ಮುಂಬೈ: ಅತಿಥಿ ದೇವೋ ಭವ ಎಂಬ ಕಲ್ಪನೆಯೊಂದಿಗೆ ಚಾಯ್ವಾಲನೋರ್ವ ತನ್ನ ವಿಚಿತ್ರವಾದ ಸ್ಟೈಲ್ ನಲ್ಲಿ ಗ್ರಾಹಕರಿಗೆ ಚಹಾ ನೀಡುವ ಮೂಲಕ ಹೆಸರುವಾಸಿಯಾಗಿದ್ದಾನೆ.
ಮಹಾರಾಷ್ಟ್ರದ ನಾಗ್ಪುರ ಬಳಿ ಸಣ್ಣ ಅಂಗಡಿಯೊಂದರಲ್ಲಿ ಚಹಾ ಮಾರಾಟ ಮಾಡುತ್ತಿರುವ ಈತನ ಹೆಸರು ಡಾಲಿ. ಕಳೆದ 20 ವರ್ಷಗಳಿಂದ ಚಹಾ ಅಂಗಡಿ ಇಟ್ಟಿರುವ ಈತನ ಅಂಗಡಿ ಹೆಸರು ಡಾಲಿ ಕಿ ತಪ್ ರಿ ಎಂದೇ ಹೆಸರುವಾಸಿ. ಡಾಲಿ ತನ್ನ ವಿಚಿತ್ರವಾದ ಸ್ಟೈಲ್ನಿಂದ ಗ್ರಾಹಕರಿಗೆ ಚಹಾ ನೀಡಿ ಎಲ್ಲರ ಮನಗೆದ್ದಿದ್ದಾನೆ. ಇದರಿಂದಾಗಿಯೇ ಡಾಲಿ ಅಂಗಡಿಗೆ ದಿನನಿತ್ಯ ಚಹಾ ಸೇವಿಸಲು ಬರುವವರಿದ್ದಾರೆ. ಡಾಲಿ ಮೇಲಿನಿಂದ ಚಹಾ ಪಾತ್ರೆಗೆ ಹಾಲನ್ನು ಸುರಿಯುವ ರೀತಿ, ಗ್ರಾಹಕರಿಗೆ ಚಹಾ ಕೊಡುವ ಸ್ಟೈಲ್, ಮತ್ತು ಅವರಿಂದ ಹಣ ಪಡೆದುಕೊಂಡು ಚಿಲ್ಲರೆ ಕೊಡುವ ವಿಚಿತ್ರವಾದ ಮ್ಯಾನರೀಸಮ್ನಿಂದಾಗಿ ಎಲ್ಲರ ಅಚ್ಚುಮೆಚ್ಚಿನ ಚಾಯ್ವಾಲನಾಗಿ ಗುರುತಿಸಿಕೊಂಡಿದ್ದಾನೆ.
ಡಾಲಿ ತನ್ನ ವಿಚಿತ್ರವಾದ ಸ್ಟೈಲ್ ಮೂಲಕ ಗ್ರಾಹಕರನ್ನು ಸೆಳೆಯುವುದರೊಂದಿಗೆ, ಅದೇ ರೀತಿಯ ಆತಿಥ್ಯವನ್ನು ನೀಡಿ ಚಹಾ ಕೂಡ ವಿತರಿಸುತ್ತಾನೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಸ್ಟೈಲಿಶ್ ಚಾಯ್ವಾಲ ಗ್ರಾಹಕರಿಗೆ ರಂಜಿಸುತ್ತಾ ಬಿಸಿ ಬಿಸಿಯಾದ ಚಹಾವನ್ನು ಗ್ಲಾಸ್ಗೆ ಸುರಿಯುವ ರೀತಿ ಮತ್ತು ಮೊದಲ ಬಾರಿಗೆ ಅಂಗಡಿಗೆ ಬರುವ ಗ್ರಾಹಕರಿಗೆ ಏಲಕ್ಕಿ ನೀಡಿ ಗೌರವಿಸುವಂತಹ ಪದ್ಧತಿಯನ್ನು ಬೆಳೆಸಿಕೊಂಡು ಕೇವಲ 7 ರೂಪಾಯಿಗಳಿಗೆ ಚಹಾ ನೀಡುವ ಮೂಲಕ ಸೇವೆ ಮಾಡುತ್ತಿದ್ದಾನೆ.
ಡಾಲಿ ಜೊತೆ ಈ ರೀತಿ ನೀವು ಸ್ಟೈಲಿಶ್ ಚಾಯ್ವಾಲನಾಗಲು ಪ್ರೇರಣೆ ಯಾರೆಂದು ಕೇಳಿದಾಗ ಆತ ದಕ್ಷಿಣ ಭಾರತ ಖ್ಯಾತ ಚಿತ್ರ ನಟ ರಜನಿಕಾಂತ್ ಎನ್ನುತ್ತಾನೆ. ಡಾಲಿ ರಜನಿಕಾಂತ್ ಅವರ ಅಭಿಮಾನಿಯಾಗಿದ್ದು, ಅವರ ಸಿನಿಮಾದ ಹೊಸ ಹೊಸ ಸ್ಟೈಲ್ಗಳನ್ನು ಮೆಚ್ಚಿ ಅವರಂತೆ ಉದ್ದ ಕೂದಲನ್ನು ಬಿಟ್ಟು ಚಾಯ್ವಾಲನಾಗಿ ಮಿಂಚುತ್ತಿದ್ದಾರೆ.
ಡಾಲಿ ಈ ರೀತಿ ಚಹಾ ಗ್ರಾಹಕರಿಗೆ ವಿತರಣೆ ಮಾಡುವ ರೀತಿಯನ್ನು ವೀಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಂಡವೊಂದು ಹರಿಬಿಟ್ಟಿತು. ಇದನ್ನು ನೋಡಿದ ಜನರೆಲ್ಲ ಡಾಲಿಯ ಸರ್ವಿಂಗ್ ನೋಡಿ ಖುಷಿ ಪಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಲು ಹೊರಟ ಯೂಥ್ ಕಾಂಗ್ರೆಸ್ ಮಾಡಿರುವ ಎಡವಟ್ಟು ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿಗೆ ವರವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.
ಹೌದು. ತನ್ನ ಅಧಿಕೃತ ಸಾಮಾಜಿಕ ಜಾಲಾತಾಣದಲ್ಲಿ ಫೋಟೊವೊಂದಕ್ಕೆ ಗ್ರಾಫಿಕ್ಸ್ ಮಾಡಿದ್ದ ಯೂಥ್ ಕಾಂಗ್ರೆಸ್ ಮೋದಿಯನ್ನು ‘ಚಾಯ್ ವಾಲಾ’ ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಫೋಟೋ ಪ್ರಕಟವಾದ ಕೆಲವೇ ಸಮಯದಲ್ಲಿ ಇದು ಸಾಕಷ್ಟು ಪರ ವಿರೋಧ ಚರ್ಚೆಗೆ ಸಾಕ್ಷಿಯಾಯಿತು. ದೇಶದ ಪ್ರಧಾನಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದಕ್ಕಾಗಿ ಯೂಥ್ ಕಾಂಗ್ರೆಸ್ ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರನ್ನ ಚಾಯ್ ವಾಲಾ ಎಂದು ವಿಡಂಬನೆ ಮಾಡಿದ್ದ ಯೂಥ್ ಕಾಂಗ್ರೆಸ್ ಪ್ಲಾನ್ನ್ನು ಅವರಿಗೆ ತಿರುಗೇಟು ನೀಡಲು ಬಳಸಿಕೊಳ್ಳುತ್ತಿರುವ ಬಿಜೆಪಿ, ಜನರೊಂದಿಗೆ ನೇರವಾಗಿ ಬೆರೆಯುವ ಪ್ರಯತ್ನ ಮಾಡುತ್ತಿದೆ. ಅದರಂತೆ ಮೋದಿ ಕೂಡಾ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಉದ್ದೇಶ ಪೂರ್ವಕವಾಗಿ ಚಾಯ್ ವಾಲಾ ಪದವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಾಜ್ಕೋಟ್ ಚುನಾವಣಾ ಸಭೆಯೊಂದರಲ್ಲಿ ಮಾತನಾಡುತ್ತಾ ಮೋದಿ ತಮ್ಮನ್ನು ತಾವು ಮಣ್ಣಿನ ಮಗ ಎಂದು ಕರೆದುಕೊಂಡಿದ್ದರು. ನನ್ನ ವಿನಮ್ರತೆಯನ್ನು ಕಾಂಗ್ರೆಸ್ ಇಷ್ಟಪಡುತ್ತಿಲ್ಲ ಎಂದು ಟೀಕಿಸಿದರು. ನಾನು ಚಾಯ್ ವಾಲಾ, ನಾನು ಚಹಾವನ್ನು ಮಾರಿದ್ದೇನೆ ಆದರೆ ದೇಶವನ್ನು ಮಾರುವಂತಹ ಪಾಪದ ಕೆಲಸ ಮಾಡುವುದಿಲ್ಲ ಎಂದು ಹೇಳಿ ಜನರಿಂದ ಭರ್ಜರಿಯಾಗಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.(ಇದನ್ನೂ ಓದಿ: ನೀವು ಚಹಾ ಮಾರಾಟ ಮಾಡಿ, ದೇಶ ಮಾರಬೇಡಿ: ಕಾಂಗ್ರೆಸ್ಸಿಗೆ ಮೋದಿ ಟಾಂಗ್)
ಕಳೆದ ಭಾನುವಾರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ‘ಮನ್ ಕೀ ಬಾತ್ ಚಾಯ್ ಕೇ ಸಾಥ್ ಎಂದು ಬದಲಾಯಿಸಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಬಿಜೆಪಿ ಯಶಸ್ವಿಯಾಗಿತ್ತು. ಇದಕ್ಕೆ ಸಾಕಷ್ಟು ದೊಡ್ಡ ಪ್ರಮಾಣದ ಬೆಂಬಲವೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಐವಾಂಕಾ ಟ್ರಂಪ್ ಮಂಗಳವಾರ ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳಿದ ಪರಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಚಾಯ್ ವಾಲಾ ಸ್ಥಾನದಿಂದ ಪ್ರಧಾನಿ ವರೆಗಿನ ಹುದ್ದೆಗೆ ತೆರಳಿದ ಮೋದಿ ಹಾದಿಯನ್ನು ಐವಾಂಕಾ ಹೊಗಳಿದ್ದರು. ಇದರಿಂದ ಬಿಜೆಪಿಗೆ ಮತ್ತಷ್ಟು ಬೂಸ್ಟ್ ಸಿಕ್ಕಿದ್ದು ‘ಚಾಯ್ವಾಲಾ’ ಪದವನ್ನೇ ಬಳಸಿ ಕಾಂಗ್ರೆಸ್ ಮೇಲೆ ಅಕ್ರಮಣ ಮಾಡಲು ಮುಂದಾಗಿದೆ.
ಪಾಠ ಕಲಿಯದ ಕಾಂಗ್ರೆಸ್:
ಒಮ್ಮೆ ಇತಿಹಾಸವನ್ನು ನೋಡಿದಾಗ ಚಾಯ್ ವಾಲಾ ಎಂಬ ಪದ ಮೋದಿ ಅವರಿಗೆ ಒಂಥರಾ ಅದೃಷ್ಟದ ಪದ ಎನಿಸುತ್ತೆ. ಮೋದಿ ವಿರುದ್ಧ ವೈಯಕ್ತಿಕ ವಾಗಿ ದಾಳಿ ಮಾಡಿದಾಗ ಆ ದಾಳಿಗಳು ಮೋದಿ ಪರ ಅಲೆಯನ್ನು ಸೃಷ್ಟಿ ಮಾಡಿವೆ. 2007 ರಲ್ಲಿ ಸೋನಿಯಾ ಗಾಂಧಿ ಮೌತ್ ಕಾ ಸೌದ್ಗಾರ್ (ಸಾವಿನ ಏಜೆಂಟ್) ಎಂದು ಮೋದಿಯನ್ನು ಟೀಕಿಸಿದ್ರು. ಇದನ್ನೇ ಬಳಸಿಕೊಂಡಿದ್ದ ಮೋದಿ ಅಂದು ಗುಜರಾತ್ ವಿಧಾನಸಭೆ ಚುನಾವಣೆ ಹಿಂದೂ ಮತಗಳನ್ನು ಧ್ರುವೀಕರಣ ಮಾಡಿಕೊಂಡು ಗೆಲವು ಸಾಧಿಸಿ ಸಿಎಂ ಆಗಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಯೂಥ್ ಕಾಂಗ್ರೆಸ್ ರೀತಿಯಲ್ಲೇ ಮೋದಿಯನ್ನ ಚಾಯ್ ವಾಲಾ ಅಂತಾ ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ ‘ಚಾಯ್ ಪೇ ಚರ್ಚಾ’ ಅಂತಾ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಯಿತು. ಈಗ ಮತ್ತೆ ಕಾಂಗ್ರೆಸ್ ಚಾಯ್ ವಾಲಾ ಅಸ್ತ್ರ ಪ್ರಧಾನಿ ಕೈಗೆ ಕೊಟ್ಟಿದ್ದು ಮೋದಿ ಗೆಲುವಿನ ಹಾದಿಗೆ ಕಾಂಗ್ರೆಸ್ ಮತ್ತೊಮ್ಮೆ ರೆಡ್ ಕಾರ್ಪೆಟ್ ಹಾಕಿ ಕೊಟ್ಟಿತಾ ಎನ್ನುವ ಪ್ರಶ್ನೆ ಮತ್ತು ವಿಶ್ಲೇಷಣೆ ಈಗ ಆರಂಭವಾಗಿದೆ. (ಇದನ್ನೂ ಓದಿ:ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ)
ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮೋದಿ ಚಹಾ ಮಾರಾಟ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಆರ್ಟಿಐ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ರೈಲ್ವೇ ಇಲಾಖೆ ನೀಡಿದ ಸುದ್ದಿಯನ್ನು ಟ್ವೀಟ್ ಮಾಡಿ ಮೋದಿ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ.
It doesn’t matter if he sold tea or not, whether he came from humble beginnings or not. Everybody has a story to tell. What matters is if he’s capable or not and he’s most evidently not. https://t.co/QtXDoFNPTi
It was an honor to meet with you Prime Minister Modi. Thank you for co-hosting the 8th annual Global Entrepreneurship Summit! @StateDepthttps://t.co/lb3gKv4N26
ಚಾಯ್ ಪೇ ಚರ್ಚಾ ಐಡಿಯಾ ಕೊಟ್ಟಿದ್ದು ಯಾರು?
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಕೀಯ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಮಣಿಶಂಕರ್ ಅಯ್ಯರ್ ಟೀಕೆಗೆ ಸರಿಯಾಗಿಯೇ ತಿರುಗೇಟು ನೀಡಲು ಪ್ರಶಾಂತ್ ಕಿಶೋರ್ ಬಿಜೆಪಿ ನಾಯಕರಿಗೆ ಚಾಯ್ ಪೇ ಚರ್ಚಾ ನಡೆಸಲು ಸಲಹೆ ನೀಡಿದ್ದರು. ಈ ಸಲಹೆ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿಯನ್ನು ತೊರೆದಿದ್ದರು. ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಪರ ಕೆಲಸ ಮಾಡಿ ಜೆಡಿಯು, ಕಾಂಗ್ರೆಸ್, ಆರ್ಜೆಡಿ ಮೈತ್ರಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್, ಬಿಹಾರದಲ್ಲಿ ಯಶಸ್ವಿಯಾಗಿದ್ದ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಉತ್ತರಪ್ರದೇಶಲ್ಲಿ ವಿಫಲವಾಗಿತ್ತು. (ಗುಜರಾತ್ ಚುನಾವಣೆಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಗುಜರಾತ್ ಚುನಾವಣೆ)
आज अहमदाबाद के दरियापुर विधानसभा में बूथ नंबर-98 में आयोजित "मन की बात-चाय के साथ" कार्यक्रम में सभी कार्यकर्ताओं के साथ प्रधानमंत्री श्री @narendramodi जी के #MannKiBaat को सुना। pic.twitter.com/VJ9c7Ie8LU
Fabulous atmosphere in Palitana. Talked about a wide range of local issues and elaborated on the pro-people schemes of the Central and Gujarat Government. Also spoke on the work done to transform the coastal economy, which particularly benefits Saurashtra. pic.twitter.com/LtDSqjCKq3
Addressed a rally in Prachi. It is indeed puzzling to see certain Congress leaders visit the Somnath Temple when their own family members opposed the construction of a grand Temple as envisioned by Sardar Patel. pic.twitter.com/IcejBDJOxm
Here are glimpses from Morbi. Talked about the transformation @BJP4Gujarat has brought about by bringing Narmada waters to the region. Congress model was to bring hand pumps. We instead got SAUNI Yojana that helps farmers and enhances ease of living for citizens pic.twitter.com/LDNX11VirH
Have been addressing rallies across Gujarat. Am happy to see several women come to our rallies to bless us. @BJP4Gujarat is committed to our continued focus on development and inclusive governance. https://t.co/7ORN2UDt0c