Tag: chakravarthy

  • ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು

    ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು

    ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಮದುವೆ ಬಗ್ಗೆ ಸಾಕಷ್ಟು ಕನಸು, ಆಸೆಗಳನ್ನು ಹೊಂದಿರುವ ಮಂಜು ಮದುವೆಯಾಗಲು ತಯಾರಾಗಿದ್ದರೆ. ಆದರೆ ನನ್ನ ಮದುವೆಯನ್ನು ಶುಭಾನೇ ಕೆಡಿಸಿಬಿಡುತ್ತಾರೆ ಎಂದು ಸುದೀಪ್ ಜೊತೆ ಮಂಜು ಹೇಳಿಕೊಂಡಿದ್ದಾರೆ.

    ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಮಂಜು ನಾನು ಹೆಣ್ಣು ನೋಡುವ ಶಾಸ್ತ್ರಕ್ಕೆ ಯಾರನ್ನು ಕರೆದುಕೊಂಡು ಹೋದರೂ ಶುಭಾ ಪೂಂಜಾರನ್ನು ಮಾತ್ರ ಕರೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಸುದೀಪ್ ಕಾರಣವೇನು ಎಂದಾಗ ನಾನು ಹೆಣ್ಣು ನೋಡವ ಶಾಸ್ತ್ರಕ್ಕೆ ಶುಭಾ ಕರೆದುಕೊಂಡು ಹೋದರೆ ಇವರೇ ಹಾಳು ಮಾಡಿಬಿಡುತ್ತಾರೆ.

    ಹುಡುಗಿ ಮುಂದೆ ಬೇಡ ಹುಡುಗ ಸರಿ ಇಲ್ಲ. ಡಬ್ಬ ನನ್ನ ಮಗ, ಚಂಪೂ, ಹಲ್ಲುಬ್ಬ, ತುರೆಮಣೆ, ನೀನೇನೋ ಒಳ್ಳೆ ಚಿಂಪಾಂಜಿ ತರ ಇದ್ಯಾ? ನೀನು ಯಾವ ಸೀಮೆ ಅದೋ ಅಂತಾರೆ. ಇಷ್ಟು ಹುಡುಗಿ ಮುಂದೆ ಹೇಳಿದರೆ ಸಾಕು ಹುಡುಗಿ ರಿಜೆಕ್ಟ್ ಮಾಡಿ ಬಿಡುತ್ತಾಳೆ. ಇದರ ಬದಲಿಗೆ ಹುಡುಗ ಚೆನ್ನಾಗಿದ್ದಾನೆ ಎಂದರೆ ಒಕೆ. ಆದರೆ ಇವನೊಬ್ಬ ದರಿದ್ರಾನನ್ನ ಮಗ, ಇವನು ಸ್ನಾನ ಮಾಡಲ್ಲ, ಹಲ್ಲುಜ್ಜಲ್ಲ, ಸೊಟ್ಟ ನನ್ನ ಮಗ ಅಂತ ಏನೇನೋ ಬೈತಾರೆ ಎಂದು ಮಂಜು ಆರೋಪಿಸುತ್ತಾರೆ.

    ಈ ವೇಳೆ ಸುದೀಪ್ ಹುಡುಗಿ ಕೂಡ ನಾನು ಹಲ್ಲು ಹುಜ್ಜುವುದಿಲ್ಲ ಎಂದರೆ ಹೇಗೆ ಇರುತ್ತದೆ ಒಮ್ಮೆ ನೆನಪಿಸಿಕೊಳ್ಳಿ. ಹಾಗೇ ಹೇಳಿದ ತಕ್ಷಣ ಅಲ್ಲಿಂದ ಎದ್ದು ಓಡಿ ಹೋಗುವವರೇ ಮೊದಲು ನೀವು ಮಂಜು ಅವರೇ ಎಂದು ಅಣುಕಿಸುತ್ತಾರೆ. ಇನ್ನೂ ಚಕ್ರವರ್ತಿಯವರು ಬರುತ್ತೀನಿ ಅಂದ್ರು ಅವರನ್ನು ಬೇಡ ಅಂದ್ರಿ ಯಾಕೆ ಎಂದು ಕೇಳುತ್ತಾರೆ.

    ಆಗ ಮಂಜು ಅವರಿಗೂ ನನಗೂ ಪ್ರೀತಿ ವಿಶ್ವಾಸ ಜಾಸ್ತಿ ಇದೆ. ಹಾಗಾಗಿ ಅವರನ್ನು ಡೈರೆಕ್ಟ್ ಮದುವೆಗೆ ಬನ್ನಿ ಎಂದು ಹೇಳಿದ್ದೇನೆ ಎನ್ನುತ್ತಾರೆ. ಈ ವೇಳೆ ಸುದೀಪ್ ಸೆರಿದಂತೆ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದನ್ನೂ ಓದಿ : ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

  • ಹೆಣ್ತನದ ಘನತೆ, ಇವಳ ಬಗ್ಗೆ ಬರೆಯಲು ಅಕ್ಷರಗಳ ಕೊರತೆ – ವೈಷ್ಣವಿಯನ್ನು ಹಾಡಿ ಹೊಗಳಿದ ಚಕ್ರವರ್ತಿ

    ಹೆಣ್ತನದ ಘನತೆ, ಇವಳ ಬಗ್ಗೆ ಬರೆಯಲು ಅಕ್ಷರಗಳ ಕೊರತೆ – ವೈಷ್ಣವಿಯನ್ನು ಹಾಡಿ ಹೊಗಳಿದ ಚಕ್ರವರ್ತಿ

    ಬಿಗ್‍ಬಾಸ್ ಮನೆಯಲ್ಲಿ ಎಲ್ಲಾ ಸದಸ್ಯರಿಗಿಂತ ಬಹಳ ಡಿಫರೆಂಟ್ ಸ್ಪರ್ಧಿ ಎಂದರೆ ವೈಷ್ಣವಿ ಗೌಡ. ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕವಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ವೈಷ್ಣವಿ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದರೆ, ಬಹಳ ಸಾಫ್ಟ್ ಹಾಗೂ ಕಾಮ್ ಆಗಿರುತ್ತಾರೆ. ಏನೇ ಮಾತನಾಡಬೇಕಾದರೂ 10 ಬಾರಿ ಯೋಚಿಸಿ ಮಾತನಾಡುತ್ತಾರೆ. ತಮ್ಮ ನಯಾ, ನಾಜುಕಿನ ನಡುವಳಿಕೆಯ ಮೂಲಕವೇ ಕನ್ನಡಿಗರ ಮನಗೆದ್ದಿರುವ ವೈಷ್ಣವಿ ದೊಡ್ಮನೆಯ ಎಲ್ಲಾ ಸ್ಪರ್ಧಿಗಳ ಉತ್ತಮ ಬಾಂಧವ್ಯ ಹಾಗೂ ಪ್ರೀತಿಯನ್ನು ಹೊಂದಿದ್ದಾರೆ.

    ಸದ್ಯ ಚಕ್ರವರ್ತಿ ಚಂದ್ರಚೂಡ್‍ರವರು ವೈಷ್ಣವಿಯ ವ್ಯಕ್ತಿತ್ವ ಕುರಿತಂತೆ ಕವಿತೆಯೊಂದನ್ನು ಬರೆದಿದ್ದು, ಮನೆಯ ಸದಸ್ಯರ ಮುಂದೆ ವೈಷ್ಣವಿಯನ್ನು ಹಾಡಿಹೊಗಳಿದ್ದಾರೆ. ಆನೆ ಮತ್ತು ಇರುವೆಯ ಕಥೆಯಂತವಳು, ನವಿಲು ಮತ್ತು ನಾಗರ ಹಾವು ಎರಡು ಒಟ್ಟಿಗೆ ಕುಣಿದಂತವಳು, ಒಳಗೆ ಕುದಿಯುವ ಕೆಂಡ, ಒಲಿದರೆ ಮಾತ್ರ ಅರಳುವ ಕೆಂಡ ಸಂಪಿಗೆ, ನೆನಪಿಸುತ್ತಾಳೆ ಹೆಣ್ಣು ನೇಸರನ ಧ್ಯಾನ, ಮಾತು ಆಡುತ್ತಾಳೆ ಹಾಗಾಗೇ ಬೋಧಿ ವೃಕ್ಷದ ಮೌನ. ಈ ಅರಮನೆಯ ಅನ್ನಪೂರ್ಣೆ, ಯಾರೆತ್ತ ಮಗಳೋ ಇವಳು ಶ್ವೇತ ವರ್ಣಿಕೆ, ಇವಳ ಮುಡಿಯಲ್ಲಿದೆ ಅನುಬಂಧದ ಗರಿ, ಇವಳು ಮನಸ್ಸಿಟ್ಟರೆ ಮಾತ್ರ ಆ ಸಂಬಂಧಕ್ಕೊಂದು ಗುರಿ, ಸನ್ನಿಧಿ ಎಂದರೆ ಓಡಾಡುವ ರೇಷ್ಮೆ ಸೀರೆ, ಸಮ್ಮತಿ ಇದ್ದರಷ್ಟೇ ಬಾನಂಗಳದಿಂದ ಜಾರುವ ಮಿನುಗು ತಾರೆ, ಇವಳಿನ್ನೂ ಧರಿಸಿಲ್ಲ ರುದ್ರಾಕ್ಷಿ, ಬಂಧವೊಂದು ಅನುಗಾಲದಿ ಕಾಯುತ್ತಿದೆ, ಅದುವೇ ಅಗ್ನಿ ಸಾಕ್ಷಿ. ನನ್ನ ಪಾಲಿಗಿದು ಹೆಣ್ಣುತನದ ಘನತೆ, ಎಂದೂ ಬತ್ತದಿರಲಿ ಇವಳ ಸಂಯಮದ ಒರತೆ, ಇವಳ ಬಗ್ಗೆ ಬರೆಯಲು ನನ್ನಂತವನಿಗೂ ಅಕ್ಷರಗಳ ಕೊರತೆ ಎಂದಿದ್ದಾರೆ.

    ವೈಷ್ಣವಿ ವ್ಯಕ್ತಿತ್ವವನ್ನು ಪದಗಳ ಮೂಲಕ ಚಕ್ರವರ್ತಿ ಬಣ್ಣಿಸಿದ್ದನ್ನು ಕೇಳಿ ಮನೆಯ ಎಲ್ಲಾ ಸ್ಪರ್ಧಿಗಳು, ವಾರೆವ್ಹಾ, ಸೂಪರ್, ಸಖತ್ ಆಗಿ ಬರೆದಿದ್ದೀರಾ ಎಂದು ಚಪ್ಪಾಳೆ ತಟ್ಟಿದ್ದಾರೆ. ಇದನ್ನೂ ಓದಿ:ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ

  • ದೊಡ್ಮನೆಯಲ್ಲಿ ಸ್ಯಾಂಡ್‍ವಿಚ್ ಆಗಿ ಸಾಕಾಗಿದೆ: ಶಮಂತ್

    ದೊಡ್ಮನೆಯಲ್ಲಿ ಸ್ಯಾಂಡ್‍ವಿಚ್ ಆಗಿ ಸಾಕಾಗಿದೆ: ಶಮಂತ್

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಲವಾರು ಪ್ರತಿಭೆಗಳಲ್ಲಿ ಶಮಂತ್ ಕೂಡ ಒಬ್ಬರು. ಫಸ್ಟ್ ಇನ್ನಿಂಗ್ಸ್‍ನಲ್ಲಿ ಅಷ್ಟೇನೂ ಸದ್ದು ಮಾಡದೇ ಇದ್ದರೂ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಅದರ ಎರಡರಷ್ಟು ಆ್ಯಕ್ಟಿವ್ ಆಗಿರುವುದರ ಜೊತೆಗೆ ಮನೆಯಲ್ಲಿ ತಮ್ಮ ಹಾಡಿನ ಮೂಲಕ ಮೈನ್ ಆಫ್ ದಿ ಆಟ್ರ್ಯಾಕ್ಷನ್ ಆಗುತ್ತಿದ್ದಾರೆ.

    ಕಳೆದ ವಾರ ಕಿಚ್ಚ ಸುದೀಪ್, ಪ್ರಶಾಂತ್ ಹಾಗೂ ಚಕ್ರವರ್ತಿ ಮಧ್ಯೆ ಸಿಲುಕಿಕೊಂಡಿರುವ ಶಮಂತ್‍ರವರ ಪರಿಸ್ಥಿತಿ ಯಾವ ರೀತಿ ಇದೆ ಎಂದು ಹಾಡನ್ನು ಬರೆದು ಮುಂದಿನ ವಾರ ಹೇಳಬೇಕೆಂದು ಸೂಚಿಸಿದ್ದರು. ಅದರಂತೆ ಶಮಂತ್ ವಾರದ ಕಥೆ ಕಿಚ್ಚ ಜೊತೆ ಸಂಚಿಕೆಯಲ್ಲಿ ತಾವು ಬರೆದಿರುವ ಹಾಡನ್ನು ಕಿಚ್ಚನ ಎದುರಿಗೆ ಹಾಡಿ ಮಿಂಚಿದ್ದಾರೆ.

    ಅಯ್ಯಯ್ಯೋ ನೋಡು ದೇವ್ರೆ, ಸಿಕ್ಕಾ ಪಟ್ಟೆ ಕಷ್ಟ ಮಾರ್ರೆ, ಇತ್ತ ಮಳ್ಳ, ಅತ್ತ ಸುಳ್ಳ, ಮಧ್ಯ ನಾನು ಕಳ್ಳ ಅಲ್ಲ. ಅಲ್ಲಿ ಮಳ್ಳಿ, ಇಲ್ಲಿ ಕುಳ್ಳಿ, ನಾನು ಈಗ ಎಲ್ಲಿ ಹೋಗ್ಲಿ, ನನ್ನ ಪಾಡಿಗೆ ನಾನು ಕೂತಿದ್ರು ನನ್ನ ಬುಡಕ್ಕೆ ಬರ್ತಾರೆ. ಇನ್ನೇನು ಕಿರಿಕ್ ಸ್ಟಾರ್ಟ್ ನಾನು ಓಡಬೇಕಿದೆ, ಅಲ್ಲಿದ್ದ ತಪ್ಪಿಗೆ ಸಾಕ್ಷಿ ಹೇಳಬೇಕಾಗಿದೆ. ಅಯ್ಯಪ್ಪ ಸ್ಯಾಂಡ್‍ವಿಚ್ ಬಾಳು ನಂದು ಆಗಿ ಹೋಗಿದೆ, ಸಾಕಾಗೋಗಿದೆ.. ಸಾಕಾಗೋಗಿದೆ.. ಎಂದು ಹಾಡು ಹೇಳಿದ್ದಾರೆ.

    ಹಾಡಿನ ನಂತರ ಲಿರಿಕ್‍ನಲ್ಲಿ ಮಳ್ಳ-ಸುಳ್ಳ ಎಂದು ಬಂತು ಅದು ಯಾರು ಎಂದು ಸುದೀಪ್ ಕೇಳಿದಾಗ, ಹಾಗೆ ಸುಮ್ಮನೆ ಬರೆದೆ ಎಂದು ಶಮಂತ್ ಹೇಳುತ್ತಾರೆ. ಆಗ ಸುದೀಪ್ ಹೋಗ್ಲಿ ಬಿಡಿ ಯಾಕೆ, ಆಮೇಲೆ ನಾನು ನಿಮ್ಮನ್ನು ಸ್ಯಾಂಡ್‍ವಿಚ್ ಮಾಡುವುದು ಎಂದು ರೇಗಿಸುತ್ತಾರೆ.

    ಒಟ್ಟಾರೆ ಶಮಂತ್ ಪ್ರತಿಭೆ ಕಂಡು ಮನೆಮಂದಿ ಜೊತೆ ಕಿಚ್ಚ ಕೂಡ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

  • ಬಿಗ್‍ಬಾಸ್ ಮನೆಯಲ್ಲಿ ಹುಟ್ಟಿಕೊಂಡ್ರು ಹೊಸ ಸಿಂಗರ್

    ಬಿಗ್‍ಬಾಸ್ ಮನೆಯಲ್ಲಿ ಹುಟ್ಟಿಕೊಂಡ್ರು ಹೊಸ ಸಿಂಗರ್

    ಬಿಗ್‍ಬಾಸ್ ಕಾರ್ಯಕ್ರಮದ ಪ್ರತಿ ಸೀಸನ್‍ನಲ್ಲಿಯೂ ಒಬ್ಬ ಗಾಯಕ ಅಥವಾ ಗಾಯಕಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ. ಸದ್ಯ ಬಿಗ್‍ಬಾಸ್ ಸೀಸನ್ -8 ರಲ್ಲಿ ದೊಡ್ಮನೆಗೆ ಗಾಯಕಿ ಗೀತಾ ಭಟ್ ಹಾಗೂ ಗಾಯಕ ವಿಶ್ವನಾಥ್ ಶಮಂತ್ ಆಗಿಮಿಸಿದ್ದರು. ಸದ್ಯ ಗೀತಾ ಭಟ್ ಮತ್ತು ಗಾಯಕ ವಿಶ್ವನಾಥ್ ಎಲಿಮೀನೆಟ್ ನಂತರ ಉಳಿದಿರುವುದು ಶಮಂತ್ ಮಾತ್ರ. ಆದ್ರೆ ಇವರೆಲ್ಲರ ಮಧ್ಯೆ ರೊಚ್ಚಿಗೆದ್ದು ವೈಷ್ಣವಿ ದೊಡ್ಮನೆಯಲ್ಲಿ ಹಾಡು ಹೇಳಲು ಆರಂಭಿಸಿದ್ದಾರೆ. ಅದರಲ್ಲೂ ಇವರ ಹಾಡು ಹೇಗಿದೆ ಅಂದ್ರೆ ಮನೆಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗುತ್ತಾರೆ.

    ಹೌದು, ಇಷ್ಟು ದಿನ ಸೈಲೆಂಟ್ ಆಗಿದ್ದ ವೈಷ್ಣವಿ ಈಗ ಫುಲ್ ವೈಲೆಂಟ್ ಆಗಿದ್ದಾರೆ. ಬಿಗ್‍ಬಾಸ್ ಮನೆಯ ಹಲವು ಮಂದಿಗೆ ಹಾಡು ಹೇಳಲು ಬರುವುದಿಲ್ಲ ಅದರಲ್ಲಿ ವೈಷ್ಣವಿ ಕೂಡ ಒಬ್ಬರು. ಸದ್ಯ ವೈಷ್ಣವಿಗೆ ಹಾಡು ಹೇಳುವಂತೆ ಚಕ್ರವರ್ತಿಯವರು ಕೇಳುತ್ತಾರೆ. ಆಗ ವೈಷ್ಣವಿ ನನಗೆ ಬರುವುದಿಲ್ಲ ನೀವು ನಿದ್ದೆ ಮಾಡುತ್ತೀರಾ ಎನ್ನುತ್ತಾರೆ. ಪರವಾಗಿಲ್ಲ ನಾನು ನಿದ್ದೆ ಹೋಗುವುದಿಲ್ಲ ಹಾಡು ಹೇಳು ಎಂದಾಗ ‘ಒಂದೇ ಒಂದು ಸಾರಿ ಕಣ್ಣು ಮುಂದೆ ಬಾರೆ..’ ಎಂದು ಹೇಳುತ್ತಾರೆ. ಅದಕ್ಕೆ ಇಷ್ಟೇ ನಾ ಹಾಡು ಎಂದು ಚಕ್ರವರ್ತಿ ಕೇಳಿ ಮತ್ತೊಂದು ಹಾಡು ಹೇಳು ಎಂದು ಕೇಳಿದ್ದಾರೆ. ಆಗ ವೈಷ್ಣವಿ ಸುಮ್ಮನೆ ಹೀಗೆ ನಿನ್ನನೇ ಎಂದು ಮೂಗಿನಲ್ಲಿಯೇ ಹಾಡು ಹೇಳುತ್ತಾರೆ. ಈ ವೇಳೆ ಅರವಿಂದ್ ಹಾಡಿರಲಿ ಆ ಎಕ್ಸ್‍ಪ್ರೆಷನ್ ಕೊಡುತ್ತಿರಲ್ಲ ಯಪ್ಪಾ.. ಎಂದು ಅಣುಕಿಸುತ್ತಾರೆ.

    ಇತ್ತೀಚೆಗೆ ಶಮಂತ್ ಬರೆದಿದ್ದ ಮಳೆಯೇ ಸುರಿ.. ಮಳೆಯೇ ಸುರಿ ಹಾಡನ್ನು ವೈಷ್ಣವಿಯವರು ಹಾಡಿದ್ದರು. ಈ ಹಾಡನ್ನು ಕೇಳಿ ಶಾಕ್ ಆದ ಮನೆಮಂದಿಯೆಲ್ಲಾ ವೈಷ್ಣವಿ ಇಷ್ಟು ಕೆಟ್ಟ ಸಿಂಗರ್ ಎಂದು ಗೊತ್ತಿರಲಿಲ್ಲ, ನಾವೇ ಕೆಟ್ಟದಾಗಿ ಹಾಡುತ್ತೇವೆ ಎಂದರೆ ಇವಳು ನಮಗಿಂತ ಕೆಟ್ಟದಾಗಿ ಹಾಡುತ್ತಾಳೆ ಎಂದು ಹಾಸ್ಯ ಮಾಡಿದರೆ. ದಿವ್ಯಾ ಉರುಡುಗ ಅರವಿಂದ್ ಚೇರ್ ನಿಂದ ಎದ್ದು ಬಿದ್ದು ನಕ್ಕಿದ್ದರು. ಇದನ್ನೂ ಓದಿ: ನಾನು ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡ್ತಿದ್ದೆ: ಶುಭಾ ಪೂಂಜಾ

  • ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

    ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

    ಗಮನವನ್ನು ಸೆಳೆಯುತ್ತ ಟಾಸ್ಕ್‌ನಲ್ಲಿ ಸೋತ ನಿಂಗೈತೆ ತಂಡದ ಇಬ್ಬರು ಸದಸ್ಯರು ಇಡೀ ದಿನದಲ್ಲಿ 10 ಜೊತೆ ಬಟ್ಟೆ ಚೇಂಜ್ ಮಾಡಬೇಕೆಂದು ಬಿಗ್‍ಬಾಸ್ ಸೂಚಿಸಿದ್ದರು.

    ಸೂಚನೆಯ ಹಿನ್ನೆಲೆಯಲ್ಲಿ ದಿವ್ಯಾ ಸುರೇಶ್ ಹಾಗೂ ಶಮಂತ್ ಇಬ್ಬರು ಒಂದೇ ತರಹದ ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ವಿಜಯ ಯಾತ್ರೆ ತಂಡದ ನಾಯಕರಿಗೆ ತೋರಿಸಿ ಅನುಮೋದನೆ ಪಡೆಯುತ್ತಾ, ನಂತರ ಇಬ್ಬರು ಆ ಡ್ರೆಸ್‍ನಲ್ಲಿ ಕ್ಯಾಮೆರಾ ಮುಂದೆ ಪೋಸ್ ನೀಡಿ ಫೋಟೋ ಹಿಡಿಸಿಕೊಂಡಿದ್ದಾರೆ. ಅಲ್ಲದೇ ಶಮಂತ್ ಹಾಗೂ ದಿವ್ಯಾ ಉರುಡುಗ ಬ್ಯಾಕ್ ಟೂ ಬ್ಯಾಕ್ ಮ್ಯಾಚಿಂಗ್ ಡ್ರೆಸ್‍ಗಳನ್ನು ನೋಡಿ ಇಷ್ಟು ದಿನ ಇಷ್ಟು ಚೆಂದದ ಬಟ್ಟೆಗಳನ್ನು ಇಟ್ಟುಕೊಂಡು ಹಾಕಿಕೊಂಡೇ ಇಲ್ಲ ಮನೆ ಮಂದಿಯೆಲ್ಲಾ ಕಾಮೆಂಟ್ ಕೂಡ ಮಾಡುತ್ತಾರೆ.

    ಈ ನಡುವೆ ಎಲ್ಲರೂ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವ ವೇಳೆ ಚಕ್ರವರ್ತಿಯವರು, ಒಂದೊಂದು ಜೊತೆ ಬಟ್ಟೆ ಹಾಕಿಕೊಂಡು ನೀನು ಏನೇನು ಮಾಡುತ್ತಿದ್ಯಾ ಅನ್ನುವುದು ಎಂದು ಶಮಂತ್‍ರನ್ನು ಅಣುಕಿಸುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಇಬ್ಬರು ಟಾಸ್ಕ್ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆಗ ಚಕ್ರವರ್ತಿಯವರು ಟಾಸ್ಕ್ ಅಲ್ಲಮ್ಮ, ಇವನು ಇನ್ನೂ ಬೇರೆ, ಬೇರೆ ಮಾಡುತ್ತಿದ್ದಾನೆ. ನಿನ್ನದು ಒಂದೇ ದೃಷ್ಟಿಕೋನ, ಆದರೆ ನಾನು ತಿರುಗಿಸಿ, ತಿರುಗಿಸಿ ನೋಡುತ್ತಿರುತ್ತೇನೆ. ಈ ಹುಡುಗ ಯಾವತ್ತಾದರೂ ಒಂದು ದಾರಿಯಲ್ಲಿ ನಡೆದು ಬಿಟ್ಟರೆ, ನಾನು ಚಾಲೆಂಜ್ ಮಾಡಿ ಬಿಡುತ್ತೇನೆ. ಎರಡು ದೋಣಿ ಮೇಲೆ ಕಾಲಿಡುತ್ತಾನೆ ಎನ್ನುತ್ತಾರೆ.

    ಆಗ ವೈಷ್ಣವಿ ಎರಡೇನಾ? ಅಂದಾಗ ಈ ಮನೆಯಲ್ಲಿ ಮಾಡುತ್ತಾ ಇರುವುದು ಎರಡೆನೇ ಮೂರನೆಯದಕ್ಕೆ ಜಾಗವಿಲ್ಲ ಎಂದು ಚಕ್ರವರ್ತಿಯವರು ಹೇಳುತ್ತಾರೆ. ಆಗ ಶಮಂತ್ ಕೆರಿಯರ್ ಮತ್ತು ಆಫೀಸ್ ಎರಡು ದೋಣಿಯಲ್ಲಿ ಹೋಗುತ್ತಿದೆ. ಆದರೆ ಈಗ ಆಫೀಸ್ ಬಿಟ್ಟು ಕೆರಿಯರ್ ಎಂಬ ಒಂದೇ ದೋಣಿಯಲ್ಲಿ ಹೋಗುತ್ತಿದ್ದೇನೆ ಎನ್ನುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಕೊನೆಯದಾಗಿ ನೀನು ಮಾಡುವುದು ನಿನಗೆ ಸರಿ ಎನಿಸಿದರೆ ಬೇರೆಯವರಿಗೆ ಏನು ಹೇಳುವುದು ಬೇಕಾಗಿಲ್ಲ ಎಂದು ಟಾಂಗ್ ನೀಡುತ್ತಾರೆ.

    ನಂತರ ಮೇಕಪ್ ರೂಮಿನಲ್ಲಿ ಕುಳಿತು ದಿವ್ಯಾ ಸುರೇಶ್ ನೀನು ಚಕ್ರವರ್ತಿಯವರು ವೈಯಕ್ತಿವಾಗಿ ಏನಾದರೂ ಮಾತನಾಡಿಕೊಳ್ಳಿ ಅದರಿಂದ ನನಗೆ ತೊಂದರೆಯಾಗುವುದಿಲ್ಲ. ಆದರೆ ನಿನ್ನ ವಿಷಯಕ್ಕೆ ಬೇರೆಯವರನ್ನು ಹೋಲಿಸಿ ಮಾತನಾಡುತ್ತಿದ್ದಾರೆ, ಇನ್ ಡೈರೆಕ್ಟ್ ಆಗಿ ಎರಡು ದೋಣಿ, ಮೂರು ದೋಣಿ ಎನ್ನುವುದು ನನಗೆ ಇಷ್ಟವಾಗುವುದಿಲ್ಲ, ನೀನು ಮಾತನಾಡಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ಬಿಗ್‍ಬಾಸ್ ಮನೆಯಲ್ಲಿ ಕೊರೊನಾ ಆತಂಕ

  • ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ಬಿಗ್‍ಬಾಸ್ ನೀಡಿದ್ದ ಹೀಗೂ ಅಂಟೆ ಟಾಸ್ಕ್ ವೇಳೆ ದಿವ್ಯಾ ಉರುಡುಗ(ಕವನ) ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ.

    ಬಿಗ್ ಬಾಸ್ ‘ಹೀಗೂ ಅಂಟೆ’ ಎಂಬ ಟಾಸ್ಕ್‌ನನ್ನು ನೀಡಿದ್ದರು. ಈ ಟಾಸ್ಕ್‌ನಲ್ಲಿ ಎರಡು ತಂಡದ ಒಬ್ಬೊಬ್ಬ ಸದಸ್ಯರು ಬಿಗ್‍ಬಾಸ್ ನೀಡುವ ಜಾಕೆಟ್ ತೊಡಬೇಕು ಹಾಗೂ ಎದುರಾಳಿ ತಂಡದವರು ಆ ಜಾಕೆಟ್‍ಗೆ ಸ್ಟಾರ್ ಒಂದನ್ನು ಅಂಟಿಸಬೇಕು ಎಂದು ಸೂಚಿಸಿದ್ದರು.

    ಅದರಂತೆ ವಿಜಯಯಾತ್ರೆ ತಂಡದ ಅರವಿಂದ್ ಜಾಕೆಟ್ ತೊಟ್ಟು ಆಟ ಆಡುವಾಗ, ದಿವ್ಯಾ ಉರುಡುಗ ಮಂಜು ಹಾಗೂ ದಿವ್ಯಾ ಸುರೇಶ್ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗ ಮೇಲೆ ಜೋರಾಗಿ ಬೀಳುತ್ತಾರೆ. ಟಾಸ್ಕ್ ನಂತರ ನಾನು ಬಹಳ ಜೋರಾಗಿ ಓಡಿ ಬರಬೇಕಾದರೆ ನನ್ನನ್ನು ತಡೆಯಲು ಬರಬೇಡ ಏಟಾಗುತ್ತದೆ ಎಂದು ಒಂದು ಬಾರಿ ದಿವ್ಯಾ ಉರುಡುಗಗೆ ಎಚ್ಚರಿಸುತ್ತಾರೆ.

    ನಂತರ ನಿಂಗೈತೆ ಇರು ತಂಡದಿಂದ ಜಾಕೆಟ್ ತೊಟ್ಟ ಆಟ ಆಡಲು ದಿವ್ಯಾ ಉರುಡುಗ ಆರಂಭಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಿರುತ್ತಾರೆ. ಆಗ ಚಕ್ರವರ್ತಿ ದಿವ್ಯಾ ಉರುಡುಗರನ್ನು ಸೇವ್ ಮಾಡಲು ಹೋಗಿ ಗಾರ್ಡನ್ ಏರಿಯಾದಲ್ಲಿದ್ದ ಗಾಜಿಗೆ ದಿವ್ಯಾ ಉರುಡುಗ ಕೈ ತಗುಲಿ ಪೆಟ್ಟಾಗುತ್ತದೆ. ನಂತರ ಮನೆಯ ಎಲ್ಲ ಸದಸ್ಯರು ದಿವ್ಯಾ ಉರುಡುಗರಿಗೆ ಸಮಾಧಾನ ಪಡಿಸುತ್ತಾರೆ ಮತ್ತು ಕನ್ಫೆಷನ್ ರೂಮ್‍ಗೆ ಅರವಿಂದ್ ದಿವ್ಯಾ ಉರುಡುಗರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ನಾನು ಅವಳನ್ನು ಸೇವ್ ಮಾಡಿ ಡೈರೆಕ್ಷನ್ ಚೇಂಜ್ ಮಾಡಲು ಪ್ರಯತ್ನಿಸಿದೆ ಆದರೆ ಈ ರೀತಿ ಆಯ್ತು ಎಂದು ಚಕ್ರವರ್ತಿ ಮನೆಯ ಸದಸ್ಯರಿಗೆ ತಿಳಿಸುತ್ತಾರೆ.

    ಬಳಿಕ ಚಿಕಿತ್ಸೆ ಪಡೆದು ವಾಪಸ್ ಬಂದ ದಿವ್ಯಾ ಉರುಡುಗರನ್ನು ಕಂಡು ಅರವಿಂದ್ ತಬ್ಬಿಕೊಂಡು ಅರವಿಂದ್ ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸುತ್ತಾರೆ. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾರೆ. ಇದಕ್ಕೆ ಅರವಿಂದ್ ಇಲ್ಲ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾರೆ.

    ಆಗ ಅರವಿಂದ್ ನಿನಗೆ ಏಟಾಗಿದ್ಯಾಲ್ಲ ಅದಕ್ಕೆ ನನ್ನ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಅಣಿಕಿಸಿ, ಜೀವ ಬಾಯಿಗೆ ಬಂದು ಬಿಟ್ಟಿತ್ತು. ಹೊಟ್ಟೆ ಬಳಿ ನೋಡಿದರೆ ರಕ್ತ ಇತ್ತು. ಅದು ಎಲ್ಲಿಂದ ಎಂದು ಗೊತ್ತಾಗುತ್ತಿರಲಿಲ್ಲ ಎಂದು ಗಾಬರಿಗೊಂಡಿದ್ದಾಗಿ ಅರವಿಂದ್ ದಿವ್ಯಾ ಉರುಡುಗಗೆ ಹೇಳಿದ್ದಾರೆ. ನಂತರ ಶಮಂತ್, ದಿವ್ಯಾ ಉರುಡುಗ ಮತ್ತು ಅರವಿಂದ್ ಇದೇ ವಿಚಾರವಾಗಿ ಕುಳಿತು ಚರ್ಚೆ ನಡೆಸುತ್ತಿರುವ ವೇಳೆ ನಾನು ಮೊದಲ ಬಾರಿಗೆ ಅರವಿಂದ್‍ರವರ ವಾಯ್ಸ್ ವೊಂದನ್ನು ಕೇಳಿದೆ, ಅದು ಹತ್ತು ಸೆಕೆಂಡ್, ಶೇಕಿಂಗ್ ವಾಯ್ಸ್ ಆಗಿತ್ತು ಎನುತ್ತಾರೆ. ಆಗ ಅರವಿಂದ್ ಹೌದು ಎಂದು ಹೇಳುತ್ತಾ ಕಣ್ಣಿನ ಅಂಚಲಿನಲ್ಲಿ ನೀರು ತುಂಬಿಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಅರವಿಂದ್‍ರನ್ನು ತಬ್ಬಿಕೊಂಡು ಸಮಾದಾನ ಪಡಿಸುತ್ತಾರೆ.

    ದಿವ್ಯಾ ಅವರನ್ನು ಮನೆಯಲ್ಲಿ ಕವನ ಎಂದು ಕರೆಯುತ್ತಾರೆ. ಹೀಗಾಗಿ ಅರವಿಂದ್ ಶಾರ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ‘ಕೆ’ ಎಂದು ಕರೆಯುತ್ತಾರೆ. ಇದನ್ನೂ ಓದಿ:ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

  • ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

    ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

    ಪ್ರತಿ ಬಾರಿಯಂತೆ ಈ ಸಲ ಕೂಡ ಮನೆಯ ಸ್ಪರ್ಧಿಗಳನ್ನು ವಿಜಯ ಯಾತ್ರೆ ಹಾಗೂ ನಿಂಗೈತೆ ಇರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಬಿಗ್‍ಬಾಸ್ ಡಿಫರೆಂಟ್ ಟಾಸ್ಕ್ ಅನ್ನು ನೀಡಿದ್ದರು. ಅದರಂತೆ ಮೊದಲ ಟಾಸ್ಕ್‌ನಲ್ಲಿ ಗೆದ್ದ ವಿಜಯಯಾತ್ರೆ ತಂಡದವರು ಓಡಾಡಬೇಕಾದರೆ, ನಿಂಗೈತೆ ತಂಡದ ಇಬ್ಬರು ಸದಸ್ಯರು ಬಾಗಿಲನ್ನು ತೆಗೆಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು.

    ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಶುಭಾ ಪೂಂಜಾ ಟಾಸ್ಕ್ ಗೆದ್ದ ಖುಷಿಯಲ್ಲಿ ಮಂಜುರನ್ನು ಸಿಕ್ಕಾಪಟ್ಟೆ ಸತಾಯಿಸಿದ್ದರು. ನಂತರ ‘ಹೀಗೂ ಅಂಟೆ’ ಟಾಸ್ಕ್‌ನಲ್ಲಿ ಗೆದ್ದ ಮಂಜು ಶುಭಾ ಪೂಂಜಾ ವಿರುದ್ಧ ರಿವೇಂಜ್ ತೆಗೆದುಕೊಂಡಿದ್ದಾರೆ.

    ಹೀಗೂ ಅಂಟೆ ಟಾಸ್ಕ್‌ನಲ್ಲಿ ಸೋತ ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರು ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಅಂಬೆ ಕಾಲಿನಲ್ಲಿ ಓಡಾಡಬೇಕು ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ಮಂಜು, ನನಗೆ ಬಹಳ ಖುಷಿಯಾಗುತ್ತಿದೆ ಅಂತ ಹೇಳಿ, ತಂಡವರೆಲ್ಲರೂ ಶುಭಾ ಪೂಂಜಾ ಹಾಗೂ ಪ್ರಶಾಂತ್‍ರವರನ್ನು ಸೂಚಿಸುತ್ತಾರೆ.

    ಬಳಿಕ ಅಂಬೆ ಕಾಲಿನಲ್ಲಿ ಓಡಾಡಲು ಆರಂಭಿಸಿದ ಶುಭಾಗೆ, ಟೈಂ ಒಂದೇ ರೀತಿ ಇರುವುದಿಲ್ಲ, ಯಾವಾಗಲೂ ತಿರುಗುತ್ತಲೇ ಇರುತ್ತದೆ. ಬಿಗ್ ಬಾಸ್ ಈ ಶಿಕ್ಷೆಯನ್ನು ಎರಡು ದಿನ ತೆಗೆಯಲೇ ಬಿಡಿ, ಜಿಂಕೆ ತರ ಎಗರುತ್ತಿದ್ದೆ, ಯಾಕೆ ಕಪ್ಪೆ ತರ ಕುತಿದ್ಯಾ, ನನ್ನ ಎದುರು ಹಾಕ್ಕೊಂಡವರು ಮಂಡಿ ಬಗ್ಗಿಸಿಯೇ ನಡೆಯಬೇಕು ಎಂದು ಮಂಜು ಅಣುಕಿಸುತ್ತಾರೆ. ಈ ವೇಳೆ ನಾನು ಏನು ಮಾಡಿದೆ ನನಗೆ ಯಾಕೆ ಶಿಕ್ಷೆ ಎಂದು ಪ್ರಶಾಂತ್ ಕೇಳಿದಾಗ, ಚಕ್ರವರ್ತಿಯವರು ಬಾತ್ ರೂಂ ಬಾಗಿಲು ಕುಟ್ಟಿದ್ಯಾಲ್ಲೋ ಚಕ್ರಿ ಬಾಗಿಲು ತೆಗಿ ಅಂತ, ಅದಕ್ಕೆ ಈ ಶಿಕ್ಷೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ರೇಗಿಸಿದ್ದಾರೆ.

    ಒಟ್ಟಾರೆ ಮನೆ ಪೂರ್ತಿ ಅಂಬೆ ಗಾಲಿನಲ್ಲಿ ಶುಭಾ ಪೂಂಜಾ ಓಡಾಡಲು ಪರದಾಡಿದರೆ, ಚಕ್ರವರ್ತಿಯವರು ಒಂದೇ ಚೇರ್ ಮೇಲೆ ಕುಳಿತು ಡ್ರೆಸ್ ಚೇಂಜ್ ಮಾಡಲು ಆಗದೇ ಕಿಚನ್ ಬಳಿಯೇ ಕುಳಿತುಕೊಂಡು ಟಿ-ಶರ್ಟ್ ಬಿಚ್ಚಿ ಮತ್ತೊಂದು ಟಿ-ಶರ್ಟ್ ಕಿಚನ್ ಬಳಿಯೇ ತಂದು ಕೊಡುವಂತೆ ಮನೆಮಂದಿಯನ್ನು ಬೇಡುತ್ತಾ ಒದ್ದಾಡಿದ್ದಾರೆ.

  • ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್

    ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್

    ಭಾನುವಾರ ವಾರದ ಕಥೆ ಕಿಚ್ಚ ಸುದೀಪ್ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್‍ರವರು ವೈಷ್ಣವಿ ತರ ದೊಡ್ಮನೆಯಲ್ಲಿ ಯಾರೂ ಮಾತನಾಡಲು ಸಾಧ್ಯವಿಲ್ಲ ಎಂದು ವೈಷ್ಣವಿಯವರನ್ನು ಹೊಗಳುವ ಮೂಲಕ ಕಾಲೆಳೆದಿದ್ದಾರೆ.

    ಪ್ರತಿವಾರದಂತೆ ಈ ವಾರ ಕೂಡ ಎಲಿಮಿನೇಷನ್ ಟೆನ್ಷನ್‍ನಲ್ಲಿ ಮನೆ ಮಂದಿ ಬ್ಯುಸಿಯಾಗಿದ್ದರು. ಸುದೀಪ್‍ರವರು ಬ್ರೇಕ್ ಮುಗಿಸಿಕೊಂಡು ಬಂದ ನಂತರ ಮನೆಯಲ್ಲಿ ಏನೋ ಕಾಮಿಡಿ ನಡೀತಿದೆ ಏನು ಎಂದು ಚಕ್ರವರ್ತಿಯವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿಯವರು ಮಳೆ ಬರುತ್ತಿದೆ ಎಂದರೆ ಯಾರೋ ಮಹಾನ್ ವ್ಯಕ್ತಿ, ಪುಣ್ಯ ಪುರುಷರೇ ಬಿಗ್‍ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಅನಿಸುತ್ತಿದೆ ಎಂದು ರಘುರವರ ಜೊತೆ ಮಾತನಾಡುತ್ತಿದ್ದೆ ಹೇಳುತ್ತಿದೆ.

    ನಾನು ಬ್ರೇಕ್ ಹೋಗುವ ಮುನ್ನ ದಿವ್ಯಾ ಸುರೇಶ್, ವೈಷ್ಣವಿ, ಪ್ರಿಯಾಂಕ ಇವರಲ್ಲಿ ಒಬ್ಬರನ್ನು ಸೇವ್ ಮಾಡುವುದಾಗಿ ಹೇಳಿದ್ದೆ. ಈ ಮೂವರಲ್ಲಿ ನೀವು ಹೇಳುತ್ತಿರುವ ವ್ಯಕ್ತಿ ಇದ್ದಾರಾ ಎಂದು ಸುದೀಪ್ ಕೇಳುತ್ತಾರೆ. ಆಗ ಚಕ್ರವರ್ತಿಯವರು ಸುಮ್ಮನೆ ಒಂದು ಊಹೆ ಅಷ್ಟೇ ಸರ್ ಎಂದಾಗ ಸುದೀಪ್‍ರವರು ನಿಮ್ಮ ಆಸೆಯನ್ನು ಈಡೇರಿಸುತ್ತೇವೆ ಎನ್ನುತ್ತಾರೆ. ಬಳಿಕ ಮಹಿಳೆ ಎಂದರೆ ತಪ್ಪಾಗುತ್ತದೆ ಸರ್, ಪಕ್ಕದಲ್ಲಿ ವೈಷ್ಣವಿಯವರು ಕುಳಿತಿದ್ದಾರೆ. ಅವರಿಂದ ಸ್ವಲ್ಪ ವಿದ್ಯೆ ಬಂದಿದೆ. ಇನ್ಮುಂದೆ ವೈಷ್ಣವಿ ರೀತಿ ಮಾತನಾಡಬೇಕು ಎಂದು ಡಿಸೈಡ್ ಮಾಡಿದ್ದೇನೆ. ಅವರನ್ನು ಗುರುವಾಗಿ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

    ಇದಕ್ಕೆ ಸುದೀಪ್, ವೈಷ್ಣವಿ ತರ ಇನ್ನೊಬ್ಬರು ಈ ಮನೆಯಲ್ಲಿ ಮಾತನಾಡುವುದಕ್ಕೆ ಸಾಧ್ಯವಿಲ್ಲ, ಸಾಧ್ಯವಿಲ್ಲ, ಸಾಧ್ಯವಿಲ್ಲ ಎಂದು ಹೇಳುತ್ತಾ ನಗುತ್ತಾರೆ. ಈ ವೇಳೆ ವೈಷ್ಣವಿ ಯಾಕೆ ಸರ್ ಎಂದು ಕೇಳಿದಾಗ, ಅಂದರೆ ನಾನು ನಿಮಗೆ ಕಾಂಪ್ಲಿಮೆಂಟ್ ನೀಡುತ್ತಿದ್ದೇನೆ. ನೀವು ಹೇಳುವುದು ನನಗೆ ಅರ್ಥವಾಗುವುದಕ್ಕೆ ಅಷ್ಟು ವಾರ ಬೇಕಾಯಿತು. ಚಕ್ರವರ್ತಿಯವರಿಗೆ ಯಾಕೆ ನಿಮ್ಮ ರೀತಿ ಮಾತನಾಡಲು ಆಗುವುದಿಲ್ಲ ಎಂದರೆ ಅವರು ಬಳಸುವ ಪದ ಸೂಕ್ಷ್ಮವಾಗಿ ಇರುವುದಿಲ್ಲ ಅದೇ ನಿಜವನ್ನು ಹೇಳಿ ಬಿಡುತ್ತದೆ. ಆದರೆ ನೀವು ಏನು ಹೇಳುವುದಿಲ್ಲ. ಬರೀ ಅಣ್ಣಾ ನಿಮಗೆ ಒಂದು ಮೆಡಲ್ ಹಾಕಬೇಕು ಎಂದು ಹೇಳುತ್ತೀರಾ ಅಷ್ಟೇ. ಅದನ್ನು ಕೇಳಿ ಎದುರುಗಡೆಯವರು ದಡ್ಡರಾಗಿದ್ದಾರೆ ನನ್ನ ಹೊಗಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ನಿಮಗೆ ಹಾಗೂ ನಿಮ್ಮನ್ನು ಅರ್ಥ ಮಾಡಿಕೊಂಡವರಿಗೆ ಸತ್ಯಾಂಶ ಗೊತ್ತಿರುತ್ತದೆ ಎಂದು ಹೇಳುತ್ತಾ ಹಾಸ್ಯ ಮಾಡಿದ್ದಾರೆ.

    ಕೊನೆಗೆ ಚಕ್ರವರ್ತಿಯವರ ಕೈಯಲ್ಲಿ ನಿಮ್ಮ ರೀತಿ ಇರಲು ಆಗುತ್ತಾ ಎಂದು ಸುದೀಪ್ ಕೇಳಿದಾಗ ಚಕ್ರವರ್ತಿಯವರೇ ಚಾನ್ಸೇ ಇಲ್ಲ ಎಂದು ಹೇಳುತ್ತಾ ನಗುತ್ತಾರೆ. ಇದನ್ನೂ ಓದಿ:ಬಿಗ್‍ಬಾಸ್ ಮನೆಯಿಂದ ರಘು ಔಟ್

  • ಮಾತುಗಳಿಗೂ ಸ್ಯಾನಿಟೈಸರ್ ಬಳಸಿ – ಪ್ರಶಾಂತ್, ಚಕ್ರವರ್ತಿಗೆ ಕಿಚ್ಚ ವಾರ್ನ್

    ಮಾತುಗಳಿಗೂ ಸ್ಯಾನಿಟೈಸರ್ ಬಳಸಿ – ಪ್ರಶಾಂತ್, ಚಕ್ರವರ್ತಿಗೆ ಕಿಚ್ಚ ವಾರ್ನ್

    ಬಿಗ್‍ಬಾಸ್ ಮನೆಯಲ್ಲಿ ಕುಚುಕು ಗೆಳೆಯರಾಗಿದ್ದ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಮಧ್ಯೆ ಈ ವಾರ ಬೆಂಕಿಯಂತೆ ಕಾದಾಟ ನಡೆದಿದ್ದು, ಈ ಕುರಿತಂತೆ ಸುದೀಪ್‍ರವರು ಚಕ್ರವರ್ತಿ ಹಾಗೂ ಪ್ರಶಾಂತ್‍ರವರಿಗೆ ವಾರ್ನ್ ಮಾಡಿದ್ದಾರೆ.

    ಶನಿವಾರದ ಪಂಚಾಯತಿಕಟ್ಟೆಯಲ್ಲಿ ವೇದಿಕೆ ಮೇಲೆ ಮನೆಯ ಸ್ಪರ್ಧಿಗಳ ತಪ್ಪುಗಳನ್ನು ತಿಳಿಸಿ ಬುದ್ಧಿ ಹೇಳಿದ ಸುದೀಪ್, ಪ್ರಶಾಂತ್ ಹಾಗೂ ಚಕ್ರವರ್ತಿ ಇಬ್ಬರು ಕೋವಿಡ್ ಸಮಯದಲ್ಲಿ ಮಾತುಗಳಿಗೂ ಸ್ಯಾನಿಟೈಸರ್ ಬಳಸುವುದು ನನ್ನ ಅನಿಸಿಕೆ. ಮಾತನಾಡುವುದು, ಜಗಳ ಮಾಡುವುದು, ಧ್ವನಿ ಎತ್ತುವುದು ತಪ್ಪಲ್ಲ. ಅಭಿಪ್ರಾಯವನ್ನು ಯಾವ ರೀತಿ ವ್ಯಕ್ತಪಡಿಸುತ್ತೇವೆ ಅದು ಎಲ್ಲರ ವ್ಯಕ್ತಿತ್ವವನ್ನು ತಿಳಿಸುತ್ತದೆ. ನೀವು ಬಳಸುವ ಪದಗಳನ್ನು ಕಟ್ ಮಾಡಿ ಹಾಕಲು ಆಗುವುದಿಲ್ಲ. ಏನು ಬರುತ್ತದೆ ಅದನ್ನು ತೋರಿಸಬೇಕಾಗುತ್ತದೆ. ಆದರೆ ಬೀಪ್, ಬೀಪ್ ಎಂದು ಹಾಕಿದರೆ ಟಿವಿಯಲ್ಲಿ ಹೇಗೆ ಕಾಣಿಸಬಹುದು. ನಾವು ಬೀಪ್ ಯಾಕೆ ಹಾಕಿರಬಹುದು ಎಂದು ಯೋಚಿಸಿ ಎಂದು ತಿಳಿ ಹೇಳಿದ್ದಾರೆ.

    ಪ್ರಶಾಂತ್ ಹಾಗೂ ಕೆ.ಪಿ ಅರವಿಂದ್‍ರವರ ನಡುವೆ ಅಡುಗೆ ಮನೆಯಲ್ಲಿ ನಡೆದ ವಾದ-ವಿವಾದ ಬಗ್ಗೆ ಮಾತನಾಡಿದ ಸುದೀಪ್‍ರವರು, ನಿಮ್ಮಿಬ್ಬರ ನಡುವೆ ಕೋಪ-ತಾಪ ಇತ್ತು, ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಪ್ರಕಾರ ನಿಮ್ಮಿಬ್ಬರ ನಡುವೆ ಜಗಳ ನಡೆಯುವ ಅವಶ್ಯಕತೆ ಇರಲಿಲ್ಲ. ಬಿಗ್‍ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರಗಳು ಬೇಡ. ಪ್ರಶಾಂತ್ ಈ ವೇಳೆ ಕಿರುಚಾಡುವ ಅವಶ್ಯಕತೆ ಇತ್ತ? ನೀವು ನಡೆದುಕೊಂಡಿದ್ದು ನೋಡಿ ನಿಮಗೆ ಏನಾದರೂ ಹೆಚ್ಚು-ಕಡಿಮೆಯಾಗುತ್ತದೆಯೋ ಎಂದು ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ನೋಡಿ ಭಯಪಟ್ಟಿದ್ದರು. ನಿಮ್ಮನ್ನು ಈ ಮನೆಯಲ್ಲಿ ಹೀಗೆ ನೋಡುತ್ತಿರಲು ಕಾರಣವನ್ನು ಬಹಳ ಸರಳವಾಗಿ ಹೇಳುತ್ತೇನೆ. ಉದಾಹರಣೆ ತೋಳ ಬಂತು ತೋಳ ಎಂಬ ಕಥೆಯನ್ನು ನೆನಪಿಸಿದ್ದಾರೆ.  ಇದನ್ನೂ ಓದಿ: ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್

  • ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್

    ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್

    ಬಿಗ್‍ಬಾಸ್ ಆರಂಭವಾಗಿ 89 ದಿನ ಕಳೆದಿದೆ. ಸದ್ಯ ದೊಡ್ಮನೆಯಲ್ಲಿರುವ ಸ್ಪರ್ಧಿಗಳು ಇಷ್ಟು ದಿನ ಒಟ್ಟಿಗೆ ಜೊತೆಯಾಗಿರುವುದರಿಂದ ಒಬ್ಬರನ್ನೊಬ್ಬರು ಆತ್ಮೀಯರಾಗಿ, ಸ್ನೇಹಿತರಾಗಿ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಮನೆಯ ಸದಸ್ಯರ ನಡುವಿನ ಹೊಂದಾಣಿಕೆಯನ್ನು ತಿಳಿದುಕೊಳ್ಳಲು ಬಿಗ್‍ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಹಿಂದೆ ಬಿಗ್‍ಬಾಸ್ ನೀಡಿದ್ದ ಜೋಡಿ ಟಾಸ್ಕ್ ವೇಳೆ ಜೋಡಿಯಾಗಿದ್ದ ಸ್ಪರ್ಧಿಗಳೇ ಈ ಬಾರಿ ಟಾಸ್ಕ್‌ನಲ್ಲಿ ಕೂಡ ಭಾಗವಹಿಸಬೇಕೆಂದು ಸೂಚಿಸಿದ್ದರು. ಇನ್ನೂ ಚಕ್ರವರ್ತಿ ಚಂದ್ರಚೂಡ್ ಈ ಟಾಸ್ಕ್‍ನನ್ನು ನಿರೂಪಣೆ ಮಾಡುವಂತೆ ಆದೇಶಿಸಿ, ಅವರು ಕೇಳುವ ಪ್ರಶ್ನೆಗಳಿಗೆ ಮನೆಯ ಸದಸ್ಯರು ಒಟ್ಟಿಗೆ ಉತ್ತರಿಸುವಂತೆ ತಿಳಿಸಿದ್ದರು.

    ಬಿಗ್‍ಬಾಸ್ ಮನೆಯ ಕ್ಯೂಟ್ ಪೇರ್ ಎಂದೇ ಫೇಮಸ್ ಆಗಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಬ್ಬರಲ್ಲಿ ಹೆಚ್ಚು ಕಾಂಪ್ರಮೈಸ್ ಆಗುವವರು ಯಾರು ಎಂಬ ಪ್ರಶ್ನೆಗೆ ಅರವಿಂದ್ ಎಂದು ಸೂಚಿಸಿ ನಾನು ಏನಾದರೂ ಹಠ ಮಾಡಿಕೊಂಡು ಕೋಪಿಸಿಕೊಂಡರೆ ಅವರೇ ಕಾಂಪ್ರಮೈಸ್ ಆಗುತ್ತಾರೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಇಬ್ಬರಲ್ಲಿ ಕಳ್ಳತನ ಅಥವಾ ಸುಳ್ಳು ಹೇಳಿದರೆ ಬೇಗ ಸಿಕ್ಕಿ ಬೇಳುವುದು ಯಾರು ಎಂಬ ಪ್ರಶ್ನೆಗೆ ಇಬ್ಬರು ತಮ್ಮ ಹೆಸರುಗಳನ್ನು ಸೂಚಿಸಿಕೊಂಡಿದ್ದಾರೆ. ಇಬ್ಬರಲ್ಲಿ ಯಾರು ಜಾಸ್ತಿ ಪೊಸೆಸಿವ್ ಎಂಬ ಪ್ರಶ್ನೆಗೆ, ಅರವಿಂದ್ ಹೆಚ್ಚು ಪೊಸೆಸಿವ್ ಎಂದು ಇಬ್ಬರು ತಿಳಿಸಿದ್ದಾರೆ. ಇದಕ್ಕೆ ಅರವಿಂದ್ ನನ್ನ ಫ್ರೆಂಡ್ಸ್, ನನ್ನ ವಸ್ತು, ಕಾರುಗಳ ಬಗ್ಗೆ ನಾನು ಜಾಸ್ತಿ ಪೊಸೆಸಿವ್ ಎಂದು ಹೇಳಿದ್ದಾರೆ. ಇನ್ನೂ ಇಬ್ಬರಲ್ಲಿ ಹೆಚ್ಚು ಖರ್ಚು ಮಾಡುವವರು ಯಾರು ಎಂಬ ಪ್ರಶ್ನೆಗೆ ಇಬ್ಬರು ಅರವಿಂದ್ ಹೆಸರನ್ನು ಸೂಚಿಸಿದ್ದಾರೆ. ನಂತರ ಇಬ್ಬರಲ್ಲಿ ಹೆಚ್ಚು ಆಟ್ರಾಕ್ಟಿವ್ ಯಾರು ಎಂಬ ಪ್ರಶ್ನೆಗೆ, ಇಬ್ಬರು ಅರವಿಂದ್ ಎಂದು ಒಂದೇ ಉತ್ತರ ನೀಡಿದ್ದು, ದಿವ್ಯಾ ಉರುಡುಗ ಅವರು ನೋಡಲು ಚೆನ್ನಾಗಿದ್ದಾರೆ, ಆಕರ್ಷಕವಾಗಿ ಕಾಣಲು ಕಾರಣಬೇಡ ನೋಡಿದ ತಕ್ಷಣವೇ ಬಹಳ ಆಟ್ರಾಕ್ಟಿವ್ ಆಗಿ ಕಾಣಿಸುತ್ತಾರೆ ಎಂದು ಉತ್ತರಿಸಿದ್ದಾರೆ.

    ಬಳಿಕ ರಾಗಿ ಮುದ್ದೆ ಹಾಗೂ ಪಿಜ್ಜಾ ಹಟ್ ಕಾಂಬಿನೇಷನ್‍ನಂತೆ ಇರುವ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ, ಇಬ್ಬರಲ್ಲಿ ಯಾರಿಗೆ ಒಳ್ಳೆಯ ಸ್ಮೈಲ್ ಇದೆ, ನಿಮ್ಮಿಬ್ಬರಲ್ಲಿ ಮೊದಲು ಜಗಳ ಆರಂಭಿಸುವವರು ಯಾರು, ವೇಕಪ್ ಸಾಂಗ್ ವೇಳೆ ಬೆಳ್ಳಗ್ಗೆ ಎದ್ದೇಳುವುದಕ್ಕೆ ಕಷ್ಟ ಪಡುವವರು ಯಾರು, ಇನ್ನೂ ಇಬ್ಬರಲ್ಲಿ ಹೆಚ್ಚು ವಾಟ್ಸಾಪ್ ಫಾರರ್ವಡ್ ಮೆಸೇಜ್ ಹೆಚ್ಚು ಕಳುಹಿಸುವವರು ಯಾರು ಎಂಬ ಪ್ರಶ್ನೆಗೆ ಇಬ್ಬರು ಸರಿಯಾದ ಉತ್ತರ ನೀಡಿದ್ದು, ಉಳಿದ 1 ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದಾರೆ.

    ನಂತರ ಬಂದ ಶಮಂತ್ ಹಾಗೂ ಪ್ರಿಯಾಂಕಗೆ ನಿಮ್ಮಿಬ್ಬರಲ್ಲಿ ಹೆಚ್ಚು ಬುದ್ಧಿವಂತರು ಯಾರು ಎಂಬ ಪ್ರಶ್ನೆಗೆ ಇಬ್ಬರು ಅವರವರ ಹೆಸರನ್ನು ಸೂಚಿಸುತ್ತಾರೆ. ಬಳಿಕ ಶಮಂತ್ ಸ್ವಲ್ಪ ಬುದ್ಧಿವಂತನೇ ಹಾಗೇ ದಡ್ಡ ತರನೂ ಕಾಣಿಸುತ್ತಾನೆ ಎಂದು ಪ್ರಿಯಾಂಕ ಹೇಳಿದ್ದಾರೆ. ನಿಮ್ಮಿಬ್ಬರಲ್ಲಿ ಮೊದಲು ಮದುವೆಯಾಗುವವರು ಯಾರು ಎಂಬುದಕ್ಕೆ ಒಟ್ಟಿಗೆ ಪ್ರಿಯಾಂಕರವರು ಎಂದು ತಿಳಿಸಿದ್ದಾರೆ. ಅಲ್ಲದೇ ಶಮಂತ್ ಪ್ರಿಯಾಂಕರವರು ಬೇಗ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಅಡ್ವೈಸ್ ಕೂಡ ಮಾಡಿದ್ದಾರೆ. ಇಬ್ಬರಲ್ಲಿ ರಾಗ ಎಳೆದು ಮಾತನಾಡುವ ಪ್ರಶ್ನೆಗೆ ಪ್ರಿಯಾಂಕ ಎಂದು ಇಬ್ಬರು ಒಟ್ಟಿಗೆ ಹೇಳಿದ್ದಾರೆ. ಉಳಿದ ಪ್ರಶ್ನೆಗಳಿಗೆ ತಪ್ಪಾಗಿ ಉತ್ತರ ನೀಡಿದ್ದಾರೆ.

    ವೈಷ್ಣವಿ ಹಾಗೂ ರಘುಗೆ ಕೇಳಿದ 5 ಪ್ರಶ್ನೆಗಳಲ್ಲಿ ನಾಲ್ಕು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಪ್ರಶಾಂತ್ ಹಾಗೂ ಶುಭಾ ಜೋಡಿ ಕೇಳಿದ 5 ಪ್ರಶ್ನೆಗಳಲ್ಲಿ ಇಬ್ಬರಲ್ಲಿ ಜಗಳ ಆಡುತ್ತಾ ಯಾವುದಕ್ಕೆ ಜಗಳ ಆಡುತ್ತಿದ್ದೇವೆ ಎಂದು ಮರೆತು ಹೋಗುವ ಮತ್ತು ಮತ್ತು ಮನೆಯಲ್ಲಿ ಹೆಚ್ಚಾಗಿ ಟೀ ಕುಡಿಯುವುದು ಯಾರು ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದು, ಉಳಿದ ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ