Tag: Chakravarthy Chandrachuda

  • ಗೆಳೆಯ ಚಕ್ರವರ್ತಿಗೆ ಸಂಬರಗಿ ಚಾಲೆಂಜ್

    ಗೆಳೆಯ ಚಕ್ರವರ್ತಿಗೆ ಸಂಬರಗಿ ಚಾಲೆಂಜ್

    ಮಂಗಳವಾರದ ಬಿಗ್‍ಬಾಸ್ ಎಪಿಸೋಡ್ ಅಕ್ಷರಷಃ ರಣಾಂಗಣವಾಗಿ ಬದಲಾಗಿತ್ತು. ಯಾರು ನಂಬರ್ ಒನ್ ವಿಚಾರದಲ್ಲಿ ಅನಾವಶ್ಯಕ ವಿಚಾರಗಳನ್ನ ಮುನ್ನಲೆಗೆ ತಂದ ಪ್ರಶಾಂತ್ ಸಂಬರಗಿ ವಿರುದ್ಧ ಮತ್ತೊಮ್ಮೆ ಇಡೀ ಮನೆ ಕೆಂಡವಾಗಿತ್ತು. ನಿನ್ನ ವಾದಗಳನ್ನ ಸರಿಯಾದ ಮಾರ್ಗದಲ್ಲಿ ಮಂಡಿಸು ಎಂದು ಸಲಹೆ ಹೇಳಿದ ಗೆಳೆಯ ಚಕ್ರವರ್ತಿಗೆ ಪ್ರಶಾಂತ್ ಸಂಬರಗಿ ಚಾಲೆಂಜ್ ಹಾಕಿದರು.

    ಈ ಟಾಸ್ಕ್ ನಲ್ಲಿ ವೋಟಿಂಗ್ ಇರಲಿಲ್ಲ. ಆದ್ರೂ ವೋಟಿಂಗ್ ಮಾಡಿ ನನಗೆ 11ನೇ ಸ್ಥಾನ ನೀಡಿದ್ರು. ಎಲ್ಲ ಆಟ ಮುಗಿದ್ಮೇಲೆ ಮಾತಾಡೋದು ತಪ್ಪು. ಐದರಿಂದ 11ನೇ ಸ್ಥಾನಕ್ಕೆ ಬಂದಾಗಲೇ ಮಾತಾಡಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದು ಸಲಹೆ ನೀಡಿದರು.

    ಈ ವೇಳೆ ನಿಗಿ ನಿಗಿ ಕೆಂಡವಾಗಿದ್ದ ಪ್ರಶಾಂತ್ ಸಂಬರಗಿಯ ಸಮಾಧಾನಕ್ಕೆ ಶಮಂತ್ ಮುಂದಾದ್ರು. ನಿಮ್ಮ ಪೆಟ್ರೋಲ್, ಫ್ಯೂಯೆಲ್ ಸೇವ್ ಮಾಡಿಕೊಳ್ಳಿ. ಮುಂದಿನ ನಾಲ್ಕೈದು ವಾರ ನಿಮ್ಮ ಆಟ ತೋರಿಸಿ ಅಂತ ಹೇಳಿದ್ರು. ಆದ್ರೆ ಕೋಪದಿಂದ ಕುಣಿಯುತ್ತಿದ್ದ ಸಂಬರಗಿ, ಇದು ದ್ವೇಷದ ಆಟ ಎಂದು ಹೇಳಿ ಇಡೀ ಮನೆ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ರು.

    ಇನ್ನೂ ಅಲ್ಲಿಯೇ ನಿಂತಿದ್ದ ಚಕ್ರವರ್ತಿ, ಆಟದ ವೇಳೆ ಪ್ರಶಾಂತ್ ಸಂಬರಗಿಯ ಕೆಲ ಹೇಳಿಕೆಗಳನ್ನ ಖಂಡಿಸಿದ್ರು. ದಿವ್ಯಾ ಸುರೇಶ್ ಜೊತೆ ಚೆನ್ನಾಗಿಯೇ ಮಾತಾಡ್ತಿಯಾ. ಮಂಜು ವಿಷಯದಲ್ಲಿ ಆಕೆ ಹೆಸರನ್ನ ಬಳಸಿಕೊಳ್ಳೋದು ತಪ್ಪು. ಮಂಜು ಕಾಮಿಡಿ ಇಷ್ಟ ಆಗಲ್ಲ ಅಂದ್ರೆ ನೇರವಾಗಿ ಹೇಳು. ಪದೇ ಪದೇ ದಿವ್ಯಾ ಹೆಸರನ್ನ ತೆಗೆದುಕೊಳ್ಳಬೇಡ. ಎಲ್ಲ ವಿಷಯಗಳನ್ನ ತಾಳ್ಮೆಯಿಂದ ಯೋಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಹೀಗೆ ಕೂಗಾಡಿಲ್ಲ ಎಂದು ಸಂಬರಗಿಗೆ ಚಕ್ರವರ್ತಿ ತಿಳಿ ಹೇಳಿದರು.

    ನಾನು ಇನ್ಮುಂದೆ ಹೆಣ್ಣಿನ ಹೆಸರು ಬಳಸಬಾರದು ಅಂತ ಡಿಸೈಡ್ ಮಾಡಿದ್ದೀನಿ. ನಿನಗಿಂತ ಹೆಚ್ಚು ಮಹಿಳೆಯರನ್ನ ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ. ಯಾರ ವೈಯಕ್ತಿಕ ವಿಚಾರಗಳನ್ನು ಮಾತಾಡಿಲ್ಲ. ಯಾರ ಪರ್ಸನಲ್ ವಿಚಾರ ಮಾತಾಡಿದ್ದೀನಿ ಅಂತ ತೋರಿಸು ಎಂದು ಚಕ್ರವರ್ತಿಗೆ ಸಂಬರಗಿ ಸವಾಲು ಹಾಕಿದರು.

  • ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಅಂದಿದ್ಯಾಕೆ ಚಂದ್ರಚೂಡ ?

    ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಅಂದಿದ್ಯಾಕೆ ಚಂದ್ರಚೂಡ ?

    ಬೆಂಗಳೂರು: ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಸದಾ ಮನೆಯಲ್ಲಿ ಒಂದಲ್ಲ ಒಂದು ಕಿರಿಕ್ ಮಾಡುವ ಚಕ್ರವರ್ತಿ ಚಂದ್ರಚೂಡ ಇದೀಗ ಬಿಗ್ ಮನೆಯ ಸ್ಪರ್ಧಿಗಳಲ್ಲಿ ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಎನ್ನುವ ಮೂಲಕ ಮನೆಯವರೆಲ್ಲರಿಗೂ ಪಂಥಾಹ್ವಾನ ನೀಡಿದ್ದಾರೆ.

    ಬಿಗ್‍ಬಾಸ್ ನೀಡಿದ ಟಾಸ್ಕ್ ಒಂದನ್ನು ಮಂಜು, ಅರವಿಂದ್ ಮತ್ತು ರಾಜೀವ್ ಅವರು ಮಾಡಿದರು. ಇದರ ಕುರಿತು ಮಾತಿಗಿಳಿದ ಚಕ್ರವರ್ತಿ ಬಿಗ್‍ಮನೆಯಲ್ಲಿ ಟಾಸ್ಕ್ ಕೊಟ್ಟಾಗ ನಾವು ಆಟ ಆಡಿ ತೋರಿಸುತ್ತೇವೆ ಎಂದಾಗ ಕೆಲವರು ಈ ಆಟವನ್ನು ಇಂತವರೇ ಆಡಲಿ ಎಂದು ಬೊಟ್ಟು ಮಾಡುತ್ತಾರೆ. ನಾವು ಆಟವಾಡಲು ಸಿದ್ಧರಾದರೆ. ಬೇಡ ಎಂದು ಹೇಳುತ್ತಾರೆ. ಅಂತವರ ವಿರುದ್ಧ ನಾನು ಧ್ವನಿ ಎತ್ತುತ್ತೇನೆ ಆದರೆ ನನ್ನಿಂದ ಮನೆಯಲ್ಲಿ ಜಗಳವಾಗುವುದು ಬೇಡ ಎಂದು ಸುಮ್ಮನಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನು ಕೇಳಿಸಿಕೊಂಡ ಮಂಜು, ಅರವಿಂದ್ ಮತ್ತು ರಾಜೀವ್ ನೀವು ಆಟ ಆಡಬಾರದು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ನಾನು ಆಟವಾಡಲು ಹೊರಟಾಗ ನಿಧಿ ಅವರು ರಾಜೀವ್ ಅವರು ಆಟವಾಡಲಿ. ನೀವು ಆಟವಾಡುವುದು ಬೇಡ ಎಂದಿದ್ದರು ಎಂದರು. ಇದಕ್ಕೆ ಗರಂ ಆದ ನಿಧಿ ಎಲ್ಲದಕ್ಕೂ ನನ್ನ ಹೆಸರನ್ನು ತೆಗೆದುಕೊಳ್ಳಬೇಡಿ ನಾನು ನೀವು ಆಡಬಾರದು ಎಂದು ಹೇಳಿಲ್ಲ ಎಂದರು.

    ನಂತರ ಚಕ್ರವರ್ತಿ ನಾನು ಆಡುತ್ತೇನೆ ಎಂದು ಕೈ ಎತ್ತಿದಾಗ ಬೇಡ ರಾಜೀವ್ ಆಡಲಿ ಎಂದು ನಿಧಿ ಹೇಳಿದ್ದು ಕೇಳಿಸಿಕೊಂಡಿದ್ದೇನೆ ಎಂದರು. ನಂತರ ಮಾತಿನ ಚಕಮಕಿ ಜೋರಾಗಿ ಚಕ್ರವರ್ತಿ ನಾನು ರಘು, ಸಂಬರಗಿ ಮತ್ತು ಶಮಂತ್ ಜೊತೆಗಿದ್ದೆ ಆ ಸಂದರ್ಭ ನಾನು ನಿಧಿ ಅವರ ಬಗ್ಗೆ ಮಾತನಾಡಿದ್ದೆ ಎಂದು ಅವರು ಹೇಳಿದರೆ ನನಗೆ ನೀವು ಚಪ್ಪಲಿಯಲ್ಲಿ ಹೊಡಿಯಿರಿ ಎಂದರು.

    ನಂತರ ಮಾತು ಮುಂದುವರಿಸಿದ ನಿಧಿ ಚಕ್ರವರ್ತಿ ಅವರು ಯಾಕೆ ಸುಮ್ಮನೆ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಕಾರಾರು ಎತ್ತಿದರು. ಸದಾ ಒಂದಲ್ಲ ಒಂದು ವಿಷಯಗಳನ್ನು ಹಿಡಿದುಕೊಂಡು ರೆಬಲ್ ಆಗುವ ಚಕ್ರವರ್ತಿ ಇದೀಗ ನಿಧಿ ಮೇಲೆ ಆಟದ ವಿಷಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ ಎನ್ನುವ ಮೂಲಕ ಮಾತಿನೇಟು ನೀಡಿದ್ದಾರೆ.

  • ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮನೆಯಲ್ಲಿ ಲೈಟ್ ಆಫ್ ಆದ್ರೂ ಸ್ಪರ್ಧಿಗಳು ನಿದ್ದೆಗೆ ಜಾರಲ್ಲ. ಒಬ್ರು ಮತ್ತೊಬ್ಬರ ಆಟ. ಹೀಗೆ ಹಾಗೆ ಅಂತ ಗುಸು ಗುಸು ಸ್ಟಾರ್ಟ್ ಆಗಿರುತ್ತೆ. ನಿನ್ನೆ ಸಹ ರಾತ್ರಿ ಒಂದು ಗಂಟೆ ಆಗಿತ್ತು. ನಿಧಿ ಮತ್ತು ಶುಭಾ ಇಬ್ಬರ ಪಿಸು ಮಾತು ಮಾತ್ರ ಕೇಳಿಸಿತ್ತು. ಬಹುತೇಕ ಎಲ್ಲರೂ ನಿದ್ದೆ ಮಾಡ್ತಿದ್ದರಿಂದ ಮನೆ ಶಾಂತವಾಗಿತ್ತು. ಅಷ್ಟರಲ್ಲಿ ಕೇಳಿದ ಚಪ್ಪಾಳೆ ಸದ್ದು ಮನೆ ಮಂದಿಯನ್ನ ಬೆಚ್ಚಿ ಬೀಳಿಸಿತು.

    ರಾತ್ರಿ 1.5 ನಿಮಿಷಕ್ಕೆ ಎಲ್ಲರೂ ಮಲಗಿದ್ರೆ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಧ್ಯಾನ ಮಾಡ್ತಿದ್ರು. ಈ ವೇಳೆ ದಿಢೀರ್ ಅಂತ ಚಪ್ಪಾಳೆ ಹೊಡೆದ್ರು. ಮನೆ ಪೂರ್ಣ ಸೈಲೆಂಟ್ ಗಿದ್ದರಿಂದ ಚಪ್ಪಾಳೆ ಸೌಂಡ್ ಜೋರಾಗಿಯೇ ಕೇಳಿಸ್ತು. ಇನ್ನು ಪಿಸು ಮಾತುಗಳನ್ನಾಡುತ್ತಿದ್ದ ಶುಭಾ ಮತ್ತು ನಿಧಿ ಸಹ ಒಂದು ಕ್ಷಣ ತಬ್ಬಿಬ್ಬಾಗಿ ಯಾರು ಕ್ಲ್ಯಾಪ್ ಮಾಡಿದ್ದು ಅಂತ ಅತ್ತಿತ್ತ ನೋಡುತ್ತಿದ್ದರು.

    ಚಪ್ಪಾಳೆಯ ಸದ್ದಿನಿಂದ ಎಚ್ಚರಗೊಂಡ ಶಮಂತ್ ಮತ್ತು ಅರವಿಂದ್ ಯಾರ್ ಗುರು ಕ್ಲ್ಯಾಪ್ ಹಾಕಿದ್ರೂ ಅನ್ನೋ ರೀತಿ ಸನ್ನೆ ಮಾಡಿದ್ರು. ನಂತರ ಚಕ್ರವರ್ತಿ ಅವರೇ ಚಪ್ಪಾಳೆ ಹಾಕಿದ್ದು ಅಂತ ತಿಳಿದು ಎಲ್ಲರೂ ನಕ್ಕು ನಿದ್ದೆಗೆ ಜಾರಿದ್ರು.

    ಇನ್ನೂ ಬೆಳಗಾಗುತ್ತಲೇ ಚಪ್ಪಾಳೆ ವಿಷಯ ಮನೆಯ ಹಾಟ್ ಟಾಪಿಕ್ ಆಗಿ ಬದಲಾಯ್ತು. ಚಂದ್ರಚೂಡ ಮೆಡಿಟೇಷನ್ ಮಾಡುವಾಗ ಮಧ್ಯ ಒಂದು ಸಾರಿ ಚಪ್ಪಾಳೆ ತಟ್ಟುತ್ತೇನೆ. ಆದ್ರೆ ಮಂಜು ಕೂಗಿದ್ದು ಕೇಳಿಸಿಲ್ಲ. ನಿಮಗೆಲ್ಲ ತೊಂದರೆ ಆಗ್ತಿದ್ರೆ ಹೊರಗೆ ಮೆಡಿಟೇಷನ್ ಮಾಡ್ತೀನಿ ಅಂದ್ರು. ಇತ್ತ ಮಂಜು ಪಾವಗಡ ಮಾತ್ರ, ಕೇಳಿಸಿದ್ರೂ ಕೇಳಿಸದೇ ರೀತಿ ನಟಿಸರಬಹುದು ಅಂತ ಕಾಲೆಳೆದ್ರು.

  • ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ಬಿಗ್‍ಬಾಸ್ ಮನೆಗೆ ಬಂದಿರೋ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಹಳೆಯ ಆಟಗಾರರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ತಿಂಗಳು ಮನೆಯ ಮಂದಿ ಹೊರಗೆ ಹೇಗೆ ಬಿಂಬಿತರಾಗಿದ್ದಾರೆ ಅನ್ನೋ ವಿಷಯ ಸದ್ಯ ಅಲ್ಲಿರುವ ಚಕ್ರವರ್ತಿ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಬಂದ ಮೊದಲ ದಿನವೇ ಮನೆಯ ಸದಸ್ಯರಿಗೆ ಅಂಕ ಸಹ ನೀಡಿದ್ರು. ಇದೀಗ ವಿಶ್ವನಾಥ್ ಮುಂದೆ ಕೆಲ ವಿಷಯಗಳನ್ನ ಹಂಚಿಕೊಂಡಿರುವ ಚಕ್ರವರ್ತಿ, ಆಟ ಸೇರಿದಂತೆ ಮನೆಯಲ್ಲಿ ಹೆಚ್ಚು ಸಕ್ರಿಯನಾಗುವಂತೆ ಸಲಹೆ ನೀಡಿದ್ದಾರೆ.

    ರಘು, ನಿಧಿ, ನನಗೆ ಸೇರಿದಂತೆ ಬಹುತೇಕರಿಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಜೀವನದ ಸೆಕೆಂಡ್ ಹಾಫ್. ನಾವೆಲ್ಲ 40 ವರ್ಷ ಮೇಲ್ಪಟ್ಟವರು. ಆದ್ರೆ ನೀನು ಇನ್ನೂ ಚಿಕ್ಕವನು. ನಿನ್ನಲ್ಲಿರುವ ಟ್ಯಾಲೆಂಟ್ ಜನತೆಗೆ ತೋರಿಸು. ನಾವೆಲ್ಲ ಇಲ್ಲಿ ಬಂದಿರೋದು ನಮ್ಮ ಪ್ರತಿಭೆ ತೋರಿಸಲು ಎಂದು ಚಕ್ರವರ್ತಿ ಹೇಳಿದ್ರು. ನೀನು ನಿನ್ನ ಪ್ರತಿಭೆ ತೋರಿಸಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದರು.

    ಚಕ್ರವರ್ತಿ ಮಾತುಗಳಿಗೆ ಉತ್ತರಿಸಿದ ವಿಶ್ವನಾಥ್, ಬರೆಯೋದಕ್ಕೆ ಪೆನ್ನು, ಪೇಪರ್ ಇಲ್ಲ ಅನ್ನೋ ನೆಪ ಹೇಳಲ್ಲ. ಆದ್ರೆ ಇಲ್ಲಿಯ ಒತ್ತಡದಿಂದ ಆಗ್ತಿಲ್ಲ ಅಂದ ಸಮಜಾಯಿಷಿ ಕೊಟ್ರು. ಅದೇನೇ ಸ್ಟ್ರೆಸ್ ಇರಲಿ, ನಾನು ನಿಂಗೆ ಸಾಹಿತ್ಯ ಬರೆದುಕೊಡ್ತೀನಿ ಅಂತ ಮಾತು ಕೊಟ್ಟರು.

    ಚಕ್ರವರ್ತಿ ಚಂದ್ರಚೂಡ ಓರ್ವ ಮಾಜಿ ಪತ್ರಕರ್ತ ಮತ್ತು ಬರಹಗಾರರು. ಇತ್ತ ವಿಶ್ವನಾಥ್ ಸಹ ಒಳ್ಳೆಯ ಗಾಯಕ. ಮುಂದೆ ಈ ಜೋಡಿಯಿಂದ ಹೊಸ ಹಾಡುಗಳನ್ನ ಬಿಗ್ ಮನೆಯಲ್ಲಿ ಕೇಳುವ ಸಾಧ್ಯತೆಗಳಿವೆ.