಾರೆ. ಇದರಿಂದ ತಮ್ಮ ಬಳಿ ಇದ್ದ ಸಂಪೂರ್ಣ ಹಣ ಕಳೆದುಕೊಂಡ ಪ್ರಿಯಾಂಕ ತಿಮ್ಮೇಶ್, ಶಮಂತ್‍ರಿಂದಾಗಿ ದಿವ್ಯಾ ಸುರೇಶ್ ಗೆದ್ದರು ಎಂಬ ಕಾರಣಕ್ಕೆ ಶಮಂತ್ ಲಾಕರ್‌ನಲ್ಲಿದ್ದ ಹಣವನ್ನು ಕದಿಯಲು ಮುಂದಾಗುತ್ತಾರೆ.

    ಈ ವೇಳೆ ಲಾಕರ್‍ನಲ್ಲಿದ್ದ ಹಣವನ್ನು ಕಾಪಾಡಿಕೊಳ್ಳಲು ಶಮಂತ್, ಪ್ರಿಯಾಂಕ ತಿಮ್ಮೇಶ್ ಜೊತೆ ಡೀಲ್ ಮಾಡಿಕೊಳ್ಳುತ್ತಾರೆ. ನಾನು ಈಗ ನಿನಗೆ 14 ಸಾವಿರ ರೂ. ನೀಡುತ್ತೇನೆ. ಆದರೆ ಮುಂದಿನ ಟಾಸ್ಕ್‌ನಲ್ಲಿ ನೀನು ಎಷ್ಟೇ ಗೆದ್ದರೂ 25 ಸಾವಿರ ಮೇಲೆ ದಾಟುವುದಿಲ್ಲ. ಆಗ ನಿನ್ನ ಬಳಿ ಇರುವ ಹಣದಲ್ಲಿ ನನಗೆ ಪಾಲು ನೀಡುವುದಾಗಿ ಪ್ರಾಮಿಸ್ ಮಾಡಿದರೆ ಕೊಡುತ್ತೇನೆ ಎನ್ನುತ್ತಾರೆ. ಅದರಂತೆ ಡೀಲ್ ಓಕೆ ಮಾಡಿಕೊಂಡು ಪ್ರಿಯಾಂಕಗೆ ಶಮಂತ್ ಹಣ ನೀಡುತ್ತಾರೆ.

    ನಂತರ ರಾತ್ರಿ ಗಾರ್ಡನ್ ಏರಿಯಾದಲ್ಲಿ ಶಮಂತ್, ಪ್ರಶಾಂತ್, ಚಕ್ರವರ್ತಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಪ್ರಿಯಾಂಕ ಬಳಿ 14,800ರೂ ಇತ್ತು. ಸದ್ಯ ಅವರ ಲಾಕರ್‌ನಲ್ಲಿ 14,800 ರೂ ಇಟ್ಟಿದ್ದೇನೆ ಅದು ನನಗೆ ಆಮೇಲೆ ವಾಪಸ್ ಬರುತ್ತದೆ ಎಂದು ಹೇಳಿದ್ದಾರೆ. ಆಗ ಚಕ್ರವರ್ತಿಯವರು ನಿನ್ನ ಬಳಿ ಪ್ರಿಯಾಂಕ ಹಣವನ್ನು ಕಿತ್ತುಕೊಂಡು ಹೋಗಿದ್ದಾರಾ ಎಂದಾಗ, ಲಾಕರ್‌ನಲ್ಲಿದ್ದ ಎಲ್ಲವನ್ನು ಎತ್ತಿಕೊಂಡು ಹೋಗಿ ಬಿಟ್ಟಿದ್ದರು ಎಂದು ಶಮಂತ್ ಹೇಳುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮೊಟ್ಟೆ ಒಡೆದಿರುವುದು ದಿವ್ಯಾ ಸುರೇಶ್, ಹಣ ಕೊಟ್ಟಿರುವುದು ಇವನು, ಇವನೆಷ್ಟು ಮುಟ್ಟಾಳ ಎಂದು ಪ್ರಶಾಂತ್ ಬಳಿ ಮಾತು ಒಪ್ಪಿಸುತ್ತಾ, ಹೊಸ ಚಾಪ್ಟರ್ ಎಂದು ಅಣುಕಿಸುತ್ತಾರೆ.

    ಈ ವೇಳೆ ಶಮಂತ್ ನಗುತ್ತಾ ನಿಮಗೇಕೆ, ನೋಡಿ ನಾನು ಒಂದು ಪ್ರಾಮಿಸ್ ಮೇಲಿನ ನಂಬಿಕೆಯಿಂದ ಹಣ ನೀಡಿದ್ದೇನೆ ಎನ್ನುತ್ತಾರೆ. ಅದಕ್ಕೆ ಚಕ್ರವರ್ತಿಯವರು ನಿನ್ನನ್ನು ನಾನು ಕರೆಸಿ, ನಿನ್ನ ತಲೆಯ ಮೇಲೆ ಮೊಟ್ಟೆ ಹೊಡೆಸಿ, ಇವನಿಗೆ ದುಡ್ಡು ಕೊಟ್ಟು, ಇಷ್ಟೇಲ್ಲಾ ನಾವು ಈ ಹುಡುಗನಿಗೋಸ್ಕರ ಮಾಡಿದರೆ, ಒಂದು ಹುಡುಗಿಗೆ ಹೆದರಿಕೊಂಡು ಹಣ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ಹೇಳುತ್ತಾರೆ.

    ಈ ಮಧ್ಯೆ ಹೆದರಿಕೊಂಡಿರುವ ಪದವನ್ನು ವಾಪಸ್ ತೆಗೆದುಕೊಳ್ಳಿ ಎಂದು ಶಮಂತ್ ಹೇಳುವ ವೇಳೆ ಪ್ರಶಾಂತ್, ಹಾಗದರೆ ಇವನು ಪ್ರಿಯಾಂಕಗೆ ದುಡ್ಡು ನೀಡಿದ್ದಾನಾ ಎಂದು ಚಕ್ರವರ್ತಿಯವರನ್ನು ಪ್ರಶ್ನಿಸುತ್ತಾರೆ. ಬಳಿಕ ಹಣ ಕೊಟ್ಟಿರುವ ವಿಚಾರ ತಿಳಿದು, ಸೋಫಾ ಮೇಲೆ ಮಲಗಿಕೊಂಡು ನಗುತ್ತಾ, ಬಳಿಕ ಎದ್ದು ತಮ್ಮ ಎರಡು ಚಪ್ಪಲಿಗಳನ್ನು ಪ್ರಶಾಂತ್, ಶಮಂತ್ ಮೇಲೆ ಎಸೆದಿದ್ದಾರೆ.

    ನಂತರ ಈಗ ನೀವು ನಗುತ್ತಿದ್ದೀರಾ ಅಲ್ವಾ, ನಾಳೆಯವರೆಗೂ ನನಗೆ ಟೈಮ್ ಕೊಡಿ ಎನ್ನುತ್ತಾರೆ. ಆಗ ಚಕ್ರವರ್ತಿಯವರು, ಮೊಟ್ಟೆ ಹೊಡೆದಿದ್ದು ಡಿಎಸ್, ಜಗಳ ಆಡಿದ್ದು ಡಿಎಸ್, ಇವನಿಗೋಸ್ಕರ ನೀನು ಅಷ್ಟೇಲ್ಲಾ ತ್ಯಾಗ ಮಾಡಿದೆ ಆದರೆ ಇವನು ಪ್ರಿಯಾಂಕಳನ್ನು ಸೇವ್ ಮಾಡುತ್ತಿದ್ದಾನೆ ಎಂದು ಪ್ರಶಾಂತ್‍ಗೆ ಹೇಳುತ್ತಾ ನಕ್ಕಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

  • ಒಂದು ಸಲ ಮದ್ವೆ ಆದ್ಮೇಲೆ ಯಾವತ್ತು ಮೋಸ ಮಾಡಲ್ಲ: ವೈಷ್ಣವಿ

    ಒಂದು ಸಲ ಮದ್ವೆ ಆದ್ಮೇಲೆ ಯಾವತ್ತು ಮೋಸ ಮಾಡಲ್ಲ: ವೈಷ್ಣವಿ

    ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್ ನಿಂದಲೂ ವೈಷ್ಣವಿ ಗೌಡ ದೊಡ್ಮನೆಯಲ್ಲಿ ಸಿಂಗಲ್ ಜರ್ನಿ ನಡೆಸುತ್ತಿದ್ದಾರೆ. ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿಯೂ ಅದೇ ಜರ್ನಿ ಮುಂದುವರೆಸಿರುವ ಅವರು, ಮದುವೆಯಾದ ಮೇಲೆ ಯಾವತ್ತು ಮೋಸ ಮಾಡಲ್ಲ ಎಂದಿದ್ದಾರೆ.

    ಬಿಗ್ ಮನೆಯಲ್ಲಿ ಆಗಾಗ ವೈಷ್ಣವಿಯವರ ಮದುವೆ ವಿಚಾರ ಹರಿದಾಡುತ್ತಿರುತ್ತದೆ. ಅಲ್ಲದೇ ಮದುವೆ ಬಗ್ಗೆ ಬಹಳಷ್ಟು ಆಸೆ, ಕನಸು, ಒಳ್ಳೆಯ ಅಭಿಪ್ರಾಯ ಹೊಂದಿರುವ ವೈಷ್ಣವಿ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ತಮ್ಮ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

    ಚಕ್ರವರ್ತಿಯವರು ಅಡುಗೆ ಮನೆ ಕ್ಲೀನ್ ಮಾಡುವ ವೇಳೆ ನಿಮ್ಮಲ್ಲಿ ಒಂದು ದೈವಿಕ ಶಕ್ತಿ ಇದೆ, ಆದರೆ ಯಾಕೆ ಕೌಟುಂಬಿಕ ವ್ಯವಹಾರಕ್ಕೆ ಬೀಳುತ್ತಿದ್ದೀರಾ ಗೊತ್ತಿಲ್ಲ ಎನ್ನುತ್ತಾರೆ. ಆಗ ವೈಷ್ಣವಿ ಸರ್ ಪ್ಲೀಸ್.. ಹೊರಗಡೆ ಪ್ರಾಮಿಸ್ ಮಾಡಿ ಬಂದಿದ್ದೇನೆ ಈ ಬಾರಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳುತ್ತಾರೆ.

    ನಂತರ ಜೀವನದಲ್ಲಿ ಪ್ರತಿಯೊಂದನ್ನು ನೋಡಬೇಕು ಸರ್, ನಾನು ಕೊನೆಯುಸಿರೆಳೆಯುವಾಗ ನಾನು ಇದನ್ನು ಮಾಡಿಲ್ಲ. ಮಿಸ್ ಮಾಡಿಕೊಂಡೇ ಎಂದು ಯಾವುದು ಇರಬಾರದು ಲೈಫ್‍ನಲ್ಲಿ ಎಂದು ಹೇಳುತ್ತಾರೆ. ನೋಡಬೇಕು ಆದರೆ ನಿಮಗೆ ಅದರ ಅವಶ್ಯಕತೆ ಇಲ್ಲ. ಅದಕ್ಕೆ ಮದುವೆಯಾಗಲೇ ಬೇಕು ಎಂದು ಏನಾದರೂ ಇದ್ಯಾ ಎಂದು ಪ್ರಶ್ನಿಸುತ್ತಾರೆ. ಆಗ ಹೌದು ಮದುವೆನೇ ಆಗಬೇಕು ಎಂದು ವೈಷ್ಣವಿಯವರು ಉತ್ತರಿಸುತ್ತಾರೆ. ಸರಿ ನೋಡಿ ಯೋಚನೆ ಮಾಡಿ ಎಂದು ಚಕ್ರವರ್ತಿಯವರು ಹೇಳುತ್ತಿದ್ದಂತೆಯೇ ಮಾತು ಮರೆಸಲು ವೈಷ್ಣವಿಯವರು ನಾಳೆ ಅಡುಗೆಗೆ ಚಿಕನ್ ಮಾಡುತ್ತಿದ್ದಿರಾ ಎಂದು ಕೇಳುತ್ತಾರೆ. ನಾಳೆ ಚಿಕನ್‍ನೇ ಆದರೆ ವೈವಾಹಿಕ ಜೀವನ ನೋಡಿ ಯೋಚನೆ ಮಾಡಿ ಎಂದು ಮತ್ತೊಮ್ಮೆ ಚಕ್ರವರ್ತಿ ಅಣುಕಿಸುತ್ತಾರೆ.

    ನಂತರ ನಿಮಗೆ ಚಿಕನ್ ಅಂದರೆ ಇಷ್ಟನಾ ಎಂದು ವೈಷ್ಣವಿ ಕೇಳಿದಾಗ, ನನಗೆ ಒಂದು ಕೋಳಿ ಹಾಗೂ ಕುರಿಗೆ ಹೇಗೆ ಕರುಣೆ ತೋರಿಸುತ್ತಾರೋ ಹಾಗೇ ಒಬ್ಬ ಹುಡುಗನ ಮೇಲೂ ಕೂಡ ಇರಲಿ ಎಂದಷ್ಟೇ ಎಂದು ಚಕ್ರವರ್ತಿ ಹೇಳಿದಾಗ, ವೈಷ್ಣವಿ ಒಂದಂತೂ ಸತ್ಯ ಒಂದು ಸಲ ಮದುವೆಯಾದ ನಂತರ ಬಿಟ್ಟು ಹೋಗುವುದು ಹಾಗೆಲ್ಲಾ ಯಾವತ್ತು ಮೋಸ ಮಾಡಲ್ಲ. ಖಂಡಿತ ಅವನು ಚೆನ್ನಾಗಿರಬೇಕು ನನ್ನಿಂದ, ಅಷ್ಟು ಮಾತ್ರ ನಾನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.

    ಹಾಗಾದ್ರೆ ಗಂಡು ನೋಡುತ್ತೀದ್ದಾರಾ ನಿಮಗೆ ಎಂದಾಗ, ಯಾಕ್ ಸರ್ ನನ್ನ ಬಾಯಿಯಲ್ಲಿ ಏನೇನೋ ಬರಿಸುತ್ತೀರಾ? ನಾನು ಅದರ ಬಗ್ಗೆ ನಾನು ಮಾತನಾಡಲ್ಲ. ಕಾಲ ಕೂಡಿ ಬಂದಾಗ ಅದು ಆಗುತ್ತದೆ ಎಂದು ಹೇಳುತ್ತಾ ನಗುತ್ತಾರೆ. ಇದನ್ನೂ ಓದಿ: ಸಲಾರ್ ಸಿನಿಮಾಕ್ಕಿದೆ ಮೈಸೂರಿನ ಲಿಂಕ್

  • ನೀನಾ-ನಾನಾ ಜಗಳಕ್ಕಿಳಿದ ಚಕ್ರವರ್ತಿ, ಪ್ರಶಾಂತ್..!

    ನೀನಾ-ನಾನಾ ಜಗಳಕ್ಕಿಳಿದ ಚಕ್ರವರ್ತಿ, ಪ್ರಶಾಂತ್..!

    ಬಿಗ್‍ಬಾಸ್ ಮನೆಯಲ್ಲಿ ಗೇಮ್ ಕಿಚ್ಚು ಶುರುವಾಗಿದೆ ಕುಚುಕು ಗೆಳೆಯರಾಗಿದ್ದ ಸಂಬರಗಿ, ಪ್ರಶಾಂತ್ ಕಿತ್ತಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟಿಗೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಇವರಿಬ್ಬರ ಮಧ್ಯೆ ಟಾಸ್ಕ್ ವೇಳೆ ಜೋರಾದ ವಾಗ್ವಾದ ನಡೆದಿದೆ.

    ತಾರಾಬಲದ ಅಂತಿಮ ಟಾಸ್ಕ್ ಆಗಿರುವ ‘ಜಾರಿಗೆದ್ದೆ ಟಾಸ್ಕ್’ನಲ್ಲಿ 2 ತಂಡಗಳಿಗೆ ಪ್ರತ್ಯೇಕವಾದ ಡ್ರಮ್‍ಗಳನ್ನು ಇಡಲಾಗಿತ್ತು. ಬಜರ್ ಆದಾಗ ಎರಡು ತಂಡದ ಸದಸ್ಯರು ಸರದಿಯಲ್ಲಿ ಡ್ರಮ್‍ನಿಂದ ಮಗ್‍ನಲ್ಲಿ ನೀರು ತಂಬಿಸಿಕೊಂಡು ಹೋಗಿ ಕೊನೆಯ ಬದಿಯಲ್ಲಿ ಇರಿಸಲಾದ ಜಾರಿಗೆ ಸುರಿಬೇಕಿತ್ತು. ಹೀಗೆ ಸಾಗುವಾಗ ತಮಗೆ ಮೀಸಲಾದ ಹಾಸಿಗೆಯಲ್ಲಿ ಸ್ಲೈಡ್ ಮಾಡಿಕೊಂಡು ಜಾರುತ್ತಾ ಟ್ರ್ಯಾಕ್‍ನಲ್ಲಿ ಹೋಗಬೇಕು. ನೀರನ್ನು ಜಾರಿಗೆ ಸುರಿದು ಅದೇ ಟ್ರ್ಯಾಕ್‍ನಲ್ಲಿ ಹಿಂದಿರುಗಿ ಆರಂಭದ ತುದಿಯಲ್ಲಿ ನಿಂತಿರುವ ತಂಡದ ಮತ್ತೊಬ್ಬ ಸದಸ್ಯನಿಗೆ ಮಗ್ ಕೊಡಬೇಕಿತ್ತು. ಹೀಗೆ ರಿಲೇ ಮಾದರಿಯಲ್ಲಿ ಆಡುತ್ತಾ ತಮ್ಮ ಜಾರನ್ನು ಮಾರ್ಕ್ ವರೆಗೆ ಮೊದಲು ತುಂಬಿಸುವ ತಂಡ ಈ ಟಾಸ್ಕ್‍ನಲ್ಲಿ ಗೆದ್ದು ಕ್ಯಾಪ್ಟನ್ಸಿ ಆಯ್ಕೆಯ ಸ್ಪರ್ಧೆಗೆ ಭಾಗವಹಿಸಲು ಅವಕಾಶ ಪಡೆಯುತ್ತದೆ ಎಂದು ಬಿಗ್‍ಬಾಸ್ ಸೂಚಿಸಿದ್ದರು.

    ಸೂರ್ಯ ಸೈನೆ ತಂಡ ಆಟವನ್ನು ಬೇಗ ಮುಗಿಸಿದೆ. ಆಟದ ವೇಳೆ ಶಮಂತ್ ಪೌಲ್ ಮಾಡಿದ್ದಾನೆ ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ಪ್ರಶಾಂತ್ ನಮ್ಮ ನಮ್ಮಲ್ಲೇ ತಪ್ಪು ಕಂಡುಹಿಯಬಾರದು ಎಂದು ಪ್ರಶಾಂತ್ ಶಮಂತ್‍ಗೆ ಸಪೋರ್ಟ್ ಮಾಡಿ ಹೇಳಿದ್ದಾರೆ. ಆಗ ಸಿಟ್ಟಿಗೆದ್ದ ಚಕ್ರವರ್ತಿ ಆಟ ಎಂದರೆ ಹೇಳುವುದು ಇದ್ದದ್ದೇ, ನಾನು ಅವನಿಗೆ ಹೇಳಿದೆ ನೀನು ಯಾಕೆ ಮಧ್ಯಕ್ಕೆ ಬರ್ತಿಯಾ? ಎಲ್ಲಾ ವಿಚಾರಗಳಿಗೂ ಕೊಂಕು ತೆಗೆಯುತ್ತಿಯಾ ಎಂದು ಕಿತ್ತಾಡಿಕೊಂಡಿದ್ದಾರೆ ಅಲ್ಲೇ ಇದ್ದ ಅರವಿಂದ್ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೂ ಗೆಳಯರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ.

    ಯಾಕೆ ಕಿರುಚುತ್ತಾ ಇದ್ದೀಯಾ ಎಂದು ನಾನು ಕೇಳಿದೆ ಅಷ್ಟೇ ಎಂದು ಸಂಬರಗಿ ಹೇಳಿದ್ದಾರೆ. ನೀನೂ ಹಾಗೇ ಹೇಳಿಲ್ಲ ನೀನು ಹಾಗೇ ಹೇಳಿದರೆ ನಾನು ಸುಮ್ಮನೇ ಆಗುತ್ತಿದ್ದೆನು. ನೀನು ಪ್ರೀತಿಯಿಂದ ಬಂದು ಆಟ ಗೆದ್ದೆವು ಎಂದು ಹೇಳಿದ್ದರೆ ನಾನು ಸುಮ್ಮನೇ ಆಗುತ್ತಿದ್ದೆನು. ನನ್ನ ಮೇಲೆ ಪ್ರೀತಿ ಇಲ್ಲ ನಿನಗೆ, ಭಯ ನನಗೆ ಮತ್ತೇ ಸೋತರೆ ಹೀಗಾಗಿ ನಾನು ಶಮಂತ್‍ಗೆ ಪೌಲ್ ಮಾಡಬೇಡ ಎಂದು ಹೇಳಿದ್ದೂ ಅಷ್ಟೇ. ನನ್ನದು ತಪ್ಪು ಎಂದು ಯಾಕೆ ಹೇಳುತ್ತಿರಾ? ಶಮಂತ್ ಹೇಳಿದ್ದರೆ ನಾನು ಸುಮ್ಮನೇ ಆಗುತ್ತಿದ್ದೆನು. ಸಂಬರಗಿ ಬಂದು ಯಾಕೆ ಹೇಳುತ್ತಾರೆ ಎಂದು ಹೀಗೆ ಕೂಗಾಡಿದ್ದಾರೆ. ಆಗ ದಿವ್ಯಾ, ಅರವಿಂದ್ ಇಬ್ಬರು ಬಂದು ಸುಮ್ಮನಾಗುವಂತೆ ಸಮಾಧಾನ ಮಾಡಿದ್ದಾರೆ. ಅರವಿಂದ್ ಕೈ ಮುಗಿದು ಸುಮ್ಮನಾಗುವಂತೆ ಕೇಳಿದಾಗ ಇಬ್ಬರ ಜಗಳ ಅಲ್ಲೇ ತಣ್ಣಗಾಗಿದೆ.

    ಇಷ್ಟು ದಿನ ಮನೆಯ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಈ ಜೋಡಿ, ಇದಿಗ ನೀನಾ ನಾನಾ ಎಂದು ಜಗಳಕ್ಕೆ ನಿಂತಿದ್ದಾರೆ. ಬಿಗ್‍ಬಾಸ್ ಮನೆಯ ದೋಸ್ತರ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ಇಬ್ಬರು ಸರಿ ಹೋಗುತ್ತಾರಾ ಅಥವಾ ಹೀಗೆ ದ್ವೇಷ ಮುಂದುವರಿಯಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

  • ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ಯುಗಾದಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿತ್ತು. ಹಬ್ಬವನ್ನು ವಿಜೃಂಭಣೆಯಾಗಿ ಆಚರಿಸಿದ ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು. ಈ ವೇಳೆ ಅರವಿಂದ್ ಹಾಗೂ ಪ್ರಶಾಂತ್ ಮಧ್ಯೆ ತುಪ್ಪದ ವಿಚಾರಕ್ಕೆ ಮತ್ತೆ ವಾಗ್ವಾದ ನಡೆದಿದೆ.

    ಊಟ ಮಾಡುವ ವೇಳೆ ವೈಷ್ಣವಿ ಎಲ್ಲರಿಗೂ ಒಂದು ಕಡೆಯಿಂದ ತುಪ್ಪ ಬಡಿಸಿಕೊಂಡು ಬರುತ್ತಿರುತ್ತಾರೆ. ಈ ವೇಳೆ ಅರವಿಂದ್‍ಗೆ ಎರಡು ಬಾರಿ ತುಪ್ಪ ಬಡಿಸಿದ್ಯಾ ಎಂದು ಪ್ರಶಾಂತ್ ಹೇಳುತ್ತಾರೆ.

    ಆಗ ಅರವಿಂದ್ ನೀವು ನನ್ನ ತಟ್ಟೆ ಯಾಕೆ ನೋಡುತ್ತೀರಾ? ನೀವು ಊಟ ಮಾಡಿ, ನಿಮಗೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ. ನನ್ನ ಸುದ್ದಿಗೆ ಯಾಕೆ ಬರುತ್ತೀರಾ, ಅರವಿಂದ್‍ಗೆ ಎರಡು ಬಾರಿ ಹಾಕಿದ್ಯಾ, ನಾಲ್ಕು ಬಾರಿ ಹಾಕಿದ್ಯಾ ಅಂತ ನೀವು ಹಾಕಿಸಿಕೊಳ್ಳಿ ಪ್ರಶಾಂತ್‍ರವರೇ ಎನ್ನುತ್ತಾರೆ. ಈ ವೇಳೆ ಮನೆಯ ಸದಸ್ಯರು ಪರವಾಗಿಲ್ಲ ಇಂದು ಜಗಳ ಬೇಡ ಎಂದು ಸಮಾಧಾನ ಪಡಿಸುತ್ತಾರೆ. ಆಗ ಪ್ರಶಾಂತ್‍ರವರು ಯಾವಾಗಲೂ ನನ್ನ ತಂಟೆಗೆ ಬರುತ್ತಾರೆ. ಯುಗಾದಿಗಾದರೂ ಬಿಟ್ಟು ಬಿಡಿ ಎಂದು ಕೆಂಡಾಕಾರಿದ್ದಾರೆ.

    ನಂತರ ಈ ಬಗ್ಗೆ ಬಾತ್ ರೂಮ್ ಏರಿಯಾದಲ್ಲಿ ಚಕ್ರವರ್ತಿ ಆ ರೀತಿ ಒಪನ್ ಕಮೆಂಟ್ ಮಾಡಬಾರದು ಎಂದು ಅರವಿಂದ್‍ಗೆ ಹೇಳಿದಾಗ, ಅವರೇ ಮಾಡುತ್ತಾರೆ. ನಾವು ಅವರಷ್ಟು ಮಾಡುವುದಿಲ್ಲ. ಅವರು ಮಾಡುವಾಗ ನಾವು ಮುಚ್ಚಿಕೊಂಡು ಇರುವುದಿಲ್ವಾ ಎನ್ನುತ್ತಾರೆ. ಆಗ ಚಕ್ರವರ್ತಿ ನಾನು ಹೇಳುವುದೆಂದರೆ ಎಲ್ಲರ ಎದುರಿಗೆ ಒಪನ್ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಊಟ ತಿಂಡಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಬಂದರೆ ಆ ವಿಚಾರವನ್ನು ಖಾಸಗಿಯಾಗಿ ಇಡುತ್ತೇನೆ ಎಂದು ಹೇಳುತ್ತಾರೆ.

  • ಹಿಂದಿಯಲ್ಲೂ ಶುರುವಾಯ್ತು ಚಕ್ರವರ್ತಿ ದರ್ಶನ್ ಹವಾ!

    ಹಿಂದಿಯಲ್ಲೂ ಶುರುವಾಯ್ತು ಚಕ್ರವರ್ತಿ ದರ್ಶನ್ ಹವಾ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಚಿತ್ರಗಳೆಂದೂ ಇಂಥಾ ಬಿರುದಿಗೆ ಮೋಸ ಮಾಡಿಲ್ಲ. ಇದೀಗ ದರ್ಶನ್ ಅವರ ಹವಾ ಹಿಂದಿಗೂ ಹರಡಿಕೊಂಡಿದೆ. ಕಳೆದ ವರ್ಷ ದರ್ಶನ್ ಅವರು ನಟಿಸಿದ್ದ ಚಕ್ರವರ್ತಿ ಚಿತ್ರ ಹಿಂದಿಗೆ ಡಬ್ ಆಗಿ ಅಲ್ಲಿನ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.

    ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ, ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.

    ಈ ಕ್ಷಣಕ್ಕೂ ಚಕ್ರವರ್ತಿ ಹಿಂದಿ ವರ್ಷನ್ನಿನ ಅಬ್ಬರ ಏರುಗತಿ ಕಾಣುತ್ತಲೇ ಇದೆ. ಈ ಮೂಲಕವೇ ದರ್ಶನ್ ಅವರಿಗೆ ಬಾಲಿವುಡ್ ಮಟ್ಟದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಚಕ್ರವರ್ತಿ ಚಿತ್ರ ಬಿಡುಗಡೆಗೂ ಮುನ್ನವೇ ಬಾಲಿವುಡ್ ಚಿತ್ರಗಳನ್ನೇ ಮೀರಿಸುವಂಥಾ ಕ್ರೇಜ್ ಹುಟ್ಟು ಹಾಕಿತ್ತು. ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಆ ಚಿತ್ರವೀಗ ಹಿಂದಿಗೆ ಡಬ್ ಆಗಿ ಅಲ್ಲಿಯೂ ಜನಮನ ಸೆಳೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಮಿಳುನಾಡಿನಲ್ಲಿ ಚಕ್ರವರ್ತಿ, ಶುದ್ಧಿ ಸಿನಿಮಾ ರದ್ದು!

    ತಮಿಳುನಾಡಿನಲ್ಲಿ ಚಕ್ರವರ್ತಿ, ಶುದ್ಧಿ ಸಿನಿಮಾ ರದ್ದು!

    ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನ ರದ್ದು ಮಾಡಲಾಗಿದೆ. ಕಾವೇರಿ ವಿಚಾರದಲ್ಲಿ ಕನ್ನಡ ವಿರೋಧಿ ಹೇಳಿಕೆ ನೀಡಿದ್ದ ನಟ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ಕನ್ನಡ ಕ್ಷಮೆಯಾಚಿಸಿದ ಬೆನ್ನಲ್ಲೇ ಚೆನ್ನೈನ ಮಾಲ್‍ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.

    ಶುದ್ದಿ, ಚಕ್ರವರ್ತಿ ಚಿತ್ರ ಪದರ್ಶನಗಳ ರದ್ದು ಮಾಡಲಾಗಿದ್ದು, ಜನರು ಬುಕ್ ಮಾಡಿದ್ದ ಟಿಕೆಟ್‍ಗಳನ್ನೂ ಸಹ ಕ್ಯಾನ್ಸಲ್ ಮಾಡಲಾಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು, ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ರದ್ದು ಮಾಡಿದ್ರೆ, ಕರ್ನಾಟಕದಲ್ಲೂ ತಮಿಳು ಚಿತ್ರ ಪ್ರದರ್ಶನ ರದ್ದು ಮಾಡಲಾಗುವುದು ಅಂತಾ ಹೇಳಿದ್ದಾರೆ. ಈ ನಡುವೆ ಕಟ್ಟಪ್ಪ ವಿಷಾದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಹುಬಲಿ ಸಿನಿಮಾ ಬಿಡುಗಡೆ ಬಗ್ಗೆ ಕನ್ನಡ ಪರ ಸಂಘಟನೆಗಳು ಇಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

    ಇದನ್ನೂ ಓದಿ: ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ ಚಿತ್ರದ ಮೇಲೆ ತೋರಿಸಬೇಡಿ: ಕನ್ನಡಿಗರಲ್ಲಿ ರಾಜಮೌಳಿ ಮನವಿ

    ನಡೆದಿದ್ದೇನು?: ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನ ಪಾತ್ರದಲ್ಲಿ ಅಭಿನಯಿಸಿದ್ದ ಸತ್ಯರಾಜ್ ಕನ್ನಡಿಗರ ಬಗ್ಗೆ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು. ಹೀಗಾಗಿ ಬಾಹುಬಲಿ-2 ಚಿತ್ರ ಬಿಡುಗಡೆಗೂ ಮುನ್ನ ಸತ್ಯರಾಜ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವೆಂದಲ್ಲಿ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಅಡ್ಡಿ ಮಾಡುವ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ನಿದೇರ್ಶಕ ರಾಜಮೌಲಿ ಪ್ರತಿಕ್ರಿಯಿಸಿ, ನನಗೆ ಯಾವುದೇ ವಿಚಾರ ಗೊತ್ತಿಲ್ಲ ಎಂದಿದ್ದರು. ಇದರಿಂದ ಕನ್ನಡಪರ ಹೋರಾಟಗಾರರು ಮತ್ತಷ್ಟು ಕೆರಳಿದ್ದರು. ಕೊನೆಗೆ ಕನ್ನಡಿಗರ ಮನವೊಲಿಕೆಗೆ ನಿರ್ದೇಶಕ ರಾಜಮೌಳಿ ಯತ್ನಿಸಿದ್ದರು. ಅಂತೆಯೇ ಶುಕ್ರವಾರ ಸತ್ಯರಾಜ್ ಕೂಡ ಕನ್ನಡಿಗರ ಕ್ಷಮೆ ಕೇಳಿದ್ದರು. ಇದ್ರಿಂದ ಕುಪಿತಗೊಂಡ ತಮಿಳು ಚಿತ್ರೋದ್ಯಮ, ಕನ್ನಡದ ಮೇಲೆ ಕೋಪ ತೀರಿಸಿಕೊಳ್ಳಲು ನಿನ್ನೆ ಸಂಜೆಯಿಂದಲೇ ಕನ್ನಡ ಚಿತ್ರ ಪ್ರದರ್ಶನಗಳ ಏಕಾಏಕಿ ರದ್ದು ಮಾಡಿದೆ. ಇದೀಗ ಕರ್ನಾಟಕದಲ್ಲೂ ತಮಿಳು ಚಿತ್ರ ಪ್ರದರ್ಶನ ರದ್ದಿಗೆ ನಿರ್ಧರಿಸಲಾಗಿದೆ.

    ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಕಟ್ಟಪ್ಪ

  • ರಾಜ್ಯಾದ್ಯಂತ `ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ – ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾಕ್ಕೆ ಫಿದಾ

    ರಾಜ್ಯಾದ್ಯಂತ `ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ – ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾಕ್ಕೆ ಫಿದಾ

    – ರಾತ್ರಿಯಿಂದಲೇ ಅಭಿಮಾನಿಗಳಿಗೆ ಸಡಗರ

    ಬೆಂಗಳೂರು: ಸ್ಯಾಂಡಲ್ ವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಚಕ್ರವರ್ತಿ’ ಸಿನಿಮಾ ತೆರೆಗೆ ಅಪ್ಪಳಿಸಿದೆ. ಗುರುವಾರ ರಾತ್ರಿಯಿಂದಲೇ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಇದೇ ಮೊದಲ ಬಾರಿಗೆ ಮಧ್ಯರಾತ್ರಿ 12 ಗಂಟೆ ಚಿತ್ರ ಪ್ರದರ್ಶನಗೊಂಡಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೆಹಲಿ ಮತ್ತು ಗುಜರಾತ್‍ನಲ್ಲಿ ತೆರೆ ಕಂಡಿದೆ. ದೇಶದ ಒಟ್ಟು 500 ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ಚಕ್ರವರ್ತಿ ದರ್ಶನ ನೀಡುತ್ತಿದ್ದಾರೆ.

    ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನೆಮಾ ಮಧ್ಯರಾತ್ರಿಯೇ ಬಿಡುಗಡೆಗೊಂಡಿದೆ. ಮಧ್ಯ ರಾತ್ರಿ ಶೋ ನೋಡಲು 8 ಗಂಟೆಯಿಂದಲೇ ಟಿಕೇಟ್ ಗಾಗಿ ಕ್ಯೂನಿಂತಿದ್ದರು. ಕೆಲ ಮಿತಿಮೀರಿದ ವರ್ತನೆ ತೋರುತ್ತಿದ್ದ ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಹಲವು ಬಾರಿ ಲಘು ಲಾಠಿ ಪ್ರಹಾರವನ್ನೂ ಮಾಡಲಾಯಿತು. ಚಿತ್ರಮಂದಿರದ ಆವರಣದ ತುಂಬಾ ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗುತ್ತಿದ್ದರು. ಸಿನೆಮಾ ಪ್ರದರ್ಶನ ಆರಂಭವಾದ ನಂತರ ದರ್ಶನ್ ಎಂಟ್ರಿ ವೇಳೆ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು.

    ತುಮಕೂರಿನಲ್ಲಿ ರಾತ್ರಿಯಿಂದಲೇ ಚಿತ್ರ ತೆರೆ ಕಂಡಿದೆ. ಗಾಯತ್ರಿ ಮತ್ತು ಮಾರುತಿ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು ಮಾರುತಿ ಚಿತ್ರ ಮಂದಿರದಲ್ಲಿ ರಾತ್ರಿ 12 ಗಂಟೆ ಮತ್ತು ಬೆಳಗಿನ ಜಾವ 4-30 ಕ್ಕೆ ವಿಶೇಷ ಪ್ರದರ್ಶನ ನಡೆಸಲಾಯಿತು. ಮಧ್ಯರಾತ್ರಿ 12 ರ ಶೋಗೂ ಅಭಿಮಾನಿಗಳು ಮುಗಿಬಿದ್ದು ಚಿತ್ರ ವೀಕ್ಷಿಸಿದರು. ಇನ್ನೂ ಕೆಲ ಅಭಿಮಾನಿಗಳು ತಮ್ಮ ಹೇರ್‍ಸ್ಟೈಲ್‍ನಲ್ಲಿಯೇ ಚಕ್ರವರ್ತಿ ಎಂಬ ಹೆಸರು ಮೂಡುವ ಹಾಗೆ ಹೇರ್‍ಕಟ್ ಮಾಡಿಸಿಕೊಂಡು ಗಮನ ಸೆಳೆದರು.

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

    ಇದನ್ನೂ ಓದಿ: ಯುಗಾದಿಗೆ ‘ಚಕ್ರವರ್ತಿ’ ಸಿನಿಮಾದ ಟ್ರೇಲರ್ ರಿಲೀಸ್

    ಇದನ್ನೂ ಓದಿ: ನಾವ್ ಲಾಂಗ್ ಇರೋದ್ರಿಂದ ಲಾಂಗ್ ನಮ್ಗೆ ಮ್ಯಾಚಾಗುತ್ತೆ: ಫೇಸ್ ಬುಕ್ ಲೈವ್‍ನಲ್ಲಿ ನಟ ದರ್ಶನ್