Tag: celebration

  • ಅಪ್ಪನ ಸಂಭ್ರಮಾಚರಣೆಗೆ 8ರ ಬಾಲಕ ಬಲಿ

    ಅಪ್ಪನ ಸಂಭ್ರಮಾಚರಣೆಗೆ 8ರ ಬಾಲಕ ಬಲಿ

    ನವದೆಹಲಿ: ಸಂಭ್ರಮಾಚರಣೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನಿಗೆ ಗುಂಡು ಹಾರಿಸಿದ್ದು, ಪರಿಣಾಮ ಮಗ ಸಾವನ್ನಪ್ಪಿರುವ ಘಟನೆ ದೆಹಲಿಯ ಹೊಸ ಉಸ್ಮಾನ್ ಪುರದಲ್ಲಿ ನಡೆದಿದೆ.

    ರೆಹನ್(8) ಮೃತ ದುರ್ದೈವಿ. ಆರೋಪಿ ತಂದೆಯನ್ನು ಯಾಸಿನ್ (42) ಎಂದು ಗುರುತಿಸಲಾಗಿದೆ. ಈ ಘಟನೆ 2018ರ ಡಿಸೆಂಬರ್ 31ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ಯಾಸಿನ್ ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31ರಂದು ರಾತ್ರಿ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೆ ಅದು ಗಾಳಿಯಲ್ಲಿ ಆಕಸ್ಮಿಕವಾಗಿ ಆತನ ಮಗ ರೆಹನ್ ಬಲ ಕೆನ್ನೆಗೆ ಬಿದ್ದಿದ್ದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿಯೇ ರೆಹನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

    ಹೊಸ ಉಸ್ಮಾನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪೋಲೀಸರು ಬಾಲಕನ ತಂದೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ತಿಳಿದು ಬಂದಿದೆ ಎಂದು ಉಪ ಜಿಲ್ಲಾಧಿಕಾರಿ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

    ಆರೋಪಿ ತಂದೆ, ತಾನು ಉತ್ತರ ಪ್ರದೇಶದ ಲೋನಿ ನಿವಾಸಿಯಾದ ರವಿ ಕಶ್ಯಪ್ (21) ಎಂಬಾತನಿಂದ ಗನ್ ತೆಗೆದುಕೊಂಡು ಬಂದಿದ್ದು ಎಂದು ಹೇಳಿದ್ದಾನೆ. ಆತ ಸಂಭ್ರಮಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೆ ಆಕಸ್ಮಿಕವಾಗಿ ಬುಲೆಟ್ ಅಲ್ಲೆ ಇದ್ದ ಮಗನಿಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪ್ರಕರಣ ಸಂಬಂಧ ಆರೋಪಿ ತಂದೆಯನ್ನು ಬಂಧಿಸಿದ್ದು ಜೊತೆಗೆ ಗನ್ ನೀಡಿದ್ದ ಕಶ್ಯಪ್ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾತು ಬಾರದ, ಕಿವಿ ಕೇಳದ ವಿಶೇಷ ಚೇತನರು

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾತು ಬಾರದ, ಕಿವಿ ಕೇಳದ ವಿಶೇಷ ಚೇತನರು

    ಕಾರವಾರ: ಮಾತು ಬಾರದ ಹಾಗೂ ಕಿವಿ ಕೇಳದ ವಿಶೇಷ ಚೇತನರು ಕಾರವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹೊನ್ನಯ್ಯ ಮೊಗೇರ ಹಾಗೂ ಅಂಕಿತಾ ಶಿರೋಡಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊನ್ನಯ್ಯ ಮೊಗೇರ ಭಟ್ಕಳ ತಾಲೂಕಿನ ಸಣ್ಣಬಾವಿ ಗ್ರಾಮದವರಗಿದ್ದು, ಅಂಕಿತಾ ಕಾರವಾರದ ಕಾಜಭಾಗದ ಗ್ರಾಮದ ನಿವಾಸಿಯಾಗಿದ್ದಾರೆ.

    ಹೊನ್ನಯ್ಯ ಮೊಗೇರ ಹಾಗೂ ಅಂಕಿತಾ ಶಿರೋಡಕರ್ ಇಬ್ಬರಿಗೂ ಮಾತು ಬರುವುದಿಲ್ಲ ಹಾಗೂ ಕಿವಿ ಕೇಳುವುದಿಲ್ಲ. ಹೊನ್ನಯ್ಯ ವಾಸ್ತು ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದು, ವಿಶೇಷ ಚೇತನರ ಸಮಾರಂಭವೊಂದರಲ್ಲಿ ಇಬ್ಬರು ಪರಿಚಯವಾಗಿ ಮದುವೆಯಾಗಲು ನಿರ್ಧರಿಸಿದ್ದರು.

    ಹೊನ್ನಯ್ಯ ಹಾಗೂ ಅಂಕಿತಾ ಕಾರವಾರ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆ ಸಮಾರಂಭದಲ್ಲಿ ಬಹುತೇಕ ವಿಶೇಷ ಚೇತನರೇ ಪಾಲ್ಗೊಂಡಿದ್ದು, ಎಲ್ಲರ ಗಮನವನ್ನು ಸೆಳೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆದಿವಾಸಿಗಳ ಜೊತೆ ನಟ ಚೇತನ್ ಹೊಸ ವರ್ಷಾಚರಣೆ

    ಆದಿವಾಸಿಗಳ ಜೊತೆ ನಟ ಚೇತನ್ ಹೊಸ ವರ್ಷಾಚರಣೆ

    ಮಡಿಕೇರಿ: ಇಯರ್ ಎಂಡ್, ನ್ಯೂ ಇಯರ್ ಪಾರ್ಟಿಯನ್ನು ಗೆಳೆಯರ ಜೊತೆ, ಸಂಬಂಧಿಕರ ಜೊತೆ, ಕುಟುಂಬದ ಜೊತೆ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಆದಿವಾಸಿ ಜನರು, ಮಕ್ಕಳ ಜೊತೆ ಸೇರಿ ಹೊಸ ವರ್ಷವನ್ನು ಆಚರಿಸಿದ್ದಾರೆ.

    ಎರಡು ವರ್ಷದ ಹಿಂದೆ ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಆದಿವಾಸಿಗಳ ಹೋರಾಟ ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಅರಣ್ಯ ಇಲಾಖೆಯವರು ಕಾಡಿನಲ್ಲಿ ನೈಸರ್ಗಿಕ ಜೀವನ ನಡೆಸುತ್ತಿದ್ದ ಮಂದಿಯನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರು. ಆ ವೇಳೆ ಆದಿವಾಸಿಗಳು ಮಾಡಿದ್ದ ಹೋರಾಟ ಕೊನೆಗೂ ಸರ್ಕಾರವನ್ನು ಮಂಡಿಯೂರುವಂತೆ ಮಾಡಿತ್ತು. ನಿರಂತರ ಹೋರಾಟದ ಫಲವಾಗಿ 528 ಮನೆಗಳು ನಿರ್ಮಾಣ ಹಂತದಲ್ಲಿದ್ದು, ಕೊನೆಗಾಲದಲ್ಲಾದರೂ ನಮ್ಮದೇ ಆದ ಸೂರು ಸಿಗುವಂತಾಗಬೇಕು ಎನ್ನುವ ಆದಿವಾಸಿಗಳ ಕನಸು ನನಸಾಗುತ್ತಿದೆ.

    ಸೋಮವಾರ ಸಂಜೆಯೇ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಬಳಿಯ ಬಸವನಹಳ್ಳಿಗೆ ಬಂದಿದ್ದ ನಟ ಚೇತನ್ ಇಯರ್ ಎಂಡ್ ಪಾರ್ಟಿಯನ್ನು ಆದಿವಾಸಿ ಜನರ ಜೊತೆ ಹಾಡಿ ಕುಣಿಯುವ ಮೂಲಕ ಸಂಭ್ರಮಿಸಿದರು. ಮಂಗಳವಾರ ಬೆಳಗ್ಗೆ ಬಸವನಹಳ್ಳಿಯ ಪಕ್ಕದ ಬ್ಯಾಡಗೊಟ್ಟದಲ್ಲಿರುವ ಆದಿವಾಸಿಗಳ ಜನರ ಜೊತೆ ಕಾಲ ಕಳೆದರು. ಮಕ್ಕಳಿಗೆ ಪುಸ್ತಕ ಪೆನ್ ನೀಡುವ ಮೂಲಕ ಚೆನ್ನಾಗಿ ಓದಬೇಕು ಅಂತಾ ಬುದ್ಧಿ ಮಾತು ಹೇಳಿದರು. ಎಲ್ಲರಿಗೂ ಬಟ್ಟೆಗಳನ್ನು ನೀಡುವ ಮೂಲಕ ಹೊಸ ವರ್ಷದ ಸಂಭ್ರಮವನ್ನು ಆದಿವಾಸಿಗಳ ಮೊಗದಲ್ಲಿ ಕಾಣಿಸಿಕೊಳ್ಳುವಂತೆ ಚೇತನ್ ಮಾಡಿದರು.

    ಆದಿವಾಸಿಗಳು ಯಾರೂ ಕೂಡ ನಟ ಚೇತನ್ ನಮ್ಮೊಂದಿಗೆ ಬಂದು ಹೊಸ ವರುಷವನ್ನು ಆಚರಿಸುತ್ತಾರೆ ಅಂತಾ ಭಾವಿಸಿರಲಿಲ್ಲ. ಹೊಸ ವರುಷಕ್ಕೆ ದಿಢೀರ್ ಸ್ಯಾಂಡಲ್ ವುಡ್ ನಟ ಬಂದಿದ್ದು ಹಾಡಿ ಜನರಿಗೆ ಅಚ್ಚರಿ ತರಿಸಿತ್ತು. ಚೇತನ್ ರೀಲ್ ಹೀರೋ ಅಲ್ಲ, ರಿಯಲ್ ಹೀರೋ. ನಮ್ಮ ಹೋರಾಟದ ಪ್ರಾರಂಭದ ದಿನಗಳಿಂದಲೂ ನಮ್ಮ ಜೊತೆ ನಿಂತುಕೊಂಡಿರುವುದು ನಮ್ಮಲ್ಲಿ ಹೆಚ್ಚಿನ ಆತ್ಮಸ್ಥೈರ್ಯ ಮೂಡಿಸಿದೆ ಅಂತಾ ಹಾಡಿನ ಜನ ನಟ ಚೇತನ್ ಅವರನ್ನು ಹೊಗಳಿದರು.

    ಹೊಸ ಮನೆಗಳು ನಿರ್ಮಾಣವಾಗ್ತಿರುವ ಬಡಾವಣೆಗೆ ಬಂದ ಚೇತನ್, ಜನರ ಜೊತೆ ಬೆರೆತು ಸಂತಸಪಟ್ಟರು. ಅಷ್ಟೇ ಅಲ್ಲದೇ ತಾತ್ಕಾಲಿಕವಾಗಿ ಹಾಕಿರುವ ಶೆಡ್ ಒಳಗೂ ಹೋಗಿ ಒಂದು ತಿಂಗಳ ಹಸುಗೂಸನ್ನು ನೋಡಿ, ತಾಯಿ ಮಗುವಿನ ಯೋಗಕ್ಷೇಮ ವಿಚಾರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷದ ಖುಷಿಯನ್ನು ಡಬಲ್ ಮಾಡಿಸಿದ ಪುಟಾಣಿ ಜೀವಗಳು

    ಹೊಸ ವರ್ಷದ ಖುಷಿಯನ್ನು ಡಬಲ್ ಮಾಡಿಸಿದ ಪುಟಾಣಿ ಜೀವಗಳು

    ಬೆಂಗಳೂರು: ಹೊಸ ವರ್ಷದ ಸಂಭ್ರಮದ ಜೊತೆಗೆ ಪುಟಾಣಿ ಜೀವಗಳು ಅಮ್ಮಂದಿರ ಮಡಿಲಲ್ಲಿ ಹೊಸ ವರ್ಷದ ಖುಷಿಯನ್ನು ಡಬಲ್ ಮಾಡಿಸಿವೆ.

    ಹೊಸ ವರ್ಷದ ದಿನವೇ ಹುಟ್ಟಿದ ಮಕ್ಕಳ ಅಮ್ಮಂದಿರ ಸಂಭ್ರಮಕ್ಕೆ ಪಾರವೇ ಇಲ್ಲ. ಕೆಲವು ಕಂದಮ್ಮಗಳಂತೂ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹುಟ್ಟಿದ್ದವು. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಧ್ಯರಾತ್ರಿಯಿಂದ ಮಧ್ಯಾಹ್ನದವರೆಗೆ ಹನ್ನೆರಡು ಗಂಟೆವರೆಗೂ ಒಟ್ಟು ಹದಿನಾರು ಹೆರಿಗೆಗಳಾಗಿದೆ.

    ಇಂದು ಸ್ವಾತಿ ನಕ್ಷತ್ರ ತುಲಾ ರಾಶಿ ಒಳ್ಳೆಯ ದಿನ ಎನ್ನುವುದು ಜ್ಯೋತಿಷ್ಯರ ನಂಬಿಕೆ ಆಗಿರುವುದರಿಂದ ಕಂದಮ್ಮಗಳ ಪೋಷಕರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೆಣ್ಣು ಮಗುವೇ ಹೆಚ್ಚು ಹುಟ್ಟಿದ್ದು ಹೊಸ ವರ್ಷದಂದು ಜನಿಸಿದ ಕಂದಮ್ಮಗಳಿಗೆ ಆಸ್ಪತ್ರೆ ಗಿಫ್ಟ್ ನೀಡಿ ದಂಪತಿಗೆ ಶುಭಾಶಯ ಹೇಳಿದೆ.

    ಇತ್ತೀಚಿನ ವರ್ಷಗಳಲ್ಲಿ ಹೊಸ ವರ್ಷಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ನವಮಾಸ ತುಂಬುತ್ತಿದ್ದ ಅಮ್ಮಂದಿರು ನ್ಯೂ ಇಯರ್ ಗೆ ಹೆರಿಗೆ ಮಾಡಿಸಲು ದುಂಬಾಲು ಬೀಳುತ್ತಿದ್ದಾರೆ. ಕೇವಲ ಹೊಸ ವರ್ಷ ಮಾತ್ರ ಅಲ್ಲದೇ ಈ ದಿನ ಹುಟ್ಟುವ ಮಗುವಿನ ಅದೃಷ್ಟವೇ ಬದಲಾಗುತ್ತದೆ ಎನ್ನುವ ನಂಬಿಕೆಯಿದೆ.

    ಫ್ಯಾನ್ಸಿ ನಂಬರ್ ಗಳ ಸೆಳೆತ, ಒಳ್ಳೆಯ ದಿನ ನೋಡಿಯೇ ಡೆಲಿವರಿ ಡೇಟ್ ಅಡ್ಜೆಸ್ಟ್ ಮೆಂಟ್ ಮಾಡುವ ಟ್ರೆಂಡ್ ಈಗ ಸಿಕ್ಕಾಪಟ್ಟೆ ಜೋರಾಗಿದೆ. ಅದರಲ್ಲೂ ಹೆರಿಗೆಗೆ ಅಸುಪಾಸಿನಲ್ಲಿರುವವರು ಹೊಸ ವರ್ಷ ಜನವರಿ ಒಂದರಂದು ಡೆಲಿವರಿ ಮಾಡಿಸಲು ವೈದ್ಯರಿಗೆ ಬೇಡಿಕೆ ಇಡುತ್ತಿದ್ದಾರೆ. ರಿಸ್ಕಿ ಇಲ್ಲದ ಡೆಲಿವರಿಗಳನ್ನು ಅವರ ಇಷ್ಟದ ದಿನವೇ ಮಾಡಬಹುದು. ಆದರೆ ಸ್ವಾಭಾವಿಕವಾಗಿ ಹೆರಿಗೆ ನೋವು ಬಂದಾಗ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಈ ಹಿಂದೆ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೂರಾಡ್ಬೇಡ ಮನೆಗೆ ಹೋಗು ಅಂದಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆಗೆ ಯತ್ನಿಸಿದ!

    ತೂರಾಡ್ಬೇಡ ಮನೆಗೆ ಹೋಗು ಅಂದಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆಗೆ ಯತ್ನಿಸಿದ!

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪೊಲೀಸರಿಗೆ ಕುಡುಕರು ಆವಾಜ್ ಹಾಕಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಇಂದಿರಾನಗರ 100 ಫೀಟ್ ಸುತ್ತಾಮುತ್ತ ಯುವಕರು ಕುಡಿದು ಹೊಸವರ್ಷ ಆಚರಣೆ ಮಾಡಿದ್ದಾರೆ. ಕುಡಿದು ರಸ್ತೆಯಲ್ಲಿ ತೂರಾಡೊದನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರಿಗೆ ಫುಲ್ ಅವಾಜ್ ಹಾಕಿದ್ದಾರೆ.

    ಸಂಭ್ರಮಾಚರಣೆಯ ವೇಳೆ ಕೆಲ ಯುವಕರು ಸಾಕಷ್ಟು ಪಾನಮತ್ತರಾಗಿದ್ದರು. ಪಾನಮತ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮುನ್ನ ಅವರಲ್ಲಿ ಮನವಿ ಮಾಡಿಕೊಳ್ಳಿ ಅಂತ ಕಮಿಷನರ್ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾನಮತ್ತರನ್ನು ಮನವೊಲಿಸಿ ಮನೆಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದರು.

    ಪೊಲೀಸರು ಕೇರಳ ಮೂಲದ ಯುವಕನ ಬಳಿಯೂ ಮನೆಗೆ ಹೋಗುವಂತೆ ಕೇಳಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಯುವಕ ಇಂದಿರಾ ನಗರ ಪೊಲೀಸ್ ಇನ್ಸ್ ಪೆಕ್ಟರ್ ರವಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದ್ರೆ ಪೊಲೀಸರು ಯುವಕನ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆತ ಕುಡಿದ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಆತನನ್ನು ಮನೆಗೆ ಕಳುಹಿಸಿದ್ದಾರೆ ಅನ್ನೋ ಮಾಹಿತಿ ದೊರೆತಿದೆ.

    ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಳ್ಳರು ಕೂಡ ತಮ್ಮ ಕೈಚಳ ತೋರಿಸಿದ್ದಾರೆ 50ಕ್ಕೂ ಹೆಚ್ಚು ಮೊಬೈಲ್ ಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ನಲ್ಲಿ ಸಾವಿರಾರು ಮಂದಿ ಸೇರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಚರಣೆಯ ಮಧ್ಯೆ ಕೆಲ ಪುಂಡರು ತಮ್ಮ ಕೈಚಳಕ ತೋರಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಶೋಕನಗರ ಪೊಲೀಸ್ ಠಾಣೆಯ ಎದುರು ಮೊಬೈಲ್ ಕಳೆದುಕೊಂಡ ಜನ ಕೇಸ್ ದಾಖಲಿಸಿಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಯುವಕರಿಂದ ಕ್ಯಾಂಡಲ್ ಮಾರ್ಚ್

    ಹೊಸ ವರ್ಷಕ್ಕೆ ಯುವಕರಿಂದ ಕ್ಯಾಂಡಲ್ ಮಾರ್ಚ್

    ಬೆಳಗಾವಿ (ಚಿಕ್ಕೋಡಿ): ಅಥಣಿ ಪಟ್ಟಣದ ಜನತೆ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    ಹೊಸ ವರ್ಷ ಬಂದ್ರೆ ಸಾಕು ಪಾರ್ಟಿ ಮಾಡ್ಕೊಂಡು, ಮೋಜು ಮಸ್ತಿ ಅಂತ ಆಚರಿಸುವ ಯುವಕರೇ ಹೆಚ್ಚು. ಆದ್ರೆ ಅಥಣಿ ಪಟ್ಟಣದಲ್ಲಿ ಮಾತ್ರ ಯುವಕರು ಶಾಂತಿಯುತವಾಗಿ ಮೇಣದ ಬತ್ತಿ ಬೆಳಗಿಸಿ, ಮೆರವಣಿಗೆ ಹೋಗುವ ಮೂಲಕ ವಿಶಿಷ್ಠವಾಗಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಹಾಗೆಯೇ ಈ ಅರ್ಥಪೂರ್ಣ ಆಚರಣೆಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದು, ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ 20ಕ್ಕೂ ಹೆಚ್ಚು ಮಂದಿ ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಮೋಜು ಮಸ್ತಿಯಿಂದ ಹೊರಗುಳಿದು ಶಾಂತಿಯುತವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    2018ರ ಸಾಲಿನಲ್ಲಿ ಕರ್ನಾಟಕದಲ್ಲಾದ ದುರಂತಗಳಿಂದ ಸಾವನ್ನಪ್ಪಿದ ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೇಣದ ಬತ್ತಿ ಹೊತ್ತಿಸಿ ಪ್ರಾರ್ಥಿಸಿದರು. ಕೊಡಗಿನಲ್ಲಾದ ಪ್ರವಾಹದಲ್ಲಿ ಮಡಿದವರಿಗೆ ಮತ್ತು ಸುಳ್ವಾಡಿ ದುರಂತ ಹಾಗೂ ಮಂಡ್ಯ ಬಸ್ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವ ಮೂಲಕ ಹೊಸ ವರ್ಷದ ಆಚರಣೆಯನ್ನು ಅರ್ಥಪೂರ್ಣವಾಗಿ ಯುವಕರು ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ರಸ್ತೆ ಬದಿಯಲ್ಲಿರುವವರಿಗೆ ಬಟ್ಟೆ, ಬೆಡ್‍ಶೀಟ್ ಹಂಚಿದ ಅಂಧ ಕ್ರಿಕೆಟಿಗ

    ಹೊಸ ವರ್ಷಕ್ಕೆ ರಸ್ತೆ ಬದಿಯಲ್ಲಿರುವವರಿಗೆ ಬಟ್ಟೆ, ಬೆಡ್‍ಶೀಟ್ ಹಂಚಿದ ಅಂಧ ಕ್ರಿಕೆಟಿಗ

    ಬೆಂಗಳೂರು: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ರಾಜ್ಯದ ಜನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಾವಿರಾರು ಯುವಕ-ಯುವತಿಯರು ರಸ್ತೆಗೆ ಇಳಿದು ನೃತ್ಯ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಆದರೆ ಅಂಧ ಕ್ರಿಕೆಟಿಗರೊಬ್ಬರು ರಸ್ತೆ ಬದಿ ಅನಾಥರಿಗೆ ಊಟ, ಬಟ್ಟೆ, ಬೆಡ್ ಶೀಟ್ ನೀಡುವ ಮೂಲಕ ಹೊಸ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

    ಬೆಂಗಳೂರಿನ ಸಿಟಿ ಮಾರ್ಕೆಟ್ ಸುತ್ತಮುತ್ತಲಿನ ಏರಿಯಾಗಳಲ್ಲಿ ಊಟ, ಬಟ್ಟೆ ನೀಡಲಾಯಿತು. ಅಂತರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಕುಟುಂಬ ಸಮೇತರಾಗಿ ಬಂದು ಬಡವರಿಗೆ ಬಟ್ಟೆ, ಫುಡ್ ವಿತರಿಸಿ ವಿಭಿನ್ನವಾಗಿ ಆಚರಿಸಿದರು.

    ಕಳೆದ ಹೊಸ ವರ್ಷದಲ್ಲೂ ಶೇಖರ್ ನಾಯ್ಕ್ ಸಿಲಿಕಾನ್ ಸಿಟಿಯ ಸೆಂಟರ್‍ನ ಕೆ.ಆರ್ ಮಾರ್ಕೆಟ್‍ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಿದ್ದರು. ಶೇಖರ್ ನಾಯ್ಕ್ ಯುವ ಜನತೆಗೆ ಮಾದರಿಯಾಗುವ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದರು. ಕೆ.ಆರ್ ಮಾರ್ಕೆಟ್, ವಿವಿ ಪುರ, ಜೆಪಿ ನಗರದಲ್ಲಿ ನಿರಾಶ್ರಿತರಿಗೆ ತಿಂಡಿ ಹಾಗೂ ಹೊದಿಕೆಯನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಚಳಿಯಲ್ಲಿ ಬೀದಿಯಲ್ಲೇ ಮಲಗಿರುವವರಿಗೆ ಹೊದಿಕೆ, ತಿಂಡಿ ನೀಡಿ ಹೊಸ ವರ್ಷಾಚರಣೆಯಲ್ಲೂ ಮಾನವೀಯತೆ ಮೆರೆದಿದ್ದರು.

    2019 ಹೊಸ ವರ್ಷದ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಬೆಂಗಳೂರಿನ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಕ್ಲಬ್‍ಗಳಲ್ಲಿ ಪಾರ್ಟಿಗಳು ಜೋರಾಗಿತ್ತು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತ್ತು. ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಿತ್ತು. ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ವಿಮಾನ ನಿಲ್ದಾಣ ರಸ್ತೆ, ತುಮಕೂರು ರೋಡ್‍ನ ಫ್ಲೈಓವರ್ ಹೊರತುಪಡಿಸಿ ಬೆಂಗಳೂರಿನ ಎಲ್ಲಾ ಫ್ಲೈಓವರ್‍ಗಳಲ್ಲಿ ಸಂಚಾರವನ್ನು ರದ್ದು ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಬೆಂಗಳೂರು: 2018 ಇಯರ್ ಎಂಡ್ ಸೆಲೆಬ್ರೇಶನ್ ಸಿಲಿಕಾನ್ ಸಿಟಿ ಜೋರಾಗಿದ್ದು, ಹೊಸ ವರ್ಷದ ಆಚರಣೆಯ ಮೂಡ್ ನಲ್ಲಿ ನಗರದ ಬಹುತೇಕ ಮದ್ಯದಂಗಡಿ ಫುಲ್ ರಶ್ ಆಗಿದೆ.

    ಮಟ ಮಟ ಮಧ್ಯಾಹ್ನವೇ ಗಂಟಲಿಗೆ ಪೆಗ್ ಇಳಿಸಿಕೊಂಡಿರುವ ಕುಡುಕರು ಎಣ್ಣೆ ಕಿಕ್‍ನಲ್ಲಿದ್ದಾರೆ. ಬೆಂಗಳೂರು ರೋಡ್‍ನಲ್ಲಿ ಕೆಲವರು ಡಿಸ್ಕೋ ಡ್ಯಾನ್ಸ್ ಶುರು ಮಾಡಿದರೆ, ಮತ್ತೆ ಕೆಲವರು ವಿವಿಧ ಭಂಗಿಗಳಲ್ಲಿ ಆಕಾಶ ನೋಡುತ್ತಾ ನಿದ್ರೆ ಲೋಕಕ್ಕೆ ಜಾರಿದ್ದಾರೆ. ಇನ್ನು ಕೆಲವರು ಟೈಟ್ ಆಗಿ ಕೈಕಾಲು ನೆಲದಲ್ಲಿ ನಿಲ್ಲದೇ ತೂರಾಡುತ್ತಾ ಫುಲ್ ಝೂಮ್‍ನಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ವಿಶ್ ಮಾಡುತ್ತಿದ್ದಾರೆ.

    ಅಷ್ಟೇ ಅಲ್ಲದೇ ರಾತ್ರಿಗೂ ರೌಂಡ್ ಟೇಬಲ್‍ಗೆ ಫುಲ್ ಪ್ಲಾನ್ ನಡೆಯುತ್ತಿದೆ. ಮುಂದಿನ ವರ್ಷ ಎಣ್ಣೆ ಮುಟ್ಟಲ್ಲ ಅಂತಾ ಕೆಲ ಕುಡುಕರು ಹುಸಿ ಪ್ರಾಮಿಸ್ ಬೇರೆ ಮಾಡಿದ್ದಾರೆ. ಇನ್ನು ಕೆಲವರು ಮುಂದಿನ ವರ್ಷದಿಂದ ಎಣ್ಣೆ ರೇಟು ಕಡಿಮೆ ಆದರೆ ಅದೇ ದೊಡ್ಡ ಗಿಫ್ಟ್. ಆದರೆ ಅವರು ರೇಟ್ ಕಡಿಮೆ ಮಾಡುವುದಿಲ್ಲ, ನಾವು ಕುಡಿಯೋದು ಬಿಡಂಗಿಲ್ಲ ಅಂತಾ ಫೀಲ್ ನಲ್ಲಿ ಮಾತನಾಡಿದ್ದಾರೆ.

    ನಗರದಲ್ಲಿ ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನೆಲ್ಲೆಡೆ ಬಿಗಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಬಂದೋಬಸ್ತ್‍ಗಾಗಿ 5 ಜನ ಹೆಚ್ಚುವರಿ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿಗಳು, 220 ಇನ್ಸ್ ಪೆಕ್ಟರ್, 430 ಪಿಎಸ್‍ಐ, 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೆಯೇ ಹೋಂಗಾರ್ಡ್ 1500, ಗರುಡಾ ಪೋರ್ಸ್ 1, ಕ್ಯೂಅರ್ಟಿ 2 ಪಡೆ, ವಾಟರ್ ಜೆಟ್ 2, ಕೆಎಸ್‍ಆರ್ ಪಿ 50 ತುಕಡಿ, ಸಿಎಆರ್ 30 ತುಕಡಿಗಳನ್ನು ನಿಯೋಜಿಸಲಾಗಿದೆ.

    ನಗರದ ಜನದಟ್ಟನೆ ಇರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ 1 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗೆಯೇ 15 ವಾಚ್ ಟವರ್, ನಾಲ್ಕು ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಣ್ಗಾವಲು

    ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಣ್ಗಾವಲು

    ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ರಾಜಧಾನಿಯೆಲ್ಲೆಡೆ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂದು ಕಟ್ಟೆಚ್ಚರ ವಹಿಸಿದ್ದಾರೆ.

    ಇಂದು ಸಂಜೆಯಿಂದಲೇ ನಗರದೆಲ್ಲೆಡೆ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಲು ಮುಂದಾಗಿದೆ. ನಗರದಲ್ಲಿ ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಬಂದೋಬಸ್ತ್ ಗೆ  5 ಜನ ಹೆಚ್ಚುವರಿ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿಗಳು, 220 ಇನ್ಸ್‌ಪೆಕ್ಟರ್‌, 430 ಪಿಎಸ್‍ಐ, 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೆಯೇ ಹೋಂಗಾರ್ಡ್ 1500, ಗರುಡಾ ಪೋರ್ಸ್ 1, ಕ್ಯೂಅರ್ಟಿ 2 ಪಡೆ, ವಾಟರ್ ಜೆಟ್ 2, ಕೆಎಸ್‍ಆರ್‍ಪಿ 50 ತುಕಡಿ, ಸಿಎಆರ್ 30 ತುಕಡಿಗಳನ್ನು ಏರ್ಪಡಿಸಲಾಗಿದೆ. ಅಷ್ಟೇ ಅಲ್ಲದೆ ನಗರದ ಜನದಟ್ಟನೆ ಇರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ 1 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗೆಯೇ 15 ವಾಚ್ ಟವರ್, ನಾಲ್ಕು ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಇದನ್ನೂ ಓದಿ: 2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    ಇದಷ್ಟೇ ಅಲ್ಲದೆ ಕಬ್ಬನ್ ಪಾರ್ಕ್‍ನಲ್ಲಿ ಭದ್ರತೆ ಮತ್ತು ಅನೈತಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇವುಗಳಿಗೆ ಬ್ರೇಕ್ ಹಾಕಲು ತೋಟಗಾರಿಕಾ ಇಲಾಖೆ 120 ಸಿಸಿಟಿವಿ ಅಳವಡಿಕೆಗೆ ಮುಂದಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ, ಸಂಸದ ಪಿ.ಸಿ ಮೋಹನ್ ಅವರು 1 ಕೋಟಿ ರೂಪಾಯಿ ಅನುದಾನದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿಸುತ್ತಿದ್ದಾರೆ. ಪ್ರಥಮ ಹಂತದಲ್ಲಿ 60 ಲಕ್ಷ ರೂಪಾಯಿ ಅನುದಾನದಲ್ಲಿ ಕಾಮಗಾರಿ ಶುರು ಮಾಡಲಾಗುತ್ತಿದೆ. ಸಿಸಿಟಿವಿ ಸೇರಿದಂತೆ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ. ಸದ್ಯದಲ್ಲೇ ಸಿಸಿಟಿವಿ ಅಳವಡಿಕೆ ಕಾರ್ಯ ಶುರು ಮಾಡಲಾಗುತ್ತದೆ ಎಂದು ಮಾಹಿತಿ ದೊರಕಿದೆ.

    ಅದೇನೆ ಆಗಲಿ ಹೊಸ ವರ್ಷದ ಸಂಭ್ರಮದಲ್ಲಿ ಪೊಲೀಸ್ ಇಲಾಖೆಯವರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರು ನ್ಯೂ ಇಯರ್ ಆಚರಿಸಲಿ ಎಂದು ಶ್ರಮ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಜಿನ ನಗರಿಯಲ್ಲಿ ಪ್ರವಾಸಿಗರ ಕಲರವ

    ಮಂಜಿನ ನಗರಿಯಲ್ಲಿ ಪ್ರವಾಸಿಗರ ಕಲರವ

    ಮಡಿಕೇರಿ: ಸುಂದರ ಪ್ರಕೃತಿಯ ಮಡಿಲಲ್ಲಿನ ಪ್ರವಾಸಿ ತಾಣಗಳಲ್ಲಿ ನ್ಯೂ ಇಯರ್ ಆಚರಿಸೋಕೆ ಒಂಥರಾ ಮಜಾ, ಹಾಗಾಗಿ ಕೊಡಗಿನತ್ತ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು ಹೊಸ ವರ್ಷಕ್ಕೆ ಒಂದು ದಿನ ಬಾಕಿ ಇರುವಂತೆಯೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಕಲರವ ಆರಂಭವಾಗಿದೆ.

    ವರ್ಷದ ಕೊನೆಗೆ ಬೈ ಬೈ ಹೇಳಿ ನ್ಯೂ ಇಯರ್ ವೆಲ್ ಕಮ್ ಮಾಡ್ಕೊಳ್ಳೋ ಟೈಮ್ ಅತ್ಯಂತ ಅಮೂಲ್ಯವಾದದ್ದು. ಅಂತಹ ಕ್ಷಣಗಳನ್ನು ಕಳೆಯೋಕೆ ಪ್ರೇಕ್ಷಣಿಯ ಸ್ಥಳಗಳನ್ನು ಆಯ್ಕೆ ಮಾಡೋರ ಮನಸ್ಸು ಕೊಡಗಿನತ್ತ ಸೆಳೆಯುತ್ತಿದೆ. ನಗರದ ತುಂಬೆಲ್ಲಾ ಕಂಡು ಬರುತಿರೋ ವಾಹನ ದಟ್ಟಣೆ, ಪ್ರವಾಸಿ ತಾಣಗಳಲ್ಲಿ ತುಂಬಿರುವ ಪ್ರವಾಸಿಗರು, ತಂಪಾದ ಗಾಳಿ, ಸುತ್ತಲು ಹಚ್ಚ ಹಸಿರ ಪ್ರಕೃತಿಯ ನಡುವೆ ಪ್ರವಾಸಿಗರ ಕಲರವೇ ಕಾಣಸಿಗುತ್ತದೆ. ಪ್ರವಾಸಿಗರ ಸ್ವರ್ಗ ಅಂತಾನೆ ಕರೆಸಿಕೊಳ್ಳೊವ ಕೊಡಗು ಜಿಲ್ಲೆಯಲ್ಲಿ ಎಲ್ಲಿ ನೋಡಿದರಲ್ಲಿ ಪ್ರವಾಸಿಗರ ದಂಡು. 2018ಕ್ಕೆ ವಿದಾಯ ಹೇಳಿ 2019ನ್ನು ಸ್ವಾಗತ ಮಾಡ್ಕೊಳ್ಳೋದರ ಎಫೆಕ್ಟ್ ಇದು. ಹೊಸ ವರ್ಷವನ್ನು ಕೊಡಗಿನ ಸುಂದರ ಪ್ರಕೃತಿಯ ಮಡಿಲಲ್ಲಿ ಆಚರಣೆ ಮಾಡ್ಬೇಕು ಅಂತ ಕೂರ್ಗದ ಕಡೆಗೆ ಪ್ರವಾಸಿಗರು ಮುಖ ಮಾಡಿದ್ದಾರೆ. ಕೊಡಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಯರ್ ಎಂಡ್ ಕ್ಷಣಗಳನ್ನು ಕಳೆಯುತ್ತಾ ಹೊಸ ವರ್ಷಕ್ಕೆ ಎದುರು ನೋಡ್ತಿದ್ದಾರೆ.

    ಕೊಡಗಿನಲ್ಲಿ ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪದ ನೋವಿನ ನಡುವೆ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದೆ. ಬಿಕೋ ಎನ್ನುತ್ತಿದ್ದ ಕೊಡಗೀಗ ಜನರಿಂದ ತುಂಬಿದೆ. ಜಿಲ್ಲೆಯ ಹೋಂ ಸ್ಟೇ, ಹೋಟೆಲ್, ಲಾಡ್ಜ್ ಗಳು ಕಂಪ್ಲೀಟ್ ಆಗಿ ಬುಕ್ ಆಗಿವೆ. ಇಯರ್ ಎಂಡ್ ಹಾಗೂ ನ್ಯೂ ಇಯರ್ ಆಚರಣೆಗೆ ಅಂತಾನೆ ವಿಶೇಷ ಕಾರ್ಯಕ್ರಮಗಳು ನಡಿಯುತ್ತಿರೋ ಕಾರಣಕ್ಕೆ ಕೊಡಗು ಸದ್ಯ ಪ್ರವಾಸಿಗರಿಂದ ಆವೃತವಾಗಿದೆ.

    ಅದರಲ್ಲೂ ಮಂಜಿನ ನಗರಿಯ ಮಕುಟಮಣಿ ಅಂತಾನೆ ಕರೆಯೋ ರಾಜಾಸೀಟ್ ಉದ್ಯಾನವನದಲ್ಲಂತೂ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ. ಇನ್ನೂ ಪ್ರಮುಖ ಪ್ರವಾಸಿ ತಾಣಗಳಾದ ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ದುಬಾರೆ, ನಿಸರ್ಗಧಾಮ ಎಲ್ಲಾ ಕಡೆಗಳಲ್ಲೂ ಪ್ರವಾಸಿಗರ ಕಲರವ ಜೋರಾಗಿದೆ. ಕಹಿ ಘಟನೆಗಳನ್ನು ಮರೆತು, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸ ವರ್ಷದ ಸುಂದರ ಕ್ಷಣಗಳನ್ನು ಎದುರು ನೋಡ್ತಿದ್ದಾರೆ ಪ್ರವಾಸಿಗರು.

    2018ಕ್ಕೆ ವಿದಾಯ ಹೇಳೋ ಗಳಿಗೆಯಲ್ಲಿ ಕೊಡಗು ಪ್ರವಾಸಿಗರಿಂದ ತುಂಬಿದೆ. ತೆರೆಮರೆಯಲ್ಲಿ ಸೂರ್ಯಾಸ್ತದ ಮೂಲಕ ಸರಿಯುತ್ತಿರೋ 2018ಕ್ಕೆ ವಿದಾಯ ಹೇಳಿ 2019ನ್ನು ಸ್ವಾಗತ ಮಾಡ್ಕೊಳ್ಳೋ ತವಕದಲ್ಲಿರೋ ಪ್ರವಾಸಿಗರು ಕೊಡಗನ್ನು ಆಯ್ಕೆ ಮಾಡಿಕೊಂಡು ಕಾಫಿಯ ನಾಡಿಗೆ ಲಗ್ಗೆ ಇಟ್ಟಿದ್ದಾರೆ. ಅದೇನೆ ಆಗ್ಲಿ ಹೊಸ ವರ್ಷಾಚರಣೆಯ ಸಂತಸದಲ್ಲಿರೋ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳತ್ತ ಒಂದೊಂದು ರೌಂಡ್ಸ್ ಹಾಕುತ್ತಾ ಸಖತ್ ಎಂಜಾಯ್ ಮಾಡ್ತಿರೋದಂತೂ ಸತ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv