Tag: Casting Couch

  • ಒಂದು ರಾತ್ರಿ ಕಾಂಪ್ರಮೈಸ್ ಮಾಡ್ಕೋ ಎಂದ ನಿರ್ಮಾಪಕ- ಜಾಣತನ ಮೆರೆದ  ನಟಿ

    ಒಂದು ರಾತ್ರಿ ಕಾಂಪ್ರಮೈಸ್ ಮಾಡ್ಕೋ ಎಂದ ನಿರ್ಮಾಪಕ- ಜಾಣತನ ಮೆರೆದ ನಟಿ

    ಮುಂಬೈ: ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಎಂದು ಹೇಳಿದ ನಿರ್ಮಾಪಕನಿಗೆ ಮರಾಠಿ ಚಿತ್ರದ ನಟಿ ಶ್ರುತಿ ಮರಾಠೆ ಜಾಣತನದ ಉತ್ತರ ನೀಡಿದ್ದು, ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಹ್ಯುಮನ್ಸ್ ಆಫ್ ಮುಂಬೈ ಬಗ್ಗೆ ಮಾತನಾಡಿದ ನಟಿ ಶ್ರುತಿ, ಚಿತ್ರಕ್ಕೆ ಆಡಿಶನ್ ಮಾಡುವಾಗ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂವ್ ನಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕ, “ಕಾಂಪ್ರಮೈಸ್”, ಹಾಗೂ “ಒಂದು ರಾತ್ರಿ” ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರು.

    ನಿರ್ಮಾಪಕನ ಮಾತನ್ನು ಅರ್ಥ ಮಾಡಿಕೊಂಡ ಶ್ರುತಿ, ಈ ವಿಷಯವನ್ನು ಸುಮ್ಮನೆ ಬಿಡದೆ ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಿದ್ದಾರೆ. ನಾನು ನಿಮ್ಮ ಜೊತೆ ಮಲಗಬೇಕೆಂದರೆ, ನೀವು ನಾಯಕ ನಟನನ್ನು ಯಾರ ಜೊತೆ ಮಲಗಿಸುತ್ತಿದ್ದೀರಾ? ಎಂದು ಮರುಪ್ರಶ್ನೆ ಕೇಳಿದ್ದಾರೆ. ಶ್ರುತಿ  ಪ್ರಶ್ನೆಗೆ ನಿರ್ಮಾಪಕ ದಂಗಾಗಿದ್ದಾನೆ.

    ನಿರ್ಮಾಪಕನ ಜೊತೆ ಮಾತನಾಡಿದ ನಂತರ ಶ್ರುತಿ, ಈ ವಿಷಯವನ್ನು ಅಲ್ಲಿದ್ದವರಿಗೆ ತಿಳಿಸಿದ್ದಾರೆ. ಬಳಿಕ ಚಿತ್ರತಂಡ ಆ ವ್ಯಕ್ತಿಯನ್ನು ಚಿತ್ರದಿಂದ ಹೊರ ನಡೆಯಲು ತಿಳಿಸಿದ್ದಾರೆ. ಆ ದಿನ ನಾನು ಧೈರ್ಯವಾಗಿ ಇರಲು ನನಗೆ ಒಂದು ನಿಮಿಷ ಸಾಕಾಗಿತ್ತು. ಆ ದಿನ ನಾನು ನನ್ನ ಒಬ್ಬಳಿಗಾಗಿ ಧ್ವನಿ ಎತ್ತಿಲಿಲ್ಲ. ನಾನು ಪ್ರತಿ ಮಹಿಳೆಯರಿಗಾಗಿ ಧ್ವತಿ ಎತ್ತಿದೆ ಎಂದು ನಟಿ ಶ್ರುತಿ ಹೇಳಿದ್ದಾರೆ.

    ಶ್ರುತಿ ಮರಾಠಯ ‘ತಪ್ತಪದಿ’ ಹಾಗೂ ‘ರಾಮಾ ಮಾಧವ್’ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಬಾಲಿವುಡ್‍ನಲ್ಲಿ ‘ಬುದಿಯಾ ಸಿಂಗ್- ಬಾರ್ನ್ ಟು ರನ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಷ್ಟೇ ಅಲ್ಲದೇ ‘ರಾಧಾ ಕಿ ಬಾವರಿ’ ಹಾಗೂ ‘ಲಗ್ನಬಾಮಬಲ್’ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

     

    View this post on Instagram

     

    “I’ve been in this industry since I was 16 years old. Over the years I’ve been celebrated in the limelight & shamed behind the camera. People have a misconception that actors lead a comfortable life & always feel good about themselves–that’s not true. Whether we like it or not, whether we feel right or not, we have to be the best versions of ourselves. There are no ‘bad days’. I remember, early on in my career, for a south film, I was asked to wear a bikini–I agreed without thinking twice. Questions like, ‘How are you going to shoot it?’ or ‘Is it required?’ didn’t even cross my mind. I was getting an opportunity to be in a film & that’s all that mattered! Years later when I gained popularity in a Marathi show, people looked me up & stumbled upon the bikini scene. I was trolled for the way I looked & how it was shot. Do you know how much that damages your self-esteem? I put myself out there without any barriers–but I wasn’t accepted; I was objectified. I still continued working as if it didn’t bother me. But I had a dream. I’d worked so hard & was finally moving forward, I wasn’t going to let it go–just because someone else had a problem, they weren’t in my shoes & would never know what it felt like. Slowly, I made myself tougher. Once I met a producer who’d offered me a lead role. At first he was professional, but soon he began using the words, ‘compromise’ & ‘one night’. I couldn’t let this slip so I asked him, ‘If you want me to sleep with you, who are you making the hero sleep with?’ He was stunned. I immediately informed others of his behaviour & they asked him to leave the project. All it took was one minute of being fearless–that day, I didn’t just stand up for me… I stood up for every woman who’s been objectified & judged for simply being who she is; for simply being ambitious. Why should the archaic rules of society & today’s so-called modern world stop me? My clothes don’t define me–my talent does, my hard work does, my success does & I think it’s high time, people realise that.” —– HoB with #FlipOnErosNow brings to you stories of people who have dealt with uncertainties and insecurities that life throws your way and have emerged triumphant

    A post shared by Humans of Bombay (@officialhumansofbombay) on

  • ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಎಂಬ ಕಾಯಿಲೆ ಎಲ್ಲ ಚಿತ್ರರಂಗಗಳನ್ನೂ ಸಾಂಕ್ರಾಮಿಕವೆಂಬಂತೆ ಆವರಿಸಿಕೊಂಡಿರೋದು ದುರಂತ ಸತ್ಯ. ಆಗಾಗ ಯಾರೋ ನಟಿ ಬೀದಿಯಲ್ಲಿ ನಿಂತು ಮಾತಾಡಿದಾಗ, ಅನಾಹುತಗಳಾದಾಗ ಮಾತ್ರವೇ ಈ ಬಗ್ಗೆ ಚರ್ಚೆಗಳಾಗಿ ತಣ್ಣಗಾಗುತ್ತಿತ್ತು. ಆದರೆ ಈ ವಿಚಾರ ಇಡೀ ಭಾರತೀಯ ಚಿತ್ರರಂಗವನ್ನೇ ಅದುರುವಂತೆ ಮಾಡಿರೋದು ತೆಲುಗು ನಟಿ ಶ್ರೀರೆಡ್ಡಿಯ ದೆಸೆಯಿಂದ!

    ಇದೀಗ ಎಲ್ಲ ಭಾಷೆಗಳ ನಟಿಯರೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಲಾರಂಭಿಸಿದ್ದಾರೆ. ಈಗಿನ ಸರದಿ ನಟಸಾರ್ವಭೌಮನ ಬೆಡಗಿ ಅನುಪಮಾ ಪರಮೇಶ್ವರನ್ ಅವರದ್ದು!

    ಆದರೆ ಅನುಪಮಾ ಕಾಸ್ಟಿಂಗ್ ಕೌಚಿಂಗ್ ವಿಚಾರವಾಗಿ ಯಾರ ವಿರುದ್ಧವೂ ದೂರು ಹೇಳಿಲ್ಲ. ಅಂಥಾದ್ದೊಂದು ಇದ್ದರೂ ಇದ್ದೀತೆಂಬ ಮಾತನ್ನೂ ಆಡಿಲ್ಲ. ತನಗೆ ಇದುವರೆಗೂ ಅಂಥಾ ಅನುಭವಗಳಾಗಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇವರ ಈ ಅಭಿಪ್ರಾಯ ಯಾಕೆ ಮುಖ್ಯವೆಂದರೆ, ಅನುಪಮಾ 2016ರಿಂದಲೇ ತೆಲುಗು ಚಿತ್ರರಂಗದಲ್ಲಿದ್ದಾರೆ. ಕಾಸ್ಟಿಂಗ್ ಕೌಚ್ ಎಂಬ ಹೆಮ್ಮಾರಿ ಸದ್ಯ ವಿರಾಟ್ ರೂಪ ತಾಳಿರೋದು ಕೂಡಾ ತೆಲುಗಿನಲ್ಲಿಯೇ ಆದ್ದರಿಂದ ಅನುಪಮಾ ಹೇಳಿಕೆ ಮುಖ್ಯವಾಗುತ್ತದೆ.

    ಈಗಲೂ ಕೂಡಾ ಅನುಪಮಾ ನಟಿಸಿರೋ ತೆಲುಗು ಚಿತ್ರ ಹಲೋ ಗುರು ಪ್ರೇಮಂ ಕೋಸಮೇ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ನಟ ಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಾನು ನಟಿಸಿರೋ ತೆಲುಗು ಚಿತ್ರಕ್ಕೆ ಹಿನ್ನಡೆಯಾಗುತ್ತದೆ ಎಂಬ ಮುಲಾಜಿನಿಂದ ಅನುಪಮಾ ಕಾಸ್ಟಿಂಗ್ ಕೌಚ್ ಬಗ್ಗೆ ಇಂಥಾ ಅಭಿಪ್ರಾಯ ಹೇಳಿರಬಹುದೆಂಬ ಮಾತುಗಳೂ ಕೇಳಿ ಬರುತ್ತಿರೋದು ಸುಳ್ಳಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್

    ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್

    ಮುಂಬೈ: ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡಬೇಕು ಎಂದು ಸಲಿಂಗ ನಿರ್ದೇಶಕನೊಬ್ಬ ಆಡಿಷನ್ ವೇಳೆ ಕೇಳಿಕೊಂಡಿದ್ದನು ಎಂದು ನಟ ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ.

    ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅವರ ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಆಡಿಷನ್ ವೇಳೆ ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

    ಸಲಿಂಗ ನಿರ್ದೇಶಕನೊಬ್ಬ ನನಗೆ ನಿನ್ನ ಮರ್ಮಾಂಗ ತೋರಿಸು. ನಾನು ಅದನ್ನು ಫೀಲ್ ಮಾಡಬೇಕೆಂದು ಎಂದು ಕೇಳಿಕೊಂಡರು. ನಿರ್ದೇಶಕ ಆ ರೀತಿ ಹೇಳಿದ್ದಾಗ ನಾನು ಜೋರಾಗಿ ನಗಲಾರಂಭಿಸಿದೆ. ನಂತರ ನೀನು ಏನು ಹೇಳುತ್ತಿದ್ದೀಯಾ? ಆರ್ ಯೂ ಸೀರಿಯಸ್ ಎಂದು ಕೇಳಿದೆ. ನಂತರ ನಾನು ಇದಕ್ಕೆ ನಿರಾಕರಿಸಿದೆ ಎಂದು ಆಯುಷ್ಮಾನ್ ಖುರಾನಾ ವಿವರಿಸಿದರು.

    ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಹೆಚ್ಚು ಕೇಳಿ ಬರುತ್ತಿದೆ. ದಕ್ಷಿಣ ಚಿತ್ರರಂಗ ಅಲ್ಲದೇ ಬಾಲಿವುಡ್‍ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬುದು ತಿಳಿದು ಬಂದಿದೆ. ಬಾಲಿವುಡ್‍ನಲ್ಲಿ ಈ ಮೊದಲು ಏಕ್ತಾ ಕಪೂರ್, ದಿವ್ಯಾಂಕಾ ತ್ರಿಪಾಠಿ, ಸ್ವರಾ ಭಾಸ್ಕರ್ ಹಾಗೂ ಮಂದಿರಾ ಬೇಡಿ ಈ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಿದ್ದರು.

    ಸದ್ಯ ಆಯುಷ್ಮಾನ್ ಖುರಾನಾ ‘ಅಂದಾದೂದ್’ ಹಾಗೂ ‘ಬದಾಯಿ ಹೋ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಚಿತ್ರ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ತಯಾರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಸ್ಟಿಂಗ್‍ಕೌಚ್ ಹೆಸರಲ್ಲಿ ಬಿಗ್‍ಬಾಸ್ ಹುಡುಗಿಯ ಚೆಲ್ಲಾಟ!

    ಕಾಸ್ಟಿಂಗ್‍ಕೌಚ್ ಹೆಸರಲ್ಲಿ ಬಿಗ್‍ಬಾಸ್ ಹುಡುಗಿಯ ಚೆಲ್ಲಾಟ!

    -ಈಕೆ ಶ್ರೀರೆಡ್ಡಿ ಅಭಿಮಾನಿ ಅಂದ್ರು ನಿರ್ದೇಶಕ!

    ಬೆಂಗಳೂರು: ಕಾಸ್ಟಿಂಗ್ ಕೌಚ್ ಹೆಸರಲ್ಲಿ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಚೆಲ್ಲಾಟ ಆಡುತ್ತಿದ್ದು, ಈಗ ತಾನು ನಿರ್ದೇಶಕರ ವಿರುದ್ಧ ಮಾಡಿದ್ದ ಆರೋಪ ಸುಳ್ಳು ಎಂದು ಫಿಲ್ಮ್ ಚೇಂಬರ್ ನಲ್ಲಿ ಮಾಧ್ಯಮಗಳ ಮುಂದೆ ಕ್ಷಮೆಯಾಚಿದ್ದಾರೆ.

    ಈ ಹಿಂದೆ ನಿರ್ದೇಶಕ ಮಂಜು ಹೆದ್ದೂರು ನನಗೆ ಕಾಸ್ಟಿಂಗ್ ಕೌಚ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಈ ಬಗ್ಗೆ ನಿರ್ದೇಶಕರ ಮಂಜು ಅವರು ಫಿಲ್ಮ್ ಚೇಂಬರ್ ಗೆ ದೂರು ನೀಡಿ ತಮ್ಮ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ನಟಿ ಜಯಶ್ರೀ ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪಿನ ಬಗ್ಗೆ ಹೇಳಿದ್ದಾರೆ.

    ಹಿರಿಯರ ಜೊತೆ ಮಾತನಾಡಿ ಕ್ಷಮೆ ಕೇಳಿದ್ದೇನೆ. ಅವರು ಊಟಕ್ಕೆ ಕರೆದಿದ್ದರು. ನಾನು ಅದಕ್ಕೆ ಓಕೆ ಡಿಯರ್ ಎಂದು ಹೇಳಿದ್ದೆ. ನಾನು ಅಪ್ಪ-ಅಮ್ಮನಿಗೂ ಡಿಯರ್ ಎಂದು ಕರೆಯುತ್ತೇನೆ. ಆದ್ದರಿಂದ ನಾನು ಕಾಮನ್ ಆಗಿ ಡಿಯರ್ ಎಂದು ಕರೆದೆ ಅಷ್ಟೇ. ಮೊದಲಿಗೆ ನಾನು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ ತಪ್ಪು ಮಾಡಿದೆ. ಆದ್ದರಿಂದ ಅದು ನನ್ನ ತಪ್ಪು ಎಂದು ಜಯಶ್ರೀ ಹೇಳಿದ್ದಾರೆ.

    ಈ ಬಗ್ಗೆ ನಿರ್ದೇಶಕ ಮಂಜು ಹೆದ್ದೂರು ಅವರು ಪ್ರತಿಕ್ರಿಯಿಸಿದ್ದು, ನನ್ನ ಸಂಸಾರ ಮುಳುಗೋದಲ್ಲ, ಹೆಚ್ಚು ಕಡಿಮೆ ಏನೇನೋ ಆಗಿರುತ್ತಿತ್ತು. ಸಿನಿಮಾದವರು ಎಂದು ನಮ್ಮನ್ನು ನೋಡುವ ರೀತಿಯ ಬದಲಾಗಿತ್ತು. ನಾನು ಲಾಂಗ್ ಡ್ರೈವ್ ಹೋಗೋಕೆ ಕರೆದರು ಎಂದು ಹೇಳಿದ್ದಾರೆ. ಆದರೆ ನನ್ನ ಬಳಿ ಪೆಟ್ರೋಲಿಗೆ ಹಣವಿಲ್ಲ ಅಂತಹ ಸಮಸ್ಯೆಗಳನ್ನು ನಾನು ಎದುರಿಸುತ್ತಿದ್ದೇನೆ. ಮೊದಲಿಗೆ ಈ ಕಾಸ್ಟಿಂಗ್ ಕೌಚ್ ಬಗ್ಗೆ ನನಗೆ ತಿಳಿದಿಲ್ಲ. ಯಾರೊ ಶ್ರೀ ರೆಡ್ಡಿ ಅವರ ಅಭಿಮಾನಿ ಇರಬೇಕು ಅದಕ್ಕೆ ಅವರನ್ನೇ ಫಾಲೋ ಮಾಡುತ್ತಿದ್ದಾರೆ. ಕೆಲಸಕ್ಕಾಗಿ ಯಾರು ಆ ರೀತಿ ಕೇಳುವುದಿಲ್ಲ. ಇದು ನಿಜವಾದರೆ ನಾನು ವಾಣಿಜ್ಯ ಮಂಡಳಿ ಹೇಳಿದ ರೀತಿ ಕೇಳ್ತಿನಿ ಎಂದು ಹೇಳಿದ್ದಾರೆ.

    ಈ ಹಿಂದೆ ಜಯಶ್ರೀ ಬಿಗ್‍ಬಾಸ್ ಶೋದಿಂದ ಹೊರ ಬಂದ ನಂತರ ಒಂದೆರಡು ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. “ನಟ ನಟಿಯರು ಬೇಕಾಗಿದ್ದಾರೆ” ಸಿನಿಮಾಕ್ಕೆ ಮೊದಲು ಜಯಶ್ರೀ ನಾಯಕಿಯಾಗಿ ಆಯ್ಕೆಯಾಗಿದ್ದರು. ಒಂದೆರಡು ದಿನ ಅಭಿನಯಿಸಿದ ಮೇಲೆ ಆಕೆಗೆ ಮತ್ತೆ ಚಿತ್ರತಂಡದಿಂದ ಬುಲಾವ್ ಬರಲಿಲ್ಲ. ಅಷ್ಟಕ್ಕೇ ಈಕೆ `ನನ್ನನ್ನು ಸಿನಿಮಾದಿಂದ ಕೈ ಬಿಡಲಾಗಿದೆ. ಇದಕ್ಕೆಲ್ಲ ನಿರ್ದೇಶಕನ ಮಾತನ್ನು ನಾನು ಕೇಳದೇ ಇರುವುದು ಕಾರಣ. ಲಾಂಗ್ ಡ್ರೈವ್ ಬಾ, ಎಣ್ಣೆ ಹಾಕೋಣ ಬಾ ಬೇಬಿ ಎನ್ನುತ್ತಿದ್ದರು. ಅದಕ್ಕೆ ನಾನು ವಿರೋಧಿಸಿದಕ್ಕೆ ಸಿನಿಮಾದಿಂದ ನನ್ನನ್ನು ಬಿಡಲಾಗಿದೆ ಎಂದು ಆರೋಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ನಾ ಅಲ್ಲಿಗೆ ಬರಲ್ಲ’ ಎಂದಿದ್ದಕ್ಕೆ ಸಿನಿಮಾದಿಂದ ನಟಿಗೆ ಗೇಟ್‍ಪಾಸ್-ಕನ್ನಡ ಕಲಾವಿದೆ ಬಿಚ್ಚಿಟ್ಟ ಸ್ಫೋಟಕ ಸತ್ಯ !

    `ನಾ ಅಲ್ಲಿಗೆ ಬರಲ್ಲ’ ಎಂದಿದ್ದಕ್ಕೆ ಸಿನಿಮಾದಿಂದ ನಟಿಗೆ ಗೇಟ್‍ಪಾಸ್-ಕನ್ನಡ ಕಲಾವಿದೆ ಬಿಚ್ಚಿಟ್ಟ ಸ್ಫೋಟಕ ಸತ್ಯ !

    ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಬೇಕು ಅಂದರೆ ಬೆಳ್ಳಿ ಮಂಚ ಏರಬೇಕು. ತನಗೆ ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ಜತೆಗೆ ತನ್ನನ್ನ ರಂಭೆಯಂತೆ ತೋರಿಸುವ ಕ್ಯಾಮೆರಾಮ್ಯಾನ್‍ಗೂ ಕೂಡ ಸಹಕರಿಸಬೇಕಂತೆ ಅನ್ನೋ ವಿಷ್ಯವನ್ನ ಇಷ್ಟು ದಿನ ನಾವೆಲ್ಲರೂ ಕೇಳಿದ್ದೇವೆ. ಅದಕ್ಕೆ ಸಾಕ್ಷಿಯೆಂಬಂತೆ ಚಂದನವನದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

    ಬಿಗ್‍ಬಾಸ್ ಮೂಲಕವೇ ಹೆಸರು ಪಡೆದುಕೊಂಡಿದ್ದ ನಟಿ ಜಯಶ್ರೀ ರಾಮಯ್ಯ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬಾನೇ ಚೂಸಿಯಾಗಿರುವ ಜಯಶ್ರೀ, ‘ಉಪ್ಪು ಹುಳಿ ಖಾರ’ ಸಿನಿಮಾ ನಂತರ `ನಟ ನಟಿಯರು ಬೇಕಾಗಿದ್ದಾರೆ’ ಸಿನಿಮಾಗೆ ಸೆಲೆಕ್ಟ್ ಆಗಿ ಸುದ್ದಿಯಾಗಿದ್ದರು. ಇದೀಗ ಚಿತ್ರತಂಡದಿಂದ ಗೇಟ್‍ಪಾಸ್ ಪಡೆದುಕೊಂಡಿರುವ ಜಯಶ್ರೀ, ಪಬ್ಲಿಕ್ ಟಿವಿ ಜತೆ ಮಾತನಾಡುತ್ತಾ ಭಯಾನಕ ಸುದ್ದಿಯೊಂದನ್ನ ಸ್ಫೋಟಿಸಿದ್ದಾರೆ.

    ನಿರ್ದೇಶಕ ಮಂಜು ಹೆದ್ದೂರ್ ನಮ್ಮ ಸಿನಿಮಾಗೆ ಪಕ್ಕಾ ಸೂಟ್ ಆಗ್ತೀಯಾ ನೀನು’ ಅಂತ ಎರಡು ದಿನ ಶೂಟಿಂಗ್ ಮಾಡಿದರು. ವೆರೈಟಿ ಕಾಸ್ಟ್ಯೂಮ್ಸ್ ಹಾಕಿ ಶೂಟ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ನಾಯಕಿ ಜಯಶ್ರೀ ಅವರಿಗೆ ಗೇಟ್‍ಪಾಸ್ ನೀಡಿದ್ದಾರೆ. ಡ್ಯಾನ್ಸ್ ಕೊರಿಯಾಗ್ರಫರ್ ಮೂಲಕ ಜಯಶ್ರೀಗೆ ಮಂಜು ಹೆದ್ದೂರ್ ಪರಿಚಯವಾಗುತ್ತೆ, ಮೊದಲ ಮೀಟಿಂಗ್‍ನಲ್ಲೇ `ನಟ ನಟಿಯರು ಬೇಕಾಗಿದ್ದಾರೆ’ ಸಿನಿಮಾಗೆ ಸೆಲೆಕ್ಟ್ ಆಗ್ತಾರೆ. ಸಿನಿಮಾ ವಿಷಯವಾಗಿ ಮಾತನಾಡಬೇಕು ಅಂತ ನಿರ್ದೇಶಕ ಮಂಜು ಹೆದ್ದೂರ್ ಪದೇ ಪದೇ ಅಲ್ಲಿ ಇಲ್ಲಿ ಬರುವಂತೆ ಕೇಳಿಕೊಳ್ತಾರೆ. ಮೊದಲು ಡ್ರಿಂಕ್ಸ್ ಪಾರ್ಟಿ, ಅನಂತರ ಲಾಂಗ್ ಡ್ರೈವ್ ಹೀಗೆ ಒಂದಿಲ್ಲೊಂದು ಬೇಡಿಕೆಯನ್ನ ಜಯಶ್ರೀ ಮುಂದೆ ಇಡುತ್ತಾರೆ. ಆದ್ರೆ ಜಯಶ್ರೀ ಎಂದು ನಿರ್ದೇಶಕರ ಮಾತಿಗೆ ಒಪ್ಪಿಗೆ ಸೂಚಿಸಿಲ್ಲ.

    ಯಾವಾಗ ತಾನು ಎಲ್ಲಿಗೆ ಕರೆದರೂ ಬರಲಿಲ್ಲವೋ ಆಗಲೇ ಜಯಶ್ರೀಯನ್ನ ತಮ್ಮ ಸಿನಿಮಾದಿಂದ ಹೊರಕಳಿಸೋದಕ್ಕೆ ಪ್ಲ್ಯಾನ್ ಮಾಡಿದ್ರು ನಿರ್ದೆಶಕ. ರೀಸನ್ ಇಲ್ಲದೇ ಆಕೆಗೆ ಗೇಟ್‍ಪಾಸ್ ನೀಡೋದಕ್ಕೆ ಅಸಾಧ್ಯ ಅಂತ ತಿಳಿದು ನಿರ್ಮಾಪಕರು ಬದಲಾಗಿದ್ದಾರೆ. ಸದ್ಯಕ್ಕೆ ಸಿನಿಮಾ ಸ್ಟಾಪ್ ಮಾಡ್ತೀವಿ ಮುಂದೆ ನೋಡೋಣ ಅಂತ ಕಥೆ ಹೇಳಿದ್ದಾರೆ. ನಿರ್ದೇಶಕ ಮಂಜು ಹೆದ್ದೂರ್ ಇದಾಗಿ ಮರುದಿನವೇ ಬೇರೊಬ್ಬ ನಾಯಕಿಯನ್ನ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದು ಜಯಶ್ರೀ ಆರೋಪಿಸುತ್ತಿದ್ದಾರೆ.

    ತನಗಾದ ಅನ್ಯಾಯ ಬೇರಾವ ನಟಿಗೂ ಆಗಬಾರದು ಅಂತ ಜಯಶ್ರೀ ಫಿಲ್ಮ್ ಚೇಂಬರ್‍ಗೆ ದೂರು ಕೂಡ ಕೊಟ್ಟಿದ್ದಾರೆ. ಅಷ್ಟಕ್ಕೂ ಜಯಶ್ರೀಯವರನ್ನ ನಿರ್ದೇಶಕ ಮಂಜು ಹೆದ್ದೂರ್, ಪಾರ್ಟಿ, ಲಾಂಗ್‍ಡ್ರೈವ್ ಕರೆದಿದ್ದು ಯಾವ ಕಾರಣಕ್ಕೆ ? ಕತೆ ಬಗ್ಗೆ ಚರ್ಚೆ ಮಾಡಲಿಕ್ಕಾ ಅಥವಾ ಬೇರಾವ ಕಾರಣಕ್ಕಾ ? ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ನಟಿ ಜಯಶ್ರೀ ಹೇಳುವ ಪ್ರಕಾರ, ಲೇಟ್‍ನೈಟ್ ಕಾಲ್ ಮಾಡಿ ಪರ್ಫಾಮೆನ್ಸ್ ವಿಡಿಯೋ ಕಳುಹಿಸುವಂತೆ ಕೇಳಿದ್ರು, ನಾನ್ ಕಳುಹಿಸಿರಲಿಲ್ಲ.. ಇದೀಗ ಅದನ್ನೇ ನೆಪವನ್ನಾಗಿಸಿಕೊಂಡು ನನ್ನನ್ನ ಚಿತ್ರತಂಡದಿಂದ ಹೊರಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://youtu.be/QQCgzcJBTko

  • ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸಾಮಾನ್ಯ- ನಟಿ ಲಕ್ಷ್ಮೀ ರೈ

    ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸಾಮಾನ್ಯ- ನಟಿ ಲಕ್ಷ್ಮೀ ರೈ

    ಬೆಂಗಳೂರು: ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸಾಮಾನ್ಯ. ಆದರೆ ಅದು ನನ್ನ ಅನುಭವಕ್ಕೆ ಬಂದಿಲ್ಲ ಎಂದು ಬಹುಭಾಷಾ ನಟಿ ಲಕ್ಷ್ಮೀ ರೈ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ಝಾನ್ಸಿ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರು, ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಇರುವುದು ಸಾಮಾನ್ಯ. ಆದರೆ ಅದು ನನ್ನ ಅನುಭವಕ್ಕೆ ಬಂದಿಲ್ಲ. ನನಗೆ ಯಾವ ಕೆಟ್ಟ ಎಕ್ಸ್ ಪಿರಿಯನ್ಸ್ ಆಗಿಲ್ಲ. ನಾವು ಯಾವ ರೀತಿ ನಡ್ಕೋತೀವಿ ಅದರ ಮೇಲೆ ನಮ್ಮನ್ನ ಇಂಡಸ್ಟ್ರಿ ಟ್ರೀಟ್ ಮಾಡುತ್ತದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಎರಡು ಕೈ ಸೇರಿದ್ರೆ ಚಪ್ಪಾಳೆ ಆಗೋದು- ಕಾಸ್ಟಿಂಗ್ ಕೌಚ್ ಬಗ್ಗೆ ರಾಗಿಣಿ

    ಅವಕಾಶ ಕೊಡುತ್ತಾರೆ ಎಂದ ತಕ್ಷಣ ನಾವು ಅವರಿಗಾಗಿ ಮಲಗಲು ಸಾಧ್ಯವಿಲ್ಲ. ಕಾಸ್ಟಿಂಗ್ ಕೌಚ್ ಚಿತ್ರರಂಗದ ಒಂದು ಚಿಕ್ಕ ವಿಷಯ ಅಷ್ಟೇ. ಅದನ್ನೇ ದೊಡ್ಡದಾಗಿ ತೋರಿಸುವುದು ಸರಿಯಿಲ್ಲ. ನಟಿಸಲು ಬಂದ ಪ್ರತಿಯೊಬ್ಬರು ಕಾಸ್ಟಿಂಗ್ ಕೌಚ್ ಅನುಭವ ಮಾಡಿಕೊಂಡಿದ್ದಾರೆ ಎಂದು ಜನಗಳು ತಿಳಿದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

    ನಾನು ಚಿತ್ರರಂಗಕ್ಕೆ ಬಂದಾಗ ನಾನು ಇಂತಹ ಅನುಭವಗಳನ್ನು ಪಡೆದುಕೊಂಡಿಲ್ಲ. ಆದರೆ ಮೊದಲ ಬಾರಿಗೆ ಯಾರೂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಅಂತಹವರಿಗೆ ಈ ಅನುಭವ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕಮರ್ಷಿಯಲ್ ಸೆಕ್ಸ್ ಸ್ಯಾಂಡಲ್‍ವುಡ್‍ನಲ್ಲಿದೆ: ನಟಿ ಹರ್ಷಿಕಾ

    ಸದ್ಯ ಲಕ್ಷ್ಮೀ ರೈ 6 ವರ್ಷದ ನಂತರ ಕನ್ನಡಕ್ಕೆ ರೀ- ಎಂಟ್ರಿ ನೀಡಿದ್ದಾರೆ. ಮರ್ಯಾದ ರಾಮಣ್ಣ ಖ್ಯಾತಿ ಗುರುಪ್ರಸಾದ್ ಝಾನ್ಸಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

  • ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಹೈದರಾಬಾದ್: ವೃತ್ತಿ ಜೀವನದ ಆರಂಭದಲ್ಲಿ ನನಗೂ ಸಹ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಕನ್ನಡದ ‘ಅಪ್ಪಾಜಿ’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಆಮನಿ ಹೇಳಿದ್ದಾರೆ.

    ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಆಮನಿ, ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಕುರಿತ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ. ಮೊದಲು ಫೋಟೋ ನೋಡಿ ಸಿನಿಮಾ ಚಾನ್ಸ್ ನೀಡುತ್ತಿದ್ದರು. ಆದರೆ ಬಳಿಕ ಫೋನ್ ಮಾಡಿ ಗೆಸ್ಟ್ ಹೌಸ್ ಗೆ ಬನ್ನಿ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.

    ಮೊದಲು ಅವರು ಕರೆಯುತ್ತಿದ್ದ ಉದ್ದೇಶ ತಿಳಿಯುತ್ತಿರಲಿಲ್ಲ, ಆದರೆ ಅವರು ಅಮ್ಮನ ಜೊತೆ ಬರಬೇಡ ಎಂದು ಸೂಚನೆ ನೀಡಿ ಒಬ್ಬಳನ್ನೇ ಕರೆಯುತ್ತಿದ್ದ ವೇಳೆ ಅವರ ಉದ್ದೇಶ ನನಗೆ ಅರ್ಥವಾಗುತ್ತಿತ್ತು. ಇಂತಹ ಘಟನೆಗಳು ಸಾಮಾನ್ಯವಾಗಿ ಹೊಸ ಸಂಸ್ಥೆಗಳಲ್ಲಿ ಮಾತ್ರ ನಡೆಯುತ್ತದೆ. ತಮಿಳು ಚಿತ್ರ ರಂಗದಲ್ಲೂ ಇಂತಹ ಘಟನೆಗಳು ನಡೆದಿದೆ. ದೊಡ್ಡ ದೊಡ್ಡ ಬ್ಯಾನರ್ ಹೊಂದಿರುವ ಸಂಸ್ಥೆಗಳಲ್ಲಿ ಇಂತಹ ಅನುಭವ ಎದುರಿಸಿಲ್ಲ, ಸಣ್ಣ ಸಂಸ್ಥೆಗಳಲ್ಲಿ ಮಾತ್ರ ಇಂತಹವುಗಳು ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ವೃತ್ತಿ ಜೀವನದ ಆರಂಭದಲ್ಲಿ ಹೀರೋಯಿನ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಆಮನಿ ಅವರು, ಮದುವೆಯ ಬಳಿಕ ಕೆಲ ಕಾಲ ಬಣ್ಣದ ಬದುಕಿಗೆ ಬ್ರೇಕ್ ನೀಡಿದ್ದರು. ಆದರೆ ಕೆಲ ಸಮಯದ ಬಳಿಕ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಸದ್ಯ ಪೋಷಕ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಲ್ಲಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ನಟಿ ಶ್ರೀ ರೆಡ್ಡಿ ಪ್ರತಿಭಟನೆಯ ಬಳಿಕ ಹಲವು ನಟಿಯರು ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ತುಟಿ ಬಿಚ್ಚಿದ್ದರು.

  • ಕಮರ್ಷಿಯಲ್ ಸೆಕ್ಸ್ ಸ್ಯಾಂಡಲ್‍ವುಡ್‍ನಲ್ಲಿದೆ: ನಟಿ ಹರ್ಷಿಕಾ

    ಕಮರ್ಷಿಯಲ್ ಸೆಕ್ಸ್ ಸ್ಯಾಂಡಲ್‍ವುಡ್‍ನಲ್ಲಿದೆ: ನಟಿ ಹರ್ಷಿಕಾ

    ಬೆಂಗಳೂರು: ಅಮೆರಿಕದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಚರ್ಮೋದ್ಯಮ ದಂಧೆಯನ್ನು ಫೆಡರಲ್ ಬ್ಯೂರೋ ಇನ್ವೆಸ್ಟಿಗೇಷನ್ ಆಫೀಸರ್ ಗಳು ಪತ್ತೆ ಹಚ್ಚಿದ್ದು, ದಂಪತಿಯನ್ನು ಬಂಧಿಸಿದ್ದರು. ಆದರೆ ಈಗ ಸ್ಯಾಂಡಲ್‍ವುಡ್ ಸೆಕ್ಸ್ ದಂಧೆ ನಡೆಯುತ್ತಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

    ಅಮೆರಿಕದಲ್ಲಿ ಸೆಕ್ಸ್ ರಾಕೆಟ್‍ನಲ್ಲಿ ತೊಡಗಿದ್ದ ನಟಿಯರ ಹೆಸರು ಇಲ್ಲಿವರೆಗೂ ಕೂಡ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ಹರ್ಷಿಕಾ ಪೂಣಚ್ಚ ಸೆಕ್ಸ್ ರಾಕೆಟ್ ದಂಧೆ ಅಮೆರಿಕದಲ್ಲಿ ಮಾತ್ರವಲ್ಲ ಇಲ್ಲೂ ಇದೆ ಎಂದು ಹೇಳಿದ್ದಾರೆ.

    ಈ ಹಿಂದೆ ಹರ್ಷಿಕಾ ಪೂಣಚ್ಚ ಕಾಸ್ಟಿಂಗ್ ಕೌಚ್ ವಿರುದ್ದ ಧ್ವನಿಯೆತ್ತಿದ್ರು. ಕನ್ನಡ, ತೆಲುಗು, ಮಲೆಯಾಳಂ ಚಿತ್ರರಂಗದಲ್ಲಿ ನಾನು ಕೆಲಸ ಮಾಡಿದ್ದೇನೆ. ಯಾವತ್ತೂ ಕೂಡ ನನಗೆ ಸೆಕ್ಸ್ ಫಾರ್ ಚಾನ್ಸ್ ಅನುಭವ ಆಗಿಲ್ಲ ಎಂದು ಹೇಳಿಕೊಂಡಿದ್ರು. ಆದರೆ ಬಾಲಿವುಡ್ ಅಂಗಳದಲ್ಲಿ ನನಗೆ ಕಾಸ್ಟಿಂಗ್ ಅನುಭವ ಆಗಿದೆ. ಆ ಕಾರಣವೇ ನಾನು ಹಿಂದಿಯ ಎರಡು ಬಿಗ್ ಪ್ರಾಜೆಕ್ಟ್ ಗಳನ್ನ ತೊರೆದು ಫ್ಲೈಟ್ ಹತ್ತಿ ಬೆಂಗಳೂರಿಗೆ ಬಂದಿದ್ದೆ ಎಂದಿದ್ರು. ಆದರೆ ಈಗ `ಕಮರ್ಷಿಯಲ್ ಸೆಕ್ಸ್’ ಇಲ್ಲೇ ಇದೆ ಎಂದು ಹೇಳಿ ಗಾಂಧಿನಗರದ ಮಂದಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

    ಅಂದು ಓಪನ್ ಆಗಿ ನನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದು ಹೇಳಿಕೊಂಡಿದ್ದ ಹರ್ಷಿಕಾ, ಇದೀಗ ಕಮರ್ಷಿಯಲ್ ಸೆಕ್ಸ್ ಇಲ್ಲೆ ಇದೆ. ಕಾಸ್ಟಿಂಗ್ ಕೌಚ್ ಇರಲಿ ಕಮರ್ಷಿಯಲ್ ಸೆಕ್ಸ್ ಇರಲಿ ಎರಡೂ ಕೈ ಸೇರಿದ್ರೇನೆ ಚಪ್ಪಾಳೆ. ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯೋದಕ್ಕೆ ಹೇಗೆ ಸಾಧ್ಯ ನೀವೇ ಹೇಳಿ ಎಂದು ಹರ್ಷಿಕಾ ಪೂಣಚ್ಚ ತಿಳಿಸಿದ್ದಾರೆ.

  • ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

    ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

    ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದೆ ಟಾಲಿವುಡ್‍ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಶ್ರೀ ರೆಡ್ಡಿ ಶಾಕಿಂಗ್ ಹೇಳಿಕೆ ನೀಡಿದ ಬಳಿಕ ಮತ್ತೊಬ್ಬ ಕಲಾವಿದೆ ಟಾಲಿವುಡ್ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.

    ಟಾಲಿವುಡ್ ನಲ್ಲಿ ಬಿಗ್ ಹಿಟ್ ಆಗಿದ್ದ `ಅರ್ಜುನ್ ರೆಡ್ಡಿ’ ಹಾಗೂ `ಪೆಳ್ಳಿ ಚೂಪುಲು’ ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದ ಶ್ರೇಷ್ಠ ಈ ಕುರಿತು ಆರೋಪ ಮಾಡಿದ್ದು, ನಿರ್ಮಾಪರೊಬ್ಬರ ಪತ್ನಿ ತಮ್ಮ ಪತಿಯ ಕೋರಿಕೆಗಳ್ನು ಪೂರೈಸಲು ಹೇಳಿದ್ದರು ಎಂದು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ ಉದ್ಯಮದಿಂದ ಕೆಲ ತಿಂಗಳು ಬ್ರೇಕ್ ಪಡೆದಿದ್ದ ಕಾರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿನಿಮಾ ರಂಗದಲ್ಲಿ ಕೆಲವರು ನೇರವಾಗಿಯೇ ಈ ಕುರಿತು ಕೇಳಿದ್ದಾರೆ. ಆದರೆ ನಾನು ನನ್ನ ಬರವಣಿಗೆ ಮೂಲಕ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ತಮ್ಮ ಮುಂದೆಯೇ ಮಹಿಳಾ ನಿರ್ದೇಶಕರೊಬ್ಬರಿಗೆ ನಡೆದ ಘಟನೆಯನ್ನು ಹಂಚಿಕೊಂಡಿರುವ ಅವರು, ಒಬ್ಬ ವ್ಯಕ್ತಿ ಮಹಿಳಾ ನಿರ್ದೇಶಕರಿಗೆ ಪ್ರಪೋಸ್ ಮಾಡಲು ಗೋವಾದಲ್ಲಿ ಪಾರ್ಟಿ ಏರ್ಪಡಿಸಿದ್ದ. ಆದರೆ ಈ ಪಾರ್ಟಿಗೆ ತೆರಳಲು ಆಕೆ ನಿರಾಕರಿಸಿದ ವೇಳೆ ಹಲ್ಲೆ ನಡೆಸಿದ್ದರು. ಈ ವೇಳೆ ತಾನು ಅಸಹಾಯಕಳಾಗಿ ನಿಂತಿದ್ದೆ. ಇದರಿಂದ ತಾನು ಸಿನಿಮಾ ರಂಗ ಕೆಲ ತಿಂಗಳು ಬ್ರೇಕ್ ಪಡೆದಿದ್ದೆ ಎಂದು ತಿಳಿಸಿದ್ದಾರೆ.

    ಟಾಲಿವುಡ್ ಜನಪ್ರಿಯ ಗೀತಾ ಸಾಹಿತಿಯಾಗಿರುವ ಶ್ರೇಷ್ಠ ಅವರು, ಇದುವರೆಗೂ `ಮಧುರಂ ಮಧುರಂ’, `ಯುದ್ಧ ಶರಣಂ’, `ಪೆಳ್ಳಿ ಚೂಪುಲು’ ಮತ್ತು `ಅರ್ಜುನ್ ರೆಡ್ಡಿ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದೆ ಟಾಲಿವುಡ್ ನಲ್ಲಿ ಶ್ರೀ ರೆಡ್ಡಿ ಆರೋಪಗಳ ಬಳಿಕ ಹಲವರು ಕಾಸ್ಟಿಂಗ್ ಕೌಚ್ ಬಗ್ಗೆ ಆರೋಪ ಪ್ರತ್ಯಾರೋಪ ಮಾಡಿದ್ದರು.

  • ಕಾಸ್ಟಿಂಗ್ ಕೌಚ್ ಸಿನಿಮಾರಂಗ ಮಾತ್ರವಲ್ಲ, ಉದ್ಯಮದಲ್ಲೂ ಒಂದು ಪಾರ್ಟ್ ಆಗಿದೆ: ಸಮಂತಾ

    ಕಾಸ್ಟಿಂಗ್ ಕೌಚ್ ಸಿನಿಮಾರಂಗ ಮಾತ್ರವಲ್ಲ, ಉದ್ಯಮದಲ್ಲೂ ಒಂದು ಪಾರ್ಟ್ ಆಗಿದೆ: ಸಮಂತಾ

    ಹೈದರಾಬಾದ್: ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಕೆಲವು ನಟಿಯರು ತಮ್ಮ ತಮ್ಮ ಅಭಿಪ್ರಾಯ, ಅನುಭವವನ್ನು ಹೇಳಿದ್ದಾರೆ. ಈಗ ಸೌತ್ ಸಿನಿಮಾರಂಗದ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ಸಮಂತಾ ಅಕ್ಕಿನೇನಿ ಸೌತ್ ಸಿನಿಮಾರಂಗದ ಮಿನುಗುತಾರೆ. ನೋಡುವುದಕ್ಕೆ ತುಂಬಾ ಸೈಲೆಂಟ್. ಆದರೆ ಸಿಕ್ಕಾಪಟ್ಟೆ ಬೋಲ್ಡ್. ಅಭಿನಯ ಹಾಗೂ ಸೌಂದರ್ಯ ಎರಡರಲ್ಲೂ ಕಮ್ಮಿಯಿಲ್ಲದ ಸಮಂತಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ರನ್ನನ ಜತೆ ತೆಲುಗಿನ ಈಗ ಸಿನಿಮಾದಲ್ಲಿ ಮಿಂಚಿದ್ದರು. 8 ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿ ಇದ್ದಾರೆ. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

    ಈ ಹಿಂದೆ ಸಾಮಾಜಿಕ ಜಾಲತಾಣಗಳಲಿ ಟ್ರೋಲ್ ಆಗಿದ್ದು, `ಊಟ ಇಲ್ಲದಿದ್ದರೂ ಪರವಾಗಿಲ್ಲ ದಿನಕ್ಕೊಮ್ಮೆ ಸೆಕ್ಸ್ ಬೇಕೆ ಬೇಕು ಅಂತ ಖಾಸಗಿ ಸಂದರ್ಶನವೊಂದರಲ್ಲಿ, ಜಸ್ಟ್ ಫನ್ ರೌಂಡ್‍ನಲ್ಲಿ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು. ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ಕಾಸ್ಟಿಂಗ್ ಕೌಚ್ ಅನ್ನೋದು ಸಿನಿಮಾರಂಗ ಮಾತ್ರವಲ್ಲಾ ಉದ್ಯಮದಲ್ಲೂ ಒಂದು ಪಾರ್ಟ್ ಆಗಿ ಬಿಟ್ಟಿದೆ. ನಾನು ಎಂಟು ವರ್ಷಗಳಿಂದ ತೆಲುಗು, ತಮಿಳು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದೇನೆ. ಆದರೆ ಯಾವುದೇ ರೀತಿಯಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ. ಚಿತ್ರರಂಗದಲ್ಲಿ ಒಳ್ಳೆಯ ಮನಸ್ಸಿರುವ ಸಾಕಷ್ಟು ಜನರು ಇದ್ದಾರೆ. ಅವರನ್ನ ಭೇಟಿ ಕೂಡ ಮಾಡಿದ್ದೇನೆ. ಇಂಟ್ರೆಸ್ಟಿಂಗ್ ಅಂದರೆ ನಾನು ಮಗುವಿಗೆ ಜನ್ಮ ನೀಡಿದ ನಂತರವೂ ಕೂಡ ಸಿನಿಮಾರಂಗದಲ್ಲಿ ಮುಂದುವರೆಯಲು ಆಸೆ ಪಡುತ್ತೇನೆ ಎಂದು ಸಮಂತಾ ಹೇಳಿದ್ದಾರೆ.

    ಸದ್ಯಕ್ಕೆ ಸಮಂತಾ ರಂಗಸ್ಥಳಂ ಯಶಸ್ಸಿನಲ್ಲಿದ್ದು, ಮಹಾನಟಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.