Tag: CCTV camera

  • ಹಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕದಿಯುತ್ತಿರುವ ಸೈಕೋ

    ಹಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕದಿಯುತ್ತಿರುವ ಸೈಕೋ

    ಶಿವಮೊಗ್ಗ: ಸೈಕೋ ವ್ಯಕ್ತಿಯೊಬ್ಬ ಹಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕದಿಯುತ್ತಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಸತೀಶ್ ಎಂಬ ಶಿಕ್ಷಕರ ಮನೆಯಲ್ಲಿ ಬಟ್ಟೆಯನ್ನು ತೊಳೆದು ಒಣಗಿಸುವುದಕ್ಕೆ ಹಾಕಿದ್ದರು. ಆದರೆ ಅಲ್ಲಿಗೆ ಬಂದಂತಹ ಸೈಕೋ ಮಹಿಳೆಯರ ಒಳಉಡುಪನ್ನು ಮಾತ್ರ ಕದಿಯುತ್ತಿದ್ದನು. ಈ ರೀತಿ ಪ್ರತಿದಿನ ಆ ವ್ಯಕ್ತಿ ಮಹಿಳೆಯರ ಒಳುಉಡುಪನ್ನು ಕದಿಯುತ್ತಿದ್ದನು. ಹೀಗಾಗಿ ಮನೆ ಮಾಲೀಕ ಸತೀಶ್ ತಮ್ಮ ಮನೆಗೆ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದರು.

    ಸೈಕೋ ವ್ಯಕ್ತಿ ಉಡುಪು ಕದಿಯುತ್ತಿದ್ದ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಒಳಉಡುಪು ಕದಿಯುತ್ತಿದ್ದ ಸೈಕೋ ಅದೇ ಗ್ರಾಮದ ಮನುಕುಮಾರ್ ಎಂದು ಪತ್ತೆ ಹಚ್ಚಲಾಗಿದೆ.

    ಈ ಬಗ್ಗೆ ಗ್ರಾಮಸ್ಥರು ಮನುಕುಮಾರ್ ನನ್ನು ವಿಚಾರಿಸಿದರೆ ನಾನು ಯಾವುದೇ ಒಳ ಉಡುಪು ಕದ್ದಿಲ್ಲ ಎಂದು ವಾದಿಸಿದ್ದಾನೆ. ನಂತರ ಆತನಿಗೆ ಸಿಸಿಟಿವಿ ದೃಶ್ಯಗಳನ್ನು ತೋರಿಸಿದಾಗ ಬೇರೆ ದಾರಿ ಕಾಣದೇ ಅದು ನಾನೇ ಎಂದು ಒಪ್ಪಿಕೊಂಡಿದ್ದಾನೆ.

    ಈ ಘಟನೆ ಬಳಿಕ ಸೈಕೋ ಮನುಕುಮಾರ್ ಕುಟುಂಬಸ್ಥರು ಮನೆ ಮಾಲೀಕ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿರುವ ಸತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿರತೆಯೊಂದು ಸೈಲೆಂಟಾಗಿ ಸಿಟಿಗೆ ಎಂಟ್ರಿಕೊಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    ಚಿರತೆಯೊಂದು ಸೈಲೆಂಟಾಗಿ ಸಿಟಿಗೆ ಎಂಟ್ರಿಕೊಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಚಿರತೆಯೊಂದು ಸೈಲೆಂಟಾಗಿ ರಾತ್ರಿ ಎಂಟ್ರಿ ಕೊಟ್ಟಿದೆ.

    ಗಂಗಾವತಿಯ ಸಾಯಿನಗರದ ಸಿಮೆಂಟ್ ಬ್ರಿಕ್ಸ್ ಘಟಕದ ಆವರಣದಲ್ಲಿ ತಡರಾತ್ರಿಗೂ ಮುನ್ನವೇ ಬಂದ ಚಿರತೆ ಆವರಣದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಈ ಎಲ್ಲ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಮುಂಜಾನೆ ಎದ್ದು ಬಂದ ಸಿಮೆಂಟ್ ಬ್ರಿಕ್ಸ್ ಘಟಕದ ಮಾಲೀಕ ತಾನು ಸಾಕಿದ ನಾಯಿಯನ್ನು ಹುಡುಕಿದ್ದಾರೆ. ಅದು ಕಾಣದೆ ಇದ್ದಾಗ ಕಚೇರಿಯಲ್ಲಿದ್ದ ಸಿಸಿಟಿವಿಯನ್ನು ಚೆಕ್ ಮಾಡಿದಾಗ ಚಿರತೆ ಬಂದು ನಾಯಿಯನ್ನು ಎಳೆದುಕೊಂಡು ಹೋಗಿರುವ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.

    ಈ ಕುರಿತು ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು ಪ್ರತಿ ವರ್ಷ ಮಾರ್ಚ್, ಎಪ್ರಿಲ್, ಮೇ, ಜೂನ್ ವೇಳೆ ಆಹಾರ ಅರಿಸಿ ಕಾಡು ಪ್ರಾಣಿಗಳು ನಗರಕ್ಕೆ ಲಗ್ಗೆ ಇಡುತ್ತಿವೆ. ಕಳೆದ ಬಾರಿ ಕೂಡ ಚಿರತೆ, ಕರಡಿಗಳು ಬಂದು ಹೋಗಿದ್ದವು. ಈ ಕುರಿತು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲಾ. ಹೇಳಿದರೆ ಅವು ಬರ್ತಾವೆ ಹೋಗ್ತಾವೆ ಎಂಬ ಹಾರಿಕೆ ಉತ್ತರ ನಿಡ್ತಾರೆ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

  • ಗಮನಿಸಿ, ವೈರಲ್ ಆಗಿರುವ ಸ್ಫೋಟದ ವಿಡಿಯೋ ಪುಲ್ವಾಮ ದಾಳಿಯದ್ದು ಅಲ್ಲ!

    ಗಮನಿಸಿ, ವೈರಲ್ ಆಗಿರುವ ಸ್ಫೋಟದ ವಿಡಿಯೋ ಪುಲ್ವಾಮ ದಾಳಿಯದ್ದು ಅಲ್ಲ!

    ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಬಸ್ಸಿಗೆ ಆತ್ಮಾಹುತಿ ವ್ಯಕ್ತಿಯಿದ್ದ ಕಾರು ಡಿಕ್ಕಿಹೊಡೆದ ಸ್ಫೋಟದ ದೃಶ್ಯ ಎಂದು ವಿಡಿಯೋ ಒಂದು ವೈರಲ್ ಆಗಿದೆ. ಆದರೆ ವೈರಲ್ ಆಗಿರುವ ವಿಡಿಯೋ ಸಿರಿಯಾದಲ್ಲಿ ನಡೆದ ಘಟನೆ ಎನ್ನುವುದು ದೃಢಪಟ್ಟಿದೆ.

    ಪುಲ್ವಾಮದಲ್ಲಿ ದಾಳಿ ನಡೆದ ಬಳಿ 9 ಸೆಕೆಂಡ್ ಇರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದ ಇಮೇಜ್ ತೆಗೆದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಆನೇಕ ವೆಬ್‍ಸೈಟ್‍ಗಳಲ್ಲಿ ಈ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.

    ವಿಡಿಯೋ ಎಲ್ಲಿಯದ್ದು?
    ವೈರಲ್ ಆಗಿರುವ ಸ್ಫೋಟ ನಡೆದಿದ್ದು ಸಿರಿಯಾ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿರು ಅಲ್-ರಾಯ್ ಎಂಬ ಪಟ್ಟಣದಲ್ಲಿ. ಫೆಬ್ರವರಿ 12 ರಂದು ನಡೆದ ಈ ಕಾರು ಬಾಂಬ್ ಸ್ಫೋಟದಲ್ಲಿ ಮೂವರು ಭದ್ರತಾ ಸಿಬ್ಬಂದಿ ಹಾಗೂ ನಾಲ್ಕು ಜನ ಸಾರ್ವಜನಿಕರು ಗಾಯಗೊಂಡಿದ್ದಾರೆ. ಈ ವಿಡಿಯೋ ಫೆ.12 ರಂದೇ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಆಗಿದೆ.

    ಉತ್ತರ ಸಿರಿಯಾದ ಪಟ್ಟಣ ಅಲ್-ರಾಯ್ 2016ರವರೆಗೂ ಐಸಿಸ್ ಉಗ್ರರ ಹಿಡಿತದಲ್ಲಿತ್ತು. ಸದ್ಯ ಅದ ಮೇಲೆ ಟರ್ಕಿ ಬೆಂಬಲಿತ ಭಿನ್ನಮತೀಯರ ಗುಂಪು ಹಿಡಿತ ಸಾಧಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ದಾವಣಗೆರೆ: ಕರ್ತವ್ಯ ನಿರತ ಸರ್ಕಾರಿ ವೈದ್ಯರೊಬ್ಬರ ಕೊರಳಪಟ್ಟಿ ಹಿಡಿದು ಎಳೆದಾಡಿ, ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ತಮ್ಮ ಪುತ್ರನಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿ ವೈದ್ಯ ಮಲ್ಲಪ್ಪ ಅವರ ಮೇಲೆ ಜಗಳೂರು ನಿವಾಸಿಗಳಾದ ಸುನಿಲ್ ಎಂಬವರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸುನಿಲ್‍ಗೆ ಆತನ ಸಂಬಂಧಿ ಸೋಮಶೇಖರ್ ಕೂಡ ಸಾಥ್ ನೀಡಿದ್ದಾನೆ. ಇಬ್ಬರು ಸೇರಿ ಮಲ್ಲಪ್ಪ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಸ್ಥಳೀಯರು ಹಲ್ಲೆಯನ್ನು ತಡೆದಿದ್ದಾರೆ.

    ಈ ಘಟನೆಯು ಜನವರಿ 9ರಂದು ನಡೆದಿದ್ದು, ವೈದ್ಯರ ಮೇಲೆ ಆರೋಪಿಗಳು ಹಲ್ಲೆ ಮಾಡುತ್ತಿರುವ ದೃಶ್ಯ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ವೈದ್ಯ ಮಲ್ಲಪ್ಪ ಅವರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ಬದಿಗೆ ಬೈಕ್ ಪಾರ್ಕ್ ಮಾಡುವ ಮುನ್ನ ಈ ಸ್ಟೋರಿ ಓದಿ

    ರಸ್ತೆ ಬದಿಗೆ ಬೈಕ್ ಪಾರ್ಕ್ ಮಾಡುವ ಮುನ್ನ ಈ ಸ್ಟೋರಿ ಓದಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಗುರಪ್ಪನಪಾಳ್ಯದಲ್ಲಿ ಬೈಕ್ ಕದ್ದು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಗುರಪ್ಪನಪಾಳ್ಯ ನಿವಾಸಿ ದೀಪಕ್ ಎಂಬವರ ಬೈಕ್ ಅನ್ನು ಡಿಸೆಂಬರ್ 28ರಂದು ರಾತ್ರಿ 1 ಸುಮಾರಿಗೆ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ಕುರಿತು ದೀಪಕ್ ಸದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾ ದೃಶ್ಯ ಸಿಕ್ಕಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಈ ಖತರ್ನಾಕ್ ಕಳ್ಳರು ಬೆಳಗ್ಗೆಯಿಂದ ಸಂಜೆವರೆಗೆ ಬೈಕ್ ಮೇಲೆ ತಿರುಗಾಡಿ ಕಳ್ಳತನಕ್ಕೆ ಪ್ಲಾನ್ ಮಾಡುತ್ತಾರೆ. ಬಳಿಕ ರಾತ್ರಿ ಬರುವ ಕಳ್ಳರು ಪ್ಲಾನ್‍ನಂತೆ ರಸ್ತೆಬದಿ ನಿಲ್ಲಿಸಿರುವ ಬೈಕ್ ಎಗರಿಸಿಕೊಂಡು ಪರಾರಿಯಾಗುತ್ತಾರೆ. ಈ ತಂಡದಲ್ಲಿ ಮೂರು ಜನರು ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ದೀಪಕ್ ಅವರು ತಮ್ಮ ಹೊಸ ಬೈಕ್ ಅನ್ನು ಮನೆ ಮುಂದೆ ಪಾರ್ಕ್ ಮಾಡಿದ್ದರು. ಜನರ ಓಡಾಟ ಕಡಿಮೆ ಆಗುತ್ತಿದ್ದಂತೆ ತಡರಾತ್ರಿ ಮೂವರು ಕಳ್ಳರು, ಕ್ಷಣಾರ್ಧದಲ್ಲಿ ಬೈಕ್‍ನ ಸೆಂಟ್ರಲ್ ಲಾಕ್ ಮುರಿದಿದ್ದಾರೆ. ಬಳಿಕ ಮತ್ತೊಂದು ಬೈಕ್‍ನ ಸಹಾಯದೊಂದಿಗೆ ಕಳ್ಳತನ ಮಾಡಿದ ಬೈಕ್ ಸಮೇತ ಪರಾರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದ ಜೊತೆಗೆ ಸಾಕ್ಷಿಯನ್ನೂ ಕದ್ದ ಕಳ್ಳರು!

    ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದ ಜೊತೆಗೆ ಸಾಕ್ಷಿಯನ್ನೂ ಕದ್ದ ಕಳ್ಳರು!

    – ಕಳ್ಳತನಕ್ಕೂ ಮುನ್ನ ಭರ್ಜರಿ ಪೂಜೆ ಮಾಡಿದ ಖದೀಮರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಪೊಲೀಸ್ ಅಧಿಕಾರಿಯೊಬ್ಬರ ಮೊಬೈಲ್ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದರು. ಈ ಬೆನ್ನಲ್ಲೇ ಕೆಲವು ಕಳ್ಳರು ತಮ್ಮ ಬುದ್ಧಿ ಉಪಯೋಗಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜೊತೆಗೆ ಸಾಕ್ಷಿಯಾಗಿದ್ದ ಸಿಸಿಟಿವಿ ಡಿವಿಆರ್ ಅನ್ನು ಕೂಡ ಕದ್ದು ಪರಾರಿಯಾಗಿದ್ದಾರೆ.

    ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನ ನಗರದಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆಯನ್ನು ಕಳ್ಳರು ದೋಚಿದ್ದಾರೆ. ಶಾಖೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಪರಾರಿಯಾಗಿದ್ದು, ಪ್ರಕರಣವು ಇಂದು ಬೆಳಕಿಗೆ ಬಂದಿದೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆಯ ವಿವರ:
    ಮುತ್ತೂಟ್ ಫೈನಾನ್ಸ್ ಶಾಖೆಯ ಅಧಿಕಾರಿಗಳು ಡಿಸೆಂಬರ್ 24 ರಂದು ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಬಾಗಿಲು ಹಾಕಿದ್ದ ಹಿನ್ನೆಲೆಯಲ್ಲಿ ಕಳ್ಳರು ನಕಲಿ ಕೀ ಬಳಸಿ ಫೈನಾನ್ಸ್ ಶಾಖೆಯ ಬಾಗಿಲು ತೆರೆದಿದ್ದಾರೆ. ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು, ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಕೃತ್ಯ ಸೆರೆಯಾಗಿದೆ ಎಂದು ಖಚಿತಪಡಿಸಿಕೊಂಡಿದ್ದಾರೆ. ತಕ್ಷಣವೇ ಸಿಸಿಟಿವಿ ಡಿವಿಆರ್ ಎತ್ತಿಕೊಂಡ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಶಾಖೆಯ ಅಧಿಕಾರಿಗಳು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದು, ಮುತ್ತೂಟ್ ಫೈನಾನ್ಸ್ ಶಾಖೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಖದೀಮರು ಕಳ್ಳತನಕ್ಕೂ ಮುನ್ನ ನಿಂಬೆ ಹಣ್ಣು, ಮೊಟ್ಟೆ ಒಡೆದು ಭರ್ಜರಿಯಾಗಿ ಪೂಜೆ ಪುನಸ್ಕಾರ ಮಾಡಿ ಲೂಟಿ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

    ಎಷ್ಟು ಪ್ರಮಾಣದ ಚಿನ್ನಾಭರಣ ಕಳ್ಳತನವಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ಫೈನಾನ್ಸ್ ಶಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶಾಖೆಯಲ್ಲಿ ಹಣ, ಚಿನ್ನ ಇಟ್ಟಿದ್ದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಗೆ ನುಗ್ಗಿ 28 ಸಾವಿರ ರೂ., ಡಿವಿಆರ್ ಎಗರಿಸಿದ ಖತರನಾಕ್ ಕಳ್ಳರು

    ಶಾಲೆಗೆ ನುಗ್ಗಿ 28 ಸಾವಿರ ರೂ., ಡಿವಿಆರ್ ಎಗರಿಸಿದ ಖತರನಾಕ್ ಕಳ್ಳರು

    ಬೆಂಗಳೂರು: ಮುಸುಕುಧಾರಿ ಕಳ್ಳರು ಖಾಸಗಿ ಶಾಲೆಯೊಂದಕ್ಕೆ ನುಗ್ಗಿ ಆಫೀಸ್ ರೂಮ್ ನಲ್ಲಿದ್ದ 28 ಸಾವಿರ ರೂ. ನಗದು ಒಂದು ಡಿವಿಆರ್ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

    ಹೊಸಕೋಟೆ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸನ್ ವ್ಯಾಲಿ ಶಾಲೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ. ಆಫೀಸ್ ರೂಮ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಈ ಕುರಿತು ಶಾಲೆಯ ಆಡಳಿತ ಮಂಡಳಿ ಸೂಲಿಬೆಲೆ ಠಾಣೆಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಶಾಲೆಯ ರಜೆ ದಿನವಾದ ಭಾನುವಾರ ರಾತ್ರಿ ಮೂವರು ಕಳ್ಳರು, ಆಫೀಸ್ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಮುಸುಕು ಧರಿಸಿದ್ದ ಅವರು, ಮುಖಕ್ಕೆ ಪೌಡರ್ ಹಚ್ಚಿಕೊಂಡಿದ್ದರು. ನಿಧಾನವಾಗಿ ಒಬ್ಬೊಬ್ಬರೆ ಒಳಗೆ ನುಗ್ಗಿದ್ದಾರೆ. ಈ ದೃಶ್ಯ ಆಫೀಸ್ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾ ನೋಡಿದ ಕಳ್ಳರು ಅದನ್ನು ಒಡೆದು ಹಾಕಿದ್ದಾರೆ.

    ಕಳ್ಳರು ಬೀರುವಿನಲ್ಲಿದ್ದ 28 ಸಾವಿರ ರೂ. ನಗದು ಹಾಗೂ 16 ಸಾವಿರ ಮೌಲ್ಯದ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೋಲಿಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ಯದ ಅಮಲಿನಲ್ಲಿ ವ್ಯಕ್ತಿಯನ್ನು ಕೊಲೆಗೈದ ಕುಡುಕ!

    ಮದ್ಯದ ಅಮಲಿನಲ್ಲಿ ವ್ಯಕ್ತಿಯನ್ನು ಕೊಲೆಗೈದ ಕುಡುಕ!

    ಕೋಲಾರ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಜಗಳಕ್ಕೆ ಇಳಿದು ಬಳಿಕ ಎಲ್ಲರೊಂದಿಗೆ ಅಸಭ್ಯವಾಗಿ ವರ್ತಿಸಿ ಬಾರ್ ನಲ್ಲಿದ್ದ ಓರ್ವನನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಟೇಕಲ್ ಗ್ರಾಮದಲ್ಲಿ ನಡೆದಿದೆ.

    ಮಾಲೂರು ತಾಲೂಕಿನ ಶೆಟ್ಟಿಹಳ್ಳಿಯ ಚಂದ್ರಪ್ಪ (35) ಮೃತ ದುರ್ದೈವಿ. ಬನಹಳ್ಳಿಯ ನಿವಾಸಿ ಅಶ್ವಥ್ ಕೊಲೆಗೈದ ಆರೋಪಿ. ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

    ವಿಡಿಯೋದಲ್ಲಿ ಏನಿದೆ?:
    ಎಂ.ಎಸ್.ಆನಂದ್ ಎಂಬವರಿಗೆ ಸೇರಿದ ಟೇಕಲ್ ಗ್ರಾಮದ ಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್ ಕೌಂಟರ್ ಗೆ ಎಂದಿನಂತೆ ಇಂದು ಮಧ್ಯಾಹ್ನ ಮದ್ಯ ಸೇವಿಸಲು ಜನರು ಬಂದಿದ್ದರು. ಚಂದ್ರಪ್ಪ, ತಿಮ್ಮರಾಯಪ್ಪ ಸೇರಿದಂತೆ ಅನೇಕರು ಬಾರ್ ನ ಒಂದು ರೂಮ್‍ನಲ್ಲಿ ಕುಳಿತು ಕುಡಿಯುತ್ತಿದ್ದರು. ಈ ವೇಳೆ ಇಲ್ಲಿಗೆ ಬಂದ ಅಶ್ವಥ್ ತಿಮ್ಮರಾಯಪ್ಪ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಬೀಯರ್ ಬಾಟಲ್‍ನಿಂದ ಹಲ್ಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಬೀಯರ್ ಬಾಟಲ್ ಗುರಿಯಿಂದ ತಿಮ್ಮರಾಯಪ್ಪ ತಪ್ಪಿಸಿಕೊಂಡು ಭಾರೀ ಅನಾಹುತದಿಂದ ಪಾರಾದರು.

    ಅಷ್ಟಕ್ಕೆ ಜಗಳ ನಿಲ್ಲಿಸದ ಅಶ್ವತ್ ಚಂದ್ರಪ್ಪನನ್ನು ಎಳೆದುಕೊಂಡು ಬಾರ್ ಕೌಂಟರ್ ಬಳಿಗೆ ಹೋಗಿದ್ದಾನೆ. ಈ ವೇಳೆ ಹಲ್ಲೆ ಮಾಡಿ, ಹಿಂದಕ್ಕೆ ನೂಕಿದ್ದಾನೆ. ಚಂದ್ರಪ್ಪ ಹಿಂದಕ್ಕೆ ಬಿದ್ದ ಪರಿಣಾಮ ತಲೆಗೆ ಬಲವಾಗಿ ಹೊಡೆತ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಶ್ವಥ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇದು ಬಿಎಂಟಿಸಿ ಮಾಹಾ ಡೀಲ್ – ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‍ನಲ್ಲಿ ನುಂಗಣ್ಣರ ಕರಾಮತ್ತು ಬಯಲು

    ಇದು ಬಿಎಂಟಿಸಿ ಮಾಹಾ ಡೀಲ್ – ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‍ನಲ್ಲಿ ನುಂಗಣ್ಣರ ಕರಾಮತ್ತು ಬಯಲು

    ಬೆಂಗಳೂರು: ಬಿಎಂಟಿಸಿ ನಷ್ಟದಲ್ಲಿದೆ ಎಂದು ಸಾರಿಗೆ ಸಚಿವರು ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಹೇಳುತ್ತಾರೆ. ಅದು ಹೇಗೆ ಬಿಎಂಟಿಸಿ ನಷ್ಟ ಆಗುತ್ತಿದೆ ಎಂಬುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಲ್ಲಿಸಿದ್ರೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.

    ಪ್ರಯಾಣಿಕರ ಭದ್ರತಾ ದೃಷ್ಟಿಯಿಂದ ಬಸ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಈ ಸಂಬಂಧ ಒಂದು ಸಿಸಿಟಿವಿ ಕ್ಯಾಮೆರಾಗೆ 66 ಸಾವಿರ ರೂ. ಖರ್ಚು ಎಂದು ಬಿಎಂಟಿಸಿ ಸಿಬ್ಬಂದಿ ಲೆಕ್ಕ ತೋರಿಸಿದ್ದಾರೆ. ಒಟ್ಟು 500 ಬಸ್‍ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮೆರಾಗಳಿಗೆ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದೆ. ಒಂದು ಕ್ಯಾಮೆರಾಗೆ ಇಷ್ಟು ಬೆಲೆ ನೀಡಿದ್ರೂ ಕೆಲ ಬಸ್ ಗಳಲ್ಲಿ ಡಬ್ಬಗಳಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    66 ಸಾವಿರ ಬೆಲೆಯ ಕ್ಯಾಮೆರಾ ನೋಡಲು ಹೋದ್ರೆ ಅಲ್ಲಿ ಮೆಡಿಕಲ್ ಕಿಟ್ ಸಹ ಕಾಣುವುದಿಲ್ಲ. ಹೊಸ ಬಸ್‍ಗಳಿಗೆ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿದ್ರೆ, ಬಹುತೇಕ ಬಸ್‍ಗಳಲ್ಲಿ ಕಾಣುವುದಿಲ್ಲ. ಕ್ಯಾಮೆರಾಗಳು ಬಂದು ಸುಮಾರು 6ರಿಂದ 8 ತಿಂಗಳು ಆಯ್ತು. ಆದ್ರೆ ನಮ್ಮ ಬಸ್ ಗಳಿಗೆ ಅಳವಡಿಸಿಲ್ಲ. ಮುಂದಿನ ದಿನಗಳಲ್ಲಿ ಅಳವಡಿಸುತ್ತಾರೆ ಎಂದು ಚಾಲಕರೊಬ್ಬರು ಹೇಳಿದ್ದಾರೆ. ಮತ್ತೆ ಕೆಲ ಬಸ್ ಗಳಲ್ಲಿ ನಾಮಾಕಾವಸ್ಥೆ ಅಂತಾ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಕಾರ್ಯ ನಿರ್ವಹಿಸಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆಯ ಜಾಗೃತಿಯಿಂದ ಉಳಿಯಿತು ನಾಲ್ವರ ಪ್ರಾಣ!

    ಮಹಿಳೆಯ ಜಾಗೃತಿಯಿಂದ ಉಳಿಯಿತು ನಾಲ್ವರ ಪ್ರಾಣ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಿಸಿಟಿವಿ ಕ್ಯಾಮೆರಾ ಲೆಕ್ಕಿಸದೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇತಂಹದ್ದೇ ಘಟನೆಯೊಂದು ಇದೇ ತಿಂಗಳ 8ರಂದು ತಡರಾತ್ರಿ ನಡೆದಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರ ಜಾಗೃತಿಯಿಂದ ಕಳ್ಳರು ಕೃತ್ಯ ಎಸಗಲು ವಿಫಲರಾಗಿ ಕಾಲ್ಕಿತ್ತಿದ್ದಾರೆ.

    ಬೆಂಗಳೂರಿನ ಹೊರವಲಯದ ಬೇಗೂರು ಬಳಿಯ ದೇವರಾಜ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ದೇವರಾಜ್ ಅವರ ಪತ್ನಿ ರೂಪಾ ಎಚ್ಚರವಿದ್ದರಿಂದ ಮನೆಯಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ. ಆರು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ವಿವರ?:
    ಮನೆಯೊಂದಕ್ಕೆ ಬಂದ ಆರು ಜನರ ಕಳ್ಳರ ತಂಡವೊಂದು ತಡರಾತ್ರಿ 3ಗಂಟೆಗೆ ನುಗ್ಗಿ, ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮಹಿಳೆ ರೂಪಾರಿಗೆ ಎಚ್ಚರವಾಗಿ, ಅನುಮಾನ ವ್ಯಕ್ತಪಡಿಸಿ ಬಾಗಿಲ ಬಳಿ ಬಂದಿದ್ದಾರೆ. ಪಿಸು ಮಾತು, ಬಾಗಿಲನ್ನು ಕೊರೆಯುವ ಶಬ್ದ ಕೇಳಿಸಿಕೊಂಡಿದ್ದಾರೆ. ಒಳಗಿದ್ದೇ ಕಳ್ಳರನ್ನು ಬೆದರಿಸಲು ರೂಪಾ ಅವರು 10 ನಿಮಿಷ ಪ್ರಯತ್ನಿಸಿದ್ದಾರೆ. ಆದರೆ ಅವರು ಯಾವುದಕ್ಕೂ ಜಗ್ಗಲಿಲ್ಲ.

    ಭಯಗೊಂಡ ರೂಪಾ ಅವರು 6-7 ಬಾರಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಬಳಿಕ ಕರೆ ಸ್ವೀಕರಿಸಿದ ಪೊಲೀಸರು ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದಾರೆ. ವಾಹನ ಶಬ್ಧ ಕೇಳಿದ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಮಹಿಳೆಯ ಜಾಗೃತಿಯಿಂದ ಮನೆಯಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ.

    ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv